Wednesday, June 8, 2016

ಸ್ಥಳಾಂತರಗೊಂಡ ವಿಜಯಬ್ಯಾಂಕ್ಗೆ ಉದ್ಘಾಟನೆ 
ಚಿಕ್ಕನಾಯಕನಹಳ್ಳಿ,ಜೂ.08 : 1931ರ ವಿಜಯದಶಮಿ ದಿನದಂದು ಪ್ರಾರಂಭವಾದ ವಿಜಯಬ್ಯಾಂಕ್ ದೇಶಾದ್ಯಂತ 1860ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ ಎಂದು ಬ್ಯಾಂಕಿನ ಸಹಾಯಕ ನಿದರ್ೇಶಕ ಬಿ.ಎಸ್.ರಾಮರಾವ್ ಹೇಳಿದರು.
ಪಟ್ಟಣದ ವಿಜಯಬ್ಯಾಂಕ್ ಶಾಖೆಯ ನೂತನ ಕಟ್ಟಡಕ್ಕೆ ಬುಧವಾರ ಸ್ಥಳಾಂತರಿಸಿದ ಹಿನ್ನಲೆಯಲ್ಲಿ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿ, ವಿಜಯ ಬ್ಯಾಂಕ್ ಒಟ್ಟು ರೂ.2.16 ಲಕ್ಷ ಕೋಟಿ ಮೀರಿ ವ್ಯವಹಾರ ನಡೆಸಿದೆ. ರೂ.1.25 ಲಕ್ಷ ಕೋಟಿ ಠೇವಣಿ ಹೊಂದಿದೆ.ರೂ. 91ಸಾವಿರ ಕೋಟಿ ಸಾಲ ನೀಡಲಾಗಿದೆ ಎಂದರು.
   ಕೃಷಿ, ಆಧ್ಯತಾ ವಲಯಗಳು, ಸಣ್ಣ ಉದ್ಯಮಗಳು, ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗಿದೆ. ರಾಜ್ಯದಲ್ಲಿ 555 ಶಾಖೆಗಳಿವೆ, ತುಮಕೂರು ಜಿಲ್ಲೆಯಲ್ಲಿ 11 ವಿಜಯ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. 11 ಶಾಖೆಗಳಿಂದ ರೂ.333 ಕೋಟಿ ಠೇವಣಿ ಸಂಗ್ರಹವಾಗಿದೆ.ರೂ. 220 ಕೋಟಿ ಸಾಲ ನೀಡಲಾಗಿದೆ. ಕೃಷಿಗೆ  ಹೆಚ್ಚು ಆಧ್ಯತೆ ನೀಡಲಾಗಿದೆ ಎಂದರು. 
ಪ್ರಧಾನಮಂತ್ರಿಗಳ ಜನದನ್ ಯೋಜನೆ ಸೇರಿದಂತೆ ಅನಾಥಾಶ್ರಮ, ಕ್ಯಾನ್ಸರ್ ಆಸ್ಪತ್ರೆ, ಆಂಬುಲೆನ್ಸ್ ಹೀಗೆ ಹತ್ತು ಹಲವು ಸೇವಾ ಕಾರ್ಯಗಳಲ್ಲಿ ವಿಜಯ ಬ್ಯಾಂಕ್ ತೊಡಗಿಸಿಕೊಂಡಿದೆ. ಮಂಡ್ಯ, ಹಾವೇರಿ ಹಾಗೂ ಇಂದೂರ್ಗಳಲ್ಲಿ ಸ್ವ ಉದ್ಯೋಗ ತರಬೇತಿ ಸಂಸ್ಥೆ ಪ್ರಾರಂಭಿಸಿ ನಿರುದ್ಯೋಗಿ ಯುವಕರಿಗೆ ಉದ್ಯೋಗದ ತರಬೇತಿ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೀಜಿನಲ್ ಮ್ಯಾನೇಜರ್ ಬಲ್ಲಾಳ್, ಸಿದ್ದೇಶ್ವರಪತ್ರ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಜಯ ಬ್ಯಾಂಕ್ನ ಮ್ಯಾನೇಜರ್ ಕೃಷ್ಣಮೂತರ್ಿ ಪಂಕಜ್ ನೂತನ ಎಟಿಎಮ್ ಉದ್ಘಾಟಿಸಿದರು.


ತಾಲ್ಲೂಕಿನಲ್ಲಿ ಸುರಿದ ಮಳೆ ಮಾಪನದ ವಿವರ 
ಚಿಕ್ಕನಾಯಕನಹಳ್ಳಿ,ಜೂ.08 : ತಾಲ್ಲೂಕಿನಲ್ಲಿ ಮಂಗಳವಾರ ವಿವಿಧ 7ಕಡೆ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾದ ಮಳೆಯ ವಿವರ.
ಚಿಕ್ಕನಾಯಕನಹಳ್ಳಿ-80.4.ಮಿಮೀ, ಸಿಂಗದಹಳ್ಳಿ-20.4..ಮಿಮೀ, ಶೆಟ್ಟಿಕೆರೆ.10.2. .ಮಿಮೀ, ದೊಡ್ಡ ಎಣ್ಣೆಗೆರೆ 8.4.ಮಿಮೀ, ಮತಿಘಟ್ಟ 8.2.ಮಿಮೀ,, ಬೋರನಕಣಿವೆ ಮಳೆ ದಾಖಲಾಗಿಲ್ಲ, ಹುಳಿಯಾರು.1.2.ಮಿಮೀ ಮಳೆಯಾಗಿದೆ ಇದುವರೆಗೂ ತಾಲ್ಲೂಕಿನಲ್ಲಿ ಸರಿಯಾಗಿ ಮಳೆಯಾಗದೇ ಕುಡಿಯುವ ನೀರಿಗೆ ತೊಂದರೆಯಾಗಿದ್ದು ಮಂಗಳವಾರ ಬಿದ್ದ ಮಳೆಯಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ. ತಾಲ್ಲೂಕಿನ ಸಿಂಗದಹಳ್ಳಿ ದೊಡ್ಡಕೆರೆಗೆ 3ಅಡಿ ನೀರು ಬಂದಿದೆ. ಪಟ್ಟಣದ ಸುತ್ತಮುತ್ತಲಿರುವ ಸಣ್ಣಪುಟ್ಟ ಕಟ್ಟೆಗಳು ತುಂಬಿರುವುದರಿಂದ ದನಕರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಿದೆ.
ಮಂಗಳವಾರ ಸುರಿದ ಮಳೆಗೆ ಕೇದಿಗೆಹಳ್ಳಿ ಬಳಿಯಿರುವ ದಕ್ಕಲಿಗರ ಕಾಲೋನಿಯ ಗುಡಿಸಲುಗಳಿಗೆ ನೀರು ನುಗ್ಗಿ ಇಲ್ಲಿ ವಾಸಿಸುತ್ತಿದ್ದ ಜನರಿಗೆ ತೀವ್ರ ತೊಂದರೆಯಾಗಿತ್ತು.

ಮೊರಾಜರ್ಿ, ಕಿತ್ತೂರು ರಾಣಿ ಪ್ರವೇಶ ವಸತಿ ನಿಲಯಕ್ಕೆ ಅಜರ್ಿ ಆಹ್ವಾನ 
ಚಿಕ್ಕನಾಯಕನಹಳ್ಳಿ,ಜೂ.08 :  7 ಮತ್ತು 8ನೇ ತರಗತಿಯ ಜಿಲ್ಲಾ ಮಟ್ಟದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಅಜರ್ಿ ಆಹ್ಪಾನಿಸಲಾಗಿದೆ ಎಂದು ಮುರಾಜರ್ಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸತೀಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೊರಾಜರ್ಿ  ಹಾಗೂ ಕಿತ್ತೂರರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಅಜರ್ಿ ದೊರೆಯುತ್ತಿದ್ದು ಜೂನ್ 15 ಅಜರ್ಿ ಸಲ್ಲಿಸಲು ಕೊನೆಯ ದಿನ. ಜೂನ್ 19ರಂದು ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.