Wednesday, November 3, 2010

ಶಿಕ್ಷಕರ ಜೇಷ್ಟತಾ ಪಟ್ಟಿ ಪ್ರಕಟಚಿಕ್ಕನಾಯಕನಹಳ್ಳ.
ನ.01: ಪದವಿ, ಮತ್ತು ಬಿ.ಇಡಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವಿಷಯವಾರು ಜೇಷ್ಟತಾ ಪಟ್ಟಿಯನ್ನು ಸೂಚನ ಫಲಕದಲ್ಲಿ ಪ್ರಕಟಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಶಿಕ್ಷಕರ ವಿಷಯವಾರು ಜೇಷ್ಟತಾ ಪಟ್ಟಿಯನ್ನು ಅನುಬಂಧ 1ರಲ್ಲಿ ವಿವಿಧ ಕಾರಣಗಳಿಂದ ಕೈ ಬಿಟ್ಟಿರಿವುದರಿಂದ ಅನುಬಂಧ 2ರಲ್ಲಿ ಪ್ರಕಟಿಸಲಾಗಿದೆ ಎಂದಿರುವ ಅವರು, ಸೇವಾನಿರತ ಪ್ರಾಥಮಿಕ ಶಾಲಾ ಶಿಕ್ಷಕರು ಪದವಿ, ತತ್ಸಮಾನ ಮತ್ತು ಬಿ.ಇಡಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಗ್ರೇಡ್-2ರ ವೃಂದಕ್ಕೆ ಬಡ್ತಿ ನೀಡಲು 2010ರ ಜನವರಿ 1ರಂದು ಸೂಚನಾ ಫಲಕದಲ್ಲಿ ಪ್ರಕಟಿಸಿದೆ ಈ ಪಟ್ಟಿಯಲ್ಲಿ ಕೈಬಿಟ್ಟರುವವರಿಂದ ಅಥವಾ ಇನ್ಯಾವುದೇ ಕಾರಣಗಳಿದ್ದರೆ 2010ರ ನವಂಬರ್ 11ರವರಗೆ ಆಕ್ಷೇಪಗಳನ್ನು ಆಹ್ವಾನಿಸಲಾಗಿದ್ದು, ಆಕ್ಷೇಪನೆಗಳನ್ನು ಸಲ್ಲಿಸಬಯಸುವ ಶಿಕ್ಷಕರು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಪತ್ರಾಂಕಿತ ವ್ಯವಸ್ಥಾಪಕರಿಗೆ ಸಲ್ಲಿಸಲು ತಿಳಿಸಿದ್ದು ನಂತರ ಬಂದ ಯಾವುದೇ ಆಕ್ಷೇಪನೆಗಳನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಎಲ್ಲಾ ಭಾಷಿಕರು ಕನ್ನಡ ಗೌರವಿಸಬೇಕು
ಚಿಕ್ಕನಾಯಕನಹಳ್ಳಿ.ನ.01: ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿ, ವಾಸ್ತುಶಿಲ್ಪ ಹಾಗೂ ಆಡಳಿತ ಕ್ಷೇತ್ರದಲ್ಲಿ ವಿಶಿಷ್ಟತೆಯ ಮೆರುಗನ್ನು ಹೊಂದಿರುವ ಕನ್ನಡಭಾಷೆಯನ್ನು, ಕನ್ನಡಭಿಮಾನಿಗಳಷ್ಟೇ ಅಲ್ಲದೆ ಈ ನಾಡಿನ ಎಲ್ಲಾ ಭಾಷಿಕರು ಕನ್ನಡ ಭಾಷೆಯನ್ನು ಕಲಿತು ರಾಜ್ಯೋತ್ಸವವನ್ನು ಆಚರಿಸಿ ಕನ್ನಡಕ್ಕೆಗೌರವ ಸಲ್ಲಿಸಬೇಕು ಎಂದುತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡ ನಾಡಿನಲ್ಲಿ ಆದಿಕವಿ ಪಂಪ, ರನ್ನ, ಜನ್ನರಂತ ರತ್ನತ್ರಯರು ಕನ್ನಡಕ್ಕೆ ವಿಶಿಷ್ಟ ಸ್ಥಾನ ನೀಡಿ ಕನ್ನಡ ಭಾಷೆಯನ್ನು ರಾಷ್ಟ್ರಾದ್ಯಂತ ಬೆಳಗಿಸಿದ್ದಾರೆ. ಕನರ್ಾಟಕವನ್ನು ಆಳಿದ ಕದಂಬರು, ಗಂಗರು, ವಿಜಯನಗರದ ಅರಸರು, ಬಿಜಾಪರದ ಸುಲ್ತಾನರು ಇವರೆಲ್ಲರೂ ಕನ್ನಡ ಕವಿಗಳಿಗೆ ಆಶ್ರಯ ನೀಡಿ ಕನ್ನಡ ಭಾಷಾ ಪರಂಪರೆಯನ್ನು ಎತ್ತಿ ಹಿಡಿದಿದ್ದಾರೆ. ಮತ್ತು ಕನ್ನಡಕ್ಕೆ 7ಜ್ಞಾನಪೀಠ ಪ್ರಶಸ್ತಿಗಳು ದೊರಕಿರುವುದು, ಕನ್ನಡಕ್ಕೆ ಶಾಸ್ತೀಯ ಸ್ಥಾನಮಾನ ಲಭ್ಯವಾಗಿರುವುದು ಕನ್ನಡವು ಸುಸಂಸಕೃತ ಜೀವನ ದರ್ಶನವಾಗಿದೆ ಎಂದ ಅವರು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕನ್ನಡ ನಾಡಿನ ಕೀತರ್ಿ ಪತಾಕೆಯನ್ನು ಹಾರಿಸಿದರ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು ಕನ್ನಡ ಅಭಿಮಾನ ಕೇವಲ ಆಚರಿಸುವುದಷ್ಠೇ ಆಗಿರದೆ ಹಬ್ಬದಂತೆ ಮನೆಮಂದಿಯಲ್ಲ ಪಾಲ್ಗೊಂಡು ಕನ್ನಡ ಭಾಷೆಯ ಉಳಿವಿಗಾಗಿ ಹೋರಾಡಬೇಕು ಎಂದರು.ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಮಾತನಾಡಿ ಹಲವಾರು ಅಂಗಡಿ ಕಛೇರಿಗಳಲ್ಲಿ ಕನ್ನಡ ನಾಮಫಲಕವು ರಾರಾಜಿಸಬೇಕು ಆದರೆ ಕನರ್ಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರೆ ಇಲ್ಲದಂತಾಗಿದ್ದು ಕನ್ನಡಕ್ಕೆ ಹೆಚ್ಚು ಒತ್ತು ಕೊಟ್ಟಿ ಕನ್ನಡಿಗರಿಗೆ ಹೆಚ್ಚು ಉದ್ಯೋಗವಕಾಶ ಕಲ್ಪಿಸಬೇಕು ಎಂದರು.ಕಲಾವಿದ ಕೃಷ್ಣಚಾರ್, ಗೋಕಾಕ್ ಚಳವಳಿ ಹೋರಾಟಗಾರ ನಾಗರಾಜ್, ಕನ್ನಡ ಸಂಘದ ಸೀಮೆಣ್ಣೆ ಕೃಷ್ಣಯ್ಯ, ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ರಾಜಣ್ಣ, ಮಾಜಿ ಶಾಸಕ ಬಿ.ಲಕ್ಕಪ್ಪ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಪುರಸಭಾ ಸದಸ್ಯ ಸಿ.ಬಸವರಾಜು, ಸಿ.ಎಸ್.ರಮೇಶ್, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಇ.ಓ ದಯಾನಂದ್, ಸಿ.ಪಿ.ಐ ರವಿಪ್ರಸಾದ್
ಉಪಸ್ಥಿತರಿದ್ದರು.ಸ್ವಾತಿಯಿಂದಾಗಿ 'ಸುವರ್ಣಮುಖಿ' ಮೈದುಂಬಿ ಹರಿಯುತ್ತಿದ್ದಾಳೆಸಿ.ಗುರುಮೂತರ್ಿ ಕೊಟಿಗೆಮನೆಚಿಕ್ಕನಾಯಕನಹಳ್ಳಿ.ಅ.3: ಸ್ವಾತಿ ಮಳೆಯ ಭರಾಟೆಯಿಂದ ತಾಲೂಕಿನ ಸುವರ್ಣಮುಖಿ ನದಿ ಮೈದುಂಬಿ ಬೋರನಕಣಿವೆಯ ಕಡೆ ನಾಗಲೋಟದಲ್ಲಿ ಓಡುತ್ತಿದ್ದಾಳೆ. ಸೋಮವಾರ ಸಂಜೆ 6.30ರಿಂದ ಆರಂಭಗೊಂಡ ಸ್ವಾತಿ ಮಳೆ ಮಂಗಳವಾರ ಬೆಳಗ್ಗೆ 10ರವರೆಗೆ ಒಂದೇ ಸಮನೆ ಬಂದಿದ್ದರಿಂದ ತಾಲೂಕಿನಲ್ಲಿ ಒಟ್ಟಾರೆ 75 ಕೆರೆಗಳ ಪೈಕಿ ಆರು ಕೆರೆಗಳನ್ನು ಬಿಟ್ಟು ಉಳಿದೆಲ್ಲಾ ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಚಿ.ನಾ.ಹಳ್ಳಿ ಕೆರೆ ಈಗ್ಗೆ 25 ವರ್ಷಗಳ ಹಿಂದೆ ಕೋಡಿ ಬಿದ್ದಿತ್ತು, ಈಗ ಸೋಮವಾರ ಬಿದ್ದ ಮಳೆಯಿಂದಾಗಿ ಮತ್ತೆ ಕೋಡಿ ಯಿಂದ ನೀರು ಹೊರಗೆ ಹೋಗುತ್ತಿದ್ದು, ಜನರು ನೀರಿನಲ್ಲಿ ಹರ್ಷದ್ಘೋರಗಳಿಂದ ಕುಣಿದು ಕುಪ್ಪುಳಿಸುತ್ತಿದ್ದಾರೆ.ತಾಲೂಕಿನಲ್ಲಿರುವ 33 ದೊಡ್ಡಕೆರೆಗಳ ಪೈಕಿ ನವಿಲೆ, ಪಂಕಜನಹಳ್ಳಿ, ಮಾದಿಹಳ್ಳಿ, ಚಿಕ್ಕಬೆಳವಾಡಿ ಕೆರೆಗಳಿಗೆ ಇನ್ನೂ ನೀರಿನ ಅರಿವು ಅಗತ್ಯವಿದೆ, ನಾಗತಿಕೆರೆ, ಮುದ್ದೇನಹಳ್ಳಿ ಗ್ರಾಮದ ಮುಂದಿನ ಕೆರೆ ಕೋಡಿ ಬಿದ್ದಿದೆ ಆದರೆ ಹಿಂದಿನ ಕೆರೆಗೆ ಇನ್ನೂ ನೀರು ಬೇಕಾಗಿದೆ.ಉಳಿದಂತೆ ತಾಲೂಕಿನ ಪ್ರಮುಖ ಕೆರೆಗಳಾದ ಮೇಲನಹಳ್ಳಿ, ಸಿಂಗದಹಳ್ಳಿ, ದುರ್ಗದ ಕೆರೆ, ಕಂದಿಕೆರೆ ಹಿರೇಹಳ್ಳಿ ಕೆರೆ, ಪೆಮ್ಮಲದೇವರಹಳ್ಳಿ ಹೊಸಕೆರೆ, ಹಂದನಕೆರೆ, ಶೆಟ್ಟೀಕೆರೆ ಕೆರೆಗಳು ತುಂಬಿ ಹರಿಯುತ್ತಿದೆ. ಇದಲ್ಲದೆ, ಶೆಟ್ಟೀಕೆರೆ ಹೋಬಳಿ, ಕಂದಿಕೆರೆ ಹೋಬಳಿ, ಹಂದನಕೆರೆ ಹೋಬಳಿ ಹಾಗೂ ಕಸಬಾ ಕೆರೆಯ ಶೇ.95 ಹಳ್ಳಿಗಳು ಕೋಡಿ ಬಿದ್ದಿರುವುದು ರೈತರ ಮುಖದಲ್ಲಿ ಹರ್ಷವನ್ನು ತಂದಿದೆ. ತೆಂಗು ಹಾಗೂ ಅಡಿಕೆ ತೋಟಗಳಲ್ಲಿ ನೀರು ಮೊಳಕಾಲಿನ ವರೆಗೆ ನಿಂತಿರುವುದರಿಂದ ವಿದ್ಯುತ್ ಅಭಾವದ ಕಾಲದಲ್ಲಿ ಈ ಬೇಸಿಗೆಯನ್ನು ನಿಶ್ಚಿತೆಯಿಂದ ಕಳೆಯ ಬಹುದೆಂಬ ಸಮಾಧಾನ ಹಲವರಲ್ಲಿ ಮೂಡಿದೆ.ಮುಂಗಡೆ ಹಾಕಿರುವ ರಾಗಿ ಬೆಳೆ ತೆನೆ ಕೂಡಿದ್ದು ತಿನ್ನುವಂತೆ ಕಾಳು ಮೂಡಿದ್ದವು ಈಗ ಈ ಸಸಿಗಳು ನೆಲೆಕಚ್ಚಿರುವುದರಿಂದ ಸ್ವಲ್ಪ ತೊಂದರೆಯಾಗಿದ್ದರೂ ಹಿಗ್ಗಡೆ ಹಾಕಿರುವವರಿಗೆ ತೆನೆ ಗರ್ಭಕಟ್ಟುವ ಸಮಯಕ್ಕೆ ಸರಿಯಾಗಿ ಬಂದಿದೆ ಎಂಬ ಅಭಿಪ್ರಾಯವನ್ನು ಅನ್ನದಾತ ವ್ಯಕ್ತ ಪಡಿಸುತ್ತಿದ್ದಾನೆ. (ಪುಟ 2ಕ್ಕೆ)ಮಳೆಯಿಂದಾದ ಅನಾಹುತ:ಬರಗೂರು ಗ್ರಾ.ಪಂ.ಯ ಹೊಸಕೆರೆಯಲ್ಲಿ ಮನೆಗೋಡೆ ಕುಸಿದು ಬಿದ್ದು ಪೂಜಾರಿ ಉಡಸಲಯ್ಯ(45) ಎಂಬಾತ ಸಾವನ್ನಪ್ಪಿದ್ದು, ತಾಲೂಕಿನ 23 ಮನೆಗಳ ಗೋಡೆಗಳು ಕುಸಿದಿವೆ. ಇದರಲ್ಲಿ ನಾಲ್ಕು ಮನೆಗಳು ಸಂಪೂರ್ಣ ಕುಸಿದಿದ್ದು, ಉಳಿದ 19 ಮನಗಳ ಗೋಡೆಗಳು ಭಾಗಶಃ ಕುಸಿದಿವೆ. ಇದರಲ್ಲಿ ಮರನಡುವಿನ್ಲಲಿ 2ಮನೆ, ಗಾಣಧಾಳುವಿನಲ್ಲಿ 2, ಸಾದರಹಳ್ಳಿಯಲ್ಲಿ 2, ಸಾದರಹಳ್ಳಿ ಗೊಲ್ಲರಹಟ್ಟಿಯಲ್ಲಿ 2, ದೊಡ್ಡರಾಂಪುರ 2, ಕಂದಿಕೆರೆಯಲ್ಲಿ 1 ಹಂದನಕೆರೆ ಹೋಬಳಿಯಲ್ಲಿ 6, ಕಸಬಾದಲ್ಲಿ 6 ಮನೆಗಳ ಗೋಡೆಗಳು ಕುಸಿದಿವೆ. ತಾಲೂಕಿನಲ್ಲಿ ಒಟ್ಟಾರೆ 10 ಲಕ್ಷ ರೂಗಳಷ್ಟು ಆಸ್ತಿಪಾಸ್ಥಿಗೆ ಹನಿಯಾಗಿರುವುದು ವರದಿಯಾಗಿದೆ.ತಾಲೂಕಿನ ಅಧಿಕಾರಿಗಳು ಎಚ್ಚೆತ್ತ ಪರಿಣಾಮ ಬರಗೂರಿನ ಕೆರೆ ಏರಿಯ ಒಡಕಿನಿಂದ ಆಗುತ್ತಿದ್ದ ಅನಾಹುತ ತಪ್ಪಿದಂತಾಗಿದೆ.ತಾಲೂಕಿನ 7ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆ ಪ್ರಮಾಣ;ಚಿ.ನಾ.ಹಳ್ಳಿ 116 ಮಿ.ಮೀ., ಬೋರನಕಣಿವೆ 115 ಮಿ.ಮೀ, ಹುಳಿಯಾರು 83 ಮಿ.ಮೀ, ಶೆಟ್ಟೀಕೆರೆ 67 ಮಿ.ಮೀ, ದೊಡ್ಡೆಣ್ಣೆಗೆರೆ 60 ಮಿ.ಮೀ, ಸಿಂಗದಹಳ್ಳಿ 35 ಮಿ.ಮೀ, ಮತ್ತಿಘಟ್ಟ 10 ಮಿ.ಮೀ ಮಳೆಯಾಗಿದೆ ಎಂದು ದಾಖಲಾಗಿದೆ.ಕೆರೆಗೆ ಬಾಗಿನ: ಚಿ.ನಾ.ಹಳ್ಳಿ ಕೆರೆ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಬಾಗಿನ ಅಪರ್ಿಸುವ ಕಾರ್ಯಕ್ರಮವನ್ನು ಇದೇ 4ರ ಗುರುವಾರ ಬೆಳಗ್ಗೆ 9ಕ್ಕೆ ಹಮ್ಮಿಕೊಂಡಿದೆ ಎಂದು ವೇದಿಕೆಯ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯ ಸದಸ್ಯರು ಹಾಗೂ ಗಣ್ಯರು ಹಾಜರಿರುವರು ಎಂದಿದ್ದಾರೆಹೆಣ್ಣು ಮಕ್ಕಳೇ ಮುಂದಿನ ಜೀವನಕ್ಕೆ ಆಧಾರಚಿಕ್ಕನಾಯಕನಹಳ್ಳಿ,ನ.03: ಹೆಣ್ಣು ಸಂಸ್ಕಾರದ ಕಣ್ಣು ಆಗಿರುವಾಗ ಹೆಣ್ಣಿನ ಭ್ರೂಣ ಹತ್ಯೆ ಮಾಡಬಾರದು ಎಂದು ಪುರಸಭಾ ಸದಸ್ಯರಾದ ಬಾಬುಸಾಹೇಬ್ ಹೇಳಿದರು.ಪಟ್ಟಣದ ಹೊಂಬಾಳಮ್ಮ ದೇವಾಲಯದ ಆವರಣದಲ್ಲಿ ನಡೆದ ಭಾಗ್ಯಲಕ್ಷ್ಮೀ ಯೋಜನೆಯ ಸುರಕ್ಷಾ ಮತ್ತು ವಿಮಾ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತಾನಾಡಿದ ಅವರು ಲಿಂಗಭೇದ ತಾರತಮ್ಯ ಮಾಡದೆ ಎಲ್ಲರಿಗೂ ಸಮನಾದ ಹಕ್ಕನ್ನು ನೀಡಿ ಪ್ರತಿಯೊಬ್ಬರಬ್ಬುನ್ನು ಗೌರವದಿಂದ ಕಾಣಬೇಕು ಎಂದ ಅವರು 18 ವರ್ಷ ತುಂಬುವವರೆಗೆ ಯಾರಿಗೂ ವಿವಾಹದ ಪ್ರಸ್ತಾಪ ಮಾಡದೆ ಅವರ ಕನಸುಗಳಗೆ ದಾರಿದೀಪವಾಗಬೇಕು ಎಂದರಲ್ಲದೆ ಹೆಣ್ಣಿಗೆ ಉನ್ನತ ಸ್ಥಾನಮಾನ ನೀಡಿ ಸಕರ್ಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡಲು ಪ್ರೋತ್ಸಾಹಿಸಬೇಕು ಎಂದರು.ಸಹಾಯಕ ಶಿಶು ಅಭಿವೃದ್ದಿ ಅಧಿಕಾರಿ ಪರಮೇಶ್ವರಪ್ಪ ಮಾತನಾಡಿ ಭಾಗ್ಯಲಕ್ಷ್ಮೀ ಯೋಜನೆಯು ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ 25ಸಾವಿರ ಸಕರ್ಾರ ಸೌಲಭ್ಯ ಅನುಕೂಲ ನೀಡಿದೆ ಎಂದರಲ್ಲದೆ ಪ್ರತಿಯೊಬ್ಬರು ಕನಿಷ್ಟ 8ನೇ ತರಗತಿಯವರಗೆ ವ್ಯಾಸಾಂಗ ಮಾಡಿಸಬೇಕು ಮತ್ತು ಮಕ್ಕಳಿಗೆ ರೋಗ ನಿರೋಧಕದ ಲಸಿಕೆಗಳನ್ನು ಪ್ರತಿಯೊಬ್ಬರು ಹಾಕಿಸಬೇಕು ಎಂದರು.ಸಮಾರಂಭದಲ್ಲಿ ರಂಗಧಾಮಯ್ಯ, ಹೊನ್ನೇಬಾಗಿ ಗ್ರಾ.ಪಂ. ಅಧ್ಯಕ್ಷ ಕಲ್ಪನ, ಇಲಾಖೆಯ ಮೇಲ್ವಿಚಾರಕರಾದ ನಾಗರತ್ನಮ್ಮ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ 156 ಬಾಂಡುಗಳನ್ನು ವಿತರಿಸಲಾಯಿತು