Friday, July 2, 2010

ವಿದ್ಯಾಥರ್ಿ ವೇತನ ಹಾಗೂ ಮೃತ ನೇಕಾರರ ನಾಮಿನಿಗಳಿಗೆ ಅಂತ್ಯ ಸಂಸ್ಕಾರ ಸಹಾಯ ಧನ ವಿತರಣಾ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.02(1): ಶ್ರೀ ರೇವಣ ಸಿದ್ದೇಶ್ವರ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ವತಿಯಿಂದ 2009-10ನೇ ಸಾಲಿನ ರಾಜ್ಯವಲಯ ನೇಕಾರರ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಿಗೆ ವಿದ್ಯಾಥರ್ಿ ವೇತನ ಹಾಗೂ ಮೃತ ನೇಕಾರರ ನಾಮಿನಿಗಳಿಗೆ ಅಂತ್ಯ ಸಂಸ್ಕಾರ ಸಹಾಯಧನ ವಿತರಣಾ ಸಮಾರಂಭವನ್ನು ಜುಲೈ 3ರಂದು ಮಧ್ಯಾಹ್ನ 1ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಎಸ್.ಆರ್.ಎಸ್ ಸೊಸೈಟಿ ಮುಭಾಗ ಹಮ್ಮಿಕೊಂಡಿದ್ದು ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ವಿದ್ಯಾಥರ್ಿ ವೇತನ ವಿತರಣೆ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ರೇವಣ ಸಿದ್ದೇಶ್ವರ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ವಹಿಸಲಿದ್ದು ರಾಜ್ಯ ಉಣ್ಣೆ ಕೈಮಗ್ಗ ನೇಕಾರರ ಖಾದಿಯೇತರ ಸಂಘದ ಅಧ್ಯಕ್ಷ ಆರ್.ಮಲ್ಲೇಶಪ್ಪ ಸಹಾಯಧನ ವಿತರಿಸಲಿದ್ದು ಸಹಕಾರ ಸಂಘದ ಉಪನಿಬಂಧಕ ಆರ್.ಲೋಕೇಶ್ ಯಶಸ್ವಿನಿಕಾಡರ್್ ವಿತರಣೆ ಮಾಡಲಿದ್ದಾರೆ. ಜವಳಿ ಇಲಾಖೆ ಉಪನಿದರ್ೇಶಕ ಸುನೀಲ್ ಉಣ್ಣೆಉತ್ಪನ್ನಗಳ ಪ್ರದರ್ಶನ ಮಳಿಗೆ ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ಪ್ರಾಧ್ಯಾಪಕ ಡಾ.ಸಿ.ತಿಪ್ಪೇರುದ್ರಯ್ಯ, ಸಹಾಯಕ ಉಪನಿಬಂಧಕ ಕಾಂತರಾಜು, ತಿಪಟೂರು ತಹಶೀಲ್ದಾರ್ ವಿಜಯ್ಕುಮಾರ್, ಸ್ಥಳೀಯ ತಹಶೀಲ್ದಾರ್ ಟಿ.ಸಿ. ಕಾಂತರಾಜು, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಎ.ಪಿ.ಎಂ.ಸಿ ಅಧ್ಯಕ್ಷ ಸಿ.ಬಸವರಾಜು, ಬಿ.ಇ.ಓ ಪ್ರಭುಸ್ವಾಮಿ, ಶಿವಾನಂದ್, ಮುಕುಂದಯ್ಯ, ಶಿವಣ್ಣ, ಸಿ.ಕೆ.ಲೋಕೇಶ್, ಸುಲೋಚನಗುರುಲಿಂಗಯ್ಯ ಉಪಸ್ಥಿತರಿರುವರು.