Thursday, August 25, 2011

ಕಂಬಳಿ ನೇಯ್ಗೆಯಲ್ಲಿ ತಾಲ್ಲೂಕಿಗೆ ಉತ್ತಮ ಹೆಸರಿದೆ ಚಿಕ್ಕನಾಯಕನಹಳ್ಳಿ,ಆ.25 :

ರಾಜ್ಯಕ್ಕೆ ತಾಲ್ಲೂಕಿನ ಕಂಬಳಿ ನೇಯ್ಗೆಯ ನೇಕಾರರು ಉತ್ತಮ ಕೊಡುಗೆ ನೀಡಿದ್ದು ಅದನ್ನು ಉಳಿಸಲು ನೇಕಾರರು ತರಬೇತಿ ಮೂಲಕ ಇತರರಿಗೆ ನೇಕಾರಿಕೆಯ ಬಗ್ಗೆ ತಿಳಿಸಿ ನೇಕಾರಿಕೆಯನ್ನು ಉಳಿಸಬೇಕು ಎಂದು ಜಿ.ಪಂ.ಸದಸ್ಯೆ ಲೋಹಿತಾಬಾಯಿ ಹೇಳಿದರು. ಪಟ್ಟಣದ ಕಂಬಳಿ ಸೊಸೈಟಿಯಲ್ಲಿ ನಡೆದ ಕ್ಲಸ್ಟರ್ ಯೋಜನೆಯ ತರಬೇತಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ನೇಕಾರಿಕೆ ಉಳಿಯಬೇಕೆಂದರೆ ನೇಕಾರರು ಇತರರಿಗೆ ನೇಯ್ಗೆಯ ಬಗ್ಗೆ ತರಬೇತಿ ನೀಡಿ ಜವಳಿ ಉದ್ಯಮವನ್ನು ಉಳಿಸಿ ಮುಂದಿನ ಪೀಳಿಗೆಗೆ ನೇಯ್ಗೆಯ ಬಗ್ಗೆ ತಿಳುವಳಿಕೆ ನೀಡಬೇಕು ಎಂದ ಅವರು ನೇಕಾರರಿಗೆ ಸಕರ್ಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಅಧಿಕಾರಿಗಳು ತಿಳಿಸಬೇಕು ಎಂದರು. ಜವಳಿ ಇಲಾಖೆಯ ಉಪನಿದರ್ೇಶಕ ಸುನಿಲ್ಕುಮಾರ್ ಮಾತನಾಡಿ ಇಲಾಖೆಯವರು ಜಿಲ್ಲಾದ್ಯಂತ ನೇಕಾರರನ್ನು ಗುರುತಿಸಿ ಅವರಿಗೆ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ, ಆದ್ದರಿಂದ ನೇಕಾರರು ಈ ಸೌಲಭ್ಯದ ಬಗ್ಗೆ ಗಮನಿಸಿ ಆಥರ್ಿಕವಾಗಿ ಸದೃಡರಾಗಬೇಕು ಆಗ ಮಾತ್ರ ಯೋಜನೆಗೆ ಬೆಲೆ ಬರುತ್ತದೆ ಎಂದರು. ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮುಂದಿನ ದಿನಗಳಲ್ಲಿ ಗುಡಿ ಕೈಗಾರಿಕೆಗಳು ನಂಬಿರುವ ಕುಟುಂಬಗಳಿಗೆ ಆಥರ್ಿಕ ಭದ್ರತೆ ಒದಗಿಸುವಂತಹ ಕಾರ್ಯಕ್ರಮಗಳನ್ನು ಸಕರ್ಾರ ಜಾರಿಗೆ ತರಲು ಪ್ರೋತ್ಸಾಹ ನೀಡುತ್ತಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದ ಅವರು ಸಕರ್ಾರಿ ಸೌಲಭ್ಯ ಪಡೆಯುವುದು ಈ ಸಮಾಜದ ಪ್ರತಿಯೊಬ್ಬರ ಹಕ್ಕು ಎಂದರು. ಸಮಾರಂಭದಲ್ಲಿ ಕಂಬಳಿ ಸೊಸೈಟಿ ಉಪಾಧ್ಯಕ್ಷ ಲೋಕೇಶ್, ಬನಶಂಕರಿ ಸೊಸೈಟಿ ಅಧ್ಯಕ್ಷ ಕಿರಣ್ಕುಮಾರ್ ಕಂಬಳಿ ಸೊಸೈಟಿ ನಿದರ್ೇಶಕರುಗಳಾದ ಗೋವಿಂದಪ್ಪ, ಅಳವೀರಪ್ಪ, ಬೀರಪ್ಪ ಮುಂತಾದವರಿದ್ದರು.
ಏಳು ತಿಂಗಳಿನಲ್ಲಿ ಜಿಲ್ಲೆಯಾದ್ಯಂತ 26ಸಾವಿರ ಸಂಘ ಸ್ಥಾಪಿಸಿದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಚಿಕ್ಕನಾಯಕನಹಳ್ಳಿ,ಆ.25 : ಕೇವಲ ಏಳು ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದಲ್ಲಿ 26ಸಾವಿರ ಸಂಘ ಸ್ಥಾಪಿಸಿ ಹಲವಾರು ಜನರಿಗೆ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲಾಗಿದೆ ಎಂದು ಯೋಜನೆಯ ಜಿಲ್ಲಾ ನಿದರ್ೇಶಕ ಪುರುಷೋತ್ತಮ್ ಹೇಳಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಡೆದ ಗ್ರಾಮ ಸಮಾಲೋಚನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ 1500 ಸಂಘ ಸ್ಥಾಪಿಸಿ ಪಟ್ಟಣದಲ್ಲಿ 180 ಸಂಘವನ್ನು ಸ್ಥಾಪಿಸಿ ಸಂಘದ ಸದಸ್ಯರಿಗೆ ಸಾಲ ಹಾಗೂ ಅವರಿಗೆ ಆಥರ್ಿಕ ಸಹಾಯವನ್ನು ಯೋಜನೆಯ ವತಿಯಿಂದ ಮಾಡಲಾಗಿದೆ ಎಂದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳವು 800 ವರ್ಷಗಳ ಇತಿಹಾಸವಿದ್ದು ಸವಧರ್ಮ ಸಮಾನತೆಯಿಂದ ಚತರ್ುದಾನವನ್ನು ಕ್ಷೇತ್ರದಲ್ಲಿ ನೀಡಲಾಗುತ್ತಿದೆ ಎಂದರು.ಪುರಸಭಾ ಸದಸ್ಯೆ ಶಾರದ ಶಂಕರ್ಬಾಬು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಡಾ.ವೀರೇಂದ್ರಹೆಗ್ಗಡೆರವರು ತಂದಿರುವ ಈ ಯೋಜನೆಯ ಸವಲತ್ತುಗಳನ್ನು ಬಳಸಿಕೊಳ್ಳಲು ಸಲಹೆ ನೀಡಿದ ಅವರು ಸಂಘಟನೆಯ ಪ್ರತಿಯೊಬ್ಬರು ಸಂಘದ ಅಭಿವೃದ್ದಿಗಾಗಿ ಸಂಘದ ಒಗ್ಗಟ್ಟಾಗಿ ಸಂಘದ ಬೆಳವಣಿಗೆಯನ್ನು ಮುಂದುವರಿಸಲು ತಿಳಿಸಿದರು. ಸಮಾರಂಭದಲ್ಲಿ ತಾ.ಪತ್ರಕರ್ತರ ಸಂಘದ ಸಹಕಾರ್ಯದಶರ್ಿ ಸಿ.ಬಿ.ಲೋಕೇಶ್, ಮೇಲ್ವಿಚಾರಕರಾದ ರವಿಕುಮಾರ್, ಸೇವಾ ಪ್ರತಿನಿಧಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.