Thursday, July 18, 2013

ಮಕಡೆ ಮಲಗಿದ ಮುಂಗಾರು: ತಿನ್ನೋಕಿಲ್ಲ ಬೇಳೆಕಾಳು
(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಜು.17 : ಮನ್ಲಿದ್ದ ಇಸೊವೋಸೊ ಹೆಸರುಕಾಳ್ನ ತಂದು ಹೊಲಕ್ಕೆ ಚೆಲ್ಲುದ್ವಿ, ಗಿಡ ಒಂದ ಹಂತಕ್ಕೆ ಬೆಳ್ದು ಗರ್ಭಕಟ್ಟೋಟೈಂಗೆ ಮೊಡಗರ್ಭಕಟ್ಲಿಲ್ಲ ಮಳೆಸುರಸ್ಲಿಲ್ಲ, ಉತ್ತಿದಷ್ಟು ಕಾಳೂ ಕೈ ಸೇರ್ಲಿಲ್ಲ, ದನಗಳಾದ್ರೂ ತಿನ್ನಲಿ ಅಂತ ಕೊಳ್ಳುರಿ ಬಿಚ್ಚಿ, ಕೈ ಚೆಲ್ಲಿ ಕುಂತಿವ್ನಿ. ಹೆಸರುಕಾಳಿನ್ ಕಥೆ ಹಿಂಗಾತು, ರಾಗಿ ಕಾಳಿನ್ ಕಥೆ ಹೆಂಗೋ... ಅನ್ನೊ ಯೋಚ್ನೆ ನನ್ನದು. ನಮ್ಮ ಬದುಕು ಒಂಥರಾ ಬ್ಯಾಸಾಯ ಮನೆ ಮಕ್ಳೆಲ್ಲಾ ಸಾಯ ಅನ್ನಂಗೆ ಆಗೋಗೈತೆ, ರಾಗಿನೂ ಕೈ ಕೊಟ್ರೆ ಸಿದ್ರಾಮಯ್ಯ ಕೊಟ್ಟಿರೊ ಅನ್ನ ಉಂಡ್ಕೊಂಡು ಜೀವ ಹಿಡ್ಕೊ ಬೇಕಾಗೈತೆ ಅಂತಾರೆ, ಗುಡ್ಡದ ಹಟ್ಟಿ ಬಡ ರೈತ ಚಿತ್ತಪ್ಪ.
ತಾಲ್ಲೂಕಿನಲ್ಲಿ ಮುಂಗಾರು ಮಕಾಡೆ ಮಲಗಿದೆ, ಸಣ್ಣಹಿಡುವಳಿದಾರರು ಮುಂಗಾರಿನ ಕನಸು ಬಿಟ್ಟು ಎಷ್ಟೋ ದಿನಗಳಾಗಿವೆ. ಮುಂಗಾರಿನ ಬೆಳೆಗಳಾದ ಹೆಸರು, ತೊಗರಿ, ಉದ್ದು, ಹಲಸಂದೆ ಬೆಳೆಗಳು ಹಾಳಾಗಿವೆ. ಅಲ್ಲೋ ಇಲ್ಲೋ ಒಂದಷ್ಟು ಕಡೆ ಹಾಕಿರುವ ಎಳ್ಳು ಗಣೇಶನ ಹಬ್ಬದ ಎಳ್ಳುಂಡೆಗೆ ಸಿಗಬಹುದು.
ತಾಲ್ಲೂಕಿನಾದ್ಯಂತ ಸುಮಾರು 12675 ಎಕರೆ ಪ್ರದೇಶಕ್ಕೆ ಹೆಸರುಕಾಳು ಬಿತ್ತಿದ್ದಾರೆ, ತೋಗರಿ 3050, ಹಲಸಂದೆಯನ್ನು 1125 ಎಕರೆಗೆ, ಉದ್ದನ್ನು 550  ಎಕರೆ ಎಳ್ಳು 225 ಎಕರೆಯಲ್ಲಿದೆ. ಹಂದನಕೆರೆಯಲ್ಲಿ 1600, ಹುಳಿಯಾರಿನಲ್ಲಿ 1515 ಎಕರೆಯಲ್ಲಿ  ಹೆಸರು ಬಿತ್ತಿದ್ದರೆ, ಹುಳಿಯಾರಿನಲ್ಲಿ ಒಂದು ಸಾವಿರ ಎಕೆರೆಯಲ್ಲಿ ತೊಗರಿ ಬಿತ್ತಿದ್ದಾರೆ.
ಏಪ್ರಿಲ್ನಿಂದಲೇ ಆರಂಭವಾಗುವ ಮುಂಗಾರು ತಡವಾಗಿ ಆರಂಭವಾಯಿತು. ಈ ಬಾರಿ ಭರಣಿ ಮಳೆ ಕೈ ಕೊಟ್ಟಿದ್ದರಿಂದ ಹಲವರು ಹೆಸರನ್ನು ಭಿತ್ತಿದ್ದು ಕೃತಿಕಾ ಮಳೆಗೆ ಅಂದರೆ ಮೇ ಕೊನೆಯಲ್ಲಿ, 90 ದಿವಸದ ಬೆಳೆಯಾದ ಹೆಸರು, ಈ ಹೊತ್ತಿಗಾಗಲೇ ಕಾಳು ತುಂಬಿದ ಗೊಂಚಲುಗಳ ಗಿಡದಲ್ಲಿ ಅಷಾಡದ ಗಾಳಿಗೆ ತೊನೆದಾಡುತ್ತಿರಬೇಕಾಗಿತ್ತು, ಆದರೆ ಮಳೆ ಕೈ ಕೊಟ್ಟಿದ್ದರಿಂದ ಕಾಳು ತುಂಬುವುದಿರಲಿ ಗರ್ಭನೆ ಕಟ್ಟಲಿಲ್ಲವಾದ್ದರಿಂದ ಹೊಲದ ತುಂಬಾ ಬರಿ 'ಸ್ಯಾದ್ರ'ನೇ ತುಂಬಕೊಂಡಿದೆ.
 ಇನ್ನು ಉದ್ದಿನ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಹಲಸಂದೆ 4ತಿಂಗಳ ಬೆಳೆಯಾದ್ದರಿಂದ ಒಂದಿಷ್ಟು ನೆಚ್ಚಿಕೊಳ್ಳಬಹುದು, ಮುಂದಿನ ಮಳೆಗಳು ಹನಿಯದಿದ್ದರೆ ಇದಕ್ಕೂ ಅದೇ ಗತಿ, ಆದರೆ ತೋಟಗಳಲ್ಲಿ ಹಾಕಿರುವವರು ಮತ್ತು ಕಾಲಕಾಲಕ್ಕೆ ನೀರು ಕಟ್ಟಿರುವವರಿಗೆ ಕಾಳು ಸಿಗುತ್ತದೆ, ಬಡ ರೈತನ ಪಾಡು ಮಾತ್ರ ತುಸು ಕಷ್ಟವೇ, ಕಾರಣ ಕಳೆದ ಬಾರಿ ಮಳೆ ಇಲ್ಲದೆ ಬರ ದಲ್ಲಿ ನರಳಿದ ರೈತನಿಗೆ ಈ ಬಾರಿ ಮುಂಗಾರು ಕೈ ಕೊಟ್ಟಿರುವುದರಿಂದ ಮನೆಯಲ್ಲಿ ತಿನ್ನಲಿಕ್ಕೆಂದು ಇಟ್ಟುಕೊಳ್ಳಲು ಬೇಳೆ ಕಾಳುಗಳು ಇಲ್ಲವಾಗಿವೆ. 
ರಾಗಿ ಸೇರಿದಂತೆ ಸಿರಿ ಧಾನ್ಯಗಳ ಗತಿ ಏನು?: ಜುಲೈ ಆರಂಭದಿಂದ ಆಗಸ್ಟ್ 15ರವರೆಗೆ ರಾಗಿ, ಸಾವೆ, ನವಣೆ ಹಾರಕ ಬೆಳೆಗಳಿಗೆ ಸುಸಂದರ್ಭ, ರಾಗಿಯ ವಿವಿಧ ತಳಿಗಳಾದ ಇಂಡಾಫ್-5, ಇಂಡಾಫ್-8, ಜಿಪಿಯು-28, ಪಿಆರ್-202 ಭಿತ್ತನೆ ಮಾಡಲು ಅವಕಾಶವಿದೆ. ಒಟ್ಲು ಮಾಡಿ ಸಸಿ ಹಾಕುವವರಿಗೆ ಈಗಾಗಲೇ ಕಾಲ ಮೀರಿ ಹೋಗಿದೆ. ಮೃಗಶಿರಾ ಮಳೆ ಬಾರದಿರುವುದರಿಂದ ರಾಗಿ ಒಟ್ಲು ಒಣಗಿ ಹೋಗಿದೆ, ಇನ್ನೇನಿದ್ದರೂ ಸಡ್ಡೆರಾಗಿ ಅಂದರೆ ನೇರವಾಗಿ ರಾಗಿಯನ್ನು ಸಾಲು ಗುಣಿಯಲ್ಲಿ ಹಾಕುವವರೆಗೆ ಮಾತ್ರ ಅವಕಾಶವಿದೆ. ಪುನರ್ವಸು, ಪುಷ್ಯ, ಮಗ್ಗೆಮಳೆ ನೆಲಮುಟ್ಟದೆ ಮುಗಿಲಲ್ಲೇ ನಿಂತರೆ ಈ ಬಾರಿಯೂ ಬರ ಬಿದ್ದಂಗೆ ಸರಿ...,  ಓ ಪ್ರಕೃತಿಯೇ ಮುನಿಯಬೇಡ, ಮಳೆ ರಾಯನೇ ಹಾಗೆ ಮಾಡಬೇಡ ಧರೆಗಳಿದು ದಣಿದಿರುವ ಜೀವಗಳಿಗೆ ತಂಪನೆರೆಯಪ್ಪ.

ಹಳೆಯೂರು ಆಂಜನೇಯಸ್ವಾಮಿ ಜಾತ್ರೆಯ ಪ್ರಯುಕ್ತ ವಿವಿಧ ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ.
  • 19ರಂದು ಚಿತ್ರಕಲಾ ಪ್ರದರ್ಶನ, 
  • 20ರಂದು ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ, ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ.
  • 21 ರಂದು ನವದಂಪತಿಗಳ ಸ್ಪಧರ್ೆ, ಕುಸ್ತಿ ಪಂದ್ಯಾವಳಿ, ಸಂಪೂರ್ಣ ರಾಮಾಯಣ ನಾಟಕ. 

ಚಿಕ್ಕನಾಯಕನಹಳ್ಳಿ,ಜು.17: ಪಟ್ಟಣದ ಹಳೆಯೂರು ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾ ರಥೋತ್ಸವ ಇದೇ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು ಪ್ರತಿವರ್ಷದಂತೆ ಈ ವರ್ಷವು ಸಂಘಸಂಸ್ಥೆಗಳು ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿವೆ.  
ಜುಲೈ 19ರ ಶುಕ್ರವಾರ ಬೆಳ್ಳಿಪಲ್ಲಕ್ಕಿ ಉತ್ಸವ, 20ರಂದು ಬ್ರಹ್ಮರಥೋತ್ಸವ, 21ರಂದು ರಥೋತ್ಸವ ನಡೆಯಲಿದೆ. 
ವಾಣಿ ಚಿತ್ರಕಲಾ ಕಾಲೇಜಿನಲ್ಲಿ 19ರಿಂದ 21ರವರೆಗೆ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಪ್ರಾತ್ಯಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಖ್ಯಾತ ಕಲಾವಿದ ಪ್ರಭು ಹರಸೂರು ಪ್ರದರ್ಶನದ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. 
ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ: 20ರಂದು ಅನ್ನಪೂಣರ್ೇಶ್ವರಿ ಕಲಾ ಸಂಘ ಹಾಗೂ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು 10.30ಕ್ಕೆ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ. 
ಡ್ಯಾನ್ಸ್ ಡ್ಯಾನ್ಸ್ ಸೀನಿಯರ್ ಗ್ರೂಪ್ಗೆ ಪ್ರವೇಶ ದರ.500ರೂ, ಗೆಲುವು ಪಡೆದವರಿಗೆ, ಪ್ರಥಮ ಬಹುಮಾನ 30ಸಾವಿರ, ದ್ವಿತೀಯ ಬಹುಮಾನ15ಸಾವಿರ, ತೃತಿಯ ಬಹುಮಾನ 7ಸಾವಿರ, 
ಜ್ಯೂನಿಯರ್ ಗ್ರೂಪ್ ಪ್ರವೇಶ ದರ 300ರೂ, ಪ್ರಥಮ ಬಹುಮಾನ 10ಸಾವಿರ ರೂ, ದ್ವಿತೀಯ ಬಹುಮಾನ 5ಸಾವಿರ, ತೃತಿಯ ಬಹುಮಾನ 3ಸಾವಿರ, ಜ್ಯೂನಿಯ್ ಸಿಂಗಲ್ ಪ್ರವೇಶ ದರ 100ರೂ ಪ್ರಥಮ ಬಹುಮಾನ 1500ರೂ, ದ್ವಿತೀಯ 1ಸಾವಿರ, ತೃತಿಯ 750, ಜ್ಯೂನಿಯರ್ ಕಪಲ್ ಪ್ರವೇಶ ದರ 150ರೂ  ಪ್ರಥಮ ಬಹುಮಾನ 2ಸಾವಿರ, ದ್ವಿತೀಯ 1ಸಾವಿರ, ತೃತಿಯ 750, ಸೀನಿಯರ್ ಕಪಲ್ ಪ್ರವೇಶ ದರ ರೂ 200, ಪ್ರಥಮ ಬಹುಮಾನ 3ಸಾವಿರ, ದ್ವಿತೀಯ 2ಸಾವಿರ, ತೃತಿಯ 1ಸಾವಿರ ರೂ ಹಾಗೂ ಆಕರ್ಷಕ ಟ್ರೋಪಿ ನೀಡಲಾಗುವುದು. ಕಾರ್ಯಕ್ರಮದ ನೇರ ಪ್ರಸಾರ ಅಮೋಘ ಚಾನಲ್ನಲ್ಲಿ ಪ್ರಸಾರಗೊಳ್ಳುವುದು ಹೆಚ್ಚಿನ ವಿವರಗಳಿಗಾಗಿ 9900399920, 9980163152 ನಂ.ಗೆ ಸಂಪಕರ್ಿಸಬಹುದು.
ನವದಂಪತಿಗಳ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ 20ನೇ ವರ್ಷದ ರಾಜ್ಯ ಮಟ್ಟದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಹಾಗೂ 22ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನ ಹಮ್ಮಿಕೊಂಡಿದೆ.
20ರ ಶನಿವಾರ ಮಧ್ಯಾಹ್ನ 3ಕ್ಕೆ ಪುರಸಭಾ ಕಾಯರ್ಾಲಯದ ಮುಂಭಾಗ ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಇದೆ.
21ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನು 21ರ ಭಾನುವಾರ ಮಧ್ಯಾಹ್ನ 3ಕ್ಕೆ ಕೋಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು, ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದೇ ಸಂಜೆ 8ಕ್ಕೆ ನವದಂಪತಿಗಳ ಹಾಗೂ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಬಹುಮಾನ ವಿತರಣೆ ಮಾಡಲಿದ್ದು, ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ ಅಮೋಘ ಕೇಬಲ್ ನೆಟ್ವಕರ್್ನಲ್ಲಿ ಪ್ರಸಾರಗೊಳ್ಳಲಿದೆ.
ಕುಸ್ತಿ ಸ್ಪಧರ್ೆ: 21ರ ಭಾನುವಾರ ಪಟ್ಟಣದ ವ್ಯಾಯಾಮ ಶಾಲೆಗಳು ತಾಲೂಕು ಕ್ರೀಡಾಂಗಣದಲ್ಲಿ ಕುಸ್ತಿ ಸ್ಪಧರ್ೆಯನ್ನು ಏರ್ಪಡಿಸಿದೆ, ಸಂಜೆ ಮಿತ್ರಕಲಾ ಸಂಘದ ವತಿಯಿಂದ  13ನೇ ವರ್ಷದ ಸಂಪೂರ್ಣ ರಾಮಾಯಣ ನಾಟಕವನ್ನು ಹಳೆಯೂರು ಶ್ರೀ ಆಂಜನೇಯಸ್ವಾಮಿ ಗುಡಿ ಬೀದಿ(ಹೂವಾಡಿಗರ ಬೀದಿ)ಯಲ್ಲಿ ನಾಟಕ ನಡೆಯಲಿದೆ.

  1. ಚುನಾವಣೆಯಲ್ಲಿ ಸ್ಪಧರ್ಿಸಿ ಲೆಕ್ಕ ಕೊಡದ ಅಬ್ಯಾಥರ್ಿಗಳ ಹೆಸರು ಪ್ರಕಟ.

                 ಚಿಕ್ಕನಾಯಕನಹಳ್ಳಿ,ಜು.17 : ಕಳೆದ ವಿಧಾನಸಭೆಯಲ್ಲಿ ಜೆಡಿಯುವಿನಿಂದ ಸ್ಪಧರ್ಿಸಿದ್ದ ಪ್ರಕಾಶ್ ಹಾಗೂ ಪುರಸಭೆ ಚುನಾವಣೆಯಲ್ಲಿ ಸ್ಪಧರ್ಿಸಿದ್ದ 20ನೇ ವಾಡರ್್ನ ಶಕುಂತಲಮ್ಮ, 4ನೇ ವಾಡರ್್ನ ಶೈಲಜ, 14ನೇ ವಾಡರ್್ನಿಂದ ಬಾಬುಸಾಹೇಬ್ರವರು ಇದುವರೆವಿಗೂ ತಮ್ಮ ಚುನಾವಣಾ ವೆಚ್ಚದ ಲೆಕ್ಕಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿರುವುದಿಲ್ಲ, ಇವರು ತಮ್ಮ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ನೀಡದಿದ್ದರೆ ಮುಂದಿನ ಚುನಾವಣೆಗೆ ಸ್ಪಧರ್ಿಸಲು ಅವಕಾಶವಿರುವುದಿಲ್ಲ ಎಂದು ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದ ಒಂದು ತಿಂಗಳ ನಂತರ ಎಲ್ಲಾ ಅಭ್ಯಥರ್ಿಗಳು ತಮ್ಮ ಚುನಾವಣಾ ವೆಚ್ಚದ ಮಾಹಿತಿ ನೀಡಬೇಕು, ತಾಲ್ಲೂಕಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪಧರ್ಿಸಿದ್ದ 11ಅಭ್ಯಥರ್ಿಗಳ ಪೈಕಿ ಪ್ರಕಾಶ್ರವರು ಹಾಗೂ ಪುರಸಭೆಯ 72 ಅಭ್ಯಥರ್ಿಗಳ ಪೈಕಿ ಶಕುಂತಲಮ್ಮ, ಶೈಲಜ, ಬಾಬುಸಾಹೇಬ್ರವರಿಗೆ ಈಗಾಗಲೇ ಒಂದು ಬಾರಿ ರಿಜಿಸ್ಟಾರ್ ನೋಟಿಸ್ ಹಾಗೂ ಮೊದ್ದಾಂ ನೋಟೀಸ್ ನೀಡಿದ್ದರೂ ಇದುವರೆವಿಗೂ ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ ಈ ಬಗ್ಗೆ ಚುನಾವಣಾ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಭಾರತ ಚುನಾವಣಾ ಆಯೋಗದ ಪ್ರಕಾರ 300ಕ್ಕೂ ಹೆಚ್ಚು ಜನರಿದ್ದು ಮತಗಟ್ಟೆಯಿಂದ ಅವರು 2.ಕಿ.ಮೀಯಿಂದ ದೂರವಿದ್ದರೆ ಆ ಪ್ರದೇಶದಲ್ಲಿ ಮತಗಟ್ಟೆ ಆರಂಭಿಸುವುದಾಗಿ ಸೂಚನೆಯಿದೆ. ತಾಲ್ಲೂಕಿನಲ್ಲಿ ಅಂತಹ ಪ್ರದೇಶ ಯಾವುದೂ ಇಲ್ಲವೆಂದು ತಿಳಿಸಿದರು. ತಾಲ್ಲೂಕಿನಲ್ಲಿ ತೆರವಾಗಿರುವ ತೀರ್ಥಪುರ, ದೊಡ್ಡ ಎಣ್ಣೆಗೆರೆ, ಕುಪ್ಪೂರು, ದಸೂಡಿ, ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಆಗಸ್ಟ್ 4ರಂದು ಚುನಾವಣೆ ನಡೆಯಲಿದೆ. ಆಗಸ್ಟ್ 7ರಂದು ಬುಧವಾರ 8ಕ್ಕೆ ಮತ ಎಣಿಕೆ ನಡೆಯಲಿದೆ.
ಈ ಸಂದರ್ಭದಲ್ಲಿ ಚುನಾವಣಾ ಶಿರಸ್ತಾರ್ ಎಲ್.ಎಸ್.ಶಿವಶಂಕರ್  ಉಪಸ್ಥಿತರಿದ್ದರು.



Monday, July 15, 2013

 ಹಾಸ್ಯದೊಂದಿಗೆ ಜೀವನ ದರ್ಶನದ ಮಾಡಿಸುವ ತಾಕತ್ತು ತೇಜಸ್ವಿ ಬರಹಗಳಲ್ಲಿದೆ: 
  • ಈ ಧಾಟಿಯ ಬರಹ ವಿಶ್ವದಲ್ಲಿ ಮೂವರಿಗೆ ಮಾತ್ರ ಧಕ್ಕಿದೆ, ಅದರಲ್ಲಿ ತೇಜಸ್ವಿ ಒಬ್ಬರು.
  • ತೇಜಸ್ವಿಯವರ 'ಕಾಡು ಮತ್ತು ಕ್ರೌರ್ಯ' ಪ್ರಿಂಟ್ಗೆ ಸಿದ್ದವಾಗಿರುವ ಕೃತಿ
  • ಮಾನಸ ಗಂಗೋತ್ರಿ ಆವರಣ ಸ್ಮಶಾನವಾಗಬಾರದೆಂದು ಅಣ್ಣನ ಕಳೆಬರವನ್ನು  ಕುಪ್ಪಳಿಗೆ ತಂದ ಪೂಚಂತೇ.

ಚಿಕ್ಕನಾಯಕನಹಳ್ಳಿ,ಜು.15 : ಪೂಚಂತೇಯವರು ತಮ್ಮ ಬರವಣಿಗೆಯಲ್ಲಿ ಹಾಸ್ಯದೊಂದಿಗೆ ಜೀವನ  ದುಃಖವನ್ನು ಬಿಂಬಿಸುತ್ತಿದ್ದ ರೀತಿಯ ಮನೋಜ್ಞವಾಗಿದೆ ಇಂತಹ  ಬರವಣಿಗೆ ವಿಶ್ವದ ಮೂವರು ಉತ್ತಮ ಬರಹಗಾರರಲ್ಲಿ ಪೂರ್ಣಚಂದ್ರ  ತೇಜಸ್ವಿಯವರು ಒಬ್ಬರು ಎಂದು ಅಂತರ ರಾಷ್ಟ್ರೀಯ ಕಲಾವಿದ ಡಾ.ಕೆ.ಟಿ.ಶಿವಪ್ರಸಾದ್ ತಿಳಿಸಿದರು.
ಪಟ್ಟಣದ ನವೋದಯ ಕಾಲೇಜಿನ ಆವರಣದಲ್ಲಿ ನಡೆದ ಯುಜಿಸಿ ಪ್ರಾಯೋಜಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದ ಆಶಯ ಭಾಷಣದಲ್ಲಿ ಭಾಗವಹಿಸಿ ಮಾತನಾಡಿದರು. ಇಂತಹ ಬರಹದ ಧಾಟಿ ವಿಶ್ವದ ಮೂವರು ಉತ್ತಮ ಬರಹಗಾರರಾದ ಬೋರೆಸ್, ಮಾಕರ್್ವೇಸ್, ತೇಜಸ್ವಿಯವರಿಗೆ ಧಕ್ಕಿತ್ತು ಎಂದ ಅವರು, ಕಲಾ ಮೀಮಾಂಸೆಯೊಂದಿಗೆ ಬರವಣಿಗೆ ಆರಂಭಿಸಿದ ಅವರು. ಪರಿಸರದ ಪೋಟೋಗ್ರಾಪ್ಗೆ ಹೆಚ್ಚು ಒತ್ತು ನೀಡಿದವರು, ತಮ್ಮ ಪರಿಸರದ ಜೊತೆಗೆ ವೈಜ್ಞಾನಿಕ, ವೈಚಾರಿಕ ಜ್ಞಾನದಲ್ಲೂ ತಮ್ಮನ್ನು ತಾವು ಅನ್ವೇಷಿಸಿಕೊಳ್ಳುತ್ತಾ ತಾನು ಕಂಡು ಕೊಂಡ ಸತ್ಯಗಳಿಗೆ ಅಕ್ಷರದ ರೂಪವನ್ನು ಕೊಟ್ಟವರು ಎಂದರು. 
ತೇಜಸ್ವಿಯವರು ಬರೆಯುತ್ತಿದ್ದ ಪುಸ್ತಕಗಳಲ್ಲಿ ಆರಂಭ ಯಾವುದು, ಕೊನೆ ಯಾವುದು ಎಂಬುದೇ ತಿಳಿಯುತ್ತಿರಲಿಲ್ಲ ಆದರೂ ಅವರ ಪುಸ್ತಕಗಳಲ್ಲಿ ಯುವ ಪೀಳಿಗೆ ಅರಿಯಬೇಕಿರುವ ಅಂಶ ಹೆಚ್ಚಿದೆ. ತೇಜಸ್ವಿಯವರ ಬರಹಗಳು ಐ.ಟಿ.ಬಿ.ಟಿಯಿಂದ ಹಿಡಿದು ಇಂದಿನ ಯುವಕರವರೆಗೆ ಎಲ್ಲರೂ ಸುಲಭವಾಗಿ ಓದುವಂತೆ ಮಾಡುತ್ತಿದ್ದ ಲೇಖಕರಾಗಿದ್ದ ಅವರು, ತನ್ನ ಕಥೆಗಳಿಗೆ  ಪತ್ರಿಕೆಯ ವರದಿಗಾರಿಕೆಯ ತಂತ್ರದ ಟೆಚ್ ನೀಡುವ ಮೂಲಕ ಬರವಣಿಗೆಗೆ ಹೊಸ ರೂಪವನ್ನು ಕೊಡಲು ಪ್ರಯತ್ನಿಸುತ್ತಿದ್ದರು ಅದು  ಅವರ ಬರೆದ ಅದರೆ ಇನ್ನೂ ಪ್ರಿಂಟ್ ಆಗಿಲ್ಲದ  ಕೃತಿಯಾದ  ಕಾಡು ಮತ್ತು ಕ್ರೌರ್ಯ ದಲ್ಲಿ ಕಂಡು ಬರುತ್ತದೆ,  ಈ ಪುಸ್ತಕವನ್ನು  ಶಿಷ್ಯಂದಿರು ಪ್ರಿಂಟ್ ಮಾಡಿಸಲು ತಯಾರಿ ನಡೆಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಹಾಗೂ ನವೋದಯ ವಿದ್ಯಾ ಸಂಸ್ಥೆ ಅಧ್ಯಕ್ಷ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಒಂದು ಕಾಲದಲ್ಲಿ ನಾನು ಕೂಡ ತೇಜಸ್ವಿಯವರ ಅಭಿಮಾನಿ, ತೇಜಸ್ವಿಯವರು ಕೃಷಿಗಿಂತ ಹೆಚ್ಚಾಗಿ ಪ್ರಕೃತಿ ಇಷ್ಟಪಡುತ್ತಿದ್ದ ಒಬ್ಬ ಶಿಸ್ತಿನ ಮನುಷ್ಯ, ನೇರ ಮಾತುಗಾರಿಕೆ ಹೊಂದಿದ್ದ ಅವರು ಪಟ್ಟಣದಲ್ಲಿ ಬೆಳೆದು ಹಳ್ಳಿಗಾಡಿನ ಜೀವನವನ್ನು ಅರಸಿ ಬಂದವರು. ಅವರು ಕೃಷಿಗಿಂತ ಹೆಚ್ಚಾಗಿ ಪ್ರಕೃತಿ ಅನ್ವೇಷಣಾಕಾರರಾಗಿ ಹೆಸರು ಪಡೆದವರು, ತೇಜಸ್ವಿ ತಮ್ಮ ತಂದೆ ಕುವೆಂಪು ರವರ ಕಳೆಬರವನ್ನು ಮೈಸೂರನ ಗಂಗೋತ್ರಿಯಲ್ಲಿ ಸಮಾಧಿ ಮಾಡಲು ಒಪ್ಪಲಿಲ್ಲ ಕಾರಣ ಅಲ್ಲಿದ್ದ ಒಂದು ವರ್ಗ ಕನ್ನಡ ಅಧ್ಯಯನ ಕೇಂದ್ರದ ಆವರಣವನ್ನು ಸ್ಮಶಾನ ಮಾಡಲು ಹೊರಟ್ಟಿತ್ತು ಅದನ್ನು ತಪ್ಪಿಸುವ ಸಲುವಾಗಿ ಅಣ್ಣನ ಸಮಾಧಿಯನ್ನು ಕುಪ್ಪಳಿ ಮಾಡಲಾಯಿತು ಎಂಬ ಸತ್ಯವನ್ನು ತೇಜಸ್ವಿ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಜೆ.ಸಿ.ಎಂ. ತಿಳಿಸಿದರು. 
ತೇಜಸ್ವಿಯವರು  ಏಕೆ ಪುಸ್ತಕ ಬರೆಯುತ್ತಾರೆ ಎಂಬ  ಪ್ರಶ್ನೆಗೆ ಅವರ ಕೊಟ್ಟ ಉತ್ತರವೆಂದರೆ  ಮುಂದಿನ ಪೀಳಿಗೆ ಹುಡುಕಾಟದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ಪುಸ್ತಕಗಳನ್ನು ಬರೆಯುತ್ತಿರುವುದಾಗಿ ತಿಳಿಸಿದ್ದಾರು  ಎಂದರಲ್ಲದೆ, ಅರಣ್ಯ ಸರಹದ್ದಿನ ಕಡೆ  ಆಗುತ್ತಿದ್ದ ವಿಚಾರಗಳನ್ನು ತೇಜಸ್ವಿಯವರಿಗಿಂತ ಉತ್ತಮವಾಗಿ ಬರೆಯುತ್ತಿದ್ದ ಬರಹಗಾರರು ಇರಲಿಲ್ಲ ಅಂತಹ ಅದ್ವಿತೀಯತೆ ಅವರಲ್ಲಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನವೋದಯ ವಿದ್ಯಾ ಸಂಸ್ಥೆ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಮಾತನಾಡಿ ರನ್ನ, ಜನ್ನ, ಪೊನ್ನ, ರಾಘವಾಂಕರಂತಹ ಕವಿಗಳು ಬಹಳ ಹಿಂದಿನ ತಲೆಮಾರಿನವರು, ಅ.ನ.ಕೃ, ಕುವೆಂಪು, ದ.ರಾ.ಬೇಂದ್ರೆರವರು 1960ರ ತಲೆಮಾರಿನವರು, ಈಗಿನ ತಲೆಮಾರಿನಗೆ ಯು.ಆರ್.ಅನಂತಮೂತರ್ಿ, ಚಂದ್ರಶೇಖರ ಕಂಬಾರ, ಪೂರ್ಣಚಂದ್ರ ತೇಜಸ್ವಿ ಹಾಗೂ ಇತರ ಸಾಹಿತ್ಯಾಸಕ್ತರು ಈಗಿನ ತಲೆಮಾರಿಗೆ ಸರಿ ಹೊಂದಿದವರು. ತೇಜಸ್ವಿಯವರು 1930ರಲ್ಲಿ ಕುವೆಂಪುರವರ ಮೊದಲನೆ ಮಗನಾಗಿ ಜನಿಸಿದರೂ ಎಲ್ಲೂ ತಾನು ಕುವೆಂಪುರವರ ಮಗ ಎಂದು ಹೇಳಿಕೊಳ್ಳದೇ ತೇಜಸ್ವಿಯಾಗಿಯೇ ಗುರುತಿಸಿಕೊಂಡವರು. ಕೃಷಿಕರಾಗಿ ಪ್ರಕೃತಿ ಸಂಪತ್ತನ್ನು ಪ್ರೀತಿಸುತ್ತಾ ತಮ್ಮ ಅಧ್ಯಯನ ಮಾಡಿಕೊಳ್ಳುತ್ತಿದ್ದರು. ತೇಜಸ್ವಿಯವರು ಪ್ರತಿಯೊಂದು ವಿಷಯವನ್ನು ಸ್ವಾಭಿಮಾನಿಯಾಗಿ ತೆಗೆದುಕೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ,  ನಿವೃತ್ತ ಪಾಂಶುಪಾಲ ಕೆ.ಸಿ.ಬಸಪ್ಪ, ಪ್ರಾಂಶುಪಾಲ ಪ್ರೊ.ಬಿ.ಎಸ್.ಬಸವಲಿಂಗಯ್ಯ, ಉಪಸ್ಥಿತರಿದ್ದರು. ಸಮಾರಂಭದಲ್ಲಿ ಲಾವಣ್ಯ ಪ್ರಾಥರ್ಿಸಿದರೆ, ತಯ್ಯೂಬ್ ನಿರೂಪಿಸಿ, ಉಪನ್ಯಾಸಕ ಸಿ.ರವಿಕುಮಾರ್ ವಂದಿಸಿದರು.

ಚಿ.ನಾ.ಹಳ್ಳಿ ರೊಟರಿ ಸೇವೆ ಶ್ಲಾಘನೀಯ: ಕವಿತಾ ಕೃಷ್ಣ
             

ಚಿಕ್ಕನಾಯಕನಹಳ್ಳಿ,ಜು.15 : ರೋಟರಿಯ ಸೇವೆ ಕಸದ ಪೊರಕೆಯಂತಿರಬೇಕು, ತನ್ನ ಸುತ್ತಮುತ್ತಲಿನ ಕೊಳೆಯನ್ನು ಶುಚಿಗೊಳಿಸಲು ಪೊರಕೆಯ ಪ್ರತಿ ಕಡ್ಡಿಯಂತೆ ರೋಟರಿಯನ್ಗಳು ಒಂದಾಗಿ ತಾಲ್ಲೂಕಿನ ಸಮಸ್ಯೆಗಳನ್ನು  ಖುಷಿಯಿಂದ ಸ್ವೀಕರಿಸಿ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಹೇಳಿದರು.
ಪಟ್ಟಣದ ಕಲ್ಪಕವೃಕ್ಷ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 2013-14ನೇ ಸಾಲಿನ ರೋಟರಿ ನೂತನ ಪದಾಧಿಕಾರಿಗಳ 38ನೇ ಪದವಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರೋಟರಿಯ ಸೇವೆಯು ಎಲ್ಲಾ ಕಡೆಯುಲ್ಲೂ ಉತ್ತಮವಾಗಿದೆ, ಸಬಲರು ರೋಟರಿಯೊಂದಿಗೆ ತೊಡಗಿಸಿಕೊಂಡು ಆಥರ್ಿಕವಾಗಿ ಹಿಂದುಳಿದಿರುವ ಹಾಗೂ ಸಮಾಜದ ಸಮಸ್ಯೆಗಳನ್ನು ನಿವಾರಿಸಿ ಜನರ ಜೀವನವನ್ನು ಉತ್ತಮಗೊಳಿಸುವಂತೆ ರೋಟರಿಯನ್ಗಳಿಗೆ ಕರೆ ನೀಡಿದರು. 
 ಚಿಕ್ಕನಾಯಕನಹಳ್ಳಿಯಲ್ಲಿ ರೋಟರಿ ಸಂಸ್ಥೆ ಹಾಗೂ ಸೃಜನ ಸಂಘಟನೆ ಸಮಾಜದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರಲ್ಲದೆ, ಸೇವೆಗಾಗಿ ಹಲವರು ದುಡಿದಿದ್ದಾರೆ ಅದರಮತೆ  ಸ್ವಾಮಿ ವಿವೇಕಾನಂದರು ಚಿಕಾಗೋ ಸೇರಿದಂತೆ ಹಲವು ದೇಶಗಳಲ್ಲಿ ನಡೆಸಿದ ಉಪನ್ಯಾಸ ಕಾರ್ಯಕ್ರಮಗಳಲ್ಲೂ ಸೇವೆಯ ಮಹತ್ವ ತಿಳಿ ಹೇಳಿದ್ದರು, ಮಾತನ್ನು ಮುತ್ತಾಗಿ ಬೆಳೆಸುತ್ತಿದ್ದ ವಿವೇಕಾನಂದರಂತೆ ರೋಟರಿಯಲ್ಲಿನ ಸದಸ್ಯರು ನಡೆದರೆ ರೋಟರಿ ಸಂಸ್ಥೆ  ಉತ್ತಮ ರೀತಿಯಲ್ಲಿ ಅಭಿವೃದ್ದಿಯಾಗುತ್ತದೆ ಎಂದರಲ್ಲದೆ ಸಂಸ್ಥೆಯ ಸೇವಾ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.
ರೋಟರಿ ಸಂಸ್ಥೆಯ ಜಿಲ್ಲಾ ನಾಮಿನಿ ಗವರ್ನರ್ ರೊ.ಕೆ.ಪಿ.ನಾಗೇಶ್ ಮಾತನಾಡಿ, ರೋಟರಿ ಸಂಸ್ಥೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಸಂಸ್ಥೆ, ವಿವಿಧ ಸಮಾಜ ಸೇವೆಗಳ ಜೊತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ವಿವಿಧ ಆರೋಗ್ಯ ತಪಾಸಣಾ ಶಿಬಿರ, ಕುಡಿಯುವ ನೀರು ಪೂರೈಕೆ, ವಿದ್ಯಾಥರ್ಿಗಳಿಗೆ ಉತ್ತೇಜನ ನೀಡುವಂತಹ ಸನ್ಮಾನ ಕಾರ್ಯಕ್ರಮ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ, ಅಲ್ಲದೆ ರೋಟರಿಯ ಸದಸ್ಯತ್ವ ಪಡೆಯಲು ಹಲವರು ಮುಂದೆ ಬಂದಿದ್ದಾರೆ ಎಂದರಲ್ಲದೆ ರೋಟರಿಯಲ್ಲಿ ಯಾವ ಕುಲವೂ ಇಲ್ಲ ಎಲ್ಲಾ ಕುಲದ ವ್ಯಕ್ತಿಗಳು ಇಲ್ಲಿ ಸಮಾನರು ಎಂದರು. 
ಸಾಹಿತಿ ಸಿ.ಕೆ.ಪರುಶುರಾಮಯ್ಯ ಮಾತನಾಡಿ, ಇತ್ತೀಚೆಗೆ ರೋಟರಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಹೆಚ್ಚು ಪ್ರಶಂಶನೀಯವಾಗಿವೆ,  ಸ್ವಯಂ ಸೇವೆಯ ಮನೋಭಾವದ ರೋಟರಿ ಸಂಸ್ಥೆಯಿಂದ ತಾಲ್ಲೂಕಿನ ಹಲವು ಸಮಸ್ಯೆಗಳು ನಿವಾರಣೆಯಾಗಲಿ ಎಂದು ಹಾರೈಸಿದರು.
  ನೂತನ ರೋಟರಿ ಅಧ್ಯಕ್ಷ ಸಿ.ಎಸ್.ಪ್ರದೀಪ್ಕುಮಾರ್ ಮಾತನಾಡಿ ಎಲ್ಲಾ ರೋಟರಿಯನ್ಗಳು ಸಹಕಾರ ನೀಡುವ ಮೂಲಕ ಕ್ಲಬ್ನ  ಶಕ್ತಿಯಾಗಿ, ಆ ಮೂಲಕ ನಾವೆಲ್ಲರೂ ಸೇರಿ ರೋಟರಿ ಮೂಲಕ ಹಲವು ಸೇವೆಯನ್ನು ನಿರ್ವಹಿಸೋಣ ಎಂದರಲ್ಲದೆ ಸಂಸ್ಥೆಗೆ ನೂತನವಾಗಿ 13ಮಂದಿ ನೂತನವಾಗಿ ಸೇರ್ಪಡೆಯಾಗಿದ್ದಾರೆ ಈ ಮೂಲಕ ರೋಟರಿ ಸಂಸ್ಥೆ 38 ಸದಸ್ಯರಿಂದ 50ರ ಗಡಿ ದಾಟಿ 51ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು. 
ಜಿಲ್ಲಾ ರೋಟರಿಯನ್ ನವೀನ್ ಮಾತನಾಡಿ ರೋಟರಿ ಹಿಂದೆ ನಡೆಯುತ್ತಿದ್ದಕ್ಕಿಂತ ಈಗನ ದಾರಿ ಬದಲಾಗಿ ಎಲ್ಲಡೆಯಲ್ಲೂ ಉತ್ತಮ ಸೇವೆ ನೀಡುತ್ತಿದೆ, ರೋಟರಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಇತರರಿಗೆ ಸಹಾಯ ಮಾಡುತ್ತಿದ್ದೇವೆ. ಚಿ.ನಾ.ಹಳ್ಳಿ ರೋಟರಿ ಸಂಸ್ಥೆ ತಾಲ್ಲೂಕಿನಲ್ಲಿ ಉತ್ತಮ ಸೇವೆ ಮಾಡಿದ್ದು ಬಡವರಿಗೆ ಸಹಾಯ ಮಾಡುತ್ತಿದೆ, ಅಲ್ಲದೆ ಇಲ್ಲಿನ ಇನ್ನರ್ವೀಲ್ ಕ್ಲಬ್ ಕೂಡ ಬಲಿಷ್ಟವಾಗಿದ್ದು ರೋಟರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ರೋಟರಿಯ ನಾಯಕ ಪತ್ರಿಕೆ ಹಾಗೂ ಎಂ.ಹರೀಶ್ ರೂಪಿಸಿರುವ ರೋಟರಿಯ ಕ್ಲಬ್ ನೂತನ ವೆಬ್ಸೈಟ್ ಲೋಕಾರ್ಪಣೆ ಮಾಡಲಾಯಿತು.. ಸಮಾರಂಭದಲ್ಲಿ ಕನ್ನಡದ ಕೋಟ್ಯಾಧಿಪತಿ ಸ್ಪಧರ್ೆಯಲ್ಲಿ ಭಾಗವಹಿಸಿದ್ದ  ಸಿ.ಎಸ್.ಬೀರಪ್ಪ, ಪ್ರತಿಭಾನ್ವಿತ ಕ್ರೀಡಾಪಟು ಅನುಷಾ ಎಸ್.ಶೆಟ್ಟಿ, ಪ್ರತಿಭಾನ್ವಿತ ವಿದ್ಯಾಥರ್ಿಗಳಾದ ಟಿ.ಎನ್.ಪಲ್ಲವಿ, ಆರ್.ಮಧುಸೂಧನ್ರವರನ್ನು ಸನ್ಮಾನಿಸಲಾಯಿತು. 
2013-14ನೇ ಸಾಲಿಗೆ ನೂತನವಾಗಿ ರೋಟರಿ ಅಧ್ಯಕ್ಷರಾಗಿ ಸಿ.ಎಸ್.ಪ್ರದೀಪ್ಕುಮಾರ್, ಕಾರ್ಯದಶರ್ಿಯಾಗಿ ಡಾ.ಜಿ.ಪ್ರಶಾಂತ್ಕುಮಾರ್ಶೆಟ್ಟಿಕ ಪದವಿ ಸ್ವೀಕರಿಸಿದರು.
ಸಮಾರಂಭದಲ್ಲಿ  ಕೆ.ಸಿ.ಡಿ.ಎ.ನಿದರ್ೇಶಕ ದಿಲೀಪ್ಕುಮಾರ್ ಷಾ, ಅಸಿಸ್ಟೆಂಟ್ ಗವರ್ನರ್ ರೊ.ಜಯರಾಂ, ಎಚ್.ಆರ್.ಶ್ರೀನಾಥ್ಬಾಬು, 2013-13ನೇ ಸಾಲಿನ ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಎಂ.ದೇವರಾಜು, ರೋಟರಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಮ್.ಸುರೇಶ್, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ತೇಜಾವತಿ ನರೇಂದ್ರಬಾಬು, ಜಿಲ್ಲಾ ಗವರ್ನರ್ ಬಿಳಿಗೆರೆ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Friday, July 12, 2013

ಗ್ರಾಮೀಣ ಭಾಗದ ಸಕರ್ಾರಿ ಶಾಲೆಗಳು ಗುಣಾತ್ಮಕವಾಗಿವೆ ಮುಂದಿವೆ.
ಚಿಕ್ಕನಾಯಕನಹಳ್ಳಿ,ಜು.12 : ಸಕರ್ಾರಿ ಶಾಲೆಗಳಲ್ಲೂ ಶಿಕ್ಷಣ, ಆರೋಗ್ಯ, ಕ್ರೀಡೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿ, ಶಾಲೆಗಳನ್ನು ವಿದ್ಯಾಥರ್ಿ ಕೇಂದ್ರಿತವಾಗಿಸುತ್ತಿರುವ ಶಿಕ್ಷಣ ಇಲಾಖೆ  ಸಕರ್ಾರಿ ಶಾಲೆಗಳು ಕಾನ್ವೆಂಟ್ ಶಾಲೆಗಳಿಗಿಂತ ಹೆಚ್ಚು ಗುಣಾತ್ಮಕಗೊಳ್ಳುತ್ತಿವೆ ಎಂಬುದನ್ನು ಇತ್ತೀಚಿನ ಪಬ್ಲಿಕ್ ಪರೀಕ್ಷೆಗಳು ನಿರೂಪಿಸುತ್ತಿವೆ ಎಂದು ಲೇಖಕ ಹಾಗೂ ಪತ್ರಕರ್ತ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದರು.
ಪಟ್ಟಣದ ಶ್ರೀ ರೇವಣ ಸಿದ್ದೇಶ್ವರಸ್ವಾಮಿ ಮಠದ ಸಕರ್ಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸ್ಪಂದನ ಜನಸೇವಾ ಪ್ರಗತಿಪರ ಒಕ್ಕೂಟದ ವತಿಯಿಂದ ವಿದ್ಯಾಥರ್ಿಗಳಿಗೆ ಉಚಿತ ನೋಟ್ಪುಸ್ತಕ ವಿತರಣೆಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ವಿದ್ಯಾಥರ್ಿಗಳ ಅಭ್ಯುದಯಕ್ಕಾಗಿ ಆರ್.ಟಿ.ಇ,  ಸಿ.ಸಿ.ಇ ಕಾಯ್ದೆ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ, ಸಕರ್ಾರಿ ಶಾಲೆಗಳ ಬಡ ವಿದ್ಯಾಥರ್ಿಗಳ ಆಥರ್ಿಕ ನೆರವಿಗಾಗಿ ಹಲವು ಸಂಘ ಸಂಸ್ಥೆಗಳು ಉಚಿತ ನೋಟ್ಬುಕ್, ತಟ್ಟೆಲೋಟ, ವಿದ್ಯಾಥರ್ಿ ವೇತನ ಸೇರಿದಂತೆ ಹಲವು ಸೌಲಭ್ಯ ಒದಗಿಸುತ್ತಿದ್ದು ಇದರಿಂದ ವಿದ್ಯಾಥರ್ಿಗಳು ತಮ್ಮ ಹೆಚ್ಚಿನ ಸಮಯವನ್ನು ಶಿಕ್ಷಣದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು.
ಸಕರ್ಾರಿ ಶಾಲಾ ವಿದ್ಯಾಥರ್ಿಗಳಿಗಾಗಿ ಬಿಸಿಯೂಟ, ಉಚಿತ ಸೈಕಲ್ ಹಾಗೂ ನೂತನವಾಗಿ ವಿದ್ಯಾಥರ್ಿಗಳಿಗೆ ಹಾಲು ವಿತರಣೆ ಸೇರಿದಂತೆ ಬಡ ಮಕ್ಕಳಿಗೆ  ಶೂ ನೀಡುವ  ಯೋಜನೆಯ ಬಗ್ಗೆಯೂ ಚಿಂತನೆ ನಡೆದಿದೆ ಎಂದರು. 
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸಕರ್ಾರಿ ಶಾಲೆಗಳಲ್ಲಿ ಓದಿದಂತಹ ವಿದ್ಯಾಥರ್ಿಗಳೇ  ಇಂಜನಿಯರಿಂಗ್, ವೈದ್ಯಕೀಯ ಪದವೀಧರರಾಗಿದ್ದಾರೆ, ಈ   ರೇವಣ ಸಿದ್ದೇಶ್ವರ ಶಾಲೆಯಲ್ಲಿ ಓದಿದಂತಹ ವಿದ್ಯಾಥರ್ಿಗಳು ಹೊರದೇಶದಲ್ಲೂ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ ಎಂದರು. ಈ ಶಾಲೆಯು ಮೊದಲು ಬಾಡಿಗೆ ಕಟ್ಟಡದಲ್ಲಿ ವಿದ್ಯಾಥರ್ಿಗಳಿಗೆ ಶಿಕ್ಷಣ ನೀಡುತ್ತಿತ್ತು, ಈಗ ಸಿ.ಕೆ.ಪರುಶುರಾಮಯ್ಯನವರಿಂದ ಕೊಡುಗೆಯಾಗಿ ಬಂದಂತಹ ಜಮೀನಿನಲ್ಲಿ ಕಟ್ಟಡವಾಗಿದೆ ಎಂದರಲ್ಲದೆ ಬಾಡಿಗೆಯಲ್ಲಿದ್ದಾಗಿನ ಹಣವನ್ನು  ಶಿಕ್ಷಣ ಇಲಾಖೆ ಇನ್ನೂ ನೀಡಿಲ್ಲ ಎಂದರು. ಈ ಬಗ್ಗೆ ಶೀಘ್ರ ತೀಮರ್ಾನವಾಗದಿದ್ದರೆ ಹೋರಾಟ ಮಾಡುವುದಾಗಿ ತಿಳಿಸಿದರು. 
ಸ್ಪಂದನ ಪ್ರಗತಿಪರ ಒಕ್ಕೂಟದ ಕಾಯರ್ಾಧ್ಯಕ್ಷ ಸಿ.ಬಿ.ಲೋಕೇಶ್ ಮಾತನಾಡಿ ಸ್ಪಂದನ ಒಕ್ಕೂಟ ಆರಂಭವಾಗಿ 2ವರ್ಷವಾಗಿದೆ, ಆಗಿನಿಂದಲೂ ಒಕ್ಕೂಟ ಹಲವಾರು ಹೋರಾಟ, ಜನರಿಗೆ ಸ್ಪಂದನೆ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಗಿದೆ ಎಂದರಲ್ಲದೆ ಸ್ಪಂದನ ಒಕ್ಕೂಟ ಬಡವಿದ್ಯಾಥರ್ಿಗಳನ್ನು ಹುಡುಕಿ ನೋಟ್ಬುಕ್ ನೀಡುತ್ತಿದ್ದು ಇದರ ಸದುಪಯೋಗವಾಗಬೇಕೆಂದರು.
ಸಿ.ಆರ್.ಪಿ. ದುರ್ಗಯ್ಯ ಮಾತನಾಡಿ ನಾವು ವಿದ್ಯಾಥರ್ಿಗಳಾಗಿದ್ದ ಸಂದರ್ಭದಲ್ಲಿ ನಮಗೆ ಯಾವುದೇ ರೀತಿಯ ಸೌಕರ್ಯ ದೊರಕುತ್ತಿರಲಿಲ್ಲ ಆದರೆ ಈಗಿನ ವಿದ್ಯಾಥರ್ಿಗಳಿಗೆ ಸಕರ್ಾರ ಹಾಗೂ ಸಂಘ ಸಂಸ್ಥೆಗಳು ಅವರ ಆಥರ್ಿಕ ಪರಿಸ್ಥಿತಿ ಬದಲಾಯಿಸಲು ಮಾಡುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ  ಸ್ಪಂದನ ಒಕ್ಕೂಟದ ತ್ಯಾಗರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು ಪ್ರಾಥರ್ಿಸಿದರೆ, ಶಾಲೆಯ ಮು.ಶಿ. ತಿಲೋತ್ತಮೆ ಸ್ವಾಗತಿಸಿ ಬಸವರಾಜು ನಿರೂಪಿಸಿದರೆ ಚಂದ್ರಮತಿ ವಂದಿಸಿದರು.

ಜು.14ರಂದು ರೋಟರಿ ಪದವಿ ಸ್ವೀಕಾರ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.12  ;  2013-14ನೇ ರೋಟರಿ ಇಂಟರಾಕ್ಟ್-ಕಿಂಡರಾಕ್ಟರ್ ನೂತನ ಪದಾಧಿಕಾರಿಗಳ 38ನೇ ಪದವಿ ಸ್ವೀಕಾರ ಸಮಾರಂಭವನ್ನು ಇದೇ 14ರ ಭಾನುವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಹಮ್ಮಿಕೊಂಡಿದ್ದು ಕಲ್ಪತರು ಕಾಲೇಜು ಅತಿಥಿ ಉಪನ್ಯಾಸಕ ದಿಲೀಪ್ಕುಮಾರ್ ಷಾ ಉದ್ಘಾಟನೆ ನೆರವೇರಿಸಲಿದ್ದಾರೆ. ಡಿಸ್ಟ್ರಿಕ್ಟ್ 3190 ಗವರ್ನರ್ ನಾಮಿನಿ ರೊ.ಕೆ.ಪಿ.ನಾಗೇಶ್ ಪದವಿ ಪ್ರಧಾನ, ಹೊಸ ಸದಸ್ಯರ ಸೇರ್ಪಡೆ, ಸನ್ಮಾನ ಮಾಡಲಿದ್ದು ಅಸಿಸ್ಟೆಂಟ್ ಗವರ್ನರ್ ರೊ.ಜಯರಾಂ ಇಂಟರಾಕ್ಟ್ ಮತ್ತು ಕಿಂಡರಾಕ್ಟ್ ಪದವಿ ಪ್ರಧಾನ ಮಾಡಲಿದ್ದಾರೆ. ಬೆಂಗಳೂರು ರೋಟರಿ ಅಸಿಸ್ಟೆಂಟ್ ಗವರ್ನರ್ ರೊ.ಎಚ್.ಆರ್.ಶ್ರೀನಾಥ್ಬಾಬು ರೋಟರಿ ಪತ್ರಿಕೆ ನಾಯಕ ಮತ್ತು ನೂತನ ಕ್ಲಬ್ ವೆಬ್ಸೈಟ್ ಬಿಡುಗಡೆ ಮಾಡಲಿದ್ದಾರೆ. ಕವಿ-ಲೇಖಕ ವಿದ್ಯಾವಾಚಸ್ಪತಿ ಕವಿತಾಕೃಷ್ಣ ರೋಟರಿಯಲ್ಲಿ ತೊಡಗಿಸಿಕೊಳ್ಳಿ-ಜೀವನವನ್ನು ಉತ್ತಮಗೊಳಿಸಿ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದ್ಲಲಿ ಕನ್ನಡದ ಕೋಟ್ಯಾಧಿಪತಿ ಭಾಗವಹಿಸಿದ್ದ  ಸಿ.ಎಸ್.ಬೀರಪ್ಪ, ಪ್ರತಿಭಾನ್ವಿತ ಕ್ರೀಡಾಪಟು ಅನುಷಾ ಎಸ್.ಶೆಟ್ಟಿ, ಪ್ರತಿಭಾನ್ವಿತ ವಿದ್ಯಾಥರ್ಿ ಟಿ.ಎನ್.ಪಲ್ಲವಿ, ಆರ್.ಮಧುಸೂದನ್ರವರಿಗೆ ಸನ್ಮಾನಿಸಲಾಗುವುದು. 

ಜು.15ರಂದು ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ


ಚಿಕ್ಕನಾಯಕನಹಳ್ಳಿ,ಜು.12 ;ನವೋದಯ ಪ್ರಥಮ ದಜರ್ೆ ಕಾಲೇಜ್ನ ಕನ್ನಡ ವಿಭಾಗ ಹೊಸ ಪೀಳಿಗೆಗಾಗಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಎಂಬ ವಿಷಯವಾಗಿ  ರಾಜ್ಯ ಮಟ್ಟದ ವಿಚಾರ ಸಂಕಿರಣ ಇದೇ15ರ ಸೋಮಾವಾರ ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲ ಬಿ.ಎಸ್.ಬಸವಲಿಂಗಯ್ಯ ತಿಳಿಸಿದರು.
ಪಟ್ಟಣದ ಎನ್.ಎಫ್.ಜಿ.ಸಿ.ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನವೋದಯ ಕಾಲೇಜು ಯುಜಿಸಿ ಅನುದಾನಕ್ಕೆ ಒಳಪಟ್ಟು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಪಠ್ಯ ಚಟುವಟಿಕೆಗಳಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಇಂಬು ನೀಡುವಂತಹ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣಗಳ, ವಚನ ಕಮ್ಮಟ, ಪ್ರತಿಭೆಯ ಅನಾವರಣಕ್ಕಾಗಿ ಪೂರಕವಾದ ಚಟುವಟಿಕೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ, ನಮ್ಮ  ಸಂಸ್ಥೆ ಯುಜಿಸಿ ಪ್ರಾಯೋಜಿಕತ್ವದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದೆ. 15ರ ಸೋಮಾವರ ಬೆಳಗ್ಗೆ 10ಕ್ಕೆ ನಡೆಯುವ ವಿಚಾರ ಸಂಕಿರಣದ ಉದ್ಘಾಟನೆಯನ್ನು ನವೋದಯ ಸಂಸ್ಥೆಯ ಅಧ್ಯಕ್ಷರಾದ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಉದ್ಘಾಟನೆ ನೆರವೇರಿಸಲಿದ್ದು ಅಂತರ ರಾಷ್ಟ್ರೀಯ ಕಲಾವಿದ ಡಾ.ಕೆ.ಟಿ.ಶಿವಪ್ರಸಾದ್ ಆಶಯ ಭಾಷಣ ಮಾಡಲಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ ಅತಿಥಿಗಳಾಗಿ ಭಾಗವಹಿಸುವರು.
ವಿಚಾರ ಸಂಕಿರಣದಲ್ಲಿ ಬೆಳಗ್ಗೆ 11ಕ್ಕೆ ಮೊದಲ  ಗೋಷ್ಠಿ ನಡೆಯಲಿದ್ದು ಆಹಾರ ತಜ್ಞ ಮತ್ತು ಕೃಷಿ ಚಿಂತಕ ಡಾ.ಕೆ.ಸಿ.ರಘು, ಅನ್ನ ಮತ್ತು ಬೇಸಾಯ ಪೂರ್ಣಚಂದ್ರ ಪೂರ್ಣಚಂದ್ರ ತೇಜಸ್ವಿ ನಿಲುವುಗಳು ಎಂಬ ವಿಷಯವಾಗಿ ಮಾತನಾಡಿಲಿದ್ದಾರೆ,  ಲೇಖಕ ಮತ್ತು ಸಂಸ್ಕೃತಿ ಚಿಂತಕ ಡಾ.ಎಸ್.ನಟರಾಜ ಬೂದಾಳು ತೇಜಸ್ವಿ ಸಾಹಿತ್ಯದ ಮೀಮಾಂಸ ನಿಲುವುಗಳು ಎಂಬ ವಿಷಯವಾಗಿ ಹಾಗೂ ಲೇಖಕ ಡಾ.ಚಂದ್ರಶೇಖರ ನಂಗಲಿ ತೇಜಸ್ವಿ ನಿಸರ್ಗದ ಅನುಸಂಧಾನ ವಿಷಯದ ಬಗ್ಗೆ ಮಾತನಾಡಲಿದ್ದಾರೆ. 
ಎರಡನೇ ಗೋಷ್ಠಿಯಲ್ಲಿ ಕವಿಯಿತ್ರಿ ಮತ್ತು ವಿಮರ್ಶಕರಾದ ಡಾ.ತಾರಿಣಿ ಶುಭದಾಯಿನಿ ತೇಜಸ್ವಿ ಸಾಹಿತ್ಯ ವರ್ತಮಾನದ ಪ್ರಸ್ತುತತೆ ವಿಷಯದ ಬಗ್ಗೆ ಹಾಗೂ  ಲೇಖಕ ಮತ್ತು ವಿಮರ್ಶಕ ಡಾ.ಬಂಜಗೆರೆ ಜಯಪ್ರಕಾಶ್ ತೇಜಸ್ವಿ ಸಾಹಿತ್ಯದಲ್ಲಿ ವಿಜ್ಞಾನದ ಅನುಸಂಧಾನ ವಿಷಯದ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. 
ಗೋಷ್ಠಿ ಮಧ್ಯಾಹ್ನ 3ಕ್ಕೆ ಪ್ರತಿನಿಧಿಗಳಿಂದ ತೇಜಸ್ವಿಯವರ ಕಾದಂಬರಿಗಳು-ವರ್ತಮಾನದ ಅನುಸಂಧಾನ, ತೇಜಸ್ವಿಯವರ ವಿಜ್ಞಾನದ ಬರವಣಿಗೆಗಳು ಹೊಸ ದೃಷ್ಠಿಕೋನ. ತೇಜಸ್ವಿ ಸಣ್ಣ ಕತೆಗಳು-ಪ್ರಸ್ತುತ ಕನ್ನಡ ಸಂದರ್ಭ ವಿಷಯದ ಬಗ್ಗೆ ಪ್ರಬಂಧ ಮಂಡನೆ ಹಾಗೂ ಸಮಾರೋಪ ನಡೆಯಲಿದ್ದು ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ.ಜಿ.ಎಸ್.ರಮೇಶ್ ವಹಿಸಲಿದ್ದಾರೆ.
ವಿಚಾರ ಸಂಕಿರಣದ ಉಪಯೋಗವನ್ನು ಎಲ್ಲಾ ಕನ್ನಡ ಮನಸ್ಸುಗಳು ಬಳಸಿಕೊಳ್ಳುವಂತೆ ತಿಳಿಸಿದರಲ್ಲದೆ, ಭಾಗವಹಿಸುವ ಉಪನ್ಯಾಸಕರುಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕರಿಗೆ ಓ.ಓ.ಡಿ ಸೌಲಭ್ಯವಿದೆ ಎಂದು  ಪ್ರೊ.ಬಸವಲಿಂಗಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಿವಯೋಗಿಸ್ವಾಮಿ, ಸಿ.ರವಿಕುಮಾರ್ ಉಪಸ್ಥಿತರಿದ್ದರು.


Tuesday, July 9, 2013

ತಾಲೂಕಿನಲ್ಲಿ 35845 ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ,ಜು.09 : ರಾಜ್ಯ ಸಕರ್ಾರದ ಅನ್ನಭಾಗ್ಯ ಮಹತ್ವದ ಯೋಜನೆಗೆ ಈ ತಿಂಗಳ 10ರಂದ ಜಿಲ್ಲೆಯಲ್ಲಿ ಚಾಲನೆಯಾಗಲಿದ್ದು ತಾಲ್ಲೂಕಿನಲ್ಲಿಯೂ ಈ ಯೋಜನೆ  ಅಂದೇ ಪ್ರಾರಂಭವಾಗಲಿದೆ, ತಾಲೂಕಿನಲ್ಲಿ ಈ ಯೋಜನೆಯ ಲಾಭವನ್ನು 35845 ಫಲಾನುಭವಿಗಳು ಪಡೆಯಲಿದ್ದಾರೆ  ಎಂದು ತಹಶೀಲ್ದಾರ್ ಕಾಮಾಕ್ಷಮ್ಮ ತಿಳಿಸಿದ್ದಾರೆ.
ಯಾವುದೇ ಕಡು ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಸಕರ್ಾರಿ ಅನ್ನಭಾಗ್ಯ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು ಈ ಯೋಜನೆಯಡಿ ಬರುವ ತಾಲ್ಲೂಕಿನ ಎಲ್ಲಾ ಚಾಲ್ತಿಯಿರುವ ಬಿಪಿಎಲ್ ಪಡಿತರದಾರರಿಗೂ 1ರೂ ದರದಲ್ಲಿ 10ಕೆ.ಜಿ. ಪಡೆಯುವವರು 1568 ಪಡಿತರದಾರರು, 20ಕೆ.ಜಿಯಂತೆ 3596, 30ಕೆಜಿಯಂತೆ 30681 ಪಡಿತರದಾರರು ಈ ಯೋಜನೆಯ ಉಪಯೋಗ ಪಡೆಯಲಿದ್ದಾರೆ.
  ಕನಿಷ್ಟ 10ಕೆ.ಜಿ, ಗರಿಷ್ಠ 30.ಕೆ.ಜಿ ಅಂದರೆ ಪಡಿತರ ಚೀಟಿಯಲ್ಲಿ ಒಬ್ಬ ಸದಸ್ಯರಿದ್ದರೆ 10ಕೆ.ಜಿ, ಇಬ್ಬರು ಸದಸ್ಯರಿದ್ದರೆ 20ಕೆ.ಜಿ, ಹಾಗೂ ಮೂರು ಮತ್ತು ಅದರ ಮೇಲ್ಪಟ್ಟ ಸದಸ್ಯರಿದ್ದರೆ 30ಕೆಜಿ ಅಕ್ಕಿಯಂತೆ ನ್ಯಾಯಬೆಲೆ ಅಂಗಡಿಗಳ ಮುಖಾಂತರ ನೀಡಲಾಗುವುದು, ಅಂತ್ಯೋದಯ ಪಡಿತರ ಚೀಟಿಗಳಿಗೆ 1ರೂ ದರದಲ್ಲಿ 29ಕೆ.ಜಿ ಅಕ್ಕಿ, 2ರೂ ದರದಲ್ಲಿ 6ಕೆ.ಜಿ.ಗೋದಿಯನ್ನು ನೀಡಲಾಗುವುದು ಹಾಗೂ  ಜುಲೈ ತಿಂಗಳಲ್ಲಿ ಗೋದಿಯ ಹಂಚಿಕೆ ಇರುವುದಿಲ್ಲ ಎಂದು ತಿಳಿಸಿರುವ ಅವರು  ಎಪಿಎಲ್ ಪಡಿತರ ಚೀಟಿದಾರರಿಗೆ ಯಾವುದೇ ಆಹಾರ ದಾನ್ಯ ಹಂಚಿಕೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. 
ಈಗಾಗಲೇ ಶೇ.40ರಷ್ಟು ಅಕ್ಕಿ ದಾಸ್ತಾನು ನಮ್ಮ ಗೋಡೋನ್ಗೆ ಬಂದಿದ್ದು 10ಕೆಜಿಯಂತೆ 156.80 ಕ್ವಿಂಟಾಲ್, 20ಕೆ.ಜಿಯಂತೆ 719.20ಕ್ವಿಂಟಾಲ್, 30ಕೆ.ಜಿಯಂತೆ 9204.30ಕ್ವಿಂಟಾಲ್ ಅಕ್ಕಿ ವಿತರಿಸಲಾಗುವುದು, ತಾಲ್ಲೂಕಿನಲ್ಲಿ 35800 ಬಿಪಿಎಲ್ ಪಡಿತರ ಚೀಟಿ, 10779 ಎಪಿಎಲ್ ಪಡಿತರ ಚೀಟಿ, 4152 ಅಂತ್ಯೋದಯ ಪಡಿತರ ಚೀಟಿ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. 
ಈ ಸಂದರ್ಭದಲ್ಲಿ ಆಹಾರ ಶಿರಸ್ತೆದಾರ್ ಮಂಜುನಾಥ್, ಆಹಾರ ನಿರೀಕ್ಷಕರಾದ ಪ್ರೇಮ ಉಪಸ್ಥಿತರಿದ್ದರು.

ಜು.22ರಂದು ಸಕರ್ಾರಿ ನೌಕರರ ಸಂಘದ ಚುನಾವಣೆ
ಚಿಕ್ಕನಾಯಕನಹಳ್ಳಿ,ಜು.09 : 2013-18ನೇ ಸಾಲಿನ ಅವಧಿಗೆ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ತಾಲೂಕು  ಶಾಖೆಯ ಕಾರ್ಯಕಾರಿ ಸಮಿತಿ ಚುನಾವಣೆಯು ಇದೇ ಜುಲೈ ತಿಂಗಳ 22ರ ಸೋಮವಾರ ಬೆಳಗ್ಗೆ 11ರಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಹಾಗೂ  ತಹಶೀಲ್ದಾರ್ ಕಾಮಾಕ್ಷಮ್ಮ ತಿಳಿಸಿದ್ದಾರೆ.
ಜುಲೈ 11 ಗುರುವಾರದಿಂದ 15ರ ಸೋಮವಾರ ಸಂಜೆ 4 ಗಂಟೆಯವರೆಗೆ ನಾಮಪತ್ರಗಳನ್ನು ವಿತರಣೆ ಮಾಡಲಿದ್ದು 15ರ ಸಂಜೆ 5ಗಂಟೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 15ರ ಸಂಜೆ 5.30ರ ನಂತರ ನಾಮಪತ್ರ ಪರಿಶೀಲಿಸಲಿದ್ದು ಪರಿಶೀಲನೆ ನಂತರ ಅರ್ಹ ಅಭ್ಯಥರ್ಿಗಳ ಹೆಸರು ಪ್ರಕಟಣೆ ಮಾಡಲಾಗುವುದು. 16ರ ಮಂಗಳವಾರ ಸಂಜೆ 4ಗಂಟೆವರೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಅಂದು ಸಂಜೆ 5ಗಂಟೆಯ ನಂತರ ನಾಮಪತ್ರಗಳನ್ನು ವಾಪಸ್ ಪಡೆದ ನಂತರ ಚುನಾವಣಾ ಕಣದಲ್ಲಿ ಉಳಿದ ಅಭ್ಯಥರ್ಿಗಳ ಹೆಸರು ಪ್ರಕಟಿಸಲಾಗುವುದು. 22ರ ಸೋಮವಾರ ಬೆಳಗ್ಗೆ 11ರಿಂದ ಸಂಜೆ 4ಗಂಟೆವರೆಗೆ ಚುನಾವಣೆ ನಡೆಯಲಿದ್ದು 22ರ ಸೋಮವಾರ ಮಧ್ಯಾಹ್ನ 4.30ರ ನಂತರ ಮತಗಳ ಎಣಿಕೆ ನಡೆಯಲಿದೆ. ಮತ ಎಣಿಕೆ ನಂತರ ಅಂದೇ ಫಲಿತಾಂಶ ಪ್ರಕಟಿಸಲಾಗುವುದು.
ನಾಮಪತ್ರಗಳನ್ನು ತಾಲ್ಲೂಕು/ಯೋಜನಾ ಸಂಘದ ಕಛೇರಿಯಲ್ಲಿ ನಾಮಪತ್ರಗಳ ವಿತರಣೆ ದಿನಾಂಕದಿಂದ ನಾಪತ್ರಗಳ ವಿತರಣೆಯ ಕೊನೆಯ ದಿನಾಂಕದವರೆಗೆ ಬೆಳಗ್ಗೆ 11ರಿಂದ ಸಂಜೆ 5ಗಂಟೆಯವರೆಗೆ ಪಡೆಯಬಹುದಾಗಿದ್ದು, ಚುನಾವಣಾ ಪ್ರಕ್ರಿಯೆ ಪ್ರಕಾರ ಸಂಘದ ಕಛೇರಿಯು ರಜಾ ದಿನಗಳಂದು ಸಹ ತೆರೆದಿರುತ್ತದೆ 

Monday, July 8, 2013

ಡಿ.ಸಿ.ಸಾಹೇಬರೇ ನಮ್ಮ ಗೋಳು ಕೇಳುವಿರಾ..............(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಜು.08 : ಆಧಾರ್ ಕಾಡರ್್ಗೆ ನೊಂದಾಯಿಸಿಕೊಳ್ಳಲು ಪರಿತಪಿಸುತ್ತಿರುವ ಜನರ ಗೋಳು ಕೇಳುವವರೇ ಇಲ್ಲವಾಗಿದೆ. ತಾಲ್ಲೂಕಿನ ಐವತ್ತು ಸಾವಿರಕ್ಕೂ ಅಧಿಕ ಜನರು ಇನ್ನೂ ಆಧಾರ್ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ ಅವರೆಲ್ಲಾ ಈಗ ನಾ ಮುಂದು ತಾ ಮುಂದು ಎಂದು ಮುಗೀಬೀಳುತ್ತಿದ್ದಾರೆ.
ಇರುವ ಎರಡು ಕಂಪ್ಯೂಟರ್ ತಾಲ್ಲೂಕಿನ 5ಹೋಬಳಿಯ 50ಸಾವಿರ ಜನರ ಹೆಸರನ್ನು ನೊಂದಾಯಿಸಿಕೊಳ್ಳಬೇಕು, ಆದರೆ ಒಬ್ಬರು ತಮ್ಮ ಹೆಸರು ನೊಂದಾಯಿಸಿಕೊಂಡು ಪೋಟೋ ತೆಗೆಸಿಕೊಂಡು ಫಿಂಗರ್ ಪ್ರಿಂಟ್ ಪಡೆಯಲು ಕನಿಷ್ಟ ಇಪ್ಪತ್ತು ನಿಮಿಷ ತೆಗೆದುಕೊಳ್ಳುತ್ತದೆ. ಆದ್ದರಿಂದ ಆಧಾರ್ ಯೋಜನೆಯ ಕಂಪನಿಯವರು ಒಂದು ದಿನಕ್ಕೆ 70 ಜನರಿಗೆ ಮಾತ್ರ ಟೋಕನ್ ಕೊಡುವುದರಿಂದ ಹಳ್ಳಿ ಭಾಗದ ಜನ ರಾತ್ರಿಯಲ್ಲಾ ಕಛೇರಿ ಬಾಗಿಲ ಕಾಯುತ್ತಾ ಅಲ್ಲೆ ಊ.ಮ.ಹೇ (ಊಟ, ಮಲಗುವುದು, ಹೇ....) ಮಾಡುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. 
ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಮೀನುಗಾರಿಕೆ ಇಲಾಖೆ ಕಟ್ಟಡದಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ಮಕ್ಕಳು ಮರಿಯಾದಿಯಾಗಿ ಮನೆಯಲ್ಲಿರುವ ಮುದುಕರು ತದಕರೆಲ್ಲಾ ಬೆಳಗಿನ ಜಾವ 3ಕ್ಕೆ ಬಂದು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಈಗಾಗಿ ತಾಲ್ಲೂಕಿನ ಎಲ್ಲಾ ಜನರು ಏನೇ ಬರಲಿ ಆಧಾರ್ ಇರಲಿ ಎಂಬ ಘೋಷಣೆಗೆ ಕಟ್ಟು ಬಿದ್ದು ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹೊರಗಡೆ ಕೆಲಸಕ್ಕಾಗಿ ವಲಸೆ ಹೋಗಿರುವವರೆಲ್ಲಾ ಇಲ್ಲಿಗೆ ಬಂದು ಆಧಾರ್ ಕಾಡರ್್ ಪಡೆಯುತ್ತಿರುವುದರಿಂದ ಇರುವ ಎರಡು ಕಂಪ್ಯೂಟರ್ಗೆ ಒತ್ತಡ ಹೆಚ್ಚಾಗಿದೆ.
ಆಧಾರ್ ಕಾಡರ್್ ಏಕೆ ಬೇಕು? : ಸಿ.ಎಂ.ಸಿದ್ರಾಮಯ್ಯನವರು ಒಂದು ರೂ.ಗೆ ಒಂದು ಕೆ.ಜಿ.ಅಕ್ಕಿ ಘೋಷಿಸಿದ್ದೇ ತಡ ರೇಷನ್ ಕಾಡರ್್ ಬೇಡಿಕೆ ಜಾಸ್ತಿಯಾಯಿತು. ರೇಷನ್ ಕಾಡರ್್ ಬೇಕು ಎಂದರೆ ಆಧಾರ್ ಕಾಡರ್್ ಇರಲೇ ಬೇಕು. ಇನ್ನು ಅಡುಗೆ ಅನಿಲದ ಸಬ್ಸಿಡಿ ಬೇಕು ಎಂದರೂ ಆಧಾರ್ ಕಾಡರ್್ ಲಿಂಕ್ ಮಾಡಿಸಬೇಕು, ನೌಕರರು ಸೇರಿದಂತೆ ಬ್ಯಾಂಕಿನಲ್ಲಿ ವ್ಯವಹರಿಸುವವರೂ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡಿಸಬೇಕು ಈಗಾಗಿ ಏಕಾಏಕಿ ಆಧಾರ್ಗೆ ಬೇಡಿಕೆ ಹೆಚ್ಚಿದೆ.
ಆಧಾರ್ ಕಾಡರ್್ಗಾಗಿ ಹುಳಿಯಾರು, ಹಂದನಕೆರೆ, ಕಂದಿಕೆರೆ ಜನರು ಅತೀ ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ. ಕಾರಣ ಹುಳಿಯಾರು ಹೋಬಳಿಯ ದಸೂಡಿ, ದಬ್ಬಗುಂಟೆ ಪಂಚಾಯಿತಿಗಳ ಜನರು ಹಂದನಕೆರೆಯ ದೊಡ್ಡಎಣ್ಣೆಗೆರೆ, ಚಿಕ್ಕೆಣ್ಣೆಗೆರೆ ಭಾಗದ ಜನರು ಚಿ.ನಾ.ಹಳ್ಳಿಗೆ ಬರಬೇಕೆಂದರೆ 50ರಿಂದ 60 ಕಿ.ಮೀ ದೂರದಿಂದ ಬರಬೇಕು, ಅವರು ಒಂದು ದಿವಸ ಇಲ್ಲಿಗೆ ಬಂದು ಹೋಗಲಿಕ್ಕೆ ಒಬ್ಬರಿಗೆ ಒಂದು ನೂರು ರೂಗಳಾದದರೂ ಬೇಕು, ಇನ್ನು ಮನೆ ಮಂದಿಯಲ್ಲಾ ಬಂದರೆ ಅವರಿಗೆ ತಿಂಡಿ ಊಟದ ಪಾಡೇನು, ಕನಿಷ್ಟವೆಂದರೂ ಆಧಾರ್ ಕಾಡರ್್ ಮಾಡಿಸಲೆಂದೇ ಏಳು ನೂರರಿಂದ ಸಾವಿರ ರೂಗಳ ಖಚರ್ು ತಗಲುತ್ತದೆ ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಹಣಕಾಸಿನ ತೊಂದರೆ ಒಂದಡೆಯಾದರೆ ಈ ಕೆಲಸಕ್ಕೆ ಚಿ.ನಾ.ಹಳ್ಳಿಗೆ ಬಂದು ಹೋಗುವುದರಿಂದ ಕೆಲಸಕ್ಕೆ ಹೋಗಲಾಗದಿರುವುದರಿಂದ ಕೂಲಿ ಹಣವೂ ಇಲ್ಲದೆ ಪರದಾಡುತ್ತಿದ್ದೇವೆ, ಕನಿಷ್ಟ ಈ ಹೆಸರು ನೊಂದಾಯಿಸುವ ಪೋಟೋ ತೆಗೆಸುವ ವ್ಯವಸ್ಥೆಯನ್ನು ಹೋಬಳಿ ಕೇಂದ್ರಗಳಲ್ಲಾದರೂ ಮಾಡಿದರೆ ಅಷ್ಟರ ಮಟ್ಟಿಗೆ ಡಿ.ಸಿ. ಸಾಹೇಬ್ರು ಬಡವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎನ್ನುತ್ತಾರೆ ದಸೂಡಿ ಗ್ರಾಮದ ಮುತ್ಯಾನಾಯ್ಕ. 


ನಾನು ಚಿಕ್ಕಮಂಗಳೂರಿನ ಕಾಫಿ ಎಸ್ಟೇಟ್ನಲ್ಲಿದ್ದೇನೆ,   ಆಧಾರ್ ಕಾಡರ್್ ಮಾಡಿಸಲು ಕಳೆದ ಮೂರು ದಿನಗಳಿಂದ ಪರದಾಡುತ್ತಿದ್ದೇನೆ ಇನ್ನೂ ಆಗಿಲ್ಲ ಮೂರು ದಿನಗಳ ಸಂಬಳವೂ ಇಲ್ಲ, ಕಾಡರ್್ ನೊಂದಾಣಿನೂ ಆಗಿಲ್ಲ ಅಜ್ಜಿ ತಾತನನ್ನು ಕರೆದುಕೊಂಡು ಚಿ.ನಾ.ಹಳ್ಳಿಗೆ ಬರುವುದು ಬಹಳ ತ್ರಾಸದಾಯಕವಾಗಿದೆ.
-ಸಂಗಮೇಶ್, ಚಿಕ್ಕೇಣ್ಣೆಗೆರೆ 

ದಸೂಡಿಯಿಂದ ಚಿ.ನಾ.ಹಳ್ಳಿಗೆ ನಾವು ಐದು ಜನರು ಬಂದು ಆಧಾರ್ ಕಾಡರ್್ ಮಾಡಿಸಲು ನಮ್ಮ ಕುಟುಂಬಕ್ಕೆ ಕನಿಷ್ಟವೆಂದರೂ ಏಳು ನೂರು ಖಚರ್ಾಗುತ್ತಿದೆ, ಜೊತೆಗೆ ಕೂಲಿ ಕೆಲಸಕ್ಕೋಗುವ ನನಗೆ ತುಂಬಾ ಲುಕ್ಸಾನಾಗುತ್ತಿದೆ, ದೂರದೂರುಗಳಲ್ಲಿ ಒಂದೊಂದು ಕೇಂದ್ರಗಳನ್ನು ಒಂದು ತಿಂಗಳ ಮಟ್ಟಿಗಾದರೂ ತೆರೆದರೆ ಏಷ್ಟೋ ಜನರಿಗೆ ಅನುಕೂಲವಾಗುತ್ತೆ.
-ಮಾರಯ್ಯ ದಸೂಡಿ  


ಸರಗಳ್ಳರನ್ನು ಸೆರೆ ಹಿಡಿದಿರುವ ಚಿ.ನಾ.ಹಳ್ಳಿ ಪೊಲೀಸರು.
ಚಿಕ್ಕನಾಯಕನಹಳ್ಳಿ,ಜೂ.8: ಎರಡು ಪ್ರಕರಣಗಳಲ್ಲಿ ಮಹಿಳೆಯರ ಚಿನ್ನದ ಸರವವನ್ನು ಅಪಹರಿಸಿದ್ದ ಐದು ಮಂದಿ ಸರಗಳ್ಳರನ್ನು ಬಂಧಿಸಿ 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ  ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ಮಾಚರ್್ 15ರಂದು ತಾಲ್ಲೂಕಿನ ಶೆಟ್ಟಿಕೆರೆಯ ಎಸ್.ವಿ. ಪ್ರೇಮ ಎಂಬುವರು  ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ದುಷ್ಕಮರ್ಿಗಳು ಅವರ ಕತ್ತಿನಲ್ಲಿದ್ದ ಚಿನ್ನದಸರವನ್ನು ಕಿತ್ತು ಪರಾರಿಯಾಗಿದ್ದರು. ಮತ್ತೊಂದು ಪ್ರಕರಣದಲ್ಲಿ ನಗರದ ಸಮೀಪದ ತರಬೇನಹಳ್ಳಿಯ ತುಳಸಮ್ಮ ಎಂಬುವರಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ್ದ ಚೋರರ ತಂಡವನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ  ತಾಲ್ಲೂಕಿನ  ಶೆಟ್ಟಿಕೆರೆ ಗ್ರಾಮದ  ಆಚಾರರ ಬೀದಿಯ ವಿಷ್ಣುಕುಮಾರ್, ತೋಟದ ಮನೆ ಶೆಟ್ಟಿಕೆರೆಯ ನಟರಾಜು, ನೆಲಮಂಗಲ ತಾಲ್ಲೂಕಿನ ಬಸವನಹಳ್ಳಿಯ ವಾಲ್ಮೀಕಿನಗರವಾಸಿ ನಟರಾಜು ಮತ್ತು ಸಿ.ಕೃಷ್ಣಪ್ಪ ಹಾಗೂ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಸೋಮಲಾಪುರ ವಾಸಿ ಸಂತೋಷ್  ಅವರಿಂದ 67 ಚಿನ್ನದ ಗುಂಡುಗಳು, 6 ಚೈನು ಪೀಸುಗಳು, 8 ಗ್ರಾಂ ತೂಕದ ಎರಡು  ಚಿನ್ನದ ತಾಳಿ, ಚಿನ್ನದ ಎರಡು ಎಳೆ ಮಾಂಗಲ್ಯಸರದ ಅರ್ಧಭಾಗವನ್ನು ವಶಪಡಿಸಿಕೊಂಡಿದ್ದಾರೆ. ಈ ಎರಡು ಪ್ರಕರಣಗಳಿಗೆ  ಬಳಸಿದ್ದ ಎರಡು ದ್ವಿಚಕ್ರವಾಹವನ್ನು ಜಪ್ತಿ ಮಾಡಲಾಗಿದೆ. ಈ ತಂಡವನ್ನು ಬಂಧಿಸುವಲ್ಲಿ ಸಿಪಿಐ ಕೆ. ಪ್ರಭಾಕರ್, ಪಿಎಸ್ಐ ಬಿ.ಟಿ. ಗೋವಿಂದ್, ಸಿಬ್ಬಂದಿಗಳಾದ ಚಿಕ್ಕಲಕ್ಕೇಗೌಡ್ರು, ವೆಂಕಟೇಶ್, ರಬ್ಬಾನಿ, ದಯಾನಂದ್ ಹಾಗೂ ತಿಪ್ಪೇಸ್ವಾಮಿ ಯಶಸ್ವಿಯಾಗಿದ್ದಾರೆ. 

Saturday, July 6, 2013

cm


ಕಂಬಳಿ ಉತ್ಪಾದನೆಯ  ಬಲವರ್ಧನೆಗೆ ಬಜೆಟ್ನಲ್ಲಿ ಅನುದಾನ ನೀಡುವಂತೆ ಒತ್ತಾಯಿಸಿ ಸಿ.ಎಂ.ಬಳಿಗೆ  ನಿಯೋಗ
ಚಿಕ್ಕನಾಯಕನಹಳ್ಳಿ,ಜು.06 : ಉಣ್ಣೆ ಕಂಬಳಿ ನೇಕಾರರ ಹಾಗೂ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಬಲವರ್ಧನೆಗೆ ಬಜೆಟ್ನಲ್ಲಿ ಅನುದಾನ ಮಂಜೂರು ಮಾಡಿಸಿ ಕಂಬಳಿ ನೇಯ್ಗೆಯನ್ನು ನಂಬಿಕೊಂಡು ಜೀವಿಸುತ್ತಿರುವ ಕಂಬಳಿ ನೇಕಾರರ ಜೀವನಕ್ಕೆ ಹಾಗೂ ಸಂಘದ ಬಲವರ್ಧನೆಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ ಇಲ್ಲಿನ ಎಸ್.ಆರ್.ಎಸ್. ಕಂಬಳಿ ಸೊಸೈಟಿಯ ನಿಯೋಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಎಸ್.ಆರ್.ಎಸ್.ಕಂಬಳಿ ಸೊಸೈಟಿಯು ತಾಲ್ಲೂಕಿನಾದ್ಯಂತ 3ಸಾವಿರ ಜನ ಕಂಬಳಿ ನೇಕಾರ ಸದಸ್ಯರನ್ನು ಹೊಂದಿರುವ ಸಹಕಾರ ಸಂಘ, ಈ ನೇಕಾರರೆಲ್ಲಾ ಕುಲಕಸುಬಾಗಿ ಉಣ್ಣೆ ಕಂಬಳಿಗಳ ನೇಕಾರಿಕೆಯನ್ನು ನಡೆಸಿಕೊಂಡು ಕಸುಬಾಗಿಸಿಕೊಂಡು, ಬದುಕನ್ನು ಕಟ್ಟಿಕೊಂಡಿದ್ದಾರೆ.
 ನೇಕಾರರನ್ನು ಆಥರ್ಿಕವಾಗಿ ಸದೃಡಗೊಳಿಸುವ ನಿಟ್ಟಿನಲ್ಲಿ ಸಂಘವು ಉಣ್ಣೆ ಖರೀದಿಸಿ, ನೇಕಾರರಿಗೆ ವಿತರಿಸುವುದು, ನೇಕಾರರಿಂದ ಕಂಬಳಿಗಳನ್ನು ಖರೀದಿಸುವುದು ಹಾಗೂ ಮಾರಾಟ ಮಾಡಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಜೊತೆಗೆ ಸಂಘವು ಸಹ ಉತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಂಬಳಿಗಳಿಗೆ ಬೇಡಿಕೆ ಇಲ್ಲದೆ ಹಾಗೂ ಸರಿಯಾದ ಬೆಲೆ ಸಿಗದ ಕಾರಣ ಮತ್ತು ಕಚ್ಚಾ ಮಾಲುಗಳ ಬೆಲೆ ದುಬಾರಿಯಗಿರುವುದರಿಂದ ಕಂಬಳಿ ನೇಕಾರರ ಜೀವನ ಅತಂತ್ರ ಸ್ಥಿತಿಯಿಂದ ಕೂಡಿದ್ದು ಜೀವನ ನಿರ್ವಹಣೆಗಾಗಿ ನೇಕಾರರು ಉದ್ಯೋಗವನ್ನು ಅವಲಂಬಿಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವಂತಹ ಸ್ಥಿತಿ ನಿಮರ್ಾಣವಾಗಿದೆ.
 ಈ ಭಾಗದಲ್ಲಿ ಯಾವುದೇ ಕೈಗಾರಿಕೆಗಳಿಲ್ಲದ ಕಾರಣ ಜೀವನ ನಿರ್ವಹಣೆಗೆ ಇತರೆ ಸಣ್ಣಪುಟ್ಟ ಕೂಲಿ ಕೆಲಸ ಮಾಡುತ್ತಿದ್ದು ಅವರಿಗೆ ಸಂಘದಿಂದ ಉದ್ಯೋಗವಕಾಶ ಕಲ್ಪಿಸಲು ಸಂಘದಲ್ಲಿ ಸುಸ್ಥಿರವಾಗಿರುವ ವಕರ್್ಶೆಡ್ಗಳು ಹಾಗೂ ಹೊಸ ತಂತ್ರಜ್ಞಾನದ ಮಗ್ಗಗಳ ಕೊರತೆ ಮತ್ತು ಯಂತ್ರೋಪಕರಣಗಳ ಕೊರತೆ ಇರುವುದರಿಂದ ಸಂಘವು ಸ್ವಂತಕ್ಕೆ ಜಮೀನನ್ನು ಹೊಂದಿದ್ದು ಆ ಜಾಗದಲ್ಲಿ ಕಂಬಳಿ ನೇಕಾರರಿಗೆ ಕಾರ್ಯಗಾರವನ್ನು ನಿಮರ್ಾಣ ಮಾಡಲು ಹಾಗೂ ಅತ್ಯಾಧುನಿಕ ಮಗ್ಗಗಳನ್ನು ಅಳವಡಿಸಲು ಮತ್ತು ಕಂಬಳಿಗಳನ್ನು ನುಳುಪುಗೊಳಿಸುವಂತಹ  ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಕರ್ಾರದಿಂದ ಯೋಜನೆಯನ್ನು ರೂಪಿಸಿ  ಬಜೆಟ್ನಲ್ಲಿ ಅದನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿರುವ ಅವರು, ಈ ಯೋಜನೆಗೆ ಅಂದಾಜು ಮೂರು ಕೋಟಿ ಹಣಬೇಕಾಗಿದ್ದು, ಈ ಹಣವನ್ನು ಮಂಜೂರು ಮಾಡಿಸಿ ಕೊಟ್ಟರೆ ಕಂಬಳಿ ನೇಕಾರರ ಹಾಗೂ ಸಂಘದ ಬಲವರ್ಧನೆಗೆ ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಿದ್ದಾರೆ.
ನಿಯೋಗದಲ್ಲಿ ರಾಜ್ಯ ಉಣ್ಣೆ ನೇಕಾರರ ಮಹಾಮಂಡಲದ ನಿದರ್ೇಶಕ ಸಿ.ಡಿ.ಚಂದ್ರಶೇಖರ್, ಎಸ್.ಆರ್.ಎಸ್. ಕಂಬಳಿ ಸೊಸೈಟಿಯ ಅಧ್ಯಕ್ಷರಾದ ಗಂಗಾಧರಯ್ಯ, ರಾಜ್ಯ ಅಹಿಂದ ಸಂಚಾಲಕ ಸಿ.ಎಲ್.ರವಿಕುಮಾರ್, ನಿದರ್ೇಶಕರುಗಳಾದ ಸಿ.ಹೆಚ್.ಅಳವೀರಯ್ಯ, ಸಿ.ಎಂ.ಬೀರಲಿಂಗಯ್ಯ, ಸಿ.ಕೆ.ಲೋಕೇಶ್, ಗೋವಿಂದಯ್ಯ, ವಿಜಯಕುಮಾರ್, ಭಾರತಮ್ಮ, ಪತ್ರಕರ್ತ ಸಿ.ಬಿ.ಲೋಕೇಶ್, ಕಾರ್ಯದಶರ್ಿ ಕೋದಂಡಯ್ಯ ಇದ್ದರು.

ನಮ್ಮ ಜೀವನದ ಶಿಲ್ಪಿಗಳು ನಾವೇ, ಅದನ್ನರಿತು ಶಿಕ್ಷಣ ಪಡೆಯುವಂತೆ ವಿದ್ಯಾಥರ್ಿಗಳಿಗೆ ಶಾಸಕರಿಂದ ಕಿವಿ ಮಾತು
ಚಿಕ್ಕನಾಯಕನಹಳ್ಳಿ,ಜು.06 : ನಮ್ಮ ಜೀವನದ ಶಿಲ್ಪಗಳು ನಾವೇ, ಅದನ್ನರಿತು ವಿದ್ಯಾಥರ್ಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಪಡೆದರೆ, ಜೀವನದ ಒಂದು ಭಾಗವನ್ನು ಗೆದ್ದಂತೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ 2012-13ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಮಾವೇಶದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರ್ಯಾಂಕ್ ಬಂದ ವಿದ್ಯಾಥರ್ಿಗಳಂತೆ ಕಡಿಮೆ ಅಂಕಗಳನ್ನು ಪಡೆದಂತಹ ವಿದ್ಯಾಥರ್ಿಗಳು ಹೆಚ್ಚಿನ ಶ್ರಮ ವಹಿಸಿದರೆ ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬಹುದು ಎಂದುರು. 
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಎಲ್ಲರಿಗಿಂತ ನಾವು ಹೆಚ್ಚು ಅಂಕ ಪಡೆದಿದ್ದೇವೆ ಎಂಬ ಗರ್ವದಿಂದ ವತರ್ಿಸದೆ ಗುರು ಹಿರಿಯರು, ಸ್ನೇಹಿತರಲ್ಲಿ ವಿನಯವಂತಿಕೆಯಿಂದ ವತರ್ಿಸಿ, ಮುಂದೆ ಎದುರಾಗುವ ಇನ್ನಿತರ ಪರೀಕ್ಷೆಗಳಲ್ಲಿಯೂ ಉತ್ತಮ ಅಂಕ ಪಡೆಯಿರಿ ಎಂದು ತಿಳಿಸಿದರು.
 ನಮ್ಮ ತಾಲ್ಲೂಕು ಶೈಕ್ಷಣಿವಾಗಿ ಅಭಿವೃದ್ದಿಯತ್ತ ಸಾಗುತ್ತಿದೆ, ಶಾಸಕರು ಶಿಕ್ಷಣದ ಬಗ್ಗೆ ಹೊಂದಿರುವ ಆಸಕ್ತಿಯಿಂದ  ಹೆಚ್ಚಿನ ಅಂಕ ಪಡೆದ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲು ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದಲ್ಲದೆ, ಪ್ರತಿ ಶಾಲೆಯ ಶಿಕ್ಷಕರು ಹೇಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ವಿದ್ಯಾಥರ್ಿಗಳು ಹೇಗೆ ಕಲಿಯುತ್ತಿದ್ದಾರೆಂಬ ಬಗ್ಗೆ ಸದಾ ನನ್ನೋಂದಿಗೆ ಚಚರ್ಿಸುತ್ತಿರುತ್ತಾರೆ ಎಂದರು.
 2013ನೇ ಸಾಲಿನಲ್ಲಿ ತಾಲ್ಲೂಕಿನ ಶೈಕ್ಷಣಿಕ ಗುರಿ ಶೇ.85ರಷ್ಟು ಗುರಿ ಇಟ್ಟುಕೊಂಡಿದ್ದೆವು, ಆದರೆ ಶೇ.5ರಷ್ಟು ಕಡಿಮೆಯಾಗಿದೆ ಆದರೂ ನಿರಾಸೆ ಇಲ್ಲ, ಇದು ಋಜು ಮಾರ್ಗದಲ್ಲಿ ಬಂದಿರುವ ಫಲಿತಾಂಶ,  ಶಿಕ್ಷಕರು ವಿದ್ಯಾಥರ್ಿಗಳಿಗೆ ಗುಣಮಟ್ಟ ಶಿಕ್ಷಣ ನೀಡಿದ್ದಾರೆ, ಯಾವುದೇ ರೀತಿಯ ಅವ್ಯವಹಾರಕ್ಕೆ ಒಳಗಾಗದೆ ವಿದ್ಯಾಥರ್ಿಗಳು ಉತ್ತಮ ಫಲಿತಾಂಶ ತಂದಿದ್ದಾರೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.45ರಷ್ಟು ಅಂಕ ಪಡೆದ ವಿದ್ಯಾಥರ್ಿ ಛಲದಿಂದ ಓದಿ ಪಿಯುಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ ಪಡೆದಿರುವ ಹಾಗೆಯೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ್ಯಾಂಕ್ ಬಂದ ವಿದ್ಯಾಥರ್ಿ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವ ಘಟನೆಯು ನಮಗೆ ಮುಂದಿದೆ,  ವಿದ್ಯಾಥರ್ಿಗಳು ಹೆಚ್ಚಿನ ಸಮಯವನ್ನು ಓದಿನ ಕಡೆಗೆ ಹರಿಸಬೇಕು ಹಾಗೂ ಪೋಷಕರು ಮಕ್ಕಳನ್ನು ಈಗಿನಿಂದಲೇ ಸ್ಮಧರ್ಾತ್ಮಕ ನವೋದಯ ಪರೀಕ್ಷೆಗಳಲ್ಲಿ ಸ್ಪಧರ್ಿಸಲು ಪ್ರೋತ್ಸಾಹಿಸಿದರೆ ಮುಂದೆ ಅವರು ಐ.ಎ.ಎಸ್, ಕೆ.ಎ.ಎಸ್ ಪರೀಕ್ಷೆಗಳಲ್ಲಿ ಸ್ಪಧರ್ಿಸಿದಾಗ ಭಯವಿಲ್ಲದೆ ಅನುಭವದಿಂದ ಉತ್ತರಿಸಲು ಸಹಕಾರಿಯಾಗುತ್ತದೆ ಎಂದರು.
ತಿಪಟೂರು ಕಾಲೇಜು ಪ್ರಾಧ್ಯಾಪಕ ಡಾ.ಜಿ.ಎಸ್.ರಮೇಶ್ ಮಾತನಾಡಿ, ಗುರುವಿಗೆ ತನ್ನ ಶಿಷ್ಯ ತನಗಿಂತ ಮೇಲೇರಿದಾಗಲೇ ತೃಪ್ತಿಯಾಗುವುದು, ಅಂತಹ ತೃಪ್ತಿಯನ್ನು ವಿದ್ಯಾಥರ್ಿಗಳು ಶಿಕ್ಷಕರಿಗೆ ನೀಡಬೇಕು, ಇಲ್ಲಿ ನೆರೆದಿರುವ ಎಲ್ಲಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ನೋಡುತ್ತಿದ್ದೇನೆ, ಪ್ರತಿಭೆ ಅನ್ನುವುದು ಮಾಣಿಕ್ಯವಿದ್ದಂತೆ ಎಲ್ಲರಲ್ಲೂ ಪ್ರತಿಭೆಯಿರುತ್ತದೆ ಆದರೆ ಅದು ಹೊರಗೆ ಬರಲು ಸ್ವಲ್ಪ ಸಮಯವಾಗುತ್ತದೆ. ಐನ್ಸ್ಟೀನ್, ನ್ಯೂಟನ್, ಅಬ್ದುಲ್ಕಲಾಂರಂತಹ ಮಹಾ ಪ್ರತಿಭೆಗಳು ಬೆಳಕಿಗೆ ಬಂದದ್ದೂ ಅದೇ ರೀತಿ ಎಂದರಲ್ಲದೆ ಬಡವರಲ್ಲಿ ಹೆಚ್ಚಿನ ಪ್ರತಿಭೆಗಳು ಇರುತ್ತವೆ, ಆದರೆ ಆ ಪ್ರತಿಭೆಗಳು ಆಥರ್ಿಕ ಕಾರಣದಿಂದ ಹೊರಗೆ ಬರಲು ಸೊರಗುತ್ತಿವೆ ಎಂದರಲ್ಲದೆ ವಿಜ್ಞಾನ ಕಲೆ, ಪರಂಪರೆ ಮತ್ತು ವರ್ತಮಾನಗಳೆಲ್ಲವೂ ಒಟ್ಟಿಗೆ ಸೇರಿದಾಗ ಸಾಧನೆಯೂ, ಸಮಾಜವು ಮುನ್ನೆಡೆಯುತ್ತದೆ ಎಂದು ಅಭಿಪ್ರಾಯಪಟ್ಟರು. 
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ದಿ.ಎನ್.ಬಸವಯ್ಯನವರ ಸ್ಮರಣಾರ್ಥ ಬೆಳ್ಳಿ ಪದಕಗಳನ್ನು ಕೊಡಗೆಯಾಗಿ ನೀಡಲಾಯಿತು. 
ಸಮಾರಂಭದಲ್ಲಿ ಕ.ಕೋ.ಆ.ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ರಮೇಶ್, , ಕ್ಷೇತ್ರ ಸಮನ್ವಯಾಧಿಕಾರಿ ತಿಮ್ಮರಾಯಪ್ಪ, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಿ.ಆರ್.ತಿಮ್ಮರಾಜು, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ದೈ.ಶಿ. ಪರಿವೀಕ್ಷಕ ಎನ್.ನರಸಿಂಹಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ನಾಗರಾಜು, ಕಾರ್ಯದಶರ್ಿ ರಾಜಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೋಗಿಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಆಹ್ವಾನ

ಚಿಕ್ಕನಾಯಕನಹಳ್ಳಿ,ಜು.06 : ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಪುರಸಭೆ ವ್ಯಾಪ್ತಿಯ ಜೋಗಿಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಕೇಂದ್ರ ವ್ಯಾಪ್ತಿಯ ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ.
ಅಜರ್ಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇದೇ 27ರ ಸಂಜೆ 5.30ರೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ತಲುಪುವಂತೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗೆ ಕಛೇರಿಯನ್ನು ಸಂಪಕರ್ಿಸಬಹುದಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.