Friday, June 17, 2011





ಸಮಸ್ಯೆಗಳ ಸರಮಾಲೆ ಹೊತ್ತುವುದನ್ನು ಬಿಟ್ಟು ಪಕ್ಷದ ಒಗ್ಗಟ್ಟಿಗೆ ಮುಂದಾಗಿರಿ : ಕೆ.ಎಸ್.ಕಿರಣ್ಕುಮಾರ್ ಚಿಕ್ಕನಾಯಕನಹಳ್ಳಿ,ಜೂ.17: ಪಕ್ಷದ ಸಂಘಟನೆಯಲ್ಲಿರುವ ಸಮಸ್ಯೆಗಳನ್ನು ದೊಡ್ಡದಾಗಿ ಮಾಡದೆ, ಸಂಘಟಿತರು ಒಗ್ಗಟ್ಟಾಗಿ ಪಕ್ಷದ ಬೆಳವಣಿಗೆಗೆ ಸಹಕರಿಸಬೇಕು ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಹೇಳಿದರು.ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆಗೊಂಡ ತಾಲ್ಲೂಕು ಬಿ.ಜೆ.ಪಿ ಕಾಯರ್ಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂಘಟನೆಯ ಮೇಲ್ವಿಚಾರಣೆ ವಹಿಸಿಕೊಂಡ ಸಂಘಟಿತರು ಪಕ್ಷದ ಬೆಳವಣಿಗೆಗೆ ಮುಂದಾಗಬೇಕೇ ಹೊರತು ಸಮಸ್ಯೆಗಳ ಸರಮಾಲೆಯನ್ನು ಹೊತ್ತಿಕೊಳ್ಳಬಾರದು ಎಂದ ಅವರು ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆಯನು ಶಾಶ್ವತವಾಗಿ ಪರಿಹರಿಸುತ್ತೇನೆ, ಶೆಟ್ಟಿಕೆರೆ ಮೂಲಕ ಬೋರನಕಣಿವೆ ಜಲಾಶಯಕ್ಕೆ ನೀರು ಹರಿಸಲು ಶೀಘ್ರವಾಗಿ ಶಂಕುಸ್ಥಾಪನೆ ನೆರವೇರುತ್ತದೆ ಎಂದು ತಿಳಿಸಿದರು. ಜಿಲ್ಲಾ ಬಿಜೆಪಿ ಕಾರ್ಯದಶರ್ಿ ಶಂಕರಪ್ಪ ಮಾತನಾಡಿ ಪಕ್ಷದ ಅಧ್ಯಕ್ಷರು, ಕಾರ್ಯದಶರ್ಿ, ಪ್ರಧಾನ ಕಾರ್ಯದಶರ್ಿ ಇನ್ನಿತರ ಪಕ್ಷದ ಹುದ್ದೆಗಳನ್ನು ವಹಿಸಿಕೊಂಡಿರುವ ಹಲವರು ಪಕ್ಷದ ಏಳಿಗೆಗೆ ಶ್ರಮಿಸಬೇಕೆ ಹೊರತು ಇನ್ನಿತರ ಕಾರ್ಯಗಳಿಗಲ್ಲ ಪಕ್ಷದ ಬಗ್ಗೆ ಬೇಜಾವಬ್ದರಿತನ ತೋರಿ ಸಂಘಟನೆಯಿಂದ ದೂರ ಉಳಿದರೆ ಅಂತಹವರನ್ನು ಪಕ್ಷದ ಹುದ್ದೆಯಿಂದ ಕೈ ಬಿಡಲಾಗುತ್ತದೆ ಎಂದು ತಿಳಿಸಿದ ಅವರು ನಾಮ ನಿದರ್ೇಶಿತ ಸದಸ್ಯರುಗಳು ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ಕೊಡಬೇಕು ಎಂದರು. ಜಿಲ್ಲ ಪಂಚಾಯತ್ ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ ಮಾತನಾಡಿ ಸಕರ್ಾರದಿಂದ ಬಿಡುಗಡೆಯಾಗಿರುವ ಯೋಜನೆಗಳು ಜನರಿಗೆ ತಿಳಿದಿಲ್ಲ, ಜನತೆಗೆ ಅನುಕೂಲವಾಗಲು ಈ ಕಾಯರ್ಾಲವನ್ನು ಬಿ.ಹೆಚ್.ರಸ್ತೆಯಲ್ಲಿ ಮಾಡಲಾಗಿದೆ ಎಂದರು. ತಾಲ್ಲೂಕು ಬಿ.ಜೆ.ಪಿ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ) ಮಾತನಾಡಿ ಪಕ್ಷ ಸಂಘಟನೆಗೆ ಅಧ್ಯಕ್ಷರ ಜೊತೆ ಸಂಘಟನೆಯ ಎಲ್ಲಾ ಪಧಾಧಿಕಾರಿಗಳು ಸಹಾಯ ಮಾಡಬೇಕು ಆಗ ಮಾತ್ರ ಸಂಘಟನೆಗೆ ಬಲಬರುವುದು, ಹಲವರು ಹೇಳುವ ಊಹಾಪೋಹಗಳ ಮಾತುಗಳನ್ನು ಬಿಟ್ಟು, ಎಲ್ಲಾ ಮತಧರ್ಮದವರು ಒಗ್ಗಟ್ಟಾಗಿ ಸಹಕರಿಸಬೇಕು ಎಂದರು. ಕವಿತಾ ಕಿರಣ್ಕುಮಾರ್ ಮಾತನಾಡಿ ಸಂಘಟನೆ ಹಿಂದುಳಿದಿದ್ದು ಪ್ರತಿ ಹೋಬಳಿ, ಪಂಚಾಯಿತಿಗಳನ್ನು ಪಕ್ಷದ ಕಾಯರ್ಾಲಯವನ್ನು ತೆರೆದು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ, ಸದಸ್ಯರಾದ ಬಸವರಾಜು, ಜಗದೀಶ್, ನವೀನ್, ಮಾಜಿ ಜಿ.ಪಂ.ಸದಸ್ಯ ಬೊಮ್ಮಣ್ಣ ಉಪಸ್ಥಿತರಿದ್ದರು.