Wednesday, April 20, 2016



ಡಿಸಿಸಿ ಬ್ಯಾಂಕ್ನಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೂ ನೆರವು : ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ, : ಹಲವು ದಶಕಗಳಿಂದಲೂ ತಾಲ್ಲೂಕಿಗೆ ನೀರಾವರಿ, ರೈಲ್ವೆ ಯೋಜನೆ ಸೌಕರ್ಯಗಳು ದೊರಕದೆ ತಾಲ್ಲೂಕು ಹಿಂದುಳಿಯುತ್ತಲೇ ಇದೆ, ಬರಪೀಡಿತ ಪ್ರದೇಶವಾದ್ದರಿಂದ ತಾಲ್ಲೂಕಿನ ರೈತರಿಗೆ ಸರಿಯಾದ ಫಸಲೂ ದೊರಯುತ್ತಿಲ್ಲ,  ಇಂತಹ ಸಂದಿಗ್ದ ಸ್ಥಿತಿಯಲ್ಲಿ  ಜಿಲ್ಲಾ ಡಿಸಿಸಿ ಬ್ಯಾಂಕ್ ರೈತರಿಗೆ, ಸ್ತ್ರೀಶಕ್ತಿ ಸಂಘಗಳಿಗೆ, ವ್ಯಾಪಾರಿಗಳಿಗೆ, ಕಾಮರ್ಿಕರಿಗೆ ಸೇರಿದಂತೆ ಎಲ್ಲಾ ವರ್ಗದ ಜನರಿಗೆ  ನೆರವಾಗಲು ಸಾಲ ಸೌಲಭ್ಯ ನೀಡಿ ಆಥರ್ಿಕವಾಗಿ ಸದೃಢರನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಕಿಸಾನ್ ಕ್ರೆಡಿಟ್ ಸಾಲ  ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿನ ಕಳೆದಂತೆ ರೈತರ ಸಂಖ್ಯೆ ಕಡಿಮೆಯಾಗುತ್ತಿದೆ, ದೇಶದಲ್ಲಿ ಶೇ.80ರಷ್ಟಿದ್ದ ರೈತರು ಬರಗಾಲ ಮತ್ತಿತರರ ಕಾರಣಗಳಿಂದ ಹಲವು ವರ್ಷಗಳೀಂದಿಚೆಗೆ ತೀರಾ ಕಡಿಮೆಯಾಗಿದೆ, ತಾಲ್ಲೂಕಿನ ರೈತರು ಮಳೆ ಇಲ್ಲದೇ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ ಇಂತಹ ಕಷ್ಟದ ಸ್ಥಿತಿ ಎದುರಾಗಿರುವುದರಿಂದ ಬ್ಯಾಂಕ್ ಆಥರ್ಿಕ ಸದೃಢತೆಗಾಗಿ ಹಂತ-ಹಂತವಾಗಿ ಸಾಲ ಸೌಲಭ್ಯ ವಿತರಣೆ ಮಾಡುತ್ತಿದೆ ಎಂದರು.
ಇದುವರೆಗೂ ಹೊಸ ಸದಸ್ಯರಿಗೆ ಈಗ ಸಾಲ ಸೌಲಭ್ಯ ವಿತರಿಸುತ್ತಿದ್ದೇವೆ, ಸಾಲಕ್ಕಾಗಿ ಅಜರ್ಿ ಸಲ್ಲಿಸಿದ್ದ ಎಲ್ಲಾ ರೈತರಿಗೂ ಸಾಲ ವಿತರಿಸುತ್ತಿದ್ದು,  ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಲವನ್ನು ಎಕ್ಟೇರ್ವಾರು, ಬೆಳೆವಾರು ವಿತರಿಸುವ ಯೋಚನೆ ಇದೆ ಎಂದರು.   ಕಸಬಾ ಸೊಸೈಟಿ ವ್ಯಾಪ್ತಿಯಲ್ಲಿನ ಷೇರುದಾರರು, ಸಾಲ ಸೌಲಭ್ಯ ಪಡೆಯುತ್ತಾರೆ ಆದರೆ ಅವರಲ್ಲಿರುವ ಹಣವನ್ನು ಠೇವಣಿ ಇಡಲು  ವಾಣಿಜ್ಯ  ಬ್ಯಾಂಕ್ಗಳಿಗೆ ಹೋಗುತ್ತಾರೆ ಎಂದರಲ್ಲದೆ,  ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ನೀಡುವ ಬಡ್ಡಿಗಿಂತ  ನಮ್ಮಲ್ಲಿ ಠೇವಣಿಯ ಮೇಲೆ ಹೆಚ್ಚಿನ ಬಡ್ಡಿ ನೀಡುತ್ತೇವೆ ಎಂದರು.  ನಮ್ಮ  ಸೊಸೈಟಿ, ಡಿ.ಸಿ.ಸಿ. ಬ್ಯಾಂಕ್ಗಳಲ್ಲಿ ಡೆಪಾಸಿಟ್ ಹಣ ಉಳಿತಾಯ ಮಾಡಿ ಇದರಿಂದ  ಬರುವಂತಹ ಹಣ ರೈತರಿಗೆ ಸೇರುತ್ತದೆ ಎಂದರಲ್ಲದೆ, ಬ್ಯಾಂಕು ಗಳಿಸಿದ ಲಾಭದಲ್ಲಿ ಸಾವನ್ನಪ್ಪಿದ ರೈತರು ನಮ್ಮ ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಮನ್ನಾ ಮಾಡಿದ್ದೇವೆ, ಈ ಯೋಜನೆ ದೇಶದಲ್ಲೇ ಮೊದಲು ನಮ್ಮ ಡಿ.ಸಿ.ಸಿ.ಬ್ಯಾಂಕ್ ಮಾಡಿದೆ ಎಂದರು.
ಕಸಬಾ ಹೋಬಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೊಸ ಸಾಲವೆಂದು ಈ ವರ್ಷ 40ಲಕ್ಷವನ್ನು ಡಿಸಿಸಿ ಬ್ಯಾಂಕ್ ವತಿಯಿಂದ ನೀಡಿದ್ದೇವೆ, ಹೆಚ್ಚಿನ ಆಥರ್ಿಕ ಸಂಪನ್ಮೂಲವನ್ನು ಪ್ರಾಥಮಿಕ ಸಂಘಗಳು ಕೃಡಿಕರಿಸಿಕೊಳ್ಳುವಂತೆ ಹಾಗೂ ಈ ಸೊಸೈಟಿ ಹಲವು ಹಳ್ಳಿಗಳು, ಪಟ್ಟಣ  ಒಳಗೊಂಡಿರುವುದರಿಂದ ಹೆಚ್ಚಿನ ಸಾಲ ವಿತರಿಸುವಂತೆ ಮನವಿ ಬಂದಿದ್ದು ಮುಂದಿನ ದಿನಗಳಲ್ಲಿ ಎಕ್ಟೇರ್ವಾರು, ಬೆಳೆವಾರು ಹೆಚ್ಚಿನ ರೀತಿಯ ಸಾಲ ವಿತರಿಸುವ ಯೋಚನೆ ಇದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗುರುಮೂತರ್ಿ ಮಾತನಾಡಿ, ಸಾಲ ಕೊಡಿಸುವ ವ್ಯವಸ್ಥೆಯನ್ನು ನಮ್ಮ ಬ್ಯಾಂಕ್ನಲ್ಲಿ ಆರು ವರ್ಷಗಳಿಂದಲೂ ನೀಡುತ್ತಾ ಬಂದಿದ್ದೇವೆ ಈಗಾಗಲೇ ಬ್ಯಾಂಕ್ನಿಂದಲೇ 520ಜನರಿಗೆ ಸಾಲ ವಿತರಿಸಿದ್ದೇವೆ ಹಾಗೂ ಸಣ್ಣ ಹಿಡುವಳಿದಾರರಿಗೆ ಹಾಗೂ ದೊಡ್ಡ ಹಿಡುವಳಿದಾರರಿಗೆ ಅವರ ಜಮೀನುಗಳನ್ನು ಆಧಾರಿಸಿ  ಹೆಚ್ಚಿನ ಸಾಲದ ನೀಡುವಂತೆ ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ತಿಳಿಸಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿದರ್ೇಶಕ ಎಂ.ಬಿ.ದಿನೇಶ್ ಮಾತನಾಡಿ,  ರೈತರಿಗೆ ಸಾಲವನ್ನು  ಹೆಚ್ಚಿನ ಸಾಲ ವಿತರಣೆ ಮಾಡಲು ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ನಿದರ್ೇಶಕರು ಸಹಕರಿಸಬೇಕು ಎಂದರು.
ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ ಮಾತನಾಡಿ, ಇದುವರೆಗೆ ಸಾಲ ಪಡೆಯದ ಹೊಸ ಸದಸ್ಯರಿಗೆ ಸಾಲ ವಿತರಣೆ ಮಾಡುವ ಉದ್ದೇಶದಿಂದ ಬ್ಯಾಂಕ್ನಿಂದ ಸಾಲ ವಿತರಿಸಲಾಗುತ್ತಿದ್ದು ಇಂದು 119ಜನರಿಗೆ 36ಲಕ್ಷ ರೂಗಳಷ್ಟು ಸಾಲವನ್ನು  ವಿತರಿಸಲಾಗುತ್ತಿದೆ ಎಂದರಲ್ಲದೆ, ಸೊಸೈಟಿ ಈಗಾಗಲೇ ಸ್ವಂತ ಹಣದಿಂದ 875ಜನರಿಗೆ 6.5ಕೋಟಿಯಷ್ಟು ಹಣ ಸಾಲ ವಿತರಿಸಿದ್ದು ಸಂಸ್ಥೆ ಉತ್ತಮವಾಗಿ ನಡೆಯುತ್ತಿದೆ ಇದೇ ರೀತಿ ಮುಂದುವರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಸೊಸೈಟಿಯ ಉಪಾಧ್ಯಕ್ಷೆ ನಾಗಮಣಿ, ನಿದರ್ೇಶಕರುಗಳಾದ ಶಿವಣ್ಣ, ಪ್ರಸನ್ನಕುಮಾರ್, ರವೀಶ್, ವಾಣಿ, ಬ್ಯಾಂಕ್ನ ಸಿಇಓ ಜಿ.ಎಸ್.ಮಧು ಉಪಸ್ಥಿತರಿದ್ದರು.
ಪುರಸಭೆ  ಸದಸ್ಯರಿಂದ ಸಿಬ್ಬಂದಿಗೆ ಪ್ರಶ್ನೆಗಳ ಸುರಿಮಳೆ : ಮೌನಕ್ಕೆ ಶರಣಾದ ಅಧಿಕಾರಿಗಳು
ಚಿಕ್ಕನಾಯಕನಹಳ್ಳಿ,ಏ.18 : ಪುರಸಭೆಯ ಖಚರ್ು ವೆಚ್ಚದ ಬಗ್ಗೆ ಸದಸ್ಯರುಗಳ ಪ್ರಶ್ನೆಗೆ ಸಿಬ್ಬಂದಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದು, ಪಟ್ಟಣದಲ್ಲಿರುವ ಅಂಗಡಿಗಳಲ್ಲಿ  ವಸ್ತುವಿನ ಮೇಲೆ ಮುದ್ರಿಸಿರುವ  ದರಕ್ಕಿಂತ ದುಪ್ಪಟ್ಟು ಬೆಲೆ ನಮೂದಿಸಿ ವಸ್ತು ಖರೀದಿಸಿರುವುದು, ಕೆಲವು ಪುರಸಭೆ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬಾರದಿರುವಬಗ್ಗೆ ಬಗ್ಗೆ ಸಭೆಯಲ್ಲಿ ಚಚರ್ೆಗೆ ಬಂದಿತು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಅಧ್ಯಕ್ಷ ಸಿ.ಟಿ ದಯಾನಂದ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ,  ಪುರಸಭೆಯಿಂದ ಖಚರ್ು ಮಾಡಿದಂತಹ ಹಣದ ಬಗ್ಗೆ ಸರಿಯಾದ ಲೆಕ್ಕ ಕೊಡುತ್ತಿಲ್ಲ, ಮೂರು ನಾಲ್ಕು ಬಿಲ್ ಮಾಡಿದ ಹಣವನ್ನು ಒಂದೇ ಲೆಕ್ಕಕ್ಕೆ ಸೇರಿಸುತ್ತಿದ್ದಾರೆ ಇದರಿಂದ ಯಾವುದಕ್ಕೆ  ಎಷ್ಟು ಹಣ ಖಚರ್ಾಗಿದೆ ಎನ್ನುವುದು ತಿಳಿಯುತ್ತಿಲ್ಲ, ಯಾವುದೇ ಬಿಲ್ ಮಾಡಿದರೂ ಬಿಲ್ ವೆಚ್ಚವನ್ನು ಬೇರೆ ಬೇರೆಯೇ ತೋರಿಸಿ ಎಂದರು.
ಪುರಸಭೆಯಲ್ಲಿ ಕೆಲವು ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಇದರಿಂದ ಸಾರ್ವಜನಿಕರು ಕಛೇರಿಗೆ ಬಂದು ಖಾಲಿ ಕುಚರ್ಿಗಳನ್ನು ನೋಡಿಕೊಂಡು ಕೆಲಸವಾಗದೆ ವಾಪಾಸ್ ಹಿಂದಿರುಗುವ ಸ್ಥಿತಿ ಎದುರಾಗಿದೆ ಎಂದು ಸದಸ್ಯೆ ರೇಣುಕಗುರುಮೂತರ್ಿ ಆರೋಪಿಸಿದರು. 
ಪಟ್ಟಣದಲ್ಲಿ ನಿಮರ್ಿತವಾಗಿರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಬರುವ ಹಣ ಯಾವುದರಲ್ಲಿ ಎಷ್ಟೆಷ್ಟು ಹಣ ಬರುತ್ತಿದೆ ಎಂದು ತಿಳಿಯುತ್ತಿಲ್ಲ ಎಲ್ಲದಕ್ಕೂ ಒಂದೇ ಆದಾಯ ಸೇರಿಸಿದ್ದೀರ ಇದರಿಂದ ಹಣದ ಲೆಕ್ಕವೂ ಸಿಗುತ್ತಿಲ್ಲ ಕೂಡಲೇ ಬೇರೆ ಬೇರೆ ಲೆಕ್ಕ ಬರೆಯುವಂತೆ ಸದಸ್ಯ ಸಿ.ಪಿ.ಮಹೇಶ್ ತಿಳಿಸಿದರು.
ಪಟ್ಟಣದ ಜೋಗಿಹಳ್ಳಿ ಆಂಜನೇಯಸ್ವಾಮಿ ದೇವಾಲಯ ಬಳಿ ಹೊಸ ಬಸ್ ನಿಲ್ದಾಣದ ಹತ್ತಿರ ಪ್ರವಾಸಿ ಮಂದಿರದ ಬಳಿ ಹಾಗೂ ತಾಲ್ಲೂಕು ಕಛೇರಿ ಹತ್ತಿರ ಮತ್ತು ಕಾಳಿದಾಸ ಪತ್ತಿನ ಸಹಕಾರ ಸಂಘದ ಬಳಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಪುರಸಭೆ ಸಾಮಾನ್ಯ ಸಭೆಯಲ್ಲಿ ತಿಮರ್ಾನಿಸಲಾಯಿತು.
ಕುಡಿಯುವ ನೀರನ್ನ ಒದಗಿಸಲು ಜಿಲ್ಲಾಧಿಕಾರಿಗಳಿಗೆ 25 ಲಕ್ಷರೂ ಮುಂಜೂರು ಮಾಡಲು ಕ್ರಿಯಾ ಯೋಜನೆ ಸಿದ್ದಪಡಿಸಿ ಕಳುಹಿಸಲಾಗಿದೆ, ಹಣ ಬಂದ ತಕ್ಷಣ ಕೊಳವೆ ಬಾವಿಗಳ ದುರಸ್ತಿ ಪಂಪು ಮೋಟಾರು ಅಳವಡಿಸಲು ಹಾಗೂ ಪೈಪ್ ಲೈನ್ ದುರಸ್ತಿಗೆ, ಹೊಸ ಕೊಳವೆ ಬಾವಿ, ಕೊರೆಸಲು ಹಣ ಉಪಯೋಗಿಸಲಾಗುವುದು ಎಂದು ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸಭೆಗೆ ತಿಳಿಸಿದರು.
ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ಕೊರೆದಿರುವ ಬೋರ್ವೆಲ್ಗಳ ಎಲ್ಲೆಲ್ಲಿ ಕೊಳವೆ ಬಾವಿ. ಕೊರೆಸಲಾಗಿದೆ ಯಾವ ಬೋರ್ವೆಲ್ಗಳಿಗೆ  ಪಂಪ್ಮೋಟಾರ್, ಬಿಟ್ಟಿದ್ದೇವೆ ಆ ಸ್ಥಳ ಭೇಟಿ ನೀಡಿ ಪರಿಶೀಲಿಸಲು ಎಲ್ಲ ಪುರಸಭಾ ಸದಸ್ಯರು ಆಗಮಿಸುವಂತೆ ತಿಳಿಸಿದರು.
ಕುಡಿಯುವ ನೀರಿನ ಕ್ರಿಯಾ ಯೋಜನೆ ತಯಾರಿಸುವಾಗ ಸದಸ್ಯರ ಗಮನಕ್ಕೆ ತಂದು ಯಾವ ಸ್ಥಳಗಳಲ್ಲಿ ನೀರು ಬರುತ್ತಿದೆಯೋ  ಅಂತಹ ಸ್ಥಳಗಳಲ್ಲಿ ಪುರಸಭಾ ಸದಸ್ಯರ ಅಭಿಪ್ರಾಯ ಪಡೆದು ಕ್ರಿಯಾ ಯೋಜನೆ ತಯಾರಿಸಿ,  ಅಧಿಕಾರಿಗಳು ನೀವೇ ಕ್ರೀಯಾ ಯೋಜನೆ ತಯಾರು ಮಾಡಿದರೆ ಸದಸ್ಯರು ಏಕೆ ಬೇಕು ಎಂದು ಸಿ.ಡಿ ಚಂದ್ರಶೇಖರ್ ಪ್ರಶ್ನಿಸಿದರು. 
ಪಟ್ಟಣದಲ್ಲಿ ಕುಡಿಯುವ ನೀರಿಗೆ ತೊಂದರೆ ಇರುವಾಗ ಕೆಲವು ವಾಡರ್್ಗಳಲ್ಲಿ ಕುಡಿಯುವ ನೀರಿಲ್ಲ, ಕೆಲವು ವಾಡರ್್ಗಳಲ್ಲಿ ನೀರು ಹೆಚ್ಚಾಗಿ ಚರಂಡಿಗೆ ಬಿಡುತ್ತಿದ್ದಾರೆ ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಸಲಹೆ ನೀಡಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿರುವ ಪುರಸಭೆಗೆ ಸೇರಿದ ಸ್ಥಳದಲ್ಲಿ ಪ್ಲೇನಿಂಗ್, ಮಿಷನ್, ಹಾಗೂ ಚಪ್ಪಲಿ ಅಂಗಡಿಗಳನ್ನು ತೆರವುಗೊಳಿಸಿ ಹೊಸ ವಾಣಿಜ್ಯ ಮಳಿಗೆಗಳನ್ನು ಕಟ್ಟಲು ಸಭೆ ತಿಮರ್ಾನಿಸಲಾಯಿತು.
ಕೆ.ಎಸ್.ಆರ್,ಟಿ,ಸಿ ಬಸ್ ನಿಲ್ದಾಣದ ಎದುರಿಗೆ ಇರುವ ಹಳೇ ವಿದ್ಯಾಥರ್ಿ ಭವನ್ ಇದ್ದ ಪುರಸಭೆಯ ನಿವೇಶನ ಹಾಗೂ ತಾ ಗಾಡಿ ಕಾಖರ್ಾನೆ ಪುರಸಭೆಯ ಆಸ್ತಿಯಾಗಿದ್ದು ಈ ಜಾಗದಲ್ಲಿ ವಾಣಿಜ್ಯ ಮಳಿಗೆ ಕಟ್ಟಲು ಸಭೆ ತಿಮರ್ಾನಿಸಿತು. ಈ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿಮರ್ಿಸಲು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ನಂತರ ಮಳಿಗೆ ಕಟ್ಟಿ ಇಲ್ಲದೆ ಹೋದರೆ ಕೋಟರ್ಿಗೆ ಹೋಗುವ ಸಂಭವವಿರುತ್ತದೆ ಎಂದು ಸದಸ್ಯ ಸಿ.ಎಂ.ರಂಗಸ್ವಾಮಿ ಸಲಹೆ ನೀಡಿದರು.
ಪುರಸಭೆಯ ಐ.ಡಿ.ಎಸ್.ಎಮ್.ಟಿ, ಪುರಸಭೆ ಅನುದಾನ, 10ನೇ ಹಣಕಾಸು ಯೋಜನೆ, ಸೇರಿದಂತೆ ವಿವಿಧ ಯೋಜನೆಗಳಲ್ಲಿ ನಿಮರ್ಿಸಿರುವ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡದೇ ಪಿ.ಡ್ಲ್ಯೂಡಿಯವರು ನಿಗಧಿ ಪಡಿಸಿದ ದರದಲ್ಲಿ ಪ್ರಸ್ತುತ ಅಂಗಡಿ ನಡೆಸುತ್ತಿರುವವರಿಗೆ ಅಂಗಡಿ ನೀಡಲು ಪುರಸಭೆ ನಿರ್ಣಯ ಕೈಗೊಂಡಿದ್ದು ನಂತರ ಮುಖ್ಯಾಧಿಕಾರಿಗಳು  ಸಕರ್ಾರದ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿಗಳ ಅನುಮೋದನೆ ಪಡದು ಹರಾಜು ಮಾಡುವಂತೆ ಮುಖ್ಯಾಧಿಕಾರಿ ಸಭೆಗೆ ತಿಳಿಸಿದರು..
ಕೆಲವರು ಹೊಸ ಬಸ್ ನಿಲ್ದಾಣದಲ್ಲಿರುವ ಅಂಗಡಿ ಮಳಿಗೆಗಳನ್ನು 3800ರೂ ಬಾಡಿಗೆ ಪುರಸಭೆಗೆ ನೀಡುತ್ತಿದ್ದು ಆ ಅಂಗಡಿಗಳನ್ನು ಕೆಲವರು ದಿನವೊಂದಕ್ಕೆ 1000ರೂಪಾಯಿ ವರೆಗೆ ಬೇನಾಮಿಯಾಗಿ ವಸೂಲಿ ಮಾಡುತ್ತಿದ್ದಾರೆ ಇದರಿಂದ ಪುರಸಭೆಗೆ ಆದಾಯ ಕಡಿಮೆಯಾಗುತ್ತಿದೆ ಆದ್ದರಿಂದ ಯಾರು ಅಂಗಡಿ ಇಟ್ಟುಕೊಂಡಿದ್ದಾರೋ ಅವರಿಗೆ ಆ ಮಳಿಗೆಗೆ ಲೈಸೇನ್ಸ್ ವಿತರಿಸಿ ಎಂದು ಸದಸ್ಯರು ತಿಳಿಸಿದರು. 
ಪಟ್ಟಣದ ಪುರಸಭೆಯ ಮುಂಭಾಗದಲ್ಲಿರುವ ಅಶೋಕ ಮರಗಳನ್ನು ತೆರವುಗೊಳಿಸಿ ಅಲ್ಲಿ ವಾಹನ ನಿಲ್ದಾಣವನ್ನು ಮಾಡಲು ಸಭೆ ತಿಮರ್ಾನಿಸಿತು.
 ಸಭೆಯಲ್ಲಿ ಉಪಾಧ್ಯಕ್ಷೆ ಇಂದಿರಾ ಪ್ರಕಾಶ್, ರೇಣುಕಮ್ಮ, ಸಿ.ಪಿ.ಮಹೇಶ್, ಮಹಮದ್ಖಲಂದರ್, ಸಿ.ಕೆ.ಕೃಷ್ಣಮೂತರ್ಿ, ಸಿ.ಆರ್.ತಿಮ್ಮಪ್ಪ, ಎಂ.ಕೆ.ರವಿಚಂದ್ರ, ಧರಣಿಲಕ್ಕಪ್ಪ, ಪ್ರೇಮಾದೇವರಾಜ್, ಪುಷ್ಪ.ಟಿ.ರಾಮಯ್ಯ, ಅಶೋಕ್, ಹೆಚ್.ಬಿ.ಪ್ರಕಾಶ್, ಗೀತಾರಮೇಶ್, ರೇಣುಕಮ್ಮಗುರುಮೂತರ್ಿ, ನೇತ್ರಾವತಿಶಿವಕುಮಾರ್, ಸಿ.ಎಸ್.ರಮೇಶ್, ರೂಪಶಿವಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.


ಬೆಂಗಳೂರಿನ ನೆಲಗದರನಹಳ್ಳಿಯಲ್ಲಿ ನಡೆದ ಅಣ್ಣಮ್ಮದೇವಿ ಮಹೋತ್ಸವ ಕಾರ್ಯಕ್ರಮದಲ್ಲಿ ಕನರ್ಾಟಕ ಜಾಗೃತಿ ಸೇನೆ ವತಿಯಿಂದ ಗ್ರಾಮೀಣ ಪ್ರದೇಶದ ಚಿಕ್ಕನಾಯಕನಹಳ್ಳಿಯ ಪತ್ರಕರ್ತರಾದ ಸಿ.ಬಿ.ಲೋಕೇಶ್ರವರನ್ನು ಸನ್ಮಾನಿಸಲಾಯಿತು.ರಾಜ್ಯಾಧ್ಯಕ್ಷರಾದ ಆನಂದಪ್ಪ, ರಾಜ್ಯಾ ಕಾರ್ಯದಶರ್ಿ ಗುರುಲಿಂಗಪ್ಪ, ಪಧಾದಿಕಾರಿಗಳಾದ ಬಾಲಕೃಷ್ಣರಾವ್, ಲಿಂಗದೇವರು, ಲಕ್ಷ್ಮಣ್,ವೆಂಕಟೇಶ್, ರಮೇಶ್, ಸೋಮಣ್ಣ ಮುಂತಾದವರು.