Monday, January 31, 2011

ಬಡವರ್ಗದ ಜನರಿಗೆ ಉಚಿತ ಕಾನೂನು ನೆರವು ಮಾಹಿತಿ: ಜಿ.ಎಂ.ಶೀನಪ್ಪ
ಚಿಕ್ಕನಾಯಕನಹಳ್ಳಿ,ಜ.31: 50 ಸಾವಿರಕ್ಕಿಂತ ಕಡಿಮೆ ಆದಾಯವಿರುವಂತಹ ಸಾರ್ವಜನಿಕರು ಕಾನೂನು ಅಧಿಕಾರದ ಪ್ರಾಧಿಕಾರಕ್ಕೆ ಅಜರ್ಿ ಸಲ್ಲಿಸಿ ಉಚಿತ ಕಾನೂನು ನೆರವು ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಎಂ. ಸೀನಪ್ಪ ತಿಳಿಸಿದರು.
ನಗರದ ಸಿ.ಡಿ.ಪಿ.ಒ. ಕಛೇರಿ ಆವರಣದಲ್ಲಿ ನಡೆದ ಕೌಟುಂಬಿಕ ಮಹಿಳಾ ಸಂರಕ್ಷಣಾ ಕಾನೂನು ಅರಿವು ಕಾರ್ಯಗಾರವನ್ನು ಉದ್ಗಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ವಿವಾಹ ವಿಚ್ಛೇದನ ಜಾಸ್ತಿಯಾಗುತ್ತಿದೆ ನ್ಯಾಯಾಲಯಕ್ಕೆ ಅಜರ್ಿ ಸಲ್ಲಿಸುವ ಮುಂಚಿತವಾಗಿ ಇಂತಹ ಪ್ರಕರಣಗಳನ್ನು ರಾಜಿ ಸಂಧಾನ ಮುಖಾಂತರ ಬಗೆಹರಿಸಿಕೊಂಡು ಸುಖ ನೆಮ್ಮದಿಯಿಂದ ಬಾಳಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿ.ಡಿ.ಪಿ.ಒ ಅನಿಸ್ ಖೈಸರ್, ಕರುಣೆ ಇರುವ ಕಡೆ ಜೀವನದಲ್ಲಿ ಸ್ವರ್ಗವನ್ನು ಕಾಣಬಹುದಾಗಿದೆ ಎಂದರು. ಭಾಗ್ಯ ಲಕ್ಷ್ಮಿ ಯೋಜನೆಯಲ್ಲಿ ಸಕರ್ಾರದಿಂದ ನಿಗದಿಪಡಿಸಿರುವ ದಾಖಲಾತಿಗಳನ್ನು ಸಕಾಲಕ್ಕೆ ಸಕರ್ಾರಕ್ಕೆ ಸಲ್ಲಿಸಿ ಯೋಜನೆಯ ಸೌಲಭ್ಯಗಳನ್ನು ಪಡೆಯಲು ತಿಳಿಸಿದರಲ್ಲದೆ ಆಧಾರ್ ಯೋಜನೆಯಡಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡಿನಲ್ಲಿರುವ ಠೇವಣಿ ಸಂಖ್ಯೆಯನ್ನು ಪೋಷಕರು ನಮೂದಿ ಮಾಡಿಸದೇ ಇದ್ದಲ್ಲಿ ಯೋಜನೆಯ ಸೌಲಭ್ಯ ವಂಚಿತರಾಗಬೇಕಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎನ್.ಶೀಲಾ, ಎ.ಜಿ.ಶಿಲ್ಪ, ಸಕರ್ಾರಿ ವಕೀಲರಾದ ಆಶಾ ಮಾತನಾಡಿದರು.
ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ವಕೀಲರಾದ ಮಹಾಲಿಂಗಯ್ಯ, ಎನ್.ಎನ್. ಶ್ರೀಧರ್, ಪಿ.ಎಲ್.ಡಿ. ಬ್ಯಾಂಕ್ನ ಅಧ್ಯಕ್ಷ ನಾಗರಾಜು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕತರ್ೆ ಸಾವಿತ್ರಮ್ಮ ಪ್ರಾರ್ಥಸಿ , ವಕೀಲ ಆದಶರ್್ ಸ್ವಾಗತಿಸಿ, ಪರಮೇಶ್ವರಪ್ಪ ನಿರೂಪಿಸಿದರು.

ಗಳಿಕೆ ರಜೆಯನ್ನು ನಗಧೀಕರಿಸಲು ಸಹಕರಿಸಿದ ಬಿ.ಇ.ಓರವರಿಗೆ ಶಿಕ್ಷಕರ ಸಂಘದ ವತಿಯಿಂದ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಜ.31: ತಾಲೂಕಿನ 640ಕ್ಕೂ ಹೆಚ್ಚಿನ ಶಿಕ್ಷಕ ಬಂಧುಗಳಿಗೆ ಪಾರದರ್ಶಕವಾಗಿ ಗಳಿಕೆ ರಜೆಯನ್ನು ನಗದೀಕರಿಸಿಕೊಡಲು ಸಹಕರಿಸಿದ ಬಿ.ಇ.ಓ ಸಾ.ಚಿ.ನಾಗೇಶ್ರವರಿಗೆ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದ್ದ.
ಇದೇ ಸಂದರ್ಭದಲ್ಲಿ ಅಂತರ ಜಿಲ್ಲೆಯಿಂದ ವಗರ್ಾವಣೆಗೊಂಡ ಶಿಕ್ಷಕರಿಗೆ 10.15. ವರ್ಷದ ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡಿದ ಶಿಕ್ಷಣ ಸಚಿವರನ್ನು ಅಬಿನಂದಿಸಿದ್ದಾರೆ.