Wednesday, August 31, 2011



ಶಿಕ್ಷಣ ಬಹುದೊಡ್ಡ ಶಕ್ತಿಯಾಗಿದ್ದು ತಮ್ಮ ಬದುಕಿಗಾಗಿ ಅಳವಡಿಸಿಕೊಳ್ಳಿ : ಕೆ.ಎನ್.ರಂಗನಾಥ್ಚಿಕ್ಕನಾಯಕನಹಳ್ಳಿ,ಆ.31 ; ಶಿಕ್ಷಣ ಬಹುದೊಡ್ಡ ಶಕ್ತಿಯಾಗಿದ್ದು ಅದನ್ನು ಕೇವಲ ವೃತ್ತಿಗಾಗಿ ಅವಲಂಬಿಸದೆ ತಮ್ಮ ಜೀವನದ ಬದುಕಿಗಾಗಿ ಅಳವಡಿಸಿಕೊಳ್ಳಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಕೆ.ಆರ್.ರಂಗನಾಥ್ ಹೇಳಿದರು. ತಾಲ್ಲೂಕಿನ ಕಾತ್ರಿಕೆಹಾಳ್ ತೀರ್ಥಪುರ ಸಕರ್ಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾಸಂಘ ಹಾಗೂ ಇಕೋಕ್ಲಬ್ ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಕರಿಗೆ ವಿದ್ಯಾಥರ್ಿಗಳೇ ದೇವರು, ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದೇ ನಿಜವಾದ ಸೇವೆಯಾಗಿದೆ, ಗ್ರಾಮಾಂತರ ಪ್ರದೇಶದ ವಿದ್ಯಾಥರ್ಿಗಳು ಕೀಳರಿಮೆಯನ್ನು ತೊರೆದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು, ಈ ದಿನಗಳಲ್ಲಿ ಹಳ್ಳಿಗಾಡಿನ ವಿದ್ಯಾಥರ್ಿಗಳೇ ಹೆಚ್ಚಿನ ಪ್ರಗತಿ ಸಾಧಿಸುತ್ತಿರುವುದು. ವಿದ್ಯಾಥರ್ಿಗಳಿಗೆ ಜ್ಞಾನಾರ್ಜನೆ ಅತ್ಯಂತ ಮುಖ್ಯವಾಗಿದ್ದು ಅದರ ಜೊತೆಗೆ ಕ್ರೀಡಾ ಮನೋಭಾವವನ್ನು ಬೆಳಸಿಕೊಳ್ಳಬೇಕು ಎಂದ ಅವರು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪರಿಸರವನ್ನು ಹಾಳುಮಾಡಬೇಡಿ, ಸಂರಕ್ಷಿಸಿ ಎಂದು ಕರೆ ನೀಡಿದರು. ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯದಶರ್ಿ ರಾಮಕೃಷ್ಣಪ್ಪ ಮಾತನಾಡಿ ಮರಗಳನ್ನು ಕಡಿದರೆ ನಮ್ಮ ಉಸಿರೇ ನಿಂತು ಹೋದಂತೆ. ಗಾಳಿಗಾಗಿ, ಮಳೆಗಾಗಿ, ಬದುಕಿಗಾಗಿ ಕಾಡುಗಳು ಬೇಕು. ಇಲ್ಲಿನ ಬೆಟ್ಟಗುಡ್ಡಗಳು ಅಮೂಲ್ಯ ಖನಿಜ ಸಂಪತ್ತಿನ ಗಣಿಗಳು ಇವುಗಳ ರಕ್ಷಣೆಯ ಜವಾಬ್ದಾರಿ ನಮ್ಮದು, ಪರಿಸರವನ್ನು ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳೋಣ ಎಂದರು. ಮಾಜಿ ಪುರಸಭಾ ಸದಸ್ಯ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಪರಿಸರ ಕುರಿತು ಇಡೀ ಜಗತ್ತೇ ಚಿಂತಿಸುವ ಕಾಲ ಬಂದಿದೆ, ಗಣಿಗಾರಿಕೆ ಸ್ಥಗಿತಕ್ಕೆ ಸುಪ್ರೀಂ ಕೋಟರ್್ ಆದೇಶಿಸಿರುವುದು ಸಮಾಧಾನಕರ ವಿಷಯ ಎಂದರಲ್ಲದೆ ಸ್ಥಳೀಯ ಪರಿಸರ ಅಭಿವೃದ್ದಿಗೆ ಕೂಡಿ ಶ್ರಮಿಸೋಣ ಎಂದರು. ತೀರ್ಥಪುರ ಪಂಚಾಯ್ತಿಯ ಅಧ್ಯಕ್ಷ ಮಂಜುನಾಥ್ ಮಾತನಾಡಿ ಕಾಲೇಜಿನ ಕೆಲಸಗಳಿಗೆ ನಾವು ಎಂದೆಂದಿಗೂ ಸಹಕರಿಸುತ್ತೇವೆ ಎಂದರು. ಸಮಾರಂಭದಲ್ಲಿ ಪಂಚಾಯ್ತಿಯ ಉಪಾಧ್ಯಕ್ಷ ಗೋವಿಂದರಾಜು, ಪ್ರಾಚಾರ್ಯರಾದ ಎನ್.ಇಂದಿರಮ್ಮ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉಪನ್ಯಾಸಕ ಲಕ್ಷ್ಮಯ್ಯ ಸ್ವಾಗತಿಸಿದರೆ ಮೇ.ನಾ.ತರಂಗಿಣಿ ನಿರೂಪಿಸಿ, ನಾಗಮ್ಮ ವಂದಿಸಿದರು.