Thursday, January 13, 2011

ರಾಜ್ಯದ ವಿಧಾನ ಸಭೆಯಲ್ಲಿ ವಿರೋಧ ಪಕ್ಷವೇ ಇಲ್ಲ
ಚಿಕ್ಕನಾಯಕನಹಳ್ಳಿ,ಜ.13: ಸಕರ್ಾರವನ್ನು ರಚಿಸಿ, ಸಕರ್ಾರದ ಹಲವು ಯೋಜನೆಗಳಿಂದ ಕೋಟ್ಯಾಂತರ ಹಣವನ್ನು ಲೂಟಿ ಮಾಡಿ ತಮ್ಮ ಸ್ಚಂತಕ್ಕೆ ಮತ್ತು ಚುನಾವಣೆ ಸಮಯದಲ್ಲಿ ಬಳಸಿ ಇಂತಿಷ್ಟು ಹಣವೆಂದು ಹಂಚುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ್ನು ಬಹಿರಂಗವಾಗಿ ರಾಜ್ಯದ ಲೂಟಿಕೋರ ಪಕ್ಷಗಳು ಹರಾಜು ಮಾಡುತ್ತಿದ್ದಾರೆ ಎಂದು ಜೆ.ಡಿ.ಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ಯಾದವ್ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ನಡೆದ ಜನತಾದಳ ಸಂಯುಕ್ತ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ನಂತೆ ಜನತೆಗೆ ತಲಾ ಇಂತಿಷ್ಟು ಹಣವೆಂದು ನಿಗದಿ ಪಡಿಸಿ ಇಲ್ಲಿನ ಪ್ರಜೆಗಳನ್ನು ಓಟಿಗಾಗಿ ಕೊಂಡುಕೊಳ್ಳುತ್ತಿದ್ದಾರೆ, ಇದರಿಂದ ರಾಜ್ಯದಲ್ಲಿ ಪ್ರಜಾತಂತ್ರ ಮತ್ತು ಲೋಕತಂತ್ರ ವ್ಯವಸ್ಥೆಯು ಬದಲಾವಣೆಯಾಗಿ ಹಣ ನೀಡಿದವನಿಗೆ ಮಾತ್ರ ಓಟು ಎಂಬ ವಾತಾವರಣ ಸೃಷ್ಟಿಯಾಗಿದೆ, ಅನ್ಯಾಯ ಎದರಿಸುವಂತಹ ನಾಯಕರಾದ ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಯಂತಹ ಹಲವರ ನಾಯಕರ ಸಿದ್ದಾಂತ ಎಲ್ಲೆಡೆ ಪಸರಿಸಿ ರಾಜಕೀಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಒಂದು ಕಾಲದಲ್ಲಿ ಇತ್ತು, ಆದರೆ ಇತ್ತಿಚಿನ ದಿನಗಳಲ್ಲಿ ರಾಜಕೀಯಕ್ಕೆ ಲೂಟಿಕೋರರ ಆಗಮನವಾಗುತ್ತಾ ರಾಜ್ಯದ ಜನತೆಗೆ ಕಷ್ಟದ ದಿನಗಳು ಎದುರಾಗುತ್ತಿವೆ ಎಂದ ಅವರು ಸುಂದರವಾದ ಕನರ್ಾಟಕ ರಾಜ್ಯ ಈಡೀ ದೇಶಕ್ಕೆ ರಾಜಕೀಯವಾಗಿ ಮಾದರಿಯಾಗಿತ್ತು. ಆದರೆ ಈಗ ಈ ರಾಜ್ಯ ಸಂಪತ್ತನ್ನು ಲೂಟಿ ಮಾಡುವುದಕ್ಕೆ ಮಾದರಿಯಾಗಿದೆ ಎಂದ ಅವರು ಕನರ್ಾಟಕದ ಪರಂಪರೆಯನ್ನು ಹೊಸ ಅಧ್ಯಯನದಿಂದ ರೂಪಿಸಲು ಜೆ.ಡಿ.ಯು ಪಕ್ಷಕ್ಕೆ ಸಹಕರಿಸಬೇಕು ಎಂದರು.
ಜೆ.ಡಿ.ಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಮಾತನಾಡಿ ಈ ಸಭೆ ಕನರ್ಾಟಕದಲ್ಲಿ ಹೊಸ ದಿಕ್ಕನ್ನು ನೀಡಲಿದ್ದು, ತತ್ವ ಸಿದ್ದಾಂತಗಳನ್ನು ಬಿಟ್ಟು ರಾಜಕಾರಣ ಮಾಡುತ್ತಿರುವ ನಾಯಕರಿಲ್ಲದ ಪಕ್ಷಗಳಿಗೆ ಸವಾಲಾಗಿದೆ ಎಂದ ಅವರು ವಿಧಾನಸಭೆಗಳಲ್ಲಿ ವಿರೋದ ಪಕ್ಷಗಳಿಲ್ಲದೆ ಆಡಳಿತ ಪಕ್ಷಗಳು ಏನು ಮಾಡಿದರೂ ಕೇಳುವವರಿಲ್ಲದಂತಾಗಿದೆ ಎಂದರು. ಮಾಧುಸ್ವಾಮಿಯವರಿಗೆ ರಾಜ್ಯವನ್ನು ರಕ್ಷಣೆ ಮಾಡುವ ಸಮಥ್ರ್ಯವಿದೆ ಎಂದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗಣಿ ಉದ್ಯಮದಲ್ಲಿ ಬಳ್ಳಾರಿಗೆ ಸಮಾನಾಗಿರುವ ತಾಲೂಕು, ಜನರ ಕಷ್ಟಗಳನ್ನು ಕೇಳದೆ, ಜನತೆಗೆ ಸೇವೆ ಮಾಡದೆ, ಮನೆ ಮನೆಗೆ ಹೋಗಿ ತಮ್ಮ ಪರವಾಗಿ ಪ್ರಚಾರಮಾಡದೆ ಕೇವಲ ಹಣದ ಮೇಲೆ ಚುನಾವಣೆ ನಡೆಯುತ್ತಿದ್ದು ಎಂದರಲ್ಲದೆ, ರಾಜಕೀಯ ವ್ಯಾಪಾರವಾಗಿದೆ ಎಂದರು. ಜನರ ತಮ್ಮ ಓಟುಗಳನ್ನು ರಾಜಕೀಯ ಪಕ್ಷಗಳಿಗೆ ನಿಡದೆ, ಅಬ್ಯಾಥರ್ಿಗಳು ನೀಡುವ ಹಣ, ಹೆಂಡಕ್ಕೆ ಇಂತಿಷ್ಟು ಎಂಬಂತೆ ಹಂಚಿಕೆಯಾಗಿದೆ. ಈ ರೀತಿ ಹಂಚಿಕೆಯಾದರೂ ಜೆ.ಡಿ.ಯು ತಾಲೂಕಿನಲ್ಲಿ 2ನೇ ಸ್ಥಾನವನ್ನು ಉಳಿಸಿಕೊಂಡಿದ್ದು ಮುಂದೆ ತಾಲೂಕಿನಾದ್ಯಂತ ಜೆ.ಡಿ.ಯು ಪಕ್ಷ ಮೊದಲ ಸ್ಥಾನವನ್ನು ಅಲಂಕರಿಸಲಿದೆ ಎಂದರು.
ಮಧ್ಯಮ ಕುಟುಂಬದಿಂದ ಬಂದು 3ಬಾರಿ ಶಾಸಕನಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮ ಪಟ್ಟರೂ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳಲ್ಲಿ ಪಕ್ಷ ಸ್ಥಾನ ಉಳಿಸಿಕೊಳ್ಳದಿದ್ದರೆ ರಾಜಕೀಯದಲ್ಲಿ ಇದೇ ನನ್ನ ಕೊನೇ ಹೋರಾಟವಾಗಿರುತ್ತಿತ್ತು ಎಂದ ಅವರು, ಜೆ.ಡಿ.ಎಸ್, ಬಿ.ಜೆ.ಪಿ ಕಾಲ ಮುಗಿಯುವ ಸಂದರ್ಭ ಬಂದಿದ್ದು ಕಾಂಗ್ರೆಸ್ ಆಗಲೇ ಮುಳುಗಿ ಹೋಗಿರುವ ಹಡಗಾಗಿದೆ, ತಾಲೂಕು ಮತ್ತು ರಾಜ್ಯದ ಆಡಳಿತ ಕೆಳಸ್ಥರಕ್ಕೆ ಹೋಗಿದೆ. ತಾಲೂಕಿನಿಂದಲೇ ಜೆ.ಡಿ.ಯು ಪಕ್ಷ ಅಸ್ಥಿತ್ವಗೊಳಿಸಿ ಹೋರಾಟಕ್ಕೆ ಮುಂದಾಗುತ್ತದೆ ಪಕ್ಷ, ಈ ರೀತಿಯಾಗಿ ಬಾಣದ ದಿಕ್ಕನ್ನು ರಾಜ್ಯಾದ್ಯಂತ ವಿಸ್ತರಿಸಿ ರೈತ ಪರವಾಗಿ ರಾಜ್ಯ ಕಟ್ಟಲಿದೆ ಎಂದರು.
ಸಮಾರಂಭದಲ್ಲಿ ಜೆ.ಡಿ.ಯು.ನ ಜಿ.ಪಂ.ಸದಸ್ಯೆ ಲೋಹಿತಾ ಬಾಯಿ ಮತ್ತು ತಾ.ಪಂ.ಸದಸ್ಯರುಗಳಾದ ಚಿಕ್ಕಮ್ಮ, ನಿರಂಜನಮೂತರ್ಿ, ಸುಮಿತ್ರ, ಲತಾ, ಶಶಿಧರ್, ಸಾವಿತ್ರಿರವರನ್ನು ಸನ್ಮಾನಿಸಲಾಯಿತು, ಚುನಾವಣೆಗಳಲ್ಲಿ ಸ್ಪಧರ್ಿಸಿದ್ದ ಅಬ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರೇಣುಕಮೂತರ್ಿ ಸ್ವಾಗತಿಸಿದರೆ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ನಿರೂಪಿಸಿ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ವಂದಿಸಿದರು.

ಕುಪ್ಪೂರು ಮಠದಲ್ಲಿ 6 ಲಕ್ಷರೂಗಳ ಬೆಳ್ಳಿ ಆಭರಣ ಕಳ್ಳತನ
ಚಿಕ್ಕನಾಯಕನಹಳ್ಳಿ,ಜ.13: ತಾಲೂಕಿನ ಸುಪ್ರಿಸಿದ್ದ ಕ್ಷೇತ್ರವಾದ ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಮಠದಲ್ಲಿ ಗುರುವಾರ ನಸುಕಿನಲ್ಲಿ ಕಳ್ಳತನ ನಡೆದಿದ್ದು ಮಠದ ಗರ್ಭಗುಡಿಯಲ್ಲಿದ್ದ ಸುಮಾರು 15 ಕೆ.ಜಿ.ಬೆಳ್ಳಿ ಆಭರಣಗಳು ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳರು ದೋಚಿದ್ದಾರೆ.
ಮಠದ ಕಟ್ಟಡದಲ್ಲಿನ ಕರೆಂಟ್ ಕಟ್ಮಾಡಿ, ಮಠದ ಆವರಣದಲ್ಲಿರುವ ಕೊಠಡಿಯಲ್ಲಿ ಮಲಗಿದ್ದವರು ಹೊರಬಾರದಂತೆ ಹೊರಗಿನಿಂದ ಬೋಲ್ಟ್ಗಳನ್ನು ಭದ್ರ ಪಡಿಸಿ, ಮಠದ ಮೇಲ್ಚಾವಣಿಯ ಹೆಂಚನ್ನು ತೆಗೆದು ಗರ್ಭಗುಡಿಯಲ್ಲಿನ ಬೊಲ್ಟ್ನ್ನು ಬಲವಾದ ಅಸ್ತ್ರದಿಂದ ಮೀಟಿ ಬೀಗ ಹೊಡೆದು ಸುಮಾರು 5 ಕೆ.ಜಿ.ತೂಕದ ಶ್ರೀ ಮರಳಸಿದ್ದೇಶ್ವರರ ಮುಖ ಪದ್ಮ ನಾಗಭಾರಣ ಸಮೇತ, ಒಂದು ಕೆ.ಜಿ.ತೂಕದ ಮೂರು ಜೊತೆ ಪಾದುಕೆ, ಕಳಸ, ಪಾನ್ ಬಟ್ಲು, ಪಂಚಾರತಿ, ಬೆಳ್ಳಿಕಾಯಿನ್, ಬೆಳ್ಳಿ ರುದ್ರದೇವರು, ಎರಡು ರೇಣುಕರ ವಿಗ್ರಹ, ಗಣಪತಿ ವಿಗ್ರಹ, ನಟರಾಜನ ನಾಟ್ಯ ವಿಗ್ರಹ, ಆರತಿ ತಟ್ಟೆ, 108 ಬೆಳ್ಳಿ ರುದ್ರಾಕ್ಷಿ, 12 ಬೆಳ್ಳಿ ಭಿಲ್ವ ಪತ್ರೆ ಸೇರಿದಂತೆ ಸುಮಾರು 6 ಲಕ್ಷರೂಗಳ ಬೆಳ್ಳಿಯ ಆಭರಣಗಳು ಹಾಗೂ ಎರಡು ಕಾಣಿಕೆ ಹುಂಡಿಯನ್ನು ಹೊತ್ತು ಹೊಯ್ದಿದ್ದಾರೆ.
ಸ್ಥಳಕ್ಕೆ ಎಸ್.ಪಿ. ಡಾ.ಹರ್ಷ, ಕುಣಿಗಲ್ ಎ.ಎಸ್.ಪಿ. ಶಶಿಕುಮಾರ್, ಸಿ.ಪಿ.ಐ.ರವಿಪ್ರಸಾದ್, ಬೆರಳಚ್ಚು ತಜ್ಞರು, ಶ್ವಾನ ದಳ ತನಿಖೆ ನಡೆಸಿದರು.
ಹಂದನಕೆರೆ ಪಿ.ಎಸ್.ಐ. ರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ದೇವಾಲಯಗಳ ಕಳ್ಳತನ ಹೆಚ್ಚುತ್ತಿದ್ದು, ಪಟ್ಟಣದ ಪಂಚಮುಖಿ ದೇವಾಸ್ಥಾನದಲ್ಲಿನ ಕಾಣಿಕೆ ಹುಂಡಿ ಕಳವು, ಸೊರಲಮಾವು, ತಮ್ಮಡಿಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನದ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುವವರ ತಂಡವೇ ಇಲ್ಲಿಗೆ ಬಂದಿರ ಬಹುದೆಂಬ ಅನುಮಾನಗಳಿವೆ.