Sunday, December 12, 2010


ದೈನಂದಿನ ಕ್ರಿಯೆಗಳನ್ನು ಸ್ವತಃ ಮಾಡಿಕೊಳ್ಳಲಾಗದವರೂ ವಿಕಲ ಚೇತನರು: ಅನೀಸ್ ಕೈಸರ್
ಚಿಕ್ಕನಾಯಕನಹಳ್ಳಿ,ಡಿ.9: ವಿಕಲ ಚೇತನರನ್ನು ಸ್ವಾವಲಂಭಿಗಳನ್ನಾಗಿಸಿ ಅವರ ಬದುಕನ್ನು ಹಸನು ಮಾಡಿಕೊಂಡು ಉತ್ತಮ ಜೀವನ ನಡೆಸಲು ಹುರಿದುಂಬಿಸುವುದೇ ವಿಶ್ವ ಅಂಗವಿಕಲ ದಿನಾಚರಣೆಯ ಉದ್ದೇಶವೆಂದು ಸಿ.ಡಿ.ಪಿ.ಓ. ಅನೀಸ್ ಕೈಸರ್ ತಿಳಿಸಿದರು.
ಪಟ್ಟಣದ ಸಿ.ಡಿ.ಪಿ.ಓ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಹದ ಯಾವುದಾದರೂ ಒಂದು ಅಥವಾ ಹೆಚ್ಚು ಅಂಗಗಳು ಊನವಾಗಿದ್ದು ಯಾವುದೇ ವ್ಯಕ್ತಿ ತನ್ನ ವಯಸ್ಸಿಗನುಗುಣವಾಗಿ ತನ್ನ ದೈನಂದಿನ ಕ್ರಿಯೆಗಳನ್ನು ಸ್ವತಃ ಮಾಡಿಕೊಳ್ಳಲು ಅಸಮರ್ಥರಾಗುತ್ತಾರೋ ಅಂತಹವರನ್ನು ವಿಕಲಚೇತನರೆಂದು ಕರೆಯುತ್ತೇವೆ ಎಂದರಲ್ಲದೆ, ಅಧಿನಿಯಮ 1995 ರ ಪ್ರಕಾರ ಅಂಗವಿಕಲತೆಯನ್ನು ಚಲನ ದೋಷವುಳ್ಳವರು ಅಥವಾ ದೈಹಿಕ ವಿಕಲ ಚೇತನರು, ದೃಷ್ಟಿ ದೋಷವುಳ್ಳವರು, ವಾಕ್ ಶ್ರವಣ ದೋಷವುಳ್ಳವರು, ಬುದಿಮಾಂದ್ಯತೆ. ಕುಷ್ಠರೋಗ ನಿವಾರಿತ ವಿಕಲ ಚೇತನರು, ಬಹುವಿಧ ವಿಕಲಚೇತನರು ಮತ್ತು ಮಾನಸಿಕ ಅಸ್ವಸ್ಥರು ಈ ರೀತಿ ವಗರ್ಿಕರಿಸಬಹುದಾಗಿದೆ ಎಂದು ತಿಳಿಸಿದರು.
ವಿಕಲ ಚೇತನಕ್ಕೆ ಸಾಮಾನ್ಯ ಕಾರಣಗಳು ತಾಯಿಗೆ ಪೌಷ್ಠಿಕಂಶದ ಕೊರತೆ (ಅಪೌಷ್ಠಿಕತೆ) ಗಭರ್ಾವಸ್ಥೆಯಲ್ಲಿ ಸೋಂಕುಗಳು, ಸೋದರ ಸಂಬಂಧಿ ವಿವಾಹ, ತಂದೆ ತಾಯಿ ರಕ್ತ ಹೊಂದಾಣಿಕೆಯಿಲ್ಲದ ಪ್ರಸಂಗ, ಗಭರ್ಾವಸ್ಥೆಯಲ್ಲಿ ವೈದ್ಯರ ಸಲಹೆ ಇಲ್ಲದೆ ಔಷಧಿ ಸೇವನೆ, ಖಾಯಿಲೆಗಳು, ತಾಯಿ ಮಾದಕ ವ್ಯಸನಿಯಾಗಿದ್ದಲ್ಲಿ, ಅಪಘಾತಗಳು, ಅವಧಿ ಪೂರ್ವ ಜನನಗಳು, ಕಾರಣವಾಗಿರುತ್ತದೆ ಎಂದು ತಿಳಿಸಿದರು.
ವಿಕಲ ಚೇತನ್ಯವನ್ನು ತಡೆಗಟ್ಟಲು ಗಭರ್ಾವಸ್ಥೆಯಲ್ಲಿ ಇದ್ದಾಗಲೇ ತಾಯಿ ವೇಳೆಗೆ ಸರಿಯಾಗಿ ಆಹಾರವನ್ನು ಸೇವಿಸಿ ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿದಲ್ಲಿ ವಿಕಲ ಚೇತನ ಮಕ್ಕಳು ಜನಿಸುವುದನ್ನು ತಡೆಗಟ್ಟಬಹುದು, ಮಗು ಹುಟ್ಟಿದ ಕೂಡಲೇ ತಾಯಿ ಮಗುವಿಗೆ ಎದೆಹಾಲನ್ನು ಕುಡಿಸುವುದರಿಂದ ಅದರಲ್ಲಿರುವ ಕೊಲೆಸ್ಟ್ರಾಲ್ ಅಂಶ ದಿಂದಾಗಿ 6 ಮಾರಕ ರೋಗಗಳನ್ನು ತಡೆಗಟ್ಟುಲು ಸಾಧ್ಯ, ಆದುದರಿಂದ ಎಲ್ಲ ತಾಯಂದಿರು ಮಕ್ಕಳಿಗೆ ತಪ್ಪದೇ ಎದೆ ಹಾಲನ್ನು ಕುಡಸಬೇಕೆಂದರು.
ವಿಕಲ ಚೈತನ್ಯರನ್ನು ಪ್ರಾರಂಭದಲ್ಲಿ ಗುರುತಿಸಿ ವಿಕಲ ಚೈತನ್ಯತೆಯನ್ನು ತಡೆಗಟ್ಟುವುದು, ಅಂಗವಿಕಲತೆ ತಡೆಗಟ್ಟುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು, ನಿವಾರಣಾತ್ಮಕ ಶಸ್ತ್ರ ಚಿಕಿತ್ಸೆ ಸಾಧನ ಸಲಕರಣೆಗಳನ್ನು ಒದಗಿಸುವುದು, ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ತಿಳಿಸಿದರು. ವಿಕಲ ಚೈತನ್ಯರಿಗೆ ವಿಶೇಷ ಶಾಲೆಗಳು, ಸಮನ್ವಯ ಶಿಕ್ಷಣ ವಿದ್ಯಾಥರ್ಿ ವೇತನ ಅಥವಾ ಪ್ರೋತ್ಸಾಹ ಧನವನ್ನು ಶಿಕ್ಷಣದಲ್ಲಿ ನಿಯಮಗಳ ಸಡಿಲಿಕೆ, ಶಬ್ದ, ಗ್ರಂಥಾಲಯ, ವಿಶೇಷ ತರಬೇತಿ ಕೇಂದ್ರಗಳು, ಪುಸ್ತಕಳ ಸರಬರಾಜು, ಸಕರ್ಾರಿ ಹುದ್ದೆಗಳಲ್ಲಿ ಮೀಸಲಾತಿ ಸಾಧನ ಉದ್ಯೋಗಕ್ಕೆ ಪ್ರೋತ್ಸಾಹ ಆಧಾರ, ಓಊಈಆಅ ಯೋಜನೆಗಳು, ಸಾದನ ಸಲಕರಣೆಗಳ ವಿತರಣೆ (ರಿಯಾಯಿತಿ ದರದಲ್ಲಿ) ಪೋಷಣಾ ಭತ್ಯೆ ಯೋಜನೆ, ಗುರುತಿನ ಚೀಟಿ, ಬುದ್ದಿ ಮಾಂಧ್ಯ ಮಕ್ಕಳ ಪೋಷಕರಿಗೆ ವಿಮಾ ಯೋಜನೆ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಕ್ರೀಡೆಗಳ ಪ್ರೋತ್ಸಾಹ ಧನ, ರಾಜ್ಯ ಪ್ರಶಸ್ತಿಗಳು, ಸ್ವಯಂ ಸೇವಾ ಸಂಸ್ಥೆಗಳ ನೆರವುಗಳ ಬಗ್ಗೆ ಸಮಗ್ರವಾಗಿ ತಿಳಿಸಿದರು.
ಪುರಸಭಾ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ ನವರು ಉದ್ಘಾಟನಾ ನುಡಿಗಳನ್ನು ಆಡುತ್ತಾ ತಾಯಿ ತನ್ನ ಮಗುವನ್ನು ಗಭರ್ಾವಸ್ಥೆಯಲ್ಲಿದ್ದಾಗಲೇ ಉತ್ತಮ ಆರೈಕೆ ಮಾಡಿ ವಿಕಲ ಚೈತನ್ಯವನ್ನು ತಡೆಗಟ್ಟುವಂತೆ ಶ್ರಮಿಸಿ ಉತ್ತಮ ಮಕ್ಕಳನ್ನು ಪಡೆದು ಸತ್ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು.
ದೊರೆಮುದ್ದಯ್ಯ ನವರು ಪುರಸಭಾ ಸದಸ್ಯರು ಮಾತನಾಡುತ್ತಾ ವಿಕಲ ಚೈತನ್ಯರು ಎಂದು ದ್ರೃತಿಗೆಡದೆ ಸಕರ್ಾರದ ಸವಲತ್ತುಗಳನ್ನು ಪಡೆದು ಉತ್ತಮ ಪ್ರಜೆಗಳಾಗಿ ಬಾಳುವಂತೆ ಕರೆ ನೀಡಿದರು
ಸಪ್ತಕೋಟಿ ಪಂಚಾಕ್ಷರಿ ಮಂತ್ರದ ಜಪಯಜ್ಞ
ಚಿಕ್ಕನಾಯಕನಹಳ್ಳಿ,ಡಿ.09: ಗುರು ಮರುಳ ಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಪ್ರಯುಕ್ತ ಸಪ್ತಕೋಟಿ ಪಂಚಾಕ್ಷರಿ ಮಹಾ ಮಂತ್ರದ ಜಪಯಜ್ಞ ಕಾರ್ಯಕ್ರಮವನ್ನು ಇದೇ 13ರಿಂದ 19 ರವರಗೆ ಏರ್ಪಡಿಸಲಾಗಿದೆ ಎಂದು ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ತಿಳಿಸಿದ್ದಾರೆ.
ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಜಪಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಏಳು ದಿವನಗಳ ಕಾಲ ದಿನದ 24 ಗಂಟೆ ಸತತವಾಗಿ ಭಜನೆ ಮತ್ತು ಪಂಚಾಕ್ಷರಿಯ ಮಂತ್ರದೊಡನೆ ಏಕದಾರಿ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
75 ವರ್ಷದ ನಿ. ನೌಕರರು ಸಂಘದಲ್ಲಿ ಹೆಸರನ್ನು ನೊಂದಾಯಿಸಿ
ಚಿಕ್ಕನಾಯಕನಹಳ್ಳಿ.ಡಿ.09: ತಾಲ್ಲೂಕು ನಿವೃತ್ತ ನೌಕರರ ಸಂಘದ 26 ನೇ ವರ್ಷದ ವಾಷರ್ಿಕ ಸಮಾರಂಭವನ್ನು ಇದೇ 19 ನೇ ತಾರೀಖಿನ ಭಾನುವಾರದಂದು ಹುಳಿಯಾರಿನ ಶ್ರೀ ಸೀತಾರಾಮ ಕಲ್ಯಾಣ ಪ್ರತಿಷ್ಟಾನ ದಲ್ಲಿ ಏರ್ಪಡಿಸಲಾಗಿದ್ದು, 75ವರ್ಷ ತುಂಬಿದ ಸಂಘದ ಸದಸ್ಯರು ತಮ್ಮ ಜನ್ಮ ದಿನಾಂಕವಿರುವ ದಾಖಲೆಗಳನ್ನು ಕೂಡಲೇ ಚಿಕ್ಕನಾಯಕನಹಳ್ಳಿ ನಿವೃತ್ತ ನೌಕರರು ಸಂಘದ ಪ್ರಧಾನ ಕಾರ್ಯದಶರ್ಿಗಳಾದ ಸಿ.ಡಿ. ರುದ್ರಮುನಿ ಯವರನ್ನು ಹಾಗೂ ಹುಳಿಯಾರು ಭಾಗದ ನಿವೃತ್ತ ನೌಕರರು ಸಂಘದ ಉಪಾಧ್ಯಕ್ಷರಾದ ಸಿ ರಾಮಯ್ಯ ಇವರನ್ನು 12ರ ಒಳಗೆ ಸಂಪಕರ್ಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಚಿ.ನಾ.ಹಳ್ಳಿ: ಜಾತಿ ಮತ್ತು ದುಡ್ಡಿನ ಲೆಕ್ಕಾಚಾರದಲ್ಲಿ ಟಿಕೇಟ್ ಹಂಚಿಕೆಯ ಕಸರತ್ತು
ಚಿಕ್ಕನಾಯಕನಹಳ್ಳಿ,ಡಿ.10: ಸ್ಥಳೀಯ ಸಂಸ್ಥೆಗಳಾದ ಜಿ.ಪಂ. ಹಾಗೂ ತಾ.ಪಂ.ಗಳ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಏರು ಮುಖವಾಗಿದೆ.
ಚುನಾವಣಾ ಕಣದಲ್ಲಿ ನೆಲೆ ನಿಲ್ಲಲು ಅವಣಿಸುತ್ತಿರುವ ಉರಿಯಾಳುಗಳು ತಮ್ಮ ಬೆಂಬಲಿಗರನ್ನು ಬೆನ್ನಿಗೆ ಕಟ್ಟಿಕೊಂಡು ಮಿರಿ ಮಿರಿ ಬಟ್ಟೆತೊಟ್ಟು ಓಡಾಡುತ್ತಿದ್ದಾರೆ. ಇದನ್ನು ನಿರ್ಧರಿಸಬೇಕಾದ ಮತದಾರ ಇತ್ತೀಚೆಗೆ ಬಿದ್ದ ಅಕಾಲಿಕ ಮಳೆಯಿಒದ ಕೈಗೆ ತುತ್ತು ಬಾಯಿಗೆ ಬರುವ ಮುನ್ನ ಕೈಚಾರಿತೇನೊ ಎಂಬ ದುಗುಡದಿಂದ ಗೊಂದಲದಲ್ಲಿ ದಲ್ಲಿ ಸಿಕ್ಕಿರುವ ಮಹಾ ಪ್ರಭು ಹೊಲದಲ್ಲಿನ ಬೆಳೆಯಲ್ಲಿ ಸಿಕ್ಕಷ್ಟು ಮನೆಗೆ ತರಲು ಚಳಿಯನ್ನೂ ಲೆಕ್ಕಿಸಿದೆ ಹಗಲಿರುಳು ಶ್ರಮಿಸುತ್ತಿದ್ದಾನೆ,
ತಾಲೂಕಿನಲ್ಲಿ 5 ಜಿ.ಪಂ.ಕ್ಷೇತ್ರಗಳು, 19 ತಾ.ಪಂ. ಕ್ಷೇತ್ರಗಳಿವೆ. ಇವುಗಳಲ್ಲಿ ತಮ್ಮ ಪಕ್ಷ ಹೆಚ್ಚು ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ತಾಲೂಕಿನ ಹಿಡಿತವನ್ನು ಕೈಗೆತ್ತಿಕೊಳ್ಳಬೇಕೆಂಬ ಹಂಬಲದಿಂದ ಹಲವು ಕಸರತ್ತುಗಳ ಮೂಲಕ ಪ್ರಯತ್ನಿಸುತ್ತಿರುವ ಪಕ್ಷಗಳ ನಾಯಕರು, ಇನ್ನಿಲ್ಲದ ಲೆಕ್ಕಾಚರದಲ್ಲಿ ತೊಡಗಿದ್ದಾರೆ. ಜೆ.ಡಿ.ಯು. ಎನ್ನುವುದಕ್ಕಿಂತ ಜೆ.ಸಿ.ಎಂ. ಬೆಂಬಲಿಗರು ಬಿ.ಜೆ.ಪಿ.ಯೊಂದಿಗೆ ವಿಲೀನಗೊಳ್ಳಲಿದ್ದಾರೆ ಎಂಬ ಪುಕಾರು ದಟ್ಟವಾಗಿದ್ದು, ಜೆ.ಡಿ.ಎಸ್. ಮತ್ತು ಕಾಂಗ್ರೆಸ್ ಹೊಂದಾಣಿಕೆಯ ಮಾತುಗಳು ರಾಜ್ಯ ಮಟ್ಟದಲ್ಲಿ ಕೇಳಿ ಬರುತ್ತಿರುವುದರಿಂದ ಟಿಕೇಟ್ ಆಕಾಂಕ್ಷಿಗಳು ಸ್ವಲ್ಪ ಮಟ್ಟಿನ ಗೊಂದಲದಲ್ಲಿದ್ದಾರೆ.
ಈ ಚುನಾವಣೆ ವಿಶೇಷವಾಗಿ ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎಸ್.ಕಿರಣ್ಕುಮಾರ್ಗೆ ಪ್ರತಿಷ್ಠೆಯ ಕಣವಾಗಿದೆ, ಕಾರಣ ಈ ಇಬ್ಬರು ನಾಯಕರಲ್ಲಿ ತಾಲೂಕಿನಲ್ಲಿ ಯಾರು ಹೆಚ್ಚು ಜನಪ್ರಿಯರು ಎಂಬ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಬೇಕಾಗಿದೆ. ಈ ಚುನಾವಣೆಯಲ್ಲಿ ಯಾರು ತಮ್ಮ ಬೆಂಬಲಿಗರನ್ನು ಹೆಚ್ಚು ಗೆಲ್ಲಿಸಿಕೊಳ್ಳುತ್ತಾರೊ ಅವರು ಮುಂದಿನ ವಿಧಾನ ಸಭೆಯ ಮೆಟ್ಟಿಲು ಹತ್ತಲು ಸಹಕಾರಿಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿವೆ. ಒಟ್ಟನಲ್ಲಿ ಜೆ.ಸಿ.ಎಂ. ಹಾಗೂ ಕೆ.ಎಸ್.ಕೆ.ಗೆ ಜಿದ್ದಾಜಿದ್ದು ಆರಂಭಗೊಂಡಿದೆ.
ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ದೃಷ್ಠಿಯನ್ನಿಟ್ಟು ಕೊಂಡು ನೋಡುವುದಾದರೆ ಇಬ್ಬರೂ ಸಮ ಬಲರೇ, ಕಾರಣ ಮಾಧುಸ್ವಾಮಿ ಹಂದನಕೆರೆ, ಕಂದೀಕೆರೆ, ಶೆಟ್ಟೀಕೆರೆ ಭಾಗಗಳಲ್ಲಿ ಹೆಚ್ಚು ಬೆಂಬಲಿಗರನ್ನು ಹೊಂದಿದ್ದರೆ, ಕೆ.ಎಸ್.ಕಿರಣ್ಕುಮಾರ್ ಹುಳಿಯಾರು, ಹೊಯ್ಸಲಕಟ್ಟೆ, ಬುಕ್ಕಾಪಟ್ಟಣದ ಕಡೆ ಫೆಮಸ್. ಈಗಾಗಿ ಇವರಿಬ್ಬರ ಬಲವನ್ನು ನಿರ್ಧರಿಸುವಲ್ಲಿ ಈ ಚುನಾವಣೆ ನಿಣರ್ಾಯಕ ಪಾತ್ರ ವಹಿಸಲಿದೆ.
ಸ್ಥಳೀಯ ಜೆ.ಡಿ.ಎಸ್. ನಾಯಕ ಸಿ.ಬಿ.ಸುರೇಶ್ ಬಾಬು ಕ್ಷೇತ್ರದಲ್ಲಿ ಜನರಿಗೆ ನೇರವಾಗಿ ದೊರೆಯದಾದಾಗ ಕ್ಷಪಿಸಿದ್ದು ಬಿಟ್ಟರೆ ಅವರು ಕ್ಷೇತ್ರಕ್ಕೆ ಬಂದು ''ಅಣ್ಣ, ಅಕ್ಕ, ಬರ್ದರ್'' ಎಂದು ಹೆಗಲ ಮೇಲೆ ಕೈ ಹಾಕಿದ ತಕ್ಷಣ ಎಲ್ಲವನ್ನು ಮರೆತು 'ಬಾಬಣ್ಣ' ಎಂದು ಜನ ಗುಂಪು ಗುಂಪಾಗಿ ಹಿಂಬಾಲಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಇಲ್ಲಿನ ಕಾಂಗ್ರೆಸಿಗರನ್ನು ಅನಾಥರನ್ನಾಗಿಸಿರುವ ಮೇಲ್ಮಟ್ಟದ ನಾಯಕರು, ಈ ಚುನಾವಣೆಯನ್ನು ಹೇಗೆ ಎದುರಿಸುತ್ತಾರೆ ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಹಾಗೇ ಉಳಿದಿದೆ. ಹಾಗಂತ ಆಕಾಂಕ್ಷಿಗಳೇನು ಕಡಿಮೆಯಾಗಿಲ್ಲ, ಟಿಕೇಟ್ ಆಕಾಂಕ್ಷಿಗಳು ಅಷ್ಟೇ, ಮೊದಲು ಜೆ.ಡಿ.ಎಸ್.ನಲ್ಲಿ ಟ್ರೈ ಮಾಡೋಣ ಅಲ್ಲಿ ಸಿಗದಿದ್ದರೆ ಕಾಂಗ್ರೇಸ್ ಇದ್ದೇ ಇದೆಯಲ್ಲಾ ಎಂಬ ಮನೋಭಾವನೆಯವರು ಹೆಚ್ಚಾಗಿದ್ದಾರೆ. ಎರಡು ಪಕ್ಷಗಳಲ್ಲಿ ಅಜರ್ಿ ಸಲ್ಲಿಸಿರುವ ಉದಾಹರಣೆ ಇಲ್ಲದಿಲ್ಲ. ಈ ಮಾತನನ್ನು ಕೇಳಿದ ಕೆಲವು ಕಾರ್ಯಕರ್ತರು ಜೆ.ಡಿ.ಎಸ್. ಜೊತೆ ಹೊಂದಾದರೆ ನಮ್ಮ ಕೈ ಸ್ವಲ್ಪ ಬೆಚ್ಚಗಾಗುತ್ತದೆ ಎಂದು ಆಸೆಗಣ್ಣಿನಿಂದ ನೋಡುವವರು ಇದ್ದಾರೆ. ಆದರೆ ನಿಷ್ಠಾವಂತ ಬೆರಳೆಣಿಕೆಯಷ್ಟು ಕಾಂಗ್ರೆಸಿಗರು ಇದಕ್ಕೆ ಹೊರತಾದವರೂ ಇದ್ದಾರೆ. ಆದರೆ ರಾಜ್ಯ ನಾಯಕರು ಪಕ್ಷಗಳ ಹೊಂದಾಣಿಕೆಯಲ್ಲಿ ಏನು ನಿಲುವು ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಟಿಕೆಟ್ ಆಕಾಂಕ್ಷಿಗಳ ಗಮನ ನೆಟ್ಟಿದೆ.
ಜೆ.ಡಿ.ಎಸ್, ಕಾಂಗ್ರೆಸ್ ಈಗಾಗಲೇ ಒಂದೊಂದು ಸುತ್ತಿನ ಕಾರ್ಯಕರ್ತರ ಸಭೆ ಕರೆದು ಅಜರ್ಿಗಳನ್ನು ಪಡೆದಿವೆ, ಜೆ.ಸಿ.ಎಂ.ಬೆಂಬಲಿಗರು ಇದೇ 11ರಂದು ಒಂದೆಡೆ ಸೇರಲಿದ್ದಾರೆ, ಬಿ.ಜೆ.ಪಿ.ಯವರು ಪಟ್ಟಿಯನ್ನೇನು ಸಿದ್ದಗೊಳಿಸಿಕೊಂಡಿದ್ದಾರೆ ಆದರೆ ಎರಡು ಪಟ್ಟಿ ಆಗಿದೆ ಎಂಬ ಮಾತು ಕೇಳಿ ಬರುತ್ತಿದೆ, ಇದರಲ್ಲಿ ಹೈಕಮಾಂಡ್ ಯಾರ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲಾ ಪಕ್ಷಗಳು ಜಾತಿ ಲೆಕ್ಕಾಚಾರದಲ್ಲಿ ಹಾಗೂ ವ್ಯಕ್ತಿಗತವಾಗಿ ಅಬ್ಯಾಥರ್ಿಗಳೆಷ್ಟು ತೂಗುತ್ತಾರೆ ಎಂಬುದರ ಮೇಲೆ ಟಿಕೇಟ್ ನೀಡಲು ಮುಂದಾಗುತ್ತಿದ್ದಾರೆ.
ಐದು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಶೆಟ್ಟೀಕೆರೆ ಕ್ಷೇತ್ರ: ಸಾಮಾನ್ಯ ಸ್ಥಾನಕ್ಕೆ ಮೀಸಲಿದ್ದು, ಈ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಮಾಜಿ ಶಾಸಕ ಬಿ.ಲಕ್ಕಪ್ಪ, ಗೋಡೆಕೆರೆ ನಿಜಾನಂದಮೂತರ್ಿ, ಎಚ್.ಬಿ.ಎಸ್.ನಾರಾಯಣಗೌಡ, ಸಾಸಲು ಸತೀಶ ಅಜರ್ಿ ಸಲ್ಲಿಸಿದ್ದಾರೆ, ಜೆ.ಡಿ.ಎಸ್.ನಿಂದ ತಾ.ಪಂ. ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಭೈರವ ಮೈನ್ಸ್ನ ಸಿ.ಡಿ.ಸುರೇಶ್ ಕೇಳುತ್ತಿದ್ದಾರೆ. ಜೆ.ಸಿ.ಎಂ.ಬೆಂಬಲಿಗರ ಬಣದಿಂದ ತಾ.ಪ0.ಮಾಜಿ ಅಧ್ಯಕ್ಷ ಎಚ್.ಎಂ.ಸುರೇಂದ್ರಯ್ಯ, ಟಿ. ಶಂಕರಲಿಂಗಪ್ಪ ಆಕಾಂಕ್ಷಿಗಳಾಗಿದ್ದಾರೆ. ಬಿ.ಜೆ.ಪಿ.ಯಿಂದ ಬಿ.ಎನ್.ಶಿವಪ್ರಕಾಶ್, ಗಣಿ ಉದ್ಯಮಿ ಪಂಚಾಕ್ಷರಿ ಪೈಪೋಟಿಯಲಿದ್ದಾರೆ.
ಕಂದೀಕೆರೆ ಕ್ಷೇತ್ರ: ಅನುಸೂಚಿತ ಜಾತಿಗೆ ಮೀಸಲಿದ್ದು ಜೆ.ಡಿ.ಎಸ್.ನಿಂದ ತೀರ್ಥಪುರದ ಕುಮಾರ್, ನಿವೃತ್ತ ಶಿಕ್ಷಕ ಶಿವಣ್ಣ, ಪೈಪೋಟಿಯಲಿದ್ದು ಜಿ.ಪಂ.ಮಾಜಿ ಅಧ್ಯಕ್ಷ ರಘುನಾಥ್ರವರ ಹೆಸರೂ ಕೇಳಿ ಬರುತ್ತಿದೆ. ಜೆ.ಸಿ.ಎಂ.ಬೆಂಬಲಿಗರ ಗುಂಪಿನಲ್ಲಿ ಲೋಹಿತಾ, ಸಾಲ್ಕಟ್ಟೆ ಚಂದ್ರಣ್ಣ, ಹೊಸಕೆರೆ ಮಲ್ಲಿಕಾರ್ಜನ್ ಮುಂಚೂಣಿಯಲಿದ್ದಾರೆ, ಕಾಂಗ್ರೇಸ್ನಲ್ಲಿ ವಕೀಲ ಪರಮೇಶ್ ಅಜರ್ಿ ಹಾಕಿಕೊಂಡಿದ್ದಾರೆ, ಬಿ.ಜೆ.ಪಿ.ಯಿಂದ ಬೇವಿನಹಳ್ಳಿ ಚನ್ನಬಸವಯ್ಯ, ಆಲದಕಟ್ಟೆ ರಂಗನಾಯ್ಕ, ಬೆಳ್ಳಾರದ ಈರಣ್ಣ, ಅಜ್ಜಿಗುಡ್ಡೆ ಸಣ್ಣಯ್ಯನ ಹೆಸರು ಕೇಳಿ ಬರುತ್ತಿದೆ.
ಹಂದನಕೆರೆ ಕ್ಷೇತ್ರ: ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿದ್ದು, ಈ ಕ್ಷೇತ್ರದಲ್ಲಿನ ಎಲ್ಲಾ ಪಕ್ಷಗಳ ಗಟ್ಟಾನುಗಟಿ ನಾಯಕರುಗಳು ತಮ್ಮ ಧರ್ಮಪತ್ನಿಯನ್ನು ನಿಲ್ಲಿಸಲು ಕಸರತ್ತು ನಡೆಸುತ್ತಿದ್ದು, ಜೆ.ಡಿ.ಎಸ್.ನಿಂದ ಜಿ.ಪಂ. ಮಾಜಿ ಅಧ್ಯಕ್ಷ ರಘುನಾಥ್ರವರ ಪತ್ನಿ ಲಕ್ಷ್ಮಿ, ಕುದುರೆ ರಾಜಣ್ಣನವರ ಪತ್ನಿ, ತಾ.ಪಂ.ಸದಸ್ಯೆ ಜಾನಮ್ಮ ರಾಮಚಂದ್ರಯ್ಯ,ನವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ, ಕಾಂಗ್ರೆಸ್ನಿಂದ ಸೋರಲಮಾವು ಕೃಷ್ಣಮೂತರ್ಿಯವರ ಪತ್ನಿಯ ಹೆಸರು ಕೇಳಿ ಬರುತ್ತಿದೆ. ಜೆ.ಸಿ.ಎಂ.ಬೆಂಬಲಿಗರ ಬಣದಿಂದ ಚೆನ್ನಪ್ಪನ ಪಾಳ್ಯದ ಚೆನ್ನಪ್ಪನ ಪತ್ನಿ, ಮಲ್ಲಿಗೆರೆ ರಾಜಣ್ಣನ ಪತ್ನಿ ಪೈಪೋಟಿಯಲ್ಲಿದ್ದಾರೆ. ಬಿ.ಜೆ.ಪಿ.ಯಿಂದ ಬರಗೂರು ಬಸವರಾಜು ಪತ್ನಿ ಶುಭಾ, ಮತ್ತಿಘಟ್ಟ ಆನಂದಕುಮಾರ್ ರವರ ಪತ್ನಿ ವಸಂತಮ್ಮನ ಹೆಸರು ಚಾಲ್ತಿಯಲ್ಲಿದೆ.
ಹುಳಿಯಾರು ಕ್ಷೇತ್ರ: ಕಾಂಗ್ರೆಸ್ನಿಂದ ರಮಾದೇವಿ, ಜೆ.ಡಿ.ಎಸ್.ನ ಮಂಜುಳ ಗವಿರಂಗಯ್ಯ, ಹೊಸಹಳ್ಳಿ ಪಾಳ್ಯದ ರಾಜಮ್ಮ, ಬಿಂದು ರಮೇಶ್ಬಾಬು ಮಧ್ಯೆ ಪೈಪೋಟಿ ಇದೆ, ಬಿ.ಜೆ.ಪಿ.ಯಿಂದ ಕೆ.ಎಸ್.ಕಿರಣ್ಕುಮಾರ್ರವರ ಪತ್ನಿ ಕವಿತಾ ರವರ ಹೆಸರು ಜನ ಸಾಮಾನ್ಯರಲ್ಲಿ ದಟ್ಟವಾಗಿದೆ ಆದರೆ ಕಿರಣ್ ಈ ಬಗ್ಗೆ ಮೌನವಹಿಸಿದ್ದು, ಜಿ.ಪಂ. ಮಾಜಿ ಸದಸ್ಯ ಶಿವರಾಮಯ್ಯನವರ ಪತ್ನಿ ಹೆಸರು ಚಾಲ್ತಿಯಲ್ಲಿದೆ. ಜೆ.ಸಿ.ಎಂ. ಬೆಂಬಲಿಗರ ಬಣದಲ್ಲಿ ಈ ಕ್ಷೇತ್ರದ ಮಟ್ಟಿಗೆ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದು ಉಪ್ಪಾರ ಜಾತಿಗೆ ಆದ್ಯತೆ ಕೊಡತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಹೊಯ್ಸಿಲಕಟ್ಟೆ ಕ್ಷೇತ್ರ: ಬಿ.ಸಿ.ಎಂ.(ಎ) ಮಹಿಳೆಗೆ ಮೀಸಲಿದ್ದು, ಕಾಂಗ್ರೆಸ್ನಿಂದ ಕ್ಯಾತಲಿಂಗಮ್ಮ, ಬಿ.ಜೆ.ಪಿಯಿಂದ ನಿಂಗಮ್ಮನ ಹೆಸರು ಕೇಳಿ ಬರುತ್ತಿದೆ. ಜೆ.ಡಿ.ಎಸ್.ನಿಂದ ಜಯಲಕ್ಷ್ಮಿ ಚಿಕ್ಕಣ್ಣ, ರಾಜಮ್ಮ ರಾಮಣ್ಣನ ಹೆಸರು ಕೇಳಿ ಬರುತ್ತಿದೆ. ಜೆ.ಸಿ.ಎಂ. ಬೆಂಬಲಿಗರ ಬಣದಲ್ಲಿ ಅಬ್ಯಾಥರ್ಿಗಳ ಆಯ್ಕೆ ಕಸರತ್ತು ನಡೆದಿದೆ.

ಚಿಕ್ಕನಾಯಕನಹಳ್ಳಿ,ಡಿ.11: ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿ ಚುನಾವಣೆ ಪ್ರಕ್ರಿಯೆಗಳು ಬಿರುಸಿನಿಂದ ಸಾಗುತ್ತಿದ್ದು ಚುನಾವಣೆ ಕ್ಷೇತ್ರದಲ್ಲಿ ಎಲ್ಲಾ ಪಕ್ಷಗಳು ಟಿಕೇಟ್ ಹಂಚಿಕೆಯಲ್ಲಿ ಮಾದಿಗರಿಗೆ ಹೆಚ್ಚು ಅವಕಾಶ ಕಲ್ಪಿಸಬೇಕೆಂದು ಜೆ.ಸಿ.ಪುರ ಗ್ರಾಪಂ ಸದಸ್ಯೆ ಬಿ.ಎನ್.ಶಶಿಕಲಾ ಮನವಿ ಮಾಡಿದ್ದಾಋಎ.
ರಾಜ್ಯದಲ್ಲಿ 98ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮಾದಿಗರಿದ್ದು, ಈ ಮತಗಳ ಆಧಾರದ ಮೇಲೆ ಚುನಾವಣಾ ಕಣಕ್ಕಿಳಿದರೆ ಅರ್ಧ ಬಾಗದಷ್ಟು ಜನಪ್ರತಿನಿಧಿಗಳಾಗಿ ಹೊರಹೊಮ್ಮುಬಹುದು, ಪಕ್ಷ ಯಾವುದೇ ಇರಲಿ ಚುನಾವಣೆಗೆ ನಿಲ್ಲಿ ಅವಕಾಶವಿದ್ದರೆ ಪಕ್ಷೇತರರಾಗಿ ನಿಂತು ಮಾದಿಗರು ಮುಂದೆ ಬರಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಕ್ರೀಡೆಯಲ್ಲೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ.
ಚಿಕ್ಕನಾಯಕನಹಳ್ಳಿ,ಡಿ.11: ಯುವಕರು ಕ್ರೀಡಾ ಮನೋಭಾವನೆಯನ್ನು ಬೆಳಸಿಕೊಂಡು ಜೀವನ ನಿರ್ವಹಣೆಯ ಕೌಶಲ್ಯವನ್ನು ಕಲಿಯಬೇಕೆಂದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಹೇಳಿದರು.
ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದ ತಾಲ್ಲೂಕು ಮಟ್ಟದ ಕ್ರೀಡಾಕೂಟದ ಮುಕ್ತಾಯ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟ ನಡೆಸಿದ ನೆಹರು ಯುವ ಕೇಂದ್ರ ಹಾಗೂ ಶ್ರೀರಂಗ ಯುವ ಸಂಘದ ಕಾರ್ಯದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಶಿಕ್ಷಣದ ಜೊತೆಗೆ ಕ್ರೀಡೆಯ ಅವಶ್ಯಕತೆ ಇದ್ದು ಗ್ರಾಮೀಣ ಪ್ರದೇಶದ ಯುವಕರು ಹೆಚ್ಚಿನ ರೀತಿಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಮತ್ತು ಮಹಿಳೆಯರು ಕ್ರೀಡೆಗಳಲ್ಲಿ ಚಿನ್ನದ ಪದಕ ಪಡೆಯುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿದರು. ವೇದಿಕೆಯಲ್ಲಿ ನೆಹರು ಯುವ ಕೇಂದ್ರದ ಡಿಸೋಜಾ, ಮುಖ್ಯ ಶಿಕ್ಷಕ ಸಂತೋಷ್, ಗ್ರಾ.ಪಂ.ಸದಸ್ಯರಾದ ದಿನೇಶ್, ಶಿವಕುಮಾರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಈಶ್ವರಯ್ಯ ಸ್ವಾಗತಿಸಿದರೆಎ ಸಿ.ಎ.ಕುಮಾರಸ್ವಾಮಿ ನಿರೂಪಿಸಿ ಲೋಕೇಶ್ ವಂದಿಸಿದರು.
ಮನುಷ್ಯ ಜೀವಿಸುವುದಕ್ಕಾಗಿ ಹಾಕಿಕೊಂಡ ನೀತಿ ನಿಯಮವೇ ಧರ್ಮ
ಚಿಕ್ಕನಾಯಕನಹಳ್ಳಿ,ಡಿ.11: ವ್ಯಕ್ತಿ ತನ್ನ ಚಾರಿತ್ರ್ಯವನ್ನು ಬಿಟ್ಟು ಜೀವನ ನಡೆಸಲು ಮುಂದಾಗಬಾರದು, ತನ್ನ ಚಾರಿತ್ರ್ಯ ಬಿಟ್ಟು ಬಾಳಿದರೆ ಮನುಷ್ಯ ಇದ್ದೂ ಸತ್ತಂತೆ ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕರಾದ ಸುಹಾಸಿನಿ ಹೇಳಿದರು.
ಪಟ್ಟಣದಲ್ಲಿ ಕಾನೂನು ಸೇವಾ ಸಮಿತಿಯ ವತಿಯಿಂದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಪ್ರಸಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯನ ಮನಸ್ಸಿಗೆ ಶಾಂತಿ ದೊರಕಿದರೆ ವಿಶ್ವದಲ್ಲಿ ಅಶಾಂತಿ ದೂರವಾಗಿ ಶಾಂತಿ ನೆಲಸಲು ಸಹಕಾರಿಯಾಗುತ್ತದೆ ಎಂದ ಅವರು ಸಮಯ ದೊರಕುವುದು ಬಹಳ ಕಡಿಮೆ ಅದನ್ನು ಸರಿಯಾಗಿ ಉಪಯೋಗಿಸಿಕೊಂಡರೆ ಜೀವನದಲ್ಲಿ ತಮ್ಮ ಗುರಿಯನ್ನು ಸಾಧಿಸಬಹುದು ಎಂದರು.
ಸಿ.ಡಿ.ಪಿ.ಒ ಅನೀಸ್ ಖೈಸರ್ ಮಾತನಾಡಿ ಧರ್ಮ ಎಂಬುದು ಮನುಷ್ಯನು ಹಾಕಿಕೊಂಡಿರುವ ನೀತಿ ನಿಯಮದ ಜೀವನ ಕ್ರಿಯೆ ಎಂದ ಅವರು ಮನುಷ್ಯ ಮನುಷ್ಯನಿಗೆ ಸಹಾಯ ಮಾಡಬೇಕು ಮತ್ತು ಮನುಷ್ಯನು ಶಾಂತಿ ಸಹಬಾಳ್ವೆಗಾಗಿ ಒಬ್ಬರಿಗೊಬ್ಬರೂ ಅರಿತುಕೊಂಡು ಬಾಳಬೇಕು ಎಂದರು.
ಸಮಾರಂಭದಲ್ಲಿ ನ್ಯಾಯಾಧೀಶೆ ಶೀಲಾ, ವಕೀಲರಾದ ಗೋಪಾಲಕೃಷ್ಣ, ಮಹಾಲಿಂಗಯ್ಯ, ಜ್ಞಾನಮೂತರ್ಿ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ. ಡಿ.12: ಮಕ್ಕಳು ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳಲ್ಲಿ ಭಾಗವಹಿಸಿ ಆಸಕ್ತಿಯಿಂದ ಪಾಲ್ಗೊಂಡು ವೇದಿಕೆಗಳನ್ನು ಬಳಸಿಕೊಂಡರೆ ಅವರ ಮುಂದಿನ ಗುರಿ ತಲುಪಲು ಸಹಾಯಕವಾಗಲಿದೆ ಎಂದು ತಹಸೀಲ್ದಾರ್ ಟಿ.ಸಿ. ಕಾಂತರಾಜು ಮಾತನಾಡುತ್ತ
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ. ನಾಗೇಶ್ ಮಾತನಾಡುತ್ತಾ ಎಲ್ಲಾ ತೀಪರ್ುಗಾರರು ನಿಷ್ಪಕ್ಷಪಾತವಾಗಿ ಪ್ರತಿಭೆಯನ್ನು ಗುತರ್ಿಸಿ ಯಾವುದೇ ಮಗುವಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಮತ್ತು ಸ್ಪಧರ್ಿಗಳಿಗೆ ಸೋಲು ಗೆಲುವು ಮುಖ್ಯವಲ್ಲ ಭಾಗವಿಸುವ ಸಾಮಥ್ರ್ಯ ಮುಖ್ಯ ಎಂದು ತಿಳಿಸಿದರು.
ಜಿಲ್ಲಾ ಪ್ರ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಪರಶಿವಮೂತರ್ಿ ಮಾತನಾಡಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಪಠ್ಯೇತರ ಚಟುವಟಿಕೆಗಳ ವೇದಿಕೆ ಅಗತ್ಯವಾಗಿದೆ. ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಧೈರ್ಯದ ಜೊತೆಗೆ ಸವರ್ಾಂಗೀಣ ಮುಖಿಯಾಗಿ ಬೆಳವಣಿಗೆಯಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಇ.ಓ ದಯಾನಂದ್ ತಾ.ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ. ಸುರೇಶ್, ಸಂಘಟನಾ ಕಾರ್ಯದಶರ್ಿ ಶಾಂತಮ್ಮ, ಉಪಧ್ಯಕ್ಷ ನಟರಾಜು, ನಿದರ್ೇಶಕ ರಾಜಶೇಖರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಲ್ಲಿಕಾಜರ್ುನ್ ಪ್ರಾಥರ್ಿಸಿದರೆ, ಎನ್. ಮೂತರ್ಿಸ್ವಾಗತಿಸಿದರು, ಪ್ರಕಾಶ್ ವಂದಿಸಿ, ದುರ್ಗಯ್ಯ ನಿರೂಪಿಸಿದರು.