Saturday, March 28, 2015


ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ : ಪ್ರಾಂಶುಪಾಲ ವರದರಾಜು
                                  
ಚಿಕ್ಕನಾಯಕನಹಳ್ಳಿ,ಮಾ. : ಕೊಠಡಿಗಳಲ್ಲಿ ಕಲಿಯುವ ಶಿಕ್ಷಣದ ಜೊತೆಗೆ ಪಠ್ಯತರ ಚಟುವಟಿಕೆಗಳಲ್ಲೂ ಭಾಗವಹಿಸುವುದರಿಂದ ಜೀವನ ಅರ್ಥವಾಗುತ್ತದೆ ಎಂದು ಪ್ರಾಚಾರ್ಯ ವಿ.ವರದರಾಜು ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ನಡೆದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾಥರ್ಿಗಳು ಪರಿಸರದ ಸ್ವಚ್ಛತೆ, ಸಮಾಜ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಎಲ್ಲವೂ ವಿದ್ಯಾಥರ್ಿಗಳು ತಿಳಿದುಕೊಳ್ಳಬೇಕಾಗಿದೆ, ಅದಕ್ಕೋಸ್ಕರ ಗ್ರಾಮಗಳಲ್ಲಿ ನಡೆಯುವ ಎನ್.ಎಸ್.ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಹಳ್ಳಿಗಳ ಜೀವನದ ಕಷ್ಟ ಸುಖಗಳು ತಿಳಿಯುತ್ತವೆ, ಅದಕ್ಕೋಸ್ಕರ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದರು.
ಉಪನ್ಯಾಸಕ ಡಾ.ಶಿವಲಿಂಗಮೂತರ್ಿ ಮಾತನಾಡಿ, ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳಸಬೇಕಾಗಿದೆ, ಹಳ್ಳಿಗಳು ಸಹ ಆಧುನಿಕ ಜೀವನಕ್ಕೆ ಒಳಗಾಗುತ್ತಿರುವುದು ವಿಷಾಧನೀಯ, ನಮ್ಮ ಮೂಲ ಸಂಸ್ಕೃತಿಯನ್ನು ಬೆಳಸಿ ಸಂಸ್ಕಾರವಂತರನ್ನಾಗಿ ಮಾಡಬೇಕಾಗಿದೆ, ಕೈಗಾರಿಕೆಗಳು ಕೇವಲ ಹಣ ಮಾಡುವ ಕಾಖರ್ಾನೆಗಳಾಗಿದ್ದು ಇದರ ಹಿಂದೆ ಓದರೆ ನಮ್ಮ ಗ್ರಾಮೀಣ ಕೃಷಿ ಬದುಕು ನಾಶವಾಗುತ್ತದೆ ಆದ್ದರಿಂದ ನಮ್ಮ ಕೃಷಿ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ  ಗ್ರಾ.ಪಂ.ಅಧ್ಯಕ್ಷೆ ವಿನೋದಬಾಯಿ, ಉಪಾಧ್ಯಕ್ಷ ಗುರುಶಾಂತಪ್ಪ, ಶಿಬಿರಾಧಿಕಾರಿಗಳಾದ ಚಂದ್ರಶೇಖರ್, ಶಿವರಾಮಯ್ಯ, ಮುಖ್ಯಶಿಕ್ಷಕಿ ಪಾರ್ವತಮ್ಮ, ಕಾರ್ಯದಶರ್ಿ ಶಿವರ್ಣಣ, ಶಂಕರಪ್ಪ, ಲೋಕೇಶನಾಯ್ಕ, ಅಭಿವೃದ್ದಿ ಅಧಿಕಾರಿ ಭೈರಪ್ಪ, ಪ್ರೊ.ಪ್ರಸನ್ನಕುಮಾರ್, ಸುರೇಶ್, ಪ್ರಸನ್ನ, ಶೈಲೇಂದ್ರಕುಮಾರ್, ಅಧೀಕ್ಷಕ ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.



ಕಾಯ್ದೆಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ : ವಕೀಲ ಎಂ.ಕೆ.ರವಿಚಂದ್ರ,
ಚಿಕ್ಕನಾಯಕನಹಳ್ಳಿ,ಮಾ.27 : ಮಹಿಳೆಯರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ವರದಕ್ಷಿಣೆ ನಿಷೇದ, ಬ್ರೂಣ ಹತ್ಯೆ ನಿಷೇಧ, ಜೀವನಾಂಶ ವಿವಾವ ವಿಚ್ಛೇದನ ಸೇರಿದಂತೆ ಇನ್ನಿತರ ಕಾಯ್ದೆಗಳನ್ನು ತಮ್ಮ ರಕ್ಷಣೆಗಾಗಿ ಬಳಸಬೇಕೇ ಹೊರತು ದ್ವೇಷಕ್ಕೆ ಉಪಯೋಗಿಸಿ ಕಾನೂನನ್ನು ದುರ್ಬಳಕೆ ಮಾಡಬಾರದೆಂದು ಚಿ.ನಾ.ಹಳ್ಳಿ ಜೆ.ಎಂ.ಎಫ್.ಸಿ ಸಹಾಯಕ ಸಕರ್ಾರಿ ಅಭಿಯೋಜಕ ಎಂ.ಕೆ.ರವಿಚಂದ್ರ ಹೇಳಿದರು.
ತಾಲ್ಲೂಕಿನ ಗೋಡೆಕೆರೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಜಾಗೃತಿ ಶಿಬಿರದಲ್ಲಿ ಮಾತನಾಡಿದ ಅವರು, ಇಂದಿನ ಸ್ಥಿತಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸಂಕಷ್ಟ ಸ್ಥಿತಿಯಲ್ಲಿದ್ದಾರೆ, ಮಹಿಳೆಯರಿಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ವೈಜ್ಞಾನಿಕವಾಗಿ ಪುರುಷರಿಗೆ ಸರಿಸಮನಾಗಿ ಭಾಗವಹಿಸುವಂತೆ ಮತ್ತು ಮಹಿಳೆಯರಿಗೆ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರಲ್ಲದೆ ಅಶಕ್ತ, ಆಥರ್ಿಕ ದುರ್ಬಲರು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಉಚಿತವಾಗಿ ಕಾನೂನು ನೆರವನ್ನು ಪಡೆಯಬಹುದೆಂದು ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ ಮಾತನಾಡಿ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2005ರ ನಿಯಮ 2006 ರ ಬಗ್ಗೆ ಮಾಹಿತಿ ನೀಡಿದರು. ಒಂದೇ ಸೂರಿನಡಿ ಕುಟುಂಬದ ಯಾವುದೇ ಸದಸ್ಯರಿಂದ ಆಥರ್ಿಕ ಲೈಂಗಿಕ ಬೌದ್ದಿಕ ಮಾನಸಿಕ ದೌರ್ಜನ್ಯಗೊಳಗಾದಲ್ಲಿ ಈ ಕಾಯ್ದೆಯಡಿ ರಕ್ಷಣೆಯನ್ನು ಪಡೆಯಬಹುದಾಗಿರುತ್ತದೆ. ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಕೌಟುಂಬಿಕ ದೌರ್ಜನ್ಯ ಹಿಂಸೆ ಸಂರಕ್ಷಣಾಧಿಕಾರಿ, ಸಕರ್ಾರದಿಂದ ಮಾನ್ಯತೆ ಪಡೆದ ಸೇವಾ ಕೇಂದ್ರ, (ಸಾಂತ್ವಾನ ಕೇಂದ್ರ) ಪೋಲಿಸ್ ಠಾಣೆ, ನ್ಯಾಯಾಲಯ ಈ ನಾಲ್ಕು ಕಡೆ ಸಂದರ್ಭನುಸಾರ ದೂರನ್ನು ಸಲ್ಲಿಸಬಹುದಾಗಿರುತ್ತದೆ, ಕೌಟುಂಬಿಕ ದೌರ್ಜನ್ಯಕ್ಕೊಳಗಾದ ಮಹಿಳೆಗೆ ಈ ಕಾಯ್ದೆಯಲ್ಲಿ ವೈದ್ಯಕೀಯ ಚಿಕಿತ್ಸೆ, ವಸತಿ ಸೌಲಭ್ಯ, ತುತರ್ು ಅಗತ್ಯಗಳನ್ನು ಸಮಯೋಚಿತವಾಗಿ ಒದಗಿಸಲಾಗುವುದು ಎಂದರಲ್ಲದೆ ಆಧ್ಯತೆ ಮೇಲೆ ಈ ಕೇಸನ್ನು 60ದಿನದಲ್ಲಿ ಇತ್ಯರ್ಥಪಡಿಸಬೇಕಾಗಿದೆ, ಅನಿವಾರ್ಯ ಸಂದರ್ಭಗಳಲ್ಲಿ ತಾತ್ಕಾಲಿಕ ಆದೇಶ ಮಾಡಿ ನಂತರ ಪರಿಶೀಲಿಸಿ ಅಗತ್ಯ ಕ್ರಮ ವಹಿಸಿ ಈ ಕಾಯ್ದೆಯಡಿ ರಕ್ಷಣೆಯನ್ನು ಒದಗಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಹದೇವಮ್ಮ ಬಾಲ್ಯವಿವಾಹದ ಬಗ್ಗೆ ಮಾಹಿತಿ ನೀಡಿದರು. ವಕೀಲ ವೈ.ಜಿ.ಲೋಕೇಶ್ ಆಸ್ತಿ ಕ್ಕು ಮತ್ತು ವರದಕ್ಷಿಣೆ ನಿಷೇದ ಕಾಯ್ದೆ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಲಯದ ಸಿಬ್ಬಂದಿ , ಸಿಡಿಪಿಓ ಕಛೇರಿ ಸಿಬ್ಬಂದಿ, ಸ್ತ್ರೀಶಕ್ತಿ ಸಂಘದ ಸದಸ್ಯರುಗಳು, ಭಾಗ್ಯಲಕ್ಷ್ಮಿ ತಾಯಂದಿರು, ಅಂಗನವಾಡಿ ಕಾರ್ಯಕತರ್ೆಯರು, ಸಹಾಯಕಿಯರು ಭಾಗವಹಿಸಿದ್ದರು.




                                             ಚಿತ್ರ ಶೀಷರ್ಿಕೆ :
                                   
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೇಲನಹಳ್ಳಿ ಗ್ರಾಮದ ಶ್ರೀ ಕಂಚೀರಾಯಸ್ವಾಮಿ ಜಾತ್ರೆ ರಥೋತ್ಸವವು ವಿಜೃಂಭಣೆಯಾಗಿ ನೆರವೇರಿತು.  ಕಂಚೀರಾಯಸ್ವಾಮಿ ಮತ್ತು ಬ್ಯಾಲದಕೆರೆ ಶ್ರೀ ಕೆಂಪಮ್ಮದೇವಿಯ ಜಾತ್ರೆ ರಥೋತ್ಸವು ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.


                                      
ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ದೇವರ ದಾಸಿಮಯ್ಯ ಜಯಂತ್ಯೋತ್ಸವದ ಅಂಗವಾಗಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕೆ.ಟಿ.ತಿಮ್ಮರಾಯಪ್ಪ, ಸಿ.ಎಂ.ಅನಂತಯ್ಯ ಹಾಗೂ ಮತ್ತಿತರರನ್ನು ಶಾಸಕ ಸಿ.ಬಿ.ಸುರೇಶ್ಬಾಬು ಸನ್ಮಾನಿಸಿದರು. ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ, ಜಿ.ಪಂ.ಸದಸ್ಯೆ ಲೋಹಿತಬಾಯಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶರ್ಿ ಸೀಮೆಎಣ್ಣೆ ಕೃಷ್ಣಯ್ಯ, ಸಿ.ಡಿ.ಚಂದ್ರಶೇಖರ್ ಮತ್ತಿತತರರು ಉಪಸ್ಥಿತರಿದ್ದರು.



ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಫಲಾನುಭವಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಚೆಕ್ ವಿತರಿಸಿದರು. ಪುರಸಭಾಧ್ಯಕ್ಷೆ ರೇಣುಕಮ್ಮ ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದ ಓದಿನ ಮನೆ ವಿಶ್ವವಿದ್ಯಾನಿಲಯವಿದ್ದಂತೆ : ವಿಮರ್ಷಕ ನಟರಾಜ್ ಬೂದಾಳ್
                                    
ಚಿಕ್ಕನಾಯಕನಹಳ್ಳಿ: ಗ್ರಾಮೀಣ ಭಾಗದಲ್ಲಿ ಅಕ್ಷರ ಜ್ಞಾನವನ್ನು ವೃದ್ದಿಸುವುದಕ್ಕಾಗಿ ಓದಿನ ಮನೆ ಎಂಬ ಹೆಸರನ್ನಿಟ್ಟು ಪತ್ರಿಕೆಗಳು, ಪುಸ್ತಕಗಳನ್ನು ಹಳ್ಳಿಗಳ ಜನರಿಗೆ ತಲುಪಿಸುವ ಮೂಲಕ ಗ್ರಾಮೀಣ ಭಾಗದಲ್ಲಿ  ವಿಶ್ವವಿದ್ಯಾನಿಲಯಕ್ಕೆ ಸರಿಸಮಾನವಾಗಿ ಕೆಲಸ ಮಾಡುತ್ತಿದೆ  ಎಂದು ಕನರ್ಾಟಕ ಸಮಗ್ರ ತತ್ವಪದ ಪ್ರಕಟಣಾ ಯೋಜನೆಯ ರಾಜ್ಯ ಸಂಯೋಜಕ  ನಟರಾಜ್ ಬೂದಾಳ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾಕುವಳ್ಳಿ ಗ್ರಾಮದಲ್ಲಿನ ಓದಿನ ಮನೆ ಪ್ರಾರಂಭವಾಗಿ ಮಾಸ ಪೂರೈಸುವ ಹೊತ್ತಿಗೆ, ಓದಿನ ಮನೆ, ಅರಿವಿನ ಮನೆಯಾಗಿ ಪರಿವತರ್ಿಸುವಲ್ಲಿ ನಡೆದಿರುವ ಆಗುಹೋಗಗಳ ಬಗ್ಗೆ ನಡೆದ ಆತ್ಮ ವಿಮಶರ್ಾ ಸಭೆ ಹಾಗೂ ತತ್ವಪದ ಹಾಡುಗಾರಿಕೆ ಪ್ರಸ್ತುತಿ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದರು,  ಜನರಿಗೆ, ವಿದ್ಯಾಥರ್ಿಗಳಿಗೆ ದೇಶದಲ್ಲಿ ದಿನನಿತ್ಯ ನಡೆಯುವ ಘಟನೆಗಳನ್ನು ಹಾಗೂ ಜ್ಞಾನವೃದ್ದಿಸಿಕೊಳ್ಳಲು ಉಪಯೋಗವಾಗುವಂತ ಪತ್ರಿಕೆಗಳು, ಪುಸ್ತಕಗಳನ್ನು ಜನರಿಗೆ ತಲುಪಿಸುವ ಮೂಲಕ ಓದಿನ ಮನೆ, ಅರಿವಿನ ಮನೆಯಾಗಿದೆ ಎಂದರಲ್ಲದೆ,  ವಿಶ್ವವಿದ್ಯಾನಿಲಯಗಳು ವಿದ್ಯಾಥರ್ಿಗಳಿಗೆ ಜ್ಞಾನವನ್ನು ನೀಡುವ ರೀತಿಯಲ್ಲೇ  ಇಲ್ಲಿನ ಜನರಿಗೆ ಓದಿನ ಮನೆ ಜ್ಞಾನವನ್ನು ಒಬ್ಬರಿಂದ ಮತ್ತೊಬರಿಗೆ ಪ್ರಚುರ ಪಡೆಸಲು ಕಂಡು ಕೊಂಡ ಉತ್ತಮ ದಾರಿಯಾಗಿದೆ ಎಂದರು.
  ಓದಿನ ಮನೆ ಹಳ್ಳಿಯ ಜನರನ್ನೆಲ್ಲಾ ಒಂದು ಕಡೆ ಸೇರಿಸಿ ಸಮಾಜದಲ್ಲಿನ ಆಗುಹೋಗುಗಳನ್ನು ತಿಳಿಸುತ್ತಿದೆ, ಹಳ್ಳಿಯಲ್ಲಿರುವ ಪ್ರತಿಭೆಗಳನ್ನು ಹೊರಹೊಮ್ಮಿಸಲು ಉತ್ತಮ ವೇದಿಕೆಯಾಗಿದೆ ಎಂದರಲ್ಲದೆ  ಕನ್ನಡದ ನಿಜವಾದ ಸಂಪತ್ತು ಇರುವುದು ಹಳ್ಳಿಗಳಲ್ಲಿ, ಹಳ್ಳಿಗಳ ಪ್ರತಿಭೆಗಳೇ ಇಂದು ದೊಡ್ಡ ಮಟ್ಟದಲ್ಲಿ ಹೆಸರುವಾಸಿಯಾಗಿರುವುದು, ಅಂತಹವರ ಸಾಲಿನಲ್ಲಿ ನಿಲ್ಲಲು ಪ್ರಪಂಚದ ಜ್ಞಾನ ಅವಶ್ಯಕವಾಗಿದ್ದು ದಿನನಿತ್ಯ  ಪತ್ರಿಕೆಗಳು, ಪುಸ್ತಕಗಳನ್ನು ಓದುವುದರಿಂದ ಜ್ಞಾನ ವೃದ್ದಿಸಿಕೊಳ್ಳಬಹುದು ಎಂದರು. ಹಿಂದೆ ಅಕ್ಷರ ದೊರಕಲಿಲ್ಲ ಎಂಬ ಒಂದೇ ಕಾರಣಕ್ಕೆ ಅರ್ಧ ಚೈತನ್ಯಗಳು ಹೊರಬರಲಾಗದೇ ಕಳೆಗುಂದಿದವು ಆದರೆ ಈಗಿನ ಮಕ್ಕಳಿಗೆ ಅಕ್ಷರ ಜ್ಞಾನದ ಅವಶ್ಯಕತೆ ಹೆಚ್ಚಿನದಾಗಿದೆ, ಮಕ್ಕಳಿಗೆ ಇಂತಹ ಓದಿನ ಮನೆಗಳು ಹೆಚ್ಚಿದಷ್ಟು ಮಕ್ಕಳಿಗೆ ಸಣ್ಣವಯಸ್ಸಿನಿಂದಲೇ ಸ್ಪಧರ್ಾತ್ಮಕ ವೇದಿಕೆ ತಯಾರಿ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.
 ಈ ಗ್ರಾಮದಲ್ಲಿ ತತ್ವಪದಕಾರರ ತಂಡವಿದ್ದು ಮಕ್ಕಳಿಗೆ ಈ ವೇದಿಕೆಯ ಮೂಲಕ ಸಾಂಸ್ಕೃತಿಕ ಕೌಶಲ್ಯವೂ ದೊರಕತ್ತದೆ ಆದ್ದರಿಂದ ಗುರು ಹಿರಿಯರು ನಮಗೆ ಉತ್ತಮ ದಾರಿಯನ್ನು ತೋರಿಸಿದ್ದು ಆ ದಾರಿಯನ್ನು ನಾವು ಪಾಲಿಸಬೇಕು ಎಂದರು.
  ಸಾಹಿತಿ ಎಸ್.ಗಂಗಾಧರಯ್ಯ ಮಾತನಾಡಿ, ಹಳ್ಳಿಗಳಲ್ಲಿ ಅಕ್ಷರ ಜ್ಞಾನ ತುಂಬುವ, ಸಾಹಿತ್ಯದ ಚಟುವಟಿಕೆ ಬೆಳೆಸುವ ಯೋಚನೆ ಇದ್ದಿದ್ದರಿಂದಲೇ ಈ ಓದಿನ ಮನೆ ಆರಂಭಿಸಲಾಯಿತು, ಓದಿನ ಮನೆ ಅರಿವಿನ ಮನೆಯಾಗಿಯೂ ಕಾಣಲಿದೆ, ಆರಂಭವಾದ ಒಂದು ತಿಂಗಳಿನಲ್ಲಿಯೇ ಓದಿನ ಮನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕಿರಿಯರಿಂದ, ದೊಡ್ಡವರವರೆಗೂ ಓದಿನ ಮನೆಗೆ ದಿನನಿತ್ಯ ಬಂದು ಹೋಗುತ್ತಿದ್ದಾರೆ, ಇದರಿಂದ ಇಲ್ಲಿನ ಜನತೆಗೆ ಸಮಾಜದಲ್ಲಿ ನಡೆಯುತ್ತಿರುವ ಬಗ್ಗೆ ಮಾಹಿತಿ, ಮುಂದೇನು ಮಾಡಬೇಕೆಂಬ ಆಲೋಚನೆಗಳು ಮೂಡುತ್ತಿವೆ, ಈ ಓದಿನ ಮನೆ ನಮ್ಮ ನಂತರದ ಪೀಳಿಗೆಗೆ ಅವಶ್ಯಕವಾಗಿದ್ದು ಪ್ರತಿಯೊಬ್ಬರು ಅಕ್ಷರ ಜ್ಞಾನ ಪಡೆಯಬೇಕೆಂಬುದೇ ಓದಿನ ಮನೆಯ ಉದ್ದೇಶವಾಗಿದೆ ಎಂದರು.
ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿ, ಕಲಿಕೆಗೆ ದಾರಿಯಾಗಿರುವ ಓದಿನ ಮನೆಗೆ ಪೋಷಕರು ಮಕ್ಕಳನ್ನು ಕಳಿಸುವುದರ ಜೊತೆಗೆ ಅವರೂ ಆಗಮಿಸಿ ಅಕ್ಷರ ಜ್ಞಾನ ಪಡೆದುಕೊಳ್ಳಬೇಕು ಈ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು, ಓದಿನ ಮನೆಯಂತಹ ಉತ್ತಮ ವೇದಿಕೆ ಮಾಕುವಳ್ಳಿಯಲ್ಲಿ ಬಿಟ್ಟರೆ ಜಿಲ್ಲೆಯಲ್ಲಿ ಎಲ್ಲಿಯೂ ಇದುವರೆವಿಗೂ ಆರಂಭವಾಗಿಲ್ಲ, ಈ ಓದಿನ ಮನೆ ಎಲ್ಲಾ ಕಡೆಗೂ ವ್ಯಾಪಿಸಿ ಹಳ್ಳಿ ಜನತೆಗೆ ಅನುಕೂಲವಾಗಲಿ ಎಂದರು.
ಕನರ್ಾಟಕ ಸಮಗ್ರ ತತ್ವಪದ ಪ್ರಕಟಣಾ ಯೋಜನೆಯ ಜಿಲ್ಲಾ ಸಂಪಾದಕ ಹಾಗೂ ಕ್ಷೇತ್ರ ತಜ್ಞ ಉಜ್ಜಜ್ಜಿರಾಜಣ್ಣ ಮಾತನಾಡಿ, ಓದಿನ ಮನೆ ಎಂಬ ವೇದಿಕೆ ಮಾಕುವಳ್ಳಿಯಲ್ಲಿ ಆರಂಭವಾದ ನಂತರ ಹಲವಾರು ಹಳ್ಳಿಗಳಲ್ಲಿ ಓದಿನ ಮನೆ ಆರಂಭಿಸಲು ಸಲಹೆ ಸೂಚನೆಗಳನ್ನು ಕೇಳುತ್ತಿದ್ದಾರೆ, ತಿಪಟೂರಿನ ಪಕ್ಕದ ಮಂಜುನಾಥನಗರ ಹಳ್ಳಿಯೊಂದರಲ್ಲಿ ಓದಿನ ಮನೆ ಆರಂಭಿಸಲು ಕೇಳಿದ್ದಾರೆ ಅದೇ ರೀತಿ ಚಿ.ನಾ.ಹಳ್ಳಿಯ ಸೋರಲಮಾವು ಹಾಗೂ ಮತ್ತಿತರರ ಕಡೆಯಲ್ಲೂ ಓದಿನ ಮನೆಗಾಗಿ ಸಲಹೆಗಳನ್ನು ಕೇಳುತ್ತಿದ್ದಾರೆ ಎಂದರು.
ವಿದ್ಯಾಥರ್ಿ ಉಮೇಶ್ ಮಾತನಾಡಿ, ಡಿ.ಕೆ.ರವಿ ಎಂಬ ಅಧಿಕಾರಿಯ ಬಗ್ಗೆ ನಮಗೆ ತಿಳಿದೇ ಇರಲಿಲ್ಲ ಓದಿನ ಮನೆಗೆ ಪತ್ರಿಕೆಯನ್ನು ಓದಲು ಆಗಮಿಸಿದಾಗಲೇ ಅವರ ಪ್ರಾಮಾಣಿಕ ಕೆಲಸದ ಬಗ್ಗೆ ಅರಿವಾಗಿದ್ದು, ಅದೇ ರೀತಿಯ ಸಮಾಜದ ಆಗುಹೋಗುಗಳನ್ನು ತಿಳಿಯಲು ಸಹಕಾರಿಯಾಯಿತು ಎಂದು ತನ್ನ ಅಭಿಪ್ರಾಯ ಹಂಚಿಕೊಂಡರು. 
ಈ ಸಂದರ್ಭದಲ್ಲಿ ವಿದ್ಯಾಥರ್ಿಗಳಾದ ಭೈರೇಶ್, ಕಾವ್ಯ, ಕುಸುಮ ಸೇರಿದಂತೆ ಹಲವರು ಓದಿನ ಮನೆಯಿಂದ ತಮಗಾದ  ಅನುಭವಗಳನ್ನು ಹಂಚಿಕೊಂಡರು,   ಮಾಕುವಳ್ಳಿ ಗ್ರಾಮದ ತತ್ವಪದಕಾರರಿಂದ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಗ್ರಾಮದ ಮುಖಂಡುರಗಳಾದ ನಿಜಾನಂದಮೂತರ್ಿ, ಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.


ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಸಾಲ ಸೌಲಭ್ಯ ವಿತರಣೆ
ಚಿಕ್ಕನಾಯಕನಹಳ್ಳಿ,ಮಾ.28: ಕನರ್ಾಟಕ ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ 2014-15ನೇ ಸಾಲಿಗೆ ಈ ವಿಧಾನ ಸಭಾ ಕ್ಷೇತ್ರದಲ್ಲಿ ಮೂವತ್ತೆಂಟು ಲಕ್ಷ ರೂಗಳನ್ನು ವಿತರಿಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಈ ವಿಧಾನ ಸಭಾ ಕ್ಷೇತ್ರದ ಎಂಟು ಸ್ವಸಹಾಯ ಸಂಘಗಳ 86 ಫಲಾನುಭವಿಗಳಿಗೆ ತಲಾ ಹತ್ತು ಸಾವಿರದಂತೆ  ಒಟ್ಟು ಎಂಟು ಲಕ್ಷದ ಅರವತ್ತು ಸಾವಿರ ರೂಗಳನ್ನು ಹಾಗೂ ಶ್ರಮ ಶಕ್ತಿ ಯೋಜನೆ ಅಡಿಯಲ್ಲಿ 150 ಫಲಾನುಭವಿಗಳಿಗೆ ತಲಾ ಇಪ್ಪತ್ತು ಸಾವಿರದಂತೆ ಒಟ್ಟು ಮೂವತ್ತು ಲಕ್ಷ ರೂಗಳನ್ನು ವಿತರಲಾಗಿದೆ ಹಾಗೂ ಹದಿನೇಳು ಕೊಳವೆ ಬಾವಿಗಳನ್ನು ಮಂಜೂರು ಮಾಡಿ,   ನನ್ನ ಕ್ಷೇತ್ರಕ್ಕೆ ಹೆಚ್ಚು ಅನುಧಾನ ನೀಡಿದ ವ್ಯವಸ್ಥಾಪಕ ನಿದರ್ೇಶಕರಾದ ಸಲೀಂ ಅಹಮದ್ ರವರಿಗೆ ಹಾಗೂ ಜಿಲ್ಲಾ ವ್ಯವಸ್ಥಾಪಕರಾದ ಅಬೂಬ್ ಕಲಾಂ ರವರಿಗೆ ಅಭಿನಂದಿಸುವುದಾಗಿ ತಿಳಿಸಿದರು.

.