Tuesday, June 14, 2016


ಸಕರ್ಾರ ಸೌಲಭ್ಯಗಳು ಬಡವರ ಪಾಲಾಗಲಿ; ಜಿ.ಪಂ.ಸದಸ್ಯ ಕಲ್ಲೇಶ್ 
ಚಿಕ್ಕನಾಯಕನಹಳ್ಳಿ,ಜೂ.14  : ಸಕರ್ಾರದ ಸೌಲಭ್ಯಗಳನ್ನು ಉಳ್ಳವರ ಸ್ವತ್ತಾಗದೇ ಬಡವರ ಪಾಲಾಗುವಂತೆ ಅಧಿಕಾರಿಗಳು ಎಚ್ಚರವಹಿಸಿ ಕೆಲಸ ಮಾಡಿ ಬಡ ರೈತರನ್ನು ಆಥರ್ಿಕವಾಗಿ ಮೇಲೆತ್ತಬೇಕು ಎಂದು ಜಿ.ಪಂ ಸದಸ್ಯ ಕಲ್ಲೇಶ್ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಶ್ರೀ ಮುರುಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ, ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೃಷಿಕರು ಶಿಕ್ಷಣದಿಂದ ವಂಚಿತರಾಗಿದ್ದಾರೆ ಸಕರ್ಾರ ನೀಡುವ ಸೌಲಭ್ಯಗಳ ಮಾಹಿತಿಗಳನ್ನು ಸಹ ಅರಿಯುವಷ್ಟು ಸಮರ್ಥರಲ್ಲ, ಸಕರ್ಾರಿ ಸವಲತ್ತು ಕೇವಲ ಉಳ್ಳವರ ಪಾಲಾಗದಂತೆ ಅಧಿಕಾರಿಗಳು ಹೆಚ್ಚು ನಿಗಾವಹಿಸಿ ಸೂಕ್ತ ಬಡವ ಫಲಾನುಭವಿಯನ್ನು ಪತ್ತೆ ಮಾಡಿ ಸವಲತ್ತು ವಿತರಿಸಿ ಎಂದರು. 
ಸಹಾಯಕ ಕೃಷಿ ನಿದರ್ೇಶಕ ಹೊನ್ನೇದಾಸೇಗೌಡ ಪ್ರಾಸ್ತಾವಿಕ ಮಾತನಾಡಿ,  ರೈತರು ಸಹ ವಿಜ್ಞಾನಿಗಳಿದ್ದಂತೆ ಸಕಾಲಕ್ಕೆ ಸರಿಯಾಗಿ ಭೂಮಿಯ ಫಲವತ್ತತೆಗನುಗಣವಾಗಿ ಬೆಳೆ ಬೆಳೆದರೆ ಲಾಭ ಕಾಣಲು ಸಾಧ್ಯ ಎಂಬುದರ ಬಗ್ಗೆ ರೈತರಿಗೆ ಸಲಹೆ ಅನಿವಾರ್ಯವಾಗಿದ್ದು ಅದಕ್ಕಾಗಿಯೇ ರೈತರ ಬಾಗಿಲಿಗೆ ಕೃಷಿ ಅಭಿಯಾನ ಹೊರಟಿದೆ, ರೈತರು ಕೇವಲ ಏಕ ಬೆಳೆ ಪದ್ದತಿಗೆ ಮಾರು ಹೋಗಬೇಡಿ ಬಹು ಬೆಳೆಗಳ ಬೆಳೆಯಲು ಮಿಶ್ರ ಬೇಸಾಯ ಪದ್ದತಿಯನ್ನು ಅನುಸರಿಸಿ, ಹಸು ಕುರಿ. ರೇಷ್ಮೇ ತೋಟಗಾರಿಕೆ ಕೃಷಿ ತೊಡಗಿಸಿಕೊಂಡು ಸಮಗ್ರ ಕೃಷಿ ಅವಲಂಬಿಸಿದರೆ ರೈತರ ಆಥರ್ಿಕ ಸ್ಥಿತಿ ಕೂಡ ಸುದಾರಿಸುತ್ತದೆ ಎಂದರು.
ಕೃಷಿ ವಿಜ್ಞಾನ ಕೇಂದ್ರದ ಕೀಟನಾಶಕ ತಜ್ಞ ಡಾ.ಶ್ರೀನಿವಾಸ ಮಾತನಾಡಿ, ರೈತರು ಮೊದಲು ಕೃಷಿ ಭೂಮಿಯ ಫಲವತ್ತತೆಯನ್ನರಿಯಬೇಕು, ಇಳುವರಿ ತುಂಬಿದ ಗುಣಮಟ್ಟದ ಹೈಬ್ರಿಡ್ ಬೀಜ ಹೊಂದಿರಬೇಕು, ನೀರಿನ ನಿರ್ವಹಣೆ ಅತಿಮುಖ್ಯವಾಗಿರಬೇಕು, ಲಘು ಪೋಷ್ಠಿಕಾಂಶದ ಮೂಲಕ ಇಳುವರಿ ಹೆಚ್ಚಿಸಿಕೊಳ್ಳುವ ವಿಧಾನಗಳಿಗೆ ಮಾರು ಹೋಗಬೇಕು, ಜನಸಂಖ್ಯೆಗನುಗುಣವಾಗಿ ಭೂಮಿಯ ವಿಸ್ತಾರ ಅಗಲಾರದು ಕೃಷಿ ಭೂಮಿ ಕೂಡ ಕಡಿಮೆ ಆಗಿದ್ದು ಕೇವಲ ಸಾವಯವದ ಮೂಲಕ ಕೃಷಿ ಪ್ರೌವೃತ್ತಿ ಆಗದೆ ರಸಗೊಬ್ಬರ ಸಾವಯವ ಎರಡನ್ನೂ ಒಳಗೊಂಡ ರೀತಿಯ ಸಮಗ್ರ ಕೃಷಿ ಅಳವಡಿಸಿಕೊಂಡರೆ ಮಾತ್ರ ಇಡೀ ದೇಶಕ್ಕೆ ಆಹಾರ ಒದಗಿಸಲು ಸಾಧ್ಯ ಎಂದರು. 
ಸಂವಾದ ಕಾರ್ಯಕ್ರಮದಲ್ಲಿ ಅರಳೀಮರದ ಪಾಳ್ಯದಹಿರಿಯ ರೈತ ರಾಮಲಿಂಗಯ್ಯ, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ, ಸವಿತ, ಶಶಿಧರ,ಎಂ.ಎನ್.ಸುರೇಶ್, ಎ.ಬಿ.ಮಹೇಶ್, ಇಂದ್ರಾಣಿ, ಮುನಿಸ್ವಾಮಿ, ವಿವೇಕಾನಂದ, ಮಲ್ಲಿಕಾಜರ್ುನಯ್ಯ ಮತ್ತಿತರರು ಉಪಸ್ಥಿತರಿದ್ದರು.


ಯೋಗ ದಿನಾಚಾರಣೆ ಕಾರ್ಯಕ್ರಮ 
ಚಿಕ್ಕನಾಯಕನಹಳ್ಳಿ,ಜೂ.14 : ಉಚಿತ ಯೋಗಾಸನ ಶಿಬಿರ ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಇದೇ ಜೂನ್ 15ರ ಬುಧವಾರ ಬೆಳಗ್ಗೆ 6ಕ್ಕೆ ತಾಲ್ಲೂಕಿನ ಶೆಟ್ಟಿಕೆರೆ ಜನತಾ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಜನತಾ ಪ್ರೌಢಶಾಲೆ ಮತ್ತು ಜನತಾ ಯುವ ಕ್ರೀಡಾ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ವೈದ್ಯ ಪ್ರಶಾಂತ್ಕುಮಾರ್ಶೆಟ್ಟಿ ಶಿಬಿರ ಉದ್ಘಾಟಿಸಲಿದ್ದಾರೆ. ಹಿರಿಯ ಶಿಕ್ಷಕ ದಯಾಶಂಕರ್ ಅಧ್ಯಕ್ಷತೆ ವಹಿಸಲಿದ್ದು ಹಾಸನ ಜಿಲ್ಲೆ ದೈ.ಶಿಕ್ಷಣ ಶಿಕ್ಷಕ ಅಧೀಕ್ಷಕ ಹೆಚ್.ಟಿ.ವೆಂಕಟೇಶಮೂತರ್ಿ ಉಪನ್ಯಾಸ ನೀಡಲಿದ್ದಾರೆ.
ಶಿಬಿರವು ಜೂನ್ 15ರಿಂದ ಜುಲೈ 15ರವರೆಗೆ ನಡೆಯಲಿದ್ದು ಶಾಲಾ ಮಕ್ಕಳು, ಪೋಷಕರು, ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿ ಯೋಗಾಭ್ಯಾಸವನ್ನು ಮಾಡಬಹುದು, ಶಿಬಿರವು ಬೆಳಗ್ಗೆ 6ರಿಂದ 7.30ರವರೆಗೆ ನಡೆಯಲಿದ್ದು ಶಿಬಿರಕ್ಕೆ ಯಾವುದೇ ಶುಲ್ಕವಿರುವುದಿಲ್ಲ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆ : ಜೂನ್ 21ರ ಮಂಗಳವಾರ ಬೆಳಗ್ಗೆ 8ಕ್ಕೆ  ಶೆಟ್ಟಿಕೆರೆ ಜನತಾ ಪ್ರೌಢಶಾಲೆ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು ಜಿ.ಪಂ.ಸದಸ್ಯ ಕಲ್ಲೇಶ್ ಉದ್ಘಾಟಿಸಲಿದ್ದಾರೆ. ತಾ.ಪಂ.ಸದಸ್ಯೆ ಜಯಮ್ಮ ಪತಂಜಲಿ ಭಾವಚಿತ್ರ ಅನಾವರಣಗೊಳಿಸಲಿದ್ದಾರೆ. ಶಿಕ್ಷಕ ದಯಾಶಂಕರ್ ಅಧ್ಯಕ್ಷತೆ ವಹಿಸಲಿದ್ದು ಯುವಜನ ಕ್ರೀಡಾ ಯೋಜನಾಧಿಕಾರಿ ಸಿ.ಬಿ.ಲಿಂಗಯ್ಯ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಮುಖ್ಯ ಶಿಕ್ಷಕರುಗಳಾದ ಶ್ಯಾಮ್ಸುಂದರ್, ವನಜಾಕ್ಷಿ, ಸಾವಿತ್ರಮ್ಮ, ಪದ್ಮ ಉಪಸ್ಥಿತರಿರುವರು.

ಬಾಲಕಾಮರ್ಿಕರ ವಿರೋಧಿ ದಿನಾಚಾರಣೆ 
ಚಿಕ್ಕನಾಯಕನಹಳ್ಳಿ,ಜೂ.14 : ಬಾಲಕಾಮರ್ಿಕರ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜೂನ್ 15(ಇಂದು) ರ ಬುಧವಾರ ಮಧ್ಯಾಹ್ನ 2.30ಕ್ಕೆ ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ಸಕರ್ಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ, ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಿವಿಲ್ ನ್ಯಾಯಾಧೀಶರಾದ ಸೋಮನಾಥ್ ಉದ್ಘಾಟಿಸಲಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯಿನಿ ಕಮಲಮ್ಮ, ಸಕರ್ಾರಿ ಅಭಿಯೋಜಕರಾದ ಆರ್.ರವಿಚಂದ್ರ, ಸಿ.ಬಿ.ಸಂತೋಷ್, ವಕೀಲರ ಸಂಘದ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ, ಕಾರ್ಯದಶರ್ಿ ಕೆ.ಎಂ.ಷಡಕ್ಷರಿ ಉಪಸ್ಥಿತರಿರುವರು. ವಕೀಲ ದಿಲೀಪ್ ಬಾಲ ಕಾಮರ್ಿಕ ನಿಷೇಧ ಕಾಯ್ದೆ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.