Monday, July 18, 2011




ವಿದ್ಯಾಥರ್ಿಗಳಿಗೆ ಕೊಡುವ ಸೈಕಲ್ನ್ನು ಪೋಷಕರು ದುರಪಯೋಗ ಪಡಿಸಿಕೊಳ್ಳಬೇಡಿ ಚಿಕ್ಕನಾಯಕನಹಳ್ಳಿ,ಜು.18: ಐದಾರು ಕಿ.ಮೀ.ನಡೆದು, ಮಧ್ಯಾಹ್ನ ಉಪವಾಸವಿದ್ದು ಶಿಕ್ಷಣ ಕಲಿಯಲು ಬರುತ್ತಿದ್ದ ಕಾಲ ದೂರವಾಗಿದೆ, ಇಂದಿನ ವಿದ್ಯಾಥರ್ಿಗಳಿಗೆ ಬೈಸಿಕಲ್, ಊಟ ಸೇರಿದಂತೆ ಶಿಕ್ಷಣಕ್ಕೆ ಅಗತ್ಯವಿರುವ ಎಲ್ಲಾ ಸಲಕರಣೆಗಳನ್ನು ಸಕರ್ಾರ ನೀಡುತ್ತಿದ್ದು ಇದನ್ನು ಬಳಸಿಕೊಂಡು ವಿದ್ಯಾಥರ್ಿಗಳನ್ನು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಢಶಾಲಾ ಆವರಣದಲ್ಲಿ ಶಾಲಾ ಮಕ್ಕಳಿಗೆ ಬೈಸಿಕಲ್ ವಿತರಿಸಿ ಮಾತನಾಡಿದ ಅವರು, ನಾವು ಓದುವ ಸಮಯದಲ್ಲಿ ಹಳ್ಳಿಗಳಿಂದ ಶಾಲೆಗೆ ಬರುತ್ತಿದ್ದ ವಿದ್ಯಾಥರ್ಿಗಳು ತಡವಾಗಿ ಆಗಮಿಸಿ ಮೊದಲ ಅವಧಿ ಶಿಕ್ಷಕರ ಬೋಧನೆಯಿಂದ ವಂಚಿತರಾಗುತ್ತಿದ್ದು ಒಂದೆಡೆಯಾದರೆ ತಡವಾಗಿ ಬಂದ ಕಾರಣಕ್ಕೆ ಬೆತ್ತದ ರುಚಿಯನ್ನು ತಿನ್ನುತ್ತಿದ್ದರು ಅಲ್ಲದೆ ಬಡ ವಿದ್ಯಾಥರ್ಿಗಳು ಪಠ್ಯಪುಸ್ತಕಕ್ಕಾಗಿ ಬೇರೆ ವಿದ್ಯಾಥರ್ಿಗಳು ಓದಿದ ಪುಸ್ತಕವನ್ನು ಅರ್ಧ ಬೆಲೆಗೆ ಕೊಂಡು ಓದುವ ಸ್ಥಿತಿ ಅಂದು ಇತ್ತು ಎಂದು ತಮ್ಮ ವಿದ್ಯಾಥರ್ಿ ಜೀವನನ್ನು ಸ್ಮರಿಸಿಕೊಂಡ ಶಾಸಕರು ಆದರೆ ಈಗ ಸಕರ್ಾರ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಶಾಲಾ ಸಮವಸ್ತ್ರ, ಪಠ್ಯಪುಸ್ತಕ, ಶಾಲಾಗೆ ಸರಿಯಾಗಿ ಬರಲು ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ, ಮಧ್ಯಾಹ್ನದ ಬಿಸಿಯೂಟವನ್ನು ನೀಡುತ್ತಿದೆ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಸಾಕಷ್ಟು ಶ್ರಮಿಸುತ್ತಿದೆ ಇದಕ್ಕಾಗಿ ಪೋಷಕರು ,ಶಿಕ್ಷಕರ ಮತ್ತು ಇಲಾಖೆಯ ಜೊತೆ ಕೈಜೋಡಿಸಿ ಸಹಕರಿಸಬೇಕು ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ತಾಲ್ಲೂಕಿನ ಎಲ್ಲಾ ಶಾಲಾ ವಿದ್ಯಾಥರ್ಿಗಳಿಗೆ ಜುಲೈ ತಿಂಗಳ ಅಂತ್ಯದೊಳಗೆ ಸೈಕಲ್ ವಿತರಿಸಲಿದ್ದೇವೆ, ವಿದ್ಯಾಥರ್ಿಗಳು ಶಾಲೆಗೆ ಸರಿಯಾದ ವೇಳೆಗೆ ಆಗಮಿಸಲೆಂದು ಸಕರ್ಾರ ಸೈಕಲ್ ವಿತರಿಸುತ್ತಿದ್ದು ಪೋಷಕರು ಅನ್ಯ ಕಾರ್ಯಗಳಿಗೆ ಸೈಕಲ್ಲನ್ನು ಬಳಸಿಕೊಳ್ಳಬಾರದು, ಶಾಲೆಯ ದೈಹಿಕ ಶಿಕ್ಷಕರು ವಿದ್ಯಾಥರ್ಿಗಳಿಗೆ ನೀಡಿದ ಸೈಕಲ್ನ್ನು ಪ್ರತಿದಿನ ತರುತ್ತಿದ್ದಾರೆಂದು ಗಮನಿಸಬೇಕು ಎಂದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಡಿವಿಪಿ ಶಾಲಾ ಉಪಾಧ್ಯಕ್ಷ ವಿಶ್ವೇಶ್ವರ್ ಮಾತನಾಡಿದರು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ಉಪಾಧ್ಯಕ್ಷ ರವಿ(ಮೈನ್ಸ್), ತಾ.ಪಂ.ಉಪಾಧ್ಯಕ್ಷೆ ಬಿಬಿ ಪಾತೀಮ, ಟೌನ್ ಬ್ಯಾಂಕ್ ಅಧ್ಯಕ್ಷ ಹಾಗೂ ಸಿ.ಎಸ್.ನಟರಾಜು, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಇ.ಓ.ಎನ್.ಎಂ.ದಯಾನಂದ್, ಪುರಸಬಾ ಸದಸ್ಯ ದೊರೆಮುದ್ದಯ್ಯ, ಸಿ.ಪಿ.ಚಂದ್ರಶೇಖರಶೆಟ್ಟಿ, ಜಿ.ತಿಮ್ಮಯ್ಯ ಮಾಜಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಮುಂತಾದವರು ಉಪಸ್ಥಿತರಿದ್ದರು.
ಜನಸ್ಪಂದನ ಸಭೆ: ಗ್ರಾ.ಪಂ.ಅಧ್ಯಕ್ಷರ ಬದಲಿಗೆ ಪತಿರಾಯನಿಂದ ಭಾಷಣ
ಚಿಕ್ಕನಾಯಕನಹಳ್ಳಿ,ಜೂ.18: ತಾಲೂಕಿನ ಹಂದನಕೆರೆ ಜನಸ್ಪಂದನ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರ ಬದಲಾಗಿ ಅವರ ಪತಿರಾಯ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಸಂಗ ಸಭೆಯಲ್ಲಿದ್ದ ಹಲವರಿಗೆ ಹುಬ್ಬೇರಿಸುವಂತೆ ಮಾಡಿದೆ.
ಕಳೆದ ಶನಿವಾರ ನಡೆದ ಜನಸ್ಪಂದನ ಸಭೆಯಲ್ಲಿ ಸ್ಥಳೀಯ ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ ಈರಪ್ಪ ಸೇರಿದಂತೆ ಈ ಸಭೆಯಲ್ಲಿ ತಾಲೂಕು ಮಟ್ಟದ ಜನಪ್ರತಿನಧಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಾದಿಯಾಗಿ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಪಂಚಾಯಿತಿ ವ್ಯವಸ್ಥೆಯ ತಾಲೂಕು ಮಟ್ಟದ ಅಧಿಕಾರಿ ಒಬ್ಬರು ನಡೆಸಿಕೊಡುತ್ತಿದ್ದರು, ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳ ಪೈಕಿ ಹಲವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಹೋಬಳಿಯ ಅಭಿವೃದ್ದಿಗೆ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು, ನಂತರ ಗ್ರಾ.ಪಂ. ಅಧ್ಯಕ್ಷರ ಸರದಿ ಬಂದಾಗ ಅಧ್ಯಕ್ಷರಿಗೆ ವೇದಿಕೆಯಲ್ಲಿ ಮಾತನಾಡಲು ಅಳಕೊ ಅಥವಾ ವಾಕ್ಪಟುತ್ವದ ಕೊರತೆಯೋ ಕಾಣೆ, ಅವರು ಮೌನಕ್ಕೆ ಶರಣು ಹೋಗಿ ಮೈಕ್ನ ಬಳಿಯೂ ಸುಳಿಯಲಿಲ್ಲ, ಆ ಸಂದರ್ಭದಲ್ಲಿ ನಿರೂಪಕರು ಅಧ್ಯಕ್ಷರ ಬದಲಾಗಿ ಅವರ ಪತಿರಾಯನನ್ನು ಮೈಕ್ ಬಳಿ ಕರೆಯುತ್ತಿದಂತೆ ಅಧ್ಯಕ್ಷರ ಪತಿ ತಮ್ಮ ಕ್ಷೇತ್ರಕ್ಕೆ ಆಗಬೇಕಾಗಿರುವ ಕಾರ್ಯಗಳ ಬಗ್ಗೆ ವಿಚಾರ ಮಂಡಿಸಿದಲ್ಲದೆ, ಅಧಿಕಾರಿಗಳಿಗೆ ಸ್ಥಳದಲ್ಲೇ ಕೆಲವು ಸೂಚನೆಗಳನ್ನು ನೀಡದರು.
ಈ ಸನ್ನಿವೇಶವನ್ನು ನೋಡಿದ ಕೆಲವು ಪ್ರಜ್ಞಾವಂತ ಗ್ರಾಮಸ್ಥರು ಸಕರ್ಾರದ ಸಾರ್ವಜನಿಕ ಸಭೆಯಲ್ಲಿಯೇ ಈ ರೀತಿ ಆದರೆ ಗ್ರಾ.ಪಂ.ಯ ಕಛೇರಿಯಲ್ಲಿ ಹೇಗೋ ಎಂಬುದು ಸದ್ಯದ ಚಚರ್ೆ.