Tuesday, April 27, 2010

ತಪ್ಪು ಮಾಡೋದು ಸಹಜ, ತಿದ್ದಿ ನಡೆಯೋನೆ ಮನಜ: ಡಾ.ಹಮೀದ್

ಚಿಕ್ಕನಾಯಕನಹಳ್ಳಿ,ಏ.27: ಪ್ರತಿಯೊಬ್ಬ ವ್ಯಕ್ತಿಯು ತಪ್ಪು ಮಾಡುವುದು ಸಹಜ ಆದರೆ ಅದನ್ನು ಸರಿಪಡಿಸಿ ತಿದ್ದಿ ಬಾಳುವುದು ಮುಖ್ಯ ಎಂದು ಶಿಕ್ಷಣ ತಜ್ಞ ಡಾ.ಅಬ್ದುಲ್ ಹಮೀದ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಪದವಿ ಎಂಬುದು ವಿದ್ಯಾಥರ್ಿಗಳ ಮುಂದಿನ ಭವಿಷ್ಯದ ಜವಾಬ್ದಾರಿಯುತ ಜೀವನಕ್ಕೆ ಸಂಕೇತವಾಗಿದ್ದು ಇದರಿಂದ ನಿಮ್ಮ ದಾರಿದೀಪವನ್ನು ನೀವೆ ಬೆಳಗಿಸಬೇಕು ಎಂದ ಅವರು, ಜಗತ್ತು ಪರಿವರ್ತನೆಯುಳ್ಳದ್ದು ಆ ಪರಿವರ್ತನೆಗೆ ತಕ್ಕಂತೆ ನಾವು ಬಾಳುವುದು ಮಖ್ಯ, ಇಲ್ಲದಿದ್ದರೆ ಜಗತ್ತಿನಲ್ಲಿ ಹಲವು ವಿಸ್ಮಯಗಳು ಸಂಭವಿಸಿ ಜೀವಿಗಳು ನಾಶವಾಗುವುದರಲ್ಲಿ ಸಂಶಯವಿಲ್ಲ ಎಂದರು.
ಪ್ರತಿಯೊಂದು ಭಾಷೆಗೂ ಒಂದು ಸಂಸ್ಕೃತಿಯಿದೆ ಅದನ್ನು ನಾವು ನಮ್ಮ ತನವನ್ನು ಬಿಡದೆ ಉಳಿಸಿಕೊಳ್ಳಬೇಕು ಮತ್ತು ಎಲ್ಲಾ ಭಾಷೆಗಳ ತಿಳಿದುಕೊಂಡು ಅದರಲ್ಲಿನ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕು ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ, ಆ ಜ್ಞಾನಕ್ಕೆ ಶ್ರದ್ದೆಯಿದ್ದು ಏಕಾಗ್ರತೆಯಿಂದ ಕಲಿತರೆ ಮಾತ್ರ ಎಂತಹ ಪರಿಸ್ಥಿತಿಯನ್ನು ಎದುರಿಸಬಹುದು ಎಂದ ಅವರು, ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಪ್ರತಿಭೆಯನ್ನು ಅಂತರಾಷ್ಟ್ರಿಯ ಮಟ್ಟದಲ್ಲಿ ಬೆಳಗಿಸಿದೆ, ಅದಕ್ಕೆ ವಿಶ್ವದಲ್ಲಿ ಭಾರತವನ್ನು ಬಹಳ ಎತ್ತರದಲ್ಲಿ ಗುರುತಿಸಿದ್ದು ಮುಂದೆ ಪ್ರತಿ ಕ್ಷೇತ್ರದಲ್ಲೂ ಭಾರತ ಮೊದಲ ಸ್ಥಾನಪಡೆಯುವಂತೆ ಮಾಡುವ ಹೊಣೆಗಾರಿಕೆ ಯುವಶಕ್ತಿಗಳ ಮೇಲಿದೆ ಎಂದರು.
ಸಮಾರಂಭದಲ್ಲಿ ರೋಟರಿ ಟ್ರಸ್ ಕಾರ್ಯದಶರ್ಿ ಎಸ್.ಎ.ನಭಿ, ಪ್ರಾಂಶುಪಾಲ ಎ.ಎನ್.ವಿಶ್ವಶ್ವೇರಯ್ಯ ಉಪಸ್ಥಿತರಿದ್ದರು.
ಅನುಮತಿ ಇಲ್ಲದೆ ಶಿಕ್ಷಕರು ಕಾರ್ಯಸ್ಥಾನ ಬಿಡುವಂತಿಲ್ಲ: ಬಿ.ಇ.ಓ
ಚಿಕ್ಕನಾಯಕನಹಳ್ಳಿ,ಏ.27: ಗ್ರಾಮ ಪಂಚಾಯಿತಿ ಚುನಾವಣೆಗೆ ನೇಮಕಗೊಂಡಿರುವ ಶಿಕ್ಷಕರುಗಳಿಗೆ ಚುನಾವಣಾ ಕಾಯರ್ಾದೇಶವನ್ನು ವಿತರಣೆ ಮಾಡಲು ಹೋದಾಗ ಸಂಬಂದಿಸಿದ ಶಿಕ್ಷಕರು ಕೇಂದ್ರ ಕಾರ್ಯಸ್ಥಾನದಲ್ಲಿರುವುದು ಖಡ್ಡಾಯ ಎಂದು ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಸ್ಪಷ್ಟ ಆದೇಶವನ್ನು ಹೊರಡಿಸಿರುವ ಬಿ.ಇ.ಓ.ರವರು ಗ್ರಾ.ಪಂ.ಚುನಾವಣಾ ಕಾರ್ಯಕ್ಕೆ ನೇಮಕಗೊಂಡಿರುವ ಎಲ್ಲಾ ಶಿಕ್ಷಕರು ತಹಶೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯದೇ ಕೇಂದ್ರ ಕಾರ್ಯಸ್ಥಾನವನ್ನು ಬಿಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಒಂದು ವೇಳೆ ಕಾರ್ಯಸ್ಥಾನದಲ್ಲಿ ಇಲ್ಲದೇ ಚುನಾವಣಾ ಕಾಯರ್ಾದೇಶ ಸ್ವೀಕರಿಸದೇ ಚುನಾವಣಾ ಕಾರ್ಯಕ್ಕೆ ಗೈರುಹಾಜರಾದಲ್ಲಿ ಅಂತಹ ಶಿಕ್ಷಕರ ವಿರುದ್ದ ನಿದರ್ಾಕ್ಷಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಬಿ.ಇ.ಓ ತಿಳಿಸಿದ್ದಾರೆ.
ಅಕ್ರಮ ಮದ್ಯ ಶೇಖರಣೆಗೆ ಕಡಿವಾಣ
ಚಿಕ್ಕನಾಯಕನಹಳ್ಳಿ,ಏ.27: ತಾಲೂಕು ವ್ಯಾಪ್ತಿಯಲ್ಲಿ ಯಾರಾದರೂ ಅಕ್ರಮವಾಗಿ ಮದ್ಯವನ್ನು ಚುನಾವಣಾ ಉದ್ದೇಶಕ್ಕಾಗಿ ಸಾಗಾಣಿಕೆ ಮತ್ತು ಶೇಖರಣೆ ಮಾಡುವುದು ಕಂಡುಬಂದರೆ ಸಾರ್ವಜನಿಕರು ಸ್ಥಳೀಯ ಅಬ್ಕಾಂ ಕಚೇರಿ ಅಥವಾ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಅಬಕಾರಿ ನಿರೀಕ್ಷಕರು ಕೋರಿದ್ದಾರೆ.
ಸಾರ್ವಜನಿಕರು ಅಬ್ಕಾರಿ ಅಧಿಕಾರಿಗಳಿಗೆ ಸುಳಿವು ನೀಡುವುದಕ್ಕೆ ಇಲಾಖೆ ಈ ದೂರವಾಣಿಗಳನ್ನು ಕಾಯ್ದಿರಿಸಿದೆ, ಜಿಲ್ಲಾ ಅಬ್ಕಾರಿ ಉಪ ಆಯುಕ್ತರ ಕಚೇರಿ 0816-2272927, ತಾಲೂಕು ಚುನಾವಣಾ ಅಧಿಕಾರಿಗಳು 9449006421, ಅಬ್ಕಾರಿ ನಿರೀಕ್ಷಕರು 9341464215, ಅಬ್ಕಾರಿ ಉಪನಿರೀಕ್ಷಕರು 9916633811, ಅಬ್ಕಾರಿ ಉಪ ನಿರೀಕ್ಷಕರು2, 9448231303. ಈ ದೂರವಾಣಿಗೆ ಕರೆಮಾಡುವ ಮೂಲಕ ಮಾಹಿತಿ ನೀಡುವಂತೆ ಕೋರಿದ್ದಾರೆ