Wednesday, January 14, 2015


ಆರ್.ಟಿ.ಐ. ಖೋಟಾದಡಿಯಲ್ಲಿ ಪೋಷಕರಿಂದ  ಅಜರ್ಿ ಆಹ್ವಾನ: ಬಿ.ಇ.ಓ.ಕೃಷ್ಣಮೂತರ್ಿ
  • ಶೇ.25 ಸೀಟುಗಳು ಲಭ್ಯ , ವಾಷರ್ಿಕ 3.5 ಲಕ್ಷ ರೂ ಆದಾಯವಿರುವವರು ಅಜರ್ಿ ಸಲ್ಲಿಸಬಹುದು.
  • ಜ.18 ರಿಂದ ಫೆ.19ರವರೆಗೆ ಅಜರ್ಿ ಸಲ್ಲಿಸಬಹದು, ಫೆ.26 ಅರ್ಹ ಮಕ್ಕಳ ಪಟ್ಟಿ ಪ್ರಕಟ
  • ಮಾ.3 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನ, ಮಾ.9 ಆನ್ಲೈನ್ ಲಾಟರಿ ಮೂಲಕ ಆಯ್ಕೆ.

ಚಿಕ್ಕನಾಯಕನಹಳ್ಳಿ,ಜ.14 : 2015-16ನೇ ಸಾಲಿನ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಯಗೆ ಜನವರಿ 18ರಿಂದ ಫೆಬ್ರವರಿ 19ರವರೆಗೆ ಪೋಷಕರು ಆನ್ಲೈನ್ ಅಥವಾ ಆಫ್ಲೈನ್ ಮುಖಾಂತರ ದಾಖಲೆಗಳ ಸಮೇತ ಶಾಲೆಗೆ ಅಜರ್ಿ ಸಲ್ಲಿಸಬಹುದಾಗಿದೆ ಎಂದು ಬಿ.ಇ.ಓ ಕೃಷ್ಣಮೂತರ್ಿ ತಿಳಿಸಿದ್ದಾರೆ.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಆರ್.ಟಿ.ಇ ಅಡಿಯಲ್ಲಿ ಶಾಲೆಗಳ ನೊಂದಣಿಯನ್ನು ಮಾಡಲಾಗಿದ್ದು ನೆರೆಹೊರೆಯ ಶಾಲೆಗಳ ಪಟ್ಟಿ, ಶಾಲೆಗಳಿಗೆ ನಿಗಧಿ                                                                                                                                                                                                                       ಚಿಕ್ಕನಾಯಕನಹಳ್ಳಿ ಬಿ.ಇ.ಓ ಕೃಷ್ಣಮೂತರ್ಿ 
ಪಡಿಸಿರುವ ಆರ್.ಟಿ.ಇ ದಾಖಲಾತಿ, ಸೌಲಭ್ಯ ಮತ್ತು ತರಗತಿ ಮಾಧ್ಯಮವನ್ನು ಶಿಕ್ಷಣ ಇಲಾಖೆಯ ವೆಬ್ಸೈಟ್ ತಿತಿತಿ.ಛಿಠಠಟಜಜಣಛಿಚಿಣಠಟಿ.ಞಚಿಡಿ.ಟಿಛಿ.ಟಿ ನಲ್ಲಿ ಪ್ರಕಟಿಸಲಾಗಿದೆ, ಸಾರ್ವಜನಿಕರು 2015-16ನೇ ಸಾಲಿಗೆ ಆರ್.ಟಿ.ಇ ಅಡಿಯಲ್ಲಿ ದಾಖಲಾತಿಗಾಗಿ ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅಜರ್ಿಯನ್ನು ದಾಖಲೆಗಳ ಸಮೇತ ನೆರೆಹೊರೆಯ ಅಂದರೆ ಗ್ರಾಮಾಂತರ ಪ್ರದೇಶದಲ್ಲಿ ಕಂದಾಯ ಗ್ರಾಮ ಮತ್ತು ನಗರ ಪ್ರದೇಶದಲ್ಲಿ ವಾಡರ್್ ಒಳಗಿನ ಶಾಲೆಯಲ್ಲಿ ಮಾತ್ರ ಅಜರ್ಿ ಸಲ್ಲಿಸಬೇಕಾಗಿರುತ್ತದೆ ಹಾಗೂ ಆನ್ಲೈನ್ನಲ್ಲಿ ಸೀಟುಗಳ ಆಯ್ಕೆ ಮಾಡಲಾಗುತ್ತದೆ ಎಂದ ಅವರು ಆರ್.ಟಿ.ಇ ಅಡಿಯಲ್ಲಿ ಶೇ.25ರಷ್ಟು ಮೀಸಲಾತಿ ಕೋಟಾದಡಿ ಪೂರ್ವ ಪ್ರಾಥಮಿಕ(ಎಲ್.ಕೆ.ಜಿ) ಮತ್ತು 1ನೇ ತರಗತಿಗೆ ಮಕ್ಕಳ ದಾಖಲಾತಿಗೆ ನಿಗಧಿಪಡಿಸಿರುವ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರತಿ ಅನುದಾನರಹಿತ ಶಾಲೆಯಲ್ಲಿ ಲಭ್ಯವಿರುವ ಶೇ.25 ಸೀಟುಗಳನ್ನು ಜನವರಿ 17ರಂದು ಪ್ರಕಟಿಸಲಿದ್ದಾರೆ,  ಪೋಷಕರು ಶಾಲಾ ದಾಖಲಾತಿ ಕೋರಿ ಜನವರಿ 18ರಿಂದ ಫೆಬ್ರವರಿ 19ರವರೆಗೆ ದಾಖಲೆಗಳ ಸಮೇತ ಆಯಾ ಖಾಸಗಿ ಶಾಲೆಗಳಲ್ಲಿ ಅಜರ್ಿ ಸಲ್ಲಿಸಬಹುದಾಗಿದೆ, ಫೆಬ್ರವರಿ 26ರಂದು ಅರ್ಹ ಅಭ್ಯಥರ್ಿಗಳ ಪಟ್ಟಿಯನ್ನು ಶಿಕ್ಷಣ ಇಲಾಖೆಯ ಆಯುಕ್ತರು  ಪ್ರಕಟಿಸಲಿದ್ದಾರೆ,  ಫೆಬ್ರವರಿ 27ರಿಂದ ಮಾಚರ್್ 2ರವರೆಗೆ ಅರ್ಹ ಅಭ್ಯಥರ್ಿಗಳ ಆಯ್ಕೆ ಪಟ್ಟಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳ ಸ್ವೀಕಾರ ಮತ್ತು ವಿಲೇವಾರಿ ನಡೆಯಲಿದೆ, ಮಾಚರ್್ 9 ರಂದು ಆನ್ಲೈನ್ ಲಾಟರಿ ಮೂಲಕ ಆಯ್ಕೆ ಮಾಡಿದ ಮಕ್ಕಳ ಪಟ್ಟಿ ಪ್ರಕಟಿಸಲಾಗುವುದು. ಮಾಚರ್್ 10ರಿಂದ ಮಾಚರ್್ 13ರವರೆಗೆ ಆಯ್ಕೆ ಪಟ್ಟಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಕ್ಷೇಪಣೆ ವಿಲೇವಾರಿಸುವ ಅವಧಿ ನಿಗಧಿಪಡಿಸಲಾಗಿದೆ. ಮಾಚರ್್ 19ರಂದು ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಣೆಯಾಗಲಿದೆ, ಮಾಚರ್್ 20ರಿಂದ ಸಂಬಂಧಿಸಿದ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದರು.
ಅಜರ್ಿ ಸಲ್ಲಿಸಲು ಬೇಕಾದ ದಾಖಲೆಗಳು : ಜನ್ಮದಿನಾಂಕದ ದಾಖಲೆ, ಮಗುವಿನ ಭಾವಚಿತ್ರ, ವಾಸಸ್ಥಳದ ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅನಾಥ ಮಗು, ವಲಸೆ ಮಗು, ಬೀದಿ ಮಗು, ಅಂಗವಿಕಲ/ ವಿಶೇಷ ಆದ್ಯತೆವುಳ್ಳ ಮಗು, ಎಚ್.ಐ.ವಿ ಪೀಡಿತ ಮಗು ಆಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಪ್ರಮಾಣ ಪತ್ರ ಸಲ್ಲಿಸುವುದು.

ಲೋಕಾಯುಕ್ತರು ಬೀಸಿದ ಬಲೆಗೆ ಬೆಳಗುಲಿ ಗ್ರಾ.ಪಂ.ಬಿಲ್ ಕಲೆಕ್ಟರ್ ಸೆರೆ.
ಚಿಕ್ಕನಾಯಕನಹಳ್ಳಿ,ಜ.14: ಬೆಳಗುಲಿ ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್ ರಂಗಸ್ವಾಮಿ ಎನ್ನುವವರು ಲಂಚ ಪಡೆಯುವಾಗ ಲೋಕಾಯುಕ್ತ ಇನ್ಸ್ಪೆಕ್ಟಟರ್ ಬಿಸಿದ ಬಲೆಗೆ  ಸಿಲುಕಿ ವಿಚಾರಣಾ ಬಂಧಿಯಾಗಿದ್ದಾರೆ.  
ನಿರುವಗಲ್ ಗ್ರಾಮದ ಶಂಕರಮ್ಮ ಎನ್ನುವವರು ಇಂದಿರಾ ಅವಾಜ್ ಯೋಜನೆಯಡಿಯಲ್ಲಿ ಮನೆ ಮಂಜೂರಾತಿಯಾಗಿ ಒಂದು ಬಿಲ್ಲಿನ ಮೊತ್ತವನ್ನು ಗ್ರಾಮ ಪಂಚಾಯ್ತಿಯವರು ನೀಡಿದ್ದು ಪುನಃ ಇನ್ನೊಂದು ಬಿಲ್ಲನ್ನು ಮಂಜೂರು ಮಾಡುವಂತೆ  ಶಂಕರಮ್ಮ ಕೇಳಿಕೊಂಡಾಗ ಮನೆ 'ನಾಟ್ ಓಕೆ'( ಕಂಪ್ಯೂಟರ್ ಭಾಷೆ) ಆಗಿದೆ ಆದ್ದರಿಂದ ಇದನ್ನು ಸರಿಪಡಿಸಿ ಬಿಲ್ನ್ನು ನೀಡಲು 500 ರೂ ಲಂಚ ಕೇಳಿದ್ದರು ಎಂದು ನಿರುವಗಲ್ ಶಂಕರಮ್ಮನವರ ಪತಿ ರಾಮಾಚಾರ್ ಲೋಕಾಯುಕ್ತರಿಗೆ ದೂರು ನೀಡಿದ್ದು, ಬುಧವಾರ ಪಟ್ಟಣದ ಹೊಸಬಸ್ಟಾಂಡ್ ಬಳಿ ಇರುವ ಬೆಳಗುಲಿ ಗ್ರಾಮ ಪಂಚಾಯ್ತಿಯ ಕಂಪ್ಯೂಟರ್ ಸೆಂಟರ್ನಲ್ಲಿ ಶಂಕರಮ್ಮನ ಮಗ ಬಸವರಾಜು ಬಿಲ್ಕಲೆಕ್ಟರ್ ರಂಗಸ್ವಾಮಿಗೆ 200 ರೂ ಹಣ ನೀಡುತ್ತಿದ್ದಾಗ ಲೋಕಾಯುಕ್ತ ಇನ್ಸ್ಪೆಕ್ಟರ್ ಗೌತಮ್ ಹಾಗೂ ಸಿಬ್ಬಂದಿ ಬಲೆ ಬೀಸಿ 200 ರೂ ವಶಪಡಿಸಿಕೊಂಡು ರಂಗಸ್ವಾಮಿಯನ್ನು ಬಂಧಿಸಲಾಗಿದೆ.