Tuesday, August 30, 2011



ಶಿಕ್ಷಕರ ದಿನಾಚಾರಣೆ ಅಂಗವಾಗಿ ಶಿಕ್ಷಕ ಶಿಕ್ಷಕಿಯರಿಗಾಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟಚಿಕ್ಕನಾಯಕನಹಳ್ಳಿ,ಆ.30 : ಶಿಕ್ಷಕರ ದಿನಾಚಾರಣೆ ಅಂಗವಾಗಿ ಶಿಕ್ಷಕ ಶಿಕ್ಷಕಿಯರಿಗಾಗಿ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ 3ರ ಶನಿವಾರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ. ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬಿ.ಇ.ಓ ಸಾ.ಚಿ.ನಾಗೇಶ್ ಅಧ್ಯಕ್ಷತೆ ವಹಿಸಲಿದ್ದು ದೈಹಿಕ ಶಿಕ್ಷಣ ಪರಿವೀಕ್ಷಕ ಎನ್.ನರಸಿಂಹಮೂತರ್ಿ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಪ್ರೌ.ಶಾ.ಮು.ಶಿ ಸಂಘದ ಅಧ್ಯಕ್ಷ ಕೃಷ್ಣಯ್ಯ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಉಪಸ್ಥಿತರಿರುವರು.
ಗಣೇಶ ಮೂತರ್ಿಗಳನ್ನು ನಿಗಧಿ ಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸಜರ್ಿಸಿಚಿಕ್ಕನಾಯಕನಹಳ್ಳಿ,ಆ.30 : ಸಾರ್ವಜನಿಕರು ನೈಸಗರ್ಿಕ ಬಣ್ಣಗಳಿಂದ ಕೂಡಿದ ಚಿಕ್ಕ ಗಣೇಶ ಮೂತರ್ಿಗಳನ್ನು ಪೂಜಿಸಿ ಗಣೇಶ ಮೂತರ್ಿಗಳನ್ನು ನಿಗಧಿ ಪಡಿಸಿದ ವಿಸರ್ಜನಾ ಸ್ಥಳಗಳಲ್ಲಿ ಮತ್ತು ಸಂಚಾರಿ ವಿಸರ್ಜನಾ ವಾಹನಗಳಲ್ಲಿ ವಿಸಜರ್ಿಸಬೇಕೆಂದು ಪುರಸಭಾ ಕಾಯರ್ಾಲಯ ಪ್ರಕಟಣೆಯಲ್ಲಿ ಕೋರಿದೆ. ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಲು ಪುರಸಭಾ ಕಾಯರ್ಾಲಯ ಕೆಲವು ಮಾರ್ಗಸೂಚಿಗಳನ್ನು ತಿಳಿಸಿದ್ದು ಪ್ಲಾಷ್ಪರ್ ಆಫ್ ಪ್ಯಾರೀಸ್ನಿಂದ ನಿಮರ್ಾಣಗೊಂಡ ಗಣೇಶ ಮೂತರ್ಿಗಳನ್ನು ಬಳಕೆ ಮಾಡದೆ ಜೇಡಿ ಮಣ್ಣಿಿನಿಂದ ತಯಾರಿಸಿದ ಗಣೇಶ ಮೂತರ್ಿಗಳನ್ನು ಉಪಯೋಗಿಸುವುದು, ಗಣೇಶ ಮೂತರ್ಿಗಳನ್ನು ವಿಸಜರ್ಿಸುವ ಮುನ್ನ ಹೂವು, ವಸ್ತ್ರ ಮುಂತಾದ ಪೂಜಾ ಸಾಮಗ್ರಿಗಳನ್ನು ಮತ್ತು ಅಲಂಕಾರಿಕ ವಸ್ತುಗಳು( ಕಾಗದ ಮತ್ತು ಪ್ಲಾಸ್ಟಿಕ್) ಮುಂತಾದವುಗಳನ್ನು ತೆಗೆಯಬೇಕು, ಜೈವಿಕ ಕ್ರಿಯೆಗೆ ಒಳಪಡುವ ವಸ್ತುಗಳನ್ನು ಪ್ರತ್ಯೇಕಿಸಬೇಕು, ಗಣೇಶ ವಿಗ್ರಹಕ್ಕೆ ಬಳಸಿರುವ ರಾಸಾಯನಿಕ ಬಣ್ಣಗಳಲ್ಲಿ ಕ್ರೋಮಿಯಂ, ಸೀಸ, ಸತು ಮತ್ತು ತಾಮ್ರದ ಅಂಶಗಳಿದ್ದು ಗಣೇಶ ಮೂತರ್ಿಗಳನ್ನು ಕರೆ ಬಾವಿ, ಜಲಮೂಲಗಳಿಗೆ ಹಾಕಿದರೆ ನೀರಿನ ಗುಣ ಮಟ್ಟ ಕಲುಷಿತಗೊಳ್ಳುತ್ತದೆ, ನೀರಿನ ಮಾಲಿನ್ಯ ಉಂಟಾಗಿ ನೀರಿನ ಜಲಚರ ಜೀವಿಗಳಿಗೆ ತೊಂದರೆ ಉಂಟಾಗಲಿದ್ದು ಆದ್ದರಿಂದ ಚಿಕ್ಕನಾಯಕನಹಳ್ಳಿ ಕೆರೆಯ ನೀರನ್ನು ಕುಡಿಯುವ ನೀರಾಗಿ ಬಳಸುತ್ತಿರುವುದರಿಂದ ಗಣೇಶ ವಿಸರ್ಜನೆಯನ್ನು ಕೆರೆಯಲ್ಲಿ ಮಾಡಬಾರದೆಂದು ಕೋರಿದ್ದಾರೆ.