Thursday, June 30, 2016



ದಿವ್ಯಜ್ಯೋತಿ ಹವ್ಯಾಸಿ ಸಂಘಕ್ಕೆ ನೆರವಾದವರಿಗೆ ಅಭಿನಂದನೆ

ಚಿಕ್ಕನಾಯಕನಹಳ್ಳಿ, : ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ ನವದಂಪತಿಗಳ ಸ್ಪಧರ್ೆ ಏರ್ಪಡಿಸಿ 25ನೇ ವರ್ಷಕ್ಕೆ ದಾಪುಗಾಲು ಇಡುತ್ತಿರುವ ಹಿನ್ನಲೆಯಲ್ಲಿ ಸಂಘಕ್ಕೆ ಸಹಕಾರ ನೀಡಿ ಪ್ರೋತ್ಸಾಹಿಸಿದ ದಾನಿಗಳನ್ನು ಸನ್ಮಾನಿಸಿಲಾಯಿತು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘ ಏರ್ಪಡಿಸಿದ್ದ ಗೌರವಾರ್ಪಣ ಕಾರ್ಯಕ್ರಮದಲ್ಲಿ 1991ರಿಂದ ನವದಂಪತಿಗಳ ಸ್ಪಧರ್ೆ ಹಾಗೂ ಬಾಳೆ ಹಣ್ಣು ಎಸೆಯುವ ಸ್ಪಧರ್ೆಗೆ ಸಹಕಾರ ನೀಡಿದವರಿಗೆ ಸನ್ಮಾನಿಸಿ ಮುಂದೆಯೂ ಇದೇ ರೀತಿ ಸಹಕಾರ ನೀಡುವಂತೆ ಕೋರಲಾಯಿತು.
ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ, 1983ರಲ್ಲಿ ರಾಜ್ಯಮಟ್ಟದ ನಾಟಕೋತ್ಸವ ಮೂಲಕ ಆರಂಭವಾದ ದಿವ್ಯಜ್ಯೋತಿ ಕಲಾಸಂಘವು,  ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತಿತ್ತು.  ನಚಿತರದ ದಿನಗಳಲ್ಲಿ  ಆಷಾಡ ಮಾಸದಲ್ಲಿ ಪಟ್ಟಣದ  ಹಳೆಯೂರು ಆಂಜನೇಯಸ್ವಾಮಿ ಜಾತ್ರೆಗೆ ನವದಂಪತಿಗಳು ಬರುತ್ತಿದ್ದರಿಂದ ಸಂಘ 1991 ರಿಂದ  ಏಕಾದಶಿ ಜಾತ್ರೆಯ ಸಮಯದಲ್ಲಿ ನವದಂಪತಿಗಳ ಸ್ಪಧರ್ೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ, ಜಾತ್ರೆಯ ವೇಳೆ ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯಕ್ರಮ ಬಿಟ್ಟರೆ ಬೇರೆ ಯಾವುದೇ ಕಾರ್ಯಕ್ರಮಗಳಿರಲಿಲ್ಲ, ನಮ್ಮ ಸಂಘದ ಮೂಲಕ ಹಮ್ಮಿಕೊಂಡ ನವದಂತಿಗಳ ಸ್ಪಧರ್ೆ ಹಾಗೂ ಬಾಳೆಹಣ್ಣು ಎಸೆಯುವ ಸ್ಪಧರ್ೆ ಜನರಲ್ಲಿ ಆಕರ್ಷಣೆಯವಾಗಿ ಮೂಡಿಬಂದಿತು, ಇತ್ತೀಚಿನ ವರ್ಷಗಳಲ್ಲಿ ಅಂತರ್ಜಾತಿ ವಿವಾಹಿತರು ಹಾಗೂ ವಿಕಲಚೇತನರ ವಿವಾಹಿತರನ್ನು, ಸಮಾಜ ಸೇವಕರು, ಪ್ರತಿಭಾನ್ವಿತ ವಿದ್ಯಾಥರ್ಿಗಳನ್ನು ಅಭಿನಂದಿಸುತ್ತಾ ಬರುತ್ತಿದ್ದು ಸಾರ್ವಜನಿಕರು ಈ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಾ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಮಾತನಾಡಿದರು. ಸಂಘದ ಸಿ.ಹೆಚ್.ಪ್ರಕಾಶ್, ಸಿದ್ದು.ಜಿ.ಕೆರೆ, ಸಂತೋಷ್ವಿಷ್ಣುಭವನ್, ಸಿ.ಹೆಚ್.ಗಂಗಾಧರ್, ನಿರೂಪ್ರಾವತ್, ಸಿ.ಬಿ.ಲೋಕೇಶ್, ಶಂಕರ್, ಸಿ.ಟಿ.ರಂಗನಾಥ್, ಆನಂದ, ಮುದ್ದು, ಸಿದ್ದರಾಮಣ್ಣ, ರವಿಕುಮಾರ್, ಮತ್ತಿತರರು ಉಪಸ್ಥಿತರಿದ್ದರು.