Friday, October 10, 2014

ತಾ.ಪಂ ಸಾಮಾನ್ಯ ಸಭೆ 

                             
ಚಿಕ್ಕನಾಯಕನಹಳ್ಳಿ,ಅ.10:  ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಿಂದ  ರೈತರಿಗೆ ಬರುವ ಸವಲತ್ತುಗಳ ಬಗ್ಗೆ ತಿಳಿಸದೆ,  ಸಂಬಂಧಿಸಿದ ಅಧಿಕಾರಿಗಳು ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ ಎಂದು ತಾ.ಪಂ.ಸದಸ್ಯರು ಆರೋಪಿಸಿದ್ದಾರೆ. 
ಪಟ್ಟಣದ ತಾಲ್ಲೂಕೂ ಸಭಾಂಗಣದಲ್ಲಿ ಅಧ್ಯಕ್ಷ ಲತಾ ಕೇಶವಮೂತರ್ಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯದ ಬಗ್ಗೆ ಚಚರ್ಿಸಿದ ಸದಸ್ಯರು, ತಾಲೂಕಿನ 28 ಗ್ರಾ.ಪಂ.ಗಳಿಗೂ ಸೂಕ್ತ ರೀತಿಯ ಸುತ್ತೋಲೆ ಹಾಗೂ ವಿವಿಧ ಮಾಧ್ಯಮಗಳಿಗೆ ರೈತರಿಗೆ ಸವಲತ್ತುಗಳ ಬಗ್ಗೆ ಸೂಕ್ತ ಮಾಹಿತಿ ನೀಡಬೇಕೆಂದು ಸಲಹೆ ನೀಡಿದರು, ಇದಕ್ಕೆ ಪ್ರತಿಕ್ರಯಿಸಿದ ತೋಟಗಾರಿಕಾ ಇಲಾಖಾ ಅಧಿಕಾರಿ ಮಹಾಲಕ್ಷ್ಮಮ್ಮ,  ಇನ್ನು ಮುಂದೆ ಗ್ರಾಮಪಂಚಾಯ್ತಿಗಳಿಗೆ ರೈತರಿಗೆ ಬರುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
ಸದಸ್ಯ ಎಂ.ಎಂ.ಜಗದೀಶ್ ಮಾತನಾಡಿ, ತಾಲೂಕಿನ ಅಧಿಕಾರಿಗಳ ನಿರ್ಲಕ್ಷದಿಂದ  ನಮ್ಮ ತಾಲೂಕನ್ನು  ಬರಪೀಡಿತ ಪ್ರದೇಶವೆಂದೆ ಸಕರ್ಾರ ಘೋಷಿಸದಿರಲು ಕಾರಣ ವಾಗಿದೆ ಎಂದು  ಆರೋಪಿಸಿದರು 
ತಾಲ್ಲೂಕ್ ಪಂಚಾಯ್ತಿ ಸದಸ್ಯ ಸೀತಾರಾಮಯ್ಯ ಮಾತಾನಾಡಿ ತಾಲ್ಲೂಕು ಪಂಚಾಯ್ತಿಯ ಶೇಕಡ 3 ರ ಅನುದಾನದ ಅಡಿಯಲ್ಲಿ ಮೈಕ್ಸೇಟ್ಕೊಳ್ಳಲು 3 ಬಾರಿ ಬಿಲ್ಲು ಮಾಡಿಕೊಂಡಿದ್ದಾರೆ.ಹಾಗೂ ತಾಲ್ಲೂಕು ಪಂಚಾಯ್ತಿಗೆ ಪೀಠೋಪಕರಣಗಳು ತೆಗೆದುಕೊಳ್ಳುವಾಗ ಸದಸ್ಯರ  ಗಮನಕ್ಕೆ ಬರುವುದಿಲ್ಲ ಅಧಿಕಾರಿಗಳು ನೀವೇ ಬಿಲ್ಲು ಮಾಡಿಕೊಂಡರೇ  ಸದಸ್ಯರ ಗಮನಕ್ಕೆ ಏಕೆ ತೆಗೆದುಕೊಂಡು ಬರುತ್ತಿಲ್ಲ ಆಗಾದರೆ ತಾ,ಪಂ ಸದಸ್ಯರು ಸಭೆಗೆ ಏಕೆ ಬರಬೇಕು ಎಂದು ಇ.ಒ ಅವರನ್ನು ಪ್ರಶ್ನಿಸಿದರು.
ಇ.ಒ.ಉತ್ತರಿಸಿ ನಾನು ಹೊಸದಾಗಿ ಬಂದಿದ್ದು ನನಗೆ ಇದರ ಬಗ್ಗೆ ಯಾವುದೆ ಮಾಹಿತಿ ಇಲ್ಲ, ತಿಳಿದ ನಂತರ ಉತ್ತರಿಸುವುದಾಗಿ ಹೇಳಿದರು.
ಕೃಷಿ ಇಲಾಖೆಗೆ ಸಂಬಂದಿಸಿದಂತೆ  ಸಹಾಯಕ ನಿದರ್ೇಶಕ ಹೆಚ್. ಹೊನ್ನದಾಸೇಗೌಡ ಮಾತಾನಾಡಿ, ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ರೈತರಿಗೆ  ಪಾಲಿಹೌಸ್ ಹಾಗೂ ನಾನ್ ಪಾಲಿಹೌಸ್ ಯೋಜನೆ ಜಾರಿಗೆ ಬಂದಿದ್ದು ಪಾಲಿಹೌಸ್ ತರಕಾರಿ ಹಾಗೂ ತೋಟಗಾರಿಕ ಬೆಳೆಗಳನ್ನು ಎನ್.ಹೆಚ್.ಎಂ,ಯೋಜನೆ ಅಡಿಯಲ್ಲಿ ಶೇಕಡ 50 ರಷ್ಷು ಸಬ್ಸಿಡಿ ಹಣವನ್ನು ನೀಡಲಾಗುತ್ತಿದೆ ಈವರೆಗೆ 10 ಅಜರ್ಿ ಬಂದಿದ್ದು ಇನ್ನು ಹೆಚ್ಚು ಅಜರ್ಿಗಳು ಬಂದರೆ ಲಾಟರಿ ಎತ್ತುವ ಮೂಖಾಂತರ ಪಲಾನುಭವಿಗಳನ್ನು  ಆಯ್ಕೆಮಾಡಲಾಗುವುದು.
 ನಾನ್ ಪಾಲಿಹೌಸ್ ಯೋಜನೆ ಅಡಿಯಲ್ಲಿ 2.5 ಎಕರೆ ಜಮೀನು ಹೊಂದಿರುವ ರೈತರಿಗೆ ನಾನ್ ಪಾಲಿಹೌಸ್ ಯೋಜನೆ ಅಡಿಯಲ್ಲಿ 1.2 5 ಲಕ್ಷದಿಂದ 2.5 ಲಕ್ಷದವರೆಗೆ ಸಹಾಯ ದನ ನೀಡಲಾಗುತ್ತದೆ ಈ ಯೋಜನೆ ಅಡಿಯಲ್ಲಿ ರೈತರು ಬದು, ಪಾಲಿಥಿನ್ ಸಹಿತ ಕೃಷಿ ಹೊಂಡ, ಡೀಜೆಲ್ ಪಂಪ್ಸೆಟ್, ಹಾಗೂ ಸ್ಪಿಂಕ್ಲರ್ ಅಳವಡಿಸಿಕೊಳ್ಳಬಹುದು ಎಂದರು.
ತಾಲ್ಲೂಕು ಪಂಚಾಯ್ತಿಯ ಹಣಕಾಸು ಸಭೆ ನಡೆಯುವಾಗ ಸಮಾಜ ಕಲ್ಯಾಣಾಧಿಕಾರಿಗಳು ಸಭೆಗೆ ಹಾಜರಾಗಿ ಪುಸ್ತಕಕ್ಕೆ ಸಹಿ ಹಾಕಿ ಹೇಳದೆ ಕೇಳದೆ ಹೊರಗೆ ಏಕೆ ಹೊಗಿದ್ದಿರಿ ಇದರಿಂದ ತಾ.ಪಂ ಅಧ್ಯಕ್ಷರು ಹಾಗೂ ಸದಸ್ಯರ ಮೇಲೆ ಎಷ್ಟು ಗೌರವ ಇದೆ ಎಂದು ಸೂಚಿಸುತ್ತದೆ. ಎಂದು ತಾ.ಪಂ ಅಧ್ಯಕ್ಷೆ ಲತಾಕೇಶವಮೂತರ್ಿ ಸಮಾಜ ಕಲ್ಯಾಣಾಧಿಕಾರಿ ರಾಮಣ್ಣನವರನ್ನು ಖಾರವಗಿ ಪ್ರಶ್ನಿಸಿದರು ಅನಿವಾರ್ಯ ಕಾರಣಗಳು ಇದ್ದರೆ ಮಾತ್ರ ಸಭೆಯಿಂದ ಅನುಮತಿ ಪಡೆದು ಹೊರಗೆ ಹೊಗಬೇಕೆವರತು ಸಣ್ಣಪುಟ್ಟ ವಿಷಯಗಳಿಗೆಲ್ಲಾ ಹೊರಗೆ ಹೋದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ  ಅಧಿಕಾರಿ ಮೌನದಿಂದ್ದಿದ್ದರು.
    ಸಮಾಜ ಕಲ್ಯಾಣಾ ಇಲಾಖಾಯ ವಸತಿ ನಿಲಯದಲ್ಲಿ ಹಿರಿಯ ಅಧಿಕಾರಿಗಳು ಭೇಟಿ ನೀಡಿದಾಗ ವಸತಿ ನಿಲಯದ ಸಮಸ್ಯೆಗಳನ್ನು ಕಾಲೇಜು ವಿದ್ಯಾಥರ್ಿಗಳು ಹೇಳಿದರೆ ಹಾಸ್ಟೆಲ್ ವರ್ಡನ್ ವಿದ್ಯಾಥರ್ಿಗಳನ್ನು ಗದರಿಸಿ ಬೈಯುತ್ತಾರೆ ಎಂಬ ದೂರಿದೆ ಆ  ವಾರ್ಡನನ್ನು  ಸಭೆಗೆ ಕರೆಸುವಂತೆ ಸದಸ್ಯ ನಿರಂಜನ್ ಅಧಿಕಾರಿಗಳನ್ನು ಆಗ್ರಹಿಸಿದರು. 
   ಇನ್ನು ಮುಂದೆ ಈಗಾಗದಂತೆ ನೋಡುಕೊಳ್ಳುವುದಾಗಿ ಸಮಾಜ ಕಲ್ಯಾಣಾಧಿಕಾರಿ ರಾಮಯ್ಯ ತಿಳಿಸಿದರು. 
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷ ವಸಂತಯ್ಯ ಸಾಮಾಜಿ ನ್ಯಾಯ ಸ್ಥಾಯಿ ಸಮಿತಿ ಚಿಕ್ಕಮ್ಮ, ಸದಸ್ಯರಾದ ಜಯಣ್ಣ, ಚೇತನ ಗಂಗಾಧರ್, ಹೇಮಾವತಿ, ಲತಾ ವಿಶ್ವೇಶ್ವರ್, ಉಮಾದೇವಿ, ಶಿವರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಚೆಕ್ ವಿತರಣೆ: ಸಭೆಯಲ್ಲಿ ಪಶುಸಂಗೋಪನಾ ಇಲಾಖೆ ಹಾಗೂ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ವತಿಯಿಂದ ಆಕಸ್ಮಿಕವಾಗಿ ಮರಣಹೊಂದಿದ ಕುರಿ ಮಾಲೀಕರಿಗೆ ತಲಾ ಐದು ಸಾವಿರದಂತೆ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು.