Wednesday, April 23, 2014

ರೇಣುಕಾಯಲ್ಲಮ್ಮದೇವಿಯವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಏ.23 : ತಾಲ್ಲೂಕಿನ ಕಂದಿಕೆರೆಯ ಶ್ರೀ ರೇಣುಕಾಯಲ್ಲಮ್ಮದೇವಿಯವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಆರಂಭಗೊಂಡಿದ್ದು ಬುಧವಾರ ದೇವಿಯನ್ನು ಹೊತ್ತ ಭಕ್ತರು ಅಗ್ನಿಕುಂಡ ಹಾಯ್ದರು.
ಬುಧವಾರ ರೇಣುಕಾಯಲ್ಲಮ್ಮದೇವಿಯವರ ಮಂಗಳಸ್ನಾನದೊಂದಿಗೆ ಗಂಗಾಪೂಜೆ ನೆರವೇರಿತು. ಈ ಜಾತ್ರೆಗೆ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದು, ಭಕ್ತರ ಹಷರ್ೋದ್ಘಾರದಿಂದ ದೇವಿಯ ಸ್ತುತಿ ಮಾಡುತ್ತಿದ್ದರು. 
24ರಂದು ಸಂಜೆ 6.30ಕ್ಕೆ ಸಿಡಿಮದ್ದಿನ ಸೇವೆಯೊಂದಿಗೆ ರೇಣುಕಯಲ್ಲಮ್ಮದೇವಿ, ಶ್ರೀ ಕರಿಯಮ್ಮದೇವಿ, ಶ್ರೀ ಆಂಜನೇಯಸ್ವಾಮಿವರ ಪ್ರಸನ್ನೋತ್ಸವ ನಡೆಯಲಿದೆ. 25ರಂದು ಶ್ರೀ ರೇಣುಕಯಲ್ಲಮ್ಮದೇವಿಯ ರಥೋತ್ಸವ ಮಧ್ಯಾಹ್ನ 3.30ಕ್ಕೆ ಭಕ್ತಾಧಿಗಳಿಂದ ಪ್ರಸಾದ ವಿನಿಯೋಗ ಮತ್ತು ಮಜ್ಜಿಗೆ ವಿತರಣೆ, 4.30ಕ್ಕೆ ಪಾತಪ್ಪಸ್ವಾಮಿಯವರಿಂದ ಗಾವಿನ ಸೇವೆ ಹಾಗೂ ರಾತ್ರಿ 8.30ಕ್ಕೆ ಶ್ರೀ ರಾಮ ಕಲಾಸಂಘದವರಿಂದ ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ನಡೆಯಲಿದೆ. 26ರಂದು ಸಂಜೆ 6ರಿಂದ 8ರವರೆಗೆ ಆರತಿಬಾನ, 6.30ಕ್ಕೆ ಶನೇಶ್ವರಸ್ವಾಮಿ ಉತ್ಸವ, ರಾತ್ರಿ 9ಕ್ಕೆ ಸಿಡಿಸೇವೆ ನಡೆಯಲಿದೆ.  27ರ ಭಾನುವಾರ ರಾತ್ರಿ 7ಕ್ಕೆ ಗುಗ್ಗರಿ ಮಾರಮ್ಮನವರ ಉತ್ಸವ, ರಾತ್ರಿ 8.30ಕ್ಕೆ ಕಂದಿಕೆರೆ ಗೆಳೆಯರ ಬಳಗದವರಿಂದ ಶ್ರೀ ರೇಣುಕಾಯಲ್ಲಮ್ಮದೇವಿಯವರ ಉಯ್ಯಾಲೋತ್ಸವ ಹಮ್ಮಿಕೊಳ್ಳಲಾಗಿದೆ.
28ರ ಬೆಳಗ್ಗೆ ರೇಣುಕಾಯಲ್ಲಮ್ಮದೇವಿಯವರೊಂದಿಗೆ ಶ್ರೀ ರಂಗನಾಥಸ್ವಾಮಿ, ಸಾದರಹಳ್ಳಿ ಶ್ರೀ ಆಂಜನೇಯಸ್ವಾಮಿ, ಸಂಗೇನಹಳ್ಳಿ, ಶ್ರೀ ಬಯಲಪ್ಪಸ್ವಾಮಿ, ಆಂಜನೇಯಸ್ವಾಮಿ ಮತ್ತು ಶ್ರೀ ಮೈಲಾರಲಿಂಗಸ್ವಾಮಿಯವರುಗಳ ಉತ್ಸವ ಹಾಗೂ ಮಧ್ಯಾಹ್ನ 3.30ಕ್ಕೆ ಕರಿಯಮ್ಮದೇವಿಯವರೊಂದಿಗೆ ಶ್ರೀ ಪಾತಪ್ಪಸ್ವಾಮಿಯವರ ಬಂಡಾರಸೇವಾ ಉತ್ಸವ ನಡೆಯಲಿದ್ದು 28ರ ಸೋಮವಾರ ಮಧ್ಯಾಹ್ನ 3.30ಕ್ಕೆ ಧ್ವಜಾವರೋಹಣ ರಾತ್ರಿ 8.30ಕ್ಕೆ ಜೋಗಿನ ಊಟ ಹಾಗೂ ಹಾಲು ಒಕ್ಕೂಟದವರಿಂದ ಮಜ್ಜಿಗೆ ವಿತರಣೆ ನಡೆಯಲಿದೆ.

ಖಾಸಗಿ ಬಸ್ಗಳ ಸಂಚಾರ ರದ್ದು: ಕೆ.ಎಸ್.ಆರ್.ಟಿ.ಸಿ.ಬಸ್ಗಳ ಕೊರತೆ, ಪ್ರಯಾಣಿಕರ ಪರದಾಟ.
ಚಿಕ್ಕನಾಯಕನಹಳ್ಳಿ,ಏ.23  : ಬಸ್ಗಾಗಿ ಕಾದೂ ಕಾದೂ ಸಾಕಾಗೋಯ್ತು, ಬಸ್ ಬಂದರೂ ಕಾಲಿಡಲು ಸ್ಥಳವಿಲ್ಲದಂತೆ ತುಂಬಿ ತುಳುಕುತ್ತಿರುತ್ತದೆಯಾದರೂ ಅದೇ ಬಸ್ನೊಳಗೆ ನುಗ್ಗಿ ಅವರಿವರನ್ನು ಗೊಣಗಿಕೊಂಡು ನಿಂತರೆ ನಮ್ಮೂರಿಗೆ ತೆರಳುವುದರೊಳಗೆ ಸಾಕಪ್ಪ ಬಸ್ನ ಸಹವಾಸ ಎನ್ನುವಷ್ಟು ಸಾಕಾಗಿ ಹೋಗುತ್ತದೆ ಎಂಬುದು ತುಮಕೂರಿನಿಂದ ಚಿಕ್ಕನಾಯಕನಹಳ್ಳಿ, ಹುಳಿಯಾರು, ಹೊಸದುರ್ಗ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರ ದಿನನಿತ್ಯದ ಸಮಸ್ಯೆಯಿದು.
ಪ್ರತಿನಿತ್ಯ ಸಾವಿರಾರು ಜನರು ಚಿಕ್ಕನಾಯಕನಹಳ್ಳಿ, ಹುಳಿಯಾರು ಹಾಗೂ ಹೊಸದುರ್ಗ ಮಾರ್ಗವಾಗಿ ತುಮಕೂರು ಹಾಗೂ ಬೆಂಗಳೂರಿಗೆ ಸಂಚರಿಸುವವರು ಈ ಮಾರ್ಗದಲ್ಲಿನ ಬಸ್ಗಳ ಸಮಸ್ಯೆಯ ವ್ಯವಸ್ಥೆ ಕಂಡು ಮಮ್ಮಲ ಮರುಗುತ್ತಿದ್ದಾರೆ.
ಬೆಂಗಳೂರಿನಿಂದ ಹೊಸದುರ್ಗ ಮಾರ್ಗವಾಗಿ ಹೆಚ್ಚಿನ ಖಾಸಗಿ ಬಸ್ಗಳು ಓಡಾಡುತ್ತಿದ್ದವು ಆದರೆ ಜಿಲ್ಲಾಡಳಿತದ ಬಿಗಿ ಕ್ರಮದಿಂದಾಗಿ ಖಾಸಗಿ ಬಸ್ಗಳ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ, ತುಮಕೂರಿನಿಂದ ಹೊಸದುರ್ಗ ಮಾರ್ಗವಾಗಿ ಸಂಚರಿಸಬೇಕಾದರೆ ಕೆ.ಎಸ್.ಆರ್.ಟಿ.ಸಿ ಬಸ್ಗಳನ್ನೇ ಪ್ರಯಾಣಿಕರು ಅವಲಂಬಿಸಬೇಕಾಗಿದ್ದು ತುಮಕೂರಿನಿಂದ ಈ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ಗಳು ಅಧಿಕವಾಗಿ ಇಲ್ಲದಿರುವುದರಿಂದ  ಬಸ್ಗಳಲ್ಲಿ ಕಾಲಿಡಲು ಜಾಗವಿಲ್ಲದಂತೆ ತುಂಬಿ ತುಳುಕುತ್ತಿರುತ್ತವೆ.
ಬೆಳಗಿನ ಸಮಯದಲ್ಲೂ ತಾಲ್ಲೂಕಿನ ಹಲವು ಗ್ರಾಮಗಳಿಂದ  ವಿದ್ಯಾಥರ್ಿಗಳು ತುಮಕೂರಿಗೆ ಸಂಚರಿಸಲು ಪರಿತಪಿಸುತ್ತಾರೆ, ಪರೀಕ್ಷೆ ಸಮಯದಲ್ಲಂತೂ ವಿದ್ಯಾಥರ್ಿಗಳ ಪರಿಸ್ಥಿತಿ ಹೇಳತೀರದು, ವ್ಯಾಪಾರಸ್ಥರು, ರೈತರ ಲಗೇಜುಗಳನ್ನು ಬಸ್ನಲ್ಲಿ ಹಾಕಲಾಗದೇ ಬೆಂಗಳೂರಿಗೆ ಪ್ರಯಾಣಿಸಲು ಮೇಲ್ಚಾವಣಿ(ಟಾಪ್ ಕ್ಯಾರಿಯರ್) ಖಾಲಿಯಾಗಿರುವ ಬಸ್ಗಳು ಬರುವವರೆಗೆ ಕಾಯುತ್ತಾರೆ, ಹಬ್ಬ-ಹರಿದಿನ, ಸಕರ್ಾರಿ ರಜೆ ಇನ್ನಿತರ ಜಾತ್ರಾ ಮಹೋತ್ಸವದಲ್ಲಂತೂ ಬಸ್ಗಳಿಗಾಗಿ ಪರಿತಪಿಸುವ ತಾಲ್ಲೂಕಿನ ಜನತೆ ಹಿಡಿಶಾಪ ಹಾಕುತ್ತಾರೆ. 
ಇನ್ನೂ ಚಿಕ್ಕನಾಯಕನಹಳ್ಳಿಯಿಂದ ಕುಪ್ಪೂರು, ಹಂದನಕೆರೆ, ತಿಮ್ಮನಹಳ್ಳಿ, ಕಾತ್ರಿಕೆಹಾಳ್ ಹಾಗೂ ಮುದ್ದೇನಹಳ್ಳಿ ಭಾಗಗಳಿಗೆ ಸಂಚರಿಸಲು ಬಸ್ಗಳ ಸಮಸ್ಯೆಯಿದೆ, ಈ ಭಾಗದಿಂದ ಬರುವ ವಿದ್ಯಾಥರ್ಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ-ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ, ಸಾರ್ವಜನಿಕರಿಗೆ ಬಸ್ಗಳ ಚಿಂತೆಯಾಗಿದ್ದು ಈ ಭಾಗಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರು ಹಲವಾರು ದಿನಗಳಿಂದ ಪ್ರತಿಭಟನೆ, ಮನವಿ ಅಪರ್ಿಸುತ್ತಲೇ ಇದ್ದಾರೆ. ಪ್ರಯೋಜನ ಮಾತ್ರ ಶೂನ್ಯ.

Tuesday, April 22, 2014

                                                                                                raveeshpiksp@gmail.com        
raveeshpiksp@gmail.com 


    ಏಪ್ರಿಲ್  ೨೪  ಅಣ್ಣಾವ್ರ  ಜನ್ಮ  ದಿನ ,   ಅವರು  ಚಿರಾಯುವಾಗಲಿ
ಡಾ . ರಾಜ್ ಕುಮಾರ್ - ಭಾರತ ದೇಶದಲ್ಲಿಯೇ ಚಲನ ಚಿತ್ರ ನಟನೆಗೆ ಡಾಕ್ಟರೇಟ್ ಪದವಿ ಪಡೆದವರಲ್ಲಿ ( ಮೈಸೂರು ವಿಶ್ವವಿದ್ಯಾನಿಲಯದಿಂದ ) ಮೊದಲಿಗರು   . ಡಾ . ರಾಜ್ ಕುಮಾರ್ - ಅಮೇರಿಕಾ ದೇಶದಿಂದ ಕೊಡಲ್ಪಡುವ ಉನ್ನತ ಪ್ರಶಸ್ತಿ ಕೆಂಟುಕಿ ಕರ್ನಲ್ ಪ್ರಶಸ್ತಿಯನ್ನು ರಷ್ಯಾ ಮತ್ತು ಬ್ರಿಟನ್ ಪ್ರಧಾನಮಂತ್ರಿಗಳಿಗೆ ಹೊರತಪಡಿಸಿ ನಟನೆಗೆ ಪಡೆದವರಲ್ಲಿ ಜಗತ್ತಿನಲ್ಲೇ ಇವರೊಬ್ಬರು   . ಡಾ . ರಾಜ ಕುಮಾರ್ - ದೇಶದಲ್ಲಿ ಒಂದೇ ಭಾಷೆಯಲ್ಲಿ ಸುಮಾರು   ೫೦ ವರ್ಷಗಳ ಕಾಲ ನಟನೆ ಮಾಡಿದ ಅದ್ಬುತವಾದ ವ್ಯಕ್ತಿತ್ವ  . ಡಾ . ರಾಜ್ ಕುಮಾರ್ - ಬದುಕಿದ್ದಾಗಲೇ ರಾಜ್ಯದ ಅತ್ಯುನ್ನತ ಪ್ರಶಸ್ತಿ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಏಕೈಕ ಕಲಾವಿದ    . ಡಾ . ರಾಜ ಕುಮಾರ್ - ರಾಜ್ಯದಲ್ಲಿ ಸುಮಾರು ೫೦೦೦ ಅಭಿಮಾನಿ ಸಂಘ ಹೊಂದೊದ್ದ ಅದ್ಬತವಾದ ನಾಯಕ ನಟ  . ಡಾ . ರಾಜ್ ಕುಮಾರ್ - ನಟನೆ ಮತ್ತು ಗಾಯನಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದ ದೇಶದಲ್ಲಿಯೇ ಏಕೈಕ ವ್ಯಕ್ತಿ  . ಡಾ . ರಾಜ್ ಕುಮಾರ್ - ಪ್ರಥಮ ಚಿತ್ರದಲ್ಲಿಯೇ ರಾಷ್ಟ್ರೀಯ ಪ್ರಶಸ್ತಿ ಪಡೆದ ಏಕೈಕ ವ್ಯಕ್ತಿ  . ಡಾ . ರಾಜ್ ಕುಮಾರ್   - ಕನ್ನಡ ಚಿತ್ರ ರಂಗದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಏಕೈಕ ತಾರೆ  . ಡಾ . ರಾಜ ಕುಮಾರ್ - ಹತ್ತಕ್ಕೂ ಹೆಚ್ಚು ಬಿರುದಾವಳಿಯನ್ನು ಪಡೆದಿರಿವ ಭಾರತ ದೇಶದ ಏಕೈಕ ನಟ ( ರಸಿಕರರಾಜ , ಗಾನಗಂಧರ್ವ , ಕನ್ನಡ ಕಣ್ಮಣಿ , ವರಪುತ್ರ , ವರನಟ , ಪದ್ಮಭೂಷಣ , ನಟಸಾರ್ವಬೌಮ , ಕೆಂಟುಕಿ ಕರ್ನಲ್ , ಡಾಕ್ಟರೇಟ್ ಮುಂತಾದವುಗಳು ) ೧೦ . ಡಾ . ರಾಜ ಕುಮಾರ್ - ಕನ್ನಡದಲ್ಲಿ ಪದ್ಮಭೂಷಣ ಪ್ರಶ್ತಿ ಪಡೆದ ಕನ್ನಡ ತಾಯಿಯ ಹೆಮ್ಮೆಯ ಪುತ್ರ  ೧೧ . ಡಾ . ರಾಜಕುಮಾರ್ - ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ರಾಜ್ಯ ಪ್ರಶಸ್ತಿ , ೧೦ ಫಿಲ್ಮ ಫೇರ್ ಅವಾರ್ಡ , ಹಾಡುಗಾರಿಕೆಗೆ ಪ್ರಶಸ್ತಿ ಪಡೆದ ಏಕೈಕ ನಟ  ೧೨ . ಒಂದೇ ವರ್ಷದಲ್ಲಿ ೧೪ ಚಲನಚಿತ್ರಗಳಿಗೆ ನಾಯಕ ನಟನಾದ ಏಕೈಕ ನಟ  ೧೩ . ಡಾ . ರಾಜ್ - ಆಂದ್ರದಿಂದ ನೀಡುವ NTR award ಪಡೆದ ಇತರೆ ಭಾಷೆಯ ಪ್ರಥಮ ನಟ  ೧೪ . ಡಾ . ರಾಜಕುಮಾರ್ - ಕನ್ನಡ ಚಲನಚಿತ್ರರಂಗದ ಹಿತಿಹಾಸದಲ್ಲಿ ಸುದೀರ್ಘವಾಗಿ ಓಡಿದ ಬಂಗಾರದಮನುಷ್ಯ ಚಿತ್ರದ ನಾಯಕ ನಟ  ೧೫ . ಡಾ . ರಾಜಕುಮಾರ್ - ಇವರ ಚಿತ್ರಗಳ ಸಕ್ಸಸ್ ರೇಟ್ ೯೫ , ಇದು ದೇಶದಲ್ಲಿಯೇ ಪ್ರಥಮ  ೧೬ . ಅಭಿಮಾನಿಗಲಿಂದ ಪ್ರೀತಿಯಿಂದ ಅಣ್ಣಾವ್ರು ಎಂದು ಕರೆಸಿಕೊಳ್ಳುವ ಏಕೈಕ ನಟರು 


raveeshpiksp@gmail.com 

ತುಮಕೂರು ಜಿಲ್ಲೆಯ ಒಂದು ಶಾಪಗ್ರಸ್ತ ತಾಲ್ಲೂಕು ಕೇಂದ್ರ ಎಂದರೆ ಅದು ಚಿಕ್ಕನಾಯಕನ ಹಳ್ಳಿ ಎಂದು ಹೇಳಿದರೂ ಅದು ಅತಿಶಯೋಕ್ತಿಯೇನಲ್ಲ, ಕಾರಣ ನನ್ನ ಊರು ಹೆಸರಿಗೆ ತಾಲ್ಲೂಕು ಕೇಂದ್ರವಾದರೂ ಯಾವುದೇ ಸವಲತ್ತು ಮತ್ತು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ತಾಲ್ಲೂಕು ಕೇಂದ್ರ. ಬೀದರ್ -ಶ್ರೀರಂಗಪಟ್ಟಣ ರಾಹೆ ಹಾದುಹೋಗಿದ್ದರೂ, ಯಾವುದೇ ರೀತಿಯಲ್ಲಿಯೂ ಏಳಿಗೆಯನ್ನು ಕಾಣಲಾರದ ಪರಿಸ್ಥಿತಿಯಲ್ಲಿ ಇದೆ ನನ್ನ ಊರು, ಮುಖ್ಯವಾಗಿ ಸಾರ್ವಜನಿಕರಿಗೆ ಸಿಗಬೇಕಾದ ಮೂಲ ಸೌಕರ್ಯಗಳಂತೂ ಮರಿಚಿಕೆಯೇ ಸರಿ, ಚಿ ನಾ ಹಳ್ಳಿಯಲ್ಲಿ ಹಳೆಯ ಬಸ್ ನಿಲ್ದಾಣದಿಂದ ನೆಹರೂ ವೃತ್ತದ ವರೆಗೆ ಇರುವ ನಾಲ್ಕು ವ್ಯಾಪಾರ ನಡೆಸುವ ಮಂದಿಯಿಂದ ಊರು ಕಾಣುತ್ತದೆಯೇ ಹೋರತು ಮತ್ತೇನನ್ನು ಕಾಣದ ಅಸಹಜ ವ್ಯವಸ್ಸೆಗೆ ಊರು ಮೂಕ ಸಾಕ್ಷಿಯಾಗಿದೆ, ಚಿಕ್ಕನಾಯಕನ ಹಳ್ಳಿಯ ಇಂದಿನ ಪರಿಸ್ಥಿತಿಯ ಬಗ್ಗೆ ಕೆಳಗಿನಂತೆ ಕೆಲವು ನ್ಯೂನ್ಯತೆಗಳನ್ನು ನೋಡಬಹುದು . ಕೆ ಎಸ್ ಆರ್ ಟಿ ಸಿ ನಿಲ್38;ಾಣವಿದೆ ಆದರೆ ಬಸ್ಸುಗಳು ಅಲ್ಲಿ ಹೋಗಲ್ಲ . ಸರ್ಕಾರಿ ಆಸ್ಪತ್ರೆ ಇದೆ ಚಿಕಿತ್ಸೆಗೆ ಜನರು ಹೋಗಲ್ಲ, ಕಾರಣ ವೈದ್ಯರಿಲ್ಲ . ಕ್ರೀಡಾಂಗಣವಿದೆ ಆದರೆ ಅಲ್ಲಿ ಆಟ ಆಡಲು ಬಿಡಲ್ಲ .ವಾಯುವಿಹಾರಕ್ಕೆ ಉದ್ಯಾನವನವೇ ಇಲ್ಲ . ತಾಲ್ಲೂಕು ಕೇಂದ್ರವಾದರೂ ಯು ಜಿ ಡಿ ವ್ಯವಸ್ಥೆ ಇಲ್ಲ, ಈಗಲೂ ಊರಿನಲ್ಲಿ ಕೆಲವು ಅನಿಷ್ಠ ಪದ್ದತಿಗಳ ಮುಂದುವರಿಕೆ . ಕೊಳಾಯಿಗಳಿವೆ ೧೫ ದಿನಕ್ಕೋಮ್ಮೆಯೂ ನೀರು ಬರೊಲ್ಲ . ರಸ್ತೆಗಳಿವೆ ಆದರೆ ಡಾಮರಿಕರಣ ಕಂಡಿಲ್ಲ . ಪೋಲೀಸ್ ಠಾಣೆ ಇದೆ, ಆದರೆ ಪ್ರಕರಣ ದಾಖಲಿಸಲ್ಲ . ಪುರಸಭೆ ಇದೆ ಆದರೆ ಒತ್ತುವರಿ ತಗೆಸೊಲ್ಲ ೧೦. ಸರ್ಕಾರಿ ಕಾಲೇಜು ಇದೆ, ಆದರೆ ಬೋದಕರು ಮತ್ತು ವಿದ್ಯಾರ್ಥಿಗಳೇ ಇಲ್ಲ ೧೧. ಉತ್ತಮ ಪ್ರಾಕೃತಿಕ ಪ್ರವಾಸಿ ತಾಣಗಳಿವೆ ಆದರೆ ಅಭಿವೃದ್ದಿ ಇಲ್ಲ ೧೨. ಓದುವ ಮಕ್ಕಳಿದ್ದಾರೆ ಆದರೆ ಐಟಿಐ, ಟಿಸಿಎಚ್, ಬಿಎಡ್ ಗಳಿಲ್ಲ ೧೩. ಅತ್ಯಂತ ಹೆಚ್ಚು ಕೊಬರಿ ಬೆಳೆಯುವ ನಾಡು ಆದರೆ ಮಾರುಕಟ್ಟೆ ಇಲ್ಲ (ನಮ್ಮ ರಾಜಕಾರಣಿಗಲ ಔದಾರ್ಯದಿಂದ ;ುಳಿಯಾರಿಗೆ ವರ್ಗಾವಣೆಯಾಯಿತು) ೧೪.ಶಿಕ್ಷಣದ ಬಗ್ಗೆ ಅಹವಾಲು ಸ್ವೀಕರಿಸಲು ಅಧಿಕಾರಿಗಳಿಲ್ಲ (ನಮ್ಮ ರಾಜಕಾರಣಿಗಳ ಔದಾರ್ಯದಿಂದ ಮಧುಗಿರಿಗೆ ಸ್ಥಳಾಂತರವಾಯಿತು) ೧೫.ಖಾಸಗೀ ಬಸ್ ನಿಲ್ದಾಣದಲ್ಲಿ ಕನಿಷ್ಠ ಶೌಚಾಲಯದ ವ್ಯವಸ್ಥೆ ಇಲ್ಲ. ೧೬. ಜನರು ಕೂಲಿಗಾಗಿ ಬೆಂಗಳೂರು, ತುಮಕೂರು ಕಡೆ ಹೋಗುತ್ತಾರೆ ಆದರೆ ಊರಿಗೆ ಒಂದು ಉದ್ಯಮ ತರುವ ತಾಕತ್ತು ನಮ್ಮಲಿಲ್ಲ ೧೭. ಕೆ ಎಸ್ ಆರ್ ಟಿ ಸಿ ಡಿಪೋವನ್ನು ಚಿಕ್ಕನಾಯಕನ ಹಳ್ಳಿಗೆ ನೀಡಿದರೂ ನಮ್ಮ ರಾಜಕಾರಣಿಗಳ ಔದಾರ್ಯದಿಂದ ಅದು ಹಿಂದೆ ತುರುವೇಕೆರೆಗೂ, ತಿಪಟೂರಿಗೂ, ಈಗ ಹುಳಿಯಾರಿಗೂ ಸ್ಥಳಾಂತರವಾಗಿದೆ( ಇದು ಮಾಹಿತಿ) ಹೀಗೆ ಪಟ್ಟಿ ಮಾಡುತಾತಾ ಹೋದಲ್ಲಿ ಅದು ಹನುಮಂತನ ಬಾಲ ಬೆಳೆದ ಹಾಗೆ ಬೆಳೆಯುತ್ತಲೇ ಹೋಗುತ್ತವೆ, ನಮ್ಮ ಜನಪ್ರತಿನಿಧಿಗಳಿಗೆ ರೀತಿಯ ಅವ್ಯವಸ್ಥೆ ಕಣ್ಣಿಗೆ ರಾಚುವ ರೀತಿಯಲ್ಲಿ ಇದ್ದರೂ ತಾವು ಮೌನದಿಂದ ಕೇವಲ ನಗುಮುಖದಿಂದ ಮಾತನಾಡಿಸುವುದೇ ಊರಿನ ಅಭಿವೃದ್ದಿ ಎಂದುಕೊಂಡಿರುವುದು, ;ಮ್ಮ ಪಿರಪಿತ್ೃಗಳಿಗೆ ಇಲ್ಲದ ಇಚ್ಚಾಶಕ್ತಿ, ಇಷ್ಟಾದರೂ ನಮಗೇಕೆ ಬೇಕು ಎನ್ನು ನನ್ನೂರಿನ ಸತ್ ಪ್ರಜೆಗಳು, ಅಬ್ಬಾ ಚಿಕ್ಕನಾಯಕನಹಳ್ಳಿ ನಿನಗೆ ಜೈ, ಜೈ, ಜೈ


Monday, April 21, 2014


ಎ.ಟಿ.ಎಂ.ನಲ್ಲೇ ಬಿಟ್ಟು ಹೋಗಿದ್ದ ಹಣವನ್ನು ಬ್ಯಾಂಕ್ ವ್ಯವಸ್ಥಾಪಕರಿಗೆ ತಲುಪಿಸಿ ಪ್ರಮಾಣಿಕತೆ ಮೆರೆದ ಹೇಮಂತ್ಕುಮಾರ್
ಚಿಕ್ಕನಾಯಕನಹಳ್ಳಿ,ಏ.21: ಬ್ಯಾಂಕ್ ಡಿಸ್ಪೆಂನ್ಸರ್(ಹಣ ನೀಡುವ ಯಂತ್ರ)ನಲ್ಲಿ ಎಟಿಎಂ ಮೂಲಕ ಹಣ ಪಡೆಯಲು ಹೋಗಿದ್ದ ವ್ಯಕ್ತಿಗೆ ಹಣ ದಕ್ಕದೆ ನಂತರ ಬಂದ ವ್ಯಕ್ತಿಗೆ ಹಣ ಸಿಕ್ಕಿತ್ತು.ಹಣ ಪಡೆದ ವ್ಯಕ್ತಿ ಬ್ಯಾಂಕ್ ವ್ಯವಸ್ಥಾಪಕ ಎಚ್.ಡಿ.ಶಂಕರ್ಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
  ಕಂಪ್ಯೂಟರ್ ಇಂಟರ್ನೆಟ್ ಮುಂತಾದ ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಗ್ರಾಹಕರಿಗೆ ಡಿಸ್ಪೆಂಸರ್ ಲೋಪದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ರಿತಿಯಲ್ಲಿ ಎಟಿಎಂ ಯಂತ್ರ ತಂದಿರುವ ಅವಾಂತರ ಇದು.
  ಏ.16ರಂದು ಬೆಳಗ್ಗೆ 7.10ರ ಸಮಯದಲ್ಲಿ ಹಣಕಾಸಿನ ಅಗತ್ಯತೆ ಮೇರೆಗೆ ಎಟಿಎಂ ಖಾತೆದಾರ ಶೆಟ್ಟಿಕೆರೆ ಗೇಟ್ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆವರಣದಲ್ಲಿರುವ ಎಟಿಎಂಗೆ ಬಂದ ವ್ಯಕ್ತಿಗಳು ಹಣ ತೆಗೆಯಲು ಸಿಕ್ರೇಡ್ ಕೋಡ್ ನಮೂದಿಸಿ ಹಣ ಪಡೆಯಲು ಮುಂದಾಗಿದ್ದಾರೆ.ಆದರೆ ತಾಂತ್ರಿಕ ದೋಷದಿಂದಾಗಿ ಹಣ ಬಾರದೆ ಇದ್ದ ಕಾರಣ ಪಕ್ಕದಲ್ಲೇ ಇದ್ದ  ಇನ್ನೊಂದು ಡಿಸ್ಪೆಂನ್ಸರ್ ನಿಂದ ಹಣ ತೆಗೆದುಕೊಂಡು ಹೋಗಿದ್ದಾರೆ.ಕೈಕೊಟ್ಟ ಡಿಸ್ಪೆಂನ್ಸರ್ ಯಂತ್ರ ನಂತರ ರೂ.7600 ಹಣ ಹಾಚೆ ಹಾಕಿದೆ.
  ಇದೇ ಸಮಯದಲ್ಲಿ ಸರಿಯಾಗಿ.ಹೇಮಂತ್ಕುಮಾರ್ ಎಂಬುವರು ಹಣ ತೆಗೆಯಲು ಎಟಿಎಂ ಒಳಗೆ ಪ್ರವೇಶಿಸಿದ ಸಂದರ್ಭದಲ್ಲಿ ಸದರಿ ಹಣವನ್ನು ಕಂಡು ಹಣವನ್ನು ತೆಗೆದುಕೊಂಡು ಬ್ಯಾಂಕ್ ಮೇನೇಜರ್ ಕಾಣಲು ಹೋಗಿದ್ದರು ಆದರೆ ವ್ಯವಸ್ಥಾಪಕರು ಇಲ್ಲದ ಕಾರಣ ಹಣವನ್ನು ತಾವೇ ಇಟ್ಟುಕೊಂಡು ಸೋಮವಾರ ವ್ಯವಸ್ಥಾಪಕರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
 ಈ ಸಂಬಂಧ ಎಸ್.ಬಿ.ಎಂ. ವ್ಯವಸ್ಥಾಪಕ ಎಚ್.ಡಿ.ಶಂಕರ್ ವಿಚಾರನೆ ನಡೆಸಿದ್ದಾರೆ, ನಂತರದಲ್ಲಿ  ಮಾತನಾಡಿದ ವ್ಯವಸ್ಥಾಪಕ ಎಚ್.ಡಿ.ಶಂಕರ್,   ವಿವಿಧ ಬ್ಯಾಂಕ್ಗಳ ಎಟಿಎಂ ಕಾಡರ್್ ಬಳಸುವ ಸಂದರ್ಭದಲ್ಲಿ  ಬ್ಯಾಟರಿ ಬ್ಯಾಕಪ್ ನಿಂದ ಹಣ ತಡವಾಗಿ ಬರುವ ಸಾಧ್ಯತೆ ಇದ್ದು ಗ್ರಾಹಕರು ಆತುರಪಡದೆ ಕಾಯಬೇಕು ಎಂದರು. ಹಣದ ವ್ಯತ್ಯಯಕ್ಕೆ ಕಾಡರ್್ದಾರರೇ ಕಾರಣರಾಗುತ್ತಾರೆ. ಒಂದು ವೇಳೆ ಗ್ರಾಹಕರು ದೂರುನೀಡಿದರೆ ಪತ್ತೆಹಚ್ಚಲು ಪ್ರಯತ್ನಿಸಲಾಗುವುದು. ಈ ಹಣವನ್ನು ಸೆಂಟ್ರೀ ಡೆಪಾಸಿಟ್ ಅಕೌಂಟ್ನಲ್ಲಿ ಹಿಡಲಾಗುವುದು. ಬಾಂಬೆಯಲ್ಲಿ ಇರುವ ಸ್ವಿಥ್ ಸೆಂಟರ್ ಮಾಹಿತಿ ಪಡೆದು ಹಣವನ್ನು ಗ್ರಾಹಕರಿಗೆ ಹಿಂತಿರುಗಿಸಲಾಗುವುದು ಎಂದರು. ಎಟಿಎಂನಿಂದ ಹಣ ಪಡೆಯುವ ಗ್ರಾಹಕರು ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದರು.
  


ಚಿಕ್ಕನಾಯಕನಹಳ್ಳಿ,ಏ.21 : ಭೂ ಹೊದಿಕೆ ಮತ್ತು ಬಳಕೆಯ ಸಾಂಪ್ರದಾಯಿಕ ಜ್ಞಾನವನ್ನು ಹಾಳು ಮಾಡಿಕೊಂಡಿರುವುದರಿಂದ ಜಲಕ್ಷಾಮ ಆವರಿಸಿದೆ.ಬಯಲು ನಾಡಿನಲ್ಲಿ ಬೀಳುತ್ತಿರುವ ಶೇ.35ರಷ್ಟು ಮಳೆನೀರು ಮಾತ್ರ ಕೃಷಿಗೆ ಬಳಕೆಯಾಗುತ್ತಿದೆ.ಉಳಿದ ಶೇ.65ಭಾಗ ಪೋಲಾಗುತ್ತಿದೆ ಎಂದು ಪರಿಸರವಾದಿ ಪ್ರೊ.ಸಿ.ಯತಿರಾಜ್ ಆತಂಕ ವ್ಯಕ್ತಪಡಿಸಿದರು.

  
  ತಾಲ್ಲೂಕಿನ ಕಂದಿಕೆರೆ ಹೋಬಳಿ ಕಣಿವೆ ಕ್ರಾಸ್ ಬಳಿ ರಮೇಶ್ ತೊಟದಲ್ಲಿ ಸೃಜನ ಹಾಗೂ ತಾಲ್ಲೂಕು ವಿಜ್ಞಾನ ಕೇಂದ್ರ ಸಂಯುಕ್ತವಾಗಿ ಆಯೋಜಿಸಿರುದ್ದ ಸಿರಿಧಾನ್ಯಬೆಳೆ ಮಹತ್ವ ಕುರಿತಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿ, ಇದನ್ನು ಸರಿಯಾಗಿ ಬಳಸಿಕೊಳ್ಳಲು ಮುಚ್ಚಿಗೆ ಹೊದಿಕೆ ಮತ್ತು ಸರಿ ಹೊಂದುವ ಬೆಳೆ ವಿನ್ಯಾಸ ಅಳವಡಿಸಿಕೊಳ್ಳುವುದೊಂದೆ ಸರಿಯಾದ  ದಾರಿ ಎಂದರು.
ಅಂತರ್ಜಲದ ಅಪವ್ಯಯದಿಂದ ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿ,ತಾಲ್ಲೂಕು ತಾಲ್ಲೂಕುಗಳಲ್ಲಿ ಜಲಸಂಘರ್ಷ ಶುರುವಾಗಲಿ,ಬಯಲು ನಡಿಗೆ ಒಗ್ಗುವ ಸರಿಯಾದ ಬೆಳೆ ವಿನ್ಯಾಸ ನೀರು ನಿರ್ವಹಣೆ ಕ್ರಮವನ್ನು ಅನುಸರಿದರೆ ಬೀಳುವ ಮಳೆಯಲ್ಲಿ ಸಮೃದ್ಧಿ ಕಾಣಬಹುದು ಎಂದರು.
ಇಂದಿನ ಕೃಷಿ ಅಧೊಗತಿಗೆ ಕೃಷಿ ವಿಜ್ಞಾನಿಗಳು ಹಾಗೂ ಇಲಾಖೆಗಳು ಕಾರಣ.ಇಲಾಖೆಯ ಸಲಹೆಯಂತೆ ರೈತರು ಅಡಿಕೆ ಮತ್ತು ತೆಂಗು ಬೆಳೆಗಳನ್ನು ಹಾಕಿದ್ದಾರೆ.ತೊಟ ಉಳಿಸಿಕೊಳ್ಳಲು ಅಂತರ್ಜಲದ ವಿಪರೀತ ಬಳಕೆಗೆ ತೊಡಗಿದ್ದಾರೆ.ರಾಜಕಾರಣಿಗಳು ಶಾಶ್ವತ ನೀರಾವರಿ ಅಂಥ ಸಮುದ್ರಕ್ಕೆ ಹೋಗುವ ನೀರನ್ನು ಬಯಲುನಾಡಿಗೆ ಹರಿಸುತ್ತೇವೆ ಅನ್ನುತ್ತಾರೆ. ಅವು ನೀರಿನ ದಾಹ ಮತ್ತು ಸಂಘರ್ಷ ಹೆಚ್ಚಿಸುತ್ತವೆ. ಆದರೆ ನಮಗೆ ನಿರಾವರಿ ಯೋಜನೆಗಳು ಬೇಡ ಬದಲಿಗೆ ಬಿದ್ದ ಮಳೆನೀರನ್ನು ಭೂಮಿಗೆ ಇಂಗಿಸಿ ಭವಿಷ್ಯದ ನೀರಿನ ನಿಧಿ ಭದ್ರಪಡಿಸಿಕೊಳ್ಳುವ ಯೋಜನೆಗಳು ಬೇಕು ಎಂದು ಅಭಿಪ್ರಾಯಪಟ್ಟರು.
  ಕಾಡು ಕೃಷಿ ಪ್ರತಿಪಾದಕ ಡಾ.ಖಾದರ್ ಮಾತನಾಡಿ,ತೋಟ ಹೊಲಗಳಲ್ಲಿ ಉಳಿವ ತ್ಯಾಜ್ಯವನ್ನು ಬೆಂಕಿ ಹಾಕಿ ಸುಡುವ ಪರಿಪಾಟ ರೈತರಲ್ಲಿದೆ ಅದು ತಪ್ಪು.ಕೃಷಿ ಉಳಿಕೆಗಳುನ್ನು ಭೂ ಹೊದಿಕೆಯನ್ನಾಗಿ ಪರಿವತರ್ಿಸುವುದರಿಂದ ಅಂತರ್ಜಲ ಹಾವಿಯಾಗದಂತೆ ತಡೆಯಬಹುದು ಮತ್ತು ಕೋಟ್ಯಾಂತರ ಸೂಕ್ಷ್ಮಾಣುಗಳ ವೃದ್ಧಿಗೂ ಕಾರಣವಾಗುತ್ತದೆ ಆದ್ದರಿಂದ ಉಳಿಕೆಗೆ ಬೆಂಕಿ ಹಾಕಬೇಡಿ. ಕಾಡು ಮತ್ತು ಗುಡ್ಡಗಳಿಗೆ ಬೆಂಕಿ ಹಾಕುವುದು ಅಕ್ಷಮ್ಯ ಅಪರಾಧ ಎಂದರು
  ಬಯಲು ನಾಡಿನ ಕೃಷಿಗೆ ಸಿರಿಧಾನ್ಯಗಳಾದ ಹಾರ್ಕ,ನವಣೆ ಸಾವೆ,ಸಜ್ಜೆ,ರಾಗಿ,ಕೊರಲೆ,ಹುರುಳಿ ಅಲಸಂದೆ ಮುಂತಾದವುಗಳು ಸೂಕ್ತವಾಗಿವೆ ರೈತರು ಉದಾಸೀನ ಮಾಡದೆ ಸಿರಿಧಾನ್ಯಗಳ ಬಿತ್ತನೆಗೆ ಮುಂದಾಗಿ ಎಂದರು.
  ಕಾರ್ಯಕ್ರಮದಲ್ಲಿ ಗ್ರೀನ್ ಇನೋವೇಟೀವ್ ಫೌಂಡೇಷನ್ನ ಚಮದ್ರಶೇಖರ್ ಬಾಳೆ, ವಿಜ್ಞಾನ ಸಂಘದ ಪದಾಧಿಕಾರಿಗಳಾದ ವಿಶ್ವನಾಥ್,ರಾಮಕೃಷ್ಣಪ್ಪ,ಸೃಜನ ಕಾರ್ಯದಶರ್ಿ ಇಂದಿರಮ್ಮ, ಕಂದಿಕೆರೆ ವಲಯ ಕೃಷಿ ಅಧಿಕಾರಿ ನಾಗರಾಜು,ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ರಮೇಶ್ ಮುಂತಾದವರು ಇದ್ದರು.

Thursday, April 17, 2014

ಕುಪ್ಪೂರು ಬಳಿ ಬೀಡುಬಿಟ್ಟಿರುವ ಆನೆಗಳು 
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅಣೆಕಟ್ಟೆ ಬಳಿ ಇರುವ ಹಳ್ಳದ ಬಳ್ಳಾರಿ ಜಾಲಿಯ ಪೊದೆಯಲ್ಲಿ ಬೀಡುಬಿಟ್ಟಿರುವ ಎರಡು ಆನೆಗಳು ಸುತ್ತಮುತ್ತಲ ತೋಟಗಳಲ್ಲಿ ಸಂಚರಿಸುತ್ತಿವೆ.
ಚಿಕ್ಕನಾಯಕನಹಳ್ಳಿ : ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಹೊರಟ ಆನೆಗಳ ಹಿಂಡಿನಿಂದ ಬೇರ್ಪಟ್ಟ ಎರಡು ಆನೆಗಳು ಮೊನ್ನೆ ತಾಲ್ಲೂಕಿನ ಬುಕ್ಕಾಪಟ್ಟಣ ಹಾಗೂ ಬೋರನಕಣಿವೆಯಲ್ಲಿ ತಂಗಿದ್ದು ರಾತ್ರಿ ಚಿಕ್ಕಬಿದರೆ ಮಾರ್ಗವಾಗಿ ಕುಪ್ಪೂರು ಬಳಿಯ ಹಳ್ಳದ ಬಳ್ಳಾರಿ ಜಾಲಿಯ ಪೊದೆಗಳಲ್ಲಿ ಎರಡು ಆನೆಗಳು ಬೀಡುಬಿಟ್ಟಿವೆ.
  ತಾಲ್ಲೂಕಿನ ಬೋರನಕಣಿವೆ ಜಲಾಶಯದ ಮಾರ್ಗವಾಗಿ ಚಿಕ್ಕಬಿದರೆ, ಅಣೆಕಟ್ಟೆ ಮೂಲಕ ಕುಪ್ಪೂರು ಸುತ್ತಮುತ್ತಾ ಆನೆಗಳು ಗುರುವಾರ ಬೆಳಗಿನ ಜಾವ ತಿರುಗಾಡುತ್ತಿದು ಅರಣ್ಯ ಇಲಾಖೆಯ ಸಿಬ್ಬಂದಿಯು ಆನೆಗಳನ್ನು ಓಡಿಸಲು ಹರಸಾಸಹ ಪಡುತ್ತಿದ್ದಾರೆ, ಆನೆಗಳನ್ನು ನೋಡಿದ ಜನರು ಶಿಳ್ಳೆ ಮತ್ತು ಕೇಕೇ ಹಾಕುತ್ತಿರುವುದಕ್ಕೆ ಆನೆಗಳು ಬೆದುರುವ ಸಂಭವವಿರುವುದರಿಂದ ಜನರನ್ನು ನಿಯಂತ್ರಿಸಲು ಶ್ರಮ ಪಡುತ್ತಿದ್ದಾರೆ.
ಬಿಸಿಲಿರುವುದರಿಂದ ಬಳ್ಳಾರಿ ಜಾಲಿಯ ಪೊದೆಯಲ್ಲಿ ಬೀಡುಬಿಟ್ಟಿರುವ ಆನೆಗಳು ಯಾವುದೇ ಸಮಯದಲ್ಲಾದರೂ ಕದಲಬಹುದು ಎಂಬ ಕಾರಣದಿಂದ ಜನರನ್ನು ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದು ಸಂಜೆಯಾದ ನಂತರ ಸ್ಥಳದಿಂದ ಕದಲುವ ಸಂಭವವಿದೆ ಎಂದು ವಲಯ ಅರಣ್ಯಾಧಿಕಾರಿ ಮಾರುತಿ ತಿಳಿಸಿದ್ದಾರೆ. ಆನೆಗಳನ್ನು ನಿಯಂತ್ರಿಸಲು ಸ್ಥಳ್ಕದಲ್ಲೇ ಅರಣ್ಯ ಇಲಾಖಾ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಚಿ.ನಾ.ಹಳ್ಳಿ ಲೋಕಸಭಾ ಚುನಾವಣೆ ಶಾಂತಿಯುತ ಮತದಾನ

ಚಿಕ್ಕನಾಯಕನಹಳ್ಳಿ ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 222ನೇ ವಾಡರ್್ನ ಮತಗಟ್ಟೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬ ಪತ್ನಿ ಬಬಿತಾರವರೊಂದಿಗೆ ಮತಚಲಾಯಿಸಿ, ಹೆಬ್ಬೆಟ್ಟಿನ ಶಾಹಿ ತೋರಿಸುತ್ತಿರುವುದು.






ಚಿಕ್ಕನಾಯಕನಹಳ್ಳಿ ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಜೆ.ಸಿ.ಪುರದ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಪತ್ನಿ ತ್ರಿವೇಣಿ, ಮಗ ಅಭಿಗ್ನರೊಂದಿಗೆ ಮತ ಚಲಾಯಿಸಿದರು.

ಚಿಕ್ಕನಾಯಕನಹಳ್ಳಿ ತಮ್ಮಡಿಹಳ್ಳಿ ಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿಯವರು ಅಬುಜಿಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 207ರಲ್ಲಿ ತಮ್ಮ ಮತಚಲಾಯಿಸಿದರು.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗ್ರಾಮದ ಸಕರ್ಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ತಮ್ಮ ಮತಚಲಾಯಿಸಿದರು.

ಚಿಕ್ಕನಾಯಕನಹಳ್ಳಿ : ಲೋಕಸಭಾ ಚುನಾವಣೆಯ ಮತದಾನ ಚಿ.ನಾ.ಹಳ್ಳಿ ತಾಲ್ಲೂಕಿನಲ್ಲಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು ನವಿಲೆ ಗ್ರಾಮದ 201ನೇ ಬೂತ್ನಲ್ಲಿ ಮತಯಂತ್ರ ಕೆಟ್ಟುಹೋದ ಪರಿಣಾಮ 15 ನಿಮಿಷ ತಡವಾಗಿ ಮತದಾನ ಪ್ರಾರಂಭವಾಯಿತು.
ಮೇಲನಹಳ್ಳಿ ಮತ್ತು ನವಿಲೆ ಸೇರಿದಂತೆ ಅಲ್ಲಲ್ಲಿ ಕೆಲವು ಮತಗಟ್ಟೆಗಳಲ್ಲಿ ಮತಯಂತ್ರಕ್ಕೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಹೊಡೆದ ವರದಿಗಳು ಬಂದಿವೆ. ಸಂಜೆ 5ಗಂಟೆಯವರೆಗೆ ಶೇ.60ರಷ್ಟು ಮತದಾನವಾಗಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ಪಟ್ಟಣದ ಕಾಳಮ್ಮನಗುಡಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ 222ನೇ ಮತಗಟ್ಟೆಯಲ್ಲಿ ಪತ್ನಿ ಬಬಿತಾರೊಂದಿಗೆ ಮತ ಚಲಾಯಿಸಿದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಜೆ.ಸಿ.ಪುರ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಕುಟುಂಬದವರೊಂದಿಗೆ ಮತ ಚಲಾಯಿಸಿದರು. ತಮ್ಮಡಿಹಳ್ಳಿಯ ಡಾ.ಅಭಿನವಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿಜಿ ಅಬೂಜಿಹಳ್ಳಿ ಸಕರ್ಾರಿ ಪ್ರಾಥಮಿಕ ಶಾಲೆ ಹಾಗೂ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಕುಪ್ಪೂರು ಪ್ರಾಥಮಿಕ ಪಾಠಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ರಾಮನಹಳ್ಳಿ ಮತಗಟ್ಟೆಯ ಗುಂಗುರಪೆಂಟೆಯ 78 ಮತದಾರರಲ್ಲಿ ಒಬ್ಬರು ಮತಚಲಾಯಿಸಿದ್ದಾರೆ, ಉಳಿದವರು ಮತದಾನ ಬಹಿಷ್ಕರಿಸಿ ತಮಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ ಎಂದು ಮತದಾನದಿಂದ ದೂರ ಉಳಿದಿದ್ದಾರೆ. ತಾಲ್ಲೂಕಿನ ಕೆಲವು ಕಡೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದವರೊಂದಿಗೆ ಮಾತಿನ ಚಕಮಕಿ ನಡೆದಿದೆ.


















Friday, April 11, 2014

ಮನುಷ್ಯತ್ವ ಇಲ್ಲದ ಮೋದಿ, ಭ್ರಷ್ಟಾಚಾರಕ್ಕೆ ಹೆಸರಾಗಿರುವ ಬಿಜೆಪಿ 


 ಚಿಕ್ಕನಾಯಕನಹಳ್ಳಿ,ಏ.10: ರಾಷ್ಟ್ರ ಮಟ್ಟದಲ್ಲಿ  ಮನುಷ್ಯತ್ವ ಇಲ್ಲದ ಮೋದಿ, ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಹೆಸರಾಗಿರುವ  ಯಡಿಯೂರಪ್ಪ, ಅನಂತಕುಮಾರ್, ಈಶ್ವರಪ್ಪ ನಂತವರ ನೇತೃತ್ವದಲ್ಲಿ  ಅನಾಚಾರ, ದೂರಾಚರಗಳಿಗೆ ಪ್ರಸಿದ್ದರಾಗಿರುವ ಹಾಲಪ್ಪ, ಲಕ್ಷ್ಮಣಸವದಿ, ಸಿ.ಸಿ.ಪಾಟೀಲ, ರೇಣುಕಾಚಾರ್ಯರಂತಹವರೇ ತುಂಬಿರುವ ಕೋಮುವಾದಿ ಬಿ.ಜೆ.ಪಿ. ಒಂದಡೆಯಾದರೆ, ಜೆ.ಡಿ.ಎಸ್.ನಲ್ಲಿ ದೇವೇಗೌಡ, ಕುಮಾರಸ್ವಾಮಿ ಮೇಲೆ ವಿಶ್ವಾಸವನ್ನು ಕಳೆದುಕೊಂಡಿರುವ ನಾಯಕರೇ ತುಂಬಿರುವ ಪಕ್ಷ, ಇವರೆಡನ್ನೂ ಧಿಕ್ಕರಿಸಿ.  ರೈತರ, ಬಡವರ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.
ಪಟ್ಟಣದ ಕೆ.ಎಂ.ಎಚ್.ಪಿ.ಎಸ್. ಮೈದಾನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಎಸ್.ಪಿ.ಮುದ್ದಹನುಮೇಗೌಡರ ಪರ ಸಿ.ಎಂ.ಸಿದ್ದರಾಮಯ್ಯ ಪ್ರಚಾರ ಭಾಷಣ ಮಾಡಿದರು. ಕೋಮುವಾದವನ್ನೇ ಅಜಂಡಾ ಮಾಡಿಕೊಂಡಿರುವ ಬಿ.ಜೆ.ಪಿ, ಈಗ ಹೊರಡಿಸಿರುವ ತನ್ನ ಪ್ರಣಾಳಿಕೆಯಲ್ಲಿ  ಹಿಂದೆ ಜನಸಂಘ ಹೊರಡಿಸುತ್ತಿದ್ದ ಅಂಶಗಳನ್ನೇ  ಪುನರ್ ಮುದ್ರಣ ಮಾಡಿಸಿದಂತಿದೆ ಎಂದು ಸಿದ್ದರಾಮಯ್ಯ ವ್ಯಂಗವಾಡಿದರು.
ಮೋದಿಗೆ ಮತ ನೀಡಿದರೆ ಗುಜರಾತಿನಲ್ಲಿ 2002ರಲ್ಲಿ ನಡೆದ ಕೋಮು ದಳ್ಳುರಿ ಇಡೀ ರಾಷ್ಟ್ರದಲ್ಲಿ ಆರಂಭಗೊಳ್ಳುತ್ತದೆ, ಅಲ್ಲಿ ಅಷ್ಟು ನರಮೇದ ಆದ್ರೂ ಪಶ್ವಿತಾಪ ಪಡದ ಮೋದಿ ಈ ದೇಶದ ಪ್ರಧಾನಿ ಆಗಬಾರದು ಎಂದರಲ್ಲದೆ, ರಾಷ್ಟ್ರದಲ್ಲಿರುವ 82 ಕೋಟಿ ಮತದಾರರು ದೇಶದ ಭವಿಷ್ಯವನ್ನು ನಿಧರ್ಾರಿಸುವಾಗ ಈ ಅಂಶಗಳನ್ನು ಗಮನದಲ್ಲಿಡಬೇಕು ಎಂದರು.
ಕಾಂಗ್ರೆಸ್ ಪಕ್ಷದ ರಕ್ತದಲ್ಲಿ ಭ್ರಷ್ಟಾಚಾರ ಇದೆ ಎಂದು ಮೈಸೂರಿನಲ್ಲಿ ಮೋದಿ ಹೇಳುವಾಗ ಪಕ್ಕದಲ್ಲೇ ಭ್ರಷ್ಟಚಾರದ ಸಲುವಾಗಿ ಜೈಲಿಗೆ ಹೋದ ಯಡಿಯೂರಪ್ಪ, 14 ಸಾವಿರ ಕೋಟಿ ರೂಗಳ ಹಗರಣದ ಆರೋಪ ಹೊತ್ತಿರುವ ಅನಂತಕುಮಾರ್ ಪಕ್ಕದಲ್ಲೇ ಕುಳಿತ್ತಿದ್ದರೂ ಮೋದಿಯ ಕಣ್ಣಿಗೆ ಕಾಣಲಿಲ್ಲವೆ ಎಂದು ಪ್ರಶ್ನಿಸಿದರು.
ಕನರ್ಾಟಕವನ್ನು ರಾಷ್ಟ್ರದಲ್ಲೇ ನಂ.1 ರಾಜ್ಯವನ್ನಾಗಿ ಮಾಡುವ ಕನಸು ನನ್ನದು ಅದನ್ನು ನನಸಾಗಿಸಲು ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದರು, ಗ್ರಾಮಾಂತರ ಪ್ರದೇಶದಲ್ಲಿ ಎಷ್ಟು ಕುಟುಂಬಗಳು ತುತ್ತು ]ಅನ್ನಕ್ಕಾಗಿ ಕಾಯುತ್ತಿದ್ದ ದಿನಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ ಅದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ತಂದೆ, ಮಕ್ಕಳ ಅಪೌಷ್ಠಕತೆ ನಿವಾರಿಸಲು ಹಾಲು ವಿತರಣೆ ಮಾಡಿದೆ, ಅಹಿಂದ ವರ್ಗದವರು ವಿವಿಧ ನಿಗಮ ಮಂಡಳಿಗಳಲ್ಲಿ ತೆಗೆದುಕೊಂಡ ಸಾಲ ಮನ್ನ ಮಾಡಿದ್ದರಿಂದ ಇದರ ಉಪಯೋಗವನ್ನು 10 ಲಕ್ಷ ಜನ ಪಡೆದುಕೊಂಡರು, ರೈತರಿಗೆ ಬಡ್ಡಿ ರಹಿತ 3 ಲಕ್ಷ ರೂಗಳ ಸಾಲವನ್ನು ವಿತರಿಸುವ ಯೋಜನೆ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದರು.
ತುಮಕೂರು ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಅಬ್ಯಾಥರ್ಿಗೆ ಮತ ನೀಡಿದರೆ ಅದು ಬಿ.ಜೆ.ಪಿ. ಅಬ್ಯಾಥರ್ಿಯ ಗೆಲುವಿಗೆ ಸಹಕರಿಸಿದಂತೆ ಆದ್ದರಿಂದ ಜಿಲ್ಲೆಯ ಜನರು ಕಾಂಗ್ರೆಸ್ ಪಕ್ಷದ ಅಬ್ಯಾಥರ್ಿ ಎಸ್.ಪಿ.ಮುದ್ದು ಹನುಮೇಗೌಡರಿಗೆ ಮತನೀಡಿ ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಿ, ಯಾವುದೇ ಗಾಳಿ ಸುದ್ದಿಗೆ ಕಿವಿಕೊಡದೆ ರಾಜ್ಯ ಸಕರ್ಾರವನ್ನು ಮುಂದೆ ನಾಲ್ಕು ವರ್ಷಗಳ ಕಾಲ ಸುಭದ್ರವಾಗಿ ಮುನ್ನಡೆಸುವ ಅವಕಾಶವನ್ನು ಕಲ್ಪಿಸಿಕೊಡುವಂತೆ ಕೋರಿದರು.
ರಾಜ್ಯವನ್ನು ರೋಗಮುಕ್ತ, ಗುಡಿಸಲು ಮುಕ್ತ, ಹಸಿರಿನಿಂದ ಕಂಗೊಳಿಸುವಂತೆ ಮಾಡಲು ಐದು ವರ್ಷ ಪೂರ್ಣ ಪ್ರಮಾಣದಲ್ಲಿ ಸಕರ್ಾರವನ್ನು ನಡೆಸುವಂತೆ ರಾಜ್ಯದ ಜನತೆ ಆಶೀರ್ವದಿಸಬೇಕು ಎಂದರು.
ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ರಾಷ್ಟ್ರಕ್ಕೆ ಶಿಕ್ಷಣ ಕಾಯಿದೆ, ಉದ್ಯೋಗ ಕಾಯಿದೆ, ಮಾಹಿತಿ ಹಕ್ಕು ಕಾಯಿದೆಯಂತಹ ಜನೋಪಯೋಗಿ ಅಸ್ತ್ರಗಳನ್ನು ಜನತೆ ನೀಡಿರುವ ಸಕರ್ಾರ, 96 ಕೋಟಿ ಜನತೆಯ ಕೈಗೆ ಮೊಬೈಲ್ ಕೊಡಿಸುವಂತಹ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದರು.
  ಸಿದ್ದರಾಮಯ್ಯನವರ ನೇತೃತ್ವದ ಸಕರ್ಾರ ಕೈಗಾರಿಕಾ ಕ್ಷೇತ್ರದಲ್ಲಿ ರಾಷ್ಟ್ರಕ್ಕೆ ಎರಡನೇ ಸ್ಥಾನಕ್ಕೆ ತಂದಿದ್ದಾರೆ ಎಂದರಲ್ಲದೆ, ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸುತ್ತಿದೆ ಎಂದರು.
ಬಹಿರಂಗ ಸಭೆಯಲ್ಲಿ ಜಿಲ್ಲಾ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಚಿಕ್ಕನಾಯಕನಹಳ್ಳಿಯ ಇತಿಹಾಸದಲ್ಲಿ 1978ರಲ್ಲಿ ಇಂದಿರಾಗಾಂಧಿ ಪಟ್ಟಣಕ್ಕೆ ಬಂದಾಗ ಸೇರಿದಷ್ಟೇ ಜನಸ್ತೋಮ ಇಂದು ಸಿದ್ದರಾಮಯ್ಯ ಪಟ್ಟಣಕ್ಕೆ ಬಂದಾಗಲೂ ಸೇರಿರುವುದು ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆ  ಸಿಕ್ಕಿರುವ ಬೆಂಬಲ ಎಂದರು. 
  ಸಭೆಯಲ್ಲಿ ಅಬ್ಯಾಥರ್ಿ ಎಸ್.ಪಿ.ಮುದ್ದುಹನುಮೇಗೌಡ, ಹಿರಿಯ ಕಾಂಗ್ರೆಸ್ ಮುಖಂಡರಾದ ಎಂ.ವಿ.ರಾಜಶೇಖರನ್, ನಟ ಶಶಿಕುಮಾರ್, ಎಂ.ಆರ್.ಸೀತಾರಾಂ ಮಾತನಾಡಿದರು. ಷಫಿ ಅಹಮದ್, ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಜೇಂದ್ರ, ಸಾಸಲು ಸತೀಶ್, ಸಿ.ಬಸವರಾಜು, ಸೀಮೆಣ್ಣೆ ಕೃಷ್ಣಯ್ಯ, ಬಿ.ಲಕ್ಕಪ್ಪ, ಭಕ್ತರಾಮೇಗೌಡ, ಎಚ್.ಬಿ.ನಾರಾಯಣಗೌಡ, ಸಿ.ಕೆ.ಗುರುಸಿದ್ದಯ್ಯ, ಎ.ಪಿ.ಎಂ.ಸಿ.ಸದಸ್ಯ ಯಳನಡು ಸಿದ್ದರಾಮಯ್ಯ, ಪುರಸಭಾ ಸದಸ್ಯರುಗಳಾದ ಸಿ.ಪಿ.ಮಹೇಶ್, ರೇಣುಕಮ್ಮ ಗುರುಮೂತರ್ಿ,  ಧರಣಿ ಲಕ್ಕಪ್ಪ, ಸಾದರಹಳ್ಳಿ ಮಲ್ಲಿಕಾರ್ಜನಯ್ಯ, ಸಿ.ಎಲ್.ರವಿಕುಮಾರ್, ಕೆ.ಜಿ.ಕೃಷ್ಣೇಗೌಡ,  ಬಾಬು ಸಾಹೇಬ್, ತೀರ್ಥಪುರ ವಾಸು,ಘನ್ನಿಸಾಬ್, ಮಹಮದ್ ಪೀರ್ಸಾಬ್, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ ಸೇರಿದಂತೆ ಹಲವರಿದ್ದರು.