Sunday, April 4, 2010

ಜನರ ವಿಶ್ವಾಸ,ನಂಬಿಕೆ ಉಳಿಸಿಕೊಂಡವರಿಗೆ ಗೆಲುವು ನಿಶ್ಚಿತ


ಚಿಕ್ಕನಾಯಕನಹಳ್ಳಿ,ಏ.03: ಸಹಕಾರ ಸಂಸ್ಥೆಗಳಲ್ಲಿ ರೈತರಿಗೆ ಸಾಲ ನೀಡುವಾಗ ಪಕ್ಷ ಹಾಗೂ ಜಾತಿಯನ್ನು ಕೇಳಬೇಡಿ, ಸಾಲ ಪಡೆಯುವವನಿಗೆ ನಿಜವಾಗಿ ಸಾಲದ ಅಗತ್ಯವಿದೆ ಎನಿಸಿದರೆ ಸಾಲ ಕೊಡಿಸಿ ಎಂದು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಕರೆನೀಡಿದರು.

ಪಟ್ಟಣದ ನವೋದಯ ಕಾಲೇಜಿನ ಬಳಿ ತಮ್ಮ ಗುಂಪಿನಿಂದ ಗೆಲುವು ಸಾಧಿಸಲು ನೆರವಾದ ಸಹಕಾರಿ ಬಂಧುಗಳ ಅಭಿನಂದಾನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿದರು, ಜನರಲ್ಲಿ ವಿಶ್ವಾಸ ಮತ್ತು ನಂಬಿಕೆ, ಉಳಿಸಿಕೊಂಡವರಿಗೆ ಗೆಲುವು ನಿಶ್ಚಿತವಾಗಿದ್ದು, ತಾಲೂಕಿನಲ್ಲಿನ 21 ಸಹಕಾರಿ ಸಂಸ್ಥೆಗಳ ಪೈಕಿ 16 ರಿಂದ 18 ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ನಮ್ಮವರು ಅಸ್ತಿತ್ವಕ್ಕೆ ಬಂದಿದೆ ಎಂದ ಅವರು, ಸಮಾಜದಲ್ಲಿ ಯಾರೂ ವ್ಯಕ್ತಿಯನ್ನು ಬೆಳೆಸಬಾರದು ವ್ಯವಸ್ಥೆಯನ್ನು ಬೆಳಸಬೇಕು ಎಂದರು.

ಚುನಾವಣೆಗಳಲ್ಲಿ ಜನರ ಬಳಿ ಹೋಗಿ ಕಾಡಿ ಬೇಡಿ ತಿರುಕಂಡು ತಿನ್ನವ ರೂಪದಲ್ಲಿ ಗೆದ್ದುಬಂದವರು ನಂತರ ಎಂಜ್ಜಲು ಕಾಸಿನಾಸಿಗೆ ತಮ್ಮ ತನವನ್ನು ಮಾರಿಕೊಂಡು ಅಪ್ರಮಾಣಿಕರಾಗಬಾರದು ಮುಂದಿನ ಚುನಾವಣೆಗಳಲ್ಲಿ ಗೆಲ್ಲುವ ಯೋಜನೆಯನ್ನು ಇಟ್ಟು ಕೊಂಡು ಪ್ರಾಮಾಣಿಕತೆಯಿಂದ ತಮ್ಮ ಸೇವೆಗೆ ತೊಡಗಿಸಿಕೊಳ್ಳಬೇಕೆಂದರು, ಈಗ ಜಯಗಳಿಸಿರುವ ಸಹಕಾರಿ ಪ್ರತಿನಿಧಿಗಳು ಕನಿಷ್ಟ ಪಕ್ಷ ತಮ್ಮ ಸಂಸ್ಥೆಗಳ ಜಮಾ-ಖಚರ್ಿನ್ನು ಅರ್ಥ ಮಾಡಿಕೊಂಡು ಪ್ರಶ್ನೆ ಮಾಡುವ ಮನೋಭಾವವನ್ನು ಬೆಳಸಿಕೊಳ್ಳಿ ಎಂದು ಸಹಕಾರಿ ಧುರೀಣರಿಗೆ ಕಿವಿ ಮಾತು ಹೇಳಿದರು.

ಇತ್ತೀಚಿನ ಚುನಾವಣೆಗಳು ಹಣವನ್ನು ಆಧರಿಸಿ ನಡೆಯುತ್ತಿವೆ ಆಗಾಗದೆ, ಕೆಲಸವನ್ನು ಆಧರಿಸಿ ಜನ ಪ್ರತಿನಿಧಿಗಳನ್ನು ಆರಿಸುವಂತಾಗಬೇಕು ಎಂದ ಅವರು, ಇಲ್ಲಿನ ಶಾಸಕರು ಬಸವೇಶ್ವರ ನಗರವನ್ನೇ ತಮ್ಮ ಮತಕ್ಷೇತ್ರವೆಂದು ತಿಳಿದುಕೊಂಡಂತಿದೆ ಎಂದರಲ್ಲದೆ, ನನಗೆ ಮುಂದಿನ ಚುನಾವಣೆಗಳಲ್ಲಿ ಸುರೇಶ್ ಬಾಬು ಬಗ್ಗೆಯಾಗಲಿ, ಕಿರಣ್ಕುಮಾರ್ ಬಗ್ಗೆಯಾಗಲಿ ಆತಂಕವಿಲ್ಲ ಎಲ್ಲಿ ಈ ಕ್ಷೇತ್ರಕ್ಕೂ ಗಣಿರೆಡ್ಡಿಗಳು, ಆನಂದ ಸಿಂಗ್ನಂತಹ ಗಣಿಗಾರಿಕೆಯವರು ಬರುತ್ತಾರೋ ಎಂಬ ಭಯವಿದೆ ಎಂದರು.

ನಾನು ಶಾಸಕನಾಗಿದ್ದಾಗ ಗಣಿಗಾರಿಕೆಯಲ್ಲಿ ಟನ್ಗೆ 15ರೂ ನಂತೆ ಸಂಗ್ರಹಿಸಿ ನೀರಾವರಿ ಯೋಜನೆಯ ಗುರಿಯನ್ನಿಟ್ಟು ಕೊಂಡು ಕೋಟಿ ಗಟ್ಟಲೆ ಸಂಗ್ರಹಿಸಿ

ಇಟ್ಟ ಹಣದಲ್ಲಿ ಅಧಿಕಾರಿಗಳು ಐಷರಾಮಿ ಕಾರುಗಳನ್ನು ಕೊಂಡು ಅದರಲ್ಲಿ ಓಡಾಡುವುದನ್ನು ನೋಡಿದರೆ, ಇವರೆಲ್ಲಾ ಲಾಗ್ ಬುಕ್ ಹೇಗೆ ನಿರ್ವಹಿಸುತ್ತಿದ್ದಾರೆ ಎಂಬ ಕೌತಕ ಒಂದಡೆಯಾದರೆ, ನೀರಾವರಿಗೆಂದು ಕೂಡಿಟ್ಟ ಹಣ ಈ ರೀತಿ ಪೋಲಾಗುತ್ತಿದೆಯೆಲ್ಲಾ ಎಂಬ ಕೊರಗು ಇದೆ ಎಂದರು.

ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ ರೈತರಿಗೆ ಸಾಲ ಕೊಡಿಸುವಾಗ ಇರುವ ಮುತುವಜರ್ಿ ಅವರ ಸಾಲವನ್ನು ತೀರಿಸುವಾಗಲೂ ಇರಬೇಕು, ಆಗಿದ್ದರೆ ಮಾತ್ರ ಸಹಕಾರಿ ಸಂಸ್ಥೆಗಳು ಉಳಿಯುತ್ತವೆ ಹಾಗೂ ಸಾಲಕೊಡಿಸಿದವರಿಗೂ ಒಂದು ಬೆಲೆ ಬರುತ್ತದೆ ಎಂದರಲ್ಲದೆ, ಜೆ.ಸಿ.ಮಾಧುಸ್ವಾಮಿಯವರು ಶಿಫಾರಸ್ಸು ಮಾಡಿದವರನ್ನು ವಿಶೇಷವಾಗಿ ಪರಿಗಣಿಸುವುದಾಗಿ ಹೇಳಿದ ಅವರು, ರೈತರ ಯಾವುದೇ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಮುಂದಾಗುತ್ತೇನೆ ಎಂದರಲ್ಲದೆ, ಇತ್ತೀಚಿಗೆ ಸಕರ್ಾರದ ಮಟ್ಟದಲ್ಲಿರುವ ಅಧಿಕಾರಸ್ಥರ ಹಂತದಲ್ಲಿ ಭ್ರಷ್ಟರು ಹೆಚ್ಚುತ್ತಿದ್ದಾರೆ ಇದನ್ನು ತಡೆಯಬೇಕು ಎಂದರು.

ಇನ್ನೊಂದು ತಿಂಗಳಲ್ಲಿ ಗ್ರಾ.ಪಂ. ಚುನಾವಣೆಗಳು ನಡೆಯುವ ಸಾಧ್ಯತೆ ಇದೆ, ಡಿಸೆಂಬರ್ ತಿಂಗಳಲ್ಲಿ ತಾ.ಪಂ. ಹಾಗೂ ಜಿ.ಪಂ. ಚುನಾವಣೆಗಳು ನಡೆಯುತ್ತವೆ ಅವೆಲ್ಲಾಕ್ಕೂ ಈಗಿನಿಂದಲೇ ಸಿದ್ದರಾಗಬೇಕು ಎಂದರು.

ಕೆಂಚಮಾರಯ್ಯ ಮಾತನಾಡಿ ದೂರದೃಷ್ಟಿಯಿರುವಂತಹ ಜೆ.ಸಿ.ಮಾಧುಸ್ವಾಮಿ ಶಾಸಕರಾದರೆ ವಿಧಾನ ಸಭೆಯಲ್ಲಿ ನ್ಯಾಯಯುತ ಬೇಡಿಕೆಗಾಗಿ ಧ್ವನಿ ಎತ್ತುತ್ತಾರೆಂದರು.

ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ನಮ್ಮ ಪಕ್ಷದಲ್ಲಿ ಇರುವ ಸಣ್ಣ ಸಣ್ಣ ಒಡಕುಗಳನ್ನು ದೊಡ್ಡದನ್ನಾಗಿ ಮಾಡದೆ ಜೆ.ಸಿ.ಮಾಧುಸ್ವಾಮಿ ಬೆಂಬಲಿತರನ್ನು ಎಲ್ಲಾ ಚುನಾವಣೆಗಳ ಗೆಲ್ಲಿಸುವುದರ ಮೂಲಕ ಮುಂದಿನ ಚುನಾವಣೆಗೆ ತಯಾರಿ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಭಾಗದ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಮಾತನಾಡಿದರು.

ಸಮಾರಂಭದಲ್ಲಿ ಸಿ.ಡಿ.ಚಂದ್ರಶೇಖರ್, ಎಚ್.ಎಂ.ಸುರೇಂದಯ್ಯ, ಶಶಿಧರ್, ನಾಗರಾಜ್, ಕಾನಕೆರೆ ಪರಮೇಶ್, ಶಂಕರಲಿಂಗಯ್ಯ, ತಾ.ಪಂ.ಸದಸ್ಯರುಗಳಾದ ಸಿ.ಶಿವಣ್ಣ, ಎಸ್.ಸಿ.ದಿನೇಶ್ ಉಪಸ್ಥಿತರಿದ್ದರು.



ಕಾಮಗಾರಿ ಸೇರಿದಂತೆ ಯಂತ್ರೋಪಕರಣ ಖರೀದಿಯಲ್ಲೂ ಕಳಪೆ: ವಿಪಕ್ಷದವರ ಆರೋಪ

ಚಿಕ್ಕನಾಯಕನಹಳ್ಳಿ,ಏ.2: ಪಟ್ಟಣದಲ್ಲಿ ನಡೆಯುತ್ತಿರುವ ಬಹುತೇಕ ಕಾಮಗಾರಿಗಳು ಕಳಪೆಗುಣಮಟ್ಟದ್ದಾಗಿದೆ ಎಂದು ವಿರೋಧ ಪಕ್ಷದ ಸದಸ್ಯರುಗಳಾದ ಬಾಬು ಸಾಹೇಬ್, ರೇಣುಕ ಗುರುಮೂತರ್ಿ ಹಾಗೂ ಧರಣಿ ಲಕ್ಕಪ್ಪ ಆರೋಪಿಸಿದರು.
ಪಟ್ಟಣದ ಪುರಸಭಾ ಕಾಯರ್ಾಲಯದಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿರೋಧ ಪಕ್ಷದವರು ಆಡಳಿತ ಪಕ್ಷದ ರೀತಿ ನೀತಿಗಳ ಬಗ್ಗೆ ಆಪೇಕ್ಷ ವ್ಯಕ್ತಪಡಿಸಿದರು.
2006-07ರಲ್ಲಿ ನೀಡಿದ ಕಾಮಗಾರಿಗಳು 2009-10ನೇ ಸಾಲಿನಲ್ಲಿ ಪೂರ್ಣಗೊಳ್ಳುತ್ತಿವೆ, ಮತ್ತು ಪುರಸಭೆಯಲ್ಲಿ ಕೊಂಡಿರುವ ವಿದ್ಯುತ್ ಉಪಕರಣಗಳು ಸೇರಿದಂತೆ ಯಂತ್ರೋಪಕರಣಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಆರೋಪಿಸಿದ ವಿರೋಧ ಪಕ್ಷದ ಸದಸ್ಯರು, ಮುಖ್ಯಾಧಿಕಾರಿಗಳು ಈ ಬಗ್ಗೆ ಗಮನ ನೀಡಿ ಸಾರ್ವಜನಿಕರ ಹಣ ಪೋಲಾಗದಂತೆ ನೋಡಿಕೊಳ್ಳಬೇಕೆಂದರು.
ಆಡಳಿತ ನಡೆಸುತ್ತಿರುವವರೆಲ್ಲಾ ಅವರವರ ಸ್ವಾರ್ಥಕ್ಕೆ ಕೆಲಸ ನಿರ್ವಹಿಸುತ್ತಿದ್ದಾರೆ, ಪಟ್ಟಣದ ಕಸ ವಿಲೇವಾರಿಗೆ ತರಿಸಿರುವ ಹೊಸ ಜೆ.ಸಿ.ಬಿಯು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಹದಿಮೂರು ಲಕ್ಷದಷ್ಟು ದುಬಾರಿ ಹಣಕೊಟ್ಟು ತಂದಹ ಯಂತ್ರೋಪಕರಣ ತಂದ ಒಂದು ದಿನದಲ್ಲೇ ಕೆಟ್ಟಿದೆ ಎಂದರೆ ಅದು ಏನ್ನೆಷ್ಟು ಕಳಪೆ ಮಟ್ಟದ್ದಾಗಿರುಬಹುದು ಎಂದು ಆಕ್ಷೇಪಿಸಿದ ಬಾಬು ಸಾಹೇಬ್, ಈ ಯಂತ್ರ ಖರೀದಿಯಿಂದಾಗಿ ನಮ್ಮ ಪುರಸಭೆ ಸಾರ್ವಜನಿಕರಿಂದ ನಗೆಗೀಡಾಗಿದೆ ಎಂದರು.
ಇಡೀ ಪಟ್ಟಣವನ್ನೇಲ್ಲಾ ಸ್ವಚ್ಚಗೊಳಿಸುವ ಜನರಿಗೆ ತಮ್ಮ ಕೇರಿಯಲ್ಲೇ ಶೌಚಾಲಯವಿಲ್ಲದೆ, ಬಯಲನ್ನೇ ಶೌಚಾಲಯವನ್ನಾಗಿಸಿಕೊಂಡಿದ್ದಾರೆ ಎಂಬ ಲಕ್ಷ್ಮಯ್ಯನ ಆರೋಪಕ್ಕೆ, ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಉತ್ತರ ನೀಡುತ್ತಾ ಹರಿಜನ ಕಾಲೋನಿಗಳಲ್ಲಿ ಶೌಚಾಲಯ ನಿಮರ್ಿಸಲೆಂದೇ 5ಲಕ್ಷದ 80ಸಾವಿರ ರೂಗಳನ್ನು ಮೀಸಲಿಟ್ಟಿದ್ದು, ಕಾಲೋನಿಯಲ್ಲಿ ಸ್ವಂತಃ ಜಾಗ ಹೊಂದಿರುವರು ಶೌಚಾಲಯ ಕಟ್ಟಿಸಿಕೊಳ್ಳುವುದಾದರೆ ಪ್ರತಿ ಒಂದು ಮನೆಗೆ 10ಸಾವಿರದಂತೆ ಪುರಸಭೆ ವತಿಯಿಂದ ಹಣವನ್ನು ನೀಡುವುದಾಗಿ ತಿಳಿಸಿದರು ಹಾಗೂ ಕಾಲೋನಿಯಲ್ಲಿ ಪುರಸಭೆಯ ಜಾಗವಿದ್ದರೆ ಅಲ್ಲಿ ಸಾರ್ವಜನಿಕ ಶೌಚಾಲಯ ನಿಮರ್ಿಸುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ವಿದ್ಯುತ್ ಅಡಚಣೆಯಿಂದಾಗಿ ನೀರು ಸರಬರಾಜಿಗೆ ತೊಂದರೆಯಾಗಿದ್ದು, ಒಂದೇ ವಾರದಲ್ಲಿ 7 ಮೋಟರ್ಗಳು ಸುಟ್ಟು ಹೋಗಿರುವುದರಿಂದ ನೀರು ಸರಬರಾಜಿಗೆ ತೊಂದರೆಯಾಗುತ್ತಿದೆ ಎಂದ ಅಧ್ಯಕ್ಷರು, ಕಳೆದ 2ವರ್ಷದಿಂದ ಲೈಟ್ಕಂಬಗಳು ಡ್ಯಾಮೇಜ್ ಆಗಿದ್ದು ಅದನ್ನು ಸರಿಪಡಿಸಲು ತಿಳಿಸಿದರೂ ಸಹ ಆ ಬಗ್ಗೆ ಬೆಸ್ಕಾಂನವರು ಗಮನ ನೀಡಿಲ್ಲ, ದಬ್ಬೇಘಟ್ಟದಲ್ಲಿ ಟಿ.ಸಿ.ಕೆಟ್ಟುಹೋಗಿದ್ದು ಅದನ್ನು ತುತರ್ಾಗಿ ಸರಿಪಡಿಸಲು ಸಭೆಗೆ ಆಗಮಿಸಿದ್ದ ಬೆಸ್ಕಾಂ ಅಧಿಕಾರಿ ಜಯಶಂಕರ್ರವರಿಗೆ ಸೂಚಿಸಿದರು.
ಪಟ್ಟಣದ ಸ್ವಚ್ಛತೆಯೂ ಸೇರಿದಂತೆ ಹಲವು ಕಾರ್ಯಗಳಿಗೆ ಅಗತ್ಯವಿರುವ 2 ಟ್ರ್ಯಾಕ್ಟರ್ ಹಾಗೂ ಶೌಚಾಲಯ ಸ್ವಚ್ಚಗೊಳಿಸುವ ಯಂತ್ರ ಮತ್ತು ನಿರಾಶ್ರಿತರಿಗೆ ಜಮೀನನ್ನು ವಿತರಿಸುವುದರ ಬಗ್ಗೆ ಚಚರ್ಿಸಲು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ನಿಯೋಗದಲ್ಲಿ ತೆರಳುವುದಾಗಿ ತಿಳಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ರುಕ್ಮಿಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಸೇರಿದಂತೆ ಪುರಸಭಾ ಸದಸ್ಯರು, ಮುಖ್ಯಾಧಿಕಾರಿ ಪಿ.ಸಿದ್ದಮೂತರ್ಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಸಾಸಲಿನಲ್ಲಿ ಜನಸ್ಪಂದನ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಏ.2: ತಾಲೂಕಿನ ಸಾಸಲು ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಇದೇ 3ರ ಶನಿವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಸಾಸಲು ಗ್ರಾಮದ ಸಕರ್ಾರಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಬೇಕೆಂದು ಕೋರಿ ಕೊಂಡಿರುವ ತಹಶೀಲ್ದಾರ್ ರವರು, ಈ ಭಾಗದ ಗ್ರಾಮಸ್ಥರು ತಮ್ಮ ಕುಂದುಕೊರತೆಗಳ ಬಗ್ಗೆ ಅಜರ್ಿ ನೀಡುವ ಮೂಲಕ ತಿಳಿಸಬೇಕೆಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
ತೀರ್ಥರಾಮೇಶ್ವರನ ರಥೋತ್ಸವ
ಚಿಕ್ಕನಾಯಕನಹಳ್ಳಿ,ಏ.2: ಪುಣ್ಯ ಕ್ಷೇತ್ರ ಶೀ ತೀರ್ಥರಾಮೇಶ್ವರ ಸ್ವಾಮಿಯವರ ರಥೋತ್ಸವವು ಯರೇಕಟ್ಟೆ ವಜ್ರ ಪುಣ್ಯಕ್ಷೇತ್ರದಲ್ಲಿ ಇದೇ 4ರ ಭಾನುವಾರ ದಿಂದ 9ರ ಶುಕ್ರವಾರದವರೆಗೆ ವೈಭವಯುತವಾಗಿ ನಡೆಯಲಿದೆ ಎಂದು ಕನ್ವೀನರ್ ಟಿ.ಎಂ.ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಏ.4ರಂದು ಧ್ವಜಾರೋಹಣ, ಗಂಗಾಪೂಜೆ, ಕುಂಭಾಬಿಷೇಕ, ಹೋಮ ಕಾರ್ಯಕ್ರಮಗಳು ನಡೆಯಲಿದ್ದು, 5ರಂದು ನವಗ್ರಹ ಪೂಜೆ, ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಏರ್ಪಡಿಸಲಾಗಿದೆ, 6ರಂದು ತೀರ್ಥರಾಮೇಶ್ವರನ ಪಲ್ಲಕ್ಕಿ ಉತ್ಸವ ತೀರ್ಥಪುರಕ್ಕೆ ಆಗಮನ, 7ರಂದು ಗ್ರಾಮ ಶಾಂತಿಗಾಗಿ ನವಗ್ರಹ ಪೂಜೆ ಹಾಗೂ ಪುಷ್ಪ ಮಂಟಪದ ಉತ್ಸವ, 8ರಂದು ಸ್ವಾಮಿಯವರನ್ನು ಯರೇಕಟ್ಟೆ ಗ್ರಾಮಕ್ಕೆ ಪುಷ್ಪ ಮಂಟಪದಲ್ಲಿ ಕರೆತರುವುದು, 9ರಂದು ದೊಡ್ಡರಾಂಪುರದಲ್ಲಿ ಸ್ವಾಮಿಯವರ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.