Wednesday, November 30, 2011



ಮೀಸಲಾತಿ ಹಾಗೂ ಸಮಾನ ಹಕ್ಕುಗಳನ್ನು ಪಡೆದಾಗ ಮಾತ್ರ ಕನಕದಾಸರ ಆಶಯಗಳು ಸಾರ್ಥಕ
ಚಿಕ್ಕನಾಯಕನಹಳ್ಳಿ,ನ.30 : ಹಿಂದುಳಿದ ಹಾಗೂ ಕೆಳ ವರ್ಗದ ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಅಗತ್ಯವಾದ ಮೀಸಲಾತಿ ಹಾಗೂ ಸಮಾನ ಹಕ್ಕುಗಳನ್ನು ಪಡೆದಾಗ ಮಾತ್ರ ಕನಕದಾಸರ ಆಶಯಗಳು ಸಾರ್ಥಕವಾಗುವುದು ಎಂದು ಕನಕ ಗುರುಪೀಠದ ಹೊಸದುರ್ಗ ಶಾಖೆಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹಂದನಕೆರೆ ಹೋಬಳಿ ಪಾಪನಕೊಣ ಗ್ರಾಮದಲ್ಲಿ ನಡೆದ ಕನಕದಾಸರ ಜಯಂತ್ಯೋತ್ಸವ ಸಮಾರಂಭದ ದಿವ್ಯಸಾನಿದ್ಯ ವಹಿಸಿ ಮಾತನಾಡಿದರು.
ಕೆಳವರ್ಗದ ಸಮುದಾಯದ ಮಠಮಾನ್ಯಗಳಿಗೆ ಸಕರ್ಾರಿ ಹಣಕಾಸಿನ ನೆರವು ನೀಡದಿರುವುದರಿಂದ ಆ ಸಮುದಾಯದ ವರ್ಗದ ಮಠಗಳು  ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ, ಈ ವರ್ಗದವರು ಮುಂದುವರಿಯಬೇಕು ಅದಕ್ಕಾಗಿ ಸಮುದಾಯದವರು ಸಕರ್ಾರ  ಎಚ್ಚೆತ್ತುಕೊಳ್ಳುವಂತೆ ಮಾಡಬೇಕು ಆ ಶಕ್ತಿ ನಮ್ಮ ಸುಮುದಾಯಗಳಿಗಿವೆ ಅದನ್ನು ಮಾಡಿ ತೋರಿಸಿ ಎಂದು ಕರೆ ನೀಡಿದರು.  ಹಿಂದುಳಿದ ವರ್ಗಗಳ ಪರವಾಗಿ ಜನಪ್ರತಿನಿಧಿಗಳು ಕೆಲಸ ನಿರ್ವಹಿಸಬೇಕಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಕನಕದಾಸರು ಕೆಳವರ್ಗದ ಹಾಗೂ ಹಿಂದುಳಿದ ವರ್ಗದ ಜನರ ಧ್ವನಿಯಾಗಿ ನಿಂತವರು, ಅವರು ತಮ್ಮ ಕೀರ್ತನೆಗಳಿಂದ ಕನ್ನಡ ನಾಡಿನ ಸಾಹಿತ್ಯವನ್ನು ಬೆಳಗಿದವರು ಅವರ  ಕನಕದಾಸರ ಜಯಂತ್ಯೋತ್ಸವವನ್ನು ಎಲ್ಲಾ ಸಮುದಾಯದವರು ಆಚರಿಸಬೇಕಾಗಿದೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ದಾಸರ ಕೀರ್ತನೆಗಳು ಈಗಿನ ವಾಸ್ತವಿಕತೆಗೆ, ನೈಜಕತೆಗೆ ಹತ್ತಿರವಾದವು ಅಲ್ಲದೆ ಕೀರ್ತನೆಗಳನ್ನು ಯುವಕರು ಅರಿತುಕೊಂಡು ಬಾಳಬೇಕು ಎಂದರು.
ಸಮಾರಂಭಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದೊಂದಿಗೆ, ಕನಕವೇಷಾಧಾರಿ, ತಮಟೆವಾದ್ಯ, ಹುಲಿವೇಷ ಕುಣಿತ, ಮಕ್ಕಳ ವೀರಗಾಸೆ ಕುಣಿತ ನಡೆದವು. ಈ ಸಂದರ್ಭದಲ್ಲಿ ಕನಕ ಗ್ರಾಮೀಣ ಸಂಘದ ಗೌರವಾಧ್ಯಕ್ಷ ಪಿ.ಆರ್.ಗಂಗಾಧರ್, ಸಂಘದ ಖಜಾಂಚಿ ರಾಮು, ಪ್ರಕಾಶ್,  ಈಶ್ವರ್ ಹಾಗೂ ಗ್ರಾಮಸ್ಥರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.


ಸಮಾರಂಭದಲ್ಲಿ ಜಿ.ಪಂ.ಯೋಜನಾ ನಿದರ್ೇಶಕ ಆಂಜನಪ್ಪ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಪುರಸಭಾ ಸದಸ್ಯರಾದ ಸಿ.ಎಂ.ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್,  ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ವಕೀಲ ಸಾದರಹಳ್ಳಿ ಮಲ್ಲಿಕಾಜರ್ುನಯ್ಯ, ಬರಗೂರು ಬಸವರಾಜು, ಹೆಚ್.ಎಂ.ಸುರೇಶ್,  ನಿಂಗರಾಜು, ಇ.ಓ.ಎನ್.ಎಂ.ದಯಾನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳಸುವಲ್ಲಿ ವಿಜ್ಞಾನ ಪ್ರದರ್ಶನಗಳಂತಹ ಚಟುವಟಿಕೆಗಳನ್ನು ಉಪಯುಕ್ತವಾಗಿವೆ
ಚಿಕ್ಕನಾಯಕನಹಳ್ಳಿ,ನ.30 : ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ಮಕ್ಕಳು ತನ್ನದೇ ಆದ ಪ್ರತಿಭೆಗಳನ್ನು ಹೊಂದಿರುತ್ತಾರೆ ಅದನ್ನು ಹೊರ ಪ್ರಪಂಚಕ್ಕೆ ಪರಿಚಯಿಸುವ ಮತ್ತು ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆಯನ್ನು ಬೆಳಸುವಲ್ಲಿ ವಿಜ್ಞಾನ ಪ್ರದರ್ಶನಗಳಂತಹ ಚಟುವಟಿಕೆಗಳನ್ನು ಉಪಯುಕ್ತವಾಗಿವೆ ಎಂದು ಡಿ.ಡಿ.ಪಿ.ಐ ಮೋಹನ್ಕುಮಾರ್ ಹೇಳಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ನಡೆದ ಪ್ರೌಢಶಾಲಾ ವಿದ್ಯಾಥರ್ಿಗಳು ಮತ್ತು ಶಿಕ್ಷಕರಿಗಾಗಿ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪಧರ್ೆಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಮಕ್ಕಳ ಭಾಗವಹಿಸುವ ಸಮಯಕ್ಕೂ ಮುನ್ನ ವೈಜ್ಞಾನಿಕ ರೀತಿಯಲ್ಲಿ ತಯಾರಾಗಿರಬೇಕು ಅದಕ್ಕೆ ಶಿಕ್ಷಕರು, ಪೋಷಕರು ಸಹಕರಿಸಬೇಕಾಗಿದೆ, ಸಕರ್ಾರ ಇಂತಹ ಕಾರ್ಯಕ್ರಮಗಳಿಗೆ ಹಲವು ರೀತಿಯಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸುತ್ತಿದೆ, ಈಗಾಗಲೇ 75ಲಕ್ಷರೂಗಳನ್ನು ವಿಜ್ಞಾನ ಉಪಕರಣ ಹಾಗೂ  ಗ್ರಂಥಾಲಯದಂತ ಜ್ಞಾನಾರ್ಜನೆಯನ್ನು ಉದ್ದೀಪನಗೊಳಿಸುವ ಕಾರ್ಯಗಳಿಗೆ  ಬಿಡುಗಡೆ ಮಾಡಿದೆ.
 ಜಿಲ್ಲೆಯ ಎಲ್ಲಾ ಮಕ್ಕಳು ಈ ಸ್ಪಧರ್ೆಯಲ್ಲಿ ಭಾಗವಹಿಸುವುದು ಅವರ ಮುಂದಿನ ಭವಿಷ್ಯಕ್ಕೆ ಸೂಕ್ತ.   ಮಕ್ಕಳ ಪ್ರತಿಭೆ ಹೊರಹೊಮ್ಮಲು ಸ್ಪಧರ್ೆಗಳು ಬಹುಮುಖ್ಯ ಅದರಲ್ಲಿ ಪ್ರತಿಭಾವಂತರನ್ನು ತೀಪರ್ುಗಾರರು ಗುರುತಿಸಬೇಕು. ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮಾಡಲು ತುಮಕೂರು ಜಿಲ್ಲೆಗೆ ಸೂಚನೆ ಬಂದಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಮಕ್ಕಳ ಶಿಕ್ಷಣಕ್ಕಾಗಿ ಪ್ರತಿಯೊಬ್ಬರು ಸಹಕರಿಸಬೇಕು ಅದಕ್ಕಾಗಿ ನಾನು ನಿರೀಕ್ಷೆ ಮೀರಿ ಸಹಕರಿಸುತ್ತೇನೆ, ಈ ಕಾರ್ಯಕ್ಕೆ ಸಾರ್ವಜನಿಕರ ಸಹಭಾಗಿತ್ವವನ್ನು ಪಡೆಯಬೇಕೆಂದರು.  ಈಗಿನ ಮಕ್ಕಳು ತಮ್ಮ ಊಹೆಗೂ  ನಿಲುಕದಂತಹ ಪ್ರತಿಭಾವಂತರು,  ಅವರಿಗೆ  ಆಸಕ್ತಿ ಇರುವ ಕ್ಷೇತ್ರವನ್ನು ಗುರುತಿಸಿ ಆ ಕಡೆ ನಡೆಯಲು ನಾವು ಅವರಿಗೆ ಮಾರ್ಗತೋರಿಸಬೇಕು  ಎಂದರು ಜಿಲ್ಲೆಯಿಂದ 223 ಶಾಲೆಗಳ ಮಕ್ಕಳು ಈ ವಸ್ತು ಪ್ರದರ್ಶನಕ್ಕೆ ಆಗಮಿಸಿದ್ದು ಸ್ಪಧರ್ಿಗಳಿಗೆ ಶುಭಾಷಯ ಕೋರಿದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕ ಮಕ್ಕಳಿಗೆ ಚಿಕ್ಕಂದಿನಿಂದಲೇ ಅವರ ಪ್ರತಿಭೆ ಗುರುತಿಸಿ ಉತ್ತಮ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಪೋಷಕರ ಹಾಗೂ ಶಿಕ್ಷಕರಲ್ಲಿರುತ್ತದೆ, ಮಕ್ಕಳು ಅವಕಾಶಗಳು ಬಂದಾಗ ತಿರಸ್ಕರಿಸದೆ ಬಳಸಿಕೊಂಡು ತಮ್ಮ ಪ್ರತಿಭೆ ಪ್ರದಶರ್ಿಸಬೇಕು ಎಂದರಲ್ಲದೆ, ಅದಕ್ಕಾಗಿ ಗೆಲ್ಲುವ ಛಲ ಹಾಗೂ ಹಠ ಮುಖ್ಯವಾಗಿರುತ್ತದೆ ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ರೋಟರಿ ಕ್ಲಬ್ ಅಧ್ಯಕ್ಷ ಕೆ.ಆರ್.ಚನ್ನಬಸವಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿಗಳಾದ  ಬಿ.ಜೆ.ಪ್ರಭುಸ್ವಾಮಿ, ನಂಜಯ್ಯ, ಕಾಮಾಕ್ಷಮ್ಮ   ಬಿ.ಇ.ಓಗಳಾದ ಸಾ.ಚಿ.ನಾಗೇಶ್, ಪಿ.ಬಿ.ಬಸವರಾಜು, ರಂಗಧಾಮಯ್ಯ, ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್, ರಾ.ಸ.ನೌ.ಸಂಘದ ತಾಲೂಕು ಅಧ್ಯಕ್ಷ ಅರ್.ಪರಶಿವಮೂತರ್ಿ ಮುಂತಾದವರು ಉಪಸ್ಥಿತರಿದ್ದರು.