Tuesday, July 13, 2010

ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ
ಚಿಕ್ಕನಾಯಕನಹಳ್ಳಿ,ಜು.12: 2010-11ನೇ ವರ್ಷದ ರೋಟರಿ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಇದೇ ಜುಲೈ 14ರ ಸಂಜೆ 6.45ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೋಟರಿ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ಜಿಲ್ಲಾ 3190ರ ಗವನರ್್ರ್ ಪಿ.ಡಿ.ಜಿ. ಎಚ್.ಕೆ.ವಿ.ರೆಡ್ಡಿ ಅಧಿಕಾರ ಪ್ರಧಾನ ಮಾಡಲಿದ್ದಾರೆ.
ಜಿಲ್ಲಾ 3190ರ ಅಸಿಸ್ಟೆಂಟ್ ಗವನರ್್ರ್ ಸಿ.ಎನ್.ವೆಂಕಟರೆಡ್ಡಿ ಹೊಸ ಸದಸ್ಯರ ಸೇರ್ಪಡೆ ಮತ್ತು ನಾಯಕ ಪತ್ರಿಕೆ ಬಿಡುಗಡೆ ಮಾಡಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಸೇವಾ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ.
ಹೊನ್ನಮ್ಮನ ಹತ್ಯೆ ವಿರೋಧಿಸಿ ಮೌನಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಜು.12: ತಾಲೂಕಿನ ಗೋಪಾಲಪುರದಲ್ಲಿ ನಡೆದ ಹೊನ್ನಮ್ಮನ ಹತ್ಯೆಯ ಸಾಕ್ಷಾಧಾರಗಳು ನಾಶವಾಗದಂತೆ ನೋಡಿಕೊಂಡು, ಪ್ರಕರಣದ ತನಿಖೆ ಮತ್ತು ತೀರ್ಪನ್ನು ಆದಷ್ಟು ಬೇಗ ಮುಗಿಸಬೇಕೆಂದು ಕನರ್ಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಿತ ಬಿ.ಕೃಷ್ಣಪ್ಪ ಬಣ ಒತ್ತಾಯಿಸಿದ್ದಾರೆ.
ಪಟ್ಟಣದ ತಾಲೂಕು ಕಛೇರಿ ಮುಂಭಾಗದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ತಹಶೀಲ್ದಾರ್ರವರಿಗೆ ನೀಡಿದ ಮನವಿ ಪತ್ರದಲ್ಲಿ ತಮ್ಮ ಹಲವು ಬೇಡಿಕೆಗಳನ್ನು ಪ್ರಸ್ತಾಪಿಸಿದ್ದು, ಹೊನ್ನಮ್ಮನ ಹತ್ಯೆಯ ಬಗ್ಗೆ ಸಕರ್ಾರ ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಹೊನ್ನಮ್ಮನ ಕುಟುಂಬಕ್ಕೆ ಸಕರ್ಾರಿ ಸೌಲಭ್ಯವನ್ನು ಒದಗಿಸಬೇಕು ಎಂದಿದ್ದಾರೆ.
ಪ್ರತಿಭಟನೆಯಲ್ಲಿ ಕನರ್ಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರುಗಳಾದ ನಾರಾಯಣ್, ನರಸಿಂಹಮೂತರ್ಿ, ಸದಾಶಿವಯ್ಯ, ರಾಮಯ್ಯ ಉಪಸ್ಥಿತರಿದ್ದರು.