Thursday, September 22, 2016


ಪುರಸಭೆಯಲ್ಲಿ ನಡೆದಿರುವ ಅವ್ಯವಹಾರವನ್ನು ತನಿಖೆಗೊಳಪಡಿಸಿ : 
  ಚಿಕ್ಕನಾಯಕನಹಳ್ಳಿ,: ಪುರಸಭೆಯಲ್ಲಿ ಲೆಕ್ಕಪತ್ರ ಹಾಗೂ ಚೆಕ್ ವಿತರಣೆಯಲ್ಲಿ ನಡೆದಿರವ ಅವ್ಯವಹಾರವನ್ನು ತನಿಖೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿಗಳನ್ನು ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಆಗ್ರಹಿಸಿದರು.
ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪುರಸಭೆಯಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ಬಿಟ್ಟಿರುವ ಪೈಪ್ಲೈನ್ ಇಳಿಸುವ ಕಾಮಗಾರಿ ಕೂಲಿಗೆ 70ಸಾವಿರ ರೂಪಾಯಿ ನೀಡಿರುವುದರ ಹಿಂದೆ ಅವ್ಯವಹಾರ ನಡೆರುವ ಶಂಕೆ ಇದೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಸದಸ್ಯರು ಇರುವಂತಹ ವಾಡರ್ಿನಲ್ಲಿ ಕೊರೆದಿರುವಂತಹ ಕೊಳವೆ ಬಾವಿಗಳಿಗೆ  ಶಿಘ್ರವಾಗಿ ಮೋಟಾರ್ ಪಂಪ್ಆಳವಡಿಸಿ ವಿದ್ಯುತ್ಸಂಪರ್ಕ ಕೊಡಿಸುತ್ತೀರಾ ಆದರೆ ನಮ್ಮ ವಾಡರ್ಿನಲ್ಲಿ ಕೊಳವೇ ಬಾವಿ ಕೊರೆದು ತಿಂಗಳುಗಳು ಕಳೆದರೂ ಮೋಟಾರ್ ಪಂಪ್ ಆಳವಡಿಸುವುದಿಲ್ಲವೆಂದು ಹಾಗೂ ನಾವು ಸಭೆಯಲ್ಲಿ ಹೇಳಿದಂತಹ ವಿಚಾರಗಳನ್ನು ದಾಖಲಿಸುತ್ತಿಲ್ಲ ಎಂದು ಸಿ.ಪಿ.ಮಹೇಶ್ ಆರೋಪಿಸಿದರು.
ಅಧ್ಯಕ್ಷ ಸಿ.ಟಿ.ದಯಾನಂದ್ ಉತ್ತರಿಸಿ ತುತರ್ು ನೀರಿನ ಸಮಸ್ಯೆ ತಲೆದೂರಿದ್ದರಿಂದ ಪಂಪ್ ಆಳವಡಿಸಿ ನೀರನ್ನು ನೀಡಬೇಕಾಗುತ್ತದೆ ನಮಗೆ ಎಲ್ಲಾ ವಾಡರ್ಿನ ಜನರು ಒಂದೇ ನಾವು ಯಾವುದೇ ಕಾರಣಕ್ಕೂ ಪಕ್ಷಬೇದ ಮಾಡುವುದಿಲ್ಲ ಎಂದು ಉತ್ತರಿಸಿದರು.
2013-14ನೇ ಸಾಲಿನಲ್ಲಿ ಪುರಸಭೆಯಿಂದ ಸಾರ್ವಜನಿಕರ ಮನೆಮನೆಗಳಿಗೆ ಕಸದಬುಟ್ಟಿ ನೀಡಲು ಸಭೆಯಲ್ಲಿ ಅಂಗೀಕರಿಸಲಾಗಿತ್ತು ಆದರೆ ಇದುವರೆಗೂ ಕಸದಬುಟ್ಟಿಗಳನ್ನು ನೀಡದೇ ಇರಲು ಕಾರಣವೇನು ಎಂದು ಸಿ.ಎಸ್.ರಮೇಶ್ ಪರಿಸರ ಇಂಜನಿಯರ್ ಚಂದ್ರಶೇಖರ್ರವರನ್ನು ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳಿಂದ ಅನುಮೋದನೆಯಾಗಿದೆ ಟೆಂಡರ್ ಕರೆಯುವುದಾಗಿ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಪುರಸಭೆಗೆ ಸಂಬಂಧ ಪಟ್ಟ ಆಸ್ತಿ ಎಲ್ಲೆಲ್ಲಿ ಇದೆ ಇದರ ಬಗ್ಗೆ ಪಟ್ಟಿ ಮಾಡಿ ನೀಡುವಂತೆ ಅನೇಕ ಬಾರಿ ಸಭೆಯಲ್ಲಿ ಚಚರ್ಿಸಿದರೂ ಇದುವರೆಗೂ ಅಧಿಕಾರಿಗಳು ಪಟ್ಟಿ ನೀಡಿಲ್ಲ ಎಂದು ಮುಖ್ಯಾಧಿಕಾರಿ ಮಂಜುಳಾದೇವಿಯನ್ನು ಸದಸ್ಯ ಸಿ.ಎಸ್.ರಮೇಶ್ ಪ್ರಶ್ನಿಸಿದರು. ಪುರಸಭೆಯ ಆಸ್ತಿ ಪಟ್ಟಿ ನೀಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ಪುರಸಭೆಯ ಮಳಿಗೆಗಳ ಅವಧಿ ಮುಗಿದಿದ್ದು ಪುಃನ ಟೆಂಡರ್ ಕರೆಯುವಂತೆ ಸದಸ್ಯರು ಆಗ್ರಹಿಸಿ ಬಾಡಿಗೆ ಇರುವ ಮಳಿಗೆಗಳಿಗೆ ಟ್ರೇಡ್ ಲೈಸೆನ್ಸ್ ನೀಡಿದರೆ ಅಂಗಡಿಗಳನ್ನು ತೆರವುಗೊಳಿಸಲು ಬರುವುದಿಲ್ಲ, ಎಷ್ಟು ಅಂಗಡಿಯಿಂದ ಟ್ರೇಡ್ ಲೈಸೆನ್ಸ್ ನೀಡಿದ್ದೀರಿ ಎಂದು ಮುಖ್ಯಾಧಿಕಾರಿ ಮಂಜುಳದೇವಿ ರವರನ್ನು ಸಿ.ಎಸ್.ರಮೇಶ್ ಪ್ರಶ್ನಿಸಿದರು. ಇದಕ್ಕೆ ಆರೋಗ್ಯ ನಿರೀಕ್ಷಕ ಜಯರಾಂ ಮಾತನಾಡಿ ಯಾರಿಗೂ ಟ್ರೇಡ್ ಲೈಸೆನ್ಸ್ ನೀಡಿಲ್ಲ ಎಂದರು.
ಪಟ್ಟಣದ ಸ್ವಚ್ಛತೆಯನ್ನು ಕಾಪಾಡಲು ಕ್ರಿಮಿನಾಶಕ ಔಷದಿಯ ಖರೀದಿಯಲ್ಲಿ 62555 ರೂ ಪಾವತಿಸಿದ್ದೀರಿ, ಎಲ್ಲಿ ಔಷಧಿಯನ್ನು ಸಿಂಪಡಿಸಿದ್ದೀರಿ ಎಂದು ಸದಸ್ಯರು ಪ್ರಶ್ನಿಸಿದಾಗ ಆರೋಗ್ಯ ನಿರೀಕ್ಷಕ ಜಯರಾಂ ಸದಸ್ಯರ ಮಾತಿಗೆ ತಬ್ಬಿಬ್ಬಾಗಿ ಹೋದರು, ಎಲ್ಲಾ ಚರಂಡಿಗಳಿಗೆ ಔಷಧಿ, ಫಿನಾಯಿಲ್ ಮತ್ತು ಡಿ.ಡಿ.ಟಿ ಫೌಡರ್ ಹಾಕಿದ್ದೇನೆ ಎಂದರು.
ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತರು ಲಾರ್ವ ಸವರ್ೆ ಕಾರ್ಯ ನಡೆಸಿದುದರಿಂದ ಆಶಾ ಕಾರ್ಯಕತರ್ೆಯರಿಗೆ  6ಸಾವಿರ ಊಟದ ಬಿಲ್ಲು ಪಾವತಿಸಿದ್ದೀರ ಎಂದ ಸದಸ್ಯರು, ಪಟ್ಟಣದಲ್ಲಿ ಎಷ್ಟು ಕಡೆ ಡೆಂಗ್ಯೂ, ಚಿಕನ್ಗುನ್ಯಾ ಬಂದಿದೆ ಎಂಬ ಮಾಹಿತಿ ಇದೆಯಾ ಎಂದು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಮಂಜುಳಾದೇವಿ ಯಾವುದೇ ಪ್ರಕರಣಗಳಿಲ್ಲ ಎಂದಾಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, 18ನೇ ವಾಡರ್್ನಲ್ಲಿ ಡೆಂಗ್ಯೂ ಜ್ವರದಿಂದ ಒಬ್ಬರು ನಿಧನರಾಗಿದ್ದಾರೆ ಎಂದ ಸದಸ್ಯರು ಸಭೆಗೆ ಬರುವಾಗ ಸರಿಯಾದ ಮಾಹಿತಿ ತೆಗೆದುಕೊಂಡು ಬನ್ನಿ ಎಂದರು.
ಪುರಸಭೆಯ ಆಸ್ತಿ ಸಂ:98/92/1982ರಲ್ಲಿರುವ 173*116ಆಳತೆಯ ಜಾಗವನ್ನು ಅಂಜುಮನ್ ಮಫೀದುಲ್ಲಾ ಇಸ್ಲಾಂ ಜಮೀಯಾ ಮಸೀದಿಗೆ ಕಿಮ್ಮತ್ತಿನ ಬೆಲೆಗೆ ಮಂಜೂರಾತಿ ನೀಡುವ ಬಗ್ಗೆ ಶಾಸಕರ ಹಾಜರಿದ್ದ ಸಭೆಯಲ್ಲಿ ತೀಮರ್ಾನಿಸಲಾಗಿತ್ತು ಎಂಬುದು ಒಂದು ಕಡೆಯ ವಾದವಾದರೆ, ಮತ್ತೊಂದು ಕಡೆಯವರು  ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ದಾಖಲಿಸಿಲ್ಲ ಹಾಗೂ ಈ ಜಾಗದ ಬಗ್ಗೆ ಈ ಹಿಂದೆ ಇದ್ದ ಮುಖ್ಯಾಧಿಕಾರಿ ಹೊನ್ನಪ್ಪನವರು ನೀಡಲು ಬರುವುದಿಲ್ಲ ಎಂದು ಅಜರ್ಿಯನ್ನು ವಜಾಮಾಡಿದ್ದರೂ ಪುನಃ ಈ ಜಾಗದ ವಿಷಯ ಪ್ರಸ್ತಾಪವಾಗುತ್ತಿದೆ, ಈ ಬಗ್ಗೆ ಸಂಬಂಧ ಪಟ್ಟ ಕಡತವನ್ನು ಸಭೆಯ ಮುಂದಿಡಲು ಒತ್ತಾಯಿಸಿದಾಗ ಸಂಬಂಧ ಪಟ್ಟ ಕಡತವು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಅದರೆ ಆಡಳಿತ ಪಕ್ಷದ ಸದಸ್ಯರು ಈ ಬಗ್ಗೆಯಾವುದೇ ಚಕಾರ ಎತ್ತಲಿಲ್ಲ ಈ ಬಗ್ಗೆ ಕೇಲವು ಸದಸ್ಯರಲ್ಲಿ ಅನುಮಾನಗಳು ಹರಿದಾಡತೊಡಗಿದವು.
ಸದಸ್ಯ ಮಹಮದ್ಖಲಂದರ್ ಮಾತನಾಡಿ ಸಭೆಯಲ್ಲಿ ಸೂಚನಾ ಪತ್ರದ ವಿಷಯಗಳನ್ನು ಚಚರ್ಿಸದೆ ಬೇರೆ ವಿಷಯಗಳ ಚಚರ್ೆ ಮಾಡಿ ಕಾಲ ಹರಣ ಮಾಡುವುದು ಸರಿಯಲ್ಲ ಸೂಚನಾ ಪತ್ರದಲ್ಲಿರುವ ವಿಷಯಗಳನ್ನು ಚಚರ್ಿಸಿದ ನಂತರ ಬೇರೆ ವಿಷಯಗಳ ಬಗ್ಗೆ ಗಮನ ಹರಿಸಿ ಎಂದರು.
ಎಸ್.ಎಫ್.ಸಿ.2016-17ನೇ ಸಾಲಿನ ಕ್ರೀಯಾ ಯೋಜನೆಯಡಿ ಇತರೆ ಬಡ ಜನರ ಕಲ್ಯಾಣಕ್ಕಾಗಿ ಕಾಯ್ದಿರಿಸಿರುವ ಶೇ 7.25 ರಡಿಯಲ್ಲಿ ಒಟ್ಟು ಎಂಟು ಲಕ್ಷದ ಐವತ್ತೊಂದು ಸಾವಿರ ರೂಪಾಯಿಗಳನ್ನು ಮೀಸಲಿಡಲಾಗಿದೆ,  ಸವಿತಾ ಸಮಾಜ ಹಾಗೂ ಮಡಿವಾಳ ಸಮಾಜದ ವೃತ್ತಿ ಮಾಡುತ್ತಿರುವವರಿಗೆ ಅಗತ್ಯವಾದ ಪೂರಕ ಸಾಮಾಗ್ರಿಗಳನ್ನು ನೀಡುವುದಾಗಿ ಮೂರು ಲಕ್ಷದ ನಲವತ್ತು ಸಾವಿರ ರೂಪಾಯಿಗಳನ್ನು ಮೀಸಲಿಡಲು ತೀಮರ್ಾನಿಸಲಾಯಿತು,  ಜೊತೆಗೆ  ಇತರೆ ಸಮುದಾಯದವರಿಗೂ ಹಣವನ್ನು ಮೀಸಲಿಡಬೇಕೆಂದು ತಿಳಿಸಿದರು. 
ಸಮುದಾಯ ಕಾರ್ಯಕ್ರಮಗಳಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾಥರ್ಿ ನಿಲಯಕ್ಕೆ ಶೌಚಾಲಯ ನಿಮರ್ಾಣಕ್ಕೆ ಒಂದು ಲಕ್ಷ ಅನುದಾನ ನೀಡುವುದನ್ನು ಸದಸ್ಯರು ವಿರೋದ ವ್ಯಕ್ತಪಡಿಸಿ ಹಾಸ್ಟೆಲ್ಗಳಲ್ಲಿ ಪಟ್ಟಣದ ವಿದ್ಯಾಥರ್ಿಗಳು ಇಲ್ಲ ಅದ್ದರಿಂದ ಅನುದಾನವನ್ನು ನೀಡಬಾರದು ಎಂದು ಸದಸ್ಯರಾದ ರೇಣುಕಾಗುರುಮೂತರ್ಿ, ಸಿ.ಪಿ.ಮಹೇಶ್ ಸೇರಿದಂತೆ ಇತರೆ ಸದಸ್ಯರು ವಿರೋಧಿಸಿದರು.
ಪುರಸಭೆಗೆ ಸಕರ್ಾರದಿಂದ ವಿವಿಧ ಯೋಜನೆಗಳಿಗೆ ಮಂಜೂರಾತಿಯಾಗಿರುವ ನಿಧಿಗಳ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಇದುವರೆಗೂ ಮಾಹಿತಿ ನೀಡಿಲ್ಲ ಎಂದು ಎಂದು ಸದಸ್ಯ ಎಂ.ಕೆ.ರವಿಚಂದ್ರ ಹೇಳಿದರು.
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರುಗಳಾದ ರೇಣುಕಮ್ಮ, ಪುಷ್ಪ.ಟಿ.ರಾಮಯ್ಯ, ಗೀತಾರಮೇಶ್, ಧರಣಿ.ಬಿ.ಲಕ್ಕಪ್ಪ, ರೂಪಶಿವಕುಮಾರ್, ನೇತ್ರಾವತಿ ಶಿವಕುಮಾರ್, ಅಶೋಕ್, ಸಿ.ಡಿ.ಚಂದ್ರಶೇಖರ್, ಸಿ.ರಾಜಶೇಖರ್, ಸಿ.ಎಂ.ರಂಗಸ್ವಾಮಯ್ಯ, ಸಿ.ಕೆ.ಕೃಷ್ಣಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರ : ಬಿಇಓ ಕೃಷ್ಣಮೂತರ್ಿ 
ಚಿಕ್ಕನಾಯಕನಹಳ್ಳಿ,ಸೆ.22 : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ಹಾಗೂ ಉತ್ತೇಜನ ನೀಡಿ ಅವರ ಮುಂದಿನ ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕಗಳಿಸಿಲಿ ಎಂಬ ಉದ್ದೇಶದಿಂದ ಪ್ರತಿವರ್ಷ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ ಎಂದು ಬಿಇಓ ಕೃಷ್ಣಮೂತರ್ಿ ತಿಳಿಸಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘವತಿಯಿಂದ 2015-16ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾಥರ್ಿಗಳಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರೋತ್ಸಾಹದ ನೆಪದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಕೇವಲ ಹಣ ನೀಡಿದರೆ ಮಾತ್ರ ಸಾಲದು, ವಿದ್ಯಾಥರ್ಿಗಳನ್ನು ವೇದಿಕೆಗೆ ಆಹ್ವಾನಿಸಿ ಪ್ರತಿಭಾ ಪುರಸ್ಕಾರ, ಸನ್ಮಾನ ನೀಡುವ ಕಾರ್ಯಕ್ರಮಗಳು ನಡೆಯಬೇಕು ಇದರಿಂದ ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ಮೂಡುತ್ತದೆ, ಇಂದಿನ ಜಗತ್ತು ಸ್ಮಧರ್ಾತ್ಮಕ ಯುಗವಾಗಿದೆ, ಒಂದೊಂದು ಅಂಕಗಳಿಂದ ಅವಕಾಶ ಕಳೆದುಕೊಳ್ಳುವ ಪರಿಸ್ಥಿತಿ ಹೆಚ್ಚಿರುತ್ತದೆ, ಇಂಜನಿಯರಿಂಗ್ ಮಾಡುವ ವಿದ್ಯಾಥರ್ಿಗಳು ಶೇ.1ರಷ್ಟು ಅಂಕ ಕಡಿಮೆಯಾದರೂ ಅವರಿಗೆ ಒಳ್ಳೆಯ ಕಾಲೇಜುಗಳು ಸಿಗದಂತಾಗಿದೆ ಎಂದರು.
 ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದರೂ ಕೆಲವೊಮ್ಮೆ ಇಂಜನಿಯರಿಂಗ್ ಮಾಡಿದ ವಿದ್ಯಾಥರ್ಿಗಳಿಗೆ ಕ್ಯಾಂಪಸ್ ಸೆಲಕ್ಷನ್ನಲ್ಲಿ ಉದ್ಯೋಗ ಸಿಗುವಂತಹ ಕಾಲೇಜುಗಳಲ್ಲಿ ಸೀಟುಗಳು ಸಿಗುವುದಿಲ್ಲ ಅದಕ್ಕೆ ಅಂಕಗಳ ಕೊರತೆಯೇ ಕಾರಣವಾಗಿದೆ, ಇಂದು ಇಂಜನಿಯರಿಂಗ್ ವಿದ್ಯಾಭ್ಯಾಸ ಮಾಡಿರುವ ಹಲವರು ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ, ಹಲವರು ಕಡಿಮೆ ಸಂಬಳಕ್ಕೆ ಉದ್ಯೋಗದಲ್ಲಿ ನಿರತರಾಗಿದ್ದಾರೆ, ಕ್ಯಾಂಪಸ್ನಲ್ಲಿ ಆಯ್ಕೆಯಾದ ವಿದ್ಯಾಥರ್ಿಗಳು ಉತ್ತಮ ಕೆಲಸದಲ್ಲಿ ತೊಡಗಿದ್ದಾರೆ ಅವರಂತೆ ಇಂಜನಿಯರಿಂಗ್ ವಿದ್ಯಾಭ್ಯಾಸ ಆಯ್ಕೆ ಮಾಡಿದ ವಿದ್ಯಾಥರ್ಿಗಳು ಒಳ್ಳೆಯ ಕಂಪನಿಗಳ ಉದ್ಯೋಗಸ್ಥರಾಗಲು ಅಂಕಗಳು ಪಡೆಯುವ ಅವಶ್ಯಕತೆ ಇದೆ ಎಂದರು.  ಪ್ರತಿಭಾವಂತರನ್ನು ಪ್ರೋತ್ಸಾಹಿಸುವುದಕ್ಕಾಗಿಯೇ ಶಾಸಕರು ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿರುವುದು ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ, ಶಿಕ್ಷಣವೇ ವಿದ್ಯಾಥರ್ಿಗಳನ್ನು ಮುಂದೆ ಕರೆದೊಯ್ಯಲು ಸಾಧ್ಯ, ಉತ್ತಮ ಅಂಕ ಪಡೆದ ವಿದ್ಯಾಥರ್ಿಗಳು ತನ್ನ ಮುಂದಿನ ವಿದ್ಯಾಭ್ಯಾಸದಲ್ಲೂ ಹೆಚ್ಚಿನ ಅಂಕ ಪಡೆಯುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯ ಸಿದ್ದರಾಮಯ್ಯ, ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ್, ಅಕ್ಷರ ಇಲಾಖೆ ಸಹಾಯಕ ನಿದರ್ೇಶಕ ತಿಮ್ಮರಾಜು, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ನಾರಾಯಣಪ್ಪ, ಸಿ.ಗವಿರಂಗಯ್ಯ ಮತ್ತಿತರರರು ಉಪಸ್ಥಿತರಿದ್ದರು.

ಚಿತ್ರಕಲಾಕಾರರಿಂದ ಸಂವಾದ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಸೆ.22 : ತನ್ನ ಜನರ್ಿಯಲ್ಲಿ ದೊರಕಿದಂತಹ ಅನುಭವಗಳು, ಮನಸ್ಸಿನಲ್ಲಿ ಮೂಡುವಂತಹ ಕಲಾಕೃತಿಗಳು ಕುಂಚದ ಮೂಲಕ ರಚನೆಯಾಗಿವೆ ಎಂದು ಚಿತ್ರ ಕಲಾವಿದ ಗುಬ್ಬಿ ರವೀಶ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ವರ್ಣಕಲ್ಪ ಚಿತ್ರಕಲಾ ಶಿಬಿರದ ಮೂರನೇ ದಿನ ಕಲಾವಿದರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕನರ್ಾಟಕ ಲಲಿತಕಲಾ ಅಕಾಡೆಮಿ ಹಾಗೂ ಕುಂಚಾಂಕುರ ಕಲಾಸಂಘ ಚಿತ್ರ ಕಲಾಕಾರರಿಗೆ  ವೇದಿಕೆ ರೂಪಿಸಿ ಕಲಾಕೃತಿ ಪ್ರದಶರ್ಿಸಲು ಅನುಕೂಲ ಮಾಡಿರುವುದಕ್ಕೆ ಶ್ಲಾಘನೀಯ ಎಂದರು.
ತುಮಕೂರಿನ ಕಲಾವಿದ ರವಿ ಮಾತನಾಡಿ, ಶಿಬಿರದಲ್ಲಿ ಸಮಕಾಲೀನ, ಪ್ರಚಲಿತ ವಿದ್ಯಮಾನಗಳು ಹಾಗೂ ರಾಜ್ಯದಲ್ಲಿ ಉಂಟಾಗಿರುವ ಕಾವೇರಿ ಸಮಸ್ಯೆಗಳ ಬಗ್ಗೆ ಚಿತ್ರಗಳು ಬಿತ್ತರವಾಗುತ್ತಿವೆ, ಚಿತ್ರ ಕಲಾವಿದರು ಈಗಿನ ದಿನಮಾನಕ್ಕೆ ತಕ್ಕಂತೆ ಆಧುನಿಕ ಹಾಗೂ ತಂತ್ರಜ್ಞಾನ ಬಳಸಿ ಚಿತ್ರಕಲೆಯನ್ನು ರೂಪಿಸುವಂತೆ ಸಲಹೆ ನೀಡಿದರು.
ಚಿತ್ರಕಲೆಗಳು ಜನಸಮುದಾಯಕ್ಕೆ ತಲುಪಬೇಕು ಎಂಬ ನಿಧರ್ಾರದಿಂದ ಹೊರಾಂಗಣ ಪ್ರದೇಶದಲ್ಲಿ ಚಿತ್ರಕಲೆಯನ್ನು ಪ್ರದರ್ಶನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಲಾ ಶಿಬಿರಗಳು ನಡೆಯುತ್ತಿರಬೇಕು, ನಾಲ್ಕು ಗೋಡೆ ಮಧ್ಯೆ ಬರೆಯುವ ಕಲೆಗಿಂತ ಜನರ ನಡುವಿನ ಪ್ರದೇಶಗಳಲ್ಲಿನ ಕಲೆಗಳು ರಚಿತವಾಗಬೇಕು, ಹಣಕ್ಕೋಸ್ಕರ ಶಿಬಿರದಲ್ಲಿ ಭಾಗವಹಿಸುವುದಕ್ಕಿಂತ ತಮ್ಮ ಪ್ರತಿಭೆಗಳ ಅಭಿವೃದ್ದಿಗಾಗಿ ಹಾಗೂ ಬದಲಾವಣೆಗಾಗಿ ಶಿಬಿರಗಳಲ್ಲಿ ಭಾಗವಹಿಸಬೇಕು ಎಂಬ ಮಾತುಗಳು ಭಾಗವಹಿಸಿದ್ದ ಕಲಾವಿದರು, ಶಿಬಿರಾಥರ್ಿಗಳಿಂದ ವ್ಯಕ್ತವಾಯಿತು.
ಕಲಾವಿದರ ಸಂವಾದದಲ್ಲಿ ಕುಂಚಾಂಕುರ ಕಲಾಸಂಘದ ಗೌರವಾಧ್ಯಕ್ಷ ಸಿದ್ದು.ಜಿ.ಕೆರೆ, ತಾ.ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ, ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕುಂಚಾಂಕುರ ಕಲಾಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್, ನಿರೂಪ್ರಾವತ್, ಎಂ.ಎಸ್.ರವಿಕುಮಾರ್, ಸಿ.ರವಿಕುಮಾರ್ ಸಿ.ಬಿ.ಲೋಕೇಶ್, ಮತ್ತಿತರರು ಉಪಸ್ಥಿತರಿದ್ದರು.

ಸಾರ್ವಜನಿಕ ಶೌಚಾಲಯ ಸ್ಚಚ್ಛವಾಗಿಡುವಂತೆ ಒತ್ತಾಯ 
ಚಿಕ್ಕನಾಯಕನಹಳ್ಳಿ,ಸೆ.22 : ಪ್ರತಿದಿನ ನೂರಾರು ಜನರು ಬಳಸುವಂತಹ ಖಾಸಗಿ ಬಸ್ ಸ್ಟಾಂಡ್ನ ಶೌಚಾಲಯವನ್ನು ಸ್ವಚ್ಛವಾಗಿಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಖಾಸಗಿ ಬಸ್ನಿಲ್ದಾಣದ ಬಳಿ ಇರುವಂತಹ ಸಾರ್ವಜನಿಕ ಶೌಚಾಲಯ ಬಳಸಲು ಯೋಗ್ಯವಿಲ್ಲದಂತಿದೆ, ಕೆಟ್ಟವಾಸನೆಯಿಂದ ಜನರು ಓಡಾಡಲು ತೊಂದರೆಯಾಗುತ್ತಿದೆ ಕೂಡಲೇ ಇದರ ಸ್ವಚ್ಛತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯವಾಗಿದೆ.
 ಹಣಪಾವತಿ ಮಾಡಿ ಬಳಸುವಂತಹ ಶೌಚಾಲಯದಿಂದ ಪುರಸಭೆಗೆ ಆದಾಯಬರುತ್ತಿದೆ ಆದರೂ ಸ್ವಚ್ಛತೆ ಗಮನಹರಿಸುತ್ತಿಲ್ಲ ಇದರ ನಿರ್ವಹಣೆಯ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬಸ್ನಿಲ್ದಾಣದಲ್ಲಿ ಒಡಾಡುವಂತಹ ಜನರು ಆರೋಪಿಸಿದ್ದಾರೆ.
ಈ ಶೌಚಾಲಯವನ್ನು ಟೆಂಡರ್ ಮೂಲಕ ಗುತ್ತಿಗೆ ಪಡೆದವರು ಇಲ್ಲಿ ಒಬ್ಬ ವ್ಯಕ್ತಿಯನ್ನು ನೋಡಿಕೊಳ್ಳಲು ನೇಮಕಮಾಡಿದ್ದು, ಶೌಚಾಲಯ ಬಳಸಿದ ಪ್ರತಿಯೊಬ್ಬರಿಂದಲೂ  ಐದು ರೂಪಾಯಿಗಳನ್ನು ಪಡೆಯುತ್ತಿದ್ದರೂ  ಇದರ ಸ್ವಚ್ಛತೆಯ ಕಡೆ ಮಾತ್ರ ಗಮನಹರಿಸಿಲ್ಲ, ಪ್ರತಿದಿನ ನೂರಾರು ಜನರು ಈ ಶೌಚಾಲಯವನ್ನು ಬಳಸುತ್ತಿದ್ದು ಸಾವಿರಾರು ರೂಪಾಯಿಗಳ ಆದಾಯ ಬರುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸೇನೆಯ ಮಲ್ಲಿಕಾಜರ್ುನ್ ಪುರಸಭೆಯು ಗುತ್ತಿಗೆ ಆದಾರದ ಮೇಲೆ ಪಡೆದ ಶೌಚಾಲಯದಿಂದ ಲಾಭಮಾಡಿಕೊಳ್ಳುತ್ತಿರುವ ಟೆಂಡರ್ದಾರರು ಇದರ ಸ್ವಚ್ಛತೆಯ ಕಡೆಗಮನಹರಿಸಿಲ್ಲ, ಜನರಿಗೆ ಕುಡಿಯಲು ನೀರಿಲ್ಲದ ಸಂದರ್ಭದಲ್ಲಿ ಪುರಸಭೆಯವರು ಈ ಶೌಚಾಲಯಕ್ಕೆ ನೀರನ್ನು ಸರಬರಾಜು ಮಾಡುತ್ತಿದ್ದಾರೆ ಟೆಂಡರ್ದಾರರು ನೀರನ್ನು ಹೊರಗಡೆಯಿಂದ ತಂದು ಇದನ್ನು ಸ್ವಚ್ಛಮಾಡಬೇಕು ಎಂದು ತಿಳಿಸಿದರು.
ಶೌಚಾಲಯದ ಸ್ವಚ್ಛತೆಯ ಬಗ್ಗೆ ಪ್ರತಿಕ್ರಿಯಿಸಿದ ಪರಿಸರ ಇಂಜಿನಿಯರ್ ಚಂದ್ರಶೇಖರ್ ಇದರ ಸ್ವಚ್ಛತೆಯ ಬಗ್ಗೆ ಟೆಂಡರ್ದಾರರಿಗೆ  ಹಲವು ಬಾರಿ ಹೇಳಿದ್ದರು ಕ್ರಮಕೈಗೊಂಡಿಲ್ಲ ಕೂಡಲೇ ಇದರ ಸ್ವಚ್ಛತೆಯ ಕಡೆ ಗಮನಹರಿಸಿ ಪೆನಾಯಿಲ್, ಬ್ಲೀಚಿಂಗ್ ಪೌಡರ್ಗಳನ್ನು ಬಳಸಿ ಸ್ವಚ್ಚಪಡಿಸುವಂತೆ ತಿಳಿಸುವುದಾಗಿ ಹೇಳಿದರು.

ಚಿತ್ರಕಲೆಗಳು ದೇಶದ ಇತಿಹಾಸ ಸಾರುತ್ತಿದ್ದವು : ಬಾ.ಹ.ರಮಾಕುಮಾರಿ 
ಚಿಕ್ಕನಾಯಕನಹಳ್ಳಿ,ಸೆ.22 : ಹಿಂದಿನ ದಿನ ಮಾನಗಳಲ್ಲಿ ದೇಶದ ಚಿತ್ರಣವನ್ನು ಬಡತನ, ಕೊಳಗೇರಿಗಳ ಮೂಲಕ ಚಿತ್ರಿಸಿ ಹೊರ ದೇಶಗಳಿಗೆ ಕಳುಹಿಸಿ ಹಣ ಮಾಡುತ್ತಿದ್ದರು ಎಂದು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ವಿಷಾಧಿಸಿದರು.  
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕನರ್ಾಟಕ ಲಲಿತಕಲಾ ಅಕಾಡೆಮಿ ಹಾಗೂ ಕುಂಚಾಂಕುರ ಕಲಾಸಂಘದ ವತಿಯಿಂದ ನಡೆದ ವರ್ಣಕಲ್ಪ ರಾಜ್ಯಮಟ್ಟದ ಚಿತ್ರಕಲಾ ಶಿಬಿರದಲ್ಲಿ ಮುಕ್ತಾಯ ಸಮಾರಂಭದಲ್ಲಿ  ಸಮಾರೋಪ ಭಾಷಣ ಮಾಡಿದ ಅವರು, ಈಗ ನಮ್ಮ ದೇಶದಲ್ಲಿ ಅಂತಹ ಸ್ಥಿತಿ ಇಲ್ಲ, ಹಿಂದೆ  ಚಿತ್ರಕಲೆಗಳ ಮೂಲಕವೇ ಇತಿಹಾಸದ ಕಥೆಗಳನ್ನು ತಿಳಿಸುತ್ತಿದ್ದರು, ರಾಜ್ಯ ಏಕೀಕರಣದ ಸಂದರ್ಭದಲ್ಲಿ ಚಿತ್ರಕಲೆಯು ಮಹತ್ವಸಾರುತ್ತಿದ್ದವು ಎಂದರು.
ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುತ್ತರುವ ಲಲಿತಕಲಾ ಶಿಬಿರ ರಾಜ್ಯದಲ್ಲಿ ಹೆಸರು ತಂದುಕೊಟ್ಟಿದೆ, ನಗರಗಳ ನಾಲ್ಕು ಗೋಡೆಗಳ ಮಧ್ಯದಲ್ಲಿ ನಡೆಯುವ ಇಂತಹ ಶಿಬಿರಗಳು ಗ್ರಾಮೀಣ ಭಾಗದಲ್ಲಿ ಮಾಡುತ್ತಿರುವುದು ಸ್ವಾಗತಾರ್ಹ, ಗ್ರಾಮೀಣ ಭಾಗಗಳಲ್ಲಿ ಹಾಗೂ ಕಲಾವಿದ ರಚಿಸಿದ ಚಿತ್ರಕಲೆ ಮೂಲೆ ಸೇರಬಾರದು, ಇವು ಶಾಲಾ, ಕಾಲೇಜುಗಲ್ಲಿ, ಸಂಘ-ಸಂಸ್ಥೆಗಳಲ್ಲಿ, ಕಛೇರಿಗಳಲ್ಲಿ ಪ್ರದರ್ಶನವಾಗಬೇಕು ಎಂದರು.
ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಸಕರ್ಾರ ಶಿಕ್ಷಣಕ್ಕೆ ಒತ್ತು ನೀಡಿದಂತೆ ಚಿತ್ರಕಲೆಗಳಿಗೂ  ಪ್ರೋತ್ಸಾಹಿಸಬೇಕು ಎಂದರಲ್ಲದೆ, ಕಲಾವಿದರು ಎಲ್ಲಿ ವರ್ಣಚಿತ್ರ ರಚಿಸುತ್ತಾರೋ ಅಲ್ಲಿಯೇ ಮಾರಾಟದ ವ್ಯವಸ್ಥೆ ಮಾಡಿದರೆ ಕಲಾವಿದರು ಬದುಕು ಕಟ್ಟಿಕೊಳ್ಳಬಹುದು, ರಾಜ್ಯದ ಮಂಗಳೂರಿನ ವ್ಯಕ್ತಿಯೊಬ್ಬರು ಹನುಮಂತನ ಮುಖದ ಅರ್ಧ ಚಿತ್ರ ರಚಿಸಿದರೂ ಅದು ಬೆಂಗಳೂರು ಸೇರಿದಂತೆ ನಾನಾ ಕಡೆ ಚಿತ್ರ ಹೆಸರುವಾಸಿ ಪಡೆದಿದೆ ಎಂದ ಅವರು, ಕಲಾವಿದರು ರಚಿಸಿದ ಚಿತ್ರಕಲೆ ವರ್ಣಚಿತ್ರ ಕಲೆಗಳಿಗೆ ಮಾರುಕಟ್ಟೆ ಒದಗಿಸುವುದು ನಮ್ಮ ಕರ್ತವ್ಯ ಎಂದರು.
ಲಲಿತಕಲಾ ಅಕಾಡೆಮಿಯ ಸದಸ್ಯ ಪ್ರಭುಹರಸೂರು ಮಾತನಾಡಿ, ಚಿತ್ರಕಲೆ ಸಾಮಾಜಿಕ ಕಲೆಯ ಪ್ರತಿಬಿಂಬ, ತಮ್ಮದೇ ಆದ ಅನುಭವಗಳ ಮೂಲಕ ಕಲೆ ರಚನೆಯಾಗುತ್ತದೆ ಎಂದ ಅವರು ಪಟ್ಟಣದಲ್ಲಿ ನಡೆಯುತ್ತಿರುವ ವಾಣಿ ಚಿತ್ರಕಲೆ ಶಾಲೆಗೆ ಪ್ರತಿ ತಿಂಗಳು ಕೊನೆಯ ವಾರದಲ್ಲಿ ಭೇಟಿ ನೀಡಿ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಅರಿವು ಮೂಡಿಸುತ್ತೇವೆ, ಇಲ್ಲಿಗೆ ಬರುವ ಚಿತ್ರಕಲಾವಿದರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕು ಎಂಬ ಹಂಬಲವಿದೆ ಎಂದರು.
ಮಾಜಿ ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಮಾತನಾಡಿ, ಚಿತ್ರಕಲೆಗಳು ಸಾಂಸ್ಕೃತಿಕವಾಗಿ ಪರಿಚಯವಾಗಿ ಅದು ಎಲ್ಲಾ ಭಾಗದ ಮಕ್ಕಳಿಗೆ ಅನುಕೂಲವಾಗಬೇಕು, ಇಲ್ಲಿ ನಡೆದ ಶಿಬಿರ ತಾತ್ವಿಕ ನೆಲೆಗಟ್ಟಿನ ಆಧಾರದ ಮೇಲೆ ಆಯೋಜನೆಯಾಗಿದೆ, ಶಿಬಿರದಲ್ಲಿ ರಚಿಸಿದ ಕಲಾಕೃತಿಳನ್ನು  ಮೂರು ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವರ್ಣಕಲ್ಪ ಚಿತ್ರಕಲಾ ಶಿಬಿರದ ಸಂಚಾಲಕ ಪ್ರಭುಹರಸೂರು, ಕುಂಚಾಂಕುರ ಕಲಾಸಂಘದ ಗೌರವಾಧ್ಯಕ್ಷ ಸಿದ್ದು.ಜಿ.ಕೆರೆ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಚಿತ್ರಕಲಾ ಶಿಕ್ಷಕ ಎನ್.ನಂಜುಂಡಾರಾಧ್ಯ, ಕಲಾವಿದ ರಾಜುಗೌಡ, ಸಂಗೊಳ್ಳಿರಾಯಣ್ಣ ಸಾಂಸ್ಕೃತಿಕ ಕಲಾಸಂಘದ ಚಿ.ಲಿಂ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.