Wednesday, June 29, 2011

ಕುಪ್ಪೂರು ಕೆರೆಯಿಂದ 15ಸಾವಿರ ಲೋಡ್ ಮಣ್ಣು ಹೊರಕ್ಕೆಚಿಕ್ಕನಾಯಕನಹಳ್ಳಿ,ಜೂ.29 : ಕುಪ್ಪೂರು ಕೆರೆಯ ಊಳೆತ್ತುವ ಕಾರ್ಯ ಭರದಿಂದ ನಡೆಯುತ್ತಿದ್ದು, ಈ ಕೆರೆಯಿಂದ ಸುಮಾರು 15ಸಾವಿರ ಲೋಡ್ ಊಳೆತ್ತಲಾಗುತ್ತಿದೆ. ಇಷ್ಟು ಪ್ರಮಾಣದಲ್ಲಿ ಮಣ್ಣು ಹೊರ ತೆಗೆದರು ಕೆರೆಯ ಒಂದು ಮೂಲೆಯಲ್ಲಿ ಅಲ್ಪ ಪ್ರಮಾಣದಷ್ಟು ತೆಗೆದಂತಾಗಿದೆ ಅಷ್ಟೇ.ತಾಲ್ಲೂಕಿನ ಕುಪ್ಪೂರು ಕೆರೆ 63 ಎಕರೆಯಷ್ಟು ವಿಶಾಲವಾಗಿದ್ದು ಈ ಕೆರೆಯಲ್ಲಿ ಮಣ್ಣು ತುಂಬಿಕೊಂಡು ತಟ್ಟೆಯಂತಾಗಿತ್ತು. ಈ ಕೆರೆಯಲ್ಲಿ ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮಥ್ಯವಿಲ್ಲದೆ, ಬಹುಬೇಗ ತುಂಬುತ್ತಿತ್ತು, ಅಷ್ಟೇ ಬೇಗ ಖಾಲಿಯಾಗುತ್ತಿತ್ತು. ಈ ಕೆರೆಯಿಂದ ಸುತ್ತ ಮುತ್ತಲಿನ ಅಚ್ಚುಕಟ್ಟುದಾರರಿಗೆ ಯಾವುದೇ ಉಪಯೋಗವಾಗುತ್ತಿರಲಿಲ್ಲ. ಇದನ್ನರಿತ ಕುಪ್ಪೂರಿನ ಯುವಕರು ಶ್ರೀ ಮರುಳ ಸಿದ್ದೇಶ್ವರಸ್ವಾಮಿ ಕೆರೆ ಅಭಿವೃದ್ದಿ ಸಂಘವನ್ನು ಕಟ್ಟಿಕೊಂಡು ಕೆರೆಯ ಅಭಿವೃದ್ದಿಗೆ ಮುಂದಾಗಿದ್ದು ಮೊದಲ ಹಂತವಾಗಿ ಈ ಕೆರೆಯಿಂದ 15 ಸಾವಿರ ಲೋಡ್ ಮಣ್ಣನ್ನು ಕೆರೆಯಿಂದ ತೆಗೆಯುವ ಕಾರ್ಯ 15 ದಿನಗಳಿಂದ ಭರದಿಂದ ನಡೆಯುತ್ತಿದೆ. ಈ ಮಣ್ಣನ್ನು ನೂರಾರು ರೈತರು ತಮ್ಮ ಹೊಲ, ಗದ್ದೆ, ತೋಟಗಳಿಗೆ ಹೊಡೆದುಕೊಳ್ಳುತ್ತಿದ್ದು ಹುಳಿಯಾರು, ಹಂದನಕೆರೆ, ಅರಳೀಕೆರೆ ಭಾಗಗಳಿಗೂ ಈ ಮಣ್ಣು ಹೋಗುತ್ತಿದೆ, ಕೆರೆಯಿಂದ ಸುಮಾರು 30 ಕಿ.ಮೀ ಯಷ್ಟು ದೂರದೂರುಗಳಿಂದ ಲಾರಿಗಳನ್ನು ತಂದು ಮಣ್ಣನ್ನು ತೆಗೆಯುತ್ತಿದ್ದಾರೆ., ನೂರಾರು ಟ್ರಾಕ್ಟರ್ಗಳು ಹತ್ತಾರು ಲಾರಿಗಳು ಪ್ರತಿದಿನ ಮಣ್ಣು ಹೊಡೆಯುತ್ತಿದೆ ಈ ಕಾರ್ಯದಲ್ಲಿ ಹಿಟಾಚಿಗಳು ದೈತು ಶಕ್ತಿಯಂತೆ ಕಾರ್ಯನಿರ್ವಹಿಸುತ್ತಿವೆ. ಈ ಕಾರ್ಯಕ್ಕೆ ಸಕರ್ಾರ ಈಗಾಗಲೇ 15ಲಕ್ಷ ರೂಗಳನ್ನು ಮಂಜೂರು ಮಾಡಿದೆ, ಎಂದು ಕೆರೆ ಅಭಿವೃದ್ದಿ ಸಂಘದ ಅಧ್ಯಕ್ಷ ಆನಂದಕುಮಾರ್ ತಿಳಿಸಿದ್ದಾರೆ. ಈ ಕೆರೆಯಲ್ಲಿ 30ಸಾವಿರ ಕ್ಯೂಬಕ್ ಮೀಟರ್ ಮಣ್ಣು ತೆಗೆಯಲಾಗುವುದು, ಇಷ್ಟು ಮಣ್ಣು ತೆಗೆದರು ಕೆರೆಯಲ್ಲಿ ಇನ್ನೂ ಒಂದು ಲಕ್ಷ ಕ್ಯೂಬಕ್ ಮೀಟರ್ನಷ್ಟು ಹಾಗೆಯೇ ಉಳಿಯುತ್ತದೆ ಎನ್ನುವ ಅವರು ಈ ಕೆರಯಲ್ಲಿ ನಾವಂದುಕೊಂಡಷ್ಟು ಮಣ್ಣು ಹೊರತೆಗೆದು ಕೆರೆಯಲ್ಲಿನ ಗಿಡಗಂಟೆಗಳನ್ನು ಸವರಿ ಹೊರ ತೆಗೆದು ಕೆರೆಯಲ್ಲಿನ ಗಿಡಗಂಟೆಗಳನ್ನು ಸವರಿ ಹೊರ ತೆಗೆದರೆ ಈ ಕೆರೆಯೊಂದು ಸುಂದರ ತಾಣವಾಗುತ್ತದೆ, ಜೊತೆಗೆ ಕೆರೆಯ ಮುಂಭಾಗದಲ್ಲಿ ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠವಿದೆ ಹಿಂಭಾಗದಲ್ಲಿ ತಮ್ಮಡಿಹಳ್ಳಿ ವಿರಕ್ತ ಮಠದವಿದೆ, ಈ ಎರಡು ಸ್ಥಳಗಳು ಪುಣ್ಯ ಕ್ಷೇತ್ರವಾಗಿರುವುದರಿಂದ ನಾಡಿನ ಮೂಲೆ ಮೂಲೆಗಳಿಂದ ಬರುವ ಜನರಿಗೂ ಇದೊಂದು ನಿಸರ್ಗಧಾಮವಾಗುತ್ತದೆ. ಜೊತೆಗೆ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ(ದೋಣಿವಿಹಾರ) ಮಾಡಿದರೆ ಪ್ರೇಕ್ಷಣಿಯ ಸ್ಥಳವಾಗಿ, ಈ ಭಾಗವನ್ನು ಪ್ರವಾಸಿ ತಾಣವಾಗಿಸುವ ಎಲ್ಲಾ ಸವಲತ್ತುಗಳ್ನು ಪಡೆದಿದ್ದು ಸಕರ್ಾರ ಈ ಕೆರೆ ಅಭಿವೃದ್ದಿಗೆ ಇನ್ನೂ ಕನಿಷ್ಠ 20ಲಕ್ಷ ರೂಗಳಷ್ಟು ಅನುದಾನ ಬಿಡುಗಡೆ ಮಾಡಬೇಕೆಂದು ಈ ಭಾಗದ ಸಾರ್ವಜನಿಕರು ಸಕರ್ಾರವನ್ನು ಒತ್ತಾಯಿಸಿದ್ದಾರೆ.

ತಾಲ್ಲೂಕು ಕಸಾಪ ವತಿಯಿಂದ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ ಸನ್ಮಾನ
ಚಿಕ್ಕನಾಯಕನಹಳ್ಳಿ,ಜೂ.28: ತಾಲ್ಲೂಕಿನ ಎಲ್ಲಾ ಪ್ರೌಡಶಾಲೆಗಳಲ್ಲಿನ 2010-11ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿ/ನಿಯರನ್ನು ಸನ್ಮಾನಿಸಲಾಗುವುದು ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ. ಜುಲೈ 2ರಶನಿವಾರ ಬೆಳಗ್ಗೆ 10ಕ್ಕೆ ಪಟ್ಟಣದ ಶ್ರೀ ಮಲ್ಲಿಕಾಜರ್ುನ ಶಿಕ್ಷಕರ ತರಬೇತಿ ಕಾಲೇಜ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪ್ರತಿ ಶಾಲೆಯ ಒಂದು ವಿದ್ಯಾಥರ್ಿಯನ್ನು ಸನ್ಮಾನಿಸಲಿದ್ದು ಆಯಾ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಬ್ಬರ ಹೆಸರನ್ನು ದೃಢೀಕರಣದೊಂದಿಗೆ ತಾ.ಕಸಾಪ ಅಧ್ಯಕ್ಷರಿಗೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ 9980585894, 9480785031 ಈ ದೂರವಾಣಿಗೆ ಸಂಪಕರ್ಿಸಲು ಕೋರಿದೆ.

ಹಳೆಯೂರು ಆಂಜನೇಯಸ್ವಾಮಿಯವರ ರಥೋತ್ಸವಚಿಕ್ಕನಾಯಕನಹಳ್ಳಿ,ಜೂ.29 : ಹಳೆಯೂರು ಶ್ರೀ ಆಂಜನೇಯಸ್ವಾಮಿಯವರ ರಥೋತ್ಸವವನ್ನು ಜುಲೈ 11 ರಿಂದ 13ರವರೆಗೆ ಏರ್ಪಡಿಸಿದ್ದು, ವಿವಿಧ ಉತ್ಸವ, ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ.ಜುಲೈ 11ರಂದು ಸೋಮವಾರ ಬೆಳ್ಳಿ ಪಲ್ಲಕ್ಕಿಉತ್ಸವ, 12ರ ಮಂಗಳವಾರದಂದು ಬ್ರಹ್ಮರಥೋತ್ಸವ ಮತ್ತು ದಿವ್ಯಜ್ಯೋತಿ ಕಲಾ ಸಂಘದವರಿಂದ ನವ ದಂಪತಿಗಳು ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ, ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ, ಹಾಗೂ 13 ರ ಬುಧವಾರದಂದು ರಥೋತ್ಸವ ಮತ್ತು ಅನ್ನ ಸಂತರ್ಪಣೆ ನಡೆಸಲಾಗಿದೆ.13ರಂದು ಮಧ್ಯಾಹ್ನ 3 ಗಂಟೆಗೆ ಕಲ್ಪವೃಕ್ಷ ಕೋ-ಅಪರೇಟೀವ್ ಬ್ಯಾಂಕ್ ಸಭಾಂಗದಲ್ಲಿ ದಿವ್ಯ ಜ್ಯೋತಿ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನವ ದಂಪತಿಗಳ ಸ್ಪಧರ್ೆಯನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಅಂದು ಮಿತ್ರಕಲಾ ಸಂಘದವರಿಂದ ಸಂಪೂರ್ಣ ರಾಮಾಯಣ ನಾಟಕ ಮತ್ತು ಮಾರುತಿ ವ್ಯಾಯಾಮ ಶಾಲೆಯವರಿಂದ ಜಿದ್ದಾ ಜಿದ್ದಿನ ಕುಸ್ತಿಯನ್ನು ಏರ್ಪಡಿಸಲಾಗಿದೆ.
13ನೇ ವರ್ಷದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಚಿಕ್ಕನಾಯಕನಹಳ್ಳಿ,ಜೂ.29 : 13ನೇ ವರ್ಷದ ರಾಜ್ಯಮಟ್ಟದ ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆಯನ್ನು ಜುಲೈ12ರ ಮಂಗಳವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.ಶ್ರೀ ಅನ್ನಪೂಣರ್ೇಶ್ವರಿ ಕಲಾ ಸಂಘದವರಿಂದ ಸಿ.ಎನ್.ಬಸವಯ್ಯನವರ ಸವಿನೆನಪಿಗಾಗಿ ಕಲ್ಪವೃಕ್ಷ ಕೋ-ಆಪರೇಟಿವ್ ಸಪ್ತತಿ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು ಸಿಡ್ಲೇಹಳ್ಳಿ ಸಂಸ್ಥಾನದ ಕರಿಬಸವದೇಶೀಕೇಂದ್ರಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಉಪ್ಪಾರಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಲೋಕೇಶ್ವರ್, ಪೋದಾರ್ ಕಂಪನಿ ಶಂಕರ್, ಕುಶಾಲ್ ಗಾಮರ್ೆಂಟ್ಸ್ ಶಾಂತಕುಮಾರ್ ಉಪಸ್ಥಿತರಿರುವರು.ಡ್ಯಾನ್ಸ್-ಡ್ಯಾನ್ಸ್ ಸ್ಪಧರ್ೆ ವಿವರ : ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯು ಸೀನಿಯರ್ ಗ್ರೂಪ್, ಜೂನಿಯರ್ ಗ್ರೂಪ್, ಸೀನಿಯರ್ ಸಿಂಗಲ್, ಜೂನಿಯರ್ ಸಿಂಗಲ್ ವಿಭಾಗವಿದ್ದು ಗ್ರೂಪ್ಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಿದ್ದು, ಸೀನಿಯರ್ ಗ್ರೂಪ್ ಪ್ರವೇಶ ದರ 200, ಜೂನಿಯರ್ ಗ್ರೂಪ್ 100, ಸೀನಿಯರ್ ಸಿಂಗಲ್ 100, ಸೀನಿಯರ್ ಸಿಂಗಲ್ 100 ಪ್ರವೇಶ ದರಗಳಿದ್ದು ತೀಪರ್ುಗಾರರ ಮತ್ತು ವ್ಯವಸ್ಥಾಪಕರ ತೀಮರ್ಾನವೇ ಅಂತಿಮ ತೀಮರ್ಾನವಾಗಿದೆ, ಹೆಚ್ಚಿನ ವಿವರಗಳಿಗಾಗಿ ಸಿ.ಎಸ್.ರೇಣುಕಮೂತರ್ಿ-9980163152, 9742796001, ಸಂಪಕರ್ಿಸಬಹುದಾಗಿದೆ.