Saturday, May 29, 2010




ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಲಾಟರಿ ಎತ್ತುವ ಮೂಲಕ ಮೀಸಲಾತಿ ನಿರ್ಣಯ
ಚಿಕ್ಕನಾಯಕನಹಳ್ಳಿ,ಮೇ.29: ತಾಲೂಕಿನ 28 ಗ್ರಾ.ಪಂ.ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿ ನಿರ್ಣಯವನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು.
ಪಟ್ಟಣದ ಎಸ್.ಎಲ್.ಎನ್ ಚಿತ್ರಮಂದಿರದಲ್ಲಿ ನಡೆದ ಗ್ರಾ.ಪಂ ನೂತನ ಸದಸ್ಯರ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಬಹಿರಂಗಪಡಿಸಿದರು.
ದಸೂಡಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಹೊಯ್ಸಳಕಟ್ಟೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಗಾಣದಾಳು ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ) ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ (ಎ), ಕೆಂಕೆರೆಯ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ(ಮ), ಹುಳಿಯಾರು ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ಯಳನಡು ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಕೋರಗೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ, ದೊಡ್ಡಎಣ್ಣೆಗೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಉಪಾಧ್ಯಕ್ಷ ಸ್ಥಾನಕ್ಕೆ ಪ.ಪಂಗಡ, ಹಂದನಕೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಬಿ)(ಮ), ಚೌಳಕಟ್ಟೆಯ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ತಿಮ್ಲಾಪುರದ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ದೊಡ್ಡಬಿದರೆ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಪ.ಜಾತಿ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಬರಕನಹಳ್ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ) ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ತಿಮ್ಮನಹಳ್ಳಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ)(ಮ), ರಾಮನಹಳ್ಳಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ)(ಮ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಕಂದಿಕೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ)(ಮ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಬೆಳಗುಲಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಬರಗೂರು ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಬಿ) ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಮತಿಘಟ್ಟ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ)(ಮ), ಮಲ್ಲಿಗೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ, ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ, ಕುಪ್ಪೂರು ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಉಪಾಧ್ಯಕ್ಷ ಸ್ಥಾನಕ್ಕೆ ಪ.ಪಂಗಡ(ಮ), ಶೆಟ್ಟಿಕೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ(ಮ), ದುಗುಡಿಹಳ್ಳಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಮುದ್ದೇನಹಳ್ಳಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಹೊನ್ನೆಬಾಗಿ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಪ.ಜಾತಿ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಬಿ), ತೀರ್ಥಪುರ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ, ಗೋಡೆಕೆರೆ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಸಿ.ಎಂ(ಎ), ಜೆ.ಸಿ.ಪುರ ಗ್ರಾ.ಪಂ: ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ(ಮ), ಉಪಾಧ್ಯಕ್ಷ ಸ್ಥಾನಕ್ಕೆ ಪ.ಜಾತಿ, ಯ ಮೀಸಲಾತಿಗಳ ಮೂಲಕ ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದೊಡ್ಡಯ್ಯ, ಎ.ಸಿ. ಬಸವರಾಜೇಂದ್ರ ತಹಸೀಲ್ದಾರ್ ಟಿ.ಸಿ.ಕಾಂತರಾಜು, ಉಪಸ್ಥಿತರಿದ್ದರು.















Friday, May 28, 2010

ಡಿ.ಸಿ.ಸಿ ಬ್ಯಾಂಕ್ನಿಂದ ಹಲವು ರೀತಿಯ ಸಾಲ ಸೌಲಭ್ಯ

ಚಿಕ್ಕನಾಯಕನಹಳ್ಳಿ,ಮೇ.28: ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕ್ಗಳಲ್ಲಿ ವಾಹನ ಸಾಲ, ಚಿನ್ನಾಭರಣಗಳ ಹಾಗೂ ಗೊಬ್ಬರ ಕೊಳ್ಳಲು ಸಾಲವನ್ನು ಒದಗಿಸುವುದಾಗಿ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದ್ದಾರೆ.
ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಬ್ಯಾಂಕಿನ ವ್ಯವಸ್ಥಾಪಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸ ಯೋಜನೆಯಾಗಿ ಜಂಟಿ ಭಾಧ್ಯತಾ ಗುಂಪುಗಳ ಪ್ರವರ್ಧನಾ ಯೋಜನೆಯಡಿ(ಜೆ.ಎಲ್.ಜಿ.) 5ಜನರ ಗುಂಪು ರಚಿಸಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೂಲಿ ಕಾಮರ್ಿಕರಿಗೆ ಸಾಲ ಸೌಲಭ್ಯ ಒದಗಿಸಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜೀವನ ಮಟ್ಟ ಸುಧಾರಿಸಲು ಬ್ಯಾಂಕ್ನಿಂದ ಸಾಲ ಸೌಲಭ್ಯ ನೀಡುವುದಾಗಿ ಹಾಗೂ ಹೊಸ ರೈತರಿಗೆ ಕೆ.ಸಿ.ಸಿ ಸಾಲ ನೀಡುವುದಾಗಿ ತಿಳಿಸಿದ ಅವರು ಜೂನ್ 10ರಂದು ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣನವರು ತಾಲೂಕಿನ ಪ್ರಾಥಮಿಕ ಕೃಷಿ ಬ್ಯಾಂಕ್ಗಳಿಗೆ ಭೇಟಿ ನೀಡಲಿದ್ದು, ವಿವಿಧ ಯೋಜನೆಯಡಿ ರೈತರಿಗೆ ಎಲ್ಲಾ ಸಹಕಾರ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ನೀಡಲು ಪರಿಶೀಲಿಸಲಿದ್ದಾರೆ ಎಂದರು.
ಸಭೆಯಲ್ಲಿ ಸಹಕಾರ ಸಂಘಗಳ ಅಭಿವೃದ್ದಿ ಅಧಿಕಾರಿ ಬಿ.ಕೆ.ಮುಕುಂದಯ್ಯ, ಡಿ.ಸಿ.ಸಿ.ಬ್ಯಾಂಕ್ ಸೂಪರ್ ವೈಸರ್ ಜಯರಾಮಯ್ಯ ಉಪಸ್ಥಿತರಿದ್ದರು.


Thursday, May 27, 2010



ಶಾಲೆಯ ಆರಂಭದಂದು ಹಬ್ಬದ ವಾತಾವರಣವಿರಲಿ: ಬಿ.ಇ.ಓ.
ಚಿಕ್ಕನಾಯಕನಹಳ್ಳಿ,ಮೇ.26: ತಾಲೂಕಿನ ಶಾಲೆಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಸರಬರಾಜು ಮಾಡುತ್ತಿದ್ದು ಮುಖ್ಯಶಿಕ್ಷಕರು ಮೇ 24ರಿಂದಲೇ ಶಾಲೆಯಲ್ಲಿ ಹಾಜರಿದ್ದು ಮಾಗರ್ಾಧಿಕಾರಿಗಳಿಂದ ಸ್ವೀಕರಿಸಲು ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲಾ ಪ್ರಾರಂಭೋತ್ಸವಕ್ಕೆ ಮುಂಚಿತವಾಗಿ ಶಾಲಾ ಕೊಠಡಿ, ಶೌಚಾಲಯ, ಆಟದ ಮೈದಾನ, ಅಡುಗೆ ಕೋಣೆಗಳನ್ನು ಸುಣ್ಣ-ಬಣ್ಣ ಮಾಡಿಸಿ ಸುಸ್ಥಿತಿಯಲ್ಲಿಟ್ಟು ಮಕ್ಕಳ ಬಳಕೆಗೆ ಒದಗಿಸುವುದು, ಹಾಗೂ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ, ಪೋಷಕರು, ಗ್ರಾಮಸ್ಥರ ಸಹಕಾರ ಪಡೆದು ಮೇ 31ರಂದು ಹಬ್ಬದ ವಾತಾವರಣದಲ್ಲಿ ಮಕ್ಕಳಿಗೆ ಸಿಹಿ ಊಟ ಮಾಡಿಸಿ ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮವನ್ನು ನಡೆಸಲು ಮುಖ್ಯಶಿಕ್ಷಕರು ಕ್ರಮವಹಿಸುವಂತೆ ತಿಳಿಸಿದ್ದಾರೆ.
ಜಕಣಾಚಾರ್ಯರಿಗೆ ಸಕರ್ಾರ ಸೂಕ್ತ ಸ್ಥಾನಮಾನ ನೀಡಲು ಒತ್ತಾಯ
ಚಿಕ್ಕನಾಯಕನಹಳ್ಳಿ,ಮೇ.26: ಬೇಲೂರಿನ ಕಲಾ ವೈಭವವನ್ನು ಕೆತ್ತಿ ಕನರ್ಾಟಕದ ಕೀತರ್ಿ ಗೌರವವನ್ನು ಹೆಚ್ಚಿಸಿದ ಜಕ್ಕಣ್ಣಾಚಾರ್ಯರಿಗೆ ಸಕರ್ಾರವು ವಿಶೇಷ ಸ್ಥಾನಮಾನ ನೀಡಿಲ್ಲ ಇದಕ್ಕಾಗಿ ಸಕರ್ಾರದ ಮುಂದೆ ಒತ್ತಡ ಹೇರುವುದಾಗಿ ಸುಜ್ಞಾನ ಪೀಠ ಮಹಾಸಂಸ್ಥಾನ ಮಠದ ಶಿವಸುಜ್ಞಾನಮೂತರ್ಿ ಸ್ವಾಮೀಜಿ ಹೇಳಿದರು.
ಪಟ್ಟಣದ ಹೊಯ್ಸಳರ ಕಾಲದ ಕಾಳಿಕಾಂಬ ದೇವಾಲಯದಲ್ಲಿನ ಕಾಳಿಕಾಂಬ, ಶ್ರೀ ಶಿವಲಿಂಗ ವಿಗ್ರಹಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕುಂಭಾಭಿಷೇಕ ನಂತರ ನಡೆದ ಧಾಮರ್ಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಂದು ಸಮಾಜದವರು ಜಾತಿ, ಮತದ ಭಾವನೆ ಬಿಟ್ಟು ಎಲ್ಲಾ ಧಾಮರ್ಿಕ ಸಮಾರಂಭಗಳಲ್ಲಿ ಪಾಲ್ಗೊಂಳ್ಳಬೇಕು ಮತ್ತು ವಿಶ್ವಕರ್ಮ ಸಮಾಜದವರು ಈ ಸಮಾರಂಭದ ಮೂಲಕ ಎಲ್ಲಾ ಧಾಮರ್ಿಕ ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸಮಾರಂಭದ ಐಕ್ಯತೆಯನ್ನು ಹೆಚ್ಚಿಸಿದ್ದಾರೆ ಎಂದರು.
ಕುಪ್ಪೂರು ಮಠದ ಡಾ.ಯತೀಶ್ವರ ಶಿವಚಾರ್ಯ ಸ್ವಾಮೀಜಿ ಮಾತನಾಡಿ ಎಲ್ಲಾ ಕೆಲಸಗಳನ್ನು ಸ್ವಾಮೀಜಿಗಳಿಂದ ಸಾಧ್ಯವಿಲ್ಲ ವಿಶ್ವಕರ್ಮ ಸಮಾಜದವರು ತಮ್ಮ ಸಾಮಥ್ರ್ಯ ಪ್ರದಶರ್ಿಸಲು ಕಲೆಯಿಂದ ಮತ್ತು ತಮ್ಮ ಬುದ್ದಿಶಕ್ತಿಯಿಂದ ತಮ್ಮ ಸಂಘಟನೆಯನ್ನು ಹೆಚ್ಚಿಸಬೇಕು ಎಂದ ಅವರು ಯಾವುದೇ ಧರ್ಮವನ್ನು ಜಾತಿಯಿಂದ ಪರಿಗಣಿಸದೆ ಅವರ ಪ್ರತಿಭೆಯಿಂದ ಗುರುತಿಸಬೇಕು ಎಂದರು.
ಸಮಾರಂಭದಲ್ಲಿ ಮಲ್ಲಿಕಾಜರ್ುನ ದೇಶಿಕೇಂದ್ರಸ್ವಾಮೀ, ಗುರುನಾಥಸ್ವಾಮೀ, ಸಿದ್ದರಾಮದೇಶೀಕೇಂದ್ರ ಸ್ವಾಮಿ, ಕರುಣಾಕರಸ್ವಾಮಿ, ಕೃಷ್ಣಯಾದವಾನಂದ ಸ್ವಾಮಿ, ಬಸವಮಾಚೀದೇವಸ್ವಾಮಿ, ಸದರ್ಾರ್ ಸೇವಾಲಾಲ್ ಸ್ವಾಮಿ, ಶಾಸಕ ಸಿ.ಬಿ.ಸುರೇಶ್ಬಾಬು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಮ್ಮದಾನಪ್ಪ, ಜಿಲ್ಲಾ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಚಲನಚಿತ್ರ ನಟ ಅರವಿಂದ್, ವಿಶ್ವಕರ್ಮ ಸಮಾಜ ಅಧ್ಯಕ್ಷ ಹೆಚ್.ಪಿ.ನಾಗರಾಜು ಉಪಸ್ಥಿತರಿದ್ದರು.
ಗ್ರಾ.ಪಂ.ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮೀಸಲಾತಿ ನಿರ್ಣಯ ಸಭೆ
ಚಿಕ್ಕನಾಯಕನಹಳ್ಳಿ,ಮೇ.27: ತಾಲೂಕಿನ 28 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಮೀಸಲಾತಿಗಳನ್ನು ನಿರ್ಣಯಿಸಲು ಇದೇ 29ರ ಶನಿವಾರ ಬೆಳಗ್ಗೆ 10.30ಕ್ಕೆ ಪಟ್ಟಣದ ಶ್ರೀಲಕ್ಷ್ಮಿನರಸಿಂಹ(ಎಸ್.ಎಲ್.ಎನ್) ಚಿತ್ರಮಂದಿರದಲ್ಲಿ ಎಲ್ಲಾ ನೂತನ ಸದಸ್ಯರ ಸಭೆ ಕರೆಯಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಈ ಸಭೆಗೆ ತಾಲೂಕಿನ ಗ್ರಾ.ಪಂಗಳಿಂದ ಒಟ್ಟು 484 ಚುನಾಯಿತ ಪ್ರತಿನಿಧಿಗಳು ಭಾಗವಹಿಸಲು ಅರ್ಹರಿದ್ದು, ಸಭೆಗೆ ಬರುವಾಗ ಸದಸ್ಯರು ತಮ್ಮ ಗುರುತಿನ ಕಾಡರ್್ ಕಡ್ಡಾಯವಾಗಿ ತರಲು ತಿಳಿಸಿರುವ ಅವರು, ಈ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಹಾಗೂ ಅಪರ ಜಿಲ್ಲಾಧಿಕಾರಿ ದೊಡ್ಡಪ್ಪ ಭಾಗವಹಿಸಲಿದ್ದಾರೆ. ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಮೀಸಲಾತಿಯನ್ನು ಲಾಟರಿ ಮೂಲಕ ನಿರ್ಧರಿಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಭಿವೃದ್ದಿಗೆ ಎರಡು ಲಕ್ಷ: ಡಾ.ಹುಲಿನಾಯ್ಕರ್
ಚಿಕ್ಕನಾಯಕನಹಳ್ಳಿ,ಮೇ.27: ಪಟ್ಟಣ ಶ್ರೀ ರೇವಣಸಿದ್ದೇಶ್ವರ ಕಂಬಳಿ ಸೊಸೈಟಿಯ ಅಭಿವೃದ್ದಿಗೆ ತಮ್ಮ ಅಭಿವೃದ್ದಿ ನಿಧಿಯಿಂದ ಎರಡು ಲಕ್ಷ ರೂಗಳ ಅನುದಾನ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್ ತಿಳಿಸಿದರು.
ಪಟ್ಟಣದ ಎಸ್.ಆರ್.ಎಸ್. ಕಂಬಳಿ ಸೊಸೈಟಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ ಅವರು, ಮುಂದಿನ ಬಾರಿಯ ಅನುದಾನದಲ್ಲಿ ಇನ್ನೂ ಹೆಚ್ಚಿನ ಹಣವನ್ನು ಈ ಸೊಸೈಟಿಗೆ ವಿನಿಯೋಗಿಸಲು ಉತ್ಸುಕರಾಗಿರುವುದಾಗಿ ತಿಳಿಸಿದರು, ಈ ಸೊಸೈಟಿಯ ಅಭಿವೃದ್ದಿಗೆ ಸಕರ್ಾರದ ಹಂತದಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಕಾಲ ಕಾಲಕ್ಕೆ ತಿಳಿಸುವಂತೆ ಸೂಚಿಸಿದರಲ್ಲದೆ, ರಾಜ್ಯದಲ್ಲಿ ಕಂಬಳಿ ಸೊಸೈಟಿಗಳ ಅಭಿವೃದ್ದಿಗೆ ಸಕರ್ಾರ ಕೈಗೊಂಡಿರುವ ಯೋಜನೆಗಳ ಬಗ್ಗೆಯೂ ಪರಿಷತ್ನಲ್ಲಿ ಪ್ರಶ್ನೆ ಮಾಡುವುದಾಗಿ ಹುಲಿನಾಯ್ಕರ್ ತಿಳಿಸಿದರು.
ಸೊಸೈಟಿಯಲ್ಲಿರುವ ವಿವಿಧ ರೀತಿಯ ಕಂಬಳಿಗಳನ್ನು ಹಾಗೂ ಮಗ್ಗಗಳನ್ನು ವೀಕ್ಷಿಸಿದ ಅವರು, ಇಂದಿನ ಸಮಾಜಕ್ಕೆ ಹೊಂದಿಕೆಯಾಗುವ ರೂಪದಲ್ಲಿ ನವೀನ ರೀತಿಯಲ್ಲಿ ಕಂಬಳಿ ಉತ್ಪಾದಿಸಲು ತಿಳಿಸಿದರಲ್ಲದೆ, ಉತ್ಪಾದನೆಯನ್ನು ತಾಂತ್ರಿಕತೆಗೊಳಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಯೋಜನೆ ರೂಪಿಸುವಂತೆ ಸ್ಥಳದಲ್ಲಿದ್ದ ಕಂಬಳಿ ಸೊಸೈಟಿ ಕಾರ್ಯದಶರ್ಿಗೆ ಸೂಚಿಸಿದರು.
ಉಣ್ಣೆ ರವಾನೆಯ ಬಗ್ಗೆ ವಿವರ ಪಡೆದರಲ್ಲದೆ, ಉತ್ಪಾದನೆಗೊಂಡ ಕಂಬಳಿಗಳ ಬೆಲೆಯ ಬಗ್ಗೆ, ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಹಾಗೂ ನೇಕಾರರ ಆಥರ್ಿಕತೆಯ ಬಗ್ಗೆಯೂ ಸಂಪೂರ್ಣ ವಿವರ ಪಡೆದರು.
ಈ ಸಂದರ್ಭದಲ್ಲಿ ಎಸ್.ಆರ್.ಎಸ್. ಕಂಬಳಿ ಸೊಸೈಟಿಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ಸಿ.ಎಂ.ಬೀರಲಿಂಗಯ್ಯ,ಸಿ.ಎಚ್.ಅಳವೀರಯ್ಯ, ಆರ್.ಜಿ.ಗಂಗಾಧರ್, ವಿಜಯಕುಮಾರ್, ಗೋವಿಂದಯ್ಯ, ಕಾರ್ಯದಶರ್ಿ ಸಿ.ಎಚ್.ಗಂಗಾಧರ್, ಪುರಸಭಾ ಸದಸ್ಯ ದೊರೆಮುದ್ದಯ್ಯ, ಸಿ.ಟಿ.ಗುರುಮೂತರ್ಿ, ಸಿ.ಎನ್.ಭಾನುಕಿರಣ್, ಡಾ.ರಘುಪತಿ, ಅಳವೀರಯ್ಯ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪಟ್ಟಣದ ಸಕರ್ಾರಿ ಶಾಲೆಗಳಿಗೆ ತಟ್ಟೆ ಲೋಟ ವಿತರಣೆ
ಚಿಕ್ಕನಾಯಕನಹಳ್ಳಿ,ಮೇ.27: ಬೆಂಗಳೂರಿನಲ್ಲಿರುವ ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಬಳಗದ ವತಿಯಿಂದ ಪಟ್ಟಣದ ಎಲ್ಲಾ ಸಕರ್ಾರಿ ಶಾಲೆಗಳಿಗೆ ತಟ್ಟೆ ಲೋಟ ವಿತರಿಸಲಾಗುವುದು ಎಂದು ಗೆಳೆಯರ ಬಳಗದ ಅಧ್ಯಕ್ಷ ಸಿ.ಎಚ್. ಹೊಸೂಪ್ಪ ಚೌಡಿಕೆ ತಿಳಿಸಿದ್ದಾರೆ.
ತಟ್ಟೆ ಲೋಟ ವಿತರಣಾ ಸಮಾರಂಭವನ್ನು ಜೂನ್ 7ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಕನಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಈ ವರ್ಷ ಒಂದುವರೆ ಸಾವಿರ ತಟ್ಟೆ ಲೋಟಗಳನ್ನು ವಿತರಿಸಲು ನಮ್ಮ ಗೆಳೆಯ ಬಳಗ ನಿರ್ಧರಿಸಿದೆ ಎಂದರಲ್ಲದೆ, ಸಕರ್ಾರಿ ಶಾಲೆಗಳಲ್ಲಿ ಓದಿ ಉತ್ತಮ ಜೀವನ ಮಾರ್ಗಗಳನ್ನು ಕಂಡುಕೊಂಡಿರುವ ನಾವುಗಳು, ಬೆಂಗಳೂರಿಗಷ್ಟೇ ಸೀಮಿತವಾಗದೆ, ನಮ್ಮ ಹುಟ್ಟೂರಿನ ಸಕರ್ಾರಿ ಶಾಲೆಗಳಿಗೆ ನಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂಬ ಉದ್ದೇಶ ಹಾಗೂ ನಾವು ಓದಿದ ಶಾಲೆಯ ಋಣವನ್ನು ಕಿಂಚಿತ್ತಾದರೂ ಕಡಿಮೆ ಮಾಡಿಕೊಳ್ಳುವ ಹಂಬಲದಿಂದ ನಮ್ಮ ಬಳಗ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ ಎಂದರು.
ಪಟ್ಟಣದ ಶಾಲೆಗಳ ಜೊತೆಗೆ ಮುದ್ದೇನಹಳ್ಳಿ, ತೀರ್ಥಪುರ ಹಾಗೂ ಜೆ.ಸಿ.ಪುರದಲ್ಲಿರುವ ಸಕರ್ಾರಿ ಎಚ್.ಪಿ.ಎಸ್ ಶಾಲೆಗಳಿಗೂ ತಟ್ಟೆ ಲೋಟ ವಿತರಿಸಲಾಗುವುದು ಎಂದು ಹೊಸರಪ್ಪ ತಿಳಿಸಿದ್ದಾರೆ.

Monday, May 24, 2010

ಚಿ.ನಾ.ಹಳ್ಳಿ ತಾಲೂಕಿನ 28 ಗ್ರಾ.ಪಂ.ಗಳ 484 ಸ್ಥಾನಗಳ ವಿಜೇತರ ಪಟ್ಟಿ
ಚಿಕ್ಕನಾಯಕನಹಳ್ಳಿ,ಮೇ.19: ತಾಲೂಕಿನ 28 ಗ್ರಾ.ಪಂ.ಗಳ 484 ಸದಸ್ಯರಲ್ಲಿ ಕಂದಿಕೆರೆಯ ರಂಗನಾಥ್ ಎಸ್.ಜಿ. 696 ಮತಗಳನ್ನು ಪಡೆದು ತಾಲೂಕಿನಲ್ಲೇ ಅತಿಹೆಚ್ಚು ಮತ ಪಡೆದ ಅಬ್ಯಾಥರ್ಿ ಎನಸಿಕೊಂಡಿದ್ದರೆ, ಅಂಬಾರ ಪುರದ ಆರ್.ಜ್ಯೋತಿ ಹಾಗೂ ಮಾದೀಹಳ್ಳಿ ಪರಿಶಿಷ್ಟ ಪಂಗಡದ ಮಹಿಳಾ ಮೀಸಲು ಅಬ್ಯಾಥರ್ಿ ಇವರಿಬ್ಬರೂ 86 ಮತಗಳನ್ನು ಪಡೆದು ಅತಿ ಕಡಿಮೆ ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ತಾಲೂಕಿನ 28 ಗ್ರಾಮ ಪಂಚಾಯಿತಿಯ 484 ಸ್ಥಾನಗಳಿಗೆ ಜಯಶೀಲರಾದವವರ ವಿವರ ಇಂತಿದೆ. ದಸೂಡಿ ಗ್ರಾ.ಪಂ.: ಒಟ್ಟು 18 ಸ್ಥಾನಗಳಿದ್ದು ಇದರಲ್ಲಿ ದಸೂಡಿ ಬ್ಲಾಕ್ ಒಂದರಲ್ಲಿ ನಾಲ್ಕು ಸ್ಥಾನಗಳಲ್ಲಿ ರಾಮನಾಯ್ಕ(315), ರೇಣುಕಮ್ಮ (359), ಹನುಮೇಶ್ ಡಿ.ಆರ್.(434), ಮಮತ ಸಿ.ಆರ್.(285) ದಸೂಡಿ ಬ್ಲಾಕ್ ಎರಡರಲ್ಲಿ ಮೂರು ಸ್ಥಾನಗಳಿದ್ದು ಇದರಲ್ಲಿ ಕರಿಯಮ್ಮ( ಅವಿರೋಧ ಆಯ್ಕೆ), ರಮೇಶ್(235), ಕುಮಾರನಾಯ್ಕ (204), ದಸೂಡಿ ಬ್ಲಾಕ್ ಮೂರರಲ್ಲಿ ಎರಡು ಸ್ಥಾನಗಳಲ್ಲಿ ಮಂಜಿಬಾಯಿ(ಅವಿರೋಧ ಆಯ್ಕೆ) ಶಿವಣ್ಣ.ಕೆ.(147), ಮರೆನಡುವಿನಲ್ಲಿ ನಾಲ್ಕು ಸ್ಥಾನಗಳಿದ್ದು ರಮೇಶ್.ಜಿ.(307), ರಾಮಣ್ಣ(211), ಶಾಂತಮ್ಮ(326), ಪ್ರಕಾಶ್(269) ದಬ್ಬಗುಂಟೆಯಲ್ಲಿ ಎರಡು ಬ್ಲಾಕ್ಗಳಿದ್ದು ಒಂದರಲ್ಲಿ ಹೆಂಜಯ್ಯ(414), ಕಾಂತರಾಜು(431), ಯಶೋಧಮ್ಮ ಡಿ.ಎಸ್ (429) ಎರಡರಲ್ಲಿ ರಾಜಮ್ಮ(323), ರವಿಕುಮಾರ್(328). ಹೊಯ್ಸಳಕಟ್ಟೆ ಗ್ರಾ.ಪಂ : ಒಟ್ಟು 20ಸ್ಥಾನಗಳಿದ್ದು ಇದರಲ್ಲಿ ಹೊಯ್ಸಳಕಟ್ಟೆ ಬ್ಲಾಕ್ ಒಂದರ ಮೂರು ಸ್ಥಾನಗಳಿಗೆ ಪಿ,ಹೆಚ್.ಉಮಾದೇವಿ(326), ಚಿದಾನಂದಮೂತರ್ಿ(260), ಮಲ್ಲೇಶ್(388), ಬ್ಲಾಕ್ ಎರಡರಲ್ಲಿ ಮಂಜುನಾಥ್(146), ಚಿತ್ತಮ್ಮ(168), ಲಕ್ಕೇನಹಳ್ಳಿಯಲ್ಲಿ ಈರಮ್ಮ(290), ಭಾಗ್ಯಮ್ಮ(249), ಬೆಳ್ಳಾರದ ಬ್ಲಾಕ್ ಒಂದರಲ್ಲಿ ಪುಟ್ಟಮ್ಮ(371), ಬಿ.ಆರ್.ವೆಂಕಟೇಶ್(399), ಮೀನಾಕ್ಷಮ್ಮ(314), ಬೆಳ್ಳಾರದ ಬ್ಲಾಕ್ ಎರಡರಲ್ಲಿ ಜಯರಾಮಯ್ಯ(247), ಹರೀಶ್.ಹೆಚ್.ವಿ(206), ಕರಿಯಮ್ಮ (263), ಅಂಬಾರಪುರದಲ್ಲಿ ಆರ್.ಜ್ಯೋತಿ (86), ಕಲ್ಲೇನಹಳ್ಳಿಯಲ್ಲಿ ಮಂಜುನಾಥ್ (ಅವಿರೋಧ ಆಯ್ಕೆ), ಎನ್.ದೇವರಾಜಮ್ಮ(326), ದೇವರಾಜು(308), ನೂಲೇನೂರಿನಲ್ಲಿ ಎನ್.ಕೆ.ಶಿವಣ್ಣ (534), ಈರಣ್ಣ (ಅವಿರೋಧಆಯ್ಕೆ), ಎನ್.ಟಿ.ಸುಧಾಕರ (610), ಗಾಣದಾಳು ಗ್ರಾ.ಪಂ: ಒಟ್ಟು 18 ಸ್ಥಾನಗಳಿದ್ದು ಇದರಲ್ಲಿ ಗಾಣದಾಳುವಿನ ಜಯರಾಮಯ್ಯ(253), ನೇತ್ರಾವತಿ(354), ಅಮೀದ್ಖಾನ್(397), ಸೋಮನಹಳ್ಳಿಯಲ್ಲಿ ಗುಂಡಯ್ಯ(280), ಕಲ್ಪನಾಬಾಯಿ(265), ಲಕ್ಷ್ಮೀದೇವಿ(246), ಗುರುವಾಪುರದಲ್ಲಿ ಶ್ರೀನಿವಾಸ ಜಿ.ಎಸ್(201), ನೇತ್ರಾವತಿ ಎಂ(199), ದುರ್ಗಮ್ಮ(216), ಮೇಲನಹಳ್ಳಿಯಲ್ಲಿ ದುರ್ಗಮ್ಮ(216), ಶಿವಣ್ಣ ಎಂ.ಆರ್(430), ಗೀತಾ ಎಂ.ಟಿ(353), ಯಗಚಿಹಳ್ಳಿಯಲ್ಲಿ ಶೇಕ್ಮೆಹಬೂಬ್(297), ತಾಜಾ ಉನ್ನಿಸಾ(403), ಶಿವಮೂತರ್ಿ ಕೆ.ವೈ(422), ಕಂಪನಹಳ್ಳಿಯಲ್ಲಿ ಶಿವಕುಮಾರಯ್ಯ ಸಿ.(182), ಜಯಾಬಾಯಿ(170), ಕುರಿಹಟ್ಟಿಯಲ್ಲಿ ಶಿವಣ್ಣ(256), ಚಂದ್ರಯ್ಯ ಕೆ.ವಿ(164). ಕೆಂಕೆರೆ ಗ್ರಾ.ಪಂ :ಒಟ್ಟು 18 ಸ್ಥಾನಗಳಿದ್ದು ಅದರಲಿ ಕೆಂಕೆರೆ ಬ್ಲಾಕ್ ಒಂದರಲ್ಲಿ ಪೂಣರ್ಿಮಾ(284), ನವೀನ್ ಕೆ.ಎಂ(515), ಬಸವರಾಜು. ಆರ್(491), ರೇಣುಕಾ.ಎಂ.ಟಿ(352), ಕೆಂಕೆರೆ ಬ್ಲಾಕ್ 2ರಲ್ಲಿ ಕುಮಾರಯ್ಯ.ಕೆ(240), ಚಂದ್ರಕಲಾ(329), ಗೌಡ.ಯು.ಸಿ(553), ರಾಧಮಣಿ.ಎಸ್.ಎಂ(361), ಕೆಂಕೆರೆ ಬ್ಲಾಕ್ 3ರಲ್ಲಿ ಬಸವಯ್ಯ(293), ದನಂಜಯಮೂತರ್ಿ(547), ರಾಮಲಿಂಗಪ್ಪ(435), ಶಾರದಮ್ಮ(418), ಗೌಡಯ್ಯ.ಎನ್(215), ಚೇತನ್ಕುಮಾರ್(270), ಗೌಡಗೆರೆಯಲ್ಲಿ ನೇತ್ರಾವತಿ(245), ದೊಡ್ಡಯ್ಯ,ಕೆ.ಸಿ.(335), ಪ್ರೇಮಕುಮಾರಿ(429), ಮಂಜುನಾಥ.ಕೆ.ಎಂ(554). ಹುಳಿಯಾರು ಗ್ರಾ.ಪಂ: ಒಟ್ಟು 33 ಸ್ಥಾನಗಳಿದ್ದು ಹುಳಿಯಾರು ಬ್ಲಾಕ್ 1ರಲ್ಲಿ ಇ.ದಾಕ್ಷಾಯಣಮ್ಮ(135), ಸಿದ್ದಗಂಗಮ್ಮ.ಡಿ(111), ಬ್ಲಾಕ್ 2ರಲ್ಲಿ ಸೈಯದ್ ಅನ್ಸ್ರ್ ಆಲಿ (234), ಅಬೀಬ್ ಉನ್ನಿಸಾ(119), ಬ್ಲಾಕ್ 3ರಲ್ಲಿ ಹೆಚ್.ಬಿ.ಬೈರೇಶ್(201), ಹೆಚ್.ವಿ.ಶ್ರೀನಿವಾಸ್(185), ಬ್ಲಾಕ್ 4ರಲ್ಲಿ ಪಹರ್ಾನ(95), ಹೆಚ್.ಆರ್.ರಂಗನಾಥ್(151), ಬ್ಲಾಕ್ 5ರಲ್ಲಿ ಕಾಳಮ್ಮ(252), ಅಶೋಕ್.ಎಂ(394), ಎಂ.ಸೈಯಿದ್ ಜಹೀರ್(412), ಹೆಚ್.ಎಂ.ಶಿವಲಿಂಗಮ್ಮ(241), ಬ್ಲಾಕ್ 6ರಲ್ಲಿ ಹೆಚ್.ಎನ್.ರಾಘವೇಂದ್ರ(125), ವೆಂಕಟಮ್ಮ(122), ಬ್ಲಾಕ್ 7ರಲ್ಲಿ ಹೆಚ್.ಶಿವಕುಮಾರ್(236), ಹೇಮಂತಕುಮಾರ್(190), ಬ್ಲಾಕ್ 8ರಲ್ಲಿ ಪುಟ್ಟಮ್ಮ(241), ಎಸ್.ಪುಟ್ಟರಾಜು(348), ಕೆ.ಗಂಗಾಧರರಾವ್(190), ಬ್ಲಾಕ್ 9ರಲ್ಲಿ ಹಸೀನ್ಬಾನು(ನಾವಬ್ಬೇಗ್)(196), ಷಫಿಉಲ್ಲಾ(316), ಹಸೀನಾಬಾನು(277), ಬ್ಲಾಕ್10ರಲ್ಲಿ ಎಸ್.ರೇವಣ್ಣ(356), ಅಹಮದ್ಖಾನ್(257), ಸುವರ್ಣಮ್ಮ(253), ಬ್ಲಾಕ್11ರಲ್ಲಿ ಚಂದ್ರಕಲಾ(187), ಬಾಲರಾಜು(212), ಬ್ಲಾಕ್12ರಲ್ಲಿ ಶಿವಣ್ಣ(341), ಸಿ.ಆರ್.ಮಂಜುಳ(303), ಬ್ಲಾಕ್ 13ರಲ್ಲಿ ಸೈಯದ್ಜಬೀಉಲ್ಲಾ(353), ಸಬ್ರೆಆಲಂ(362), ವೈ.ಎ.ಅಹಮದ್(302), ಅಬೀದ್ಉನ್ನಿಸಾ(222). ಯಳನಡು ಗ್ರಾ.ಪಂ : ಒಟ್ಟು 17 ಸ್ಥಾನಗಳಿದ್ದು ಯಳನಡು ಬ್ಲಾಕ್1ರಲ್ಲಿ ಅನ್ನಪೂರ್ಣ(141), ಜಯಮ್ಮ.ವೈ.ಎಚ್(151), ಗುರುಪ್ರಸಾದ್.ವೈ.ಕೆ.(227), ಬ್ಲಾಕ್2ರಲ್ಲಿ ರಾಜಣ್ಣ.ವೈ.ಸಿ(355), ಸಿದ್ದರಾಮಯ್ಯ.ವೈ.ಎಸ್(406), ಸುರೇಶ್ ವೈ.ಬಿ(341), ಲಕ್ಷ್ಮೀದೇವಿ(328), ಸಿಂಗಾಪುರದಲ್ಲಿ ಶಿವಕುಮಾರ(329), ಬಸವರಾಜು(293), ತಮ್ಮಡಿಹಳ್ಳಿ ಬ್ಲಾಕ್1ರಲ್ಲಿ ಚನ್ನಭಸವಯ್ಯ.ಎಸ್.(273), ಯಶೋಧಮ್ಮ(272), ಉಮೇಶ್ ಟಿ.ಎಸ್.(364), ರೇಣುಕಾಬಾಯಿ(252), ತಮ್ಮಡಿಹಳ್ಳಿ ಬ್ಲಾಕ್2ರಲ್ಲಿ ಗಂಗಮ್ಮ(309), ರಮೇಶ್ಕುಮಾರ್.ಕೆ(510), ಕಾಂತಮ್ಮ.ಕೆ.(356), ಕೆರೆಸುಗೊಂಡನಹಳ್ಳಿಯಲ್ಲಿ ರಾಮಚಂದ್ರಯ್ಯ ಡಿ.(127). ಕೋರಗೆರೆ ಗ್ರಾ.ಪಂ : ಒಟ್ಟು 15 ಸ್ಥಾನಗಳಿದ್ದು ಕೋರಗೆರೆ ಬ್ಲಾಕ್1ರಲ್ಲಿ ಬೋರಯ್ಯ(192), ರಾಮಚಂದ್ರಯ್ಯ ಕೆ.ಬಿ(289), ಬ್ಲಾಕ್2ರಲ್ಲಿಕಾಂತಯ್ಯ.ಆರ್.(273), ಸುಮಿತ್ರ ಎಸ್(240), ಭಟ್ಟರಹಳ್ಳಿಯಲ್ಲಿ ಸಿದ್ದರಾಮಕ್ಕ(ಅವಿರೋಧ ಆಯ್ಕೆ0, ಯತೀಶ್,ಬಿ.ಎಸ್(395), ಭಾಗ್ಯಮ್ಮ(402), ಮೋಟಿಹಳ್ಳಿ ಬ್ಲಾಕ್1ರಲ್ಲಿ ಚಂದ್ರಬಾಯಿ(161), ಬಸವರಾಜು.ಎಂ.ವಿ.(269), ಚಂದ್ರಮ್ಮ(210), ಬ್ಲಾಕ್2ರಲ್ಲಿ ರಂಗಾಬೋವಿ(92), ಬರಗೀಹಳ್ಳಿಯಲ್ಲಿ ಶಿವಣ್ಣ(407), ರಂಗಮ್ಮ(382), ಫರ್ಕುಂದ(465), ಉಬೇದ್ಉಲ್ಲಾ(457). ದೊಡ್ಡಎಣ್ಣೆಗೆರೆ ಗ್ರಾ.ಪಂ : ಒಟ್ಟು 21 ಸ್ಥಾನಗಳಿದ್ದು ದೊಡ್ಡಎಣ್ಣೆಗೆರೆ ಬ್ಲಾಕ್1ರಲ್ಲಿ ನಾಗಪ್ಪ(451), ಕಲ್ಯಾಣಮ್ಮ(530), ಉಮಾದೇವಿ(328), ಬ್ಲಾಕ್ 2ರಲ್ಲಿ ಕರಿಯಮ್ಮ(137), ಬಸವರಾಜು(282), ಬ್ಲಾಕ್3ರಲ್ಲಿ ಚನ್ನಬಸಮ್ಮ(223), ಬಿ.ಎಂ.ಪುಷ್ಪಾವತಿ(292), ಚಿಕ್ಕೆಣ್ಣೆಗೆರೆ ಬ್ಲಾಕ್1ರಲ್ಲಿ ಗಂಗಮ್ಮ(246), ಕರಿಯಪ್ಪ(289), ಮಲ್ಲಯ್ಯ(324), ಬ್ಲಾಕ್2ರಲ್ಲಿ ಸಿದ್ದಗಂಗಮ್ಮ(161), ಚಂದ್ರಪ್ಪ(185), ನಡುವನಹಳ್ಳಿಯಲ್ಲಿ ಲಕ್ಷ್ಮೀದೇವಿ(209), ಗೌರಮ್ಮ(213), ಎನ್.ಜಿ.ಹಾಲಪ್ಪ(240) ಬೊಮ್ಮೇನಹಳ್ಳಿಯಲ್ಲಿ ಬಿ.ಜೆ.ಸುಗಂಧರಾಜು(199), ಶಿವಮ್ಮ(116) ದೊಡ್ಡಹುಲ್ಲೇನಹಳ್ಳಿ ಮಂಜನಾಯ್ಕ(344), ದೊಡ್ಡಯ್ಯ(451), ನಾಗರಾಜು(388), ಬನ್ನೀಕೆರೆಯ ಇಂದ್ರಮ್ಮ(151). ಹಂದನಕೆರೆ ಗ್ರಾ.ಪಂ ;ಒಟ್ಟು 19 ಸ್ಥಾನಗಳಿದ್ದು ಹಂದನಕೆರೆಯ ಬ್ಲಾಕ್1ರಲ್ಲಿ ಶಮೀಮುನ್ನಿಸಾ (244), ದೊರೆಸ್ವಾಂಮಿ.ಎಂ(424), ನಾಗವೇಣಿ(244), ಬ್ಲಾಕ್2ರಲ್ಲಿ ಗಿರೀಶ್.ಹೆಚ್.ಕೆ(197), ರಂಗನಾಥ.ಕೆ(396), ಮಹಾಲಕ್ಷ್ಮೀ(304), ಕೆಂಚಮ್ಮ(365), ಬ್ಲಾಕ್ 3ರಲ್ಲಿ ಪುಷ್ಪಾವತಿ(196), ಚಂದ್ರಪ್ಪ(260), ಸಣ್ಣರಂಗಪ್ಪ(274), ಜಯಲಕ್ಷಮ್ಮ(289), ರಾಮಘಟ್ಟದಲ್ಲಿ ಬಸವರಾಜು.ಪಿ(359, ಓಂಕಾರಪ್ಪ(240), ನೀಲಕಂಠಪ್ಪ.ಆರ್.ಜಿ(361), ಪುರದಕಟ್ಟೆಯಲ್ಲಿ( ರವಿಕುಮಾರ.ಪಿ.ಎಸ್(167), ಹುಚ್ಚನಹಳ್ಳಿಯಲ್ಲಿ(ಹೇಮಲತಾ.ಪಿ.ಜಿ(122), ಕೆಂಗಲಾಪುರದಲ್ಲಿ ಗೌರೀಶ್(400), ಮಂಜುಳ(ಅವಿರೋಧ ಆಯ್ಕೆ), ರಘುನಾಥ.ಇ(378). ಚೌಳಕಟ್ಟೆ ಗ್ರಾ.ಪಂ: ಒಟ್ಟು 16 ಸ್ಥಾನಗಳಿದ್ದು ಅದರಲ್ಲಿ ಚೌಳಕಟ್ಟೆಯಲ್ಲಿ ಬಸವರಾಜು(359), ಆರ್.ರಂಗಯ್ಯ(445), ಮಂಜುಳ(378), ಸಿ.ಎಂ.ಶಶಿಕಲಾ(465), ಸೋರಲಮಾವುನಲ್ಲಿ ಎಸ್.ನೇತ್ರಾವತಿ, ಎಸ್.ಟಿ.ಬಸವರಾಜು, ಸಾವಿತ್ರಮ್ಮ, ಸಿದ್ದೇಗೌಡ(ಅವಿರೋಧವಾಗಿ ಆಯ್ಕೆಯಾಗಿದ್ದಾರೆ), ಹೊನ್ನಶೆಟ್ಟಿಹಳ್ಳಿಯಲ್ಲಿ ಪಾಲಾಕ್ಷಮ್ಮ(233), ಎಸ್.ಲೋಕೇಶ್(277), ಲಕ್ಷ್ಮೀಪುರದಲ್ಲಿ ಶಂಕರಯ್ಯ(380), ಎಲ್.ಬಿ.ಪರಮೇಶ್(500), ಸೋಮಶೇಖರಯ್ಯ(489), ಮಂಜುಳ(456), ಹರೇನಹಳ್ಳಿಯಲ್ಲಿ ಹೆಚ್.ಜಿ.ಧರ್ಮಕುಮಾರ್(233), ಹೆಚ್.ಗುಲ್ಷರ್ಖಾನಂ(210). ತಿಮ್ಲಾಪುರ ಗ್ರಾ.ಪಂ : ಒಟ್ಟು 18 ಸ್ಥಾನಗಳಿದ್ದು ಅದರಲ್ಲಿ ತಿಮ್ಲಾಪುರದ ಬ್ಲಾಕ್ 1ರಲ್ಲಿ ರತ್ನಮ್ಮ(227), ತಿಮ್ಮಯ್ಯ ಟಿ.ಎಚ್(215), ಬ್ಲಾಕ್2ರಲ್ಲಿ (ಬಸವರಾಜು ಹೆಚ್.ಹೆಚ್(362), ಸುರೇಶ್.ಡಿ(335), ಭಾಗ್ಯಮ್ಮ(248), ಬ್ಲಾಕ್ 3ರಲ್ಲಿ ಸುಗಂಧರಾಜು.ಹೆಚ್.ಎಂ.267), ರಾಜಮ್ಮ. ಎಸ್.ಕೆ(240), ತೊರೆಸೂರಗೊಂಡನಹಳ್ಳಿಯ ಗೌರಮ್ಮ(201), ಪ್ರಕಾಶ್.ಟಿ.ಕೆ(217), ಶಿಗೇಬಾಗಿ ಬ್ಲಾಕ್1ರಲ್ಲಿ(213), ರೇವಣ್ಣ(334), ಗಂಗಮ್ಮ(329), ಬ್ಲಾಕ್2ರಲ್ಲಿ ರಾಜಮ್ಮ(159), ಸುಂದರೇಶ್.ಟಿ.ಕೆ(241), ನಂದಿಹಳ್ಳಿಯ ಕುಮಾರಸ್ವಾಮಿ.ಎನ್.ಪಿ(426), ನಂದೀಶಯ್ಯ ಎನ್.ಬಿ(183). ಬೋರಲಿಂಗಯ್ಯ(469), ರೇಣುಕಮ್ಮ(296). ದೊಡ್ಡಬಿದರೆ ಗ್ರಾ.ಪಂ :ಒಟ್ಟು ಸ್ಥಾನಗಳು 18 ಅದರಲ್ಲಿ ದೊಡ್ಡಬಿದರೆಯ ರಾಮನಾಯ್ಕ(340), ಬಿ.ಎಸ್.ಶಶಿಕಲಾ(257), ಡಿ.ಪಿ.ಅರುಣ್ಕುಮಾರ್(381), ಡಿ.ಜಿ.ಕುಮಾರ್(372), ಚಿಕ್ಕಬಿದರೆಯ ಬದ್ಯಾನಾಯ್ಕ(324), ಶಾಂತಕುಮಾರ ಸಿ.ಜೆ(358), ವಿಶ್ವೇಶ್ವರಯ್ಯ(420), ಕಲ್ಲಹಳ್ಳಿಯ ಆರ್.ಕರಿಯಪ್ಪ(97), ಬೈರಾಪುರದ ಕಾಂತಯ್ಯ ಎಸ್.(194), ಕ್ಯಾತಲಿಂಗಮ್ಮ(216), ಅವಳಗೆರೆಯ ಇಂದಿರಮ್ಮ(199), ಮಲ್ಲಿಕಾಜರ್ುನಯ್ಯ(174), ಬಳ್ಳಕಟ್ಟೆಯ ಕರಿಯಾನಾಯ್ಕ(298), ಸೌಬಾಗ್ಯ(359), ಅಪ್ಸನಾಖಾನಂ(315), ಪೋಚುಕಟ್ಟೆಯ ಜೆ.ಜ್ಯೋತಿಲಕ್ಷ್ಮೀ(289), ಪಿ.ಎನ್.ಗಂಗಾಧರಯ್ಯ((342), ರಾಜಮ್ಮ(340). ಬರಕನಾಳು ಗ್ರಾ.ಪಂ : ಬರಕನಾಳುವಿನ ರಾಧಮ್ಮ(174), ವಿಶ್ವನಾಥ ಹೆಚ್.ಎಂ(266), ಶೊಡ್;ಲಟ್ಟೆಉ ರಾಮಯ್ಯ.ಎಸ್(217), ಯಶೋಧಮ್ಮ(224), ಹಂದಿನಗಡುವಿನ ಗಂಗಣ್ಣ((297), ಭೂತಯ್ಯ(379), ಕಲಾವತಿ.ಹೆಚ್.ಎನ್.(233), ಗೀತಾ(472), ಸಂಗೇನಹಳ್ಳಿಯ ಮಂಜುಳಾದೇವಿ ಎಸ್.ಆರ್(203), ಬೈರಲಿಂಗಯ್ಯ ಎಸ್.ಬಿ(168), ದೊಡ್ಡಬೆಳವಾಡಿಯ ರಾಜಮ್ಮ(235), ಶ್ರೀನಿವಾಸ(238), ನಾಗರಾಜು(264), ರಮೇಶ್.ಡಿ.ಎಚ್(440), ಎರೇಹಳ್ಳಿಯ ನಿಂಗಮ್ಮ(337), ರಾಜಮ್ಮ.ಬಿ.ಎಂ(271). ತಿಮ್ಮನಹಳ್ಳಿ ಗ್ರಾ.ಪಂ.: ಒಟ್ಟು 19ಸ್ಥಾನಗಳಿದ್ದು ಅದರಲ್ಲಿ ತಿಮ್ಮನಹಳ್ಳಿ ಬ್ಲಾಕ್1ರ ರೇಣುಕಾನಂದ ಟಿ.ಎಸ್.(229), ಗಂಗಣ್ಣ.ಟಿ.ಎಸ್.(223), ಪುಟ್ಟಮ್ಮ(172), ಬ್ಲಾಕ್2ರಲ್ಲಿ ರಾಘವೇಂದ್ರ ಟಿ.ಜೆ(245), ರವೀಂದ್ರ ಟಿ.ಆರ್(316), ಬ್ಲಾಕ್ 3ರಲ್ಲಿ(ಟಿ.ಕೆ.ಸಿದ್ದರಾಮಯ್ಯ(160), ಕೃಷ್ಣಯ್ಯ.ಕೆ(209), ಶಾರದಮ್ಮ ಎ.ಎನ್(199), ಬ್ಲಾಕ್4ರಲ್ಲಿ ಗೋಪಾಲಕೃಷ್ಣ ಟಿ.ಎಸ್(255), ಉಮಾದೇವಿ.ಕೆ(216), ಬ್ಲಾಕ್5ರಲ್ಲಿ ಲಕ್ಷ್ಮೀದೇವಮ್ಮ(180), ಅಮೀರ್ಜಾನ್(152), ಬಡಕೆಗುಡ್ಲು ಬ್ಲಾಕ್1ರಲ್ಲಿ ಭಾರತಿ(372), ಹುಸೇನ್ಸಾಬ್(294), ಬ್ಲಾಕ್2ರಲ್ಲಿ ಪುಟ್ಟಮ್ಮ(181), ಅನುಸೂಯಮ್ಮ(202), ಗೋವಿಂದರಾಜು(232), ಮೈಲುಕಬ್ಬೆಯ ಕರಿಯಪ್ಪ(133), ಹನುಮಂತಪ್ಪ(195). ರಾಮನಹಳ್ಳಿ ಗ್ರಾ.ಪಂ.; ಒಟ್ಟು14 ಸ್ಥಾನಗಳಿದ್ದು ಅದರಲ್ಲಿ ರಾಮನಹಳ್ಳಿಯ ರೇಣುಕಮ್ಮ(379), ಬಸವರಾಜು(229), ರತ್ಮಮ್ಮ(263), ಸಿದ್ದನಕಟ್ಟೆಯ ನಾಗಮ್ಮ ಎಸ್.ಹೆಚ್.(243), ಉಸ್ಮಾನ್ಸಾಬ್(190), ಆಶ್ರೀಹಾಳ್ನ ನಾರಾಯಣ(240), ಕೆಂಚಮ್ಮ(199996), ಸಿರಿಯಮ್ಮ(276), ಜಾಣೇಹಾರ್ ಕುಮಾರಯ್ಯ ಎನ್.356), ಗುಡ್ಡಯ್ಯ(294), ಮೋಹನ್ಕುಮಾರ್(601), ಯಶೋಧ(534), ಮದನಮಡುವಿನ ಶಿವರತ್ನಮ್ಮ(193), ನಾಗರಾಜು (187). ಕಂದಿಕೆರೆ ಗ್ರಾ.ಪಂ.: ಒಟ್ಟು 17ಸ್ಥಾನಗಳಿದ್ದು ಅದರಲ್ಲಿ ಕಂದಿಕೆರೆ ಬ್ಲಾಕ್1ರ ಲಕ್ಷ್ಮೀದೇವಮ್ಮ(252), ಪ್ರಸಾದ್.ಕೆ.ಜಿ(322), ಪ್ರಸನ್ನಕುಮಾರ್(361), ಬ್ಲಾಕ್2ರ ನಾಗರಾಜ ಆರ್.(253), ಅಬ್ದುಲ್ರಜಾಕ್(281), ಜಯಂತಿ.ಕೆ.ಸಿ(170), ಬ್ಲಾಕ್ 3ರ ಸುಜಾತ ಬಿ.ಎಸ್.331), ಲೋಕೇಶ್(345), ಮುದ್ದುರಾಜ ಡಿ.ಪಿ(373), ಲಕ್ಷ್ಮೀದೇವಮ್ಮ(432), ಸಾದರಹಳ್ಳಿಯ ಜಯಣ್ಣ(217), ಕಾಂತಮ್ಮ.ಹೆಚ್.ಕೆ(385), ರಾಧ.ಹೆಚ್.ಎಲ್(513), ರಂಗನಾಥ(696), ಗೌರಸಾಗರದ ವಸಂತಕುಮಾರ (253), ಈರಯ್ಯ(251), ಲಕ್ಷ್ಮೀದೇವಮ್ಮ(187). ಬೆಳಗುಲಿ ಗ್ರಾ.ಪಂ.: ಒಟ್ಟು 14ಸ್ಥಾನಗಳಿದ್ದು ಅದರಲ್ಲಿ ಬೆಳಗುಲಿಯ ಬ್ಲಾಕ್1ರ ಕೆಂಪಮ್ಮ (443), ರೇಣುಕಮ್ಮ(510), ಬಿ.ರವಿಶಂಕರ(567), ಕರಿಬಸಮ್ಮ(446), ಬ್ಲಾಕ್2ರ ಪಿ.ಆರ್.ಕುಮಾರಸ್ವಾಮಿ(186), ಬ್ಲಾಕ್3ರ ತಿಮ್ಮರಾಯಪ್ಪ(484), ಉಷಾ(ಅವಿರೋಧ ಆಯ್ಕೆ), ಉದಯಕುಮಾರ್(498), ರಮೇಶ್.ಕೆ(585), ನಿರುವಗಲ್ನ ಶಾರದಮ್ಮ(240), ಅನಂತಯ್ಯ(402), ಸುನಂದಮ್ಮ(302), ನಾಗರಾಜು(126), ತಾರೀಕಟ್ಟೆಯ ನಾಗರಾಜನಾಯ್ಕ(116). ಬರಗೂರು ಗ್ರಾ.ಪಂ.: ಒಟ್ಟು 14ಸ್ಥಾನಗಳಿದ್ದು ಅದರಲ್ಲಿ ಬರಗೂರಿನ ಭಾರತಿಬಾಯಿ (416), ಎಂ.ಲಕ್ಷ್ಮಮ್ಮ(ಅವಿರೋಧ ಆಯ್ಕೆ), ರಾಧಮ್ಮ(552), ದೇವರಾಜಪ್ಪ.ಆರ್(502), ರಂಗೇನಹಳ್ಳಿಯ ಲಕ್ಕಯ್ಯ(313), ನಟರಾಜಯ್ಯ(317), ಉಪ್ಪಾರಹಳ್ಳಿಯ ಯು.ಟಿ.ಬಸವರಾಜು(237), ಬಿ.ಎ.ಮುನಿಯಪ್ಪ(240), ಬಂಗಾರಗೆರೆಯ ಲಕ್ಷ್ಮೀಕಾಂತಯ್ಯ(192), ಸಿ.ಲಕ್ಷ್ಮೀದೇವಮ್ಮ(441), ಎನ್.ಶಶಿಕಿರಣ್(352), ಬರಗೂರು ಬಸವರಾಜು(372), ಕೆ.ಚಂದ್ರಯ್ಯ(217), ಹೊಸಕೆರೆಯ ಶಿವಮ್ಮ(205). ಮತಿಘಟ್ಟ ಗ್ರಾ.ಪಂ.: ಒಟ್ಟು 14 ಸ್ಥಾನಗಳಿದ್ದು ಅದರಲ್ಲಿ ಮತಿಘಟ್ಟದ ಬ್ಲಾಕ್1ರ ಎಂ.ಜಿ.ವೆಂಕಟೇಶ್((305), ನಾಗಮ್ಮ(336), ಮಹೇಶ್(486), ಸಿದ್ದರಾಮಯ್ಯ(378), ಬ್ಲಾಕ್2ರ ವೀರಣ್ಣ(144), ಬೆಳಗೀಹಳ್ಳಿಯ ರತ್ನಮ್ಮ(240), ದಾಸೀಹಳ್ಳಿಯ ಶಿವಣ್ಣ(195), ದೇವರಾಜಯ್ಯ(190)< ಮದಾಪುರದ ಮುನಿಯಪ್ಪ(283), ರಂಗನಾಥ(195), ಮಲ್ಲೇನಹಳ್ಳಿಯ ಶೈಲಜ ಎಂ (163), ಆರ್.ಟಿ.ಭಾರತಿ(ಅವಿರೋಧ ಆಯ್ಕೆ), ಯಳ್ಳೇನಹಳ್ಳಿಯ ದೇವರಾಜಾಚಾರ್(242), ದ್ರಾಕ್ಷಾಯಣಮ್ಮ(241). ಮಲ್ಲಿಗೆರೆ ಗ್ರಾ.ಪಂ.: ಒಟ್ಟು 17ಸ್ಥಾನಗಳಿದ್ದು ಮಲ್ಲಿಗೆರೆಯ ಗೌರಮ್ಮ.ಕೆ.ಜಿ.(341), ಯಶೋಧ(395), ನಿಂಗಮ್ಮ(342), ನಾಗಭೂಷಣ್.ಎಂ.ವಿ(455), ದವನದಹೊಸಹಳ್ಳಿಯ ಜಯಲಕ್ಷ್ಮಮ್ಮ(253), ಕರಿಯಪ್ಪ(261), ಕಾಮಲಾಪುರದ ಬ್ಲಾಕ್1ರ ನಾಗರಾಜು(216), ಉಮೇಶ್(316), ವಸಂತ್ಕುಮಾರ(417), ಮಂಜುಳ ಕೆ.ಎಂ(410), ಬ್ಲಾಕ್2ರ ಗಿರಿಜಮ್ಮ(472), ತಾತಯ್ಯ ಎಸ್.ಎನ್(365), ಉಗ್ರನರಸಿಂಹಯ್ಯ(367), ಕಾನ್ಕೆರೆಯ ಪರಮೇಶ್ವರಯ್ಯ ಜಿ.(297), ವಿಮಲಮ್ಮ(198), ಬಂದ್ರೇಹಳ್ಳಿಯ ಚಂದ್ರನಾಯ್ಕ(196), ರಾಜಶೇಖರ(229).. ಕುಪ್ಪೂರು ಗ್ರಾ.ಪಂ.: ಒಟ್ಟು 18ಸ್ಥಾನಗಳಲ್ಲಿ ಕುಪ್ಪೂರಿನ ಕೆ.ಸಿ.ಮಾದಯ್ಯ(285), ರೆಹನಾಬಾನು(323), ಕೆ.ಎಸ್.ದಕ್ಷಿಣಮೂತರ್ಿ(429), ಬೆನಕನಕಟ್ಟೆಯ ಬಿ.ಹೆಚ್.ಆನಂದ್ಕುಮಾರ್(257), ಕೃಷ್ಣಮೂತರ್ಿ(347), ಕೆ.ಪೂಣರ್ಿಮಾ(370), ತಗಚೇಘಟ್ಟದ ರಾಮಯ್ಯ(194), ಮಂಗಳಮ್ಮ(229), ಸೋಮಶೇಖರಯ್ಯ(353), ಅಣೇಕಟ್ಟೆಯ ಎನ್.ಎಸ್.ವೀಣಾ(211), ಮಹಾಲಿಂಗಯ್ಯ(233), ಅರಳೀಕೆರೆಯ ಸುನಂದ(254), ಹೆಚ್.ಕಲ್ಪನ(283), ಎ.ಎಂ.ಉಮೇಶ್(495), ನವಿಲೆಯ ಎನ್.ಹೆಚ್.ವೆಂಕಟೇಶಯ್ಯ(187), ಶಾಂತಮ್ಮ(221)ವ, ಮಂಚಸಂದ್ರದ ಶಿವಲಿಂಗಯ್ಯ(ಅವಿರೋಧ ಆಯ್ಕೆ), ಜಯಪ್ಪ(163).. ಶೆಟ್ಟಿಕೆರೆ ಗ್ರಾ.ಪ.: ಒಟ್ಟು 16ಸ್ಥಾನಗಳಿದ್ದು ಶೆಟ್ಟಿಕೆರೆಯ ಬ್ಲಾಕ್1ರಲ್ಲಿ ರಂಗಮ್ಮ(137), ಭೈರಪ್ಪ(281), ಲತಾ(197), ಬ್ಲಾಕ್2ರ ದೊಡ್ಡವೀಣಾ(256), ಶಶಿಧರ್.ಎಸ್.ಇ(374), ಶಶಿಕಲಾ(261), ಬ್ಲಾಕ್3ರ ಸಾವಿತ್ರಮ್ಮ(261), ನಾಗರಾಜು(21), ಸೋಮಲಾಪುರದ ದ್ರಾಕ್ಷಾಹಿಣಿ(399), ನಾಗರಾಜು.ಜಿ.ಎಂ(417), ಲತಾಮಣಿ(288), ಮಾದಿಹಳ್ಳಿಯ ಮಲ್ಲಿಗಮ್ಮ(86), ಶಿವಶಂಕರಪ್ಪ(179), ಗೋಪಾಲನಹಳ್ಳಿಯ ಬಸವರಾಜು ಜಿ.ಎಂ(228), ಮಾಕುವಳ್ಳಿಯ ಎಂ.ಬಿ.ನಾಗರಾಜು(198), ಲಿಂಗರಾಜು(182).. ದುಗುಡಿಹಳ್ಳಿ ಗ್ರಾ.ಪಂ.: ಒಟ್ಟು 12ಸ್ಥಾನಗಳಿದ್ದು ಅದರಲ್ಲಿ ದುಗುಡಿಹಳ್ಳಿಯ ಬಿ.ಎಸ್.ಉಮೇಶ್(322), ಬಿ.ಸಿ.ವಸಂತಕುಮಾರಿ(287), ಬಸವೇಗೌಡ(298), ಚುಂಗನಹಳ್ಳಿಯ ಲಕ್ಷ್ಮಿದೇವಮ್ಮ(170), ದಯಾನಂದ(188), ವಡೇರಹಳ್ಳಿಯ ಶಕುಂತಲ.ಎನ್(243), ಚಂದ್ರಯ್ಯ(185), ಬಿ.ಎನ್.ವೀಣಾ(219), ಹೆಸರಹಳ್ಳಯ ಹೆಚ್.ಎನ್.ನಾಗರಾಜು(400), ಹೆಚ್.ಆರ್.ಗವಿಯಪ್ಪ(514), ಚಿಕ್ಕಮ್ಮ ಹೆಚ್.ಎನ್(465), ಕಾರೇಹಳ್ಳಿಯ ಸುಶೀಲಮ್ಮ(103).. ಮುದ್ದೇನಹಳ್ಳಿ ಗ್ರಾ.ಪಂ.; ಒಟ್ಟು 20ಸ್ಥಾನಗಳಿದ್ದು ಮುದ್ದೇನಹಳ್ಳಿಯ ಚಂದ್ರಯ್ಯ(347), ಟಿ.ಬಸವರಾಜಯ್ಯ(346), ಶಾತಾಜ್ಉನ್ನಿಸಾ(355), ಗುರುಶಾಂತಯ್ಯ(471), ಕ್ಯಾತನಾಯಕನಹಳ್ಳಿಯ ಗಂಗಮ್ಮ(273), ವಸಂತಕುಮಾರ(386), ಲಕ್ಕೇನಹಳ್ಳಿಯ ಉಷಾ(176), ಸಾಲ್ಕಟ್ಟೆಯ ಸಿ.ಕಮಲಮ್ಮ(467), ಗೋಪಾಲಕೃಷ್ಣ(448), ಚಂದ್ರಕಲಾ.ಎಂ.ಎಸ್(394), ಕೆ.ಎಸ್.ವಿಜಯ(395), ಮರಳುಹಳ್ಳದ ಕಾವಲ್ನ ವಿನೋದಬಾಯಿ(110), ತಿಮ್ಮಯ್ಯ(160), ಆಲದಕಟ್ಟೆಯ ಎಸ್.ನಾಗರಾಜನಾಯ್ಕ(369), ರಂಗಮ್ಮ(319), ಮಾಳಿಗೇಹಳ್ಳಿಯ ಬಿ.ಎಸ್.ಯೋಗರಾಜು(127), ಎಂ.ಎಸ್.ಮಹಾಲಿಂಗಯ್ಯ(264), ಸಾವಶೆಟ್ಟಿಹಳ್ಳಿಯ ಓಂಕಾರಮೂತರ್ಿಯ(88), ಜೋಡಿಕಲ್ಲೇನಹಳ್ಳಿಯ ಟಿ.ಎನ್.ಶಕುಂತಲ(152), ಶ್ರೀಧರ ಕೆ.ಟಿ(198).. ಹೊನ್ನೆಬಾಗಿ ಗ್ರಾ.ಪಂ.: ಒಟ್ಟು 11ಸ್ಥಾನಗಳಿದ್ದು ಅದರಲ್ಲಿ ಹೊನ್ನೇಬಾಗಿಯ ಪದ್ಮ(361), ಗುರುಮೂತರ್ಿ(424), ಸ್ವರ್ಣಕುಮಾರಿ(476), ಬುಳ್ಳೇನಹಳ್ಳಿಯ ರಂಗಮ್ಮ(168), ಬಿ.ಎನ್.ಉದಯಕುಮಾರ್(146), ಕಾಡೇನಹಳ್ಳಿಯ ಶಂಕರಮ್ಮ(133), ಬಾವನಹಳ್ಳಿಯ ಟಿ.ಎನ್.ಕಲ್ಪನ(105). ಹೆಚ್.ಎನ್.ಸತ್ಯನಾರಾಯಣ(250), ಮೇಲನಹಳ್ಳಿಯ ಶರತ್ಕುಮಾರ್(381), ಎಂ.ಮಂಜುಳ(348), ಶಿವಮ್ಮ.ಬಿ(435).. ತೀರ್ಥಪುರ ಗ್ರಾ.ಪಂ..: ಒಟ್ಟು 18ಸ್ಥಾನಗಳಿದ್ದು ಅದರಲ್ಲಿ ತೀರ್ಥಪುರದ ಟಿ.ಕೆ.ಕೆಂಪರಾಜು(357), ಟಿ.ಜಿ.ಮಂಜುನಾಥ(346), ಪಿ.ಮಧುಶ್ರೀ(339), ದೊಡ್ಡರಾಂಪುರದ ಡಿ.ಎನ್.ರಮೇಶ(312), ರಂಗಸ್ವಾಮಯ್ಯ ಡಿ.ಎನ್(407), ಪದ್ಮಮ್ಮ(457), ಚಿಕ್ಕರಾಂಪುರದ ಕಾಮಾಕ್ಷಿ(286), ಹೆಚ್.ಸಿ.ರಾಮಯ್ಯ(318), ಕಾತ್ರಿಕೆಹಾಳ್ನ ಕೆಂಪಮ್ಮ(276), ಗೋವಿಂದರಾಜು.ಯು(495), ಕುಮಾರ್.ಕೆ.ವೈ(318), ಕೆ.ಆರ್.ಕಾಂತರಾಜು(310), ಶಶಿಕಲಾ(366), ಬರಶಿಡ್ಲಹಳ್ಳಿಯ ಕೆ.ಶಂಕರ(425), ಮಹಾಲಿಂಗಮ್ಮ(514), ಬಿ.ಕೆ.ಕೇಶವಮೂತರ್ಿ(307), ಸಿಂಗದಹಳ್ಳಿಯ ಬಿ.ಆರ್.ಪಾರ್ವತಮ್ಮ(191), ಗಿರೀಶ್(166).. ಗೋಡೆಕೆರೆ ಗ್ರಾ.ಪಂ.: ಒಟ್ಟು 16ಸ್ಥಾನಗಳಲ್ಲಿ ಗೋಡೆಕೆರೆಯ ಬ್ಲಾಕ್ 1ರ ಬಸವಲಿಂಗಪ್ಪಮೂತರ್ಿ(145), ಜಿ.ಎಸ್.ಕುಶಲ(182), ಬ್ಲಾಕ್2ರ ಜಿ.ಎನ್.ವಸಂತ್ಕುಮಾರ್(307), ಸುನಂದ(298), ಜಿ.ಪಿ.ಲೋಕೇಶ್(394), ಚಿತ್ತಯ್ಯ(356), ಸೋಮನಹಳ್ಳಿಯ ಶಂಕರಮ್ಮ(29), ಎಸ್.ಎ.ತಮ್ಮೇಗೌಡ(364), ಮಲ್ಲಿಕಾಜರ್ುನ(302), ಬಗ್ಗನಹಳ್ಳಿಯ ನರಸಿಂಹಮೂತರ್ಿ(290), ಜಿ.ಮಂಜುಳ(453), ಶಿವಲಿಂಗಮ್ಮ(488), ಕರಿಯಮ್ಮ(337), ತರಬೇನಹಳ್ಳಿಯ ಬಿ.ಎಸ್.ಗಂಗಾಧರ(222, ಜಿ.ಪಿ.ಪರಮಶಿವಯ್ಯ(315), ಜಯಮ್ಮ(255).. ಜಯಚಾಮರಾಜಪುರ ಗ್ರಾ.ಪಂ.: ಒಟ್ಟು 17ಸ್ಥಾನಗಳಿದ್ದು ಜಯಚಾಮರಾಜಪುರದ ಶಶಿಕಲಾ ಬಿ.ಎನ್.(246), ನಾಗರಾಜು ಬಿ.(241), ನಿಜಗುಣಮೂತರ್ಿ.ಜೆ.ಟಿ(389), ಸಾಸಲಿನ ಕುಮಾರಯ್ಯ ಎಸ್.ಜಿ(481), ಲಲಿತಮ್ಮ(426), ರವಿಕುಮಾರ(419), ದಿನೇಶ ಎಸ್.ಎನ್(536), ಹಾಲುಗೊಣದ ದೇವರಾಜು ಬಿ.ಆರ್(218), ಮಮತ ಕೆ.ಎಸ್(228), ಮಲಗೊಂಡನಹಳ್ಳಿಯ ಶಿವಾನಂದಯ್ಯ(398), ಪ್ರಸನ್ನಕುಮಾರ್(551), ಪಾರ್ವತಮ್ಮ(551), ತಿಗಳನಹಳ್ಳಿಯ ಸುಜಾತ(246), ಯಶೋಧ(256), ಯಶೋಧಮ್ಮ(134), ಶಶಿಧರ ಎ.ಎಂ(204), ಮಲ್ಲಿಕಾಜರ್ುನಯ್ಯ ಎ.ಎಸ್(240).. ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.



ಹತ್ತು ವರ್ಷದ ಹಿಂದಿನ ಬಿ.ಪಿ.ಎಲ್.ಪಟ್ಟಿಯಿಂದ ಫಲಾನುಭವಿಗಳ ಆಯ್ಕೆ: ಸದಸ್ಯರ ಆಕ್ರೋಶ

ಚಿಕ್ಕನಾಯಕನಹಳ್ಳಿ,ಮೇ.24: ಪುರಸಭೆಯ ಎಸ್.ಜೆ.ಎಸ್.ಆರ್,ವೈ.ನಲ್ಲಿ ಹಿಂದಿನ ಹತ್ತು ವರ್ಷಗಳ ಬಿ.ಪಿ.ಎಲ್.ಪಟ್ಟಿಯನ್ನೇ ಅನುಸರಿಸಿ ಫಲಾನುಭವಿಗಳಿಗೆ ಸವಲತ್ತು ವಿತರಿಸುತ್ತಿರುವುದನ್ನು ಖಂಡಿಸಿ ವಿರೋಧ ಪಕ್ಷದ ಸದಸ್ಯರು ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಜರುಗಿತು.
ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ಏಪ್ರಿಲ್ ಮಾಹೆಯ ಜಮಾ-ಖಚರ್ು ಮಂಡನೆಯ ಸಾಮಾನ್ಯ ಸಭೆಯಲ್ಲಿ ಈ ಪ್ರಸಂಗ ನಡೆಯಿತು.
ಕಳೆದ ಸಭೆಯಲ್ಲಿ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ(ಎಸ್.ಜೆ.ಎಸ್.ಆರ್.ವೈ)ಯಲ್ಲಿ ಅವ್ಯವಹಾರವಾಗಿದೆ, ಈ ಬಗ್ಗೆ ಸಮಗ್ರ ತನಿಖೆ ನೆಡೆಯಬೇಕು ಹಾಗೂ ಈ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವವರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರ ನೀಡಬೇಕೆಂದು ಒತ್ತಾಯಿಸಿ ಸಭಾ ತ್ಯಾಗ ಮಾಡಿದ್ದ ವಿರೋಧ ಪಕ್ಷದವರು, ಈ ಬಾರಿಯ ಸಭೆಯಲ್ಲೂ ಈ ವಿಷಯವನ್ನು ಕೈಗೆತ್ತಿಕೊಂಡು ಬಿಸಿ ಬಿಸಿ ಚಚರ್ೆ ನಡೆಸಿದರು. ಎಸ್.ಜೆ.ಎಸ್.ಆರ್.ವೈ ಯೋಜನೆಯಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಕಾರ್ಯಕ್ರಮಗಳ ಬಗ್ಗೆ ಪುರಸಭಾ ಸದಸ್ಯರಿಗೆ ಏನೊಂದೂ ಮಾಹಿತಿ ನೀಡುತ್ತಿಲ್ಲ ಹಾಗೂ ಎಲ್ಲಾ ಹಳೇ ಮಾಹಿತಿಗಳನ್ನು ಇಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೆ, ಎಸ್.ಜೆ.ಎಸ್.ಆರ್.ವೈ.ಯೋಜನೆಯ ಎಲ್ಲಾ ಸವಲತ್ತುಗಳು ಪ್ರತಿ ವಾಡರ್್ನಲ್ಲಿರುವ ಅರ್ಹರಿಗೆ ತಲುಪುವಂತೆ ಕಾರ್ಯಕ್ರಮ ರೂಪಿಸಬೇಕು ಹಾಗೂ ಅಯಾ ವಾಡರ್್ನ ಸದಸ್ಯರ ಗಮನಕ್ಕೆ ತಾವು ಮಾಡುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಬೇಕೆಂದು ಈ ಯೋಜನೆಯ ಅಧಿಕಾರಿ ಜಯಲಕ್ಷಮ್ಮನವರಿಗೆ ಸೂಚಿಸಿದರು.
ಕೇದಿಗೆಹಳ್ಳಿಗೆ ವಿದ್ಯುತ್ ಕಂಬ ಅಳವಡಿಸಲು ಅಧಿಕಾರಿಗಳು ಅಸಡ್ಡೆ ತೋರುತ್ತಿದ್ದಾರೆ, ನಾನೇಷ್ಟೇ ಸಲ ಸಹನೆಯಿಂದ ಹೇಳಿದರೂ ಕೇಳುತ್ತಿಲ್ಲವೆಂದು ಸಿಟ್ಟಿಗೆದ್ದ ವಿರೋಧ ಪಕ್ಷದ ಸದಸ್ಯೆ ಧರಣಿ ಲಕ್ಕಪ್ಪ, ಈ ಬಗ್ಗೆ ಅಧ್ಯಕ್ಷರ ಗಮನವಹಿಸಿ ಕೇದಿಗೆ ಹಳ್ಳಿಗೆ ಅಗತ್ಯವಿರುವ ವಿದ್ಯುತ್ ಕಂಬಗಳನ್ನು ಒಂದು ವಾರದೊಳಗೆ ಅಳವಡಿಸುವಂತೆ ನೋಡಿಕೊಳ್ಳುವ ಜವಬ್ದಾರಿಯನ್ನು ನೀಡಿದರು. ಈ ವಿಷಯಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯ ಬಸ್ ರಾಜಣ್ಣ ಲೈಟ್ ಕಂಬ ಅಳವಡಿಕೆಯ ಬಗ್ಗೆ ಅಷ್ಟೇ ಅಲ್ಲ, ಎಲ್ಲಾ ಕೆಲಸಗಳ ಬಗ್ಗೆ ಅಸಡ್ಡೆ ತೋರುವುದು ಹೆಚ್ಚಾಗಿದೆ, ನಾವೇನೇ ಹೇಳಿದರೂ ಅದಕ್ಕೆ ಬೆಲೆ ಸಿಗುತ್ತಿಲ್ಲ, ಪಟ್ಟಣದ ರಸ್ತೆಗಳೆಲ್ಲಾ ಚರಂಡಿಯಾಗಿದೆ, ಪಟ್ಟಣದಲ್ಲಿ ಏನೂ ಕೆಲಸವಾಗುತ್ತಿಲ್ಲವೆಂದು ವಿರೋಧ ಪಕ್ಷದವರನ್ನು ಮೀರಿಸುವ ರೀತಿಯಲ್ಲಿ ಆಕ್ರೋಶಗೊಂಡ ರಾಜಣ್ಣ, ನಾವೇನು ಪುರಸಭೆಗೆ ಉಪ್ಪಿಟ್ಟು ಕಾಫಿಗಾಗಿ ಬರುತ್ತೇವೆಯೇ ಎಂದು ಅಧ್ಯಕ್ಷರನ್ನು ಪ್ರಶ್ನಿಸಿದರು.
ಜಮಾ ಖಚರ್ಿನಲ್ಲಿ ಊಟಕ್ಕೆಂದು ಖಚರ್ುಮಾಡಿರುವ ಹಣದ ಬಗ್ಗೆ ಆಕ್ಷೇಪವೆತ್ತಿದ ಸಿ.ಡಿ.ಚಂದ್ರಶೇಖರ್, ಇಲ್ಲಿನ ಸಭೆಗಳಿಗೆ ಊಟಕ್ಕೆಂದು ಖಚರ್ುಮಾಡಲು ಸಕರ್ಾರ ನಿಗಧಿ ಪಡಿಸಿರುವ ಹಣವೆಷ್ಟು? ಎಂದು ಪ್ರಶ್ನಿಸಿದರು ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ, ಸಾಮಾನ್ಯ ಸಭೆ ಒಂದಕ್ಕೆ ಒಂದುವರೆ ಸಾವಿರ ರೂಗಳನ್ನು ಮೀಸಲಿರಿಸಿದ್ದು ವರ್ಷ ಒಂದಕ್ಕೆ ಹದಿನೆಂಟು ಸಾವಿರ ರೂಗಳನ್ನು ಖಚರ್ು ಮಾಡಬಹುದು, ಇದಲ್ಲದೆ ಸ್ಥಾಯಿ ಸಮಿತಿ ಸಭೆಗಳಿಗೆ ಪ್ರತ್ಯೇಕವಾಗಿ ಖಚರ್ು ಮಾಡಲು ಅವಕಾಶವಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಕಂಪ್ಯೂಟರ್ ಅಪರೇಟರ್ಗಳಿಗೆ ಸಂಬಳ ನೀಡದೆ ಶೋಷಣೆ ಮಾಡುತ್ತಿದ್ದರಾ ಎಂದು ಆರೋಪಿಸಿದ ವಿರೋಧ ಪಕ್ಷದ ಸದಸ್ಯ ಸಿ.ಪಿ.ಮಹೇಶ್, ಸಂಬಳ ಕೊಡದೆ ಹೇಗೆ ಅವರಿಂದ ಕೆಲಸ ಮಾಡಿಸುತ್ತೀರಾ, ಶೀಘ್ರವೇ ಅವರ ಸಂಬಳ ನೀಡಿ ಎಂದರು.
ಪುರಸಭೆಗೆ ಹೊಸದಾಗಿ ಬಂದಿರುವ ವಾಹನದಲ್ಲಿ ಬ್ಯಾಟರಿ ಕಳವಾಗಿದೆ, ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದಾರಾ ಎಂದು ಮಹೇಶ್ ಪ್ರಶ್ನಿಸಿದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಸಿದ್ದಮೂತರ್ಿ, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.
ಪಟ್ಟಣದ ಗ್ರ್ರಂಥಾಲಯಕ್ಕೆ ಶೌಚಾಲಯ ಹಾಗೂ ಯು.ಪಿ.ಎಸ್. ಕಲ್ಪಿಸಬೇಕೆಂದು ಸಿ.ಡಿ.ಚಂದ್ರಶೇಖರ್ ಒತ್ತಾಯಿಸಿದರು, ರುದ್ರನ ಗುಡಿ ವೃತ್ತದಲ್ಲಿರುವ ಕಸಬಾ ಚಾವಡಿ ಕಟ್ಟಡದಲ್ಲಿ ಸಕರ್ಾರಿ ಚಿಕಿತ್ಸಾಲಯವನ್ನು ಪ್ರಾರಂಭಿಸುವಂತೆ ಕೋರಿ ಬಂದಿದ್ದ ಅಜರ್ಿಗೆ, ಈ ಬಗ್ಗೆ ಡಿ.ಎಚ್.ಓ. ಹಾಗೂ ವೈದ್ಯಾಧಿಕಾರಿಗಳನ್ನು ಸಂಪಕರ್ಿಸಿ ಕ್ರಮ ಕೈಗೊಳ್ಳವಂತೆ ಸೂಚಿಸಲಾಯಿತು.
ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿನ ಆಶ್ರಯ ಮನೆಗಳ ಫಲಾನುಭವಿಗಳು ಪಟ್ಟಣದಲ್ಲಿ 313 ಜನರಿದ್ದಾರೆ, ಈ ಯೋಜನೆಯಲ್ಲಿ ಮನೆ ಕಟ್ಟಿಕೊಳ್ಳಲು ಫಲಾನುಭವಿಗಳಿಗೆ ಸಾಲ ನೀಡಿದ್ದು, ಈ ಸಾಲವನ್ನು ಮರುಪಾವತಿ ಮಾಡದೆ ಇರುವ ಜನರಿಗಾಗಿ ಸಕರ್ಾರ ಮತ್ತೊಂದು ಅವಕಾಶ ನೀಡಿದ್ದು, ಇಲ್ಲಿಯವರೆಗಿನ ಬಡ್ಡಿಯನ್ನು ಮನ್ನಾ ಮಾಡಿರುವ ಸಕರ್ಾರ, ಉಳಿಕೆ ಅಸಲನ್ನು ಮಾತ್ರ ಕಟ್ಟಲು ಸೂಚನೆ ನೀಡಿದೆ. ಪಟ್ಟಣದಲ್ಲಿ ಈ ಯೋಜನೆಯ ಸವಲತ್ತು ಪಡೆದಿರುವವರು ಇಲ್ಲಿಯವರೆಗೆ ಕೇವಲ 3 ಲಕ್ಷ ರೂಗಳನ್ನು ಮಾತ್ರ ಕಟ್ಟಿದ್ದು ಉಳಿಕೆ 68 ಲಕ್ಷ ಬಾಕಿ ಇದೆ, ಈ ಹಣವನ್ನು ಮರುಪಾವತಿಗೆ ಸದಸ್ಯರು ಸಹಕಾರ ನೀಡಬೇಕೆಂದು ಮುಖ್ಯಾಧಿಕಾರಿ ಪಿ.ಸಿದ್ದಮೂತರ್ಿ ಸದಸ್ಯರನ್ನು ಕೋರಿದರು.
ಪಟ್ಟಣದ ತಾತಯ್ಯನ ಗೋರಿ ಬಳಿ ಲಘುವಾಹನ ನಿಲ್ದಾಣವನ್ನು ಕಟ್ಟಲು ಪುರಸಭೆಯಿಂದ ಜಾಗ ನೀಡಿದರೆ ಶಾಸಕರ ನಿಧಿಯಿಂದ ನಿಲ್ದಾಣವನ್ನು ನಿಮರ್ಿಸಲಾಗುವುದು ಎಂದು ಅಧ್ಯಕ್ಷರು ಸೂಚಿಸಿದಕ್ಕೆ ಸದಸ್ಯರೆಲ್ಲಾ ಸಮ್ಮತಿಸಿ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ರುಕ್ಮಿಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು, ವಿರೋಧ ಪಕ್ಷದವರು ಹಾಗೂ ನಾಮಿನಿ ಸದಸ್ಯರುಗಳು ಹಾಜರಿದ್ದರು.

ವೈದ್ಯರು ಕಾರ್ಯಸ್ಥಾನದಲ್ಲೇ ವಾಸಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಹೊಟ್ಟೆನೋವಿನಿಂದ ವೆಂಕಟೇಶ್ ಸಾವು ಆಸ್ಪತ್ರೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಚಿಕ್ಕನಾಯಕನಹಳ್ಳಿ,ಮೇ24: ತಾಲೂಕಿನ ಹಂದನೆಕೆರೆಯ ವೆಂಕಟೇಶ್ ಎಂಬಾತನ ಸಾವಿಗೆ ವೈದ್ಯರು ಕಾರ್ಯಸ್ಥಾನದಲ್ಲಿ ಲಭ್ಯವಿಲ್ಲದಿರುವುದೇ ಕಾರಣವೆಂದು ಸಿಟ್ಟೆಗೆದ್ದ ಇಲ್ಲಿನ ಜನರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಹಂದನೆಕೆರೆಯ ಟೈಲರ್ ವೆಂಕಟೇಶ್ ಎಂಬಾತ ಗುರುವಾರ ರಾತ್ರಿ ಹೊಟ್ಟೆನೋವಿನಿಂದ ಹಂದನಕೆರೆ ಆಸ್ಪತ್ರೆಗೆ ಬಂದಿದ್ದಾನೆ, ಈ ಸಂದರ್ಭದಲ್ಲಿ ಅಲ್ಲಿದ್ದ ಸಿಬ್ಬಂದಿ ತಿಪಟೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ರೋಗಿಯನ್ನು ತಿಪಟೂರಿಗೆ ಕರೆದುಕೊಂಡು ಹೋಗುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ವೆಂಕಟೇಶನಿಗೆ ಸಕಾಲಕ್ಕೆ ವೈದ್ಯರಿಂದ ಸಮರ್ಪಕವಾದ ಔಷಧಿ ದೊರೆತ್ತಿದ್ದರೆ ಸಾವು ಸಂಭವಿಸುತ್ತಿರಲಿಲ್ಲವೆಂದು ತಿಳಿದು ಇಲ್ಲಿನ ಜನರು ವೈದ್ಯರ ವಿರೋಧ ಪ್ರತಿಭಟನೆಗೆ ಮುಂದಾದರು.
ಈ ಆಸ್ಪತ್ರೆಗೆ ನಿಯೋಜಿಸಿರುವ ಡಾ.ಶಂಕರಪ್ಪನವರು, ಅರಸೀಕೆರೆ ತಾಲೂಕಿನ ಬಾಣಾವಾರದಿಂದ ಹಂದನಕೆರೆಗೆ ದಿನಂಪ್ರತಿ ಬರುತ್ತಿದ್ದು ರಾತ್ರಿ ಸಂದರ್ಭದಲ್ಲಿ ಅವಗಡಗಳು ಸಂಭವಿಸಿದರೆ ಶುಶ್ರೂಷೆ ನೀಡಲು ವೈದ್ಯರಿರುವುದಿಲ್ಲವೆಂದು ಗ್ರಾಮಸ್ಥರು ದೂರಿದ್ದಾರೆ.
ಪ್ರತಿಭಟನೆಯ ಸಮಯದಲ್ಲಿ ಡಾ.ಶಂಕರಪ್ಪನವರು ಪೊಲೀಸ ಠಾಣೆಯಲ್ಲಿದ್ದು ರಕ್ಷಣೆ ಪಡೆದಿದ್ದರು.
ಸ್ಥಳಕ್ಕೆ ಸಿ.ಪಿ.ಐ, ಪಿ. ರವಿಪ್ರಸಾದ್, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ಭೇಟಿ ನೀಡಿದ್ದರು. ಹಂದನಕೆರೆ ಪಿ.ಎಸೈ. ಲಕ್ಷ್ಮೀಪತಿ ಹಾಜರಿದ್ದರು.
ಜನ ಸೇವಾ ಕಾಯರ್ಾಲಯದ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಮೇ.21: ಪಟ್ಟಣದ ನ್ಯಾಯಾಲಯದ ಬಳಿ 'ಜನ ಸೇವಾ ಕಾಯರ್ಾಲಯ'ವನ್ನು ಇದೇ 23ರಂದು ಬೆ.9ಕ್ಕೆ ಉದ್ಘಾಟಿಸಲಾಗುವುದು ಎಂದು ಮಾಜಿ ಶಾಸಕ ಬಿ.ಲಕ್ಕಪ್ಪ ತಿಳಿಸಿದ್ದಾರೆ.
ತಾಲೂಕಿನ ಜನರ ಸಂಕಷ್ಟಗಳಿಗೆ ಸ್ಪಂಧಿಸುವ ಸಲುವಾಗಿ ಈ ಕಾಯರ್ಾಲವನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿರುವ ಲಕ್ಕಪ್ಪ, ಈ ಸಂದರ್ಭದಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರರಾದ ಎಸ್.ಮುರುಡಯ್ಯ, ಕುಪ್ಪೂರು ಗೋಪಾಲರಾವ್, ಜೋಡಿ ಕಲ್ಲೇನಹಳ್ಳಿ ಶಿವಪ್ಪ ಹಾಗೂ ನಾಗೇಶಯ್ಯನವರು ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.
ಬಡಕೆಗುಡ್ಲು ಸಕರ್ಾರಿ ಶಾಲೆಗೆ ಶೇ.96 ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.21: ತಾಲೂಕಿನಿ ಕಂದಿಕೆರೆ ಹೋಬಳಿ ಬಡಕೆಗುಡ್ಲು ಸಕರ್ಾರಿ ಪ್ರೌಢಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.96 ಫಲಿತಾಂಶ ಬಂದಿದ್ದು, ಈ ಫಲಿತಾಂಶಕ್ಕೆ ಅಲ್ಲಿನ ಎಸ್.ಡಿ.ಎಂ.ಸಿ ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಸಕರ್ಾರಿ ಪ್ರೌಢಶಾಲೆ ಇತ್ತೀಚೆಗೆ ಆರಂಭಗೊಂಡಿದ್ದು, ಶಿಕ್ಷಕರು ಇಲ್ಲಿನ ವಿದ್ಯಾಥರ್ಿಗಳಿಗೆ ಮುತುವಜರ್ಿಯಿಂದ ಪಾಠಭೋದನೆ ಮಾಡಿದ್ದು ಹಾಗೂ ವಿದ್ಯಾಥರ್ಿಗಳು ಶ್ರದ್ದೆಯಿಂದ ಓದಿದ್ದರ ಫಲವಾಗಿ ನಾವು ಈ ರೀತಿಯ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷರು ತಿಳಿಸಿದ್ದಾರೆ.


ಕಾಳಿಕಾಂಬ ವಿಗ್ರಹ ಪುನರ್ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ
ಚಿಕ್ಕನಾಯಕನಹಳ್ಳಿ,ಮೇ.24: ಹೊಯ್ಸಳರ ಕಾಲದ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಶಿವಲಿಂಗೇಶ್ವರ, ವಿಘ್ನೇಶ್ವರ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹಗಳ ಪುನರ್ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಹಾಗೂ ಧಾಮರ್ಿಕ ಸಮಾರಂಭವನ್ನು ಇದೇ 26 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕಾಳಿಕಾಂಬ ದೇವಾಲಯ ಸಮಿತಿಯ ಅಧ್ಯಕ್ಷ ಸಾಸಲು ಪುಟ್ಟದೇವಿರಾಚಾರ್ ತಿಳಿಸಿದ್ದಾರೆ.
ಪಟ್ಟಣದ ದೇವಾಲಯದ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಎಂಟು ನೂರು ವರ್ಷಗಳ ಇತಿಹಾಸವಿರುವ ಈ ದೇವಾಲಯವನ್ನು ಜೀಣರ್ೋದ್ದಾರಗೊಳಿಸಿದ್ದು, ಪುರಾತನ ವಿಗ್ರಹಗಳ ಜೊತೆಗೆ ನೂತನ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಈ ಸಂಬಂಧ ಇದೇ 25 ರಂದು ಗಣಪತಿ ಪೂಜೆ, ಪುಣ್ಯಾಹವಾಚನ ಕಾರ್ಯಕ್ರಮಗಳನ್ನು ನಮ್ಮ ಸಮಾಜದ ಪೀಠಾಧ್ಯಕ್ಷರುಗಳಾದ ಶಿವಸುಜ್ಞಾನ ಮೂತರ್ಿ ಸ್ವಾಮಿ, ಗುರುನಾಥ ಸ್ವಾಮಿ ಹಾಗೂ ಕರುಣಾಕರ ಸ್ವಾಮಿ ಯವರ ಸಾನಿಧ್ಯದಲ್ಲಿ ನೆರವೇರಿಸಲಾಗುವುದು ಎಂದರು.
ಇದೇ 26ರ ಬೆಳಿಗ್ಗೆ 9.30ಕ್ಕೆ ಶ್ರೀ ಕಾಳಿಕಾಂಬದೇವಿ, ಶಿವಲಿಂಗೇಶ್ವರ, ವಿಘ್ನೇಶ್ವರ ಹಾಗೂ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹಗಳ ಪುನರ್ ಪ್ರತಿಷ್ಠಾಪನೆ, ಹೋಮ ಹಾಗೂ ಕುಂಭಾಭಿಷೇಕ ಮತ್ತು ಮಹಾದಾಸೋಹವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ದಿನ ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಮಾರಂಭವನ್ನು ಹಮ್ಮಿಕೊಂಡಿದ್ದು ಇದರ ಉದ್ಘಾಟನೆಯನ್ನು ಹಾಸನ ಜಿಲ್ಲೆಯ ಅರೆಮಾದನಹಳ್ಳಿ ಮಹಾ ಸಂಸ್ಥಾನದ ಸುಜ್ಞಾನ ಪೀಠದ ಶಿವಸುಜ್ಞಾನಮೂತರ್ಿ ಸ್ವಾಮಿ ನೆರವೇರಿಸಲಿದ್ದಾರೆ, ದಿವ್ಯ ಸಾನಿಧ್ಯ ಹಾಗೂ ಆಶೀರ್ವಚನವನ್ನು ಹೊಸದುರ್ಗದ ಕಾಗಿನೆಲೆ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮಿ ನೀಡಲಿದ್ದಾರೆ, ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಡಾ. ಅಭಿನವ ಮಲ್ಲಿಕಾರ್ಜನಸ್ವಾಮಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ, ಗುಲ್ಬರ್ಗದ ಏಕದಂಡಿಗಿ ಮಠದ ಗುರುನಾಥ ಸ್ವಾಮಿ, ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರ ಸ್ವಾಮಿ, ಚರಪಟ್ಟಾಧ್ಯಕ್ಷರಾದ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ಹುಲಿಯೂರು ದುರ್ಗದ ದೀಪಾಂಬುದಿ ಕಾಳಿಕಾಂಬ ಪೀಠಾಧ್ಯಕ್ಷರಾದ ಕರುಣಾಕರ ಸ್ವಾಮಿ,ಚಿತ್ರದುರ್ಗ ಕೃಷ್ಣಯಾದವಾನಂದ ಸ್ವಾಮಿ, ಬಸವ ಮಾಚೀದೇವ ಸ್ವಾಮಿ, ಬಂಜಾರ ಗುರುಪೀಠದ ಸದರ್ಾರ್ ಸೇವಾಲಾಲ್ ಸ್ವಾಮಿ, ಚಿ.ನಾ.ಹಳ್ಳಿಯ ನನ್ನಯ್ಯ ಸ್ವಾಮಿ ಉಪಸ್ಥಿತರಿರುವರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್ ಬಾಬು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್, ಸಂಸದ ಜಿ.ಎಸ್.ಬಸವರಾಜು, ಜಿ.ಪಂ.ಅಧ್ಯಕ್ಷೆ ಜಯಮ್ಮದಾನಪ್ಪ, ಶಾಸಕರುಗಳಾದ ಬಿ.ಸಿ.ನಾಗೇಶ್, ಎಂ.ಆರ್.ಹುಲಿನಾಯ್ಕರ್, ಸಾಹಿತಿ ಸಾ.ಶಿ.ಮರುಳಯ್ಯ, ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಉಮೇಶ್, ಬೆಂಗಳೂರಿನ ಮ್ಯೂಜಿಕಲ್ ಅಕಾಡಮಿಯ ಪ್ರಧಾನ ಕಾರ್ಯದಶರ್ಿ ಎಲ್.ಜಗಧೀಶ್, ಶಿಲ್ಪಿ ಹೊನ್ನಪ್ಪಾಚಾರ್ ಭಾಗವಹಿಸುವರು.
ಅತಿಥಿಗಳಾಗಿ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ಪಿ.ನಾಗರಾಜು, ಆನಂದರಾಮು, ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ ಕುಮಾರ್, ಬಿ.ಲಕ್ಕಪ್ಪ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ಎ.ಪಿ.ಎಂ.ಸಿ. ಅಧ್ಯಕ್ಷ ಸಿ.ಬಸವರಾಜು ಸೇರಿದಂತೆ ಹಲವರು ಭಾಗವಹಿಸುವರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವವರಿಗೆ ಸನ್ಮಾನವನ್ನು ಹಮ್ಮಿಕೊಂಡಿದ್ದು, ಬೆಂಗಳೂರಿನ ಭೂಮಿಕಾ ಜೂಯಲ್ಲರ್ಸ್ನ ಎಲ್.ರಮೇಶ್, ಮುನಿಯೂರಿನ ವಿದ್ವಾನ್ ಕ.ನಾ.ದಾಸಾಚಾರ್, ತಿಪಟೂರಿನ ಡಾ.ನಾಗೇಂದ್ರ, ನಿವೃತ್ತ ಪ್ರಾಂಶುಪಾಲ ಕೆ.ಉಪೇಂದ್ರ, ಶಿಲ್ಪಿ ಪಿ.ವಿಶ್ವನಾಥ್, ಕಲಾವಿದ ಸಿ.ಎನ್.ಕೃಷ್ಣಾಚಾರ್ ರವರನ್ನು ಅಭಿನಂದಿಸಲಾಗುವುದು ಎಂದು ದೇವಾಲಯ ಸಮಿತಿಯ ಕಾರ್ಯದಶರ್ಿ ಅನು ಜ್ಯೂಯಲರ್ಸ್ನ ಎಂ.ದೇವರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಸಿ.ಎನ್.ಮೂತರ್ಿ, ಯತಿರಾಜ್, ತಾಂಡವಾಚಾರ್, ಕೃಷ್ಣಚಾರ್, ಶೆಟ್ಟೀಕೆರೆ ಮೋಹನ್, ಪಂಚಲಿಂಗಾಚಾರ್ ಉಪಸ್ಥಿತರಿದ್ದರು.

ತಾಲೂಕಿನ ಇಬ್ಬರು ಅಂಗವಿಕಲರು ಗ್ರಾ.ಪಂ.ಸದಸ್ಯರು
ಚಿಕ್ಕನಾಯಕನಹಳ್ಳಿ,ಮೇ.24: ತಾಲೂಕಿನ ಕುಪ್ಪೂರು ಗ್ರಾ.ಪಂ.ಗೆ ಬೆನಕನಕಟ್ಟೆ ಕ್ಷೇತ್ರದಿಂದ ನವಚೇತನ ಅಂಗವಿಕಲರ ಶ್ರೋಯೋಬಿವೃದ್ದಿ ಸಂಘದ ಅಧ್ಯಕ್ಷ ಬಿ.ಕೆ.ರಮೇಶ್ ಆಯ್ಕೆಯಾಗಿದ್ದಾರೆ.
ಡಿ.ಎಡ್. ಪದವೀಧರರಾದ ಇವರು, ಅಂಗವಿಕಲರ ಹಕ್ಕುಬಾದ್ಯತೆಗೆ ಸಾಕಷ್ಟು ಹೋರಾಟ ಮಾಡಿದ್ದಾರಲ್ಲದೆ, ವಿಕಲ ಚೇತನರ ಕ್ಷೇಮಾಭಿವೃದ್ದಿಗಾಗಿ ಸಂಘ ಸಂಸ್ಥೆಗಳನ್ನು ಕಟ್ಟಿ ಅದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.ಉಜ್ಜೀವನ ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ನಲ್ಲಿ ಕಸ್ಟಮರ್ ರಿಲೇಷನ್ ಸ್ಟಾಫ್ ಆಗಿರುವ ಇವರು, ಚುನಾವಣೆಯ ಸಂದರ್ಭದಲ್ಲಿ ಬೆಳಗಿನ ಸಮಯದಲ್ಲಿ ತಮ್ಮ ಕಂಪನಿಯ ಕೆಲಸಗಳನ್ನು ಮಾಡಿದರೆ, ರಾತ್ರಿ ಸಮಯದಲ್ಲಿ ಪ್ರಚಾರದಲ್ಲಿ ಮಗ್ನರಾಗುತ್ತಿದ್ದರು, ಊರಿನ ಯುವಕರ ಸಹಕಾರ ಹಾಗೂ ಮತದಾರರ ಒಲವಿನಿಂದ ನಾನು ಇಂದು ಗ್ರಾ.ಪಂ.ಸದಸ್ಯನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ.
ಮಾಳಿಗೆಹಳ್ಳಿ ಕ್ಷೇತ್ರದಿಂದ ವಿಕಲ ಚೇತನ ಯೋಗರಾಜ್ ಆಯ್ಕೆ: ಮುದ್ದೇನಹಳ್ಳಿ ಗ್ರಾ.ಪಂ.ಯ ಮಾಳಿಗೆಹಳ್ಳಿ ಕ್ಷೇತ್ರದಿಂದ ಬ್ಯಾಲದಕೆರೆಯ ಅಂಗವಿಕಲ ಯೋಗರಾಜ್ ಆಯ್ಕೆಯಾಗಿದ್ದಾರೆ.
ತಾಲೂಕು ಕಛೇರಿಯಲ್ಲಿ ಗ್ರಾಮಲೆಕ್ಕಿಗರ ಖಾಸಗಿ ಸಹಾಯಕನಾಗಿ ಕೆಲಸ ಮಾಡುತ್ತಿರುವ ಈತ, ಮಾಳಿಗೆಹಳ್ಳಿ ಭಾಗದ ಜನರ ಭೂ ದಾಖಲೆಗಳು, ವರಮಾನ ಪತ್ರಗಳು ಸೇರಿದಂತೆ ಜನ ಸಾಮಾನ್ಯರ ಕೆಲಸಗಳನ್ನು ಮಾಡಿಸಿಕೊಡುವ ಮೂಲಕ ಆ ಭಾಗದ ಜನರಿಗೆ ಚಿರ ಪರಿಚಿತನಾದ ಯೋಗರಾಜ್, ಈ ಬಾರಿ ಗ್ರಾ.ಪಂ.ಚುನಾವಣೆಯಲ್ಲಿ ಸ್ಪಧರ್ಿಸಿ ಅಲ್ಲಿಯ ಘಟಾನುಘಟಿ ಸ್ಪಧರ್ಾಳುವನ್ನು ಸೋಲಿಸುವ ಮೂಲಕ ಗ್ರಾ.ಪಂ.ಗೆ ಪ್ರವೇಶ ಪಡೆದಿದ್ದಾನೆ, ಮನಸ್ಸೊಂದಿದ್ದರೆ ಯಾವ ವೈಕಲ್ಯವೂ ಅಡ್ಡಿ ಬರುವುದಿಲ್ಲ, ನಾವೂ ಸೇವೆ ಮಾಡುವುದರಲ್ಲಿ ಕಡಿಮೆ ಏನಿಲ್ಲಾ ಎಂಬುದನ್ನು ತೋರಿಸಿದ್ದಾರೆ.




ವಿದ್ಯುತ್ ಸ್ಪರ್ಶ: ಇಬ್ಬರ ಸಾವು


ಚಿಕ್ಕನಾಯಕನಹಳ್ಳಿ,ಮೇ.24: ದೇವಾಲಯವೊಂದರ ಕಾರ್ಯಕ್ರಮಕ್ಕೆ ವಿದ್ಯುತ್ ಬಲ್ಪ್ಗಳನ್ನು ಅಳವಡಿಸುತ್ತಿದ್ದಾಗ ವಿದ್ಯುತ್ ಪ್ರಸಾರವಾಗಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹಂದನಕೆರೆ ಹೋಬಳಿಯಲ್ಲಿ ನಡೆದಿದೆ.


ಅರಸೀಕೆರೆ ತಾಲ್ಲೂಕಿನ ಜೆ.ಸಿ.ಪುರ ಗ್ರಾಮದ ಸುಧಾಕರ್ ಹಾಗೂ ಹರೀಶ್ ಮೃತಪಟ್ಟ ದುದರ್ೆವಿಗಳು. ಇವರು ಸಬ್ಬೆನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೀರಿಯಲ್ ಸೆಟ್ ಬಿಡುವ ಕಾರ್ಯದಲ್ಲಿ ಮಗ್ನರಾಗಿದ್ದ ವೇಳೆ ಈ ದುರಂತ ಸಂಭವಿಸಿದೆ. ಇವರು ಅರಸೀಕೆರೆಯಿಂದ ದೇವಾಲಯದ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರೆನ್ನಲಾಗಿದೆ.


ಈ ಸಂಬಂದ ಹಂದನಕೆರೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Monday, May 17, 2010

ಜೆ.ಡಿ.ಎಸ್. ಮುನ್ನಡೆ, ಎರಡನೇ ಸ್ಥಾನದಲ್ಲಿ ಬಿ.ಜೆ.ಪಿ, ಜೆ.ಡಿ.ಯು ಪಾಳೆಯದಲ್ಲಿ ಅಸಮಧಾನ, ಕಾಂಗ್ರೆಸ್ಗೆ ಗುಟುಕು ಜೀವ.


ಚಿಕ್ಕನಾಯಕನಹಳ್ಳಿ,ಮೇ.17: ಈ ಬಾರಿಯ ಗ್ರಾಮ ಪಂಚಾಯ್ತಿ ಚುನಾವಣೆ ಯಲ್ಲಿ ಜೆ.ಡಿ.ಯು ಹಾಗೂ ಬಿ.ಜೆ.ಪಿ. ಕಾಲೆಳೆದಾಡಿ ಕೊಂಡಿದ್ದರಿಂದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ರವರಿಗೆ ಲಾಭವಾಗಿದೆ.


ತಾಲೂಕಿನ 28 ಗ್ರಾಮ ಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ರಾತ್ರಿ 10.30ರ ವೇಳೆಗೆ ದೊರೆತ ಮಾಹಿತಿಯಂತೆ ಒಟ್ಟು 464 ಸ್ಥಾನಗಳಲ್ಲಿ ಜೆ.ಡಿ.ಎಸ್. ಬೆಂಬಲಿತರು 194 ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದರೆ, ಬಿ.ಜೆ.ಪಿ. ಬೆಂಬಲಿತರು 120 ಸ್ಥಾನಗಳನ್ನು, ಜೆ.ಡಿ.ಯು. 55 ಸ್ಥಾನಗಳು, ಕಾಂಗ್ರೆಸ್ 35 ಹಾಗೂ ಸ್ವತಂತ್ರ ಅಬ್ಯಾಥರ್ಿಗಳೆಂದು ಹೇಳಿಕೊಳ್ಳುವವರ ಪೈಕಿ 60 ಜನರು ಆಯ್ಕೆಯಾಗಿದ್ದಾರೆ.


ಈ ಜಯ ಶಾಸಕರ ಗುಂಪಿಗೆ ಹರ್ಷ ತಂದುಕೊಟ್ಟಿದ್ದು, ಪಟ್ಟಣದಲ್ಲೇ ಮೊಕ್ಕಾಂ ಹೂಡಿದ್ದ ಶಾಸಕರಿಗೆ ತಮ್ಮ ಜಯದ ಸುದ್ದಿ ತಿಳಿಸಲು ಗುಂಪು ಗುಂಪಾಗಿ ತೆರಳುತ್ತಿದ್ದು ಸಾಮಾನ್ಯ ದೃಶ್ಯವಾಗಿತ್ತು.


ಈ ಬಾರಿ ತಾಲೂಕಿನ 28 ಗ್ರಾಮ ಪಂಚಾಯ್ತಿಗಳ ಪೈಕಿ 484 ಸ್ಥಾನಗಳಲ್ಲಿ 14 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿಕೆ 470 ಸ್ಥಾನಗಳಿಗೆ 1527 ಮಂದಿ ಸ್ಪಧರ್ಿಸಿದ್ದರು


ಮತ ಎಣಿಕೆಯ ಸಂದರ್ಭದಲ್ಲಿ ಕಂಡ ವಿಶೇಷ ಅಂಶಗಳೆಂದರೆ, ಮತ ಎಣಿಕೆ ಆರಂಭದಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಯ ಲಕ್ಮೇನಹಳ್ಳಿ ಕ್ಷೇತ್ರದ ಜೆ.ಡಿ.ಯು.ಬೆಂಬಲಿತ ಅಬ್ಯಾಥರ್ಿ ಉಷಾ ಪ್ರಥಮ ವಿಜೇತೆ ಅನಿಸಿಕೊಂಡರು.


ಗೋಡೆಕೆರೆಯ ಬಸವಲಿಂಗಮೂತರ್ಿ ಹಾಗೂ ಜಿ.ಎಂ.ಮಲ್ಲಿಕಾರ್ಜನಯ್ಯ ಸಮವಾಗಿ 144 ಮತಗಳನ್ನು ಪಡೆದಿದ್ದರಿಂದ ಚುನಾವಣಾಧಿಕಾರಿ ಚೆನ್ನಿಗರಾಮಯ್ಯನವರು ಲಾಟರಿ ಎತ್ತುವ ಮೂಲಕ ಬಸವಲಿಂಗಮೂತರ್ಿ ಜಯಗಳಿಸಿದ್ದಾರೆ ಎಂದು ಘೋಷಿಸಿದರೆ, ಈ ಚುನಾವಣೆಯಲ್ಲಿ ಒಂದು ಮತದಿಂದ ಗೆದ್ದವರಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಯ ಎಂ.ಎಚ್.ಕಾವಲಿನ ವಿನೋದ ಬಾಯಿ(110) ತನ್ನ ಸಮೀಪ ಪ್ರತಿ ಸ್ಪಧರ್ಿ ನೇತ್ರಾವತಿ(109) ಗಿಂತ ಒಂದು ಮತ ಹೆಚ್ಚೆಗೆ ಪಡೆದು ಜಯಗಳಿಸಿದ್ದಾರೆ.


ತೀರ್ಥಪುರ ಗ್ರಾ.ಪಂ.ಯ ಕಾಮಾಕ್ಷಮ್ಮ(286), ಮಂಜುಳ(285) ಮತಗಳನ್ನು ಪಡೆದಿದ್ದರಿಂದ ಕಾಮಾಕ್ಷಮ್ಮನಿಗೆ ಅದೃಷ್ಟ ಒಲಿದಿದೆ. ಜೆ.ಸಿ.ಪುರ ಗ್ರಾ.ಪಂ.ಯ ಹಾಲುಗೊಣದಲ್ಲಿ ದೇವರಾಜು ಎರಡು ಮತಗಳಿಂದ ಜಯಗಳಿಸಿದ್ದಾರೆ, ಹೊನ್ನೆಬಾಗಿ ಗ್ರಾ.ಪಂ.ಯ ಬುಳ್ಳೇನಹಳ್ಳಿಯ ಉದಯಕುಮಾರ್ ಎರಡು ಮತಗಳ ಅಂತರದಿಂದ ಜಯಗಳಿಸಿದ್ದಾರೆ.


ಮತ ಎಣಿಕೆ ನಡೆಯುತ್ತಿದ್ದ ಸಕರ್ಾರಿ ಪದವಿ ಪೂರ್ವ ಕಾಲೇಜ್ನ ಬಳಿ ಸಾವಿರಾರು ಜನರು ತಮ್ಮ ಪರವಾದ ವ್ಯಕ್ತಿಗಳ ಫಲಿತಾಂಶವನ್ನು ತಿಳಿಯಲು ತವಕದಿಂದ ಕಾದು ಕುಳಿದಿದ್ದರು, ನೂರಾರು ವಾಹನಹಳು ಸಕರ್ಾರಿ ಹೈಸ್ಕೂಲ್ ಮೈದಾನದಲ್ಲಿ ನಿಂತಿದ್ದು ಇಡೀ ದಿನ ಪಟ್ಟಣದ ಹೈಸ್ಕೂಲ್ ಆವರಣ ಹಾಗೂ ಕಾಲೇಜ್ ಆವರಣ ಜನ ಜಂಗುಳಿಯಿಂದ ಕೂಡಿತ್ತು. ಈ ಸಂದರ್ಭದಲ್ಲಿ ಜಿಲ್ಲಾದ್ಯಂತ ನಿಷೇದಾಜ್ಞೆ ಜಾರಿಯಲ್ಲಿದ್ದರು ಅದು ಜನರ ಜಯಘೋಷಣೆಗೆ ಹಾಗೂ ಮೆರವಣಿಗೆಗೆ ಯಾವುದೇ ಕೆಡಕನ್ನು ಉಂಟು ಮಾಡಿರಲಿಲ್ಲ.


ರಾತ್ರಿ 10.45 ಆದರೂ ಇನ್ನೂ ಯಳನಡು ಗ್ರಾ.ಪಂ.ಯ ತಮ್ಮಡಿಹಳ್ಳಿ ಕ್ಷೇತ್ರ ಮತ ಎಣಿಕೆ ನಡೆಯುತ್ತಲೇ ಇತ್ತು.


ಚುನಾವಣೆ ಶಾಂತ ರೀತಿಯಲ್ಲಿ ಸುವ್ಯವಸ್ಥಿತವಾಗಿ ನಡೆಯಿತು, ಚುನಾವಣೆಯ ನೇತೃತ್ವವನ್ನು ವಹಿಸಿದ್ದ ತಹಶೀಲ್ದಾರ್ ಟಿ.ಸಿ.ಕಾಂತರಾಜು ಹಾಗೂ ಸಿ.ಪಿ.ಐ, ಪಿ.ರವಿ ಪ್ರಸಾದ್ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ವರ್ಗ ಚುನಾವಣೆ ಯಶಸ್ವಿಯಾಗಲು ಸಾಕಷ್ಟು ಶ್ರಮಿಸಿದೆ.



Friday, May 14, 2010


ಸಕರ್ಾರಿ ಪ್ರಥಮ ದಜರ್ೆ ಕಾಲೇಜ್ ಪ್ರವೇಶಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.14: 2010-11ನೇ ಸಾಲಿನ ಬಿ.ಎ, ಬಿ.ಕಾಂ, ಬಿ.ಬಿ.ಎಂ, ಬಿ.ಎಸ್.ಡಬ್ಲಿಯೂ ಪ್ರಥಮ ಪದವಿ ತರಗತಿಗಳಿಗೆ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅಜರ್ಿಗಳನ್ನು ಆಹ್ವಾನಿಸಲಾಗಿದೆ ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಕರ್ಾರಿ ಪ್ರಥಮ ದಜರ್ೆಯಲ್ಲಿನ ಹೊಸ ಕಟ್ಟಡದಲ್ಲಿ ಅನುಭವಿ ಉಪನ್ಯಾಸಕರನ್ನು ಎಲ್ಲಾ ಕೋಸರ್್ಗಳಿಗೆ ನೇಮಿಸಲಾಗಿದ್ದು, ವಿದ್ಯಾಥರ್ಿಗಳಿಗೆ ಸ್ಮಧರ್ಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು, ವಿಶೇಷ ಉಪನ್ಯಾಸ, ಯೋಗ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗುವುದು ಮತ್ತು ಸುಸಜ್ಜಿತವಾದ ಗ್ರಂಥ ಭಂಡಾರದ ವ್ಯವಸ್ಥೆಯಿದೆ ಎಂದಿರುವ ಅವರು, ಈ ಬಾರಿ ಉತ್ತಮ ಪಲಿತಾಂಶ ಬಂದಿದ್ದು ಕಾಲೇಜಿಗೆ ಸೇರಬಯಸುವ ವಿದ್ಯಾಥರ್ಿಗಳು ಹೆಚ್ಚಿನ ವಿವರಗಳಿಗೆ ಪ್ರಾಂಶುಪಾಲರ ದೂರವಾಣಿ. 9481067388 ಮತ್ತು ಅಧೀಕ್ಷಕರು 9481067388 ಸಂಪಕರ್ಿಸಬಹುದು ಎಂದು ತಿಳಿಸಿದ್ದಾರೆ.

ಜಿ.ಜೆ.ಸಿ.ಯ ಪಿ.ಯು.ಸಿ.ಫಲಿತಾಂಶ ಶೆ.75.
ಚಿಕ್ಕನಾಯಕನಹಳ್ಳಿ,ಮೇ.7: ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜ್ನ ದ್ವೀತಿಯ ಪಿ.ಯು.ಸಿ. ಫಲಿತಾಂಶ ಶೇ. 75.84 ಬಂದಿದೆ ಎಂದು ಪ್ರಾಂಶುಪಾಲ ಎಂ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಫಲಿತಾಂಶ 81.87 ಆಗಿದ್ದರೆ, ವಾಣಿಜ್ಯ ವಿಭಾಗದ ಫಲಿತಾಂಶ ಶೇ.74.40 ಆಗಿದೆ, ವಿಜ್ಞಾನ ವಿಭಾಗದಲ್ಲಿ ಶೇ.71.26 ರಷ್ಟು ಬಂದಿದೆ.
ವಿಜ್ಙಾನ ವಿಭಾಗದಲ್ಲಿ ಶೃತಿ(530) ಪಡೆದು ಕಾಲೇಜ್ಗೆ ಪ್ರಥಮಳೆನಿಸಿಕೊಂಡಿದ್ದರೆ, ಕಿರಣ್. ಎಲ್(516) ದ್ವೀತಿಯ ಸ್ಥಾನ ಪಡೆದಿದ್ದಾರೆ, ಈ ವಿಭಾಗದಲ್ಲಿ 3 ವಿದ್ಯಾಥರ್ಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದರೆ, 23 ಪ್ರಥಮ, 17 ದ್ವೀತಿಯ ಹಾಗೂ 19 ತೃತೀಯ ದಜರ್ೆಯಲ್ಲಿ ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ ಕರುಣ ಸಿ.ಜಿ.(530) ಅಂಕ ಪಡೆದು ಪ್ರಥಮ ಸ್ಥಾನದಲ್ಲಿದ್ದಾನೆ, ಮಂಜುನಾಥ್ ಜಿ.(499) ದ್ವೀತಿಯ ಸ್ಥಾನ ಪಡೆದಿದ್ದಾರೆ, ಕಾಲೇಜ್ನಲ್ಲಿ 61 ವಿದ್ಯಾಥರ್ಿಗಳು ಪ್ರಥಮ ದಜರ್ೆಯಲ್ಲಿ ಪಾಸಾಗಿದ್ದು, 38 ವಿದ್ಯಾಥರ್ಿಗಳು ದ್ವಿತೀಯ ದಜರ್ೆಯಲ್ಲಿ ಹಾಗೂ 40 ವಿದ್ಯಾಥರ್ಿಗಳು ತೃತೀಯ ದಜರ್ೆಯಲ್ಲಿ ಪಾಸಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ರಮೇಶ್ ಸಿ.ಎಂ.(510) ಪ್ರಥಮ, ಗುರುಸಿದ್ದರಾಮ ಕೆ.(492) ದ್ವೀತಿಯ, ಈ ವಿಭಾಗದಲ್ಲಿ ಒಂದು ಡಿಸ್ಟಿಂಕ್ಷನ್, 41 ಪ್ರಥಮ ಹಾಗೂ 35 ದ್ವೀತಿಯ ಹಾಗೂ 19 ತೃತೀಯ ದಜರ್ೆಯಲ್ಲಿ ಪಾಸಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಬಸವ'ನಿಗೆ ಭಕ್ತಿಪೂರ್ವಕ ಶ್ರದ್ದಾಂಜಲಿ
ಚಿಕ್ಕನಾಯಕನಹಳ್ಳಿ,ಮೇ.14: ಶೆಟ್ಟೀಕೆರೆ ಹೋಬಳಿಯ ಹೆಂಜರೇಬೈರೇದೇವರು, ಶ್ರೀ ಗುರುಸಿದ್ದರಾಮೇಶ್ವರಸ್ವಾಮಿ ದೇವಾಲಯದ ಶಾಸ್ತ್ರೋತ್ತವಾಗಿ ಮುದ್ರೆ ಒತ್ತಿದ್ದ ಬಸವ, ದೇವಾಲಯದ ಮುಂದೆ ಸ್ವರ್ಗಸ್ಥವಾಗಿದ್ದು ಎಂಟು ಹಳ್ಳಿಯ ಗ್ರಾಮಸ್ಥರು ಒಟ್ಟಿಗೆ ಸೇರಿ ಕಾರೇಹಳ್ಳಿ ರಂಗನಾಥ ದೇವಾಲಯದ ಮುಂದೆ ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ಕ್ರಿಯಾಸಮಾಧಿಯನ್ನು ನೇರವೇರಿಸಲಾಯಿತು ಎಂದು ದುಗಡಿಹಳ್ಳಿ ಶಂಕರಪ್ಪ ತಿಳಿಸಿದ್ದಾರೆ
ಗುಬ್ಬಿ ತಾಲೂಕು ನಿಟ್ಟೂರಿನ ಚಂದ್ರಶೇಖರಯ್ಯ ನವರು ಒಂದು ಬಸವಣ್ಣನನ್ನು ದೇವಾಲಯಕ್ಕೆ ಶಾಸ್ತ್ರೋಕ್ತವಾಗಿ ಮುದ್ರೆ ಒತ್ತಿ ಬಿಟ್ಟಿದ್ದು ಬಸವಣ್ಣನು ಪ್ರತಿ ಮನೆಗೆ ಹೋಗಿ ಪೂಜೆ ಮಾಡಿಸಿಕೊಂಡು ಪ್ರಸಾದ ಸ್ವೀಕರಿಸುತ್ತಿದ್ದ ಬಸವಣ್ಣ ಅಕಾಲಿಕ ಸ್ವರ್ಗಸ್ಥವಾದ ಕಾರಣ ಭಕ್ತಾಧಿಗಳು ಅಂತಿಮ ಕಾರ್ಯವನ್ನು ಭಕ್ತಿಭಾವದಿಂದ ನೆರವೇರಿಸಿದರು. ನಿಟ್ಟೂರಿನ ಭಕ್ತಾದಿಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದರು.

Monday, May 10, 2010





ಮತಪೆಟ್ಟಿಗೆಗಳಿದ್ದ ಭದ್ರತಾಕೊಠಡಿಗೆ ನಿಯೋಜನೆಗೊಂಡಿದ್ದ ಎ.ಎಸೈ.ಸಾವು


ಚಿಕ್ಕನಾಯಕನಹಳ್ಳಿ,ಮೇ.9: ಮತಪೆಟ್ಟಿಗೆ ಇಟ್ಟಿದ್ದ ಭದ್ರತಾ ಕೊಠಡಿಯನ್ನು ಕಾಯಲು ನಿಯೋಜಿಸಿದ್ದ ಹುಳಿಯಾರು ಎ.ಎಸೈ. ಈರಮರಿಯಪ್ಪ(55) ಕರ್ತವ್ಯ ನಿರ್ವಹಿಸುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.


ತಾಲೂಕಿನ ಗ್ರಾ.ಪಂ. ಚುನಾವಣೆಯ ಮತಪೆಟ್ಟಿಗೆಯನ್ನು ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಈಡಲಾಗಿತ್ತು, ಇದರ ಭದ್ರತಾ ವ್ಯವಸ್ಥೆಗಾಗಿ ಹುಳಿಯಾರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹುಳಿಯಾರಿನ ಎಸೈ.ಪಾವತಮ್ಮ ಹಾಗೂ ಎ.ಎಸೈ.ಈರಮರಿಯಪ್ಪನವರು ಭಾನುವಾರ ಭದ್ರತಾ ಕೊಠಡಿಯಲ್ಲಿದ್ದರು, ಬೆಳಗಿನ 9ರ ಸುಮಾರಿಗೆ ಈರಮರಿಯಪ್ಪನವರು ಹೃದಯಾಘಾತದಿಂದ ವಾಂತಿ ಮಾಡಿಕೊಂಡಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ನೀಡುವ ಮೊದಲೇ ಸಾವನ್ನಪ್ಪಿದ್ದಾರೆ.


ಸ್ಥಳಕ್ಕೆ ಡಿ.ವೈ.ಎಸ್.ಪಿ. ಶಿವರುದ್ರಸ್ವಾಮಿ, ವೃತ್ತ ನಿರೀಕ್ಷಕ ಪಿ.ರವಿಪ್ರಸಾದ್ ಆಸ್ಪತ್ರೆಗೆ ಆಗಮಿಸಿ ಕಳೆ ಬರಹವನ್ನು ಈರ ಮರಿಯಪ್ಪನವರ ಸ್ವಂತಃ ಸ್ಥಳವಾದ ಶಿರಾ ತಾಲೂಕಿನ ರತ್ನಸಂದ್ರಕ್ಕೆ ಕಳುಹಿಸಿದರು. ಇವರು ಇಲಾಖೆಯಲ್ಲಿ 33 ವರ್ಷ ಸೇವೆಸಲ್ಲಿಸಿದ್ದರು. ಪತ್ನಿ, ಮಕ್ಕಳು ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.



ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷರಿಗೆ ಮಾತೃ ವಿಯೋಗ


ಚಿಕ್ಕನಾಯಕನಹಳ್ಳಿ,ಮೇ.9: ಜಿಲ್ಲಾ ದೇವಾಂಗ ಸಂಘದ ಉಪಾಧ್ಯಕ್ಷ, ಮಾಜಿ ಪುರಸಭಾ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಿ.ಟಿ.ವರದರಾಜು ರವರ ತಾಯಿ ನಾಗಮ್ಮ(72) ಸಾವನ್ನಪಿದ್ದಾರೆ.


ತಾಲೂಕು ದೇವಾಂಗ ಸಂಘದ ಮಾಜಿ ಅಧ್ಯಕ್ಷರಾದ ಕೆ.ಟಿ.ತಿಮ್ಮರಾಯಪ್ಪನವರ ಪತ್ನಿ ನಾಗಮ್ಮನವರು ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ.


ಇವರಿಗೆ ನಾಲ್ಕು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ನಾಲ್ಕು ಗಂಡು ಮಕ್ಕಳಲ್ಲಿ ಸಿ.ಟಿ.ವರದರಾಜು ಹಿರಿಯ ಮಗನಾದರೆ, ಚಿತ್ರೋದ್ಯಮದಲ್ಲಿ ಗುರುತಿಸಿಕೊಂಡಿರುವ ಸಿ.ಟಿ.ಕೋದಂಡರಾಮಯ್ಯ, ಬಾದಮಿ ಬನಶಂಕರಿ ಹಾಡರ್್ವೇರ್ನ ಮಾಲೀಕ ಸಿ.ಟಿ.ಪಾಂಡುರಾಜ್ ಹಾಗೂ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ರೈಸ್ ಮೀಲನ ಮಾಲೀಕ ಸಿ.ಟಿ.ಜಗಧೀಶ್ ಸೇರಿದಂತೆ ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.


ತಾಲೂಕು ದೇವಾಂಗ ಸಂಘ, ಪಟ್ಟಣದ ಬಯಲಾಟ ಕಲಾವಿದರ ಸಂಘವೂ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ದರ್ಶನ ಪಡೆದರು.




ಬಹುತೇಕ ಶಾಂತ ಸ್ಥಿತಿ: ಶೇ.85 ರಷ್ಟು ಮತದಾನ


ಚಿಕ್ಕನಾಯಕನಹಳ್ಳಿ,ಮೇ.9: ತಾಲೂಕಿನ ಗ್ರಾಮ ಪಂಚಾಯ್ತಿ ಮತದಾನದ ಸಂದರ್ಭದಲ್ಲಿ ಸಣ್ಣ ಪುಟ್ಟ ಗಲಾಟೆಗಳು, ಲಘು ಲಾಠಿ ಪ್ರಹಾರ, ಮತ ಕೇಂದ್ರ ಒಂದರಲ್ಲಿ ಬ್ಯಾಲೇಟ್ ಪೇಪರ್ ಹರಿದು ಹಾಕಿರುವುದು ಬಿಟ್ಟರೆ ಬಹುತೇಕ ಶಾಂತವಾಗಿ ನಡೆದಿದೆ. ತಾಲೂಕಿನಲ್ಲಿ ಒಟ್ಟು ಶೇ.85 ಮತದಾನ ನಡೆದಿದೆ.


ತಾಲೂಕಿನ 28 ಗ್ರಾ.ಪಂ.ಗಳಲ್ಲಿ 484 ಸ್ಥಾನಗಳಿಗೆ 1527 ಅಬ್ಯಾಥರ್ಿಗಳು ಅದೃಷ್ಟ ಪರೀಕ್ಷೆಗೆ ಒಡ್ಡಿದ್ದ ಈ ಚುನಾವಣೆ, ಬಹುತೇಕ ಗ್ರಾಮೀಣ ಜನರ ಕುತೂಹಲಕ್ಕೆ ಕಾರಣವಾಗಿದೆ. ಬೆಳಗಿನಿಂದಲೇ ಚುರುಕುಗೊಂಡಿದ್ದ ಇಲ್ಲಿನ ಮತದಾರರು ಮಧ್ಯಾಹ್ನ 12ರವೇಳೆಗೆ ಶೇ.60ರಷ್ಟು ಮತದಾನವನ್ನು ಪೂರ್ಣಗೊಳಿಸಿದ್ದರು.


ಪತ್ರಿಕೆ ತಾಲೂಕಿನ ಹಲವು ಮತಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು ಬಂದ ಹಲವು ವಿಷಯಗಳ ಪೈಕಿ ಕಾತ್ರಿಕೆಹಾಳ್ನಲ್ಲಿ ಮತದಾರರ ಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ಸಹಿ ಹಾಕಿಸಿತ್ತಾ ಕೂತರೆ ತಡೆವಾಗುತ್ತದೆ ಎಂಬ ನಿಲುವಿನಿಂದ ಅಲ್ಲಿನ ಪಿ.ಆರ್.ಓ. ಮತದಾರರ ಹೆಬ್ಬೆಟ್ಟಿನ ಗುರ್ತನ್ನು ಹಾಕಿಸಿಕೊಳ್ಳುತ್ತಿದ್ದರು, ರಾಮನಹಳ್ಳಿಯಲ್ಲಿ ಸುವರ್ಣಮ್ಮ ಎಂಬ ವಯೋವೃದ್ದಿಯನ್ನು ಮತಕೇಂದ್ರಕ್ಕೆ ಕರೆದುಕೊಂಡು ಬಂದ ಫಾಲಾಕ್ಷಯ್ಯ ಎಂಬವರು, ಪಿ.ಆರ್.ಓ ಜೊತೆ ಅನುಚಿತವಾಗಿ ವತರ್ಿಸಿ, ವಾಗ್ವಾದಕ್ಕೆ ಇಳಿದ ಸಂದರ್ಭದಲ್ಲಿ ಮತಪತ್ರವನ್ನೇ ಹರಿದು ಹಾಕಿರುವ ಘಟನೆ ವರದಿಯಾಗಿದೆ, ತಿಮ್ಮನಹಳ್ಳಿಯ ಬ್ಲಾಕ್ ಎರಡರಲ್ಲಿ ಮತಗಟ್ಟೆ ಅಧಿಕಾರಿಗಳು ಮಧ್ಯಾಹ್ನ ಊಟಕ್ಕಾಗಿ ಮತಕೇಂದ್ರದ ಬಾಗಿಲು ಮುಚ್ಚಿ ಊಟ ಮುಗಿಸಿಕೊಂಡ ನಂತರ ಮತದಾನದ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.


ತಿಮ್ಮನಹಳ್ಳಿಯ ಬ್ಲಾಕ್ 1 ಮತ್ತು 2 ಮತ ಕೇಂದ್ರವಿದ್ದ ಸ.ಮಾ.ಹಿ.ಪ್ರಾ.ಶಾಲೆಯ ಒಳಗೆ ಗುಂಪೊಂದು ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಜನರನ್ನು ಚದುರಿಸಲು ಲಘುಲಾಠಿ ಪ್ರಹಾರ ನಡೆಸಿದ್ದಾರೆ, ಹಾಲುಗೊಣ, ಗೌರಸಾಗರ, ಮುದ್ದೇನಹಳ್ಳಿ, ಬಂಗಾರಗೆರೆ,ಮೇಲನಹಳ್ಳಿ, ಅಣೇಕಟ್ಟೆ, ಅರಳೀಕೆರೆ, ದಿಬ್ಬದಹಳ್ಳಿಗಳಲ್ಲಿ ಮತದಾರ ಸಂಖ್ಯೆ ಹೆಚ್ಚಿದ್ದರಿಂದ ಕೆಲ ಸಮಯ ಗೊಂದಲವೇರ್ಪಟಿದ್ದು ಬಿಟ್ಟರೆ ಬಹುತೇಕ ಶಾಂತವಾಗಿ ಮತದಾನ ನಡೆದಿದೆ.


ಕಾತ್ರಿಕೆಹಾಳ್ನ ನಾಗಯ್ಯನ ಸಾವಿಗೆ ಕಾರಣವೇನು ?: ಕಾತ್ರೆಕೆಹಾಳ್ನ ನಾಯಕರ ನಾಗಯ್ಯ ಚುನಾವಣೆಯ ಮದ್ಯ ಕುಡಿದು ಬಾಯಿ, ಮೂಗಿನಲ್ಲಿ ರಕ್ತಕಾರಿಕೊಂಡು ಸಾವನ್ನಪ್ಪಿದ್ದಾನೆ, ಮೃತ ದೇಹವನ್ನು ಸುಡಲಾಗಿದೆ. ಇದರಿಂದ ಇಲ್ಲಿನ ಕೆಲವು ಜನರು ನಕಲಿ ಮದ್ಯದಿಂದ ನಾಗಯ್ಯ ಸಾವನ್ನಪ್ಪಿದ್ದಾನೆ ಎಂದರೆ, ಇನ್ನೂ ಕೆಲವು ಜನ ಆತ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ ಎನ್ನುತ್ತಾರೆ. ಸರಿಯಾದ ಕಾರಣ ತಿಳಿಯಬೇಕಾಗಿದ್ದರೆ ಶವ ಪರೀಕ್ಷೆ ಮಾಡಿಸಿದ್ದರೆ ಸ್ಪಷ್ಟ ಕಾರಣ ತಿಳಿಯುವುದು ಆದರೆ ಹಾಗಾಗದೆ ಶವಕ್ಕೆ ಅಗ್ನಿ ಸ್ಪರ್ಶ ಮಾಡಿದ್ದರಿಂದ ಈ ಸಾವು ಚಚರ್ೆಗೆ ಗ್ರಾಸವಾಗಿದೆ.



ಬಿ.ಸಿ.ಎಂ. ವಸತಿ ನಿಲಯಕ್ಕೆ ಅಜರ್ಿ ಆಹ್ವಾನ


ಚಿಕ್ಕನಾಯಕನಹಳ್ಳಿ,ಮೇ.08: ತಾಲೂಕಿನಲ್ಲಿರುವ ಬಿ.ಸಿ.ಎಂ ವಿದ್ಯಾಥರ್ಿ ನಿಲಯಗಳಿಗೆ 2010-11ನೇ ಸಾಲಿನ ಪ್ರವೇಶಕ್ಕಾಗಿ ಆಸಕ್ತಿಯುಳ್ಳ ವಿದ್ಯಾಥರ್ಿಗಳಿಂದ ಅಜರ್ಿಯನ್ನು ಆಹ್ವಾನಿಸಲಾಗಿದೆ ಎಂದು ಪ್ರಭಾರ ತಾಲೂಕು ಕಾರ್ಯನಿರ್ವಹಣಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಚಿಕ್ಕನಾಯಕನಹಳ್ಳಿ ಟೌನ್, ಹುಳಿಯಾರು, ತಿಮ್ಮನಹಳ್ಳಿ, ಕಂದಿಕೆರೆ, ಹೊಯ್ಸಳಕಟ್ಟೆ, ಬೆಳುಗುಲಿ ಮೆಟ್ರಿಕ್ ಪೂರ್ವ ಬಾಲಕರ ಅನುದಾನಿತ ವಿದ್ಯಾಥರ್ಿ ನಿಲಯಗಳಲ್ಲಿ ಅಜರ್ಿಗಳನ್ನು ಆಹ್ವಾನಿಸಿದ್ದು ಅಜರ್ಿಯನ್ನು ಸಂಬಂದಿಸಿದ ವಿದ್ಯಾಥರ್ಿ ನಿಲಯದ ಮೇಲ್ವಿಚಾರಕರುಗಳಿಂದ ಪಡೆದು ಜೂನ್ 10ರ ಸಂಜೆ 5ಗಂಟೆಯೊಳಗೆ ಮೇಲ್ವಿಚಾರಕರುಗಳಿಗೆ ಸಲ್ಲಿಸುವುದು.


ಅಜರ್ಿಸಲ್ಲಿಸುವವರು ಸಕರ್ಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ 5ರಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿಗಳಿಗೆ ಮಾತ್ರ ಈ ಪ್ರವೇಶ ಕಲ್ಪಿಸಲಾಗಿದ್ದು ಉಚಿತ ಊಟ, ಸಮವಸ್ತ್ರ, ಲೇಖನ ಸಾಮಗ್ರಿ, ಹಾಸಿಗೆಹೊದಿಕೆ, ನುರಿತ ಅಧ್ಯಾಪಕರಿಂದ ಟ್ಯೂಶನ್ ನೀಡಲಾಗುವುದು ಮತ್ತು ಅನುದಾನಿತ ವಿದ್ಯಾಥರ್ಿನಿಲಯಗಳಲ್ಲಿ ಉಚಿತ ಊಟ, ವಸತಿ ಮಾತ್ರ ನೀಡಲಾಗುತ್ತದೆ. ಮತ್ತು ಸೇರ ಬಯಸುವ ವಿದ್ಯಾಥರ್ಿಗಳು ತಮ್ಮ ಹಿಂದಿನ ವರ್ಷದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಪ್ರವರ್ಗ 11ಎ, 11ಬಿ, 111ಎ, 111ಬಿ ಗುಂಪಿಗೆ ಸೇರಿದ ವಿದ್ಯಾಥರ್ಿಗಳಿಗೆ ವಾಷರ್ಿಕ ರೂ 15000ಸಾವಿರ ಆದಾಯ ಮಿತಿ ಇದ್ದು ಪ್ರವರ್ಗ1 ಹಾಗೂ ಪರಿಶಿಷ್ಠ ಜಾತಿ, ಪಂಗಡದ ವಿದ್ಯಾಥರ್ಿಗಳಿಗೆ ಆದಾಯ ಮಿತಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.



Saturday, May 8, 2010


ಜಿ.ಜೆ.ಸಿ.ಯ ಪಿ.ಯು.ಸಿ.ಫಲಿತಾಂಶ ಶೆ.75

ಚಿಕ್ಕನಾಯಕನಹಳ್ಳಿ,ಮೇ.7: ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜ್ನ ದ್ವೀತಿಯ ಪಿ.ಯು.ಸಿ. ಫಲಿತಾಂಶ ಶೇ. 75.84 ಬಂದಿದೆ ಎಂದು ಪ್ರಾಂಶುಪಾಲ ಎಂ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಫಲಿತಾಂಶ 81.87 ಆಗಿದ್ದರೆ, ವಾಣಿಜ್ಯ ವಿಭಾಗದ ಫಲಿತಾಂಶ ಶೇ.74.40 ಆಗಿದೆ, ವಿಜ್ಞಾನ ವಿಭಾಗದಲ್ಲಿ ಶೇ.71.26 ರಷ್ಟು ಬಂದಿದೆ.
ವಿಜ್ಙಾನ ವಿಭಾಗದಲ್ಲಿ ಶೃತಿ(530) ಪಡೆದು ಕಾಲೇಜ್ಗೆ ಪ್ರಥಮಳೆನಿಸಿಕೊಂಡಿದ್ದರೆ, ಕಿರಣ್. ಎಲ್(516) ದ್ವೀತಿಯ ಸ್ಥಾನ ಪಡೆದಿದ್ದಾರೆ, ಈ ವಿಭಾಗದಲ್ಲಿ 3 ವಿದ್ಯಾಥರ್ಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದರೆ, 23 ಪ್ರಥಮ, 17 ದ್ವೀತಿಯ ಹಾಗೂ 19 ತೃತೀಯ ದಜರ್ೆಯಲ್ಲಿ ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ ಕರುಣ ಸಿ.ಜಿ.(530) ಅಂಕ ಪಡೆದು ಪ್ರಥಮ ಸ್ಥಾನದಲ್ಲಿದ್ದಾನೆ, ಮಂಜುನಾಥ್ ಜಿ.(499) ದ್ವೀತಿಯ ಸ್ಥಾನ ಪಡೆದಿದ್ದಾರೆ, ಕಾಲೇಜ್ನಲ್ಲಿ 61 ವಿದ್ಯಾಥರ್ಿಗಳು ಪ್ರಥಮ ದಜರ್ೆಯಲ್ಲಿ ಪಾಸಾಗಿದ್ದು, 38 ವಿದ್ಯಾಥರ್ಿಗಳು ದ್ವಿತೀಯ ದಜರ್ೆಯಲ್ಲಿ ಹಾಗೂ 40 ವಿದ್ಯಾಥರ್ಿಗಳು ತೃತೀಯ ದಜರ್ೆಯಲ್ಲಿ ಪಾಸಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ರಮೇಶ್ ಸಿ.ಎಂ.(510) ಪ್ರಥಮ, ಗುರುಸಿದ್ದರಾಮ ಕೆ.(492) ದ್ವೀತಿಯ, ಈ ವಿಭಾಗದಲ್ಲಿ ಒಂದು ಡಿಸ್ಟಿಂಕ್ಷನ್, 41 ಪ್ರಥಮ ಹಾಗೂ 35 ದ್ವೀತಿಯ ಹಾಗೂ 19 ತೃತೀಯ ದಜರ್ೆಯಲ್ಲಿ ಪಾಸಾಗಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

Wednesday, May 5, 2010




ಗೋಡೆಕೆರೆ ರಂಭಾಪುರಿ ಮಠದವತಿಯಿಂದ ಜಿಲ್ಲಾ ಮಟ್ಟದ ಭಜನಾ ಮೇಳ
ಚಿಕ್ಕನಾಯಕನಹಳ್ಳಿ,ಮೇ.5: ಜಿಲ್ಲಾ ಮಟ್ಟದ ಭಜನಾ ಮೇಳವನ್ನು ಇದೇ 10ರಂದು ಶ್ರೀಮದ್ ರಂಭಾಪುರಿ ಶಾಲಾ ಸಂಕೀರ್ಣದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರ ಸ್ವಾಮಿ ತಿಳಿಸಿದ್ದಾರೆ.
ಶ್ರೀ ಬಸವೇಶ್ವರ ಜಯಂತಿ ಮಹೋತ್ಸವದ ಅಂಗವಾಗಿ ಈ ಮೇಳವನ್ನು ಏರ್ಪಡಿಸಿದ್ದು, ಸ್ಪಧರ್ೆಯಲ್ಲಿ ನಿಜಗುಣರ ತತ್ವಪದಗಳು, ಸರ್ಪಭೂಷಣ ಶಿವಯೋಗಿಗಳ ಪದಗಳು, ಶಂಕರಾನಂದರ ತತ್ವಪದಗಳು, ಹಾಗೂ ಕೈವಲ್ಯ ನವನೀತ ತತ್ವಪದಗಳಿಗೆ ಆದ್ಯತೆ ಕೊಡಲಾಗುವುದು ಎಂದ ಅವರು, ಸ್ಪಧರ್ೆಯಲ್ಲಿ ವಯೋಮಿತಿ ಅಡ್ಡಿಇಲ್ಲ, ಹೆಣ್ಣು, ಗಂಡು ಮತ್ತು ಎಳೆಯ ಮಕ್ಕಳಿಗೂ ಅವಕಾಶವಿದೆ, ಪ್ರತಿ ತಂಡಕ್ಕೆ ಕಾಲಮಿತಿಯನ್ನು ನೀಡಲಾಗುವುದು. ವಿಜೇತರಾದವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು ಎಂದರು.
ಉದ್ಘಾಟನಾ ಸಮಾಂಭವು ಮೇ 10ರ ಬೆಳಿಗ್ಗೆ 10ಕ್ಕೆ ಕೆ.ಬಿ.ಕ್ರಾಸ್ನ ಬಳಿ ಇರುವ ಶ್ರೀಮದ್ ರಂಭಾಪುರಿ ಶಾಲಾ ಸಂಕೀರ್ಣದಲ್ಲಿ ನಡೆಯುವ ಈ ಕಾರ್ಯಕ್ರಮದ ನೇತೃತ್ವವನ್ನು ಗೋಡೇಕರೆ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮದೇಶೀಕೇಂದ್ರ ಸ್ವಾಮಿ ವಹಿಸುವರು, ಕಾರ್ಯಕ್ರಮದಲ್ಲಿ ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮಿ, ಗೋಡೆಕೆರೆ ಚರ ಪಟ್ಟಾಧ್ಯಕ್ಷ ಮೃತ್ಯುಂಜಯ ದೇಶಿಕೇಂದ್ರ ಸ್ವಾಮಿ, ವಿರಕ್ತ ಮಠದ ಡಾ.ಶ್ರೀ. ಡಾ. ಅಭಿನವ ಮಲ್ಲಿಕಾರ್ಜನ ದೇಶಿಕೇಂದ್ರ ಸ್ವಾಮಿ ಉಪಸ್ಥಿತರಿರುವರು.
ಸಮಾರೋಪ ಸಮಾರಂಭ ಇದೇ ದಿನ 4ರಂದು ಕೆರೆಗೋಡಿ-ರಂಗಾಪುರ ಸುಕ್ಷೇತ್ರ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ, ಅಧ್ಯಕ್ಷತೆಯನ್ನು ತಿಪಟೂರು ಶಾಸಕ ಬಿ.ಸಿ.ನಾಗೇಶ್ ವಹಿಸಲಿದ್ದಾರೆ, ಬಹುಮಾನ ವಿತರಣೆಯನ್ನು ಶ್ರೀಮದ್ ರಂಭಾಪುರಿ ವಿದ್ಯಾ ಸಂಸ್ಥೆಯ ಕಾರ್ಯದಶರ್ಿ ಕೆ.ಜಿ.ವೆಂಕಟರಾಮಯ್ಯ, ಮುಖ್ಯ ಅತಿಥಿಗಳಾಗಿ ನೆಸ್ಟರ್ ಪ್ರಾಜೆಕ್ಟನ ಎಂ.ಡಿ, ಕೆ.ಜಿ.ಶಿವರುದ್ರಯ್ಯ ಭಾಗವಹಿಸುವರು.
ಹೆಚ್ಚಿನ ವಿವರಗಳಿಗೆ ಮಠದ ದೂರವಾಣಿ 9448709755 ಅಥವಾ 9900684694 ಇಲ್ಲಿ ಸಂಪಕರ್ಿಸಬಹುದು.


ಕಾಮರ್ಿಕರ ಬಗ್ಗೆ ದುಡಿದಾಕೆಗೆ ಗ್ರಾ.ಪಂ. ಸದಸ್ಯೆಯಾಗುವ ಆಸೆ
ಚಿಕ್ಕನಾಯಕನಹಳ್ಳಿ,ಮೇ.5: ತಾಲೂಕಿನ ಗೋಡೆಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗೋಡೆಕೆರೆಯ ಬ್ಲಾಕ್ 1ರ ಮಹಿಳಾ ಮೀಸಲಾತಿ ಕ್ಷೇತ್ರಕ್ಕೆ ನೇಪಾಳ, ಹೊಸದಿಲ್ಲಿ ಸೇರಿದಂತೆ ದೇಶ ವಿದೇಶಗಳಲ್ಲಿನ ಕಾಮರ್ಿಕರ ಸ್ಥಿತಿಗತಿಯ ಬಗ್ಗೆ ದುಡಿದ ಸ್ನಾತಕೋತ್ತರ ಪದವೀಧರೆ ಜಿ.ಎಸ್.ಕುಶಲ ಸ್ಪಧರ್ಿಸಿದ್ದಾರೆ.
ಸಮಾಜ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು 5 ವರ್ಷಗಳ ಕಾಲ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 'ಅಭಿವೃದ್ದಿ' ಎಂಬ ಸ್ವಯಂ ಸೇವಾ ಸಂಘಟನೆಯ ಮೂಲಕ ಮಹಿಳಾ ಸಂಘಗಳ ರಚನೆ ಹಾಗೂ ಏಡ್ಸ್ ಸೇರಿದಂತೆ ಆರೋಗ್ಯ ಜಾಗೃತಿ ಶಿಬಿರ, ಬಾಲ ಕಾಮರ್ಿಕ ಪದ್ದತಿಯ ಬಗ್ಗೆ ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಶಿಬಿರಗಳಲ್ಲಿ ಸಕ್ರೀಯವಾಗಿ ಭಾಗವಹಿಸಿರುವ ಇವರು, ಅಂತರಾಷ್ಟ್ರೀಯ ಮಟ್ಟದ 'ಯೂನಿಯನ್ ನೆಟ್ವಕರ್್ ಇಂಟರ್ ನ್ಯಾಷನಲ್ ಡೆವೆಲಪ್ ಮೆಂಟ್ ಆರ್ಗನೇಷನ್ ಸೆಂಟರ್' ಎಂಬ ಸಂಸ್ಥೆಯಲ್ಲಿ ಸಂಘಟಕಿಯಾಗಿ ಅನುಭವ ಪಡೆದಿದ್ದಾರೆ.
ಗೋಡೆಕೆರೆಯ ಶಿಕ್ಷಕ ಜಿ.ಸಿದ್ದರಾಮಯ್ಯನ ಪುತ್ರಿಯಾದ ಇವರು ಇದೇ ಗ್ರಾಮದ ವಕೀಲ ಜಿ.ಪಿ.ಮರಿಸ್ವಾಮಿಯವರನ್ನು ಕೈಹಿಡಿದಿದ್ದಾರೆ.

ವಕೀಲರ ಸಂಘದ ಅಧ್ಯಕ್ಷರಾಗಿ ಗೋಪಾಲಕೃಷ್ಣ
ಚಿಕ್ಕನಾಯಕನಹಳ್ಳಿ,ಮೇ.5: ಇಲ್ಲಿನ ವಕೀಲರ ಸಂಘದ ಅಧ್ಯಕ್ಷರಾಗಿ ಎಸ್.ಗೋಪಾಲಕೃಷ್ಣ, ಕಾರ್ಯದಶರ್ಿಯಾಗಿ ಎಚ್.ಎಸ್.ಜ್ಞಾನಮೂತರ್ಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯ್ಷರಾಗಿ ಎಂ.ಎಸ್.ಶಂಕರಲಿಂಗಪ್ಪ, ಸಹಕಾರ್ಯದಶರ್ಿಯಾಗಿ ದಿಲೀಪ್ ಖಜಾಂಚಿಯಾಗಿ ಎಸ್.ದಿಲೀಪ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Monday, May 3, 2010


ಸಂತೆ ಸ್ಥಳವನ್ನು ಬದಲಿಸದಂತೆ ಒತ್ತಾಯಿಸಿ ವರ್ತಕರಿಂದ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ಮೇ.03: ಪಟ್ಟಣದಲ್ಲಿನ ಸಂತೆ ವರ್ತಕರು ದಿಢೀರ್ ಪ್ರತಿಭಟನೆಗಿಳಿದು ಸಂತೆ ಮೈದಾನವನ್ನು ಬದಲಾಯಿಸಬಾರದು ಹಾಗೂ ವರ್ತಕರಿಗೆ ಮೂಲ ಸೌಲಭ್ಯವನ್ನು ಒದಗಿಸಬೇಕೆಂದು ಆಗ್ರಹಿಸಿ ಪುರಸಭೆಯ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಬಿ.ಎಸ್.ಎನ್.ಎಲ್ ಕಛೇರಿಯ ಬಳಿ ಪ್ರತಿ ಸೋಮವಾರದ ಸಂತೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ, ಆ ಸ್ಥಳದ ಒಂದು ಭಾಗದಲ್ಲಿ ಈಗ ಲೋಕೋಪಯೋಗಿ ಇಲಾಖೆ ಕಟ್ಟಡವೊಂದನ್ನು ಕಟ್ಟಲು ಹೊರಟಿದ್ದರಿಂದ ಕೋಪಗೊಂಡ ವರ್ತಕರು, ಈ ಪ್ರದೇಶವನ್ನು ಸಂತೆ ಮೈದಾನವನ್ನಾಗಿ ಮುಂದುವರೆಸುವಂತೆ ಒತ್ತಾಯಿಸಿ ರಸ್ತೆಗಿಳಿದು ಪ್ರತಿಭಟಿಸಿದರು, ಈ ಸಂದರ್ಭದಲ್ಲಿ ಕೆಲವು ನಿಮಿಷ ವರ್ತಕರು ಆವೇಶಭರಿತರಾದರು. ಪರಿಸ್ಥಿತಿಯನ್ನು ತಿಳಿ ಮಾಡುವ ಉದ್ದೇಶದಿಂದ ಪಿ.ಎಸೈ. ಪ್ರತಿಭಟನಾಕಾರರನ್ನು ಪುರಸಭಾ ಮುಂಭಾಗಕ್ಕೆ ತೆರಳುವಂತೆ ಸೂಚಿಸಿದರು.
ಪುರಸಭಾ ಕಛೇರಿಯ ಮುಂದೆ ಜಮಾಯಿಸದ ವರ್ತಕರು ಪುರಸಭಾ ಆಡಳಿತದ ವಿರುದ್ದ ಘೋಷಣೆಗಳನ್ನು ಕೂಗಿದರು, ನಂತರ ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಪ್ರತಿಭಟನಾಕಾರರ ಬಳಿ ತೆರಳಿಸಿದರು.
ಸಭೆಯಲ್ಲಿ ಮಾತನಾಡಿದ ತರಕಾರಿ ವರ್ತಕಿ ಆಂಜನಮ್ಮ, ನಮ್ಮನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪದೇ ಪದೇ ಎತ್ತಾಕುತ್ತಿದ್ದರೆ, ನಮ್ಮ ವ್ಯಾಪಾರ ವಹಿವಾಟಿಗೆ ಅನಾನೂಕೂಲವಾಗುತ್ತದೆ, ನಮಗೆ ಆ ಸ್ಥಳದಲ್ಲೇ ಸಂತೆ ಮುಂದುವರೆಸಲು ಅವಕಾಶ ಕಲ್ಪಿಸಿ ಎಂದರು.
ಈರುಳ್ಳಿ ವ್ಯಾಪಾರಿ ಜಹೀರ್ ಮಾತನಾಡಿ, ಈ ಮೊದಲು ತಾತಯ್ಯನ ಗೋರಿ ಬಳಿ ಸಂತೆ ನಡೆಯುತ್ತಿತ್ತು ಈ ಸ್ಥಳವನ್ನು ಜವಳಿ ವ್ಯಾಪಾರಿ ಗೋಪಾಲ ಶೆಟ್ಟರ ಮನೆತನದವರು ದಾನವಾಗಿ ನೀಡಿದ್ದರು, ಆದರೆ ಪುರಸಭೆಯವರು ಆ ಜಾಗವನ್ನು ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್ಗೆಂದು ನೀಡಿದ್ದರಿಂದ ಸಂತೆಯನ್ನು ತಾತಯ್ಯನ ಗೋರಿ ಬಳಿಯಿಂದ ಈಗ ನಡೆಯುತ್ತಿರುವ ಬಿ.ಎಸ್.ಎನ್.ಎಲ್.ಕಛೇರಿ ಬಳಿಗೆ ವಗರ್ಾಯಿಸಿದರು, ಈಗ ಅಲ್ಲಿಂದಲೂ ತೆರಳಿ ಎಂದರೆ ನಮಗೆ ತೊಂದರೆಯಾಗುತ್ತದೆ ಎಂದರು.
ತರಕಾರಿ ವ್ಯಾಪಾರಿ ಮೊಹಿದ್ದೀನ ಪಾಷ ಮಾತನಾಡಿ ಸಂತೆ ಸುಂಕವನ್ನು ಮಾತ್ರ ಕಟ್ಟಿಸಿಕೊಳ್ಳುವ ಈ ಪುರಸಭೆಯವರು ವರ್ತಕರಿಗೆ ಯಾವುದೇ ಸೌಕರ್ಯವನ್ನು ಕಲ್ಪಿಸಿಲ್ಲವೆಂದರು.
ಬಟ್ಟೆ ವ್ಯಾಪಾರಿ ಕೃಷ್ಣೋಜಿ ರಾವ್ ಮಾತನಾಡಿ, ಬೇರೆ ಊರುಗಳಲ್ಲಿ ವರ್ತಕರಿಗೆ ಹಾಗೂ ಗ್ರಾಹಕರಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ, ಇಲ್ಲಿ ನಮಗೆ ಕುಡಿಯಲು ನೀರಿನ ವ್ಯವಸ್ಥೆಯಾಗಲಿ, ಶೌಚಾಲಯದ ವ್ಯವಸ್ಥೆಯಾಗಲಿ ಸಂತೆ ನಡೆಯುವ ಜಾಗದಲ್ಲಿ ಇಲ್ಲ ಎಂದರು.
ನಂತರ ಮಾತನಾಡಿದ ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ವರ್ತಕರ ಮುಖಂಡರೊಂದಿಗೆ ಸಭೆ ನಡೆಸಿ ನಂತರ ಸಭೆಯ ತೀಮರ್ಾನವನ್ನು ತಿಳಿಸುವುದಾಗಿ ಪ್ರತಿಭಟಾನಾಕಾರರಿಗೆ ತಿಳಿಸಿ, ಪುರಸಭಾ ಸಭಾಂಗಣಕ್ಕೆ ತೆರಳಿದರು.
ಸಭೆಯಲ್ಲಿ ಪುರಸಭಾ ವಿರೋಧ ಪಕ್ಷದ ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ಸಿ.ಪಿ.ಮಹೇಶ್, ಬಾಬು ಸಾಹೇಬ್ ಹಾಗೂ ಕನರ್ಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಸೀಮೆಣ್ಣೆ ಗುರುಮೂತರ್ಿ ಪುರಸಭಾ ಅಧ್ಯಕ್ಷರೊಂದಿಗೆ ವಾಗ್ವಾದಕ್ಕಿಳಿದರು.
ಈಗ ನಡೆಯುತ್ತಿರುವ ಸ್ಥಳದಲ್ಲೇ ಸಂತೆಯನ್ನು ಮುಂದುವರೆಸಿ, ಈ ಮೊದಲೆ ವಿಷಯ ತಿಳಿದಿದ್ದರೂ ವರ್ತಕರಿಗೆ ವಿಷಯವನ್ನು ತಿಳಿಸದೆ ಏಕಾಏಕಿ ಅವರು ಸರಕು ಸರಂಜಾಮುಗಳನ್ನು ತಂದು ವ್ಯಾಪಾರ ನಡೆಸಲು ಹೋದಾಗ ಇಲ್ಲಿ ಸಂತೆ ನಡೆಯುವುದಿಲ್ಲವೆಂದು ಹೇಳಿದ್ದರಿಂದ ವರ್ತಕರು ಬೀದಿಗಿಳಿಯ ಬೇಕಾಯಿತು ಎಂಬ ಅಂಶಗಳು ಸಭೆಯಲ್ಲಿ ವ್ಯಕ್ತವಾದವು.
ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಮಾತನಾಡಿ, ಅಲ್ಲಿ ಕಟ್ಟಡ ಆರಂಭಿಸುವ ವಿಷಯ ನನಗೆ ಇತ್ತೀಚೆಗೆ ತಿಳಿಯಿತು, ಮೊದಲೇ ತಿಳಿದಿದ್ದರೆ ಸಂಬಂಧಿಸಿದವರಿಗೆ ಸಂತೆಯ ಸಮಸ್ಯೆಯನ್ನು ಬಗೆ ಹರಿಸಿದ ನಂತರ ಕಟ್ಟಡ ಕಟ್ಟಲು ಅನುವು ಮಾಡಿಕೊಡುತ್ತಿದ್ದೆವು ಎಂದರು. ಈ ಮಾತಿನಿಂದ ಸಭೆ ಸಮಾಧಾನವಾಗಲಿಲ್ಲ. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರೊಂದಿಗೆ ವಿರೋಧ ಪಕ್ಷದ ಕೆಲವರು ಮತ್ತೆ ವಾಗ್ವಾದಕ್ಕಿಳಿದರು.
ನಂತರ ಅಧ್ಯಕ್ಷರು ಕಾಮಗಾರಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಈಗ ಸಂತೆ ಸ್ಥಳದಲ್ಲಿ ನಡೆಯಲಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಕಾಲಂ ನಿಮರ್ಿಸಲು ತೋಡಿರುವ ಗುಂಡಿಗಳನ್ನು ಮುಚ್ಚಿ ಸಂತೆಗೆ ಅನವು ಮಾಡಿಕೊಡುವಂತೆ ಹೇಳಿದ್ದರಿಂದ ವರ್ತಕರ ಮುಖಂಡರು ಸಮಾಧಾನವಾಗಿ ಪ್ರತಿಭಟನೆ ಸ್ಥಗಿತಗೊಳಿಸಿದರು, ಸೋಮವಾರದ ಸಂತೆ ಎಥಾ ಪ್ರಕಾರ ನಡೆಯಿತು.
ಸಭೆಯಲ್ಲಿ ಪುರಸಭಾ ಸದಸ್ಯರಾದ ರಾಜಣ್ಣ(ಬಸ್), ದೊರೆಮುದ್ದಯ್ಯ, ಸಿ.ಪಿ.ಐ. ರವಿ ಪ್ರಸಾದ್, ಪಿ.ಎಸೈ. ಶಿವಕುಮಾರ್, ಮುಖ್ಯಾಧಿಕಾರಿ ಸಿದ್ದಮೂತರ್ಿ ಉಪಸ್ಥಿತರಿದ್ದರು.

Sunday, May 2, 2010

ಬೋರನಕಣಿವೆಗೆ 'ಹೇಮೆ'ಯನ್ನು ಹರಿಸಲು ಕನಿಷ್ಟ 3 ಟಿ.ಎಂ.ಸಿ. ನೀರು ಬೇಕು: ಟಿ.ಬಿ.ಜೆ

ಚಿಕ್ಕನಾಯಕನಹಳ್ಳಿ,ಮೇ.2: ಹೇಮಾವತಿ ನಾಲೆಯಿಂದ ತಾಲೂಕಿನ ಜಲಾಶಯವೆಂದೇ ಹೆಸರು ಪಡೆದಿರುವ ಬೋರನಕಣಿವೆಗೆ ನೀರು ಹರಿಸಬೇಕೇಂದರೆ ಕನಿಷ್ಟ 3ಟಿ.ಎಂ.ಸಿ. ನೀರು ಅಗತ್ಯವಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಗೆ ಹೇಮಾವತಿ ನಾಲೆಯಿಂದ 31 ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಲು ಅವಕಾಶವಿದ್ದು, ಇದರಲ್ಲಿ ನಾವು ಬಳಸಿಕೊಂಡಿರುವುದು ಕೇವಲ 21 ಟಿ.ಎಂ.ಸಿ.ಮಾತ್ರ, ಉಳಿದ 10 ಟಿ.ಎಂ.ಸಿ.ಯನ್ನು ನಾವು ಬಳಸಿಕೊಳ್ಳಲು ಅವಕಾಶವಿದ್ದು, ಇದನ್ನು ನಾವು ಸರಿಯಾದ ರೀತಿಯಲ್ಲಿ ಸದ್ವಿನಿಯೋಗಿಸಿಕೊಂಡರೆ ಈಗಿರುವ ದೂರಕ್ಕಿಂತ ಇನ್ನೂ 240 ಕಿ.ಮೀ.ಗೂ ಹೆಚ್ಚು ದೂರು ನೀರನ್ನು ತೆಗೆದುಕೊಂಡು ಹೋಗಬಹುದು ಎಂದ ಅವರು, ಆಗ ಕುಣಿಗಲ್ ಒಂದೇ ಏನು ಇಡೀ ಜಿಲ್ಲೆಯ ಬಹುತೇಕ ಭಾಗಕ್ಕೆ ನೀರು ಹರಿಸಬಹದು ಎಂದರಲ್ಲದೆ, ನಾವೀಗ ಉಳಿಕೆ 10 ಟಿ.ಎಂ.ಸಿ.ನೀರನ್ನು ಬಳಸಿಕೊಳ್ಳುವಲ್ಲಿ ಸೋತಿದ್ದೇವೆ ಎಂದರು. ಈ ಬಗ್ಗೆ ಚಿಂತನೆ ನಡೆಸಬೇಕಾಗಿರುವುದು ಈ ಜಿಲ್ಲೆಯ ಶಾಸಕರೆಲ್ಲರ ಕರ್ತವ್ಯ, ಅದನ್ನು ಬಿಟ್ಟು ಅಲ್ಲಿಗೆ ನೀರು ಹರಿಸಬೇಡಿ, ಇಲ್ಲಿಗೆ ನೀರು ಹರಿಸಬೇಡಿ ಎಂದೇಳುವ ಮೂಲಕ ಜಿಲ್ಲೆಯ ಕೆಲವು ಶಾಸಕರು ಜನರನ್ನು ಗೊಂದಲಕ್ಕೆ ಈಡುಮಾಡುತ್ತಿದ್ದಾರೆ ಎಂದರು.

ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ಕುಡಿಯುವ ನೀರಿಗಾಗಿ ಹೇಮಾವತಿಯಿಂದ ಮಂಜೂರಾಗಿರುವ ನೀರಿನ ಪಾಲು ಕೇವಲ 0.06 ಟಿ.ಎಂ.ಸಿ.ಮಾತ್ರ, ಇದರಲ್ಲಿ ಇಲ್ಲಿಯವರು ಬಳಸಿಕೊಂಡಿರುವುದು 0.04 ಟಿ.ಎಂ.ಸಿ.ಮಾತ್ರ ಎಂದ ಅವರು, ಇಲ್ಲೂ ಸಹ 0.02 ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳುವಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದರಲ್ಲದೆ, ಕೇವಲ 0.02 ಟಿ.ಎಂ.ಸಿ.ಯನ್ನು ಇಟ್ಟುಕೊಂಡು ಬೋರನಕಣಿವೆಗೆ ನೀರು ಹರಿಸುತ್ತೇವೆಂದು ಹೇಳುವ ಜನರು ನೀರಾವರಿಯ ಬಗ್ಗೆ ಆಳವಾದ ಜ್ಞಾನವನ್ನು ಹೊಂದುವುದು ಅಗತ್ಯ ಎಂದರು.

ಈ ಭಾಗಕ್ಕೆ ಒಂದು ಟಿ.ಎಂ.ಸಿ.ಗಿಂತ ಹೆಚ್ಚು ನೀರು ತರುತ್ತೇನೆಂದು ಹೇಳುವ ಹೋರಾಟಗಾರರನ್ನು ಇಲ್ಲಿಯ ಜನ ನಂಬಬೇಕೆ ಹೊರತು ಕೇವಲ 'ಸೊನ್ನೆ ಪಾಯಿಂಟ್ ಸಮತಿಂಗ್' ನೀರು ತರುವೆ ಎನ್ನುವ ಜನರ ಮಾತುಗಳಿಗೆ ಮರುಳಾಗಬೇಡಿ ಎಂದರು.

ಬೋರನಕಣಿವೆಗೆ ಅಗತ್ಯವಿರುವಷ್ಟು ನೀರನ್ನು ನಾವು ಗುಂಡ್ಯಾಯೋಜನೆಯಿಂದ ತರುವ ಪ್ರಯತ್ನವನ್ನು ಮಾಡಲಾಗುವುದು ಎಂದ ಅವರು, ಈ ಯೋಜನೆಯ ಬಗ್ಗೆ ಕಸರತ್ತು ಮಾಡಿತ್ತಿದ್ದು, ಈ ಯೋಜನೆಗೆ ಅಗತ್ಯವಿರುವ ರೂಪುರೇಷೆಯನ್ನು ಪೂರ್ಣಗೊಳಿಸದ ನಂತರ ನಾನು ಗುಂಡ್ಯಾಯೋಜನೆಯ ಬಗ್ಗೆ ಮಾತನಾಡುವುದಾಗಿ ತಿಳಿಸಿದರು.

ಹೇಮಾವತಿ ನೀರು ಚಿ.ನಾ.ಹಳ್ಳಿ ಹರಿಯುವ ಸಂಬಂಧ ಈ ಹಿಂದೆ ವ್ಯತಿರಿಕ್ತವಾದ ಹೇಳಿಕೆಯನ್ನು ನೀಡಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಕ್ಷಣಕಾಲ ವಿಚಲಿತರಾದಂತೆ ಕಂಡು ಬಂದ ಟಿ.ಬಿ.ಜೆ, ನಾನು ಹೇಳಿರುವುದು ತಿಪಟೂರಿನ ಹೊನ್ನವಳ್ಳಿ ಹಾಗೂ ಸುತ್ತಮುತ್ತಲಿನ ಕೆರೆಗಳಿಗೆ ಹಾಗೂ ಕುಣಿಗಲ್ನ ಕೆಲವು ಕೆರೆಗಳಿಗೆ ನೀರು ಹರಿಸಲು ತೊಂದರೆ ಇಲ್ಲಾ ಎಂದರೆ ಚಿ.ನಾ.ಹಳ್ಳಿಗೂ ನೀರು ಹರಿಸಲು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದೇನೆ ಹೊರತು ಬೇರೆ ಅರ್ಥ ಬರುವಂತೆ ಹೇಳಿಲ್ಲವೆಂದು ಸ್ಪಷ್ಟಪಡಿಸಿದರು.

ನನ್ನ ರಾಜಕೀಯ ಜೀವನ ಆರಂಭವಾಗಿ 33 ವರ್ಷ ತುಂಬಿದೆ ಇದರಲ್ಲಿ 20 ವರ್ಷಗಳ ಕಾಲ ನಾನು ನೀರಾವರಿಗಾಗಿಯೇ ಹೋರಾಟ ಮಾಡಿದ್ದೇನೆ. ಈ ತಾಲೂಕಿಗೆ ಹೇಮಾವತಿಯೂ ಬರಲಿ ಹಾಗೂ ಬೇರೆ ಮಾರ್ಗಗಳಿಂದಲೂ ನೀರು ಬರಲಿ ಎಂದು ಹೋರಾಟ ಮಾಡಿದ ಕುರುಹುಗಳು ಹುಳಿಯಾರಿನಲ್ಲಿ ಇನ್ನೂ ಇದೆ ಎಂದರು.

ಹೊಗೆನಿಕಲ್ ಬಗ್ಗೆ ಸಚಿವರಲ್ಲೇ ಗೊಂದಲ: ಈ ರಾಜ್ಯದ ಜಲದ ವಿಷಯದಲ್ಲಿ ಇಲ್ಲಿನ ಸಂಪುಟ ಸಚಿವರಿಗೆ ಸ್ಪಷ್ಟ ಅರಿವಿಲ್ಲ ಎಂದ ಟಿ.ಬಿ.ಜಯಚಂದ್ರ, ಗೃಹ ಸಚಿವರು ಒಂದರೀತಿಯ ಹೇಳಿಕೆ ನೀಡುತ್ತಾರೆ, ಜಲ ಸಂಪನ್ಮೂಲ ಸಚಿವರು ಮತ್ತೊಂದು ರೀತಿಯ ಹೇಳಿಕೆ ನೀಡುತ್ತಾರೆ ಎಂದ ಅವರು, ಸುಪ್ರಿಂ ಕೋಟರ್್ನಲ್ಲಿ ಇರುವ ವಿಷಯದ ಬಗ್ಗೆ ವಿಭಿನ್ನವಾದ ಹೇಳಿಕೆ ನೀಡಿ ಗೊಂದಲವನ್ನು ಏರ್ಪಡಿಸುವ ಈ ರಾಜ್ಯದ ಸಚಿವರುಗಳಿಗೆ ಇದರ ಪರಿಣಾಮ ಏನಾಗುತ್ತದೆ ಎಂದು ಜವಬ್ದಾರಿ ಸ್ಥಾನದಲ್ಲಿರುವವರಿಗೆ ತಿಳಿಯುವುದಿಲ್ಲವೇ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ, ಮುಖಂಡ ಕಿಬ್ಬನಹಳ್ಳಿ ಮಹಾಲಿಂಗಯ್ಯ, ನಗರ ಘಟಕದ ಅಧ್ಯಕ್ಷ ಕೆ.ಜಿ.ಕೃಷ್ಣೇಗೌಡ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ ಉಪಸ್ಥಿತರಿದ್ದ

Saturday, May 1, 2010

28 ಗ್ರಾ.ಪಂನಲ್ಲಿನ 484 ಸ್ಥಾನಕ್ಕೆ 1527 ಮಂದಿ ಕಣದಲ್ಲಿ: 14 ಮಂದಿ ಅವಿರೋಧ

ಚಿಕ್ಕನಾಯಕನಹಳ್ಳಿ,ಮೇ.01; ತಾಲೂಕಿನ 28ಗ್ರಾಮ ಪಂಚಾಯಿತಿಗಳ ಒಟ್ಟು 484ಸ್ಥಾನಕ್ಕೆ 1527 ಅಭ್ಯಥರ್ಿಗಳು ಕಣದಲ್ಲಿದ್ದು 14ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ದಸೂಡಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸ್ಥಾನಗಳಿದ್ದು ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ 25ಮಂದಿ ಕಣದಲ್ಲಿದ್ದಾರೆ, ಹೊಯ್ಸಳಕಟ್ಟೆ ಗ್ರಾ.ಪಂ.ನಲ್ಲಿ 20 ಸ್ಥಾನಗಳಿದ್ದು 48ಮಂದಿ ಕಣದಲಿದ್ದು ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಚೌಳಕಟ್ಟೆಯಲ್ಲಿ 16 ಸ್ಥಾನಕ್ಕೆ 33 ಮಂದಿ ಕಣದಲ್ಲಿದ್ದು ನಾಲ್ಕು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳಗುಲಿಯಲ್ಲಿ 14 ಸ್ಥಾನಕ್ಕೆ ಕಣದಲ್ಲಿ 29 ಮಂದಿ ಇದ್ದಾರೆ, ಬೆಳಗುಲಿಯ 14 ಸ್ಥಾನಕ್ಕೆ 29 ಮಂದಿ ಕಣದಲ್ಲಿದ್ದಾರೆ, ಬರಗೂರು ಗ್ರಾ.ಪಂ.ನಲ್ಲಿನ 14 ಸ್ಥಾನಕ್ಕೆ ಕಣದಲ್ಲಿ 38 ಮಂದಿ ಇದ್ದಾರೆ, ಮತಿಘಟ್ಟದ 14 ಸ್ಥಾನಕ್ಕೆ ಕಣದಲ್ಲಿ 44 ಮಂದಿ, ಕುಪ್ಪೂರಿನ 18 ಸ್ಥಾನಕ್ಕೆ ಕಣದಲ್ಲಿ 55ಮಂದಿ ಮತ್ತು ಕೋರಗೆರೆಯಲ್ಲಿ 15 ಸ್ಥಾನಕ್ಕೆ ಕಣದಲ್ಲಿ 39 ಮಂದಿ, ಹಂದನಕೆರೆಯಲ್ಲಿ 19 ಸ್ಥಾನಕ್ಕೆ 59 ಕಣದಲ್ಲಿ ಮಂದಿಯಿದ್ದು ಈ ಆರು ಗ್ರಾ.ಪಂಯಲ್ಲಿ ಒಬ್ಬರಂತೆ ಆರು ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಗಾಣದಾಳುವಿನಲ್ಲಿ 18 ಸ್ಥಾನಗಳಿದ್ದು ಕಣದಲ್ಲಿ 60ಮಂದಿ, ಕೆಂಕೆರೆಯಲ್ಲಿ 18 ಸ್ಥಾನಗಳಿದ್ದು ಕಣದಲ್ಲಿ 54ಮಂದಿ, ಹುಳಿಯಾರಿನಲ್ಲಿ 33 ಸ್ಥಾನಗಳಿದ್ದು ಕಣದಲ್ಲಿ 131ಮಂದಿ, ಯಳನಡುವಿನಲ್ಲಿ 17 ಸ್ಥಾನಗಳಿದ್ದು ಕಣದಲ್ಲಿ 62ಮಂದಿ, ದೊಡ್ಡಎಣ್ಣೆಗೆರೆಯ 21 ಸ್ಥಾನಕ್ಕೆ ಕಣದಲ್ಲಿ 63ಮಂದಿ , ತಿಮ್ಲಾಪುರದ 18 ಸ್ಥಾನಕ್ಕೆ ಕಣದಲ್ಲಿ 65ಮಂದಿ, ದೊಡ್ಡಬಿದರೆಯ 18 ಸ್ಥಾನಕ್ಕೆ ಕಣದಲ್ಲಿ 55 ಮಂದಿ, ಬರಕನಾಳು 16 ಸ್ಥಾನಕ್ಕೆ ಕಣದಲ್ಲಿ 52 ಮಂದಿ, ತಿಮ್ಮನಹಳ್ಳಿಯ 19 ಸ್ಥಾನಕ್ಕೆ ಕಣದಲ್ಲಿ 69 ಮಂದಿ, ರಾಮನಹಳ್ಳಿಯ 14 ಸ್ಥಾನಕ್ಕೆ ಕಣದಲ್ಲಿ 52 ಮಂದಿ, ಕಂದಿಕೆರೆಯ 17 ಸ್ಥಾನಕ್ಕೆ ಕಣದಲ್ಲಿ 61 ಮಂದಿ, ಮಲ್ಲಿಗೆರೆಯ 17 ಸ್ಥಾನಕ್ಕೆ ಕಣದಲ್ಲಿ 51ಮಂದಿ, ಶೆಟ್ಟಿಕೆರೆಯ 16 ಸ್ಥಾನಕ್ಕೆ ಕಣದಲ್ಲಿ 55 ಮಂದಿ, ದುಗಡೀಹಳ್ಳಿಯ 12 ಸ್ಥಾನಕ್ಕೆ ಕಣದಲ್ಲಿ 36 ಮಂದಿ, ಮುದ್ದೇನಹಳ್ಳಿಯ 20 ಸ್ಥಾನಕ್ಕೆ ಕಣದಲ್ಲಿ 60 ಮಂದಿ , ಹೊನ್ನೆಬಾಗಿಯ 11 ಸ್ಥಾನಕ್ಕೆ ಕಣದಲ್ಲಿ 36 ಮಂದಿ, ತೀರ್ಥಪುರದ 18 ಸ್ಥಾನಕ್ಕೆ ಕಣದಲ್ಲಿ 65 ಮಂದಿ, ಗೋಡೆಕೆರೆಯ 16 ಸ್ಥಾನಕ್ಕೆ ಕಣದಲ್ಲಿ 53 ಮಂದಿ, ಜೆ.ಸಿ.ಪುರದ 17 ಸ್ಥಾನಕ್ಕೆ 55 ಮಂದಿ ಕಣದಲ್ಲಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.