Saturday, July 30, 2011






ಬಡವರ ಬಗ್ಗೆ ಕಾಳಜಿವಹಿಸುವುದು ಪತ್ರಕರ್ತನ ಧ್ಯೇಯವಾಗಬೇಕು: ಡಾ.ಸ್ವರೂಪ್ಚಿಕ್ಕನಾಯಕನಹಳ್ಳಿ,ಜು.30 : ದೇಶದ ಎಲ್ಲಾ ವ್ಯಕ್ತಿಗೆ ಶಿಕ್ಷಣ, ಆಹಾರ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸುವುದು ಸಕರ್ಾರದ ಕೆಲಸ, ಈ ಕೆಲಸ ಎಷ್ಟು ಪ್ರಮಾಣದಲ್ಲಿ ಅನುಷ್ಠಾನಗೊಂಡಿದೆ ಎಂಬುದನ್ನು ಸಮಾಜಕ್ಕೆ ತಿಳಿಸುವ ಹಾಗೂ ಸ್ವಾಸ್ಥ್ಯ ಸಮಾಜವನ್ನು ನಿಮರ್ಾಣ ಮಾಡುವ ಕೆಲಸವನ್ನು ಪತ್ರಿಕೆ, ಪತ್ರಕರ್ತ ಮಾಡಬೇಕಾದ ಕೆಲಸ ಎಂದು ಸಿದ್ದಾರ್ಥ ಮಾಧ್ಯಮ ಕೇಂದ್ರ ನಿದರ್ೇಶಕ ಡಾ.ಸುಚೇತನ್ ಸ್ವರೂಪ್ ಹೇಳಿದರು. ಪಟ್ಟಣದ ರೋಟರಿ ಬಾಲ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಂಘದ ಕಾಯರ್ಾಲಯದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಕಳ್ಳಸಾಗಾಣಿಕೆ, ವ್ಯಭಿಚಾರ ಹಾಗೂ ಅರಿಯದ ಜನರನ್ನು ಮೋಸದ ಮೂಲಕ ವಂಚಿಸಿ ಬಂಡವಾಳ ಮಾಡುತ್ತಿರುವುದು ಹೆಚ್ಚಾಗಿರುವ ಸಮಾಜದಲ್ಲಿ ಪತ್ರಕರ್ತ ಜಾಗೃತನಾಗರಿಬೇಕು ಎಂದರು. ಈ ವ್ಯವಸ್ಥೆಯಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಾಗಿ ದೇಶದ ಪ್ರಜಾಸತ್ತಾತ್ಮಕತೆ ನಾಶವಾಗುತ್ತಿದೆ ಎಂದು ವಿಶ್ಲೇಷಿಸಿದ ಅವರು, ಪತ್ರಿಕೆ ನಡೆಸುವುದು ಬಹಳ ಕಷ್ಠ ಒಂದು ಪತ್ರಿಕೆಯ ಮುದ್ರಣಗೊಂಡ ಹೊರಬರುವ ಹೊತ್ತಿಗೆ ಹತ್ತು ರೂಗಳಷ್ಟು ವೆಚ್ಚ ತಗುಲಲಿದೆ, ಪತ್ರಿಕೆಯನ್ನು ಜನಸಾಮಾನ್ಯರಿಗೆ ತಲುಪಿಸಲು ಕೇವಲ ಮೂರು ರೂಗಳಿಗೆ ಮಾರಾಟ ಮಾಡಲಾಗುತ್ತದೆ ಉಳಿದ ಹಣವನ್ನು ಪತ್ರಿಕೆಯವರು ಜಾಹಿರಾತಿನಿಂದ ನಷ್ಟ ತುಂಬಬೇಕಾಗಿದೆ, ನಷ್ಟವನ್ನು ತುಂಬಿಕೊಟ್ಟ ಜಾಹೀರಾತುದಾರರ ಹಿತಕ್ಕೆ ತಕ್ಕಂತೆ ಕೆಲವೊಮ್ಮೆ ಪತ್ರಿಕೆ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ನಿಮರ್ಾಣವಾಗಿರುವುದನ್ನು ನಾವು ನೋಡುತ್ತಿದ್ದೇವೆ ಎಂದರು. ಜನಸಾಮಾನ್ಯರು ಪತ್ರಿಕೆಯನ್ನು ಕೊಂಡು ಓದುವ ಮೂಲಕ ಪತ್ರಿಕೆಗೆ ಆಗುವ ನಷ್ಠವನ್ನು ತಪ್ಪಿಸಬೇಕಾಗಿದೆ ಎಂದರಲ್ಲದೆ, ಪತ್ರಕರ್ತನಾಗಲು ಯಾವುದೇ ಪದವಿಯ ಅವಶ್ಯಕತೆಯಿಲ್ಲ ಅವನಿಗೆ ತನ್ನ ಬರವಣಿಗೆಯೆ ಪದವಿ ಎಂದರಲ್ಲದೆ ತನ್ನ ಲೇಖನದ ಮೂಲಕ ಸಮಾಜವನ್ನು ತಿದ್ದುವ ಹಾಗೂ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಬೇಕು ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಪತ್ರಕರ್ತನ ಬರವಣಿಗೆಯು ಕತ್ತಿಗಿಂತ ಹರಿತವಾದದ್ದು ಎಂಬುದನ್ನು ನಾವೆಲ್ಲ ಬಲ್ಲವು, ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ತಮ್ಮ ಬರವಣಿಗೆಯ ಮೂಲಕ ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಬೇಕೆಂದರು, ರಾಜಕಾರಣಿ, ಅಧಿಕಾರಿ ಹಾಗೂ ಕಿಡಿಗೇಡಿಗಳು ಮಾಡುವ ತಪ್ಪುಗಳನ್ನು ಪತ್ರಿಕೆಯವರು ತಮ್ಮ ಬರವಣಿಗೆಯಿಂದ ತಿಳಿಸಬೇಕು ಎಂದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸೊಗಡು ವೆಂಕಟೇಶ್ ಮಾತನಾಡಿ ನಕಲಿ ಪತ್ರಕರ್ತರ ಹಾವಳಿಯನ್ನು ತಪ್ಪಿಸಲು ಸಂಘ ಚಿಂತಿಸುತ್ತಿದ್ದು ಅದಕ್ಕಾಗಿ ಪೋಲಿಸ್ ಇಲಾಖೆ ಪತ್ರಕರ್ತರಿಗೆ ಗುರುತಿನ ಕಾಡರ್್ನ್ನು ಕೆಲವೇ ದಿನಗಳಲ್ಲಿ ನೀಡಲಿದೆ ಎಂದರಲ್ಲದೆ, ಪತ್ರಕರ್ತರಿಗೆ ವಿಮೆ, ಆರೋಗ್ಯ ವಿಮೆ, ನಿವೇಶನ, ಬಸ್ಪಾಸ್ ಸೌಲಭ್ಯವನ್ನು ಸಕರ್ಾರ ನೀಡಬೇಕೆಂದರು. ತಾಲ್ಲೂಕಿನಲ್ಲಿ ಪತ್ರಕರ್ತರ ಸಂಘಕ್ಕೆ ನಿವೇಶನ ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು. ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಕ್ಷಣ ಕ್ಷಣಕ್ಕೂ ಜನಸಾಮಾನ್ಯರಿಗೆ ಮಾಹಿತಿ ನೀಡುವ ಪತ್ರಕರ್ತರು ಬಡವರ ಏಳಿಗೆಗೆ ಶ್ರಮಿಸಬೇಕು ಎಂದರು. ಸಮಾರಂಭದಲ್ಲಿ ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಅಧ್ಯಕ್ಷತೆವಹಿಸಿ ಮಾತನಾಡಿದರು. ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ , ಜಿಲ್ಲಾ ಪತ್ರಕರ್ತರ ಸಂಘಧ ಉಪಾಧ್ಯಕ್ಷ ಚಿ.ನಿ.ಪುರುಷೋತ್ತಮ್, ತಾಲೂಕು ಸಂಘದ ಕಾರ್ಯದಶರ್ಿ ಸಿ.ಎಚ್.ಚಿದಾನಂದ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿದ್ಯಾಥರ್ಿನಿಗಳಾದ ಫ್ಹರಾನಾ, ರೂಪ ಪ್ರಾಥರ್ಿಸಿದರೆ, ಗೋವಿಂದರಾಜು ಸ್ವಾಗತಿಸಿದರು, ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿದರೆ ಆರ್.ಸಿ.ಮಹೇಶ್ ವಂದಿಸಿದರು.
ಎನ್.ಎಫ್.ಜಿ.ಸಿ.ಯಲ್ಲಿ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆಚಿಕ್ಕನಾಯಕನಹಳ್ಳಿ,ಜು.30: 2011-12ನೇ ಸಾಲಿನ ನವೋದಯ ಪ್ರಥಮ ದಜರ್ೆ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಇದೇ ಆಗಸ್ಟ್ 5ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ. ಸಮಾರಂಭವನ್ನು ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ವಿಶ್ರಾಂತ ಜಂಟಿ ನಿದರ್ೇಶಕ ಪ್ರೊ.ಟಿ.ಗಂಗಾಧರಯ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನವೋದಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಂ.ರೇಣಯಕಾರ್ಯ, ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಉಪಸ್ಥಿತರಿರುವರು.

Thursday, July 28, 2011





ತನು ಭತ್ತ ಸೋನಾಮಸೂರಿಗಿಂತ ಉತ್ಕೃಷ್ಟ: ಕೃಷಿ ತಜ್ಞರ ಅಭಿಮತ
ಚಿಕ್ಕನಾಯಕನಹಳ್ಳಿ,ಜು.28 : ಕಡಿಮೆ ಖಚರ್ಿನಲ್ಲಿ ಅಧಿಕ ಇಳುವರಿ ಪಡೆಯಲು ಮಧ್ಯಮಾವಧಿ ತಳಿ ತನು(ಕೆ.ಎಮ್.ಪಿ.101)ವನ್ನು ಬೆಳೆಯಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ವೈ.ಎನ್. ಶಿವಲಿಂಗಯ್ಯ ಸೂಚಿಸಿದರು
ತಾಲ್ಲೂಕಿನ ಹಂದನಕೆರೆ ಹೋಬಳಿಯ ತಾರೀಕಟ್ಟೆ ಗ್ರಾಮದ ವೀರಭದ್ರ ನಿಶಾನಿಯವರ ಜಮೀನಿನಲ್ಲಿ ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರ. ತುಮಕೂರು ಕೃಷಿ ವಿಜ್ಙಾನ ಕೇಂದದ ವತಿಯಿಂದ ನಡೆದ 'ತನು ಭತ್ತ'ದ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು,
ಈ ತಳಿಯು 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವುದಲ್ಲದೇ, ಮುಂಗಾರು ಮತ್ತು ಹಿಂಗಾರಿನಲ್ಲಿ ಬೆಳೆಯಲು ಸೂಕ್ತವಾಗಿದೆ ಎಂದು ತಿಳಿಸಿದರು. ಭತ್ತವು ಸೋನಾ ಮುಸ್ಸೂರಿಯಂತೆ ಉತ್ಕೃಷ್ಟವಾಗಿದ್ದು ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿರುವುದರಿಂದ ರೈತರು ಈ ತಳಿಯನ್ನು ಬೆಳೆಯಬಹುದೆಂದು ತಿಳಿಸಿದರು. ಪ್ರತಿ ಎಕರೆಗೆ 27 ರಿಂದ 28 ಕ್ವಿಂಟಾಲ್ ಧಾನ್ಯವನ್ನು ನಿರೀಕ್ಷಣೆ ಮಾಡಬಹುದಾಗಿದ್ದು ಸುಧಾರಿತ ತಂತ್ರಜ್ಞಾನಗಳಿಂದ ಉತ್ತಮ ಬೀಜ ಸರಿಯಾದ ಕಾಲದಲ್ಲಿ ನಾಟಿ ಸಾವಯವ ಗೊಬ್ಬರ ಬಳಕೆ, ಟ್ರೈ ಕೋಡರ್ಮದಿಂದ ಬೀಜೋಪಚಾರ ನೀರು ನಿರ್ವಹಣೆ ಕಳೆ ನಿರ್ವಹಣೆಯಿಂದ ಹೆಚ್ಚು ಇಳುವರಿ ಪಡೆಯಬಹುದೆಂದು ತಿಳಿಸಿದರು.
ಕೀಟಶಾಸ್ರ್ತಜ್ಞರಾದ ಡಾ. ಶ್ರೀ ನಿವಾಸ ರೆಡ್ಡಿಯವರು ಮಾತನಾಡಿ ಭತ್ತಕ್ಕೆ ಬರುವ ಕೀಟ ಹಾಗೂ ರೋಗಗಳ ಬಗ್ಗೆ ಭತ್ತಕ್ಕೆ ತಗಲುವ ಮಾರಕ ರೋಗವಾದ ಬೆಂಕಿ ರೋಗದ ಲಕ್ಷಣಗಳು ಹಾಗೂ ಅದರ ಸಮಗ್ರ ಕೀಟ ಹತೋಟಿಯ ಬಗ್ಗೆ ಮಾಹಿತಿ ನೀಡಿದರು, ಅಲ್ಲದೇ ಭತ್ತಕ್ಕೆ ಬೀಳುವ ಕೀಟಗಳಾದ ಹಳದಿ ಕಾಂಡ ಕೊರಕ, ಗರಿಸುತ್ತುವ ಹುಳು ಹಾಗೂ ಕೊಳವೆ ಹುಳುವಿನ ಸಮಗ್ರ ಹತೋಟಿಯ ಬಗ್ಗೆ ಉಪನ್ಯಾಸ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ತಾರೇಕಟ್ಟೆ ನಾಗರಾಜು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಬೆಳೆ ಬೆಳೆಯುವಾಗ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು, ಇಲ್ಲದಿದ್ದರೆ ಬೆಳೆಯ ಇಳುವರಿ ಕಡಿಮೆಯಾಗಿ ರೈತರಿಗೆ ಆಥರ್ಿಕವಾಗಿ ನಷ್ಠವುಂಟಾಗುತ್ತದೆ ಎಂದರು. ರೈತರ ಜೀವನ ಬಳಹ ಕಷ್ಟವಾಗಿರುವುದರಿಂದ ಕೇವಲ ಭೂಮಿಯನ್ನು ನಂಬಿಕೊಂಡರೆ ಸಾಲದು ಪಶುಗಳ ಸಾಕಾಣಿಕೆ, ಗುಡಿಕೈಗಾರಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು ರೈತರು ಪ್ರಾಣಿಗಳಿಗೆ, ಜನುವಾರಗಳಿಗೆ ಆದ್ಯತೆ ನೀಡಿ ಅವರ ಗೊಬ್ಬರವನ್ನು ಕೃಷಿಗೆ ಅಳವಡಿಸಿ ತಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಪ್ರಾಣಿತಜ್ಞ ಮಂಜುನಾಥ್, ಕೃಷಿ ಇಲಾಖೆ ರಂಗಯ್ಯ, ತೋಟಗಾರಿಕೆ ಹರೀಶ್ ನಾಯ್ಕ್, ಗ್ರಾಮಪಂಚಾಯ್ತಿ ಸದಸ್ಯ ನಾಗರಾಜು, ವೀರಭದ್ರ ಸ್ವಾಮಿ ನಿಶಾನಿ, ಸಾವಯವ ಕೃಷಿ ನಿದರ್ೇಶಕ ಮಲ್ಲೇಶ್ಯ್ಯ, ಮಾತಾನಾಡಿದರು.
ಸಮಾರಂಭದಲ್ಲಿ ತೇಜಾಸ್ವಿ ಪ್ರಾಥರ್ಿಸಿ, ಮಲ್ಲೇಶ್ಯ್ಯ ಸ್ವಾಗತಿಸಿದರೆ ವೀರಭದ್ರ ಸ್ವಾಮಿ ನಿಶಾನಿ ವಂದಿಸಿದರು.


Wednesday, July 27, 2011




ವಿದ್ಯಾಥರ್ಿಗಳನ್ನು ಪ್ರತಿಭಾನ್ವಿತರನ್ನಾಗಿ ಮಾಡುವುದು ನಮ್ಮೆಲ್ಲರ ಹೊಣೆ : ಸಿ.ಬಿ.ಎಸ್
ಚಿಕ್ಕನಾಯಕನಹಳ್ಳಿ,ಜು.27 : ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದರೆ ಬೇರೆ ವಿದ್ಯಾಥರ್ಿಗಳು ನಾವು ಪ್ರತಿಭಾನ್ವಿತರಾಗಬೇಕೆಂಬ ಹುಮ್ಮಸ್ಸು, ಆತ್ಮವಿಶ್ವಾಸ ಅವರ ಮನಸ್ಸಿನಲ್ಲಿ ಚಿಗುರಿ ಶೈಕ್ಷಣಿಕವಾಗಿ ಮುಂದೆ ಬರುತ್ತಾರೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ಶೈಕ್ಷಣಿಕ ಸಮಾವೇಶ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳು ತಮ್ಮ ಮುಂದಿನ ಉತ್ತಮ ವಿದ್ಯಾಭ್ಯಾಸದ ಭವಿಷ್ಯವನ್ನು ರೂಪಿಸಿಕೊಳ್ಳಲು ಈಗಿನಿಂದಲೇ ಶ್ರಮ ವಹಿಸಬೇಕಾಗಿದೆ ಎಂದ ಅವರು ತಾಲ್ಲೂಕಿನಲ್ಲಿ 150 ಶಾಲೆಗಳ ಕಾಂಪೌಂಡ್ ವ್ಯವಸ್ಥೆ ಸರಿಯಿಲ್ಲದಿದ್ದು ಕಾಂಪೌಂಡ್ ವ್ಯವಸ್ಥೆ ಶೀಘ್ರ ಸರಿಮಾಡಲಾಗುವುದು ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ಪೋಷಕರು ಹೆಣ್ಣು ಮಕ್ಕಳ ಓದಿಗೆ ಕಡಿವಾಣ ಹಾಕುವುದನ್ನು ತಪ್ಪಿಸಬೇಕು, ಹೆಣ್ಣು ಮಕಳೇ ಗಂಡು ಮಕ್ಕಳಿಗಿಂತ ಹೆಚ್ಚು ಅಂಕಗಳಿಸುತ್ತಿದ್ದು ಹೆಣ್ಣು ಮಕ್ಕಳಿಗಾಗಿ ಸಕರ್ಾರ ಹಲವಾರು ರೀತಿಯ ಸೌಲಭ್ಯವನ್ನು ನೀಡುತ್ತಿದೆ ಪೋಷಕರು ಸಕರ್ಾರ ನೀಡುವ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳದೆ ಮಕ್ಕಳ ಅಭಿವೃದ್ದಿಗಾಗಿ ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಡಯಟ್ ಪ್ರಾಂಶುಪಾಲ ಈಶ್ವರಯ್ಯ ಮಾತನಾಡಿ ವಿದ್ಯಾಥರ್ಿಗಳ ಓದಿನಲ್ಲಿ ಸಹನೆ ಅಗತ್ಯವಾಗಿದ್ದು ಸಹನೆ, ಪ್ರೀತಿಯಿಂದಲೇ ಯಾವ ಸಾಧನೆಯನ್ನಾದರೂ ಮಾಡಬಹುದಾಗಿದ್ದು ತಮ್ಮ ಸಾಧನೆಗೆ ಶ್ರಮಿಸಿದ ಎಲ್ಲರನ್ನು ನೆನಪಿಸಿಕೊಳ್ಳುವುದು ಉತ್ತಮ ಕ್ರಿಯಾಶೀಲವಾಗಿದೆ ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿದರು.
ಸಮಾರಂಭದಲ್ಲಿ ತಾಲ್ಲೂಕಿಗೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಕೆ.ಎಸ್.ಹರೀಶ್, ಎಂ.ಮೇಘನರವರನ್ನು ಹಾಗೂ ತಾಲ್ಲೂಕಿನ ಎಲ್ಲಾ ಪ್ರೌಡಶಾಲೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾಥರ್ಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಬೆಳ್ಳಿಪದಕದೊಂದಿಗೆ ಪುರಸ್ಕರಿಸಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಉಪಾಧ್ಯಕ್ಷ ರವಿ(ಮೈನ್ಸ್), ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಜಿ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಇ.ಓ ಎನ್.ಎಂ.ದಯಾನಂದ್, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹಾಲಿಂಗಯ್ಯ ನಿರೂಪಿಸಿದರೆ, ಗೋವಿಂದರಾಜು ವಂದಿಸಿದರು.
ಮಾನಸಿಕ ಬಲಕ್ಕೆ ಶಿಕ್ಷಣದ ಅಗತ್ಯ
ಚಿಕ್ಕನಾಯಕನಹಳ್ಳಿ,ಜು.27 : ಶಿಕ್ಷಣದಿಂದ ಬುದ್ದಿ ವಿಕಾಗೊಂಡು ಚಾರಿತ್ರ್ಯದ ಮೂಲಕ ಮಾನಸಿಕ ಬಲ ಹೆಚ್ಚಾಗಬೇಕು ಆಗ ಮಾತ್ರ ಶಿಕ್ಷಣದ ಅಧ್ಯಯನ ಸಾರ್ಥಕವಾಗುತ್ತದೆ ಎಂದು ತುಮಕೂರಿನ ಶ್ರೀ ವಿರೇಶಾನಂದ ರಾಮಕೃಷ್ಣ ಮಠದ ವೀರೇಶಾನಂದ ಸರಸ್ವತಿಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರೌಢಶಾಲಾ ಕನ್ನಡ ಭಾಷಾ ಬೋಧಕರ ನಾಲ್ಕನೇ ಶೈಕ್ಷಣಿಕ ಸಮಾವೇಶದ ದಿವ್ಯಸಾನಿದ್ಯ ವಹಿಸಿ ಮಾತನಾಡಿದ ಅವರು ಶಿಕ್ಷಕರು ನೈತಿಕ ಜಾಗೃತಿಯಿಂದ, ಸನ್ನಡತೆಯಿಂದ ಸಮಾಜದಲ್ಲಿ ಗುರುತರ ಜವಾಬ್ದಾರಿ ನಿರ್ವಹಿಸಬೇಕು, ಶಿಕ್ಷಕರನ್ನು ನಂಬಿ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವರು ಕೇವಲ ಅಂಕ ತರಿಸುವ ಶಿಕ್ಷಕರಾಗದೆ ಸಮಾಜದಲ್ಲಿ ಒಳ್ಳೆಯ ಸತ್ಪ್ರಜೆಗಳನ್ನು ರೂಪಿಸುವುದು ಶಿಕ್ಷಕರ ಕರ್ತವ್ಯವಾಗಿದೆ, ಪ್ರಜಾಪ್ರಭುತ್ವದ ಅಸ್ತಿತ್ವ ಉಳಿಯಬೇಕಾದರೆ ವಿದ್ಯಾಥರ್ಿಗಳು ಸಕರ್ಾರಿ ಶಾಲೆಗೆ ಬರುವಂತಾಗಬೇಕು ಸಕರ್ಾರಿ ಮೂಲಭೂತ ಸೌಲಭ್ಯವಿರುವ ಗ್ರಂಥಾಲಯ, ವಿಜ್ಞಾನೋಪಕರಣ ಬೋಧನೋಪಕರಣಗಳು ಮತ್ತು ಶಾಲಾ ಪರಿಸರ ಖಾಸಗಿ ಶಾಲೆಗಿಂತ ಸಕರ್ಾರಿ ಶಾಲೆಗಳಲ್ಲಿ ಉತ್ತಮವಾಗಿದೆ ಜವಬ್ದಾರಿಯುತ ಯುವಕ ಪಡೆಯನ್ನು ರೂಪಿಸುವಲ್ಲಿ ಶಿಕ್ಷಣರಂಗದ ಪಾತ್ರ ಮಹತ್ವದಾದುದು ಎಂದು ವಿವರಿಸಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಕರು ಬೋಧನೆಯವಧಿಯಲ್ಲಿ ಹೊಸತನ ರೊಪಿಸಿ ಸಂಶೋಧಕರಾಗಬೇಕು, ಶಿಕ್ಷಣವನ್ನು ಅಥರ್ೈಸಿಕೊಂಡು ಬೋಧಿಸುವ ಶಿಕ್ಷಕ ಅತ್ಯುತ್ತಮ ಶಿಕ್ಷಕ, ಶಿಕ್ಷಕರು ಯಾವಾಗಲೂ ಅಧ್ಯಯನ ಶೀಲರಾಗಬೇಕು ಮಕ್ಕಳಿಗೆ ವಿಮಷರ್ೆ,ವಿಶ್ಲೇಷಣೆ,ಪ್ರಶ್ನೆ ಮಾಡುವುದನ್ನು ಕಲಿಸಬೇಕು, ಅವರ ಬುದ್ದಿಯನ್ನು ಚುರುಕು ಮಾಡಿ ಸಾಮಥ್ರ್ಯದಲ್ಲಿ ಶಕ್ತಿಶಾಲಿಯನ್ನಾಗಿ ರೂಪಿಸಿ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ಸಕರ್ಾರಿ ಪ್ರೌಢಶಾಲೆ ಜೆ.ಸಿ. ಪುರಕ್ಕೆ ನಾಲ್ಕ ಹೋಲಿಗೆ ಯಂತ್ರ ಕೊಡಿಗೆಯಾಗಿ ನೀಡಿಲಾಯಿತು.
ಸಮಾರಂಭದಲ್ಲಿ ತುಮಕೂರು ದಕ್ಷಿಣ ಜಿಲ್ಲಾ ಪ್ರೌಢಶಾಲಾ ಕನ್ನಡ ಭಾಷಾ ಬೋದಕರ ಸಂಘದ ಅಧ್ಯಕ್ಷರಾದ ಮಾದಪುರ ಶಿವಪ್ಪನವರು ಮತ್ತು ಚಿ.ನಾ.ಹಳ್ಳಿ ತಾಲ್ಲೋಕ್ ಪ್ರೌಢಶಾಲಾ ಕನ್ನಡ ಭಾಷಾ ಬೋಧಕ ಸಂಘದ ಅಧ್ಯಕ್ಷರಾದ ಗೋವಿಂದರಾಜುರವರು ಮಾತನಾಡಿದರು
ಈ ಸಂದರ್ಭದಲ್ಲಿ ನಿವೃತ್ತ, ವಗರ್ಾಯುತ, ಹಾಗೂ ಮುಂಬಡ್ತಿ ಪಡೆದ ಕನ್ನಡ ಶಿಕ್ಷಕರನ್ನು, ಶೇ100 ರಷ್ಟು ಫಲಿತಾಂಶ ತಂದ ಶಿಕ್ಷಕರನ್ನು ಮತ್ತು ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ನಿರ್ಮಲ ಸ್ವಾಗತಿಸಿ ಎಲ್. ರೇವಣ್ಣ ವಂದಿಸಿ ಹೆಚ್.ಆರ್..ರೇಖಾ ನಿರೂಪಿಸಿದರು.

Saturday, July 23, 2011



ಮಂಡಲ ಬಿ.ಜೆ.ಪಿ.ಯಲ್ಲಿರುವ ಗೊಂದಲ ನಿವಾರಣೆಯಾಗಲಿ: ಮೈಸೂರಪ್ಪ
ಚಿಕ್ಕನಾಯಕನಹಳ್ಳಿ,ಜು.19 : ಮಂಡಲ ಬಿ.ಜೆ.ಪಿ.ಪಕ್ಷ, ಕಾರ್ಯಕರ್ತರನ್ನು ನಿರ್ಲಕ್ಷಿಸುತ್ತಿದೆ ಇದರಿಂದ ಪಕ್ಷದ ಸಂಘಟನೆ ದುರ್ಬಲವಾಗುತ್ತಿದೆ ಎಂದು ಮಂಡಲ ಬಿ.ಜೆ.ಪಿ. ಉಪಾಧ್ಯಕ್ಷ ಎಂ.ಎಸ್.ಮೈಸೂರಪ್ಪ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ಮಾಡಿ ತಾಲ್ಲೂಕು ಪಂಚಾಯಿತಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ, ಆದರೂ ಗೆದ್ದಂತಹ ಜನಪ್ರತಿನಿಧಿಗಳನ್ನು ಕರೆದು ಅಭಿನಂದಿಸುವ ಕನಿಷ್ಠ ಸೌಜನ್ಯವು ಪಕ್ಷದ ಮುಖಂಡರಿಗಿಲ್ಲ ಎಂದರು.
ತಾಲ್ಲೂಕಿಗೆ ನೀರಾವರಿ ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲು ತಾಲ್ಲೂಕು ಸಮಿತಿ ಸಭೆ ಕರೆದು ನಿಶ್ಚಯ ಮಾಡಿ ಪಕ್ಷದ ವತಿಯಿಂದ ನಿಯೋಗ ಕರೆದೊಯ್ಯಬೇಕಾಗಿತ್ತು, ಆದರೆ ತಾಲ್ಲೂಕು ಅಧ್ಯಕ್ಷರು ಪಕ್ಷಪಾತ ಧೋರಣೆಯಿಂದ ತಮಗೆ ಬೇಕಾದವರನ್ನು ಕರೆದುಕೊಂಡು ಮುಖ್ಯಮಂತ್ರಿಗಳ ಭೇಟಿಗೆ ಹೋಗಿದ್ದಾರೆ ಎಂದು ಆರೋಪಿಸಿರುವ ಅವರು ತಾಲ್ಲೂಕಿಗೆ ಮಂಜೂರಾಗಿರುವ ನೀರಾವರಿ ಯೋಜನೆಯು ಕ್ಷೇತ್ರದ ಕಾರ್ಯಕರ್ತರಿಗೆ ಹರ್ಷ ತಂದಿದೆ, ವಿಶೇಷವಾಗಿ ಶೆಟ್ಟಿಕೆರೆ ಹೋಬಳಿ ಕಾರ್ಯಕರ್ತರ ಪಕ್ಷ ಸಂಘಟನೆಗೆ ಹೆಚ್ಚು ಉತ್ಸಾಹತಂದಿದೆ ಎಂದಿದ್ದಾರೆ.
ಗೋಷ್ಠಿಯಲ್ಲಿ ಜಿ.ಪಂ,ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯ ರಮೇಶ್ಕುಮಾರ್, ಬೂತ್ ಕಮಿಟಿ ಅಧ್ಯಕ್ಷ ಶಂಕರಪ್ಪ, ಪ್ರಭು, ಮಹೇಶ್, ಶಿವಶಂಕರ್, ನಾಗರಾಜು ಉಪಸ್ಥಿತರಿದ್ದರು.
ತಾಲೂಕಿನಲ್ಲಿ ಕಾಂಗ್ರೆಸ್ ಸಂಘಟಿಸುವಂತಹ ಅಬ್ಯಾಥರ್ಿಯನ್ನು ಹುಡುಕುತ್ತಿದ್ದೇವೆ: ಕೆ.ಎನ್.ಆರ್.
ಚಿಕ್ಕನಾಯಕನಹಳ್ಳಿ,ಜು.23 : ತಾಲ್ಲೂಕಿನಲ್ಲಿ ಪಕ್ಷ ಸಂಘಟಿಸುವಂತಹ ಚಾಕಚಕ್ಯತೆ ಇರುವ ಅಭ್ಯಥರ್ಿಯನ್ನು ಹುಡುಕುತ್ತಿದ್ದೇವೆ ಎಂದರಲ್ಲದೆ, ಕಾಂಗ್ರೇಸ್ ನಡೆಗೆ ಜನರ ಕಡೆಗೆ ಕಾರ್ಯಕ್ರಮವನ್ನು ತಾಲ್ಲೂಕಿನಲ್ಲಿ ಆಗಸ್ಟ್ 15ರೊಳಗೆ ನಡೆಯಲಿದ್ದು ಯುವ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡ ಹಾಗೂ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಸಂಘಟಿಸುವ ಸಲುವಾಗಿ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಗ್ರಾಮೀಣ ಮಟ್ಟದಲ್ಲಿ ನಮ್ಮ ಪಕ್ಷವನ್ನು ಈ ನಡಿಗೆ ಬಲಿಷ್ಠಗೊಳಿಸುತ್ತಿದ್ದು ಜಿಲ್ಲೆಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ರವರು ನಮಗೆ ಜವಾಬ್ದಾರಿ ವಹಿಸಿದ್ದಾರೆ ಎಂದ ಅವರು, ಈಗಾಗಲೇ ಜಿಲ್ಲೆಯಲ್ಲಿ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಮಧುಗಿರಿ, ತುರುವೇಕೆರೆ, ಕುಣಿಗಲ್, ತಿಪಟೂರು ತಾಲ್ಲೂಕುಗಳಲ್ಲ ಕಾರ್ಯಕ್ರಮ ಯಶಸ್ವಿಯಾಗಿದೆ ತಾಲ್ಲೂಕಿನಲ್ಲಿ ಆಗಸ್ಟ್ 15ರೊಳಗೆ ಕಾರ್ಯಕ್ರಮ ನಡೆಯಲಿದ್ದು
ಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಬ್ಲಾಕ್ ಸಮಿತಿ ಅಧ್ಯಕ್ಷ ಸಿ.ಬಸವರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ ಉಪಸ್ಥಿತರಿದ್ದರು.

Friday, July 22, 2011



ಸ್ತ್ರೀಶಕ್ತಿ ಹಾಗೂ ಸ್ವಸಹಾಯಗಳಿಗೆ 50 ಕೋಟಿ ಸಾಲ ವಿತರಣೆ: ಕೆ.ಎನ್.ಆರ್.
ಚಿಕ್ಕನಾಯಕನಹಳ್ಳಿ,ಜು.22 : ಜಿಲ್ಲೆಯಾದ್ಯಂತ ಹಲವು ಸ್ತ್ರೀ ಶಕ್ತಿ ಸಂಘಗಳಿಗೆ, ಸ್ವಸಹಾಯ ಸಂಘಗಳಿಗೆ ಸುಮಾರು 40ರಿಂದ 50ಕೋಟಿವರೆಗೆ ಡಿ.ಸಿ.ಸಿ ಬ್ಯಾಂಕ್ನಿಂದ ಸಾಲ ಸೌಲಭ್ಯ ನೀಡಿರುವುದಾಗಿ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದಲ್ಲಿ ನಡೆದ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಸಾಲ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಕಾರಿ ಸಂಘಗಳ, ಗ್ರಾಮೀಣ ಮಹಿಳೆಯರ ಸಬಲೀಕರಣವನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕಿನಿಂದ ಸಾಲ ಸೌಲಭ್ಯ ನೀಡುತ್ತಿದ್ದೇವೆ, ಬ್ಯಾಂಕ್ ಹೆಚ್ಚಾಗಿ ಮಹಿಳೆಯರ ಮೇಲಿನ ನಂಬಿಕೆಯಿಂದ ಸಾಲ ನೀಡುತ್ತಿದೆ, ಮಹಿಳೆಯರ ಆಥರ್ಿಕ ಅಭಿವೃದ್ದಿಗೋಸ್ಕರ ಬ್ಯಾಂಕ್ ಶೇ.4ರಷ್ಟು ಬಡ್ಡಿಗೆ ಸಾಲ ನೀಡುತ್ತಿದ್ದು ಸಾಲ ಪಡೆದವರು ಉಳಿತಾಯದ ಮನೋಭಾವನೆಯನ್ನು ಹೊಂದುವುದರ ಜೊತೆಗೆ ಅದೇ ರೀತಿ ಸಾಲ ಮರುಪಾವತಿ ಮಾಡಬೇಕೆಂದು ಸಲಹೆ ನೀಡಿದರು.
ಕೇಂದ್ರದ ನಬಾಡರ್್ನ ನಿಯಮದಂತೆ ಪ್ರಥಮ ಬಾರಿಗೆ ಸಾಲ ಪಡೆದ ವ್ಯಕ್ತಿಯು ಶೀಘ್ರವಾಗಿ ಸಾಲ ಮರುಪಾವತಿ ಮಾಡಿದರೆ ಎರಡನೇ ಬಾರಿ ದುಪ್ಪಟ್ಟು, ಮೂರನೇ ಬಾರಿ ಮೂರರಷ್ಟು ಸಾಲವನ್ನು ನೀಡವ ನಿಯಮವಿದ್ದು ಸಾಲ ಪಡೆದ ವ್ಯಕ್ತಿಯು ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದರೆ ಅಂತಹವರಿಗೆ ಈ ನಿಯಮ ಅಳವಡಿಕೆಯಾಗಲಿದೆ ಎಂದರಲ್ಲದೆ ಮಧುಗಿರಿ ತಾಲ್ಲೂಕಿಗೆ ಸಾಲ ಸೌಲಭ್ಯದಲ್ಲಿ ಪ್ರೋತ್ಸಾಹಿಸಿದಂತೆ ಚಿ.ನಾ.ಹಳ್ಳಿ ತಾಲ್ಲೂಕಿಗೆ ಜೆ.ಸಿ.ಮಾಧುಸ್ವಾಮಿಯವರಿಗೋಸ್ಕರವಾದರೂ ಸಾಲವನ್ನು ಹೆಚ್ಚಾಗಿ ನೀಡುತ್ತಾ ಬಡವರ ಆಥರ್ಿಕ ನೆರವಿಗ ಆಂದೋಲನ ಕೈಗೊಳ್ಳಲಿದ್ದೇವೆ ಎಂದರು.
ತಾವು ಸದೃಡವಾಗಲು ಮತ್ತೊಬ್ಬರ ಬಳಿ ಹಣಕ್ಕಾಗಿ ಪರದಾಡುವ ಬಡವರಿಗೆ ಬ್ಯಾಂಕ್ ಸಾಲ ಸೌಲಭ್ಯ ನೀಡಿ ನೆರವಾಗಲಿದೆ, ಅಲ್ಲದೆ ವ್ಯವಸಾಯೇತರ ಕಾರ್ಯಗಳಿಗೂ ಬ್ಯಾಂಕ್ ಸಾಲ ನೀಡುತ್ತಿದ್ದು ತಾಲ್ಲೂಕಿನಲ್ಲಿ ಹೈನುಗಾರಿಕೆಗೆ ಹೆಚ್ಚು ಅವಕಾಶವಿದೆ ಎಂದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಸಂಘ ಸಂಸ್ಥೆಗಳ ಸದಸ್ಯರು ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ಅಭಿವೃದ್ದಿ ಸಾಧ್ಯವಾಗುವುದು ಎಂದರಲ್ಲದೆ, ಈಗಿನ ಕಾಲಮಾನಕ್ಕೆ ತಕ್ಕಂತೆ ಮಹಿಳೆಯರು ಮುಂದೆ ಬಂದು ಆಥರ್ಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಸಬಲೀಕರಣ ಹೊಂದಬೇಕಾಗಿದೆ ಎಂದರು. ಜಿಲ್ಲಾ ಬ್ಯಾಂಕಿನಿಂದ ಸಾಲ ಪಡೆದವರು ತಮ್ಮ ಹಲವು ಸಮಸ್ಯೆಗಳನ್ನು ನಿವಾರಿಸಿ ನೆರವು ಪಡೆದುಕೊಂಡಿದ್ದಾರೆ ತಮ್ಮ ಅಭಿವೃದ್ದಿ ಕಾರ್ಯಗಳಿಗೆ ಮುಂದಾಗಿ ಸಂಘ ಸಂಸ್ಥೆಗಳಿಗೆ ಜಿಲ್ಲಾ ಬ್ಯಾಂಕ್ ನೀಡುವ ಸಾಲವನ್ನು ಪಡೆದು ಉತ್ತಮ ಕಾರ್ಯಗಳಿಗೆ ಬಳಸಿಕೊಂಡು ಸಾಲವನ್ನು ಮರುಪಾವತಿ ಮಾಡಬೇಕು ಹಾಗೂ ಮಹಿಳೆಯರು ಚೀಟಿ ಮಾಡುವುದನ್ನು ಬಿಡಬೇಕು ಎಂದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಜಿಲ್ಲಾ ಬ್ಯಾಂಕ್ ತಾಲ್ಲೂಕಿನ ಎಲ್ಲಾ ಕೃಷಿ ಅವಲಂಬಿತ ಸಂಘ ಸಂಸ್ಥೆಗಳಿಗೆ ಸಾಲ ನೀಡಿದ್ದು ಕನಿಷ್ಠ 5 ಲಕ್ಷದ ವರೆಗೆ ಸಂಘಗಳಿಗೆ ಸಾಲ ವಿತರಣೆ ಮಾಡಿದೆ, ಜಿಲ್ಲೆಯಾದ್ಯಂತ ಇನ್ನೂ ಹೆಚ್ಚಿನ ಸಾಲ ವಿತರಣೆ ಮಾಡಲಿದ್ದೇವೆ ಎಂದ ಅವರು ಜೆ.ಸಿ.ಮಾಧುಸ್ವಾಮಿ ಹಾಗೂ ಕೆ.ಎನ್.ರಾಜಣ್ಣನವರ ಆಲೋಚನೆಗಳು ಒಂದೇ ಅವರಿಂದ ಜಿಲ್ಲೆ ಉತ್ತಮ ಅಭಿವೃದ್ದಿಯಾಗಲಿದೆ ಎಂದರು.
ಸಮಾರಂಭದಲ್ಲಿ ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್.ಪಿ.ರವಿಶಂಕರ್, ಕಾಂತರಾಜು, ದಯಾನಂದ್ , ಪಾರ್ವತಮ್ಮ, ಜಿ.ಎಸ್.ಕುಶಲ ಮುಂತಾದವರಿದ್ದರು.
ಹೇಮೆ ಹರಿಯಲು ಹೋರಾಡಿದ ಸಂಘ ಸಂಸ್ಥೆಗಳಿಗೆ ಅಭಿನಂದನೆ: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಜು.22: ಹೇಮಾವತಿ ನಾಲೆಯಿಂದ ಕುಡಿಯುವ ನೀರಿಗಾಗಿ ತಾಲೂಕಿನ 26 ಕೆರೆಗಳ ನೀರು ಹಾಯಿಸಲು ಸಕರ್ಾರ ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಹಲವು ಸಂಘ ಸಂಸ್ಥೆಗಳು, ಹೋರಾಟಗಾರರು ಹಾಗೂ ಮಠಾಧೀಶರ ಪರವಾಗಿ ಸಕರ್ಾರದ ನೀರಾವರಿ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಅಭಿನಂದನೆ ಸಲ್ಲಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಸಂಘ, ಕ.ರ.ವೇ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಮಾತನಾಡಿ, ಸಕರ್ಾರ ಹೇಮಾವತಿ ನಾಲೆಯಿಂದ 0.80 ಟಿ.ಎಂ.ಸಿ.ನೀರನ್ನು ತಾಲೂಕಿನ ಕೆರೆಗಳಿಗೆ ನೀರು ಹರಿಸಲು ತೀಮರ್ಾನಿಸಿದ್ದು, ಈ ಕಾಮಗಾರಿ ಕೈಗೆತ್ತಿಕೊಳ್ಳಲು 102 ಕೋಟಿ ರೂಗಳ ಮಂಜೂರಾತಿ ಆದೇಶವನ್ನು ನೀಡಿದೆ. ಇದರಿಂದಾಗಿ ತಾಲೂಕಿನ 22 ಕೆರೆಗಳಿಗೆ ಗುರುತ್ವಾಕರ್ಷಣ ಬಲದಲ್ಲಿ ನೀರು ಹರಿಯಲಿದ್ದು, ಉಳಿದ ನಾಲ್ಕು ಕೆರೆಗಳಾದ ನಡುವನಹಳ್ಳಿ, ಜೆ.ಸಿ.ಪುರ, ಗೋಡೆಕೆರೆ ಹಾಗೂ ಚಿಕ್ಕನಾಯಕನಹಳ್ಳಿ ಪಟ್ಟಣದ ಕೆರೆಗೆ ಏತ ನೀರಾವರಿ ಮೂಲಕ ನೀರು ಹರಿಸಲು ತೀಮರ್ಾನಿಸಿರುವುದು ಸಂತೋಷದಾಯಕ ಕಾರ್ಯ ಎಂದರಲ್ಲದೆ ತಾಲೂಕಿನ ಜನತೆಯ ಬಹು ದಿನಗಳ ಆಸೆ ಈಡೇರಿದಂತಾಗಿದೆ ಎಂದರು. ಕುಡಿಯುವ ನೀರಿಗಾಗಿ ತಾಲೂಕಿನಲ್ಲಿ ಕಳೆದ 2006ರಿಂದ ವಿವಿಧ ರೀತಿಯ ಹೋರಾಟಗಳು ಹಾಗೂ ಈ ಭಾಗದ ಮಠಾಧೀಶ್ವರರ ನೈತಿಕ ಬೆಂಬಲದ ಫಲವಾಗಿ ಈ ಯೋಜನೆಗೆ ಸಕರ್ಾರ ಅನುಮೋದನೆ ನೀಡಿದೆ ಎಂದರು.
ರೈತ ಸಂಘದ ಕೆಂಕೆರೆ ಸತೀಶ್ ಮಾತನಾಡಿ, ಬೋರನ ಕಣಿವೆ ಜಲಾಶಯ ಹೊರತುಪಡಿಸಿ 22 ಕೆರೆಗಳಿಗೆ ಮಾತ್ರ ಸಕರ್ಾರ ನೀರು ಹರಿಸಲು ಒಪ್ಪಿಗೆ ನೀಡಿದೆ, ಇದರಿಂದಾಗಿ ನಮ್ಮ ಹೋರಾಟ ಇನ್ನು ಮುಂದೆ ಸಾಗಬೇಕಾಗಿದೆ, ನಮ್ಮ ಹೋರಾಟವಿರುವುದು ಬೋರನಕಣಿವೆ ಜಲಾಶಯಕ್ಕೆ ನೀರು ತರುವುದೇ ನಮ್ಮ ಅಂತಿಮ ಗುರಿ ಎಂದರು.
ಹುಳಿಯಾರಿನಲ್ಲಿ ಸುಮಾರು 2 ತಿಂಗಳ ಕಾಲ ನಡೆಸಿದ ಧರಣಿಗೆ ಬೆಂಬಲಿಸಿದ 63 ಸಂಘಟನೆಗಳಿಗೆ ಹಾಗೂ ತುಮಕೂರಿನ ಹೃದ್ರೋಗ ತಜ್ಞ ಜಿ.ಪರಮೇಶ್ವರಪ್ಪ ನವರ ಮಾರ್ಗದರ್ಶನವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ನಾವು ಹುಳಿಯಾರಿನಲ್ಲಿ ನಡೆಸಿದ ಧರಣಿ ಸತ್ಯಾಗ್ರಹದ ಸಂದರ್ಭದಲ್ಲಿ ನಮ್ಮನ್ನು ಭೇಟಿ ಮಾಡಿದ್ದ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ಕುಮಾರ್, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ರವರು ಅಂದು ನೀಡಿ ಹೋದ ಭರವಸೆಯನ್ನು ಭಾಗಶಃ ಪೂರೈಸಿದ್ದಾರೆ ಎಂದರು.
ಈ ಯೋಜನೆಗೆ ಅನುಮೋದನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ, ಈಗಿನ ಉಸ್ತುವಾರಿ ಸಚಿವ ವಿ.ಸೋಮಣ್ಣನವರನ್ನು ತಾಲೂಕಿನ ಜನತೆಯ ಪರವಾಗಿ ಅಭಿನಂದಿಸಿದರು.
ಗೋಷ್ಠಿಯಲ್ಲಿ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಪಂ.ಉಪಾಧ್ಯಕ್ಷೆ ಬೀಬಿ ಫಾತಿಮಾ, ಪುರಸಭಾ ಉಪಾಧ್ಯಕ್ಷ ರವಿ(ಮೈನ್ಸ್).ತಾ.ಪಂ. ಸದಸ್ಯರುಗಳಾದ ಲತಾ ವಿಶ್ವನಾಥ್, ಚೇತನ ಗಂಗಾಧರಯ್ಯ, ಹೇಮಾವತಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜ್, ಪುರಸಭಾ ಸದಸ್ಯರುಗಳಾದ ಸಿ.ಎಸ್.ರಮೇಶ್, ರಾಜಣ್ಣ, ಸಿ.ಟಿ.ವರದರಾಜು, ಕೃಷ್ಣಮೂತರ್ಿ, ಎಂ.ಎನ್.ಸುರೇಶ್, ಜೆ.ಡಿ.ಎಸ್. ಕಾರ್ಯಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ, ಕ.ರ.ವೇ. ಅಧ್ಯಕ್ಷ ಸಿ.ಟಿ.ಗುರುಮೂತರ್ಿ ರುದ್ರೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.


Wednesday, July 20, 2011




ವಿಧವಾ ವೇತನ ಸೇರಿದಂತೆ ಎಲ್ಲಾ ಸಕರ್ಾರಿ ಪಿಂಚಣಿಗಳನ್ನು ಬ್ಯಾಂಕ್ ಖಾತೆಗೆ ಜಮಾಯಿಸಿ
ಚಿಕ್ಕನಾಯಕನಹಳ್ಳಿ,ಜು.20 : ವಿಧವಾ ವೇತನಾ, ಅಂಗವಿಕಲರ ವೇತನ ಸೇರಿದಂತೆ ಸಕರ್ಾರ ನೀಡುವ ಪಿಂಚಣಿಯ ಹಣವನ್ನು ಪ್ರತಿ ಫಲನಾಭವಿಯು ಸಕರ್ಾರದಿಂದ ನೇರಪಡೆಯುವಂತಾಗಲು ಬ್ಯಾಂಕ್ ಖಾತೆಗಳ ಮೂಲಕ ಪಡೆಯುವಂತಾಗಲು ಅಧಿಕಾರಿಗಳು ನೆರವಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಇಲಾಖಾ ಪ್ರಗತಿಯ ಬಗ್ಗೆ ಚಚರ್ಿಸಿದ ಅವರು ಸಕರ್ಾರದಿಂದ ಪಿಂಚಣಿ ಸೌಲಭ್ಯವನ್ನು ಪಡೆಯವವರು ತಮ್ಮ ಹತ್ತಿರದಲ್ಲಿರುವ ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆದು ಬ್ಯಾಂಕ್ಗಳ ಮೂಲಕ ತಮ್ಮ ಹಣವನ್ನು ಪಡೆದುಕೊಳ್ಳಬೇಕು, ಪೋಸ್ಟ್ಮ್ಯಾನ್ಗಳು ಫಲಾನುಭವಿಗಳಿಗೆ ನೀಡವ ಹಣದಲ್ಲಿ ಪ್ರತಿಯೊಬ್ಬರಿಂದ 25 ರೂ ಹಣವನ್ನು ಪಡೆಯುತ್ತಿರುವುದು ಗಮನಕ್ಕೆ ಬಂದಿದ್ದು ಇದನ್ನು ತಪ್ಪಿಸಲು ಖಜಾನಾಧಿಕಾರಿಗಳು ಫಲಾನುಭವಿಗಳಿಂದ ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆಸಬೇಕು ಎಂದರು.
ತಾಲ್ಲೂಕಿನ 149 ಅಂಗನವಾಡಿ ಕೇಂದ್ರಗಳಲ್ಲಿನ ಕೊಠಡಿಗಳು ದುರಸ್ತಿಯಿರುವುದರಿಂದ, ಆ ಕೊಠಡಿಗಳು ಸರಿಯಾಗುವವರೆಗೆ ಮಕ್ಕಳಿಗೆ ಭೋದನೆಯನ್ನು ಬೇರೆ ಸ್ಥಳಗಳಲ್ಲಿ ಮಾಡಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ ತಾಲ್ಲೂಕಿನ ಇಲಾಖೆಗಳಲ್ಲಿನ ಅಧಿಕಾರಿಗಳು ಬೇಜವಬ್ದಾರಿತನದಿಂದ ವತರ್ಿಸುತ್ತಾ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ, ಸಣ್ಣ ಪುಟ್ಟ ಕೆಲಸಗಳನ್ನೂ ವ್ಯವಸ್ಥಿತವಾಗಿ ಮಾಡುತ್ತಿಲ್ಲ ಎಂದ ಅವರು, ಕೃಷಿ ಇಲಾಖೆಯಲ್ಲಿ ರೈತರಿಗೆ ಸೂಕ್ತಮಾರ್ಗದರ್ಶನ ದೊರೆಯುತ್ತಿಲ್ಲವೆಂದರು, ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳನ್ನು ಸರಿಯಾಗಿ ಉಪಚರಿಸುತ್ತಿಲ್ಲ, ಪಶು ಇಲಾಖಾ ಕಛೇರಿ ಅವ್ಯವಸ್ಥೆಯ ಬಗ್ಗೆ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬೀಬಿ ಪಾತೀಮ, ಚೇತನಗಂಗಾಧರ್, ಕುಮಾರರುದ್ರ, ಇ.ಓ ಎನ್.ಎಂ.ದಯಾನಂದ್, ತಾಲ್ಲೂಕಿನ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿ.ಎಸ್.ಬಿ.ಯವರು ಸಿ.ಎಂ.ರವರನ್ನು ಮೂದಲಿಸುವುದನ್ನು ಬಿಡಲಿ.
ಚಿಕ್ಕನಾಯಕನಹಳ್ಳಿ,ಜು.20: ಬಿಜೆಪಿ ನಾಮಬಲ, ಕಾರ್ಯಕರ್ತರ ಶ್ರಮದಿಂದ ಲೋಕಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿರುವ ಜಿ.ಎಸ್.ಬಸವರಾಜುರವರು ಕಾಂಗ್ರೆಸ್ನ ಸಂಸದರಂತೆ ವತರ್ಿಸುತ್ತಾ, ಮುಖ್ಯಮಂತ್ರಿಗಳು ಸೇರಿದಂತೆ ಪಕ್ಷದ ರಾಜ್ಯ ಮಟ್ಟದ ನಾಯಕರನ್ನು ಅವಹೇಳನಕಾರಿಯಾಗಿ ಟೀಕಿಸುತ್ತಿರುವುದನ್ನು ಭಾಜಪಾ ಕಾರ್ಯಕರ್ತರು ತೀವ್ರವಾಗಿ ಖಂಡಿಸುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತ ಎಂ.ಎಸ್.ರವಿಕುಮಾರ್ ಆರೋಪಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಸದರಾಗಿ ಜಿಲ್ಲೆಯ ಅಭಿವೃದ್ದಿಯ ಬಗ್ಗೆ ಚಿಂತಿಸುವ ಬದಲು ಪಕ್ಷದ ವರ್ಚಸ್ಸನ್ನು ಹಾಳುಮಾಡುತ್ತಿದ್ದಾರೆ, ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಈ ಉಪ ವಿಭಾಗದ ಕೆಲವು ಕ್ಷೇತ್ರಗಳಲ್ಲಿ ಪಕ್ಷದ ಅಧಿಕೃತ ಅಭ್ಯಥರ್ಿಯ ವಿರುದ್ದ ತಮ್ಮ ಬೆಂಬಲಿಗರಿಗೆ ಪ್ರಚಾರ ಮಾಡಿದರೆ ಗುಬ್ಬಿಯಲ್ಲಿ ತಮ್ಮ ಬೆಂಬಲಿಗನಿಗೆ ಗೆಲವು ದೊರಕಿಸಿಕೊಡಲು ಬಹಿರಂಗವಾಗಿಯೇ ಪಕ್ಷದ ಅಭ್ಯಥರ್ಿಯ ವಿರುದ್ದ ತೊಡೆ ತಟ್ಟಿದ್ದರು ಎಂದ ಅವರು ಕೇಂದ್ರದ ಕಾಂಗ್ರೆಸ್ ಸಕರ್ಾರವನ್ನು ಹೊಗಳುತ್ತಾ ರಾಜ್ಯ ಸಕರ್ಾರವನ್ನು ತೆಗಳುತ್ತಾ ತಮ್ಮ ಅನುಕೂಲಕ್ಕೆ ರಾಜ್ಯ ಸಕರ್ಾರವನ್ನು ಬಳಸಿಕೊಳ್ಳುತ್ತಾ ಪಕ್ಷ ವಿರೋದಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ
ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಗ್ರಾ.ಪಂ.ಸದಸ್ಯ ನಾಗರಾಜು, ಭಾಜಪ ಸ್ಥಾನೀಯ ಸಮಿತಿ ಕಾರ್ಯದಶರ್ಿ ಭೈರೇಶ್, ನಗರ ಕಾರ್ಯದಶರ್ಿ ನಂದೀಶ್, ಮಂಜುನಾಥ್ ಉಪಸ್ಥಿತರಿದ್ದರು.

Tuesday, July 19, 2011




ಪಟ್ಟಣದ ಕಸವಿಲೇವಾರಿ ಕಾರ್ಯಕ್ಕೆ ಸ್ತ್ರೀಶಕ್ತಿ ಸಂಘಗಳು ಆಸಕ್ತಿ
ಚಿಕ್ಕನಾಯಕನಹಳ್ಳಿ,ಜು.19: ಪಟ್ಟಣದ ಕಸ ವಿಲೇವಾರಿ ಮಾಡಲು ಆಸಕ್ತ ಸ್ತ್ರೀಶಕ್ತಿ ಸಂಘಗಳಿಗೆ ಅವಕಾಶ ಕಲ್ಪಿಸುಲಾಗುವುದು, ಈ ಸಂಬಂಧ ಈಗಾಗಲೇ ಕೆಲವು ಸ್ತ್ರೀಶಕ್ತಿ ಸಂಘಗಳು ಮುಂದೆ ಬಂದಿವೆ ಎಂದು ಪುರಸಭೆಯ ಪರಿಸರ ಇಂಜಿನಿಯರ್ ಚಂದ್ರಶೇಖರ್ ತಿಳಿಸಿದ್ದಾರೆ.
ಪಟ್ಟಣದ 9ನೇ ವಾಡರ್ಿನಲ್ಲಿ ಪುರಸಭೆ ಹಾಗೂ ಸೃಜನಾ ಮಹಿಳಾ ಸಂಘಟನೆ ಸಂಯುಕ್ತವಾಗಿ ಏರ್ಪಡಿಸಿದ್ದ ಮಹಿಳೆಯರಿಗಾಗಿ ಪರಿಸರ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಪಟ್ಟಣದ ಪ್ರತಿ ಮನೆಯಲ್ಲಿನ ಘನತ್ಯಾಜ್ಯ ವಿಲೇವಾರಿಯನ್ನು ಸುಲಭಗೊಳಿಸಲು ಕಸವನ್ನು, ಕರಗದ ಕಸ ಮತ್ತು ಕರಗುವ ಕಸ ಎಂದು ವಿಂಗಡಿಸುವಂತೆ ಮಹಿಳೆಯರಿಗೆ ತಿಳುವಳಿಕೆ ಮೂಡಿಸುವುದು ಇಂತಹ ಜಾಗೃತಿ ಸಭೆಯ ಉದ್ದೇಶ ಎಂದರು. ಕಸವನ್ನು ಸಂಗ್ರಹಿಸಲು ಆಟೋರಿಕ್ಷಾ ಹಾಗೂ ತಳ್ಳುವಗಾಡಿಯನ್ನು ಬಳಸಲಾಗುವುದು, ಬೀದಿ ಕಸವನ್ನು ಎತ್ತಿಹಾಕಲು ತಳ್ಳುವಗಾಡಿಯನ್ನು ಈಗಾಗಲೇ ಬಳಸಲಾಗುತ್ತಿದ್ದು, ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸಲು ಆಟೋರಿಕ್ಷಾ ವಾಹನವನ್ನು ಬಳಸಲಾಗುವುದು ಎಂದರು.
ಪುರಸಭಾ ಸದಸ್ಯೆ ಸಿ.ಎಂ.ರೇಣುಕ ಗುರುಮೂತರ್ಿ ಮಾತನಾಡಿ, ಕಸ ವಿಲೇವಾರಿ ಜವಬ್ದಾರಿಯನ್ನು ತೆಗೆದುಕೊಳ್ಳಲು ಸ್ತ್ರೀಶಕ್ತಿ ಸಂಘಗಳು ಮುಂದೆ ಬಂದಿರುವುದು ಸ್ತ್ರೀಯರು ಮನೆಯ ಸ್ವಚ್ಚತೆಗಷ್ಟೇ ಸೀಮಿತವಲ್ಲ, ಊರಿನ ಸ್ವಚ್ಚತೆಗೂ ಸೈ ಎನ್ನಿಸಿಕೊಳ್ಳುವ ಕಾಲ ದೂರವಿಲ್ಲವೆಂದರು.
ಪರಿಶಿಷ್ಟ ಜಾತಿಯವರಿಗೆ ಸಕರ್ಾರ ಅಡಿಗೆ ಅನಿಲ ಸಂಪರ್ಕ ಕಲ್ಪಿಸಲು ಮುಂದಾಗಿದ್ದು ಎಲ್ಲಾ ಪರಿಶಿಷ್ಟರು ತಮ್ಮ ಹೆಸರುಗಳನ್ನು ನೊಂದಾಯಿಸಲು ಪುರಸಭೆಯಲ್ಲಿ ಸೂಕ್ತ ಮಾಹಿತಿ ಪಡೆಯುವಂತೆ ಮಹಿಳೆಯರಿಗೆ ತಿಳಿಸಿದರು.
ಸಭೆಯಲ್ಲಿ ಪುರಸಭಾ ಸದಸ್ಯರುಗಳಾದ ಶುಭ ಬಸವರಾಜು, ಸೃಜನಾ ಮಹಿಳಾ ಸಂಘಟನೆಯ ಅಧ್ಯಕ್ಷೆ ಜಯಮ್ಮ, ಕಾರ್ಯದಶರ್ಿ ಎನ್.ಇಂದಿರಮ್ಮ ಸೇರಿದಂತೆ ಸ್ಥಳೀಯ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
'ಅಲೆಮಾರಿ ಬುಡಕಟ್ಟು ಮಹಾಸಭಾ'ದ ಸಭೆ
ಚಿಕ್ಕನಾಯಕನಹಳ್ಳಿ,ಜು.19 : ತುಮಕೂರು ಜಿಲ್ಲೆಯ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳು ಅಲೆಮಾರಿ ಬುಡಕಟ್ಟು ಮಹಾಸಭಾ ಅಡಿಯಲ್ಲಿ ಸಂಘಟನೆಗಳ್ಳಲು ಇದೇ 23ರ ಶನಿವಾರ ಪೂರ್ವಭಾವಿ ಸಭೆಯನ್ನು ಏರ್ಪಡಿಸಲಾಗಿದೆ.
ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಸಮಸ್ಯೆಗಳಿಗೆ ಇರುವ ಅಡ್ಡಿ ಆತಂಕಗಳನ್ನು ಹೋಗಲಾಡಿಸಲು ಸಂಘಟನೆ ಆದ್ಯತೆ ನೀಡಿದ್ದು, ರಾಜ್ಯಮಟ್ಟದಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ ಅಸ್ತಿತ್ವಕ್ಕೆ ಬಂದಿದ್ದು ಈ ಸಂಘಟನೆ ಅಡಿಯಲ್ಲಿ ನಮ್ಮ ಜಿಲ್ಲೆಯ ಜನರು ನೊಂದಾಯಿಸಿಕೊಳ್ಳಲು ತೀಮರ್ಾನಿಸಲಾಗಿದೆ, ಜಿಲ್ಲೆಯಲ್ಲಿ ಎಲ್ಲಾ ಅಲೆಮಾರಿ ಸಮುದಾಯಗಳ ಪೂರ್ವಭಾವಿ ಸಭೆ ನಡೆಸುತ್ತಿದ್ದು ಸಮುದಾಯದ ಪ್ರತಿನಿಧಿಗಳು ಸಭೆಗೆ ಹಾಜರಾಗಲು ಕೋರಿದ್ದಾರೆ ಹೆಚ್ಚಿನ ವಿವರಗಳಿಗಾಗಿ ಶಾಂತರಾಜ್-8453474230, ರಾಜಪ್ಪ-9901084703 ನಂಬರ್ಗೆ ಸಂಪಕರ್ಿಸಲು ಕೋರಿದ್ದಾರೆ.
ವಿವಿಧ ವರ್ಗದ ಜನರಿಗೆ ಡಿ.ಸಿ.ಸಿ.ಬ್ಯಾಂಕ್ ಸಾಲದ ಚೆಕ್ ವಿತರಣೆ
ಚಿಕ್ಕನಾಯಕನಹಳ್ಳಿ,ಜು.19 : ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ಸದಸ್ಯರಿಗೆ ಸಾಲ ವಿತರಣಾ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2010-11ನೇ ಸಾಲಿನ ಸರ್ವಸದಸ್ಯರ ವಾಷರ್ಿಕ ಮಹಾಸಭೆಯ ಸಮಾರಂಭವನ್ನು ಇದೇ 22ರ ಶುಕ್ರವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ಜಯಚಾಮರಾಜಪುರದ ಸಹಕಾರ ಸಂಘದ ಕಟ್ಟಡದಲ್ಲಿ ಬೆಳಗ್ಗೆ 11ಕ್ಕೆ ಹಮ್ಮಿಕೊಂಡಿದ್ದು ಜಿಲ್ಲಾ ಸಹಕಾರ ಕೇಂದ್ರದ ಅಧ್ಯಕ್ಷ ಕೆ.ಎನ್.ರಾಜಣ್ಣ ಸಾಲ ವಿತರಣೆ ಮಾಡಲಿದ್ದು, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಎಸ್.ಆರ್.ರಾಜಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

Monday, July 18, 2011




ವಿದ್ಯಾಥರ್ಿಗಳಿಗೆ ಕೊಡುವ ಸೈಕಲ್ನ್ನು ಪೋಷಕರು ದುರಪಯೋಗ ಪಡಿಸಿಕೊಳ್ಳಬೇಡಿ ಚಿಕ್ಕನಾಯಕನಹಳ್ಳಿ,ಜು.18: ಐದಾರು ಕಿ.ಮೀ.ನಡೆದು, ಮಧ್ಯಾಹ್ನ ಉಪವಾಸವಿದ್ದು ಶಿಕ್ಷಣ ಕಲಿಯಲು ಬರುತ್ತಿದ್ದ ಕಾಲ ದೂರವಾಗಿದೆ, ಇಂದಿನ ವಿದ್ಯಾಥರ್ಿಗಳಿಗೆ ಬೈಸಿಕಲ್, ಊಟ ಸೇರಿದಂತೆ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ಸಲಕರಣೆಗಳನ್ನು ಸಕರ್ಾರ ನೀಡುತ್ತಿದ್ದು ಇದನ್ನು ಬಳಸಿಕೊಂಡು ವಿದ್ಯಾಥರ್ಿಗಳನ್ನು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಢಶಾಲಾ ಆವರಣದಲ್ಲಿ ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಿಸಿ ಮಾತನಾಡಿದ ಅವರು, ನಾವು ಓದುವ ಸಮಯದಲ್ಲಿ ಹಳ್ಳಿಗಳಿಂದ ಶಾಲೆಗೆ ಬರುತ್ತಿದ್ದ ವಿದ್ಯಾಥರ್ಿಗಳು ತಡವಾಗಿ ಆಗಮಿಸಿ ಮೊದಲ ಅವಧಿ ಶಿಕ್ಷಕರ ಬೋಧನೆಯಿಂದ ವಂಚಿತರಾಗುತ್ತಿದ್ದು ಒಂದೆಡೆಯಾದರೆ ತಡವಾಗಿ ಬಂದ ಕಾರಣಕ್ಕೆ ಬೆತ್ತದ ರುಚಿಯನ್ನು ತಿನ್ನುತ್ತಿದ್ದರು ಅಲ್ಲದೆ ಬಡ ವಿದ್ಯಾಥರ್ಿಗಳು ಪಠ್ಯಪುಸ್ತಕಕ್ಕಾಗಿ ಬೇರೆ ವಿದ್ಯಾಥರ್ಿಗಳು ಓದಿದ ಪುಸ್ತಕವನ್ನು ಅರ್ಧ ಬೆಲೆಗೆ ಕೊಂಡು ಓದುವ ಸ್ಥಿತಿ ಅಂದು ಇತ್ತು ಎಂದು ತಮ್ಮ ವಿದ್ಯಾಥರ್ಿ ಜೀವನನ್ನು ಸ್ಮರಿಸಿಕೊಂಡ ಶಾಸಕರು ಆದರೆ ಈಗ ಸಕರ್ಾರ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಶಾಲಾ ಸಮವಸ್ತ್ರ, ಪಠ್ಯಪುಸ್ತಕ, ಶಾಲಾಗೆ ಸರಿಯಾಗಿ ಬರಲು ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ, ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿದೆ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಸಾಕಷ್ಟು ಶ್ರಮಿಸುತ್ತಿದೆ ಇದಕ್ಕಾಗಿ ಪೋಷಕರು ,ಶಿಕ್ಷಕರ ಮತ್ತು ಇಲಾಖೆಯ ಜೊತೆ ಕೈಜೋಡಿಸಿ ಸಹಕರಿಸಬೇಕು ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ತಾಲ್ಲೂಕಿನ ಎಲ್ಲಾ ಶಾಲಾ ವಿದ್ಯಾಥರ್ಿಗಳಿಗೆ ಜುಲೈ ತಿಂಗಳ ಅಂತ್ಯದೊಳಗೆ ಸೈಕಲ್ ವಿತರಿಸಲಿದ್ದೇವೆ, ವಿದ್ಯಾಥರ್ಿಗಳು ಶಾಲೆಗೆ ಸರಿಯಾದ ವೇಳೆಗೆ ಆಗಮಿಸಲೆಂದು ಸಕರ್ಾರ ಸೈಕಲ್ ವಿತರಿಸುತ್ತಿದ್ದು ಪೋಷಕರು ಅನ್ಯ ಕಾರ್ಯಗಳಿಗೆ ಸೈಕಲ್ಲನ್ನು ಬಳಸಿಕೊಳ್ಳಬಾರದು, ಶಾಲೆಯ ದೈಹಿಕ ಶಿಕ್ಷಕರು ವಿದ್ಯಾಥರ್ಿಗಳಿಗೆ ನೀಡಿದ ಸೈಕಲ್ನ್ನು ಪ್ರತಿದಿನ ತರುತ್ತಿದ್ದಾರೆಂದು ಗಮನಿಸಬೇಕು ಎಂದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಡಿವಿಪಿ ಶಾಲಾ ಉಪಾಧ್ಯಕ್ಷ ವಿಶ್ವೇಶ್ವರ್ ಮಾತನಾಡಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ರವಿ(ಮೈನ್ಸ್), ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಟೌನ್ ಬ್ಯಾಂಕ್ ಅಧ್ಯಕ್ಷ ಹಾಗೂ ಸಿ.ಎಸ್.ನಟರಾಜು, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ.ಎನ್.ಎಂ.ದಯಾನಂದ್, ಪುರಸಬಾ ಸದಸ್ಯ ದೊರೆಮುದ್ದಯ್ಯ, ಸಿ.ಪಿ.ಚಂದ್ರಶೇಖರಶೆಟ್ಟಿ, ಜಿ.ತಿಮ್ಮಯ್ಯ ಮಾಜಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಮುಂತಾದವರು ಉಪಸ್ಥಿತರಿದ್ದರು.
ಜನಸ್ಪಂದನ ಸಭೆ: ಗ್ರಾ.ಪಂ.ಅಧ್ಯಕ್ಷರ ಬದಲಿಗೆ ಪತಿರಾಯನಿಂದ ಭಾಷಣ
ಚಿಕ್ಕನಾಯಕನಹಳ್ಳಿ,ಜೂ.18: ತಾಲೂಕಿನ ಹಂದನಕೆರೆ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರ ಬದಲಾಗಿ ಅವರ ಪತಿರಾಯ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಸಂಗ ಸಭೆಯಲ್ಲಿದ್ದ ಹಲವರಿಗೆ ಹುಬ್ಬೇರಿಸುವಂತೆ ಮಾಡಿದೆ.
ಕಳೆದ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಸ್ಥಳೀಯ ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ ಈರಪ್ಪ ಸೇರಿದಂತೆ ಈ ಸಭೆಯಲ್ಲಿ ತಾಲೂಕು ಮಟ್ಟದ ಜನಪ್ರತಿನಧಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಾದಿಯಾಗಿ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪಂಚಾಯಿತಿ ವ್ಯವಸ್ಥೆಯ ತಾಲೂಕು ಮಟ್ಟದ ಅಧಿಕಾರಿ ಒಬ್ಬರು ನಡೆಸಿಕೊಡುತ್ತಿದ್ದರು, ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಪೈಕಿ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಹೋಬಳಿಯ ಅಭಿವೃದ್ದಿಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು, ನಂತರ ಗ್ರಾ.ಪಂ. ಅಧ್ಯಕ್ಷರ ಸರದಿ ಬಂದಾಗ ಅಧ್ಯಕ್ಷರಿಗೆ ವೇದಿಕೆಯಲ್ಲಿ ಮಾತನಾಡಲು ಅಳಕೊ ಅಥವಾ ವಾಕ್ಪಟುತ್ವದ ಕೊರತೆಯೋ ಕಾಣೆ, ಅವರು ಮೌನಕ್ಕೆ ಶರಣು ಹೋಗಿ ಮೈಕ್ನ ಬಳಿಯೂ ಸುಳಿಯಲಿಲ್ಲ, ಆ ಸಂದರ್ಭದಲ್ಲಿ ನಿರೂಪಕರು ಅಧ್ಯಕ್ಷರ ಬದಲಾಗಿ ಅವರ ಪತಿರಾಯನನ್ನು ಮೈಕ್ ಬಳಿ ಕರೆಯುತ್ತಿದಂತೆ ಅಧ್ಯಕ್ಷರ ಪತಿ ತಮ್ಮ ಕ್ಷೇತ್ರಕ್ಕೆ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ವಿಚಾರ ಮಂಡಿಸಿದಲ್ಲದೆ, ಅಧಿಕಾರಿಗಳಿಗೆ ಸ್ಥಳದಲ್ಲೇ ಕೆಲವು ಸೂಚನೆಗಳನ್ನು ನೀಡದರು.
ಈ ಸನ್ನಿವೇಶವನ್ನು ನೋಡಿದ ಕೆಲವು ಪ್ರಜ್ಞಾವಂತ ಗ್ರಾಮಸ್ಥರು ಸಕರ್ಾರದ ಸಾರ್ವಜನಿಕ ಸಭೆಯಲ್ಲಿಯೇ ಈ ರೀತಿ ಆದರೆ ಗ್ರಾ.ಪಂ.ಯ ಕಛೇರಿಯಲ್ಲಿ ಹೇಗೋ ಎಂಬುದು ಸದ್ಯದ ಚಚರ್ೆ.

Friday, July 15, 2011



ಕಾನೂನು ತಿಳುವಳಿಕೆಗೆ ಬಡವ ಬಲ್ಲಿದನೆಂಬ ಬೇದ ಬೇಡ
ಚಿಕ್ಕನಾಯಕನಹಳ್ಳಿ,ಜು.15 : ನ್ಯಾಯಾಲಯದ ದಾವೆಗಳನ್ನು ಕಕ್ಷಿದಾರರು ವಕೀಲರನ್ನು ನೇಮಿಸಿ ದಾವೆ ಇತ್ಯರ್ಥ ಪಡಿಸಲು ಆಗದಿರುವಂತಹ ಬಡ ಕಕ್ಷಿದಾರರಿಗೆ ಸಕರ್ಾರದಿಂದ ವಕೀಲರನ್ನು ನೇಮಿಸಿ ನ್ಯಾಯಲಯದ ದಾವೆ ಪೂರ್ಣಗೊಳ್ಳುವವರೆಗೆ ಪ್ರಕರಣದ ಖಚರ್ು ವೆಚ್ಚವನ್ನು ಸಕರ್ಾರ ಭರಿಸುವುದು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿಯ ಆವರಣದಲ್ಲಿ ನಡೆದ ತಾಲ್ಲೂಕು ಕಾನೂನು ಸಲಹಾ ಕೇಂದ್ರದ ಪ್ರಾರಂಭ ಹಾಗೂ ಕಾನೂನು ನೆರವು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವು ಕಾರಣಗಳಿಂದ ಕಾನೂನಿನ ಬಗ್ಗೆ ಅರಿವು ಇರದ ಜನಸಾಮಾನ್ಯರು ಕಾನೂನಿನ ಬಗ್ಗೆ ತಪ್ಪಾಗಿ ತಿಳುವಳಿಕೆ ಪಡೆಯುತ್ತಿದ್ದಾರೆ, ಅಂತಹವರಿಗೆ ಕಾನೂನಿನ ಅರಿವನ್ನು ಮೂಡಿಸಲು, ನ್ಯಾಯಾಲಯಕ್ಕೆ ಕಕ್ಷಿದಾರರು ಸಲ್ಲಿಸಿರುವ ಯಾವುದೇ ಕಾನೂನಿನ ಬಗ್ಗೆ ಸಲಹೆ ನೀಡಲು ತಾಲ್ಲೂಕು ಕಛೇರಿಯಲ್ಲಿ ಸಲಹಾ ಕೇಂದ್ರವನ್ನು ತೆರೆಯಲಾಗಿದೆ ಎಂದ ಅವರು, ತಾಲ್ಲೂಕು ಕಛೇರಿಯಲ್ಲಿ ಸಲಹಾ ಕೇಂದ್ರವನ್ನು ತೆರೆದಿರುವುದು ಕಾನೂನಿನ ಬಗ್ಗೆ ಅರಿವಿರದ ಜನಸಾಮಾನ್ಯರು ಹೆಚ್ಚಾಗಿ ಆಗಮಿಸುತ್ತಿದ್ದು ಅಂತಹವರಿಗೆ ಅನುಕೂಲವಾಗಲಿ ಮತ್ತು ಖಾತೆ ಬದಲಾವಣೆಗಳ ಬಗ್ಗೆ ತಿಳುವಳಿಕೆ ಪಡೆಯಲೆಂಬ ಉದ್ದೇಶವನ್ನು ಹೊಂದಿ ಸಲಹಾ ಕೇಂದ್ರ ತೆರೆಯಲಾಗಿದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಜನಸಾಮಾನ್ಯರು ಸಣ್ಣ ಪುಟ್ಟ ವಿಚಾರಗಳಿಗಾಗಿ ನ್ಯಾಯಾಲಯಕ್ಕೆ ಹೋಗುವುದನ್ನು ತಪ್ಪಿಸಲು, ಅಶಕ್ತರಿಗೆ ನೆರವಾಗಲು ಸಲಹಾ ಕೇಂದ್ರ ತೆರೆಯಲಾಗಿದ್ದು ತಾಲ್ಲೂಕಿನ ಯಾವುದೇ ವಿವಾದಗಳು, ನಮೂನೆಗಳ ಅಜರ್ಿ ವಿಚಾರಣೆಗಳನ್ನು ಬಗೆ ಹರಿಸಲಾಗುವುದು ಎಂದ ಅವರು ಪ್ರತಿ ವಾರದ ಎರಡು ದಿನ ಇಬ್ಬರು ವಕೀಲರು ಸಲಹಾ ಕೇಂದ್ರದಲ್ಲಿ ಬೆಳಗ್ಗೆ 10 ರಿಂದ 1ರವರೆಗೆ, ಮತ್ತು 2ರಿಂದ 6ರವರೆಗೆ ಸಲಹೆ ನೀಡುತ್ತಾರೆ ಎಂದರು.
ಕಿರಿಯ ಶ್ರೇಣಿ ನ್ಯಾಯಾಧೀಶೆ ಎ.ಜಿ.ಶಿಲ್ಪ ಮಾತನಾಡಿ ತಾಲ್ಲೂಕು ಕಛೇರಿಯಲ್ಲಿ ತೆರೆದಿರುವ ಸಲಹಾ ಕೇಂದ್ರದಿಂದ ಜನರಿಗೆ ಯಾವುದೇ ದಾವೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ದೊರಕುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಾನಂದ್ ಮಾತನಾಡಿ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ಯಾವುದೇ ರೀತಿಯ ಕುಂದುಕೊರತೆಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಕಾನೂನಿನ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದರು.
ಸಮಾರಂಭದಲ್ಲಿ ಉಪವಿಭಾಗಾಧಿಕಾರಿ ವೈ.ಎಸ್.ಪಾಟೀಲ್, ಸಿ.ಪಿ.ಐ, ಕೆ.ಪ್ರಭಾಕರ್ ವಕೀಲರ ಸಂಘದ ಕಾರ್ಯದಶರ್ಿ ಸಿ.ರಾಜಶೇಖರ್, ಸಕರ್ಾರಿ ಅಭಿಯೋಜಕರಾದ ಕೆ.ಎಲ್.ಭಾಗ್ಯಲಕ್ಷ್ಮೀ ಉಪಸ್ಥಿತರಿದ್ದರು.
ರೋಗಭಾದೆ ನಿವಾರಣೆಗೆ ಹೋಬಳಿ ಮಟ್ಟದಲ್ಲಿ ರೈತರ ಸಭೆಗೆ ಆಗ್ರಹ
ಚಿಕ್ಕನಾಯಕನಹಳ್ಳಿ,ಜು.15 : ತೆಂಗಿಗೆ ತಾಲ್ಲೂಕಿನ ವಿವಿಧ ಕಡೆ ಅನೇಕ ರೋಗಭಾದೆಗಳು ಕಾಡುತ್ತಿದ್ದು ತೋಟಗಾರಿಕೆ ಇಲಾಖೆಯವರು ಹೋಬಳಿವಾರು ಸಭೆ ನಡೆಸಿ ರೈತರಿಗೆ ರೋಗದ ಬಗ್ಗೆ ಜಾಗೃತಿ ದೊರಕಿಸಬೇಕೆಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಟಿ.ಎಲ್.ನಟರಾಜು ತಿಳಿಸಿದರು.
ಪಟ್ಟಣದ ಸಕರ್ಾರಿ ನೌಕರರ ಸಂಘದ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಕೊಳೆರೋಗ, ಕಪ್ಪುತಲೆ ಹಾಗೂ ಕೆಂಪು ಮೂತಿ ಹುಳುಗಳ ಭಾದೆ ತಾಲ್ಲೂಕಿನಲ್ಲಿ ಜಾಸ್ತಿಯಾಗಿದ್ದು ಅಧಿಕಾರಿಗಳು ಈ ಬಗ್ಗೆ ರೈತರಿಗೆ ಮಾಹಿತಿ ನೀಡಿ ಸಮಗ್ರ ಹತೋಟಿಗೆ ಪರಿಹಾರ ಸೂಚಿಸುವಂತೆ ಸಲಹೆ ನೀಡಿದರು.
ಕಾರ್ಯದಶರ್ಿ ರಂಗನಕೆರೆ ಮಹೇಶ್ ಮಾತನಾಡಿ ತಾಲ್ಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ಜಿಲ್ಲಾಧಿಕಾರಿಗಳ ಅನುದಾನದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿದೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕಾಮಗಾರಿಗಳ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಉಪಾಧ್ಯಕ್ಷ ಬಿ.ಸಿ.ನಾಗರಾಜಪ್ಪ, ಜಿಲ್ಲಾ ಪ್ರತಿನಿಧಿ ಬಿ.ಎನ್.ಲೋಕೇಶ್, ನಿದರ್ೇಶಕ ಬಿ.ಎಲ್.ರೇಣುಕಪ್ರಸಾದ್ ಮಾತನಾಡಿದರು. ಮೀನುಗಾರಿಕೆಯ ಸಹಾಯಕ ನಿದರ್ೇಶಕ ಉಮೇಶ್, ಜಲಾನಯನ ಇಲಾಖೆ ಅಧಿಕಾರಿ ಮೋಹನ್, ಸಭೆಗೆ ಮಾಹಿತಿ ನೀಡಿದರು.
ನಿದರ್ೇಶಕರಾದ ಮಲ್ಲಿಕಾಜರ್ುನಯ್ಯ, ನಿಜಾನಂದಮೂತರ್ಿ, ಶಂಕರಪ್ಪ, ವೆಂಕಟೇಶ್, ವಿಶ್ವನಾಥ್ ಮತ್ತಿತರರರಿದ್ದರು. ಕೃಷಿ ಸಹಾಯಕ ನಿದರ್ೇಶಕ ಬಿ.ಎನ್.ರಂಗಸ್ವಾಮಿ ಸ್ವಾಗತಿಸಿ ವಂದಿಸಿದರು.

ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ ವಿಜೇತರು
ಚಿಕ್ಕನಾಯಕನಹಳ್ಳಿ,ಜು.15 : ಅನ್ನಪೂಣರ್ೆಶ್ವರಿ ಕಲಾ ಸಂಘದವರು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೃತ್ಯಪಟುಗಳು ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಧಾನಕರ ಬಹುಮಾನಗಳನ್ನು ಪಡೆದಿದ್ದಾರೆ.
ಸಿನಿಯರ್ ಸೋಲೊ ನೃತ್ಯ ಫಲಿತಾಂಶ. ; ಪ್ರಥಮ ಸ್ಥಾನ ಅಸ್ಲರ್ ದಾವಣಗೆರೆ, ದ್ವಿತೀಯ ಸ್ಥಾನ ತನೋಷ ನಾರಾಯಣ್ ಮೈಸೂರು, ತೃತೀಯ ಸ್ಥಾನ ಅರುಣ್ ಬೆಂಗಳೂರು, ಸಮಾಧಾನಕರ ಜಗದೀಶ್ ಆನೇಕಲ್ ,ನವೀನ್ ಕುಮಾರ್ ತುಮಕೂರು, ಪ್ರಥಮಸ್ಥಾನ ರಾಘವೇಂದ್ರ ಹರಿಹರ,ದ್ವಿತೀಯ ಸ್ಥಾನ ಶ್ರೀ ಕಾಂತ್ ಆನೇಕಲ್,ತೃತೀಯ ಸ್ಥಾನ ಅಜೀತ್ ಜಿ.ವಿ.ಆರ್. ಮೂಡಿಗೆರೆ ಸಮಾಧಾನಕರ ಚರಣ್ ಕೆ.ಹಚ್. ಚಿಕ್ಕಬಳ್ಳಾಪುರ,ಶರತ್ ತುಮಕೂರು.
ಹಿರಿಯರ ಗುಂಪು : ಪ್ರಥಮ ಸ್ಥಾನ ನ್ಯೂಸ್ಹಿಲೀಟ್ ಡ್ಯಾನ್ಸ್ ಅಕಾಡಮಿ ಆನೇಕಲ್ ,ದ್ವಿತೀಯ ಸ್ಥಾನ ನ್ಯೂರಂಜಿತ್ ಡ್ಯಾನ್ಸ್ ಗ್ರೋಪ್ ಹರಿಹರ, ತೃತೀಯ ಸ್ಥಾನ ಆದಿಸ್ಕೂಲ್ ಆಫ್ ಡ್ಯಾನ್ಸ್ ಬೆಂಗಳೂರು, ಸಮಾಧಾನಕರ ಸ್ಟ್ರೆಲೀಷ ಡ್ಯಾನ್ಸ್ ಗ್ರೋಪ್ ತುಮಕೂರು, ಗಣೇಶ್ ಡ್ಯಾನ್ಸ್ ಗ್ರೋಪ್ ಮುದ್ದೂರು, ಸವರ್ೋತ್ತಮ ಪ್ರಶಸ್ತಿ ರಾಯಲ್ ಮೆಟ್ರೋಗ್ರೆಸ ಭದ್ರಾವತಿ, ಅತಿಶ್ರೇಷ್ಠ ಪ್ರಶಸ್ತಿ ಚರಣ್ &ತಂಡ ಚಿಕ್ಕಬಳ್ಳಾಪುರ, ಶ್ರೇಷ್ಠ ಪ್ರಶಸ್ತಿ ಕಿರಣ್ &ತಂಡ ಬೆಂಗಳೂರು.
ಕಿರಿಯರ ಸೋಲೊ ನೃತ್ಯ : ಪ್ರಥಮ ಸ್ಥಾನ ತರುಣ್ ದಾವಣಗೆರೆ, ದ್ವಿತೀಯ ಸ್ಥಾನ ನಿರೂಷ ನಾರಾಯಣ್ ಮೈಸೂರು, ತೃತೀಯ ಸ್ಥಾನ ನಿಧಿ ದಾವಣಗೆರೆ, ಸಮಾ-ನಿತ್ಯಾಚಂದನ ಬೆಂಗಳೂರು, ಚೈತ್ರ ತಿಪಟೂರು, ಪ್ರದೀಪ್ ಕುಮಾರ್ ಬೆಂಗಳೂರು, ಸುಕೃತ್ ದಾವಣಗೆರೆ ,ಅನೋಷ ದಾವಣಗೆರೆ ಪದ್ಮಾಶ್ರೀ ಚಿಕ್ಕಮಂಗಳೂರು ದಿವ್ಯ ಬೆಂಗಳೂರು, ಪ್ರಥ-ಪ್ಲೆಯಿಂಗ್ ಭರ್ಡ ದಾವಣಗೆರೆ , ದ್ವಿತೀ-ಸೂಪರ್ ಸ್ಟೆಷ್ಸ್ ರಾಣಿಬೆನ್ನೂರು,ತೃತೀ-ಕಿಯೋಟಿವ್ ಚಿಕ್ಕನಾಯಕನಹಳ್ಳಿ, ಸಮಾಧಾನಕರ ರೂಬಿಶೇಖರ್ ತುಮಕೂರು, ವಿದೇಶ್ &ತಂಡ ಹರಿಹರ, ಸವರ್ೋತ್ತಮ ಪ್ರಶಸ್ತಿ-ಅನೋಷ &ತಂಡ ಮಂಡ್ಯ, ಅತಿಶ್ರೇಷ್ಠ ಪ್ರಶಸ್ತಿ ಹೆಸ್ಮಿನಿ ದಾವಣಗೆರೆ, ಶ್ರೇಷ್ಠ ಪ್ರಶಸ್ತಿ ಸ್ಕೂಲ್ ತುಮಕೂರು ಪಡೆದಿದ್ದಾರೆ.

Thursday, July 14, 2011




ಜೂಜುಕೋರರ ಬಂಧನ: ಬಾಜಿಕಟಿದ್ದ್ಟ ಹಣ ವಶ
ಚಿಕ್ಕನಾಯಕನಹಳ್ಳಿ,ಜು.14: ಪಟ್ಟಣದ ಎಸ್.ಎಲ್.ಎನ್. ಚಿತ್ರ ಮಂದಿರದ ಬಳಿ ಜೂಜಾಡುತ್ತಿದ್ದ ಎಂಟು ಮಂದಿಯನ್ನು ಬಂಧಿಸಿದ್ದು, ಬಾಜಿಕಟ್ಟಿದ್ದ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಿ.ಎಚ್.ರಸ್ತೆಯ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಚಿತ್ರಮಂದಿರದ ಬಳಿ ಜೂಜಾಡುತ್ತಿದ್ದ ಗೌತಮ್, ನಿಂಗರಾಜು, ರವಿ,ಪರಮೇಶ್, ಗವಿರಂಗ, ಗೋಪಿ, ಜಯಕುಮಾರ್, ಪರಮೇಶ್ ಎಂಬುವರನ್ನು ಬಂಧಿಸಿದ ಪೋಲೀಸರು, ಬಾಜಿಕಟ್ಟಿದ ಹಣವಾದ ಆರು ಸಾವಿರ ರೂಗಳನ್ನು ಸುಬಧರ್ಿಗೆ ತೆಗೆದುಕೊಂಡಿದ್ದಾರೆ.
ಸಿ.ಪಿ.ಐ.ಪ್ರಭಾಕರ್, ಪಿ.ಎಸೈ.ಚಿದಾನಂದಮೂತರ್ಿ ಜೂಜುಕೋರರ ಮೇಲೆ ದಾಳಿ ನಡೆಸಿದ್ದಾರೆ.
ಏಕಾದಶಿ ಜಾತ್ರೆಯಲ್ಲಿ ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆದ ವೀರರು
ಚಿಕ್ಕನಾಯಕನಹಳ್ಳಿ,ಜು.14 : ಶ್ರೀ ಹಳೆಯೂರು ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದವರು ಹಮ್ಮಿಕೊಂಡಿದ್ದ
ತೇರಿಗೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯಲ್ಲಿ 105ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು.
ತೇರಿಗೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯಲ್ಲಿ ವಿಜೇತರಾದವರೆಂದರೆ ಕ್ಷೇತ್ರಪಾಲ್ ದಿಬ್ಬದಹಳ್ಳಿ ಪ್ರಥಮ ಸ್ಥಾನ, ಸಿ.ಎನ್.ರಾಮ್ ಪ್ರಸಾದ್ ಚಿ.ನಾ.ಹಳ್ಳಿ ದ್ವಿತೀಯ ಸ್ಥಾನ, ಆಂಜನೇಯ ನೆಲಮಂಗಲ ತೃತೀಯ ಸ್ಥಾನ, ಪಾಂಡುರಂಗಯ್ಯ ಕೆ.ಬಿ.ಕ್ರಾಸ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಸಮಾಧಾನಕರ ಬಹುಮಾನ ಪಡೆದವರೆಂದರೆ ಲೋಕೇಶ್ ಹುಳಿಯಾರು, ನಾರಾಯಣ್ರಾವ್ ಗೋಡೆಕೆರೆ, ಬಸವರಾಜು ಚಿ.ನಾ.ಹಳ್ಳಿ, ಮಲ್ಲಿಕಾಜರ್ುನ ಕೆ.ಬಿ.ಕ್ರಾಸ್, ಮಂಜುನಾಥ್ ಚಿ.ನಾ.ಹಳ್ಳಿ, ಸಿ.ಮೂತರ್ಿ ಬಾಣಸಂದ್ರ ಬಹುಮಾನ ಪಡೆದಿದ್ದಾರೆ.
ನವದಂಪತಿಗಳ ಸ್ಪಧರ್ೆ : ಅಂತರ್ ಜಾತಿ ವಿವಾಹ ವಿಜೇತರು: ಮೋಹನ್ ರಾಜು ಪವಿತ್ರ ಚಿಕ್ಕಮಗಳೂರು, ಅದೃಷ್ಠ ದಂಪತಿಗಳಾದ ಕುಮಾರಸ್ವಾಮಿ ಲಕ್ಷ್ಮೀ ಬಹುಮಾನ ಪಡೆದರು.

Wednesday, July 13, 2011

Tuesday, July 12, 2011

Monday, July 11, 2011

Friday, July 8, 2011



ಹೇಮಾವತಿ ಹರಿಯುವುದು ತಾಲ್ಲೂಕಿಗೆ ಸಂತೋಷದಾಯಕ ಸಂಗತಿ
ಚಿಕ್ಕನಾಯಕನಹಳ್ಳಿ,ಜು.08: ಬಹುದಿನಗಳಿಂದ ಈ ತಾಲ್ಲೂಕಿನ ರೈತರ ಬೇಡಿಕೆಯಾಗಿದ್ದ ಹೇಮಾವತಿಯ ನೀರು 2011ನೇ ಇಸವಿಯಲ್ಲಿ ಈಡೇರಿಸಿರುವುದು ಸಂತೋಷದಾಯವಾದ ಸಂಗತಿ ಎಂದು ತಾ.ಬಿಜೆಪಿ ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ ಹರ್ಷ ವ್ಯಕ್ತಪಡಿಸಿದ್ದಾರೆ.
ಹೇಮಾವತಿಯ ನೀರು ಹರಿಯಲು ಬಹಳಷ್ಟು ಜನರ ಶ್ರಮವಿದ್ದು, ಮೊದಲಿಗೆ ಅಜ್ಜನಹಳ್ಳಿಯ ಶರತ್ಕುಮಾರ್ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರಿಗೆ ಮನವಿ ಸಲ್ಲಿಸಿ ಇದಕ್ಕೆ ಚಾಲನೆ ನೀಡಿದರು, ಆದರೆ ಅದಕ್ಕೆ ಸರಿಯಾದ ಬೆಂಬಲ ದೊರೆಯದೆ ನೆನೆಗುದಿಗೆ ಬಿತ್ತು.
ಶೆಟ್ಟಿಕೆರೆ ಸುತ್ತಮುತ್ತಲಿನ ಗ್ರಾಮಸ್ಥರು ಯುವಕರು ದೃಢ ಮನಸ್ಸು ಮಾಡಿ ಸ್ವಮತ ಖುಚರ್ಿನಿಂದ ವಿಧಾನಸೌಧದ ಮೆಟ್ಟಿಲೇರಿಳಿದರು. ಕಳ್ಳಂಬೆಳ್ಳದ ಅಂದಿನ ಶಾಸಕರಾಗಿದ್ದ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ತಂಡ ಅಂದಿನ ಜಲಸಂಪನ್ಮೂಲ ಮಂತ್ರಿಗಳಾಗಿದ್ದ ಕೆ.ಎಸ್.ಈಶ್ವರಪ್ಪನವರನ್ನು ಕಂಡು ಸವರ್ೆಗೆ ಚಾಲನೆ ದೊರಕಿಸಿಕೊಂಡರು.
ಹುಳಿಯಾರಿನ ರೈತ ಸಂಘ ಉಪವಾಸ ಸತ್ಯಾಗ್ರಹ, ಬೈಕ್ ರ್ಯಾಲಿ ಗೋಡೆಕೆರೆಯ ಮಹಿಳಾ ಬಿ.ಜೆ.ಪಿ. ತಂಡ, ಈ ತಾಲ್ಲೂಕಿನ ಎಲ್ಲಾ ಮಠಾಧಿಪತಿಗಳು ಪೂಜ್ಯ ಸಿದ್ದಗಂಗಾ ಮಠಾಧೀಶರು ವಿವಿಧ ಸಂಘ ಸಂಸ್ಥೆಯವರು ಮುಖ್ಯಮಂತ್ರಿಗಳಿಗೆ ಜಲಸಂಪನ್ಮೂಲ ಮಂತ್ರಿಗಳಿಗೆ ಒತ್ತಾಯ ಮಾಡುತ್ತಲೆ ಒಂದು ಸಮಸ್ಯೆ ಜೀವಂತವಾಗಿರುವಂತೆ ಎಚ್ಚರಿಕೆ ವಹಿಸಿದವು ಬಾಚಿಹಳ್ಳಿಯ ಸವರ್ೆಯರ್ ವೇದಾಂತ ಮೂತರ್ಿಯ ಕಾರ್ಯವೂ ಶ್ಲಾಘನೀಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಾನ್ಯ ಯಡಿಯೂರಪ್ಪ ಮತಿಘಟ್ಟ ಸಾರ್ವಜನಿಕ ಸಮಾರಂಭದಲ್ಲಿ ಶೆಟ್ಟಕೆರೆ ಭಾಗಕ್ಕೆ ನೀರು ಹರಿಸುವ ಭರವಸೆ ನೀಡಿದ್ದರು.ಮುಖ್ಯ ಮಂತ್ರಿಗಳಾದ ಮೇಲೆ ತಿಪಟೂರಿನ ಸಾರ್ವಜನಿಕ ಸಮಾರಂಭದಲ್ಲಿ ಚಿ.ನಾ.ಹಳ್ಳಿಗೆ ನೀರು ಹರಿಸುವ ಭರವಸೆ ನೀಡಿದ್ದರು, ಆದರೆ ನಮ್ಮ ಶಾಸಕರು ಸಕರ್ಾರ ತಾರತಮ್ಯ ಮಾಡುತ್ತಿದೆ ಎಂದು ಟೀಕಿಸಿದರು. ಆ ಭಾವನೆ ಇದ್ದರೆ ವಿರೋಧ ಪಕ್ಷದ ಶಾಸಕರಿರುವ ಈ ಕ್ಷೇತ್ರಕ್ಕೆ ನೀರು ಬರಲು ಸಾಧ್ಯವಿತ್ತೆ? ಮತ್ತೊಬ್ಬ ಮಾಜಿ ಶಾಸಕರು, ಅವರು ಶಾಸಕರಿದ್ದ ಅವಧಿಯಲ್ಲಿ ಶೆಟ್ಟಿಕೆರೆ ಸಾರ್ವಜನಿಕ ಸಮಾರಂಭದಲ್ಲಿ ಈಭಾಗಕ್ಕೆ ನೀರು ಬರಲು ಸಾಧ್ಯವೇ ಇಲ್ಲ ಎಂದು ಯಾವ ಸಂಕೊಚವಿಲ್ಲದೆ ಘೊಷಿಸಿದ್ದರು. ಶೆಟ್ಟಿಕೆರೆ ತಂಡ ಭೇಟಿ ಮಾಡಿದಾಗ. ಈಗ ಮಂತ್ರಿಗಳ ಭೇಟಿ ಸಾಧ್ಯವಿಲ್ಲ ಯಾವುದಾದರೊಂದು ಸಿನಿಮಾ ನೋಡಿಕೊಂಡು ಹೋಗಿ ಎಂದು ತಾತ್ಯರವಾಗಿ ನುಡಿದರು. ಇಷ್ಟೆಲ್ಲಾ ಅಡೆ ತಡೆಯ ನಡುವೆ ಸಂಸದರಾದ ಜಿ.ಎಸ್. ಬಸವರಾಜು, ಮಾಜಿ ಶಾಸಕರಾದ ಕೆ.ಎಸ್. ಕಿರಣ್ ಕುಮಾರ್ರವರು ತಮ್ಮ ರಾಜಕೀಯ ಪ್ರಭಾವ ಬೀರಿ26 ಕೆರೆಗಳಿಗೆ 102.6ಕೋಟಿ ಬಿಡುಗಡೆಯಾಗಿದ್ದು. ಇನ್ನು 2 ತಿಂಗಳೊಳಗೆ ಟೆಂಟರ್ ಪ್ರಕ್ರಿಯೆ ನಡೆಯುವುದು ಎಂದು ಇದೇ ಮಾಹೆ 5 ರಂದು ಭೇಟಿಯಾದ ಚಿ.ನಾ.ಹಳ್ಳಿ ತಾಲ್ಲೂಕು ತಂಡಕ್ಕೆ ತಿಳಿಸಿದ್ದಾರೆ.
ಈ ಭಾಗದ ರೈತರು ತಮ್ಮ ಸ್ವಂತಿಗೆ ಸ್ವಲ್ಪ ಧಕ್ಕೆಯಾದರೂ ಸಾರ್ವಜನಿಕರಿಗೆ ಅನುಕೂಲವಾಗುವ ಈ ಮಹತ್ತರ ಕಾರ್ಯಕ್ಕೆ ಸಕರ್ಾರದೊಟ್ಟಗೆ ಕೈ ಜೋಡಿಸಬೇಕು. ಆಗಾದರೆ ಇನ್ನೆರಡು ವರ್ಷದೊಳಗೆ ಹೆಮೆ ಹರಿದು ಬರಡಾದ ಈ ಭೂಮಿ ನಂದನವನವಾಗುವ ಕಾಲ ದೂರ ಇಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾತ್ರೆಯಲ್ಲಿ ಸಾಧಕರಿಗೆ ಸನ್ಮಾನ
ಚಿಕ್ಕನಾಯಕನಹಳ್ಳಿ,ಜು.08; ಶ್ರೀ ಹಳೆಯೂರು ಆಂಜನೇಯಸ್ವಾಮಿಯವರ ಏಕಾದಶಿ ಜಾತೆಯ ಅಂಗವಾಗಿ ನವದಂಪತಿಗಳ ಸ್ಪದರ್ೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಇದೇ 13ರ ಬುಧವಾರ ರಾತ್ರಿ 8ಕ್ಕೆ ಏರ್ಪಡಿಸಲಾಗಿದೆ.
ದಿವ್ಯಜ್ಯೋತಿ ಹವ್ಯಾಸಿ ಕಲಾಸಂಘದ ವತಿಯಿಂದ ಕೋ-ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸಮಾರಂಭದಲ್ಲಿ ಸಾಧಕರಾದ ಕೆಂಕೆರೆ ಚಂದ್ರಕಲಾ ಸತೀಶ್, ಪತ್ರಕರ್ತ ಉಗಮ ಶ್ರೀನಿವಾಸ್, ವೃತ್ತ ನಿರೀಕ್ಷಕ ರವಿಪ್ರಸಾದ್, ವರದಕ್ಷಿಣೆ ವಿರೋದಿ ವೇದಿಕೆ ಸಂಚಾಲಕ ಸಾ.ಚಿ.ರಾಜಕುಮಾರ್, ಆರ್ಚಕ ಶ್ರೀನಿವಾಸರಾಜರವರಿಗೆ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಕಾಲೇಜಿನ ಕೊರತೆಗೆ ಶೀಘ್ರ ಸ್ಪಂದನೆ ವಿ.ಎಸ್.ಆಚಾರ್ಯ
ಚಿಕ್ಕನಾಯಕನಹಳ್ಳಿ,ಜು.08 : ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ನೀಗಿಸಬೇಕೆಂದು ಗೃಹ ಸಚಿವ ವಿ.ಎಸ್.ಆಚಾರ್ಯರವರಿಗೆ ಕಾಲೇಜಿನ ಕೊರತೆ ನೀಗಿಸಬೇಕೆಂದು ನೀಡಿದ ಮನವಿಗೆ ಸಚಿವರು ಸ್ಪಂದಿಸಿದ್ದಾರೆಂದು ಮಾಜಿ ಶಾಸಕ ಬಿ.ಲಕ್ಕಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಾಲೇಜಿನ ಉಪನ್ಯಾಸಕರ ಕೊರತೆ, ಕೊಠಡಿಗಳ ಕೊರತೆ, ವಿಜ್ಞಾನ ವಿಭಾಗದ ಕೊರತೆಗಳನ್ನು ನೀಗಿಸಲು ಜೊತೆ ಸಚಿವರ ಕಛೇರಿಗೆ ಹೋಗಿ ಮನವಿ ಅಪರ್ಿಸಿರುವುದಾಗಿ ತಿಳಿಸಿದರು.
ಎಚ್.ಬಿ.ಎಸ್.ನಾರಾಯಣಗೌಡ ಮಾತನಾಡಿ ನಂಜುಂಡಪ್ಪ ವರದಿಯಂತೆ ತಾಲ್ಲೂಕು ಹಿಂದುಳಿದ್ದು ತಾಲ್ಲೂಕು ಅಭಿವೃದ್ದಿ ಪಡಿಸಲು ಸಹಕರಿಸಿ ಎಂಬ ನಮ್ಮ ಮನವಿಗೆ ಶೀಘ್ರವೇ ಇದರ ಬಗ್ಗೆ ಸ್ಪಂದನೆ ನೀಡುವುದಾಗಿ ತಿಳಿಸಿದರ.
ತಾ.ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಸ್ವಾತಂತ್ರ ಹೋರಾಟಗಾರ ಎಸ್.ಮುರುಡಯ್ಯ, ಗುರುಸಿದ್ದಯ್ಯ, ಕೆ.ಜಿ.ಕೃಷ್ಣೆಗೌಡ ಉಪಸ್ಥಿತರಿದ್ದರು.
ಒಂದೇ ಸಂಘದಲ್ಲಿದ್ದು ಸಂಘವನ್ನು ಬೆಳಸಿ
ಚಿಕ್ಕನಾಯಕನಹಳ್ಳಿ,ಜು.07 :- ಮಹಿಳೆಯರು 4-5 ಸಂಘಗಳಿಗೆ ಸೇರಿ ಆ ಸಂಘದಿಂದ ಸಾಲತೆಗೆದುಕೊಂಡು ಸಾಲದ ಹಣವನ್ನು ಖಚರ್ು ಮಾಡಿ, ಸಾಲದ ಬಡ್ಡಿ ಹೆಚ್ಚುತ್ತಾ ಸಾಲವನ್ನು ಕಟ್ಟುವುದಕ್ಕೆ ಆಗದೆ ಇದ್ದಾಗ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಈ ರೀತಿಯ ವ್ಯವಸ್ಥೆ ತಪ್ಪಬೇಕು ಮಹಿಳೆಯರು ಒಂದೇ ಸಂಘದಲ್ಲಿ ಇದ್ದು ಸಂಘವನ್ನು ಬಲಪಡಿಸಬೇಕು ಎಂದು ಸಿ.ಡಿ.ಪಿ.ಓ ಅನೀಸ್ಖೈಸರ್ ಹೇಳಿದರು.
ಪಟ್ಟಣದ ಎಂ.ಪಿ.ಜಿ.ಎಸ್. ಶಾಲೆಯಲ್ಲಿ ಶಿಶು ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ಗೊಂಚ್ಚಲು ಬ್ಲಾಕ್ ಸೊಸೈಟಿಗಳ ಬಲವಾರ್ಧನೆಗಾಗಿ ಗುಂಪಿನ ಸದಸ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬ್ಯಾಂಕ್ಗಳಿಗೆ ಮತ್ತು ಶಿಶು ಅಭಿವೃದ್ದಿ ಇಲಾಖೆಗೆ ಸ್ತ್ರೀ ಶಕ್ತಿ ಸಂಘಗಳ ಬಗ್ಗೆ ನಂಬಿಕೆ ಇರುವುದರಿಂದಲೇ ಸಾಲವನ್ನು ನೀಡುತ್ತಾರೆ. ಸಾಲ ಪಡೆದವರು ಬ್ಯಾಂಕ್ಗೆ ಮರಳಿ ನೀಡಿ ಪುನಹ ಸಾಲ ಪಡೆಯಲು ತಿಳಿಸಿದ ಅವರು ಸ್ತೀ ಶಕ್ತಿ ಸಂಘಗಳಿಗೆ ಮಹಿಳೆಯರೇ ಮುಂದಾಗಿ ಸಂಘವನ್ನು ಬಲಪಡಿಸಿ ಹಣವನ್ನು ಉಳಿತಾಯ ಮಾಡುವುದರಲ್ಲಿ ಮುಂದಾಬೇಕು. ಹೆಣ್ಣು ಮಕ್ಕಳ ಬ್ರೂಣ ಹತ್ಯೆ ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಮಾತನಾಡಿ ಮಹಿಳೆಯರು ಸಂಘದಲ್ಲಿರುವ ಲೋಪದೋಷಗಳನ್ನು ಬಲಪಡಿಸುತ್ತಾ ಸಂಘವನ್ನು ಒಗ್ಗಟ್ಟಿನ ಕಡೆ ಕರೆದೊಯ್ಯಬೇಕು, ಸಂಘ ಕಟ್ಟುವುದು ಬಹಳ ಕಷ್ಠಕರವಾದ ಕೆಲಸವಾಗಿದ್ದು ಸಂಘ ಕಟ್ಟುವವರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಇದಕ್ಕಾಗಿ ಸಕರ್ಾರ ಸ್ತ್ರೀ ಶಕ್ತಿ ಸಂಘಗಳಿಗೆ ಸಹಕಾರ ನೀಡುತ್ತಿದೆ ಎಂದರು.
ಸಮಾರಂಭದಲ್ಲಿ ಮೇಲ್ವಿಚಾರಕರಾದ ನಾಗರತ್ನಮ್ಮ, ಅನುಸೂಯಮ್ಮ, ಮಹದೇವಮ್ಮ ಮುಂತಾದವರಿದ್ದರು.

Thursday, July 7, 2011



ತಾಲೂಕಿನ ಆಸ್ಪತ್ರೆಗಳ ಕಾರ್ಯವೈಖರಿಯ ಬಗ್ಗೆ ತಾ.ಪಂ.ಅಧ್ಯಕ್ಷರ ಅಸಮಾಧಾನ
ಚಿಕ್ಕನಾಯಕನಹಳ್ಳಿ,ಜು.07 : ತಾಲೂಕಿನ ಯಾವುದೇ ಆಸ್ಪತ್ರ್ರೆಗೆ ಹೋದರು ವೈದ್ಯರು ಸಾರ್ವಜನಿಕರಿಗೆ ಸಿಗುವುದಿಲ್ಲ, ಆಸ್ಪತ್ರೆಯಲ್ಲಿ ವೈದ್ಯರು ಇದ್ದರೂ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಗ್ರಾಮಸ್ಥರು ನಮ್ಮ ಬಳಿ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ ಎಂದು ತಾ.ಪಂ. ಅಧ್ಯಕ್ಷ ಜಿ.ಆರ್.ಸೀತರಾಮಯ್ಯ ಆರೋಪಿಸಿದರು.
ತಾ.ಪಂ.ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದ ಅವರು, ರಾತ್ರಿ ಸಮಯದಲ್ಲಿ ತಾಲ್ಲೂಕಿನ ಕೆಲವು ಆಸ್ಪತ್ರೆಗಳ ವೈದ್ಯರು ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡದೆ, ವೈದ್ಯರು ಆಸ್ಪತ್ರೆಯಿಂದ ದೂರವೇ ಇರುತ್ತಾರೆ ಅಲ್ಲದೆ ಕೆಲವು ಆಸ್ಪತ್ರೆಗಳು ದನಗಳ ಕೊಟ್ಟಗೆಯಂತಾಗಿದೆ ಎಂದರು, ಈ ಸಂದರ್ಭದಲ್ಲಿ ಧ್ವನಿಗೂಡಿಸಿದ ತಾ.ಪಂ.ಸದಸ್ಯೆ ಚೇತನ್ಗಂಗಾಧರ್ ಗೂಬೆಹಳ್ಳಿ ಆಸ್ಪತ್ರೆಯಲ್ಲಿ ಮಾತ್ರೆ ಹಾಗೂ ಇಜೆಕ್ಷನ್ಗೆ ಜನರಿಂದ ಹಣ ತೆಗೆದು ಕೊಳ್ಳುತ್ತಿದ್ದಾರೆ ಎಂದರಲ್ಲದೆ, ಹಣ ನೀಡದಿದ್ದರೆ ಆರೋಗ್ಯ ತಪಸಣೆ ಮಾಡುವುದಿಲ್ಲವೆನ್ನುತ್ತಾರೆ ಎಂದು ಆ ಭಾಗದ ಜನರು ದೂರು ನೀಡಿದ್ದಾರೆ ಎಂದರು ಈ ಎಲ್ಲಾ ದೂರುಗಳ ಬಗ್ಗೆ ಆರೋಗ್ಯಾಧಿಕಾರಿ ಗಮನ ಹರಿಸಬೇಕು ಎಂದರು.
ಬೆಸ್ಕಾಂ ಇಲಾಖೆಯಲ್ಲಿನ ಕೆಲವು ನೌಕರರ ಬೇಜವಬ್ದಾರಿಯಿಂದ ರೈತರಿಗೆ ವಿದ್ಯುತ್ ಸಂಪರ್ಕ ಸಮರ್ಪಕ ನೀಡುತ್ತಿಲ್ಲ ಎಂದು ದೂರಿದ ಅವರು, ಗಂಗಾಕಲ್ಯಾಣ ಯೋಜನೆಯಲ್ಲಿ ಬೋರ್ ಕೊರಿಸಿದವರು ಕಳೆದಎರಡು ವರ್ಷ ವಿದ್ಯುತ್ ಸಂಪರ್ಕವಿಲ್ಲದೆ ಪರಿತಪಿಸುತ್ತಿದ್ದಾರೆ. ಕಂಟ್ರಾಕ್ಟರ್ಗಳು ಅಧಿಕಾರಿಗಳಿಗೆ ಕೊಡಬೇಕೆಂದು ಎರಡರಿಂದ ಐದು ಸಾವಿರವರೆಗೆ ಲಂಚಕೇಳುತ್ತಿದ್ದಾರೆ ಎಂಬ ದೂರಿದೆ ಎಂದರು.
ಕೆ.ಇ.ಬಿ. ಅಧಿಕಾರಿ ಮಾತನಾಡಿ ಗಂಗಾ ಕಲ್ಯಾಣ ಯೋಜನೆಯ ಯಾರಾದರು ಲಂಚತೆಗೆದುಕೊಂಡಿರುವ ಬಗ್ಗೆ ಅಜರ್ಿಯ ಮುಖಾಂತರ ಕೂಡಲೆ ಕ್ರಮತೆಗೆದುಕೊಳ್ಳತ್ತಾರೆ.ಸಭೆಯಲ್ಲಿ ತಾಲ್ಲೂಕು ಪಂಚಾಯ್ತಿಯ ಕಾರ್ಯನಿವರ್ಾಹಣಾಧಿಕಾರಿ ಎನ್.ಎಂ.ದಯಾನಂದ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ಬಿ.ಬಿ.ಫಾತಿಮಾ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.07 : ಆತ್ಮ ಯೋಜನೆಯಡಿ ಒಂದು ದಿನದ ಹೈನುಗಾರಿಕೆ ತರಬೇತಿ ಶಿಬಿರ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಮತ್ತು ವಿವಿಧ ಸಕರ್ಾರೇತರ ಸಂಸ್ಥೆಗಳ ಯೋಜನೆಯ ಸಮಾರೋಪ ಸಮಾರಂಭವನ್ನು ಇದೇ 8ಂದು ಏರ್ಪಡಿಸಲಾಗಿದೆ.
ತರಬೇನಹಳ್ಳಿಯ ಷಡಕ್ಷರಿ ಇವರ ತೋಟದಲ್ಲಿ ಸಮಾರಂಭ ಹಮ್ಮಿಕೊಂಡಿದ್ದು ಕೃಷಿಕ ಷಡಕ್ಷರಿ ತರಬೇನಹಳ್ಳಿ ಅಧ್ಯಕ್ಷತೆ ವಹಿಸಲಿದ್ದು ರರೈತ ಸಂಘದ ಜಿಲ್ಲಾ ಸಂಚಾಲಕ ಶಂಕರಣ್ಣ ಸಮಾರೊಪ ಭಾಷಣ ಮಾಡಲಿದ್ದಾರೆ. ವಿಶೇಷ ಆಹ್ವಾನಿತಾಗಿ ತಾ.ಪಂ.ಸದಸ್ಯ ಹೆಚ್.ಆರ್.ಶಶಿಧರ್, ಗ್ರಾ.ಪಂ.ಅಧ್ಯಕ್ಷೆ ಜಿ.ಎಸ್.ಕುಶಲ, ಸದಸ್ಯ ಜಿ.ಪಿ.ಪರಮಶಿವಯ್ಯ, ರಾಜ್ಯ ರೈತ ಸಂಘದ ಅಧ್ಯಕ್ಷ ಮಲ್ಲೇಶಪ್ಪ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಸಾಹಿತಿ ಕೃಷ್ಣಮೂತರ್ಿ ಬಿಳಿಗೆರೆ, ಜಲಸಿರಿ ಸಂಪಾದಕ ಮಲ್ಲಿಕಾಜರ್ುನ ಹೊಸಪಾಳ್ಯ, ಪ್ರಜಾವಾಣಿ ಶ್ರೀಕಂಠ ಗಾಣದಾಳು, ಸುವರ್ಣಮುಖಿ ಸಮೂಹ ಮಾಧ್ಯಮ ಕೇಂದ್ರದ ಗುರುಮೂತರ್ಿ ಕೊಟಿಗೆಮನೆ, ಜಿ.ಕೃಷ್ಣಪ್ರಸಾದ್, ವಿಶ್ವನರ್ಾ ಅಣೇಕಟ್ಟೆ, ಕ್ಯಾಪ್ಟನ್ ಸೋಮಶೇಖರ್ ಉಪಸ್ಥಿತರಿರುವರು.
ಶಿಕ್ಷಕರ ಜಿಲ್ಲಾ ಮಟ್ಟದ ಸಮ್ಮೇಳನ
ಚಿಕ್ಕನಾಯಕನಹಳ್ಳಿ,ಜು.07 : ಗುಣಾತ್ಮಕ ಶಿಕ್ಷಣ ಬಲಪಡಿಸುವ, ಶಿಕ್ಷಕರ ವಿವಿಧ ಬೇಡಿಕೆಗಳಿಗೆ ಸಕರ್ಾರದ ಗಮನ ಸೆಳೆಯಲು ಜಿಲ್ಲಾ ಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಇದೇ 8ರಂದು ಏರ್ಪಡಿಸಿದ್ದು ತಾಲ್ಲೂಕಿನ ಸಮಸ್ತ ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸುವಂತೆ ತಾ.ಪ್ರಾ.ಶಾ.ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೆಶ್ ತಿಳಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠದ ಸುಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರ ದಿವ್ಯಸಾನಿದ್ಯದಲ್ಲಿ ಹಮ್ಮಿಕೊಂಡಿದ್ದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಂಘಟನೆಯ ಹಿತದೃಷ್ಠಿಯಿಂದಲೂ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಸಮ್ಮೇಳನಕ್ಕೆ ಸಚಿವರುಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು, ಲೋಕಸಬಾ ಸದಸ್ಯರು, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಜಿಲ್ಲಾ ಹಾಗೂ ತಾಲ್ಲೂಕಿನ ಸಾ.ಶಿ.ಇಲಾಖಾ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಕಾರ್ಯದಶರ್ಿಗಳು ಹಾಗೂ ಪಧಾಧಿಕಾರಿಗಳು ಭಾಗವಹಿಸಲಿದ್ದು ಶಿಕ್ಷಕರುಗಳು ಸಮ್ಮೇಳನಕ್ಕೆ ಭಾಗವಹಿಸಿ ಸಮ್ಮೇಳನ ಯಶಸ್ವಿಗೊಳಿಸಲು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

Tuesday, July 5, 2011



ತಾಲ್ಲೂಕಿನಲ್ಲಿ ಯಶಸ್ವಿಯಾದ ಶಾಲೆಗಾಗಿ ನೀವು ನಾವು
ಚಿಕ್ಕನಾಯಕನಹಳ್ಳಿ,ಜು..05 : ವಿದ್ಯೆಯನ್ನು ಕಲಿಸಬೇಕೆಂಬ ಆಸಕ್ತಿ ಶಿಕ್ಷಕರಲ್ಲಿದ್ದಾಗ ಮಕ್ಕಳಿಗೆ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳುವ ಕುತೂಹಲ ಹೆಚ್ಚುತ್ತದೆ, ಈ ವಿಷಯಗಳನ್ನು ತಿಳಿಸುವುದೇ ಶಾಲೆಗಾಗಿ ನಾವು ನೀವು ಕಾರ್ಯಕ್ರಮವಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಹೇಳಿದರು.
ತಾಲ್ಲೂಕಿನ ಸಾಸಲು ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ರಾಜ್ಯದಲ್ಲೆಲ್ಲಾ ಶಾಲೆಗಾಗಿ ನಾವು ನೀವು ಕಾರ್ಯಕ್ರಮ ಹಮ್ಮಿಕೊಂಡಿದ್ದು ಪೋಷಕರಿಗೆ, ಎಸ್.ಡಿ.ಎಂ.ಸಿ ಸದಸ್ಯರಿಗೆ ಹಾಗೂ ಜನಪ್ರತಿನಿಧಿಗಳು ಶಾಲೆಯ ಸ್ವಚ್ಚತೆ, ಕೊರತೆಯಿರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಬೇಕು. ಎಸ್.ಡಿ.ಎಂ.ಸಿ ಸದಸ್ಯರು ಶಾಲೆಗೆ ಆಗಾಗ ಬಂದು ಶಾಲೆಯ ಅಭಿವೃದ್ದಿ ಕೆಡ ಗಮನ ಹರಿಸಬೇಕು. ಶಾಲೆಯಲ್ಲಿ ಮೊದಲು ಗುಣಾತ್ಮಕ ಶಿಕ್ಷಣ ಕ್ರಿಯಾಶೀಲವಾದ ಸ್ಪಷ್ಠ ಓದಿಗೆ ಪ್ರಾಮುಖ್ಯತೆ ಇತ್ತು ಈಗ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತವೇ ಮುಖ್ಯವಾಗಿದೆ ಎಂದ ಅವರು ಎಸ್.ಡಿ.ಎಂ.ಸಿ ಸದಸ್ಯರುಗಳು 14 ವರ್ಷ ವಯಸ್ಸಾಗಿದ್ದು ಶಾಲೆಗೆ ಸೇರದೇ ಇದ್ದವರನ್ನು ಶಾಲೆಗಳತ್ತ ಪೋಷಕರ ಮನವೊಲಿಸಿ ಕರೆತರುವಲ್ಲಿ ನಮಗೆ ನೆರವಾಗಬೇಕು. ಶಾಲಾ ಶಿಕ್ಷಕರು ಶಾಲೆಗೆ ಸಮಯಕ್ಕೆ ಸರಿಯಾಗಿ ಬರುತ್ತಾರೋ ಇಲ್ಲವೋ ಎಂಬುದನ್ನು ಗಮನಿಸುತ್ತಿರಬೇಕು ಮತ್ತು ಸಕರ್ಾರಿ ಶಾಲೆಗಳಲ್ಲಿ ಆಯ್ಕೆಯಾಗಿ ಬಂದಿರುವ ಶಿಕ್ಷಕರು ಮೆರಿಟ್ ಆಧಾರದ ಮೇಲೆ ಆಯ್ಕೆಯಾಗಿ ಉತ್ತಮವಾಗಿ ಭೋದನೆ ನೀಡಲು ಸಕರ್ಾರಿ ಶಾಲೆಗೆ ಬಂದಿರುತ್ತಾರೆ ಆದರೂ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದು ಸಕರ್ಾರಿ ಶಾಲೆಗಳತ್ತ ಮಕ್ಕಳು ವಾಲುವಂತೆ ಎಲ್ಲಾ ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.
ಸಮಾರಂಭದಲ್ಲಿ ತಾ.ಪಂ.ಸದಸ್ಯ ರಮೇಶ್ಕುಮಾರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವಯ್ಯ, ಸಮನ್ವಯಾಧಿಕಾರಿ ಸುಧಾಕರ್, ದಿನೇಶ್, ರವಿಕುಮಾರ್, ಕುಮಾರ್, ಸುರೇಶ್, ಸುವರ್ಣಮ್ಮ ಮುಂತಾದವರಿದ್ದರು.
ಚಿಕ್ಕನಾಯಕನಹಳ್ಳಿ,: ಆರರಿಂದ ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವಿದ್ದು ಉಚಿತ ಸಮವಸ್ತ್ರ, ಪಠ್ಯಪುಸ್ತಕವನ್ನು ಸಕರ್ಾರ ನೀಡುತ್ತಿರುವುದರಿಂದ ಶೈಕ್ಷಣಿ ಪದ್ದತಿ ಸುಧಾರಣೆಯಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಹೇಳಿದರು.
ಪಟ್ಟಣದ ಸಕರ್ಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಕ್ಕಳು ಶಾಲೆಗೆ ಗೈರು ಹಾಜರಾಗದಂತೆ ಶ್ರದ್ದೆಯಿಂದ ವಿದ್ಯಾಭ್ಯಾಸವನ್ನು ಮಾಡಿ ಉನ್ನತ ಶಿಕ್ಷಣವನ್ನು ಪಡೆಯಲು ಸಲಹೆ ನೀಡಿದರು.
ವಿಷಯ ಪರಿವೀಕ್ಷಕ ಭೈರಪ್ಪನವರು ಮಾತನಾಡಿ ಶಿಕ್ಷಣದ ಹಕ್ಕನ್ನು ಯಾರು ಕಿತ್ತುಕೊಳ್ಳು ಸಾಧ್ಯವಿಲ್ಲ, ಉನ್ನತವಾದ ಶಿಕ್ಷಣ ಪಡೆಯುತ್ತಾ ವಿದ್ಯೆಯನ್ನು ಕಲಿತು ಪ್ರತಿಭಾವಂತರಾಗಲು ತಿಳಿಸಿದರು.
ಸಮಾರಂಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸಿ.ಬಿ.ಲೋಕೇಶ್ ಪ್ರತಿಜ್ಞಾವಿದಿ ಭೋದಿಸಿ ಈ ನಾಡಿನ ಪ್ರಜ್ಞಾವಂತ ಪ್ರಜೆಯಾದ ನಾವು,6ರಿಂದ 14 ವರ್ಷ ವಯಸ್ಸಿನೊಳಗಿನ ಎಲ್ಲಾ ಮಕ್ಕಳು ಮನೆಗೆ ಸಮೀಪದಲ್ಲಿರುವ ಶಾಲೆಯಲ್ಲಿ ಉಚಿತವಾಗಿ ಹಾಗೂ ಕಡ್ಡಾಯವಾಗಿ ಗುಣಾತ್ಮಕ ಪ್ರಾಥಮಿಕ ಶಿಕ್ಷಣ ಪಡೆದು ಉತ್ತಮ ನಾಗರೀಕರಾಗುವಂತೆ ನೋಡಿಕೊಳ್ಳುತ್ತೇವೆ ಈ ಮೂಲಕ ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆಗೆ ಬದ್ದತೆಯನ್ನು ಘೋಷಿಸಿದರು.
ಸಮಾರಂಭದಲ್ಲಿ ಪುರಸಭಾ ಸದಸ್ಯೆ ಕವಿತಾಚನ್ನಬಸವಯ್ಯ, ಸಿ.ಡಿ.ಚಂದ್ರಶೇಖರ್, ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ, ರೋಟರಿ ಕ್ಲಬ್ ಕಾರ್ಯದಶರ್ಿ ಅಶ್ವಥ್ನಾರಾಯಣ್ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,: ಸಮಾರಂಭದಲ್ಲಿ ಸ್ವಾಭಿಮಾನಿ ಯುವಕರ ಪಡೆ ನಿಮರ್ಾಣ ಮಾಡಲು ಶಿಕ್ಷಕರಷ್ಠೇ ಸಮುದಾಯದ ಪಾತ್ರವೂ ಶ್ರೇಷ್ಠ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಸಕರ್ಾರಿ ಪ್ರೌಡಶಾಲೆಯಲ್ಲಿ ನಡೆದ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ವಿದ್ಯಾಥರ್ಿಗಳನ್ನು ಸ್ವಾವಲಂಭಿ ಮಾಡಲು ಮಾನಸಿಕ ದೈಹಿಕ ಸಾಮಥ್ರ್ಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದ ಅವರು ಮಕ್ಕಳ ಕಲಿಕೆಯ ವಾಸ್ತವಿಕತೆಯನ್ನು ಪೋಷಕರು ಅರಿಯಲು ಶಾಲೆಯ ಬಗ್ಗೆ ಕಾಳಜಿಯಿಟ್ಟು ಆಗಾಗ ಶಾಲೆಗೆ ಭೇಟಿ ನೀಡಬೇಕು ಎಂದರು.
ಸಮಾರಂಭದಲ್ಲಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ, ಎಮ್.ಎಮ್.ಜಗದೀಶ್, ಪಾರ್ವತಮ್ಮ, ಬಿ.ನಾಗರಾಜು, ಬಿ.ಎನ್.ಶಶಿಕಲಾ, ರವಿ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,: ಗುಣಾತ್ಮಕ ಶಿಕ್ಷಣಕ್ಕಾಗಿ ಕ್ರಿಯಾಶೀಲ ಆಡಳಿತ ಮೂಲಕ ಹೆಚ್.ಪಿ.ಎಸ್. ಕಾಳಮ್ಮನಗುಡಿ ಬೀದಿ ಶಾಲೆಯ ಶಾಲೆಗಾಗಿ ನೀವು ನಾವು ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿಗಳಾದ ಎಚ್.ಸಿ.ಜಗದೀಶ್, ಮುಖ್ಯೋಪಾಧ್ಯಾಯ ಕೆ.ಜಿ.ಶಂಕರಪ್ಪ, ಹಾಗೂ ಪಟ್ಟಣದ ಬಸವೇಶ್ವರ ನಗರದ ಶಾಲೆಯ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳಾದ ಸಿ.ಎಲ್.ದೊಡ್ಡಯ್ಯ, ಎಂ.ಎನ್.ಸುರೇಶ್, ಬಾಬುಸಾಹೇಬ್ ಮುಂತಾದವರಿದ್ದರು.
11ನೇ ವಷರ್ಾಚರಣೆಯಲ್ಲಿ ಸಂಪೂರ್ಣ ರಾಮಾಯಣ ನಾಟಕ
ಚಿಕ್ಕನಾಯಕನಹಳ್ಳಿ,ಜು.05 : ಮಿತ್ರಕಲಾಸಂಘದ ವತಿಯಿಂದ ಸಂಪೂರ್ಣ ರಾಮಾಯಣ ಎಂಬ ಪೌರಾಣಿಕ ನಾಟಕವನ್ನು ಇದೇ 13ರ ಬುಧವಾರ ರಾತ್ರಿ 9ಕ್ಕೆ ಏರ್ಪಡಿಸಲಾಗಿದೆ.
ನಾಟಕವನ್ನು ಶ್ರೀ ಆಂಜನೇಯಸ್ವಾಮಿ ಜಾತ್ರೆ ಮತ್ತು ಉಯ್ಯಾಲೋತ್ಸವದ ಅಂಗವಾಗಿ 11ನೇ ವಷರ್ಾಚರಣೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಹೈನುಗಾರಿಕೆ, ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಸಕರ್ಾರೇತರ ಸಂಸ್ಥೆ ಯೋಜನೆಗಳ ಬಗ್ಗೆ ಮಾಹಿತಿ ಶಿಬಿರ

ಚಿಕ್ಕನಾಯಕನಹಳ್ಳಿ,ಜು.05 : ಆತ್ಮ ಯೋಜನೆಯಡಿ ಒಂದು ದಿನದ ಹೈನುಗಾರಿಕೆ ತರಬೇತಿ ಶಿಬಿರ ಹಾಗೂ ಕೃಷಿ, ತೋಟಗಾರಿಕೆ ಇಲಾಖೆ ಮತ್ತು ವಿವಿಧ ಸಕರ್ಾರೇತರ ಸಂಸ್ಥೆಗಳ ಯೋಜನೆಗಳ ಬಗ್ಗೆ ಮಾಹಿತಿ ಶಿಬಿರವನ್ನು ಇದೇ 8ರ ಶುಕ್ರವಾರದಂದು ಬೆಳಗ್ಗೆ 9.30ಕ್ಕೆ ಏರ್ಪಡಿಸಲಾಗಿದೆ.
ಶಿಬಿರವನ್ನು ಶ್ರೀ ಷಡಕ್ಷರಿ ತರಬೇನಹಳ್ಳಿ ಇವರ ತೋಟದಲ್ಲಿ, ರಾಜ್ಯ ರೈತ ಸಂಘ, ಹಸಿರು ಸೇನೆ, ತರಬೇನಹಳ್ಳಿ ಗ್ರಾಮೀಣ ಘಟಕ, ಪಶುಸಂಗೋಪನೆ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದು ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಅಧ್ಯಕ್ಷತೆ ವಹಿಸಲಿದ್ದು ಹಸಿರು ಸೇನೆಯ ಸತೀಶ್ ಕೆಂಕರೆ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ಗ್ರಾ.ಪಂ.ಉಪಾಧ್ಯಕ್ಷೆ ಬಿ.ಎಸ್.ಗಂಗಾಧರ್, ಸದಸ್ಯೆ ಜಯಮ್ಮ, ತಿಪಟೂರು ಹಸಿರು ಸೇನೆ ಅಧ್ಯಕ್ಷ ದೇವರಾಜು, ತರಬೇನಹಳ್ಳಿ ಘಟಕದ ರಾಜ್ಯ ರೈತ ಸಂಘದ ಅಧ್ಯಕ್ಷ ಟಿ.ಬಿ.ಷಡಕ್ಷರಿ, .ಚಿ..ತಾ..ಮೂಲದ ಗೆಳೆಯರ ಒಕ್ಕೂಟದ ಅಧ್ಯಕ್ಷ ಹೊಸೂರಪ್ಪ, ಪ್ರಗತಿಪರ ಕೃಷಿಕ ಶಿವನಂಜಪ್ಪ ಬಾಳೇಕಾಯಿ, ಭೈಪ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಎಂ.ಎನ್.ಕುಲಕಣರ್ಿ, ತಾ.ಪತ್ರಕರ್ತರ ಸಂಘದ ಅಧ್ಯಕ್ಷ ರಾಜೀವ್ ಉಪಸ್ಥಿತರಿರುವರು.

Monday, July 4, 2011







ವಿಕಲನ ಚೇತನರಿಗೆ ಆತ್ಮ ಸ್ಥೈರ್ಯ ವಜ್ರಾಯುಧವಿದ್ದಂತೆ
ಚಿಕ್ಕನಾಯಕನಹಳ್ಳಿ,ಜು.04 : ವಿಕಚೇತನರು ಸಕರ್ಾರ ಕೊಡುವೆ ಸವಲತ್ತುಗಳನ್ನು ಪಡೆದು ಆತ್ಮ ಸ್ಥೈರ್ಯದಿಂದ ಜೀವನ ನಡೆಸುವಂತೆ ಪುರಸಭಾ ಅಧ್ಯಕ್ಷ ಸಿ.ಎಲ್.ದೊಡ್ಡಯ್ಯ ತಿಳಿಸಿದರು.
ಪಟ್ಟಣದ ಪುರಸಭಾ ಆವರಣದಲ್ಲಿ ನಡೆದ ವಿಕಲ ಚೇತನರಿಗೆ ಪುರಸಭೆಯಲ್ಲಿ ಶೇ 3% ರ ಅನುದಾನದಲ್ಲಿ ಸಹಾಯದ ಚಕ್ ವಿತರಿಸಿ ಮಾತನಾಡಿದರು, ವಿಕಲ ಚೇತನರು ತಮ್ಮ ಹಿಂಜರಿತವನ್ನು ಬೆಳಸಿಕೊಳ್ಳದೆ ಆತ್ಮ ಸ್ಥೈರ್ಯದಿಂದ ಮುನ್ನಗಿದರೆ ಅದೇ ಅವರಿಗೆ ಪ್ರಮುಖ ಆಯುಧವಿದಂತೆ
ಪುರಸಭಾ ಸದಸ್ಯ ಸಿ.ಡಿ. ಚಂದ್ರಶೇಖರ್ ಮಾತನಾಡಿ, ವಿಕಲ ಚೇತನರನ್ನು ಪೋಷಕರು ತಾರತಮ್ಯ ಮಾಡದೇ ಆತ್ಮ ಸ್ಥೈರ್ಯ ತುಂಬಬೇಕಾಗಿದೆ ಎಂದರು.
ಪುರಸಭೆ ಶೇ3% ರ ನಿಧಿಯಲ್ಲಿ 67 ಜನ ವಿಕಲ ಚೇತನರಿಗೆ 750 ರೂ ನಂತೆ ಚಕ್ ವಿತರಿಸಿ ಮಾತನಾಡಿ, ವಿಕಲ ಚೇತನರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಸಕರ್ಾರ ಪುರಸಭೆಗೆ ಬಿಡುಗಡೆ ಮಾಡುವ ಶೇ 3% ರ ಅನುದಾನವನ್ನು ಶೇ 6%ರನ್ನು ಹಟಿಸುವಂತೆ ಒತ್ತಾಯಿಸಿದರು.
ಕಾರ್ಯಕ್ರಮದ ಉಪಾಧ್ಯಕ್ಷ ಮೈನ್ಸ್ ರವಿ, ಕಾಂಗ್ರೆಸ್ ಪಕ್ಷದ ನಾಯಕಿ ರೇಣುಕಾ ಗುರುಮೂತರ್ಿ, ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪ, ಅಂಗವಿಕಲರ ಸಂಘದ ಸಂಚಾಲಕಿ ಶಾಂತಮ್ಮ ಮುಂತಾದವರು ಉಪಸ್ಮಿತರಿದ್ದರು.
ಮೂಲಭೂತ ಸೌಕರ್ಯಗಳಿಲ್ಲದೆ ಕಾಲೇಜ್ನ ಅಭಿವೃದ್ದಿಗೆ ಸಕರ್ಾರ ಗಮನ ನೀಡುವಂತೆ ಒತ್ತಾಯಿಸಿ ಧರಣಿ ಸತ್ಯಾಗ್ರಹ
ಚಿಕ್ಕನಾಯಕನಹಳ್ಳಿ,ಜು.04 : ತಾಲ್ಲೂಕಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಉಪನ್ಯಾಸಕರ ಕೊರತೆ, ವಿಜ್ಞಾನ ಪದವಿ ಪ್ರಾರಂಭಿಸುವುದು, ಸುಸಜ್ಜಿತ ಗ್ರಂಥಾಲಯ ನಿಮರ್ಾಣ ಮಾಡುವುದು ಮತ್ತು ಕಾಲೇಜಿನ ಕಾಂಪೌಂಡ್ ನಿಮರ್ಾಣ ಕಾರ್ಯವನ್ನು ಶೀಘ್ರವಾಗಿ ಆದ್ಯತೆ ಮೇರೆಗೆ ಈಡೇರಿಸಬೇಕೆಂದು ಮಾಜಿ ಶಾಸಕ ಬಿ.ಲಕ್ಕಪ್ಪ ಒತ್ತಾಯಿಸಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಲೇಜಿನ ನ್ಯೂನತೆಗಳಿಂದ ಕಾಲೇಜಿನ 650 ವಿದ್ಯಾಥರ್ಿಗಳಿಗೆ ಮೂಲಭೂತ ಸೌಕರ್ಯಗಳನ್ನು ಪಡೆಯಲಾಗುತ್ತಿಲ್ಲ. ಕಾಲೇಜಿನಲ್ಲಿೆ ಕೇವಲ 6 ಮಂದಿ ಖಾಯಂ ಉಪನ್ಯಾಸಕರಿದ್ದು, ಗ್ರಂಥಪಾಲಕರು, ದೈಹಿಕ ಶಿಕ್ಷಕರು ಪ್ರಥಮ ಮತ್ತು ದ್ವಿತೀಯ ದಜರ್ೆ ಸಹಾಯಕರು ಒಬ್ಬರೂ ಇರದೇ ಅನೇಕ ವರ್ಷಗಳಿಂದ ಎಲ್ಲಾ ಹುದ್ದೆಗಳು ಖಾಲಿ ಇದೆ, ಕಾಲೇಜಿಗೆ ವಾಣಿಜ್ಯ ಶಾಸ್ತ್ರ ಉಪನ್ಯಾಸಕರ 8 ಹುದ್ದೆ, ರಾಜ್ಯ ಶಾಸ್ತ್ರ ಉಪನ್ಯಾಸಕರ 2 ಹುದ್ದೆ, ಸಮಾಜಶಾಸ್ರ್ರ 1, ಕಂಪ್ಯೂಟರ್ ಉಪನ್ಯಾಸಕರ 1, ದೈಹಿಕ ನಿದರ್ೇಶಕರ 1, ಗ್ರಂಥಪಾಲಕರು 1, ಸಮಾಜಕಾರ್ಯ ಉಪನ್ಯಾಸಕರ 4, ಪ್ರಥಮ ದಜರ್ೆ ಸಹಾಯಕರ 1, ದ್ವಿತೀಯ ದಜರ್ೆ ಸಹಾಯಕರ 4, ಡಿ ದಜರ್ೆ ನೌಕರರ 3 ಹುದ್ದೆಗಳು ಖಾಲಿ ಇದೆ ಅಲ್ಲದೆ ಬಿ.ಎ, ಬಿ.ಕಾಂ, ಬಿ.ಬಿ.ಎಂ. ಬಿ.ಎಸ್.ಡಬ್ಲ್ಯೂ ಪದವಿಗಳ ತರಗತಿಗಳಿಗೆ 18 ಸೆಕ್ಷನ್ಗಳಿಗೆ 8 ಕೊಠಡಿಗಳಿದ್ದು 10 ಕೊಠಡಿಗಳ ಕೊರತೆಯಿದೆ ಎಂದ ಅವರು ವಿಜ್ಞಾನ ವಿಭಾಗ ತೆರೆಯಲು ಅಗತ್ಯ ಪರಿಕರ ಸೌಲಭ್ಯಗಳೊಂದಿಗೆ ಮಂಜೂರಾತಿ ಮತ್ತು ಕಾಲೇಜಿನ 5 ಎಕರೆ ವಿಶಾಲವಾದ ಭೂಮಿಗೆ 500 ಗಿಡಗಳನ್ನು ಬೆಟ್ಟು ಬೆಳೆಸುತ್ತಿದ್ದು ಇದರ ರಕ್ಷಣೆಗೆ ಕಾಂಪೌಂಡ್ ನಿಮರ್ಾಣ ಹಾಗೂ ಗ್ರಾಮಾಂತರ ವಿದ್ಯಾಥರ್ಿಗಳಿಗೆ ಕಂಪ್ಯೂಟರ್ ಸೌಲಭ್ಯದೊಂದಿಗೆ ಸುಸಜ್ಜಿತವಾದ ಗ್ರಂಥಾಲಯ ನಿಮರ್ಾಣ ಮಾಡಬೇಕಾಗಿದೆ, ಇಲ್ಲವಾದರೆ ಬೇಡಿಕೆ ಈಡೇರುವವರೆಗೆ ಉನ್ನತ ಶಿಕ್ಷಣ ಸಚಿವರ ಮನೆ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಎಚ್.ಬಿ.ಎಸ್. ನಾರಾಯಣಗೌಡ ಮಾತನಾಡಿ ರಾಜ್ಯ ಸಕರ್ಾರ, ಸಕರ್ಾರಿ ಕಾಲೇಜಿನ ಬಗ್ಗೆ ಬೇಜಾವಬ್ದಾರಿ ರೀತಿಯ ಧೋರಣೆ ತೋರಿರುವುದರಿಂದಲೇ ವಿದ್ಯಾಥರ್ಿಗಳು ಖಾಸಗಿ ಕಾಲೇಜಿನತ್ತ ಮುಂದಾಗುತ್ತಿದೆ, ಕಾಲೇಜಿಗೆ ಕೊರತೆಯಿರುವ ಮೂಲಭೂತ ಸೌಕರ್ಯಗಳನ್ನು ಶೀಘ್ರವೇ ಬಗೆಹರಿಸಿದರೆ ಉತ್ತಮ ಎಂದರು.
ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ನಮ್ಮ ತಾಲ್ಲೂಕಿನ ವಿದ್ಯಾಥರ್ಿಗಳು ಕಾಲೇಜಿನ ಮೂಲಭೂತ ಸೌಕರ್ಯದ ಕೊರತೆಯಿಂದ ಬೇರೆ ಬೇರೆ ತಾಲ್ಲೂಕಿನ ಕಾಲೇಜಿಗೆ ಹೋಗುತ್ತಿದ್ದಾರೆ, ಹಳ್ಳಿ ಕಡೆಯಿಂದ ಬರುವ ಮಕ್ಕಳಿಗೆ ಸರಿಯಾಗಿ ಸಂಚಾರದ ವ್ಯವಸ್ಥೆಯೂ ಸರಿಯಾಗಿ ಇರದೆ ಪರದಾಡುತ್ತಿದ್ದಾರೆ ಇದನ್ನು ತಪ್ಪಿಸಲು ತಾಲ್ಲೂಕನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಸಕರ್ಾರ ಮುಂದಾಗಬೇಕು ಎಂದರು.
ಪ್ರತಿಭಟನೆಯಲ್ಲಿ ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಮುರುಡಯ್ಯ, ಕಾರ್ಯದಶರ್ಿ ನಾಗೇಶಯ್ಯ, ಕರವೇ(ಪ್ರವೀಣ್ಬಣ) ಅಧ್ಯಕ್ಷ ನಿಂಗರಾಜು, ವಾಸು, ಗುರುಸಿದ್ದಯ್ಯ, ಕರಡಿಶಿವಣ್ಣ, ರಾಮಕೃಷ್ಣಯ್ಯ, ಮಹಮದ್ ಸರೋಜುದ್ದೀನ್ ಉಪಸ್ಥಿತರಿದ್ದರು.

Saturday, July 2, 2011


ಸಮಾಜಮುಖಿ ಕಾರ್ಯ ನೆರವೇರಿಸುವವರಿಗೆ ಆತ್ಮೋಲ್ಲಾಸ ಮುಖ್ಯ : ಕವಿತಾಕೃಷ್ಣ
ಚಿಕ್ಕನಾಯಕನಹಳ್ಳಿ,ಜು.02 : ಕಲೆ, ಸಾಹಿತ್ಯ, ಕ್ರೀಡೆ, ನೃತ್ಯ ಮುಂತಾದ ಸಮಾಜಮುಖಿ ಕಾರ್ಯ ನೆರವೇರಿಸುವವರಿಗೆ ಆತ್ಮೋಲ್ಲಾಸ ಮುಖ್ಯಾವಾಗಿದೆ, ಇದರಿಂದ ಅವರು ಹೊಂದಿರುವ ಕಾರ್ಯಗಳು ಯಶಸ್ವಿಯಾಗಿ ಮುನ್ನಡೆಯುತ್ತವೆ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಹೇಳಿದರು.
ಪಟ್ಟಣದ ಮಲ್ಲಿಕಾಜರ್ುನ ಡಿ.ಇಡಿ ಹೊಸಕಟ್ಟಡದ ಕಾಲೇಜು ಆವರಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಎಸ್.ಎಂ.ಎಸ್.ಡಿ.ಇಡಿ ಕಾಲೇಜು, ಕನಕ ಗ್ರಾಮೀಣ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್ರವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವಪರಿಸರ ದಿನಾಚರಣೆ, ಪುಸ್ತಕ ಬಿಡುಗಡೆ, ಟ್ರಸ್ಟ್ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಸಮಾಜಮುಖಿಯು ತಮ್ಮ ಮನಸ್ಸಿಗೆ ಸಂತೋಷವಾಗುವಂತಹ ಕೆಲಸ ಕಾರ್ಯಗಳನ್ನು ನಿರ್ವಹಿಸಿದಾಗ ಆತ್ಮ ಸಂತೃಪ್ತಿ ಮೂಲಕ ಗೆಲುವು ಸಾಧಿಸುತ್ತಾನೆ. ಮನುಷ್ಯನು ಎಂದಿಗೂ ಬೀಗಬಾರದು, ಪ್ರತಿಯೊಬ್ಬರ ಜೊತೆ ವಿನಯವಾಗಿ ಬಾಗುತ್ತಾ ಸ್ನೇಹವನ್ನು ಸಂಪಾದಿಸಬೇಕು, ಈ ಅರಿವು ಶಿಕ್ಷಣದಲ್ಲಿದೆ ಎಂದ ಅವರು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿರುವ ಹಿಂದೂ ಧರ್ಮಕ್ಕೆ ಉತ್ತಮ ಭಾವನೆಯಿದೆ, ಮಹಾತ್ಮ ಗಾಂಧೀಜಿಯವರ ತತ್ವಗಳು, ಆದರ್ಶಗಳು ಎಲ್ಲರಿಗೂ ಅಗತ್ಯವಾಗಿದೆ. ಸತ್ಯಾಗ್ರಹ ಮೂಲಕ ನ್ಯಾಯ ಪೆಡದ ಗಾಂಧೀಜಿ ಪ್ರಪಂಚದಾದ್ಯಂತ ಚಿರಪರಿಚಿತರಾಗಿದ್ದು ಅವರ ಬಗ್ಗೆ ಎಂ.ವಿ.ಎನ್ರವರು ಬರೆದಿರುವ ಗಾಂಧೀಜಿ 100 ಆದರ್ಶಗಳು ಪುಸ್ತಕದಲ್ಲಿ ಗಾಂಧೀಜಿಯವರ ಮಾನವೀಯ ಮೌಲ್ಯಗಳು ಮರುಗಟ್ಟುತ್ತವೆ ಎಂದರು.
ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರಸ್ವಾಮಿ ಆಶೀರ್ವಚನ ನೀಡಿ ದೇಶದ ಬಗ್ಗೆ ಕಾಳಜಿ, ದೇಶದ ಅಭಿವೃದ್ದಿಯಾಗಬೇಕಾದರೆ ಗಾಂಧೀಜಿಯವರ ಆದರ್ಶ ಮತ್ತು ಚಿಂತನೆ ಅಗತ್ಯವಾಗಿದೆ, ಗಾಂಧೀಜಿಯವರಂತೆ ಪ್ರತಿಯೊಂದು ಹೆಜ್ಜೆಯೂ ಛಲದಿಂದ ಕೂಡಿದ್ದು ಕಠಿಣ ಶ್ರಮವಿದಾಗ ಮಾತ್ರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುವುದು. ತಾಲ್ಲೂಕಿನ ಸಾಹಿತ್ಯದ ಭಾವನೆಗಳು ಕ್ರಿಯಾಶೀಲವಾಗಿ ಉತ್ತಮವಾಗಿದೆ ಎಂದ ಅವರು ಪರಿಸರ ನಾಶವಾದರೆ ಮನುಷ್ಯ ನಾಶವಾದಂತೆ, ಜೀವಿಸುವ ಪ್ರತಿಯೊಬ್ಬರು ಪರಿಸರವನ್ನು ಕಾಪಾಡಬೇಕು. 2 ಮಹಾಯುುದ್ದಗಳು ದೇಶದ ಸಾಮ್ರಾಜ್ಯ ವಿಸ್ತರಿಸಲು ನಡೆದಿತ್ತು ಈಗ 3ನೇ ಮಹಾಯುದ್ದ ನಡೆದರೆ ಅದು ನೀರು ಮತ್ತು ಆಹಾರಕ್ಕಾಗಿ ನಡೆಯುತ್ತದೆ ಆದ್ದರಿಂದ ಪರಿಸರ ರಕ್ಷಿಸಲು ಮುಂದಾಗುತ್ತ ದೇಶ ರಕ್ಷಿಸಬೇಕು ಎಂದು ಹೇಳಿದರು.
ಜಿ.ಪಂ. ಯೋಜನಾ ನಿದರ್ೇಶಕ ಕೆ.ಬಿ.ಆಂಜನಪ್ಪ ಮಾತನಾಡಿ ಶೈಕ್ಷಣಿಕ ವ್ಯವಸ್ಥೆಗೆ ರಾಜ್ಯದಲ್ಲಿನ ಮಠ-ಮಾನ್ಯಗಳು ಉತ್ತಮ ಪ್ರೇರಣೆ ನೀಡುತ್ತಿವೆ, ಬೇರೆ ರಾಜ್ಯದ ಮಠ ಮಾನ್ಯಗಳು ಈ ರೀತಿಯ ಬೆಳವಣಿಗೆ ಹೊಂದಿಲ್ಲ, ನಮ್ಮ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕಿನ ಕಂದಿಕೆರೆ ಗ್ರಾಮದಲ್ಲಿ ಸಿದ್ದಗಂಗಾ ಶಾಲೆ ಸ್ಥಾಪಿತವಾಗಿ ಗ್ರಾಮೀಣ ವಿದ್ಯಾಥರ್ಿಗಳಿಗೆ ಅನುಕೂಲವಾಯಿತು. ಅದೇ ರೀತಿ ಮಲ್ಲಿಕಾಜರ್ುನಸ್ವಾಮಿ ಕಾಲೇಜು ವಿದ್ಯಾಥರ್ಿಗಳಿಗೆ ಅನುಕೂಲ ಮಾಡುತ್ತಿರುವುದು ಸಂತಸದ ವಿಷಯ ಎಂದರು.
ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾಧಿಕಾರಿ ಸಿ.ಟಿ.ಮುದ್ದುಕುಮಾರ್ ಮಾತನಾಡಿ ಕಿರಿಯರಿಗೆ ಹಿರಿಯರ ಮಾರ್ಗದರ್ಶನದ ಅಗತ್ಯವಿದೆ, ಹಿರಿಯರ ಅನುಭವ, ತಿಳುವಳಿಕೆ ಮತ್ತು ಸಲಹೆಯನ್ನು ಕಿರಿಯರು ಪಾಲಿಸಬೇಕು ಎಂದ ಅವರು ಸಮುದಾಯ ಮತ್ತು ಸಕರ್ಾರ ಜೊತೆಯಾಗಿ ಕಾರ್ಯನಿರ್ವಹಿಸಿದರೆ ಶಿಕ್ಷಣವು ಉತ್ತಮವಾಗಿರುತ್ತದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಸಕರ್ಾರ ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಆಧ್ಯತೆ ನೀಡಿದರೂ ಮಕ್ಕಳಲ್ಲಿ ವಿದ್ಯಾಭ್ಯಾಸ ಕ್ಷೀಣಿಸುತ್ತಿದೆ, ಪೋಷಕರು ಮಕ್ಕಳಲ್ಲಿ ಶಿಕ್ಷಣಾಸಾಕ್ತಿಯನ್ನು ಹೆಚ್ಚಿಸಿ ಸ್ನಾತಕೋತ್ತರ ಪದವಿಗಳ ಮೂಲಕ ಉನ್ನತ ಹುದ್ದೆ ಪಡೆಯಲು ಮುಂದಾಗಬೇಕು ಎಂದ ಅವರು ತಾಲ್ಲೂಕಿಗೆ ಬಂದ ನಂತರ ಸಕರ್ಾರಿ ಕಛೇರಿಗಳಲ್ಲಿ ಮಧ್ಯವತರ್ಿಗಳ ಹಾವಳಿ ತಪ್ಪಿಸಿ ಕಛೇರಿಗಳ ಕೆಲಸಗಳನ್ನು ಸಲೀಸಾಗಿ ಆಗುವಂತೆ ಮಾಡಿದ್ದೇವೆ, ಅದೇ ರೀತಿ ಪರಿಸರ ಹಾಳು ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾದರೆ ಸಮಾಜದ ಮುಂಚೂಣಿಯಲ್ಲಿರುವ ಹಲವರು ಒತ್ತಡ ಹೇರುತ್ತಾ ನಮ್ಮ ಕರ್ತವ್ಯವನ್ನು ಲೋಪವಾಗುವಂತೆ ಮಾಡುತ್ತಿರುವ ತಮಗಾಗುತ್ತಿರುವ ಕಾರ್ಯದಕ್ಷತೆಗೆ ಆಗುತ್ತಿರುವ ಅನಾನೂಕಲತೆಯನ್ನ ತೋಡಿಕೊಂಡರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಎಲ್ಲರ ಸಲಹೆ ಸಹಕಾರದಿಂದ ಉತ್ತಮ ಶಿಕ್ಷಣ ಪಡೆದು ಪ್ರತಿಭಾನ್ವಿತರಾಗಿ ಶಾಲೆಗೆ ಮತ್ತು ತಮ್ಮ ಪೋಷಕರಿಗೆ ವಿದ್ಯಾಥರ್ಿಗಳು ಕೀತರ್ಿ ತಂದುಕೊಡಬೇಕು ಎಂದ ಅವರು ಶಾಲಾ ಆವರಣದಲ್ಲಿ ಮತ್ತು ತಮ್ಮ ಮನೆಯ ಅಂಗಳದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಧ್ಯತೆ ವಹಿಸಿ ಮಾತನಾಡಿದರು. ಸಾಹಿತಿ ಆರ್.ಬಸವರಾಜು ಮಾತನಾಡಿದರು.
ಸಮಾರಂಭದಲ್ಲಿ 2011ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 70 ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶೃಂಗಾರ ಪ್ರಕಾಶನದವರ ವತಿಯಿಂದ ಬಿ.ಸಿ.ಎಂ.ಹೆಣ್ಣುಮಕ್ಕಳ ವಸತಿ ನಿಲಯದ ಗ್ರಂಥಾಲಯಕ್ಕೆ 10ಸಾವಿರ ರೂಗಳ ಪುಸ್ತಕ ಕೊಡಗೆಯನ್ನು ನೀಡಲಾಯಿತು.
ಸಮಾರಂಭದಲ್ಲಿ ಕನಕ ಗ್ರಾಮೀಣ ಶಿಕ್ಷಣ ಚಾರಿಟಬಲ್ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಗಾಯಿತ್ರಿದೇವಿ, ಶೃಂಗಾರ ಪ್ರಕಾಶನದ ನಾಗರತ್ನರಾವ್, ನಿವೃತ್ತ ಶಿಕ್ಷಕರಾದ ಕುಮಾರಸ್ವಾಮಿ, ಜಿ.ತಿಮ್ಮಯ್ಯ, ನಾಗರಾಜ್, ಶಿವಬಸಪ್ಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾಥರ್ಿನಿ ಎಸ್.ಆರ್.ಆಶಾರಾಣಿ ಪ್ರಾಥರ್ಿಸಿದರೆ, ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿ, ಎಂ.ವಿ.ರಾಜ್ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸಿ.ಎ.ಕುಮಾರಸ್ವಾಮಿ ನಿರೂಪಿಸಿ, ಭವಾನಿಜಯರಾಂ ವಂದಿಸಿದರು.
ಪೋಷಕರ ಖಾಸಗಿ ಶಾಲೆಗಳ ವ್ಯಾಮೋಹದಿಂದ ಸಕರ್ಾರಿ ಶಾಲೆಗಳು ಮುಚ್ಚಿದೆ: ಸಾ.ಚಿ.ನಾಗೇಶ್

ಚಿಕ್ಕನಾಯಕನಹಳ್ಳಿ,ಜು.02 : ಸಕರ್ಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಿದರೂ ವಿದ್ಯಾಥರ್ಿಗಳು ಖಾಸಗಿ ಶಾಲೆಗಳತ್ತ ಮುಖಮಾಡಿರುವ ಪರಿಣಾಮ ತಾಲ್ಲೂಕಿನಲ್ಲಿ 6ಸಕರ್ಾರಿ ಶಾಲೆಗಳು ಮುಚ್ಚುವಂತಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಹೇಳಿದರು.
ಪಟ್ಟಣದ ಕನಕ ಬವನದಲ್ಲಿ ಕನಕ ವಿದ್ಯಾಭಿವೃದ್ದಿ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಖಾಸಗಿ ಶಾಲೆಗಳಿಗಿಂತ ಹೆಚ್ಚಾಗಿ ಸಕರ್ಾರಿ ಶಾಲೆಯಲ್ಲಿ ಉತ್ತಮ ವಿದ್ಯಾಭ್ಯಾಸ ನೀಡುತ್ತಿದ್ದು, ಸಕರ್ಾರಿ ಶಾಲೆಗಳಲ್ಲಿ ವಿದ್ಯಾಥರ್ಿಗಳಿಗಾಗಿ ಮೂಲಭೂತ ಸೌರ್ಕರ್ಯಗಳನ್ನು ನೀಡುತ್ತಿದೆ ಆದರೂ ವಿದ್ಯಾಥರ್ಿಗಲ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ, ಪೋಷಕರು ಇದನ್ನು ತಪ್ಪಿಸಿ ತಮ್ಮ ಮಕ್ಕಳನ್ನು ಸಕರ್ಾರಿ ಶಾಲೆಗೆ ಸೇರಿಸಲು ಮನವರಿಕೆ ಮಾಡಿದ ಅವರು ಸಕರ್ಾರ ಜುಲೈ 5ರಂದು ಹಮ್ಮಿಕೊಂಡಿರುವ ಶಾಲೆಗಾಗಿ ನಾವು ನೀವು ಎಂಬ ಕಾರ್ಯಕ್ರಮಕ್ಕೆ ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು ಎಲ್ಲರೂ ಭಾಗವಹಿಸಲು ಕೋರಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಪೋಷಕರು ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು ಮತ್ತು ಶಿಕ್ಷಣದ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಪ್ರೋತ್ಸಾಹಿಸಲು ದಾನಿಗಳು ಮುಂದೆ ಬರಬೇಕು ಎಂದ ಅವರು ವಿದ್ಯಾಥರ್ಿಗಳು ಮುಂದೆ ಉನ್ನತ ಹುದ್ದೆ ಅಲಂಕರಿಸಿದಾಗ ಅವರೂ ಸಹ ಪ್ರತಿಭಾನ್ವಿತ ವಿದ್ಯಾಥರ್ಿಗಳಿಗೆ ಸಹಾಯ ಮಾಡಬೇಕು ಎಂದರು.
ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಮನುಷ್ಯನಿಗೆ ಬೌಧಿಕ ಶಿಕ್ಷಣ ಮತ್ತು ಸಾಮಾಜಿಕ ಶಿಕ್ಷಣ ಬೇಕಾಗಿದೆ, ಸಂಪತ್ತು ಮತ್ತು ಶಿಕ್ಷಣ ಎರಡು ಒಂದೇ ಕಡೆ ಸೇರಿಸುವ ನಿಟ್ಟಿನಲ್ಲಿ ವಿದ್ಯಾಥರ್ಿಗಳಿಗೆ ಸಹಾಯ ಮಾಡುವುದು ಸಮಂಜಸವಾಗಿದೆ ಎಂದ ಅವರು ಕಂಬಳಿ ಸೊಸೈಟಿಯಲ್ಲೂ ವಿದ್ಯಾಥರ್ಿಗಳಿಗೆ ವಿದ್ಯಾಥರ್ಿ ವೇತನ ಸದ್ಯದಲ್ಲೇ ನೀಡಲಾಗುವುದು ಎಂದರು.
ಕನಕವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಎನ್.ಶ್ರೀಕಂಠಯ್ಯ ಮಾತನಾಡಿ ಸಂಘ ಸ್ಥಾಪಿತವಾಗಿರುವುದು ಅಸಾಯಕರಿಗೆ, ಆಥರ್ಿಕವಾಗಿ ಹಿಂದುಳಿದವರಿಗೆ ಮತ್ತು ಸಮಾಜಕ್ಕೆ ಅನುಕೂಲವಾಗಲಿ ಎಂದು ಸಂಘದ ಮೂಲಕ ಸಹಾಯ ಮಾಡುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ , ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿದರು.
ಸಮಾರಂಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪ, ದಾನಿಗಳಾದ ಸಿ.ಡಿ.ರಾಮಲಿಂಗಯ್ಯ, ಡಿ.ಎನ್.ನಾಗರಾಜು, ಇಂಜನಿಯರ್ ಪ್ರಭಾಕರ್ ಮುಂತಾದವರಿದ್ದರು.
ಕಂಬಳಿ ಬಗ್ಗೆ ಅವಹೇಳನಕಾರಿ ಲೇಖನ ನೀಡಿರುವವರು ಕ್ಷಮೆ ಕೇಳಲಿ : ಸಿ.ಡಿ.ಚಂದ್ರಶೇಖರ್
ಚಿಕ್ಕನಾಯಕನಹಳ್ಳಿ,ಜು.02: ಕಂಬಳಿ ಎಂದರೆ ಉಣ್ಣೆ ಎಳೆಗಳ ಸಾಮ್ರಾಜ್ಯವಾಗಿದ್ದು ಅದರ ಮೇಲೆ ಊಟಕ್ಕೆ ಕುಳಿತರೆ ಕೂದಲು ಸಿಗುವುದು, ಕಂಬಳಿ ಬಳಸುವವರದು ದುರ್ಜನರ ಪತ್ರೀಕ, ದುಷ್ಠ ಜನರ ಸಹವಾಸ ಎಂಬ ಪದಗಳನ್ನು ಬಳಸಿ ಕಂಬಳಿ ಬಗ್ಗೆ ಈ ರೀತಿ ಪತ್ರಿಕೆ ಲೇಖನವೊಂದು ಬಿಂಬಿಸಿರುವುದು ಕಂಬಳಿ ಉದ್ಯಮಿಗಳಿಗೆ ಅವಮಾನ ಮಾಡಿದಂತಾಗಿದೆ ಎಂದು ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಆರೋಪಿಸಿದ್ದಾರೆ.
ಜುಲೈ 1ರಂದು ಸಂಯುಕ್ತ ಕನರ್ಾಟಕ ದಿನಪತ್ರಿಕೆಯ್ಲ ನ್ಯಾಯದೀಪಿಕೆ 354ನೇ ಅಂಕಣದಲ್ಲಿ ಸತ್ಸಂಗ ಬಲು ಮೇಲು ಎಂಬ ಶೀಷರ್ಿಕೆಯಡಿಯಲ್ಲಿ ಎನ್ಕೆಡಿರವರು ನೀಡಿರುವ ಲೇಖನದಲ್ಲಿ ಕಂಬಳಿ ಉದ್ಯಮದ ಬಗ್ಗೆ ಅವಮಾನ ರೀತಿಯಾಗಿ ಲೇಖನ ನೀಡಿದ್ದು ತಕ್ಷಣವೇ ಈ ಲೇಖನಕ್ಕೆ ಸಂಪಾದಕರು ಮತ್ತು ಲೇಖನ ಬರೆದಿರುವವರು ಕಂಬಳಿ ನೇಕಾರರನ್ನು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಕಂಬಳಿ ನೇಕಾರರಾದ ಗಂಗಾಧರ್, ಗೋವಿಂದಪ್ಪ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ ಉಪಸ್ಥಿತರಿದ್ದರು.