Monday, June 13, 2016


ಎಲ್ಲಾ ಸಮಾಜದ ಮಕ್ಕಳು ಶಿಕ್ಷಣ ಪಡೆಯುವುದು ಅಗತ್ಯ 
ಚಿಕ್ಕನಾಯಕನಹಳ್ಳಿ,ಜೂ.13 ; ಸ್ವಾಮಿಜಿಗಳು ಮಠದ ಅಭಿವೃದ್ದಿಗೆ ಸಂಚರಿಸುವಾಗ ಆಯಾ ಸಮಾಜದ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯಬೇಕು, ಎಲ್ಲಾ ಸ್ಥರದ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಅರಿತು ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಬೇಕೆಂದು ತುಮಕೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲ್ಲೂಕು ಆಡಳಿತ ಉಪ್ಪಾರ ಸಂಘ ಆಶ್ರಯದಲ್ಲಿ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದರೆ ಅವರೇನು ನಮ್ಮನ್ನು ಸಾಕುತ್ತಾರೆಯೇ, ಮದುವೆ ಮಾಡಿಕೊಂಡು ಗಂಡನ ಮನೆಗೆ ತೆರಳುತ್ತಾರೆ, ಇದರಿಂದ ನಮಗೇನು ಲಾಭ ಎಂಬ ದುರಾಲೋಚನೆಯನ್ನು ಪೋಷಕರು ಬಿಟ್ಟು ಎಲ್ಲಾ ಮಕ್ಕಳಿಗೆ ಶಿಕ್ಷಣ ಕೊಡಿಸುವ ಆಲೋಚನೆ ಬೆಳೆಸಿಕೊಳ್ಳಿ ಎಂದರು. 
, ಉಪ್ಪಾರ ಜನಾಂಗ ತಮ್ಮ ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ನೀಡಿದರೆ ಮಾತ್ರ ಅಭಿವೃದ್ದಿ ಹೊಂದಲು ಸಾಧ್ಯ ಸರಕಾರ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿತ್ತಿದೆ ಇದನ್ನೂ ಉಪಯೋಗಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಶೇ.50ರಷ್ಟು ಮಹಿಳೆಯರಿಗೆ ಶಿಕ್ಷಣ ನೀಡುವಂತೆ ಸಲಹೆ ನೀಡಿದರು.
ಹೊಸದುರ್ಗ ಭಗೀರಥ ಪೀಠದ  ಶ್ರೀ ಪುರುಷೋತ್ತಮಾನಂದ ಪುರಿಸ್ವಾಮೀಜಿ  ಮಾತನಾಡಿ,  ಆಯಾ ಸಮುದಾಯಗಳ ಮಹನೀಯರ  ಜಯಂತಿ ಮಾಡುವ ಉದ್ದೇಶ ಅವರ ಸಾಧನೆ ಸ್ಪೂತರ್ಿ ಪಡೆದು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಮಾತ್ರ ಜಯಂತಿ ಮಾಡಿರುವುದಕ್ಕೆ ಸಾರ್ಥಕವಾಗುತ್ತದೆ ಎಂದ ಅವರು,  ಸಿದ್ದರಾಮಯ್ಯ ಸಕರ್ಾರ 2 ವರ್ಷಗಳ ಹಿಂದೆ ಭಗೀರಥ ಜಯಂತಿ ಆಚರಿಸಲು ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದ ಅವರು ಉಪ್ಪಾರ ಜನಾಂಗ ನಮ್ಮಲ್ಲಿರುವ ಸಣ್ಣ ಪುಟ್ಟ ಭೇದಗಳನ್ನು ಮರೆತು ಎಲ್ಲರೂ ಒಂದಾಗಬೇಕು ಎಂದರು 
ರಾಜ್ಯ ಸಂಸದೀಯ ವ್ಯವಹಾರಗಳ ಕಾರ್ಯದಶರ್ಿ ಪುಟ್ಟರಂಗ ಶೆಟ್ಟಿ ಮಾತನಾಡಿ, ನಮ್ಮ ಪೂರ್ವಜನರನ್ನು ನೆನೆಸಿಕೊಳ್ಳಲು ಜಯಂತಿಗಳನ್ನು ಮಾಡಲಾಗುತ್ತದೆ ರಾಜಕೀಯವಾಗಿ ಉಪ್ಪಾರ ಜನಾಂಗ ಬೆಳೆಯಬೇಕಾದರೆ ಶಿಕ್ಷಣ ಅಗತ್ಯ,  1973ರಲ್ಲಿ ದೇವರಾಜ ಅರಸರು ಮುಖ್ಯಮಂತ್ರಿಗಳಾದ ಸಂದರ್ಭದಲ್ಲಿ ಅತಿ ಹಿಂದುಳಿದ ಜನಾಂಗವಾದ  ಉಪ್ಪಾರ ಜನಾಂಗವನ್ನು ಗುರುತಿಸಿ ರಾಜಕೀಯ ಪ್ರತಿನಿಧ್ಯ ನೀಡಿದರು ಸಂಘಟನೆ ಶಿಕ್ಷಣ ಹೋರಾಟದ ಮೂಲಕ  ನಾವು ಮುಂದೆ ಬರಬೇಕಾಗಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಒಳ್ಳೆಯ ಮನಸ್ಸಿನಿಂದ ಮಠ ಮಂದಿರಗಳನ್ನು ಕಟ್ಟುವುದರಿಂದ ಎಲ್ಲರ ಮನಸ್ಸು ಕಟ್ಟದಂತಹ ಸಾರ್ಥಕತೆ ಬರುತ್ತದೆ, ಉಪ್ಪಾರ ಸಮಾಜಕ್ಕೆ ಚಿ.ನಾ.ಹಳ್ಳಿ ಪಟ್ಟಣದಲ್ಲಿ ಸಮುದಾಯ ಭವನ ನಿಮರ್ಿಸಲು ಕ್ರಮ ಕೈಗೊಳ್ಳವುದಾಗಿ ಹೇಳಿದರು. ಶೆಟ್ಟೀಕೆರೆ ಜಿ.ಪಂ.ಕ್ಷೇತ್ರದಲ್ಲಿ ಕಡಿಮೆ ಸಂಖ್ಯೆಯಲ್ಲಿ ಉಪ್ಪಾರ ಜನಾಂಗವಿದ್ದರೂ ಎಲ್ಲಾ ಜನಾಂಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದರಿಂದ ಕಲ್ಲೇಶರವರನ್ನು ಜಿ.ಪಂ.ಕ್ಷೇತ್ರಕ್ಕೆ ನಿಲ್ಲಿಸಿ ಗೆಲ್ಲಿಸಿದ್ದೇವೆ ಎಂದರು. 
ಕಾರ್ಯಕ್ರಮದಲ್ಲಿ ತಾ||ಪಂ ಅಧ್ಯಕ್ಷೆ ಕೆ. ಹೊನ್ನಮ್ಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಪುನರ್ವಸತಿ ನಿಗಮದ ಅಧ್ಯಕ್ಷ ವೆಂಕೋಬ, ಜಿ.ಪಂ ಸದಸ್ಯರಾದ ಕಲ್ಲೇಶ್, ರಾಮಚಂದ್ರಯ್ಯ, ಮಹಾಲಿಂಗಪ್ಪ, ಮತ್ತಿತ್ತರರು ಉಪಸ್ಥಿತರಿದ್ದರು.
ತಾಲ್ಲೂಕು ಕಛೇರಿಯಿಂದ ಹೊರಟ ಭಗೀರಥ ಜಯಂತಿಯ ಮೆರವಣಿಗೆ ಬಿ.ಹೆಚ್ ರಸ್ತೆ ನೆಹರು ವೃತ್ತದ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಗಾಸೆ, ಗೊಂಬೆ ಕುಣಿತ, ನಾಸಿಕ್ ಡೊಳ್ಳು, ವಿವಿಧ ಕಲಾ ತಂಡಗಳು ಉಪಸ್ಥಿತರಿದ್ದವು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಾದ ದೇವಿಕರಿಯಪ್ಪ, ಈರಲಕ್ಕಪ್ಪ, ಹನುಮಂತಯ್ಯ,ಪುಟ್ಟಯ್ಯ,ಮತ್ತಿತ್ತರರನ್ನು ಸನ್ಮಾನಿಸಲಾಯಿತು.

ಅಲೆಮಾರಿ ಮುಖಂಡನ ಹೋರಾಟದ ಮಕ್ಕಳು ಫಲವಾಗಿ ನೇರವಾಗಿ ವಸತಿ ಶಾಲೆಗೆ ಆಯ್ಕೆ
ಚಿಕ್ಕನಾಯಕನಹಳ್ಳಿ,ಜೂ.13 :  ಅಲೆಮಾರಿ ಮುಖಂಡರೊಬ್ಬರ ಹೋರಾಟದಫಲವಾಗಿ 7 ಅಲೆಮಾರಿ ಹಾಗೂ ಅರೆ ಅಲೆಮಾರಿ ಮಕ್ಕಳು ಪ್ರವೇಶ ಪರೀಕ್ಷೆ ಬರೆಯದೇ ವಿವಿಧ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ.
   ಮಕ್ಕಳ ಪ್ರವೇಶಾತಿಗೆ ಶ್ರಮಿಸಿರುವ ಅಲೆಮಾರಿ ಮುಖಂಡ ಹುಳಿಯಾರ್ ರಾಜಪ್ಪ ಮಾತನಾಡಿ,ವಸತಿ  ಶಾಲೆಗಳಲ್ಲಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಮಕ್ಕಳಿಗೆ  ಪ್ರವೇಶ ಪರೀಕ್ಷೆ ಎದುರಿಸದೇ ಶೇ.10ರಷ್ಟು ನೇರಪ್ರವೇಶಾತಿ ನೀಡಬೇಕು ಎಂಬ ನಿಯಮ 2011ರಲ್ಲಿ ಆದೇಶಿಸಲಾಗಿದೆ, ಆದರೂ ಅರಿವಿಲ್ಲದ ಅಲೆಮಾರಿಗಳು ಈ ವಿಶೇಷ ಸವಲತ್ತುನ್ನು ಪಡೆದು ಕೊಳ್ಳಲು ವಿಫಲರಾಗಿದ್ದರು. ಮನವರಿಕೆ ಮಾಡಿಕೊಟ್ಟ ಬಳಿಕ ಪ್ರವೇಶ ಪಡೆಯಲು ಮುಂದಾದರು.ನೇರವಾಗಿ ವಸತಿಶಾಲೆಗಳ ಪ್ರಾಧಿಕಾರಕ್ಕೆ ಬರೆದು 7 ವಿದ್ಯಾಥರ್ಿಗಳಿಗೆ ಪ್ರವೇಶ ಗಿಟ್ಟಿಸಿಕೊಡಲಾಯಿತು ಎಂದರು.
    ವಿಶೇಷ ಪ್ರವೇಶಾತಿ ಅಡಿಯಲ್ಲಿ ಸಿರಾದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ 5 ವಿದ್ಯಾಥರ್ಿಗಳು, ತುರುವೇಕೆರೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಒಬ್ಬ ಹಾಗೂ ಮೇಲನಹಳ್ಳಿ ಮೊರಾಜರ್ಿ ದೇಸಾಯಿ ವಸತಿ ಶಾಲೆಯಲ್ಲಿ ಒಬ್ಬ ವಿದ್ಯಾಥರ್ಿ ವಿಶೇಷ ಪ್ರವೇಶಾತಿ ಅಡಿಯಲ್ಲಿ ಪ್ರವೇಶ ಪಡೆದಿದ್ದಾರೆ ಎಂದರು.
   ಅರೆ ಅಲೆಮಾರಿ ಕಾಡುಗೊಲ್ಲ ಸಮುದಾಯದ ತಮ್ಮಡಿಹಳ್ಳಿ ಮೋಹನ್ಕುಮಾರ್ ಹಾಗೂ ಅಕ್ಷತಾ, ಅಲೆಮಾರಿ ಜನಾಂಗದ  ಚನ್ನದಾಸ ಸಮುದಾಯದ .ಎಂ.ಶ್ರೀರಾಮು, ಸಿಳ್ಳೆಕ್ಯಾತ ಸಮುದಾಯದವರಾದ ಎಚ್.ಕೆ.ನವೀನ್ಕುಮಾರ್, ರಾಜು ಮತ್ತು ಕೆ.ಶೋಭಾ, ದೊಂಬಿದಾಸ ಸಮುದಾಯದ ಸಿ.ಆರ್.ಸೀಬಾ ಹಾಗೂ ಹಂದಿಜೋಗಿ ಸಮುದಾಯದ ಕೆ.ಸುಜಾತ ಪ್ರವೇಶ ಪರೀಕ್ಷೆ ಇಲ್ಲದೆ ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದರು.
  ಅಲೆ ಮಾರಿ,  ಅರೆ ಅಲೆಮಾರಿ ಕುಟುಂಬಗಳು ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸುತ್ತಾ ಸಣ್ಣಪುಟ್ಟ ವ್ಯಾಪಾರ ಮಾಡುತ್ತ ದುಸ್ತರ ಬದುಕು ಸಾಗಿಸುತ್ತಿದ್ದಾರೆ. ಬಹುತೇಕ ಅನಕ್ಷರಸ್ಥರೇ ಹೆಚ್ಚಿರುವ ಈ ಸಮುದಾಯಗಳು ತಮ್ಮ ಮಕ್ಕಳನ್ನು ಶಿಕ್ಷಣಕ್ಕೆ ತೆರೆದುಕೊಳ್ಳು ವಂತೆ ಮಾಡಬೇಕು.ಅಲೇ ಮಾರಿಗಳಿಗೇ ಇರುವ ವಿಶೇಷ ಸವಲತ್ತುಗಳನ್ನು ಬಳಸಿಕೊಳ್ಳಬೇಕು.ಇಲಾಖೆ ಹಾಗೂ ಅಧಿಕಾರಿಗಳು ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದ್ದಾರೆ.






ಪುರಸಭೆ ಮುಖ್ಯಾಧಿಕಾರಿ ವಗರ್ಾವಣೆ ರದ್ದುಪಡಿಸಿ : ದಸಂಸ 
ಚಿಕ್ಕನಾಯಕನಹಳ್ಳಿ,ಜೂ.12: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಅವರನ್ನು ಏಕಾಏಕಿ ವಗರ್ಾವಣೆ ಮಾಡಿದ್ದು ತಕ್ಷಣ ವಗರ್ಾವಣೆಯನ್ನು ರದ್ದುಗೊಳಿಸಿ ಮೂಲಸ್ಥಾನದಲ್ಲೇ ಮುಂದುವರೆಸಬೇಕು. ಇಲ್ಲವಾದರೆ ಉಗ್ರವಾದ ಹೋರಾಟ ರೂಪಿಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಸಿ.ಎಸ್.ಲಿಂಗದೇವರು ಹೇಳಿದರು.
  ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ಸಾರ್ವಜನಿಕರು ಹಾಗೂ ಪೌರ ಕಾಮರ್ಿಕರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್,  ಸದಸ್ಯರುಗಳು ಸೂಚಿಸಿದ ಕಾನೂನು ಬಾಹೀರ ಕೆಲಸಗಳಿಗೆ ಮಣೆ ಹಾಕಲಿಲ್ಲ ಎಂಬ ಉದ್ದೇಶದಿಂದ ಪಟ್ಟಭದ್ರ ಹಿತಾಸಕ್ತಿಗಳು ರಾಜಕೀಯ ಪ್ರಭಾವ ಬಳಸಿ ಎತ್ತಂಗಡಿ ಮಾಡಿಸಿದ್ದಾರೆ.ಈ ಕ್ರಮವನ್ನು ದಸಂಸ ಖಂಡಿಸುತ್ತದೆ ಎಂದರು.
  ಪರಿಶಿಷ್ಠ ಜಾತಿಗೆ ಸೇರಿರುವ ಪಿ.ಶಿವಪ್ರಸಾದ್ ದಕ್ಷ ಆಡಳಿತಗಾರರಾಗಿದ್ದರು.ಅವರು ಅಧಿಕಾರ ವಹಿಸಿಕೊಂಡಾಗ ಪುರಸಭೆ ಖಾತೆಯಲ್ಲಿ ಕೇವಲ ರೂ.13520 ಹಣ ಇತ್ತು.10 ತಿಂಗಳಲ್ಲಿ ಸೋರಿಕೆಯನ್ನು ತಡೆಗಟ್ಟಿ ಖಾತೆಗೆ ರೂ.40ಲಕ್ಷ ಹಣ ಸಂದಾಯವಾಗುವಂತೆ ಮಾಡಿದರು.6ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೂ.43 ಲಕ್ಷದಷ್ಟು ಪೌರ ಕಾಮರ್ಿಕರ ಪಿಂಚಣಿ ಹಣವನ್ನು ಫಲಾನುಭವಿಗಳ ಖಾತೆಗೆ ವಗರ್ಾಯಿಸಿದ್ದರು. ಇಷ್ಟೆಲ್ಲಾ ಜನಪರವಾಗಿದ್ದ ಅಧಿಕಾರಿಗೆ ಜಿಲ್ಲಾಧಿಕಾರಿಗಳು ತಾತ್ಕಾಲಿಕ ವಗರ್ಾವಣೆ ಆದೇಶ ನೀಡಿರುವುದು ಸರಿಯಲ್ಲ.ಪ್ರಾಮಾಣಿಕ ಅಧಿಕಾರಿಯ ದಿಢೀರ್ ವಗರ್ಾವಣೆಯನ್ನು ಕಂಡಿಸಿ ಜೂನ್.13 ಸೋಮವಾರ ಜಿಲ್ಲಾಧೀಕಾರಿ ಕಛೇರಿ ಮುಂದೆ ಧರಣಿ ನಡೆಸಲಾಗುವುದು ಎಂದರು.
ಕನಿಷ್ಟ 2 ವರ್ಷಗಳ ಕಾಲ ಆಡಳಿತ ಅಧಿಕಾರಿಯನ್ನು ವಗರ್ಾವಣೆ ಮಾಡಬಾರದು ಎಂಬ ನಿಯಮವಿದೆ. 10 ತಿಂಗಳಲ್ಲೇ ವಗರ್ಾವಣೆ ಮಾಡಿರುವುದು ಸರಿಯಲ್ಲ. ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಹಾಗೂ ಅಕ್ರಮಕ್ಕೆ ಅವಕಾಶ ಕೊಡುತ್ತಿಲ್ಲ ಎಂಬ ಉದ್ದೇಶದಿಂದ ಪಿ.ಶಿವಪ್ರಸಾದ್ ಅವರನ್ನು ವಗರ್ಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.
  ಪತ್ರಿಕಾ ಗೋಷ್ಠಿಯಲ್ಲಿ ದಲಿತ ಮುಖಂಡರುಗಳಾದ ಕೆ.ಎಚ್.ರಂಗನಾಥ್, ಪಿ.ಕೃಷ್ಣಮೂತರ್ಿ, ಶಿವಕುಮಾರ್, ಜೆ.ಸಿ.ಪುರ ಗೋವಿಂದರಾಜು, ಕಂಟಲಗೆರೆ ರಂಗಸ್ವಾಮಿ, ಸಂತೋಷ್, ಪ್ರವೀಣ್ ಇದ್ದರು. 

ಕೆಟ್ಟು ಹೋದ ಶುದ್ದ ಕುಡಿಯುವ ನೀರಿನ ಘಟಕ 
 ಚಿಕ್ಕನಾಯಕನಹಳ್ಳಿ,ಜೂ12; ಪಟ್ಟಣದಲ್ಲಿ ಎರಡು ಕಡೆ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಿ 3 ತಿಂಗಳಲ್ಲೇ ಎರಡು ಶುದ್ದ ನೀರಿನ ಘಟಕಗಳು ಕೆಟ್ಟು ಹೋಗಿ ಜನರು ಶುದ್ದ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ 
ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಮನುಷ್ಯನ ಅರೋಗ್ಯ ಸುಧಾರಣೆಗೆ ಕೋಟ್ಯಾಂತರ  ರೂಪಾಯಿ ಖಚರ್ು ಮಾಡಿ,  ಪುರಸಭೆ ಮೇಲ್ವಿಚಾರಣೆಯಲ್ಲಿ  ಪಟ್ಟಣ  ರುದ್ರನ ಗುಡಿ ಹತ್ತಿರ ಹಾಗೂ ಪುರಸಭೆಯ ಹಿಂಭಾಗದಲ್ಲಿ ಸ್ಥಾಪಿಸಿರುವ ಎರಡು ಕುಡಿಯುವ ನೀರಿನ ಘಟಕಗಳನ್ನು ಹುಬ್ಬಳ್ಳಿ ಮೂಲದ ವ್ಯಕ್ತಿಗೆ ಗುತ್ತಿಗೆ ನೀಡಿದ್ದು, ಪ್ರತಿ ಬಾರಿ ಕೆಟ್ಟು ಹೋದಾಗ ಗುತ್ತಿಗೆದಾರರಿಗೆ ದೂರವಾಣಿ ಮುಖಾಂತರ ತಿಳಿಸುತ್ತಾರೆ. ಆದರೆ ಗುತ್ತಿಗೆ ಪಡೆದ ವ್ಯಕ್ತಿ ದೂರು ನೀಡಿದರೆ ಸರಿ ಪಡಿಸಲು ತಿಂಗಳಾನುಗಟ್ಟಲೆ ತೆಗೆದುಕೊಳ್ಳತ್ತಾರೆ,  ಸಮಯಕ್ಕೆ ಸರಿಯಾಗಿ ಬರದೇ ಇರುವುದರಿಂದ ಪಟ್ಟಣದ ಜನತೆಗೆ ಶುದ್ದಕುಡಿಯುವ ಲಭ್ಯವಿಲ್ಲದಂತಾಗಿದೆ.
 ರುದ್ರನಗುಡಿ ಹತ್ತಿರದ ಘಟಕ ಕೆಟ್ಟು ಹೋಗಿ ತಿಂಗಳುಗಳೇ ಕಳೆದಿದ್ದರೂ ಪುರಸಭೆ ಅಧಿಕಾರಿಗಳಾಗಲಿ, ಪುರಸಭಾ ಸದಸ್ಯರಾಗಲಿ, ಗುತ್ತಿಗೆದಾರನನ್ನು ಕರೆದು ದುರಸ್ತಿ ಮಾಡಿಸದೇ ನಿರ್ಲಕ್ಷಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ. ಜನರು ಶುದ್ದ ಕುಡಿಯುವ ನೀರಿಗೆ 6 ತಿಂಗಳಿಂದ ಬೆಳಂಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಹೋಗಿ ಮಕ್ಕಳು ದೊಡ್ಡವರು ಎನ್ನದೇ ಶುದ್ದ ಕುಡಿಯುವ ನೀರಿನ  ಘಟಕದ ಹತ್ತಿರ ಜನರು ಸಾಲಾಗಿ ನಿಂತು ತೆಗೆದುಕೊಂಡು ಹೋಗುತ್ತಾರೆ. ಶುದ್ದ ಕುಡಿಯುವ ನೀರಿನ ಘಟಕ ಮುಚ್ಚಿರುವುದರಿಂದ ಪಟ್ಟಣದಿಂದ 3 ಕಿ.ಮೀ ದೂರ ಇರುವ ಮೇಲನಹಳ್ಳಿ ಹಾಗೂ ಹೊಸಹಳ್ಳಿಯ ಹತ್ತಿರವಿರುವ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಹೋಗಿ ನೀರನ್ನು ತರಬೇಕಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಹಾಗೂ ಪುರಸಭಾ ಸದಸ್ಯರನ್ನು ವಿಚಾರಿಸದರೆ ಗುತ್ತಿಗೆದಾರನಿಗೆ ದೂರವಾಣಿ ಮೂಲಕ ತಿಳಿಸಿದ್ದೇವೆ. ಹಾಗೂ ನೋಟೀಸ್ ನೀಡಿದ್ದೇವೆ ಎನ್ನುತ್ತಾರೆ ಹೊರತು ಮುತುವಜರ್ಿವಹಿಸಿ ಕೆಲಸ ಮಾಡಿಸಿವುದಿಲ್ಲ  ಎಂದು  ತಾ.ಬಿ.ಜೆ.ಪಿ. ಮಾಜಿ ಅಧ್ಯಕ್ಷ ಶ್ರೀನಿವಾಸಮೂತರ್ಿ ಆರೋಪಿಸಿದ್ದಾರೆ.

ಅಪಘಾತ ವ್ಯಕ್ತಿ ಸಾವು
ಚಿಕ್ಕನಾಯಕನಹಳ್ಳಿ,ಜೂ.12: ರಬಸದಿಂದ ಬಂದ ಕಾರು ಪಾದಾಚಾರಿ ಮಾರ್ಗದಲ್ಲಿ ನಡೆದು ಹೋಗುತ್ತಿದ್ದ  ವ್ಯಕ್ತಿಯೊಬ್ಬರಿಗೆ ಗುದ್ದಿಕೊಂಡು ಹೋದ ಪರಿಣಾಮ ಸಿ.ಕೆ.ಪ್ರಕಾಶ್ಕುಮಾರ್ (55) ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ.
ಪಟ್ಟಣದ ಮಾರುತಿನಗರದ ಬಳಿ ರಾಷ್ಟ್ರೀಯ ಹೆದ್ದಾರಿ 150(ಎ)ಯಲ್ಲಿ ಚಿಕ್ಕನಾಯಕನಹಳಿ ಪ್ರಕಾಶ್ ರವರಿಗೆ,  ಪಟ್ಟಣದ ಕಡೆಯಿಂದ ಹುಳಿಯಾರು ಮಾರ್ಗವಾಗಿ ಸಾಗುತ್ತಿದ್ದ  ಅಪರಿಚಿತ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವ ಸಂಭವಿಸಿದೆ. ಸ್ಥಳೀಯರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ  ಬೆಂಗಳೂರಿಗೆ ಕರೆಯ್ದೊಯ್ಯುವಾಗ ಮಾರ್ಗ ಮದ್ಯೆ ಮರಣ ಹೊಂದಿದ್ದಾರೆ. ಮೃತ ವ್ಯಕ್ತಿ ಗೃಹರಕ್ಷಕ ದಳದ ಸದಸ್ಯನಾಗಿದ್ದರು,  ಹೆಂಡತಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಳ್ಳಲು ಸಲಹೆ 

ಚಿಕ್ಕನಾಯಕನಹಳ್ಳಿ,ಜೂ.12: ಸಮಗ್ರ  ಬೇಸಾಯಕ್ರಮದಿಂದ ರೈತರು ಆಥರ್ಿಕ ಸ್ಥಿರತೆ ಕಾಯ್ದುಕೊಳ್ಳಬಹುದು ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿದರ್ೇಶಕ ಹೊನ್ನದಾಸೇಗೌಡ ಹೇಳಿದರು.
ತಾಲ್ಲೂಕಿನ ಕಂದಿಕೆರೆಯಲ್ಲಿ ಈಚೆಗೆ ಆಯೋಜಿಸಲಾಗಿದ್ದ ಕೃಷಿ ಅಭಿಯಾನ -ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ರೈತರು ಋತುಮಾನ ಹಾಗೂ ಪ್ರಾದೇಶಿಕ ಹವಮಾನಕ್ಕೆ ಅನುಗುಣವಾಗಿ ಬೇಸಾಯ ಮಾಡಿ ಹಾಗೂ  ತಳಿ ವೈವಿಧ್ಯದ ಬಿತ್ತನೆ ಬೀಜವನ್ನು ಸಂಗ್ರಹಿಸಿಕೊಳ್ಳಿ ಎಂದು ಸಲಹೆ ನೀಡಿದರು. 
ಕಂದಿಕೆರೆ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡಿ, ಇಲಾಖೆಯಿಂದ ರೈತರಿಗೆ ದೊರಕುತ್ತಿರುವ ಸವಲತ್ತುಗಳು ಹಾಗೂ ಯೋಜನೆಗಳ ಬಗ್ಗೆ  ಅಧಿಕಾರಿಗಳು ಅರಿವು ಮೂಡಿಸಬೇಕು. ಇಂಥ ಕಾರ್ಯಕ್ರಮಗಳು ಔಪಚಾರಿಕವಾಗಿ ಹೆಸರಿಗಷ್ಟೇ ಆಗದೆ ರೈತರಿಗೆ ಲಾಭವಾಗಬೇಕು ಎಂದರು.
  ಕಂದಿಕೆರೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶ್ಯಾಮಲ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ದತ್ತಾತ್ರೇಯಭಟ್ ತಾಂತ್ರಿಕ ಸಲಹೆ ನೀಡಿದರು.  ಮುಖ್ಯ ಅತಿಥಿಗಳಾಗಿ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಬಿ.ಎನ್.ಲೋಕೇಶ್ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು. ಕಂದಿಕೆರೆ ಕೃಷಿ ಅಧಿಕಾರಿಗಳಾದ ಕೆ.ಬಿ.ಉಮಾಶಂಕರ್ ನಿರೂಪಿಸಿ ವಿ.ಬಿ.ಕಿರಣ್ ಸ್ವಾಗತಿಸಿದರು. ಡಿ.ನಿಂಗಯ್ಯ ವಂದಿಸಿದರು.