Saturday, November 2, 2013


ಕನ್ನಡವನ್ನು ಉಳಿಸಿ ಬೆಳೆಸೋಣ : ಶಾಸಕ ಸಿ.ಬಿ.ಸುರೇಶ್ಬಾಬು
ಚಿಕ್ಕನಾಯಕನಹಳ್ಳಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಹಶೀಲ್ದಾರ್ ಕಾಮಾಕ್ಷಮ್ಮ, ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾಧ್ಯಕ್ಷೆ ಗೀತಾರಮೇಶ್, ತಾ.ಪಂ.ಉಪಾಧ್ಯಕ್ಷ ರಮೇಶ್ಕುಮಾರ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಕಸಾಪ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿ,ನ.01 : ನಮ್ಮ ಆಚಾರ, ವಿಚಾರದೊಂದಿಗೆ ಕನ್ನಡವನ್ನು ಉಳಿಸಿ ಬೆಳೆಸೋಣ, ನಾಡಿನ ನೆಲ, ಜಲದ ಬಗ್ಗೆ ಅಪಾರ ಗೌರವವನ್ನಿಟ್ಟುಕೊಂಡು ಮುನ್ನೆಡೆಯೋಣ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
    ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ನೆಲ, ಜಲಗಳಿಗಾಗಿ ಅವಿರತವಾಗಿ ದುಡಿದವರೆಲ್ಲರನ್ನು ಸ್ಮರಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.
ತಹಶೀಲ್ದಾರ್ ಕಾಮಾಕ್ಷಮ್ಮ ಮಾತನಾಡಿ ಹೆಸರಾಗಲಿ ಕನರ್ಾಟಕ, ಉಸಿರಾಗಲಿ ಕನ್ನಡ ಎಂಬ ಕವಿವಾಣಿ ಸದಾ ಎಲ್ಲರ ಜಾಗೃತ ಅರಿವಾಗಿರಲಿ, ಈ ನೆಲದಲ್ಲಿ ಕನ್ನಡ ವಿಜೃಂಭಿಸಲಿ, ಕನ್ನಡ ಆಡಳಿತದಲ್ಲಿ ಸದಾ ಕನ್ನಡ ಮೆರೆಯಲಿ, ಕನ್ನಡ ನಾಡು ನುಡಿಗಾಗಿ ದುಡಿದ, ದುಡಿಯುತ್ತಿರುವ ತಾಲ್ಲೂಕಿನ ಮಹಾನ್ ಚೇತನಗಳು ಎಲ್ಲರಿಗೂ ಆದರ್ಶವಾಗಿರಲಿ, ಮಕ್ಕಳೇ ಚೆನ್ನಾಗಿ ಕನ್ನಡ ಓದಿ, ಕನ್ನಡ ಬರೆಯಿರಿ, ಕನ್ನಡ ಕಲಿಯಿರಿ, ಕನ್ನಡ ಪುಸ್ತಕ ಪ್ರೇಮ ನಿಮ್ಮದಾಗಿರಲಿ ಎಂದ ಅವರು ಕನ್ನಡದ ಪ್ರಗತಿಗಾಗಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಆ ಮೂಲಕ ಕನ್ನಡ ತಾಯಿ ಸೇವೆ ಮಾಡಿ ಸಾರ್ಥಕವಾಗೋಣ ಎಂದರು.
    ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿದರು,     ಸಮಾರಂಭದಲ್ಲಿ ಹಾಮರ್ೋನಿಯಂ ಕಲಾವಿದ ಶಂಕರಲಿಂಗಪ್ಪ , ಬಾಲ ಪ್ರತಿಭೆ ಟಿ.ಜಿ.ಪ್ರಶಾಂತ್ರವರನ್ನು ಸನ್ಮಾನಿಸಲಾಯಿತು.
    ಶಾಲಾ ಮಕ್ಕಳು ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ವಿವಿಧ ಸ್ಥಬ್ಧಚಿತ್ರಗಳ ವೇಷಭೂಷಣದಲ್ಲಿ ಪಾಲ್ಗೊಂಡಿದ್ದರು.
    ಈ ಸಂದರ್ಭದಲ್ಲಿ ಬಿ.ಇ.ಓ ಸಾ.ಚಿ.ನಾಗೇಶ್, ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಜಯಕುಮಾರ್, ಪುರಸಭಾಧ್ಯಕ್ಷೆ ಗೀತಾರಮೇಶ್, ತಾ.ಪಂ.ಉಪಾಧ್ಯಕ್ಷ ರಮೇಶ್ಕುಮಾರ್, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಕಸಾಪ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಪೌರಾಣಿಕ ನಾಟಕಗಳ ರಂಗದೃಶ್ಯಾವಳಿಯಲ್ಲಿ ಪಟ್ಟಣದ ಕಾಳಮ್ಮನಗುಡಿ ಶಾಲಾ ಮಕ್ಕಳಿಂದ ನಾಟಕ ನಡೆಯಿತು. ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದರಾದ ಗಂಗಾಧರಯ್ಯ, ಸಿದ್ದು ಜಿ.ಕೆರೆ, ಶಾಲೆಯಶಿಕ್ಷಕರುಗಳಾದ ಜಯಮ್ಮ, ಸಿ.ಟಿ.ರೇಖಾ ಉಪಸ್ಥಿತರಿದ್ದರು.
 

ಶೀರ್ಷಿಕೆ ಸೇರಿಸಿಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ಬಸ್ ಏಜೆಂಟ್ ಗಂಗಾಧರ್ರಾವ್ ಎಮ್.ಎಮ್.ನಾಯಕನ ಪಾತ್ರವೇಷಧಾರಿಯಾಗಿದ್ದರು. ಶಾಸಕ ಸಿ.ಬಿ.ಸುರೇಶ್ಬಾಬು, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಪುರಸಭಾ ಸದಸ್ಯರಾದ ಅಶೋಕ್, ರವಿಚಂದ್ರ, ಮಹಮದ್ ಖಲಂದರ್, ಕೆ.ಜಿ.ಕೃಷ್ಣೆಗೌಡ ಭಾಗವಹಿಸಿದ್ದರು.

ಚಿಕ್ಕನಾಯಕನಹಳ್ಳಿ ಪಟ್ಟಣದ  ಆಟೋಚಾಲಕರು ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು.

 

ಚಿಕ್ಕನಾಯಕನಹಳ್ಳಿಯ ಗ್ರಾಮೀಣ ಪ್ರತಿಭೆ ಹರೀಶ್ ರಾಷ್ಟ್ರೀಯ ಖೋ-ಖೋ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಇವರನ್ನು ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಸಿ.ಎಸ್.ಪ್ರದೀಪ್ಕುಮಾರ್, ಪಾಲ್ ಹ್ಯಾರಿಸ್ ಫೆಲೋ ರೋ.ಎಂ.ವಿ.ನಾಗರಾಜ್ ರಾವ್, ಕಾರ್ಯದಶರ್ಿ ಡಾ.ಪ್ರಶಾಂತ್ಕುಮಾರ್ ಶೆಟ್ಟಿ, ತಾ.ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂತರ್ಿ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿಕ್ಕನಾಯಕನಹಳ್ಳಿಯ ಡಿವಿಪಿ ಶಾಲೆಯಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಬಿ.ಇ.ಓ ಸಾ.ಚಿ.ನಾಗೇಶ್, ಡಿವಿಪಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು ಪಾಲ್ಗೊಂಡಿದ್ದರು.
ಚಿಕ್ಕನಾಯಕನಹಳ್ಳಿ,ನ.01 : ದೇಶದಲ್ಲೇ ತೃತೀಯ ಸ್ಥಾನ ಹೊಂದಿರುವ ಕನ್ನಡ ಭಾಷೆಯನ್ನು ಆಚರಿಸುವುದರ ಜೊತೆಗೆ ಉಳಿಸಿ, ಬೆಳೆಸುವುದು ಕನ್ನಡಾಭಿಮಾನಿಗಳ ಕರ್ತವ್ಯ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
    ಪಟ್ಟಣದ ಡಿವಿಪಿ ಶಾಲೆಯಲ್ಲಿ ನಡೆದ 58ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಕನ್ನಡ ಭಾಷೆ ಎಲ್ಲಾ ಎಲ್ಲಾ ಭಾಷೆಗಳಿಗಿಂತ ಉತ್ತಮ ಹಾಗೂ ನಮಗೆ ಹೆಮ್ಮೆಯ ಕನ್ನಡ ಭಾಷೆ ಎಂದರು.
    ಸಮಾರಂಭದಲ್ಲಿ ಶಾಲೆಯ ಕಾರ್ಯದಶರ್ಿ ಸಿ.ಎಸ್.ನಟರಾಜು, ಬಿ.ಇ.ಓ ಸಾ.ಚಿ.ನಾಗೇಶ್, ಸಿ.ಪಿ.ಚಂದ್ರಶೇಖರಶೆಟ್ಟರು ಉಪಸ್ಥಿತರಿದ್ದರು.

Friday, September 13, 2013


ಅಕ್ರಮವಾಗಿ ಪಡಿತರ ಚೀಟಿಯನ್ನು ಪಡೆದಿದ್ದರೆ ತನಿಖೆಯಿಂದ ರದ್ದಾಗಲಿದೆತ; ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ
ಚಿಕ್ಕನಾಯಕನಹಳ್ಳಿ,ಸೆ.12 : ಸಕರ್ಾರ ಬಿಪಿಎಲ್ ಮಾನದಂಡಗಳನ್ನು ಪರಿಷ್ಕರಿಸಿ ಜಾರಿಗೆ ತಂದಿರುವ ಹೊಸ ವ್ಯವಸ್ಥೆಯಲ್ಲಿ ಸಕರ್ಾರಿ ನೌಕರರು, ಮೂರು ಎಕ್ಟೇರ್ ಭೂಮಿ ಹೊಂದಿರುವವರು, ಕಾರು, 100 ಸಿ.ಸಿ.ಮೇಲ್ಪಟ್ಟ ದ್ವಿಚಕ್ರ ವಾಹನ ಹೊಂದಿರುವವರು, ಪ್ರತಿ ತಿಂಗಳು 450ಕ್ಕೂ ಹೆಚ್ಚು ವಿದ್ಯುತ್ ಬಿಲ್ ಪಾವತಿಸುತ್ತಿರುವವರು ಅಕ್ರಮವಾಗಿ ಪಡಿತರ ಚೀಟಿಯನ್ನು ಪಡೆದಿದ್ದರೆ ತನಿಖೆಯಿಂದ ರದ್ದಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದ ಸಕರ್ಾರಿ ಕಾರ್ಯಕ್ರಮಗಳ ಹಾಗೂ ಯೋಜನೆಗಳ ಅನುಷ್ಠಾನದ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
 ತಾಲ್ಲೂಕಿನಲ್ಲಿ ಮಧ್ಯವತರ್ಿಗಳು ಹಣ ಪಡೆದು ಅಧಿಕಾರಿಗಳೊಂದಿಗೆ ಶಾಮೀಲಾಗಿ ಅಕ್ರಮವಾಗಿ ಪಡಿತರ ಚೀಟಿ ನೀಡುತ್ತಿರುವ ದೂರಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. 
2011ರ ಜನಗಣತಿಯ ಪ್ರಕಾರ ತಾಲ್ಲೂಕಿಲ್ಲಿ 52612 ಕುಟುಂಬಗಳಿವೆ. ಅಂತ್ಯೋದಯ ಕಾಡರ್್ಗಳು ಪಟ್ಟಣದಲ್ಲಿ 123, ಗ್ರಾಮೀಣ ಪ್ರದೇಶದಲ್ಲಿ 3863ಕಾಡರ್್ಗಳು. ಪಟ್ಟಣದಲ್ಲಿ ಬಿಪಿಎಲ್ ಕಾಡರ್್ದಾರರು 3251 ಗ್ರಾಮೀಣ ಪ್ರದೇಶದಲ್ಲಿ 35091 ಕಾಡರ್್, ಪಟ್ಟಣದಲ್ಲಿ ಎ.ಪಿ.ಎಲ್ ಕಾಡರ್್ 444 ಗ್ರಾಮೀಣ ಪ್ರದೇಶದಲ್ಲಿ 9559 ಕಾಡರ್್ದಾರರಿದ್ದಾರೆ. ಒಟ್ಟು 52313 ಪಡಿತರ ಚೀಟಿಗಳಿವೆ ಎಂದು ತಿಳಿಸಿದರು. 
ಜಿಲ್ಲೆಗೆ 9.82 ಕೋಟಿರೂ ಕುಡಿಯುವ ನೀರಿನ ಯೋಜನೆಗೆ ಮಂಜೂರಾಗಿದ್ದು ಜಿಲ್ಲೆಯ 4ನೇ ಹಂತ ಕಾಮಗಾರಿಗೆ ಸಕರ್ಾರ ಅನುಮತಿ ನೀಡಿದೆ, ತಾಲ್ಲೂಕಿನಲ್ಲಿ ಹಿಂದೆ ಕೊರೆದ ಕೊಳವೆ ಬಾವಿಗಳಿಗೆ ಮೋಟಾರು ಪಂಪ್ ಅಳವಡಿಸಲು ಮೊದಲನೆ ಹಂತವಾಗಿ 5ಕೋಟಿ ರೂ ಬಿಡುಗಡೆಯಾಗಿದೆ, ತುಮಕೂರು, ಮಧುಗಿರಿ, ಉಪವಿಭಾಗಕ್ಕೆ ತಲಾ 2.5ಕೋಟಿ ರೂ ಬಿಡುಗಡೆಯಾಗಿದೆ ಎಂದರು.
. ತಾಲ್ಲೂಕಿನಲ್ಲಿ ಮಳೆ, ಬೆಳೆ ಬಗ್ಗೆ ಅಧಿಕಾರಿಗಳ ಮಾಹಿತಿ ಪಡೆದು ಸೆಪ್ಟಂಬರ್ ವಾಡಿಕೆ ಮಳೆ ಬಿತ್ತನೆ ಸ್ಥಿತಿಗತಿ, ಕುಡಿಯುವ ನೀರು, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಅನುಷ್ಠಾನದ ಬಗ್ಗೆ ಅಧಿಕಾರಿಗಳೊಂದಿಗೆ ಚಚರ್ೆ ನಡೆಸಿ ವರದಿಯನ್ನು ಅಧಿಕಾರಿಗಳು ನೀಡಿದ್ದಾರೆ, ಅಧಿಕಾರಿಗಳು ತಾಲ್ಲೂಕಿನಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ತಾಲ್ಲೂಕಿನಲ್ಲಿ ಇತ್ತಿಚೆಗೆ ಸುರಿದ ಉತ್ತಮ ಮಳೆಯಿಂದ ಜಾನುವಾರುಗಳಿಗೆ ಮೇವಿನ ಕೊರತೆ ಬರುವುದಿಲ್ಲ ಎಂದರು.
ರಾಜ್ಯದಲ್ಲಿ ಏಕರೂಪ ಸೀಮೆಎಣ್ಣೆ ಬೆಲೆಯನ್ನು ಸಕರ್ಾರ ಜಾರಿಗೆ ತಂದಿದ್ದು ಜಿಲ್ಲೆಯಲ್ಲಿ 16.20 ಬೆಲೆ ನಿಗದಿ ಪಡಿಸಲಾಗಿದೆ. ಪ್ರತಿ ಕಾಡರ್್ ಹೊಂದಿರುವವರು 1ಯುನಿಟ್ಗೆ 10 ಕೆ.ಜಿ ಅಕ್ಕಿಯ ಬದಲು 9.ಕೆ.ಜಿ.ಅಕ್ಕಿ 1ಕೆ.ಜಿ.ಗೋದಿ 2ಯುನಿಟ್ಗೆ 20ಕೆಜಿ ಅಕ್ಕಿ ಬದಲು 18ಕೆ.ಜಿ ಅಕ್ಕಿ, 2ಕೆ.ಜಿ ಗೋದಿ, 3ಯುನಿಟ್ಗೆ 30ಕೆ.ಜಿ.ಅಕ್ಕಿಯ ಬದಲು 27ಕೆ.ಜಿ.ಅಕ್ಕಿ 3ಕೆ.ಜಿ.ಗೋಧಿ ನೀಡಲಾಗುವುದು. ಗೋದಿಗೆ ಕೆ.ಜಿಗೆ ಒಂದು ರೂಪಾಯಿಯಂತೆ ನಿಗಧಿಪಡಿಸಲಾಗಿದೆ.
ಪುರಸಭೆಯ ಹತ್ತಿರವಿರುವ ಆಯುಷ್ ಆಸ್ಪತ್ರೆಗೆ ಸೇರಿದ ಒಂದು ಕಟ್ಟಡವನ್ನು ಕೆಲವು ಖಾಸಗಿ ಪಟ್ಟಭದ್ರ ವ್ಯಕ್ತಿಗಳು ಸ್ವಾಧೀನಕ್ಕೆ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿನ ಮೇಲೆ ತಾ.ವೈದ್ಯಾಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಇದರ ಬಗ್ಗೆ ಪರಿಶೀಲಿಸಿ ಸಕರ್ಾರಿ ಆಸ್ತಿಯ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳು ತಾ.ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಉಪವಿಭಾಗಾಧಿಕಾರಿ ಬಿ.ಸಿಂಧು, ತಹಶೀಲ್ದಾರ್ ಕಾಮಾಕ್ಷಮ್ಮ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ಪುರಸಭೆಗೆ ಜೆಡಿಎಸ್ನ ಗೀತಾರಮೇಶ್ ಅಧ್ಯಕ್ಷರಾಗಿ, ಕೆಜೆಪಿಯ ನೇತ್ರಾವತಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ.
ಚಿಕ್ಕನಾಯಕನಹಳ್ಳಿ,ಸೆ.12 : ಚಿಕ್ಕನಾಯಕನಹಳ್ಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಗೀತಾರಮೇಶ್, ಉಪಾಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾದರು.
ಸಕರ್ಾರದ ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡಕ್ಕೆ ಮಹಿಳೆಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ 20ನೇ ವಾಡರ್್ನ ಗೀತಾರಮೇಶ್, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ 4ನೇ ವಾಡರ್್ನ ನೇತ್ರಾವತಿ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಪುರಸಭಾ ಸದಸ್ಯರಲ್ಲಿ ಪರಿಶಿಷ್ಠ ಪಂಗಡದ ಮಹಿಳಾ ಸದಸ್ಯರು ಕೆಜೆಪಿಯಿಂದ ಆಯ್ಕೆಯಾದ ನೇತ್ರಾವತಿ ಬಿಟ್ಟರೆ ಬೇರೆ ಯಾರೂ ಆಯ್ಕೆಯಾಗಿರಲಿಲ್ಲ, ಆ ಕಾರಣದಿಂದ ಉಪಾಧ್ಯಕ್ಷ ಸ್ಥಾನ ಪುರಸಭೆಯಲ್ಲಿ ಕೆಜೆಪಿಯು 2ಸ್ಥಾನ ಪಡೆದಿದ್ದರೂ ನೇತ್ರಾವತಿರವರಿಗೆ ಒಲಿದಿದೆ.
ಅಧ್ಯಕ್ಷ ಸ್ಥಾನ ಜೆಡಿಎಸ್ನ ಗೀತಾರಮೇಶ್ಗೆ ಒಲಿದು ಬಂದಿದ್ದು 18ಸದಸ್ಯರ ಬಲವಿರುವ ಪಕ್ಷದಲ್ಲಿ ಒಮ್ಮತದಿಂದ ತೀಮರ್ಾನಿಸಿ ಉಳಿದ ಸದಸ್ಯರಾರು ನಾಮಪತ್ರ ಸಲ್ಲಿಸದೇ ಇರುವುದರಿಂದ ಅಧ್ಯಕ್ಷ ಸ್ಥಾನವನ್ನು ಗೀತಾರಮೇಶ್ ಅಲಂಕರಿಸಿದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗೀತಾರಮೇಶ್-ನೇತ್ರಾವತಿ ಇಬ್ಬರನ್ನು ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕರಿಯಾಗಿದ್ದ ತಹಶೀಲ್ದಾರ್ ಕಾಮಾಕ್ಷಮ್ಮರವರು ನೂತನ ಅಧ್ಯಕ್ಷರಾಗಿ ಗೀತಾರಮೇಶ್, ಉಪಾಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಒಟ್ಟು 23ಸದಸ್ಯರ ಬಲವಿರುವ ಪುರಸಭೆಯಲ್ಲಿ ಜೆಡಿಎಸ್ 18 ಸ್ಥಾನ, ಕೆಜೆಪಿ 2 ಸ್ಥಾನ, ಕಾಂಗ್ರೆಸ್ 3 ಸ್ಥಾನ ಹೊಂದಿದ್ದರೆ ಬಿಜೆಪಿ ಯಾವುದೇ ಸ್ಥಾನಗಳಿಸಿರಲಿಲ್ಲ.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಶಾಸಕ ಸಿ.ಬಿ.ಸುರೇಶ್ಬಾಬು ಅಭಿನಂದಿಸಿದರು. ಜೆಡಿಎಸ್ ಮತ್ತು ಕೆಜೆಪಿ ಕಾರ್ಯಕರ್ತರು ನೆಹರು ಸರ್ಕಲ್ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಸುತ್ತಲಿನ ಪರಿಸರದಲ್ಲಿ ಬದುಕಲು ನೆರೆಹೊರೆಯವರ ಹೊಂದಾಣಿಕೆ
ಚಿಕ್ಕನಾಯಕನಹಳ್ಳಿ,ಸೆ.12 :   ಮನುಷ್ಯ ತನ್ನ ಸುತ್ತಲಿನ ಪರಿಸರದಲ್ಲಿ ಬದುಕಲು ನೆರೆಹೊರೆಯವರ ಹೊಂದಾಣಿಕೆ ಜೊತೆಗೆ ಕತ್ತಲನ್ನು ಬಡಿದೊಡಿಸುವ ದೀಪಗಳನ್ನು ಹಚ್ಚುವ ಮನಸ್ಸುಗಳನ್ನು ಬೆಳೆಸಬೇಕು ಎಂದು ಉಪನ್ಯಾಸಕ ಹೆಚ್.ಎನ್.ಪ್ರಕಾಶ್ ಹೇಳಿದರು.
  ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸದ್ಬಾವನಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾಥರ್ಿಗಳನ್ನು ಕುರಿತು ಮಾತನಾಡಿದರು. 
ಜಾತಿ, ಮತ, ಧರ್ಮಗಳನ್ನು ಮೀರಿ ರಾಷ್ಟೀಯ ಭಾವೈಕ್ಯತೆಯನ್ನು ರೂಡಿಸಿಕೊಳ್ಳುವ ಮನೋಧರ್ಮ ನಮ್ಮಲ್ಲಿ ಮೈಗೂಡಬೇಕು. ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಮಗು, ತಾಯಿಯಂತಹ ಸದ್ಭಾವನೆ ಬೆಳೆಯಬೇಕು. ಎನ್.ಎಸ್.ಎಸ್. ವಿದ್ಯಾಥರ್ಿಗಳು ಒಳ್ಳೆಯ ವಿಚಾರಗಳ ಕಡೆ ಹೊರಾಡುವ ಶಕ್ತಿ ಬೆಳೆಸಿಕೊಂಡು ಸಮಾಜ ಸೇವೆಗೆ ಸಿದ್ದಾರಾಗಬೇಕು. ಇಂದಿನ ಯುವ ಸಮೂಹದ ಶಕ್ತಿ ಅಣುಬಾಂಬ್ಗಿಂತ ಹೆಚ್ಚು ಪ್ರಬಲವಾಗಿದ್ದು ಎಲ್ಲರೂ ಒಂದು ಮನಸ್ಸಿನಿಂದ ಒಗ್ಗೂಡಿ ಸಹೋದರತ್ವ ಭಾವನೆ ಮೂಡಿ ಜೊತೆಯಾಗಿ ಉತ್ತಮ ಸಮಾಜದ ನಿಮರ್ಾಣಕ್ಕೆ ಭದ್ರ ಅಡಿಪಾಯವಾಗಬೇಕು ಎಂದು ಹೇಳಿದರು.
        ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೋ|| ಸಿ.ಚನ್ನಬಸಪ್ಪ ಮಾತನಾಡಿ ವಿದ್ಯಾಥರ್ಿಗಳಲ್ಲಿ ಸತ್ಚಾರಿತ್ಯ ಸತ್ಭಾವನೆ ಮೂಡಿ ಭಾಷೆ-ಧರ್ಮಗಳ ನಡುವೆ ಅಂತರ ಮೂಡದೆ ಏಕತೆಯಿಂದ ಸಮಗ್ರತೆಗೆ ದುಡಿಯಬೇಕು. ಭಾರತ ಸ್ವಾತಂತ್ಯ ಹೋರಾಟದಲ್ಲಿನ ಅನೇಕ ನಾಯಕರು ಮತೀಯ ಭಾವನೆ ದೂರಮಾಡಿಕೊಂಡು ನಿಸ್ವಾರ್ಥವಾಗಿ ದುಡಿದಿದ್ದರ ಫಲವೇ ಸ್ವಾತಂತ್ಯ ಎಂದು ಹೇಳಿದ ಅವರು ದೇಶದ ಬೆಳೆವಣಿಗೆಗೆ ರಾಷ್ಟಿಯ ಭಾವೈಕ್ಯತೆ ಸಹಕಾರಿಯಾಗುತ್ತದೆಂದು ತಿಳಿಸಿದರು.
       ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಪ್ರೋ|| ಎಸ್.ಎಲ್.ಶಿವಕುಮಾರಸ್ವಾಮಿ. ಪ್ರೋ|| ಹೆಚ್.ಎಸ್.ಶಿವಯೋಗಿ. ಡಿ.ಎಸ್.ಲೋಕೇಶ್. ಉಮೇಶ್, ಸಿದ್ದೇಗೌಡ  ಉಪಸ್ಥಿತರಿದ್ದರು. 
ಕನ್ನಡ ಉಪನ್ಯಾಸಕರಾದ ರವಿಕುಮಾರ್ ಸದ್ಬಾವನಾ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು. 

ಎ.ಕೃಷ್ಣಪ್ಪನವರಿಗೆ ರಾಜ್ಯ ಜೆ.ಡಿ.ಎಸ್ ಅಧ್ಯಕ್ಷ ಸ್ಥಾನ ನೀಡಿರುವುದು ಸ್ವಾಗತಾರ್ಹ
ಚಿಕ್ಕನಾಯಕನಹಳ್ಳಿ : ಹಿಂದುಳಿದ ವರ್ಗಗಳ ಯಾದವ ಸಮಾಜದ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪನವರಿಗೆ ರಾಜ್ಯ ಜೆ.ಡಿ.ಎಸ್ ಅಧ್ಯಕ್ಷ ಸ್ಥಾನ ನೀಡಿರುವುದು ಸ್ವಾಗತಾರ್ಹ ಎಂದು ತಾಲ್ಲೂಕು ಯಾದವ ಸಮಾಜದ ಸಂಘಟನಾ ಕಾರ್ಯದಶರ್ಿ ಲಿಂಗರಾಜು ಹೇಳಿದರು.
ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗದ ಮಾಜಿ ಮುಖ್ಯಮಂತ್ರಿಗಳಾದ ಎ.ಕೃಷ್ಣಪ್ಪನವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದು ಹಿಂದುಳಿದ ವರ್ಗದ ಯಾದವ ಸಮಾಜವನ್ನು ಗುರುತಿಸದೇ ಅನ್ಯಾಯ ಮಾಡಿದ್ದು  ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಎ.ಕೃಷ್ಣಪ್ಪನವರನ್ನು ಗುರುತಿಸಿ ಅಧ್ಯಕ್ಷರನ್ನಾಗಿ ಮಾಡಿರುವುದು ಯಾದವ ಸಮಾಜ ಸ್ವಾಗತಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಬಿ.ಕೆ.ಜಯಣ್ಣ, ಟಿ.ಆರ್.ಓಬಣ್ಣರಾಜು, ಶಿವಾನಂದ, ರಾಮಣ್ಣ, ಹೆಚ್.ಸಿ.ರಾಮಣ್ಣ, ವೀರಣ್ಣ, ಕ್ಯಾತಪ್ಪ, ರವಿ ಮತ್ತಿತರರು ಹಾಜರಿದ್ದರು.

: ತುಮಕೂರು ಜಿಲ್ಲೆ ಬಿ.ಎಸ್.ಪಿ ರಾಜ್ಯ ಮುಖಂಡರಾದ ಪ್ರವಾಸ
ಚಿಕ್ಕನಾಯಕನಹಳ್ಳಿ,ಸೆ.13 : ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ತುರುವೇಕೆರೆ ತಾಲ್ಲೂಕುಗಳಿಗೆ ಬಿ.ಎಸ್.ಪಿ ರಾಜ್ಯ ಮುಖಂಡರಾದ ಆರ್.ಮುನಿಯಪ್ಪ, ಕ್ಯಾಪ್ಟನ್ ಸೋಮಶೇಖರ್, ನಾರಾಯಣರಾಜು ಪ್ರವಾಸ ಮಾಡಲಿದ್ದಾರೆ.
ಚಿಕ್ಕನಾಯಕನಹಳ್ಳಿಗೆ ಸೆಪ್ಟಂಬರ್ 18ರ ಬುಧವಾರ ಬೆಳಗ್ಗೆ 11ಕ್ಕೆ ಬಿ.ಎಸ್.ಪಿ ಕಛೇರಿಯಲ್ಲಿ, ತಿಪಟೂರಿಗೆ 19ರ ಗುರುವಾರ ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರದ ಬಳಿ, ಗುಬ್ಬಿಗೆ 20ರ ಶುಕ್ರವಾರ ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರದಲ್ಲಿ, ತುರುವೇಕೆರೆಗೆ 21ರ ಶನಿವಾರ ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರದ ಬಳಿ ಸಭೆ ನಡೆಸಲಿದ್ದಾರೆ.
ಇವರ ಜೊತೆ ಇನ್ನಿತರ ಮುಖಂಡರುಗಳು ಪ್ರವಾಸ ಮಾಡಿ ತಾಲ್ಲೂಕು ಸಮಿತಿಗಳನ್ನು ಪುನರ್ ರಚಿಸಲಿದ್ದಾರೆ, ಆದುದರಿಂದ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರು ಈ ಸಭೆಗೆ ಆಗಮಿಸುವಂತೆ ಸಂಚಾಲಕ ಪ್ರಸನ್ನಕುಮಾರ್ ಕೋರಿದ್ದಾರೆ.
ಜೋಗಿಹಳ್ಳಿ ಗ್ರಾಮದವರಿಗೂ ದಿನಕೂಲಿ ಕೆಲಸವನ್ನು ನೀಡುವಂತೆ ಜೋಗಿಹಳ್ಳಿ ಗ್ರಾಮಸ್ಥರು ಒತ್ತಾಯಿ
ಚಿಕ್ಕನಾಯಕನಹಳ್ಳಿ,ಸೆ.11 : ತಾಲ್ಲೂಕಿನ ಹೊನ್ನೆಬಾಗಿ ಗ್ರಾಮ ಸರಹದ್ದಿನಲ್ಲಿರುವ ಗಣಿಗಾರಿಕೆಯಲ್ಲಿ ಜೋಗಿಹಳ್ಳಿ ಗ್ರಾಮದವರಿಗೂ ದಿನಕೂಲಿ ಕೆಲಸವನ್ನು ನೀಡುವಂತೆ ಜೋಗಿಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 
  ಚಿಕ್ಕನಾಯಕನಹಳ್ಳಿ ತಾಲೂಕಿನ ಹೋನ್ನೆಬಾಗಿ ಸುತ್ತಮುತ್ತಲ ಗಣಿಗಾರಿಕೆ ನಡೆಯುವಾಗ ಜೋಗಿಹಳ್ಳಿ ಗ್ರಾಮದ 200 ಕ್ಕೂ ಹೆಚ್ಚು ಕೂಲಿಕಾಮರ್ಿಕರು ಗಣಿಯಲ್ಲಿ ಕಾಮರ್ಿಕರಾಗಿ ಕೆಲಸ ಮಾಡುತ್ತಿದ್ದು ಈಗ ಗಣಿಗಾರಿಕೆ ನಿಂತು ಹೋಗಿ ಮಳೆ ಬೆಳೆ ಕೂಲಿ ಇಲ್ಲದೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.
   ಈಗಾಗಲೇ ಗಣಿಪ್ರದೇಶದಲ್ಲಿ ಲಕ್ಷಾಂತರ ಟನ್ ಕಬ್ಬಿಣದ ಅದಿರು ದಾಸ್ತಾನು ಇದ್ದು ಸಕರ್ಾರ ದಾಸ್ತಾನು ಇರುವ ಅದಿರನ್ನು ಈ ಟೆಂಡರ್ ಮೂಲಕ ಹರಾಜು ಮಾಡಿದ್ದು, ಇದರಿಂದ ನಿತ್ಯ ಗಣಿ ಪ್ರದೇಶದಿಂದ ನೂರಾರು ಲಾರಿಗಳು ಕಬ್ಬಿಣದ ಅದಿರನ್ನು  ಬಳ್ಳಾರಿ, ಸೊಂಡೂರು ಸೇರಿದಂತೆ ರಾಜ್ಯದ ಹಾಗೂ ಹೊರರಾಜ್ಯಗಳಿಗೆ  ರವಾನಿಯಾಗುತ್ತಿದ.ೆ ಲಾರಿಗಳಲ್ಲಿ ಕಬ್ಬಿಣದ ಅಧಿರು ತುಂಬಿದ ನಂತರ ಕಬ್ಬಿಣದ ಅದಿರನ್ನು ಮಟ್ಟ ಮಾಡುವ ಕೆಲಸವನ್ನು ಬುಳ್ಳೇನಹಳ್ಳಿ ಹೊನ್ನೆಬಾಗಿ ಕೂಲಿ ಕಾಮರ್ಿಕರೇ ಮಟ್ಟ ಮಾಡುತಿದ್ದಾರೆ, ಅದೇ ರೀತಿ ಜೋಗಿಹಳ್ಳಿ ಗ್ರಾಮಸ್ಥರಿಗೂ ವಾರದಲ್ಲಿ 2 ದಿನ  ಕೆಲಸ ನೀಡುವಂತೆ ಸಣ್ಣಕರಿಯಪ್ಪ, ರಮೇಶ್, ಶಂಕರ್, ದೊಡ್ಡಲಿಂಗಪ್ಪ, ನಂಜಪ್ಪ, ದೊಡ್ಡಯ್ಯ, ಪುಟ್ಟಯ್ಯ, ಜೆ.ಎನ್.ಜಗದೀಶ್, ಪರಮೇಶ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ ಉಪಸ್ಥಿತರಿದ್ದರು

ಕಾನೂನು ಸಾಕ್ಷರತಾ ಶಿಬಿರ
ಚಿಕ್ಕನಾಯಕನಹಳ್ಳಿ,ಸೆ.13 : ಕಾನೂನು ಸಾಕ್ಷರತಾ ರಥಯಾತ್ರೆ ಮತ್ತು ಸಂಚಾರಿ ಜನತಾ ನ್ಯಾಯಾಲಯಗಳ ಪ್ರಯೋಜನಗಳ ಕಾನೂನು ಸಾಕ್ಷರತಾ ಶಿಬಿರವು ಇದೇ 16ರ ಸೋಮವಾರದಿಂದ 18ರ ಬುಧವಾರದವೆರೆಗೆ ತಾಲ್ಲೂಕಿನಾದ್ಯಂತ ನಡೆಯಲಿದೆ.
16ರ ಸೋಮಾವರದಂದು ಮೊದಲನೆ ಅಧಿವೇಶನದ ಕಾನೂನು ಸಾಕ್ಷರತಾ ರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ಚಿ.ನಾ.ಹಳ್ಳಿ ನ್ಯಾಯಾಲಯದ ಆವರಣದಲ್ಲಿ ಬೆಳಗ್ಗೆ 10ಕ್ಕೆ ನಡೆಯಲಿದ್ದು ಪ್ರಧಾನ ಸಿವಿಲ್ ನ್ಯಾಯಾಧೀಸರಾದ ಕೆ.ನಿರ್ಮಲ ಉದ್ಘಾಟನೆ ನೆರವೇರಿಸಲಿದ್ದು ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲ ಜಿ.ಚನ್ನಬಸಪ್ಪ ಮಧ್ಯಸ್ಥಿಕೆ ಮತ್ತು ಕಾನೂನು, ಎಂ.ಮಹಾಲಿಂಗಯ್ಯ ಮಹಿಳೆ ಮತ್ತು ಕಾನೂನು ಬಗ್ಗೆ ಮಾತನಾಡಲಿದ್ದಾರೆ.
16ರಂದು ಎರಡನೇ ಅಧಿವೇಶನ ಕಾತ್ರಿಕೆಹಾಲ್ ಸಕರ್ಾರಿ ಪ್ರೌಡಶಾಲೆಯಲ್ಲಿ ಮಧ್ಯಾಹ್ನ 1ಕ್ಕೆ ನಡೆಯಲಿದ್ದು ಶಾಲೆಯ ಮುಖ್ಯೋಪಾಧ್ಯಾಯ ರೇಣುಕಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಸಹಾಯಕ ಸಕರ್ಾರಿ ಅಭಿಯೋಜಕ ರವಿಚಂದ್ರ ಆರ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಕೆ.ಎಸ್.ಚಂದ್ರಶೇಖರಯ್ಯ ಮಕ್ಕಳ ಹಕ್ಕುಗಳು, ವೈ.ಜಿ.ಲೋಕೇಶ್ವರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಮಾತನಾಡಲಿದ್ದಾರೆ.
16ರಂದು ಮಧ್ಯಾಹ್ನ 3ಕ್ಕೆ ಮೂರನೇ ಅಧಿವೇಶನ ತೀರ್ಥಪುರ ಗ್ರಾಮ ಪಂಚಾಯ್ತಿ ಕಾಯರ್ಾಲಯದಲ್ಲಿ ನಡೆಯಲಿದ್ದು ತೀರ್ಥಪುರ ಗ್ರಾ.ಪಂ.ಅಧ್ಯಕ್ಷ ಪದ್ಮಮ್ಮ ಲಿಂಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಎಂ.ಎನ್.ಶೇಖರಯ್ಯ ಮಹಿಳಾ ದೌರ್ಜನ್ಯ ತಡೆ ಕಾಯಿದೆ, ಬಿ.ಎಂ.ಮೋಹನ್ಕುಮಾರ್ ಮೋಟಾರು ವಾಹನ ಅಪಘಾತ ಪರಿಹಾರ ಕಾಯಿದೆ ಬಗ್ಗೆ ಮಾತನಾಡಲಿದ್ದಾರೆ.
17ರ ಮಂಗಳವಾರ ಹುಳಿಯಾರಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ 10ಕ್ಕೆ ಮೊದಲ ಅಧಿವೇಶನ ನಡೆಯಲಿದ್ದು ಕಾಲೇಜಿನ ಪ್ರಾಂಶುಪಾಲ ಮುರುಗೇಶಪ್ಪ ಅಧ್ಯಕ್ಷತೆ ವಹಿಸಲಿದ್ದು ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಎನ್.ವೀಣಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಎ.ಮಂಜುನಾಥ್ ರ್ಯಾಗಿಂಗ್ ತಡೆ ಕಾಯಿದೆ, ಹೆಚ್.ಹನುಮಂತಯ್ಯ ಸೈಬರ್ ಅಪರಾಧಗಳು ಮತ್ತು ಕಾನೂನು ಬಗ್ಗೆ ಮಾತನಾಡಲಿರುವರು.
ಎರಡನೇ ಅಧಿವೇಶನವು 17ರ ಮಧ್ಯಾಹ್ನ 1ಕ್ಕೆ ಯಳನಡುವಿನ ಸಕರ್ಾರಿ ಪ್ರೌಡಶಾಲೆಯಲ್ಲಿ ನಡೆಯಲಿದ್ದು ಮುಖ್ಯೋಪಾಧ್ಯಾಯ ನಾಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಕೆ.ಸಿ.ವಿಶ್ವನಾಥ ಮಕ್ಕಳ ಹಕ್ಕುಗಳು, ಜಿ.ದಿಲೀಪ್ ಜನನ ಮರಣ ನೊಂದಣಿ ಕಾಯಿದೆ ಬಗ್ಗೆ ಮಾತನಾಡುವರು. ಮೂರನೇ ಅಧಿವೇಶನ 17ರ ಮಧ್ಯಾಹ್ನ 3ಕ್ಕೆ ಬೋರನಕಣಿವೆಯ ಸಕರ್ಾರಿ ಪ್ರೌಡಶಾಲೆಯಲ್ಲಿ ನಡೆಯಲಿದ್ದು ಮುಖ್ಯೋಪಾಧ್ಯಾಯರಾದ ಮಂಜಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ವೈ.ಜಿ.ಲೋಕೇಶ್ವರ ಜನನ ಮತ್ತು ಮರಣ ನೊಂದಣಿ ಕಾಯಿದೆ, ಎಂ.ಶಿವಾನಂದ ಬಾಲ ಕಾಮರ್ಿಕರ ಕಾಯಿದೆ ಬಗ್ಗೆ ಮಾತನಾಡಲಿರುವರು.
18ರ ಬುಧವಾರ ಮೊದಲನೆ ಅಧಿವೇಶನವು ಗೋಡೆಕೆರೆ ಸಕರ್ಾರಿ ಪ.ಪೂ.ಕಾಜೇಜು, ಪ್ರೌಡಶಾಲೆ ಆವರಣದಲ್ಲಿ ಬೆಳಗ್ಗೆ 10ಕ್ಕೆ ನಡೆಯಲಿದ್ದು ಪ್ರಾಂಶುಪಾಲ ಡಿ.ಟಿ.ಪಾಂಡುರಂಗ ಅಧ್ಯಕ್ಷತೆ ವಹಿಸಲಿದ್ದು ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಬಿ.ಎಂ.ಮೋಹನ್ಕುಮಾರ್ ಮೋಟಾರು ವಾಹನ ಕಾಯಿದೆ ಬಗ್ಗೆ ವೈ.ಜಿ.ಲೋಕೇಶ್ವರ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಮಾತನಾಡಲಿರುವರು.
ಎರಡನೇ ಅಧಿವೇಶನ ಸಾಸಲು ಸಕರ್ಾರಿ ಪ್ರೌಡಶಾಲೆಯಲ್ಲಿ ಮಧ್ಯಾಹ್ನ 12ಕ್ಕೆ ನಡೆಯಲಿದ್ದು ಮುಖ್ಯೋಪಾಧ್ಯಾಯ ಸಂತೋಷ್.ಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಹೆಚ್.ಎಸ್.ಜ್ಞಾನಮೂತರ್ಿ ಅಪ್ರಾಪ್ತ ವಯಸ್ಕರ ಆಸ್ತಿ ಹಕ್ಕುಗಳು, ವೈ.ಜಿ.ಲೋಕೇಶ್ವರ ಬಾಲ ಕಾಮರ್ಿಕ ಕಾಯಿದೆ ಬಗ್ಗೆ ಮಾತನಾಡಲಿರುವರು. 18ರ ಮಧ್ಯಾಹ್ನ 3ಕ್ಕೆ ಶೆಟ್ಟಿಕೆರೆ ಗ್ರಾಮ ಪಂಚಾಯ್ತಿ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಗ್ರಾ.ಪಂ.ಅಧ್ಯಕ್ಷತೆ ದಾಕ್ಷಾಯಿಣಿರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಜಿ.ಪರಮೇಶ್ವರಯ್ಯ ಮಹಿಳಾ ದೌರ್ಜನ್ಯ ತಡೆ ಕಾಯಿದೆ, ಹೆಚ್.ಎಸ್.ಜ್ಞಾನಮೂತರ್ಿ ಮಹಿಳೆಯರ ಆಸ್ತಿಯ ಹಕ್ಕುಗಳು ಬಗ್ಗೆ ಮಾತನಾಡಲಿದ್ದಾರೆ.





ಸಲಪರು ಜಾತಿಗೆ ಸರ್ಪ ವಕ್ಕಲಿಗ ಎಂದು ಸಟರ್ಿಫಿಕೇಟ್ ನೀಡುವಂತೆ ಒತ್ತಾಯ.
ಚಿಕ್ಕನಾಯಕನಹಳ್ಳಿ,ಸೆ.11: ಸಲಪರು ಜಾತಿಗೆ  ಸರ್ಪ ವಕ್ಕಲಿಗ ಎಂದು ದಾಖಲೆ ನೀಡುವಂತೆ ಪಟೇಲ್ ಗರುಡೇಗೌಡ ಅಧ್ಯಯನ ಕೇಂದ್ರದ ಸಂಯೋಜಕ ಜಿ.ಶಾಂತರಾಜು ಆಗ್ರಹಿಸಿದ್ದಾರೆ.
ಒಕ್ಕಲಿಗ ಜಾತಿಯಲ್ಲಿ 114 ಒಳಪಂಗಡಗಳಿದ್ದು ಅದರಲ್ಲಿ ಸರ್ಪವಕ್ಕಲಿಗ ಒಂದು ಉಪ ಪಂಗಡವಾಗಿದೆ,  ಸರಕಾರಿ  ಗೆಜೆಟ್ನಲ್ಲಿ ದಾಖಲೆಯಲ್ಲಿದೆ, ಆದರೆ ನಾಡ ಭಾಷೆಯಲ್ಲಿ ಸಲಪರು ಎಂದು ಕರೆಯುತ್ತಾರೆ, ಸಲಪರು ಎಂದು ದಾಖಲೆ ಮಾಡಿದರೆ ಪ್ರವರ್ಗ1 ಕ್ಕೆ ಸೇರುತ್ತದೆ, ಇಲ್ಲಿ ಹಿಂದಿನಿಂದಲೂ ಬಾಯಿ ಮಾತಿನಲ್ಲಿರುವ  ಸಲಪರು ಸರಕಾರಿ ದಾಖಲೆಯಲ್ಲಿ ಸರ್ಪವಕ್ಕಲಿಗ (3ಎ) ಎಂದು ದಾಖಲೆ ಮಾಡುತ್ತಿದ್ದಾರೆ, ಆದರೆ ಇತ್ತೀಚೆಗೆ ಕೆಲವರು ಸರಕಾರಿ ಸವಲತ್ತು ದೊರೆಯುತ್ತದೆ ಎಂದು ಪ್ರವರ್ಗ1(ಸಲಪರು) ಎಂದು ನಮೂದಿಸಿ ಅತಂತ್ರ ಸ್ಥಿತಿ ಉಂಟಾಗಿದೆ, ಶಾಲಾ ದಾಖಲಾತಿ ಸಲಪರು ಎಂದು ಅಪ್ಪ-ಅಮ್ಮನ ಜಾತಿ ಸರ್ಪವಕ್ಕಲಿಗ ಎಂದು ಇರುವುದರಿಂದ ಅಧಿಕಾರಿವರ್ಗದವರಿಗೂ ಸಹ ಗೊಂದಲ ಉಂಟಾಗಿ ಜಾತಿ ಮತ್ತು ಆದಾಯ ದೃಡೀಕರಣ ಪತ್ರ ಕೊಡಲು ಸಾಧ್ಯವಾಗುತ್ತಿಲ್ಲ, ಅದು ಉಲ್ಲಂಘನೆಯಾಗುತ್ತದೆ,  ಒಂದು ಪಕ್ಷ ಸಲಪರು ಎಂದು ಸಟರ್ಿಫಿಕೇಟ್ ತೆಗೆದುಕೊಂಡರೆ ಮುಂದೆ ಸಿಂಧುವಾಗುವುದಿಲ್ಲ. ಜನಾಂಗದ ಮಕ್ಕಳಿಗೆ ತೊಂದರೆಯಾಗುತ್ತದೆ. ಸಕರ್ಾರಿ ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕೆ ಸೇರಲು ಅವಕಾಶ ವಂಚಿತರಾಗುತ್ತಾರೆ ಎಂದು ತಿಳಿಸಿದ್ದಾರೆ.




Thursday, July 18, 2013

ಮಕಡೆ ಮಲಗಿದ ಮುಂಗಾರು: ತಿನ್ನೋಕಿಲ್ಲ ಬೇಳೆಕಾಳು
(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಜು.17 : ಮನ್ಲಿದ್ದ ಇಸೊವೋಸೊ ಹೆಸರುಕಾಳ್ನ ತಂದು ಹೊಲಕ್ಕೆ ಚೆಲ್ಲುದ್ವಿ, ಗಿಡ ಒಂದ ಹಂತಕ್ಕೆ ಬೆಳ್ದು ಗರ್ಭಕಟ್ಟೋಟೈಂಗೆ ಮೊಡಗರ್ಭಕಟ್ಲಿಲ್ಲ ಮಳೆಸುರಸ್ಲಿಲ್ಲ, ಉತ್ತಿದಷ್ಟು ಕಾಳೂ ಕೈ ಸೇರ್ಲಿಲ್ಲ, ದನಗಳಾದ್ರೂ ತಿನ್ನಲಿ ಅಂತ ಕೊಳ್ಳುರಿ ಬಿಚ್ಚಿ, ಕೈ ಚೆಲ್ಲಿ ಕುಂತಿವ್ನಿ. ಹೆಸರುಕಾಳಿನ್ ಕಥೆ ಹಿಂಗಾತು, ರಾಗಿ ಕಾಳಿನ್ ಕಥೆ ಹೆಂಗೋ... ಅನ್ನೊ ಯೋಚ್ನೆ ನನ್ನದು. ನಮ್ಮ ಬದುಕು ಒಂಥರಾ ಬ್ಯಾಸಾಯ ಮನೆ ಮಕ್ಳೆಲ್ಲಾ ಸಾಯ ಅನ್ನಂಗೆ ಆಗೋಗೈತೆ, ರಾಗಿನೂ ಕೈ ಕೊಟ್ರೆ ಸಿದ್ರಾಮಯ್ಯ ಕೊಟ್ಟಿರೊ ಅನ್ನ ಉಂಡ್ಕೊಂಡು ಜೀವ ಹಿಡ್ಕೊ ಬೇಕಾಗೈತೆ ಅಂತಾರೆ, ಗುಡ್ಡದ ಹಟ್ಟಿ ಬಡ ರೈತ ಚಿತ್ತಪ್ಪ.
ತಾಲ್ಲೂಕಿನಲ್ಲಿ ಮುಂಗಾರು ಮಕಾಡೆ ಮಲಗಿದೆ, ಸಣ್ಣಹಿಡುವಳಿದಾರರು ಮುಂಗಾರಿನ ಕನಸು ಬಿಟ್ಟು ಎಷ್ಟೋ ದಿನಗಳಾಗಿವೆ. ಮುಂಗಾರಿನ ಬೆಳೆಗಳಾದ ಹೆಸರು, ತೊಗರಿ, ಉದ್ದು, ಹಲಸಂದೆ ಬೆಳೆಗಳು ಹಾಳಾಗಿವೆ. ಅಲ್ಲೋ ಇಲ್ಲೋ ಒಂದಷ್ಟು ಕಡೆ ಹಾಕಿರುವ ಎಳ್ಳು ಗಣೇಶನ ಹಬ್ಬದ ಎಳ್ಳುಂಡೆಗೆ ಸಿಗಬಹುದು.
ತಾಲ್ಲೂಕಿನಾದ್ಯಂತ ಸುಮಾರು 12675 ಎಕರೆ ಪ್ರದೇಶಕ್ಕೆ ಹೆಸರುಕಾಳು ಬಿತ್ತಿದ್ದಾರೆ, ತೋಗರಿ 3050, ಹಲಸಂದೆಯನ್ನು 1125 ಎಕರೆಗೆ, ಉದ್ದನ್ನು 550  ಎಕರೆ ಎಳ್ಳು 225 ಎಕರೆಯಲ್ಲಿದೆ. ಹಂದನಕೆರೆಯಲ್ಲಿ 1600, ಹುಳಿಯಾರಿನಲ್ಲಿ 1515 ಎಕರೆಯಲ್ಲಿ  ಹೆಸರು ಬಿತ್ತಿದ್ದರೆ, ಹುಳಿಯಾರಿನಲ್ಲಿ ಒಂದು ಸಾವಿರ ಎಕೆರೆಯಲ್ಲಿ ತೊಗರಿ ಬಿತ್ತಿದ್ದಾರೆ.
ಏಪ್ರಿಲ್ನಿಂದಲೇ ಆರಂಭವಾಗುವ ಮುಂಗಾರು ತಡವಾಗಿ ಆರಂಭವಾಯಿತು. ಈ ಬಾರಿ ಭರಣಿ ಮಳೆ ಕೈ ಕೊಟ್ಟಿದ್ದರಿಂದ ಹಲವರು ಹೆಸರನ್ನು ಭಿತ್ತಿದ್ದು ಕೃತಿಕಾ ಮಳೆಗೆ ಅಂದರೆ ಮೇ ಕೊನೆಯಲ್ಲಿ, 90 ದಿವಸದ ಬೆಳೆಯಾದ ಹೆಸರು, ಈ ಹೊತ್ತಿಗಾಗಲೇ ಕಾಳು ತುಂಬಿದ ಗೊಂಚಲುಗಳ ಗಿಡದಲ್ಲಿ ಅಷಾಡದ ಗಾಳಿಗೆ ತೊನೆದಾಡುತ್ತಿರಬೇಕಾಗಿತ್ತು, ಆದರೆ ಮಳೆ ಕೈ ಕೊಟ್ಟಿದ್ದರಿಂದ ಕಾಳು ತುಂಬುವುದಿರಲಿ ಗರ್ಭನೆ ಕಟ್ಟಲಿಲ್ಲವಾದ್ದರಿಂದ ಹೊಲದ ತುಂಬಾ ಬರಿ 'ಸ್ಯಾದ್ರ'ನೇ ತುಂಬಕೊಂಡಿದೆ.
 ಇನ್ನು ಉದ್ದಿನ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಹಲಸಂದೆ 4ತಿಂಗಳ ಬೆಳೆಯಾದ್ದರಿಂದ ಒಂದಿಷ್ಟು ನೆಚ್ಚಿಕೊಳ್ಳಬಹುದು, ಮುಂದಿನ ಮಳೆಗಳು ಹನಿಯದಿದ್ದರೆ ಇದಕ್ಕೂ ಅದೇ ಗತಿ, ಆದರೆ ತೋಟಗಳಲ್ಲಿ ಹಾಕಿರುವವರು ಮತ್ತು ಕಾಲಕಾಲಕ್ಕೆ ನೀರು ಕಟ್ಟಿರುವವರಿಗೆ ಕಾಳು ಸಿಗುತ್ತದೆ, ಬಡ ರೈತನ ಪಾಡು ಮಾತ್ರ ತುಸು ಕಷ್ಟವೇ, ಕಾರಣ ಕಳೆದ ಬಾರಿ ಮಳೆ ಇಲ್ಲದೆ ಬರ ದಲ್ಲಿ ನರಳಿದ ರೈತನಿಗೆ ಈ ಬಾರಿ ಮುಂಗಾರು ಕೈ ಕೊಟ್ಟಿರುವುದರಿಂದ ಮನೆಯಲ್ಲಿ ತಿನ್ನಲಿಕ್ಕೆಂದು ಇಟ್ಟುಕೊಳ್ಳಲು ಬೇಳೆ ಕಾಳುಗಳು ಇಲ್ಲವಾಗಿವೆ. 
ರಾಗಿ ಸೇರಿದಂತೆ ಸಿರಿ ಧಾನ್ಯಗಳ ಗತಿ ಏನು?: ಜುಲೈ ಆರಂಭದಿಂದ ಆಗಸ್ಟ್ 15ರವರೆಗೆ ರಾಗಿ, ಸಾವೆ, ನವಣೆ ಹಾರಕ ಬೆಳೆಗಳಿಗೆ ಸುಸಂದರ್ಭ, ರಾಗಿಯ ವಿವಿಧ ತಳಿಗಳಾದ ಇಂಡಾಫ್-5, ಇಂಡಾಫ್-8, ಜಿಪಿಯು-28, ಪಿಆರ್-202 ಭಿತ್ತನೆ ಮಾಡಲು ಅವಕಾಶವಿದೆ. ಒಟ್ಲು ಮಾಡಿ ಸಸಿ ಹಾಕುವವರಿಗೆ ಈಗಾಗಲೇ ಕಾಲ ಮೀರಿ ಹೋಗಿದೆ. ಮೃಗಶಿರಾ ಮಳೆ ಬಾರದಿರುವುದರಿಂದ ರಾಗಿ ಒಟ್ಲು ಒಣಗಿ ಹೋಗಿದೆ, ಇನ್ನೇನಿದ್ದರೂ ಸಡ್ಡೆರಾಗಿ ಅಂದರೆ ನೇರವಾಗಿ ರಾಗಿಯನ್ನು ಸಾಲು ಗುಣಿಯಲ್ಲಿ ಹಾಕುವವರೆಗೆ ಮಾತ್ರ ಅವಕಾಶವಿದೆ. ಪುನರ್ವಸು, ಪುಷ್ಯ, ಮಗ್ಗೆಮಳೆ ನೆಲಮುಟ್ಟದೆ ಮುಗಿಲಲ್ಲೇ ನಿಂತರೆ ಈ ಬಾರಿಯೂ ಬರ ಬಿದ್ದಂಗೆ ಸರಿ...,  ಓ ಪ್ರಕೃತಿಯೇ ಮುನಿಯಬೇಡ, ಮಳೆ ರಾಯನೇ ಹಾಗೆ ಮಾಡಬೇಡ ಧರೆಗಳಿದು ದಣಿದಿರುವ ಜೀವಗಳಿಗೆ ತಂಪನೆರೆಯಪ್ಪ.

ಹಳೆಯೂರು ಆಂಜನೇಯಸ್ವಾಮಿ ಜಾತ್ರೆಯ ಪ್ರಯುಕ್ತ ವಿವಿಧ ಸಂಘಸಂಸ್ಥೆಗಳಿಂದ ಸಾಂಸ್ಕೃತಿಕ ವೈಭವ.
  • 19ರಂದು ಚಿತ್ರಕಲಾ ಪ್ರದರ್ಶನ, 
  • 20ರಂದು ರಾಜ್ಯಮಟ್ಟದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ, ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ.
  • 21 ರಂದು ನವದಂಪತಿಗಳ ಸ್ಪಧರ್ೆ, ಕುಸ್ತಿ ಪಂದ್ಯಾವಳಿ, ಸಂಪೂರ್ಣ ರಾಮಾಯಣ ನಾಟಕ. 

ಚಿಕ್ಕನಾಯಕನಹಳ್ಳಿ,ಜು.17: ಪಟ್ಟಣದ ಹಳೆಯೂರು ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾ ರಥೋತ್ಸವ ಇದೇ 19 ರಿಂದ 21 ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು ಪ್ರತಿವರ್ಷದಂತೆ ಈ ವರ್ಷವು ಸಂಘಸಂಸ್ಥೆಗಳು ವಿವಿಧ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿವೆ.  
ಜುಲೈ 19ರ ಶುಕ್ರವಾರ ಬೆಳ್ಳಿಪಲ್ಲಕ್ಕಿ ಉತ್ಸವ, 20ರಂದು ಬ್ರಹ್ಮರಥೋತ್ಸವ, 21ರಂದು ರಥೋತ್ಸವ ನಡೆಯಲಿದೆ. 
ವಾಣಿ ಚಿತ್ರಕಲಾ ಕಾಲೇಜಿನಲ್ಲಿ 19ರಿಂದ 21ರವರೆಗೆ ಚಿತ್ರಕಲಾ ಪ್ರದರ್ಶನ ಮತ್ತು ಚಿತ್ರಕಲಾ ಪ್ರಾತ್ಯಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಖ್ಯಾತ ಕಲಾವಿದ ಪ್ರಭು ಹರಸೂರು ಪ್ರದರ್ಶನದ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. 
ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆ: 20ರಂದು ಅನ್ನಪೂಣರ್ೇಶ್ವರಿ ಕಲಾ ಸಂಘ ಹಾಗೂ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗ ರಾಜ್ಯ ಮಟ್ಟದ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯನ್ನು 10.30ಕ್ಕೆ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದಾರೆ. 
ಡ್ಯಾನ್ಸ್ ಡ್ಯಾನ್ಸ್ ಸೀನಿಯರ್ ಗ್ರೂಪ್ಗೆ ಪ್ರವೇಶ ದರ.500ರೂ, ಗೆಲುವು ಪಡೆದವರಿಗೆ, ಪ್ರಥಮ ಬಹುಮಾನ 30ಸಾವಿರ, ದ್ವಿತೀಯ ಬಹುಮಾನ15ಸಾವಿರ, ತೃತಿಯ ಬಹುಮಾನ 7ಸಾವಿರ, 
ಜ್ಯೂನಿಯರ್ ಗ್ರೂಪ್ ಪ್ರವೇಶ ದರ 300ರೂ, ಪ್ರಥಮ ಬಹುಮಾನ 10ಸಾವಿರ ರೂ, ದ್ವಿತೀಯ ಬಹುಮಾನ 5ಸಾವಿರ, ತೃತಿಯ ಬಹುಮಾನ 3ಸಾವಿರ, ಜ್ಯೂನಿಯ್ ಸಿಂಗಲ್ ಪ್ರವೇಶ ದರ 100ರೂ ಪ್ರಥಮ ಬಹುಮಾನ 1500ರೂ, ದ್ವಿತೀಯ 1ಸಾವಿರ, ತೃತಿಯ 750, ಜ್ಯೂನಿಯರ್ ಕಪಲ್ ಪ್ರವೇಶ ದರ 150ರೂ  ಪ್ರಥಮ ಬಹುಮಾನ 2ಸಾವಿರ, ದ್ವಿತೀಯ 1ಸಾವಿರ, ತೃತಿಯ 750, ಸೀನಿಯರ್ ಕಪಲ್ ಪ್ರವೇಶ ದರ ರೂ 200, ಪ್ರಥಮ ಬಹುಮಾನ 3ಸಾವಿರ, ದ್ವಿತೀಯ 2ಸಾವಿರ, ತೃತಿಯ 1ಸಾವಿರ ರೂ ಹಾಗೂ ಆಕರ್ಷಕ ಟ್ರೋಪಿ ನೀಡಲಾಗುವುದು. ಕಾರ್ಯಕ್ರಮದ ನೇರ ಪ್ರಸಾರ ಅಮೋಘ ಚಾನಲ್ನಲ್ಲಿ ಪ್ರಸಾರಗೊಳ್ಳುವುದು ಹೆಚ್ಚಿನ ವಿವರಗಳಿಗಾಗಿ 9900399920, 9980163152 ನಂ.ಗೆ ಸಂಪಕರ್ಿಸಬಹುದು.
ನವದಂಪತಿಗಳ ಸ್ಪಧರ್ೆ: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘ 20ನೇ ವರ್ಷದ ರಾಜ್ಯ ಮಟ್ಟದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಹಾಗೂ 22ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನ ಹಮ್ಮಿಕೊಂಡಿದೆ.
20ರ ಶನಿವಾರ ಮಧ್ಯಾಹ್ನ 3ಕ್ಕೆ ಪುರಸಭಾ ಕಾಯರ್ಾಲಯದ ಮುಂಭಾಗ ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆ ಇದೆ.
21ನೇ ವರ್ಷದ ನವದಂಪತಿಗಳ ಸ್ಪಧರ್ೆಯನ್ನು 21ರ ಭಾನುವಾರ ಮಧ್ಯಾಹ್ನ 3ಕ್ಕೆ ಕೋಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು, ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದೇ ಸಂಜೆ 8ಕ್ಕೆ ನವದಂಪತಿಗಳ ಹಾಗೂ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಬಹುಮಾನ ವಿತರಣೆ ಮಾಡಲಿದ್ದು, ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ನೇರ ಪ್ರಸಾರ ಅಮೋಘ ಕೇಬಲ್ ನೆಟ್ವಕರ್್ನಲ್ಲಿ ಪ್ರಸಾರಗೊಳ್ಳಲಿದೆ.
ಕುಸ್ತಿ ಸ್ಪಧರ್ೆ: 21ರ ಭಾನುವಾರ ಪಟ್ಟಣದ ವ್ಯಾಯಾಮ ಶಾಲೆಗಳು ತಾಲೂಕು ಕ್ರೀಡಾಂಗಣದಲ್ಲಿ ಕುಸ್ತಿ ಸ್ಪಧರ್ೆಯನ್ನು ಏರ್ಪಡಿಸಿದೆ, ಸಂಜೆ ಮಿತ್ರಕಲಾ ಸಂಘದ ವತಿಯಿಂದ  13ನೇ ವರ್ಷದ ಸಂಪೂರ್ಣ ರಾಮಾಯಣ ನಾಟಕವನ್ನು ಹಳೆಯೂರು ಶ್ರೀ ಆಂಜನೇಯಸ್ವಾಮಿ ಗುಡಿ ಬೀದಿ(ಹೂವಾಡಿಗರ ಬೀದಿ)ಯಲ್ಲಿ ನಾಟಕ ನಡೆಯಲಿದೆ.

  1. ಚುನಾವಣೆಯಲ್ಲಿ ಸ್ಪಧರ್ಿಸಿ ಲೆಕ್ಕ ಕೊಡದ ಅಬ್ಯಾಥರ್ಿಗಳ ಹೆಸರು ಪ್ರಕಟ.

                 ಚಿಕ್ಕನಾಯಕನಹಳ್ಳಿ,ಜು.17 : ಕಳೆದ ವಿಧಾನಸಭೆಯಲ್ಲಿ ಜೆಡಿಯುವಿನಿಂದ ಸ್ಪಧರ್ಿಸಿದ್ದ ಪ್ರಕಾಶ್ ಹಾಗೂ ಪುರಸಭೆ ಚುನಾವಣೆಯಲ್ಲಿ ಸ್ಪಧರ್ಿಸಿದ್ದ 20ನೇ ವಾಡರ್್ನ ಶಕುಂತಲಮ್ಮ, 4ನೇ ವಾಡರ್್ನ ಶೈಲಜ, 14ನೇ ವಾಡರ್್ನಿಂದ ಬಾಬುಸಾಹೇಬ್ರವರು ಇದುವರೆವಿಗೂ ತಮ್ಮ ಚುನಾವಣಾ ವೆಚ್ಚದ ಲೆಕ್ಕಪತ್ರವನ್ನು ಚುನಾವಣಾಧಿಕಾರಿಗೆ ಸಲ್ಲಿಸಿರುವುದಿಲ್ಲ, ಇವರು ತಮ್ಮ ಚುನಾವಣಾ ವೆಚ್ಚದ ಬಗ್ಗೆ ಮಾಹಿತಿ ನೀಡದಿದ್ದರೆ ಮುಂದಿನ ಚುನಾವಣೆಗೆ ಸ್ಪಧರ್ಿಸಲು ಅವಕಾಶವಿರುವುದಿಲ್ಲ ಎಂದು ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನಡೆದು ಫಲಿತಾಂಶ ಘೋಷಣೆಯಾದ ಒಂದು ತಿಂಗಳ ನಂತರ ಎಲ್ಲಾ ಅಭ್ಯಥರ್ಿಗಳು ತಮ್ಮ ಚುನಾವಣಾ ವೆಚ್ಚದ ಮಾಹಿತಿ ನೀಡಬೇಕು, ತಾಲ್ಲೂಕಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪಧರ್ಿಸಿದ್ದ 11ಅಭ್ಯಥರ್ಿಗಳ ಪೈಕಿ ಪ್ರಕಾಶ್ರವರು ಹಾಗೂ ಪುರಸಭೆಯ 72 ಅಭ್ಯಥರ್ಿಗಳ ಪೈಕಿ ಶಕುಂತಲಮ್ಮ, ಶೈಲಜ, ಬಾಬುಸಾಹೇಬ್ರವರಿಗೆ ಈಗಾಗಲೇ ಒಂದು ಬಾರಿ ರಿಜಿಸ್ಟಾರ್ ನೋಟಿಸ್ ಹಾಗೂ ಮೊದ್ದಾಂ ನೋಟೀಸ್ ನೀಡಿದ್ದರೂ ಇದುವರೆವಿಗೂ ವೆಚ್ಚದ ಬಗ್ಗೆ ಮಾಹಿತಿ ನೀಡಿಲ್ಲ ಈ ಬಗ್ಗೆ ಚುನಾವಣಾ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಭಾರತ ಚುನಾವಣಾ ಆಯೋಗದ ಪ್ರಕಾರ 300ಕ್ಕೂ ಹೆಚ್ಚು ಜನರಿದ್ದು ಮತಗಟ್ಟೆಯಿಂದ ಅವರು 2.ಕಿ.ಮೀಯಿಂದ ದೂರವಿದ್ದರೆ ಆ ಪ್ರದೇಶದಲ್ಲಿ ಮತಗಟ್ಟೆ ಆರಂಭಿಸುವುದಾಗಿ ಸೂಚನೆಯಿದೆ. ತಾಲ್ಲೂಕಿನಲ್ಲಿ ಅಂತಹ ಪ್ರದೇಶ ಯಾವುದೂ ಇಲ್ಲವೆಂದು ತಿಳಿಸಿದರು. ತಾಲ್ಲೂಕಿನಲ್ಲಿ ತೆರವಾಗಿರುವ ತೀರ್ಥಪುರ, ದೊಡ್ಡ ಎಣ್ಣೆಗೆರೆ, ಕುಪ್ಪೂರು, ದಸೂಡಿ, ತಿಮ್ಮನಹಳ್ಳಿ ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಆಗಸ್ಟ್ 4ರಂದು ಚುನಾವಣೆ ನಡೆಯಲಿದೆ. ಆಗಸ್ಟ್ 7ರಂದು ಬುಧವಾರ 8ಕ್ಕೆ ಮತ ಎಣಿಕೆ ನಡೆಯಲಿದೆ.
ಈ ಸಂದರ್ಭದಲ್ಲಿ ಚುನಾವಣಾ ಶಿರಸ್ತಾರ್ ಎಲ್.ಎಸ್.ಶಿವಶಂಕರ್  ಉಪಸ್ಥಿತರಿದ್ದರು.



Monday, July 15, 2013

 ಹಾಸ್ಯದೊಂದಿಗೆ ಜೀವನ ದರ್ಶನದ ಮಾಡಿಸುವ ತಾಕತ್ತು ತೇಜಸ್ವಿ ಬರಹಗಳಲ್ಲಿದೆ: 
  • ಈ ಧಾಟಿಯ ಬರಹ ವಿಶ್ವದಲ್ಲಿ ಮೂವರಿಗೆ ಮಾತ್ರ ಧಕ್ಕಿದೆ, ಅದರಲ್ಲಿ ತೇಜಸ್ವಿ ಒಬ್ಬರು.
  • ತೇಜಸ್ವಿಯವರ 'ಕಾಡು ಮತ್ತು ಕ್ರೌರ್ಯ' ಪ್ರಿಂಟ್ಗೆ ಸಿದ್ದವಾಗಿರುವ ಕೃತಿ
  • ಮಾನಸ ಗಂಗೋತ್ರಿ ಆವರಣ ಸ್ಮಶಾನವಾಗಬಾರದೆಂದು ಅಣ್ಣನ ಕಳೆಬರವನ್ನು  ಕುಪ್ಪಳಿಗೆ ತಂದ ಪೂಚಂತೇ.

ಚಿಕ್ಕನಾಯಕನಹಳ್ಳಿ,ಜು.15 : ಪೂಚಂತೇಯವರು ತಮ್ಮ ಬರವಣಿಗೆಯಲ್ಲಿ ಹಾಸ್ಯದೊಂದಿಗೆ ಜೀವನ  ದುಃಖವನ್ನು ಬಿಂಬಿಸುತ್ತಿದ್ದ ರೀತಿಯ ಮನೋಜ್ಞವಾಗಿದೆ ಇಂತಹ  ಬರವಣಿಗೆ ವಿಶ್ವದ ಮೂವರು ಉತ್ತಮ ಬರಹಗಾರರಲ್ಲಿ ಪೂರ್ಣಚಂದ್ರ  ತೇಜಸ್ವಿಯವರು ಒಬ್ಬರು ಎಂದು ಅಂತರ ರಾಷ್ಟ್ರೀಯ ಕಲಾವಿದ ಡಾ.ಕೆ.ಟಿ.ಶಿವಪ್ರಸಾದ್ ತಿಳಿಸಿದರು.
ಪಟ್ಟಣದ ನವೋದಯ ಕಾಲೇಜಿನ ಆವರಣದಲ್ಲಿ ನಡೆದ ಯುಜಿಸಿ ಪ್ರಾಯೋಜಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮದ ಆಶಯ ಭಾಷಣದಲ್ಲಿ ಭಾಗವಹಿಸಿ ಮಾತನಾಡಿದರು. ಇಂತಹ ಬರಹದ ಧಾಟಿ ವಿಶ್ವದ ಮೂವರು ಉತ್ತಮ ಬರಹಗಾರರಾದ ಬೋರೆಸ್, ಮಾಕರ್್ವೇಸ್, ತೇಜಸ್ವಿಯವರಿಗೆ ಧಕ್ಕಿತ್ತು ಎಂದ ಅವರು, ಕಲಾ ಮೀಮಾಂಸೆಯೊಂದಿಗೆ ಬರವಣಿಗೆ ಆರಂಭಿಸಿದ ಅವರು. ಪರಿಸರದ ಪೋಟೋಗ್ರಾಪ್ಗೆ ಹೆಚ್ಚು ಒತ್ತು ನೀಡಿದವರು, ತಮ್ಮ ಪರಿಸರದ ಜೊತೆಗೆ ವೈಜ್ಞಾನಿಕ, ವೈಚಾರಿಕ ಜ್ಞಾನದಲ್ಲೂ ತಮ್ಮನ್ನು ತಾವು ಅನ್ವೇಷಿಸಿಕೊಳ್ಳುತ್ತಾ ತಾನು ಕಂಡು ಕೊಂಡ ಸತ್ಯಗಳಿಗೆ ಅಕ್ಷರದ ರೂಪವನ್ನು ಕೊಟ್ಟವರು ಎಂದರು. 
ತೇಜಸ್ವಿಯವರು ಬರೆಯುತ್ತಿದ್ದ ಪುಸ್ತಕಗಳಲ್ಲಿ ಆರಂಭ ಯಾವುದು, ಕೊನೆ ಯಾವುದು ಎಂಬುದೇ ತಿಳಿಯುತ್ತಿರಲಿಲ್ಲ ಆದರೂ ಅವರ ಪುಸ್ತಕಗಳಲ್ಲಿ ಯುವ ಪೀಳಿಗೆ ಅರಿಯಬೇಕಿರುವ ಅಂಶ ಹೆಚ್ಚಿದೆ. ತೇಜಸ್ವಿಯವರ ಬರಹಗಳು ಐ.ಟಿ.ಬಿ.ಟಿಯಿಂದ ಹಿಡಿದು ಇಂದಿನ ಯುವಕರವರೆಗೆ ಎಲ್ಲರೂ ಸುಲಭವಾಗಿ ಓದುವಂತೆ ಮಾಡುತ್ತಿದ್ದ ಲೇಖಕರಾಗಿದ್ದ ಅವರು, ತನ್ನ ಕಥೆಗಳಿಗೆ  ಪತ್ರಿಕೆಯ ವರದಿಗಾರಿಕೆಯ ತಂತ್ರದ ಟೆಚ್ ನೀಡುವ ಮೂಲಕ ಬರವಣಿಗೆಗೆ ಹೊಸ ರೂಪವನ್ನು ಕೊಡಲು ಪ್ರಯತ್ನಿಸುತ್ತಿದ್ದರು ಅದು  ಅವರ ಬರೆದ ಅದರೆ ಇನ್ನೂ ಪ್ರಿಂಟ್ ಆಗಿಲ್ಲದ  ಕೃತಿಯಾದ  ಕಾಡು ಮತ್ತು ಕ್ರೌರ್ಯ ದಲ್ಲಿ ಕಂಡು ಬರುತ್ತದೆ,  ಈ ಪುಸ್ತಕವನ್ನು  ಶಿಷ್ಯಂದಿರು ಪ್ರಿಂಟ್ ಮಾಡಿಸಲು ತಯಾರಿ ನಡೆಸುತ್ತಿದ್ದಾರೆ ಎಂದರು.
ಮಾಜಿ ಶಾಸಕ ಹಾಗೂ ನವೋದಯ ವಿದ್ಯಾ ಸಂಸ್ಥೆ ಅಧ್ಯಕ್ಷ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಒಂದು ಕಾಲದಲ್ಲಿ ನಾನು ಕೂಡ ತೇಜಸ್ವಿಯವರ ಅಭಿಮಾನಿ, ತೇಜಸ್ವಿಯವರು ಕೃಷಿಗಿಂತ ಹೆಚ್ಚಾಗಿ ಪ್ರಕೃತಿ ಇಷ್ಟಪಡುತ್ತಿದ್ದ ಒಬ್ಬ ಶಿಸ್ತಿನ ಮನುಷ್ಯ, ನೇರ ಮಾತುಗಾರಿಕೆ ಹೊಂದಿದ್ದ ಅವರು ಪಟ್ಟಣದಲ್ಲಿ ಬೆಳೆದು ಹಳ್ಳಿಗಾಡಿನ ಜೀವನವನ್ನು ಅರಸಿ ಬಂದವರು. ಅವರು ಕೃಷಿಗಿಂತ ಹೆಚ್ಚಾಗಿ ಪ್ರಕೃತಿ ಅನ್ವೇಷಣಾಕಾರರಾಗಿ ಹೆಸರು ಪಡೆದವರು, ತೇಜಸ್ವಿ ತಮ್ಮ ತಂದೆ ಕುವೆಂಪು ರವರ ಕಳೆಬರವನ್ನು ಮೈಸೂರನ ಗಂಗೋತ್ರಿಯಲ್ಲಿ ಸಮಾಧಿ ಮಾಡಲು ಒಪ್ಪಲಿಲ್ಲ ಕಾರಣ ಅಲ್ಲಿದ್ದ ಒಂದು ವರ್ಗ ಕನ್ನಡ ಅಧ್ಯಯನ ಕೇಂದ್ರದ ಆವರಣವನ್ನು ಸ್ಮಶಾನ ಮಾಡಲು ಹೊರಟ್ಟಿತ್ತು ಅದನ್ನು ತಪ್ಪಿಸುವ ಸಲುವಾಗಿ ಅಣ್ಣನ ಸಮಾಧಿಯನ್ನು ಕುಪ್ಪಳಿ ಮಾಡಲಾಯಿತು ಎಂಬ ಸತ್ಯವನ್ನು ತೇಜಸ್ವಿ ತಮ್ಮ ಬಳಿ ಹೇಳಿಕೊಂಡಿದ್ದರು ಎಂದು ಜೆ.ಸಿ.ಎಂ. ತಿಳಿಸಿದರು. 
ತೇಜಸ್ವಿಯವರು  ಏಕೆ ಪುಸ್ತಕ ಬರೆಯುತ್ತಾರೆ ಎಂಬ  ಪ್ರಶ್ನೆಗೆ ಅವರ ಕೊಟ್ಟ ಉತ್ತರವೆಂದರೆ  ಮುಂದಿನ ಪೀಳಿಗೆ ಹುಡುಕಾಟದಲ್ಲಿ ತೊಡಗಬಾರದೆಂಬ ಉದ್ದೇಶದಿಂದ ಪುಸ್ತಕಗಳನ್ನು ಬರೆಯುತ್ತಿರುವುದಾಗಿ ತಿಳಿಸಿದ್ದಾರು  ಎಂದರಲ್ಲದೆ, ಅರಣ್ಯ ಸರಹದ್ದಿನ ಕಡೆ  ಆಗುತ್ತಿದ್ದ ವಿಚಾರಗಳನ್ನು ತೇಜಸ್ವಿಯವರಿಗಿಂತ ಉತ್ತಮವಾಗಿ ಬರೆಯುತ್ತಿದ್ದ ಬರಹಗಾರರು ಇರಲಿಲ್ಲ ಅಂತಹ ಅದ್ವಿತೀಯತೆ ಅವರಲ್ಲಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನವೋದಯ ವಿದ್ಯಾ ಸಂಸ್ಥೆ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಮಾತನಾಡಿ ರನ್ನ, ಜನ್ನ, ಪೊನ್ನ, ರಾಘವಾಂಕರಂತಹ ಕವಿಗಳು ಬಹಳ ಹಿಂದಿನ ತಲೆಮಾರಿನವರು, ಅ.ನ.ಕೃ, ಕುವೆಂಪು, ದ.ರಾ.ಬೇಂದ್ರೆರವರು 1960ರ ತಲೆಮಾರಿನವರು, ಈಗಿನ ತಲೆಮಾರಿನಗೆ ಯು.ಆರ್.ಅನಂತಮೂತರ್ಿ, ಚಂದ್ರಶೇಖರ ಕಂಬಾರ, ಪೂರ್ಣಚಂದ್ರ ತೇಜಸ್ವಿ ಹಾಗೂ ಇತರ ಸಾಹಿತ್ಯಾಸಕ್ತರು ಈಗಿನ ತಲೆಮಾರಿಗೆ ಸರಿ ಹೊಂದಿದವರು. ತೇಜಸ್ವಿಯವರು 1930ರಲ್ಲಿ ಕುವೆಂಪುರವರ ಮೊದಲನೆ ಮಗನಾಗಿ ಜನಿಸಿದರೂ ಎಲ್ಲೂ ತಾನು ಕುವೆಂಪುರವರ ಮಗ ಎಂದು ಹೇಳಿಕೊಳ್ಳದೇ ತೇಜಸ್ವಿಯಾಗಿಯೇ ಗುರುತಿಸಿಕೊಂಡವರು. ಕೃಷಿಕರಾಗಿ ಪ್ರಕೃತಿ ಸಂಪತ್ತನ್ನು ಪ್ರೀತಿಸುತ್ತಾ ತಮ್ಮ ಅಧ್ಯಯನ ಮಾಡಿಕೊಳ್ಳುತ್ತಿದ್ದರು. ತೇಜಸ್ವಿಯವರು ಪ್ರತಿಯೊಂದು ವಿಷಯವನ್ನು ಸ್ವಾಭಿಮಾನಿಯಾಗಿ ತೆಗೆದುಕೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ,  ನಿವೃತ್ತ ಪಾಂಶುಪಾಲ ಕೆ.ಸಿ.ಬಸಪ್ಪ, ಪ್ರಾಂಶುಪಾಲ ಪ್ರೊ.ಬಿ.ಎಸ್.ಬಸವಲಿಂಗಯ್ಯ, ಉಪಸ್ಥಿತರಿದ್ದರು. ಸಮಾರಂಭದಲ್ಲಿ ಲಾವಣ್ಯ ಪ್ರಾಥರ್ಿಸಿದರೆ, ತಯ್ಯೂಬ್ ನಿರೂಪಿಸಿ, ಉಪನ್ಯಾಸಕ ಸಿ.ರವಿಕುಮಾರ್ ವಂದಿಸಿದರು.

ಚಿ.ನಾ.ಹಳ್ಳಿ ರೊಟರಿ ಸೇವೆ ಶ್ಲಾಘನೀಯ: ಕವಿತಾ ಕೃಷ್ಣ
             

ಚಿಕ್ಕನಾಯಕನಹಳ್ಳಿ,ಜು.15 : ರೋಟರಿಯ ಸೇವೆ ಕಸದ ಪೊರಕೆಯಂತಿರಬೇಕು, ತನ್ನ ಸುತ್ತಮುತ್ತಲಿನ ಕೊಳೆಯನ್ನು ಶುಚಿಗೊಳಿಸಲು ಪೊರಕೆಯ ಪ್ರತಿ ಕಡ್ಡಿಯಂತೆ ರೋಟರಿಯನ್ಗಳು ಒಂದಾಗಿ ತಾಲ್ಲೂಕಿನ ಸಮಸ್ಯೆಗಳನ್ನು  ಖುಷಿಯಿಂದ ಸ್ವೀಕರಿಸಿ ಎಂದು ವಿದ್ಯಾವಾಚಸ್ಪತಿ ಕವಿತಾಕೃಷ್ಣ ಹೇಳಿದರು.
ಪಟ್ಟಣದ ಕಲ್ಪಕವೃಕ್ಷ ಕೋ ಆಪರೇಟಿವ್ ಬ್ಯಾಂಕ್ನಲ್ಲಿ 2013-14ನೇ ಸಾಲಿನ ರೋಟರಿ ನೂತನ ಪದಾಧಿಕಾರಿಗಳ 38ನೇ ಪದವಿ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರೋಟರಿಯ ಸೇವೆಯು ಎಲ್ಲಾ ಕಡೆಯುಲ್ಲೂ ಉತ್ತಮವಾಗಿದೆ, ಸಬಲರು ರೋಟರಿಯೊಂದಿಗೆ ತೊಡಗಿಸಿಕೊಂಡು ಆಥರ್ಿಕವಾಗಿ ಹಿಂದುಳಿದಿರುವ ಹಾಗೂ ಸಮಾಜದ ಸಮಸ್ಯೆಗಳನ್ನು ನಿವಾರಿಸಿ ಜನರ ಜೀವನವನ್ನು ಉತ್ತಮಗೊಳಿಸುವಂತೆ ರೋಟರಿಯನ್ಗಳಿಗೆ ಕರೆ ನೀಡಿದರು. 
 ಚಿಕ್ಕನಾಯಕನಹಳ್ಳಿಯಲ್ಲಿ ರೋಟರಿ ಸಂಸ್ಥೆ ಹಾಗೂ ಸೃಜನ ಸಂಘಟನೆ ಸಮಾಜದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದರಲ್ಲದೆ, ಸೇವೆಗಾಗಿ ಹಲವರು ದುಡಿದಿದ್ದಾರೆ ಅದರಮತೆ  ಸ್ವಾಮಿ ವಿವೇಕಾನಂದರು ಚಿಕಾಗೋ ಸೇರಿದಂತೆ ಹಲವು ದೇಶಗಳಲ್ಲಿ ನಡೆಸಿದ ಉಪನ್ಯಾಸ ಕಾರ್ಯಕ್ರಮಗಳಲ್ಲೂ ಸೇವೆಯ ಮಹತ್ವ ತಿಳಿ ಹೇಳಿದ್ದರು, ಮಾತನ್ನು ಮುತ್ತಾಗಿ ಬೆಳೆಸುತ್ತಿದ್ದ ವಿವೇಕಾನಂದರಂತೆ ರೋಟರಿಯಲ್ಲಿನ ಸದಸ್ಯರು ನಡೆದರೆ ರೋಟರಿ ಸಂಸ್ಥೆ  ಉತ್ತಮ ರೀತಿಯಲ್ಲಿ ಅಭಿವೃದ್ದಿಯಾಗುತ್ತದೆ ಎಂದರಲ್ಲದೆ ಸಂಸ್ಥೆಯ ಸೇವಾ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.
ರೋಟರಿ ಸಂಸ್ಥೆಯ ಜಿಲ್ಲಾ ನಾಮಿನಿ ಗವರ್ನರ್ ರೊ.ಕೆ.ಪಿ.ನಾಗೇಶ್ ಮಾತನಾಡಿ, ರೋಟರಿ ಸಂಸ್ಥೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಸಂಸ್ಥೆ, ವಿವಿಧ ಸಮಾಜ ಸೇವೆಗಳ ಜೊತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ. ವಿವಿಧ ಆರೋಗ್ಯ ತಪಾಸಣಾ ಶಿಬಿರ, ಕುಡಿಯುವ ನೀರು ಪೂರೈಕೆ, ವಿದ್ಯಾಥರ್ಿಗಳಿಗೆ ಉತ್ತೇಜನ ನೀಡುವಂತಹ ಸನ್ಮಾನ ಕಾರ್ಯಕ್ರಮ ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿದೆ, ಅಲ್ಲದೆ ರೋಟರಿಯ ಸದಸ್ಯತ್ವ ಪಡೆಯಲು ಹಲವರು ಮುಂದೆ ಬಂದಿದ್ದಾರೆ ಎಂದರಲ್ಲದೆ ರೋಟರಿಯಲ್ಲಿ ಯಾವ ಕುಲವೂ ಇಲ್ಲ ಎಲ್ಲಾ ಕುಲದ ವ್ಯಕ್ತಿಗಳು ಇಲ್ಲಿ ಸಮಾನರು ಎಂದರು. 
ಸಾಹಿತಿ ಸಿ.ಕೆ.ಪರುಶುರಾಮಯ್ಯ ಮಾತನಾಡಿ, ಇತ್ತೀಚೆಗೆ ರೋಟರಿ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳು ಹೆಚ್ಚು ಪ್ರಶಂಶನೀಯವಾಗಿವೆ,  ಸ್ವಯಂ ಸೇವೆಯ ಮನೋಭಾವದ ರೋಟರಿ ಸಂಸ್ಥೆಯಿಂದ ತಾಲ್ಲೂಕಿನ ಹಲವು ಸಮಸ್ಯೆಗಳು ನಿವಾರಣೆಯಾಗಲಿ ಎಂದು ಹಾರೈಸಿದರು.
  ನೂತನ ರೋಟರಿ ಅಧ್ಯಕ್ಷ ಸಿ.ಎಸ್.ಪ್ರದೀಪ್ಕುಮಾರ್ ಮಾತನಾಡಿ ಎಲ್ಲಾ ರೋಟರಿಯನ್ಗಳು ಸಹಕಾರ ನೀಡುವ ಮೂಲಕ ಕ್ಲಬ್ನ  ಶಕ್ತಿಯಾಗಿ, ಆ ಮೂಲಕ ನಾವೆಲ್ಲರೂ ಸೇರಿ ರೋಟರಿ ಮೂಲಕ ಹಲವು ಸೇವೆಯನ್ನು ನಿರ್ವಹಿಸೋಣ ಎಂದರಲ್ಲದೆ ಸಂಸ್ಥೆಗೆ ನೂತನವಾಗಿ 13ಮಂದಿ ನೂತನವಾಗಿ ಸೇರ್ಪಡೆಯಾಗಿದ್ದಾರೆ ಈ ಮೂಲಕ ರೋಟರಿ ಸಂಸ್ಥೆ 38 ಸದಸ್ಯರಿಂದ 50ರ ಗಡಿ ದಾಟಿ 51ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು. 
ಜಿಲ್ಲಾ ರೋಟರಿಯನ್ ನವೀನ್ ಮಾತನಾಡಿ ರೋಟರಿ ಹಿಂದೆ ನಡೆಯುತ್ತಿದ್ದಕ್ಕಿಂತ ಈಗನ ದಾರಿ ಬದಲಾಗಿ ಎಲ್ಲಡೆಯಲ್ಲೂ ಉತ್ತಮ ಸೇವೆ ನೀಡುತ್ತಿದೆ, ರೋಟರಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಇತರರಿಗೆ ಸಹಾಯ ಮಾಡುತ್ತಿದ್ದೇವೆ. ಚಿ.ನಾ.ಹಳ್ಳಿ ರೋಟರಿ ಸಂಸ್ಥೆ ತಾಲ್ಲೂಕಿನಲ್ಲಿ ಉತ್ತಮ ಸೇವೆ ಮಾಡಿದ್ದು ಬಡವರಿಗೆ ಸಹಾಯ ಮಾಡುತ್ತಿದೆ, ಅಲ್ಲದೆ ಇಲ್ಲಿನ ಇನ್ನರ್ವೀಲ್ ಕ್ಲಬ್ ಕೂಡ ಬಲಿಷ್ಟವಾಗಿದ್ದು ರೋಟರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ರೋಟರಿಯ ನಾಯಕ ಪತ್ರಿಕೆ ಹಾಗೂ ಎಂ.ಹರೀಶ್ ರೂಪಿಸಿರುವ ರೋಟರಿಯ ಕ್ಲಬ್ ನೂತನ ವೆಬ್ಸೈಟ್ ಲೋಕಾರ್ಪಣೆ ಮಾಡಲಾಯಿತು.. ಸಮಾರಂಭದಲ್ಲಿ ಕನ್ನಡದ ಕೋಟ್ಯಾಧಿಪತಿ ಸ್ಪಧರ್ೆಯಲ್ಲಿ ಭಾಗವಹಿಸಿದ್ದ  ಸಿ.ಎಸ್.ಬೀರಪ್ಪ, ಪ್ರತಿಭಾನ್ವಿತ ಕ್ರೀಡಾಪಟು ಅನುಷಾ ಎಸ್.ಶೆಟ್ಟಿ, ಪ್ರತಿಭಾನ್ವಿತ ವಿದ್ಯಾಥರ್ಿಗಳಾದ ಟಿ.ಎನ್.ಪಲ್ಲವಿ, ಆರ್.ಮಧುಸೂಧನ್ರವರನ್ನು ಸನ್ಮಾನಿಸಲಾಯಿತು. 
2013-14ನೇ ಸಾಲಿಗೆ ನೂತನವಾಗಿ ರೋಟರಿ ಅಧ್ಯಕ್ಷರಾಗಿ ಸಿ.ಎಸ್.ಪ್ರದೀಪ್ಕುಮಾರ್, ಕಾರ್ಯದಶರ್ಿಯಾಗಿ ಡಾ.ಜಿ.ಪ್ರಶಾಂತ್ಕುಮಾರ್ಶೆಟ್ಟಿಕ ಪದವಿ ಸ್ವೀಕರಿಸಿದರು.
ಸಮಾರಂಭದಲ್ಲಿ  ಕೆ.ಸಿ.ಡಿ.ಎ.ನಿದರ್ೇಶಕ ದಿಲೀಪ್ಕುಮಾರ್ ಷಾ, ಅಸಿಸ್ಟೆಂಟ್ ಗವರ್ನರ್ ರೊ.ಜಯರಾಂ, ಎಚ್.ಆರ್.ಶ್ರೀನಾಥ್ಬಾಬು, 2013-13ನೇ ಸಾಲಿನ ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಎಂ.ದೇವರಾಜು, ರೋಟರಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಮ್.ಸುರೇಶ್, ಇನ್ನರ್ವೀಲ್ ಕ್ಲಬ್ ಅಧ್ಯಕ್ಷೆ ತೇಜಾವತಿ ನರೇಂದ್ರಬಾಬು, ಜಿಲ್ಲಾ ಗವರ್ನರ್ ಬಿಳಿಗೆರೆ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Friday, July 12, 2013

ಗ್ರಾಮೀಣ ಭಾಗದ ಸಕರ್ಾರಿ ಶಾಲೆಗಳು ಗುಣಾತ್ಮಕವಾಗಿವೆ ಮುಂದಿವೆ.
ಚಿಕ್ಕನಾಯಕನಹಳ್ಳಿ,ಜು.12 : ಸಕರ್ಾರಿ ಶಾಲೆಗಳಲ್ಲೂ ಶಿಕ್ಷಣ, ಆರೋಗ್ಯ, ಕ್ರೀಡೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿ, ಶಾಲೆಗಳನ್ನು ವಿದ್ಯಾಥರ್ಿ ಕೇಂದ್ರಿತವಾಗಿಸುತ್ತಿರುವ ಶಿಕ್ಷಣ ಇಲಾಖೆ  ಸಕರ್ಾರಿ ಶಾಲೆಗಳು ಕಾನ್ವೆಂಟ್ ಶಾಲೆಗಳಿಗಿಂತ ಹೆಚ್ಚು ಗುಣಾತ್ಮಕಗೊಳ್ಳುತ್ತಿವೆ ಎಂಬುದನ್ನು ಇತ್ತೀಚಿನ ಪಬ್ಲಿಕ್ ಪರೀಕ್ಷೆಗಳು ನಿರೂಪಿಸುತ್ತಿವೆ ಎಂದು ಲೇಖಕ ಹಾಗೂ ಪತ್ರಕರ್ತ ಸಿ.ಗುರುಮೂತರ್ಿ ಕೊಟಿಗೆಮನೆ ತಿಳಿಸಿದರು.
ಪಟ್ಟಣದ ಶ್ರೀ ರೇವಣ ಸಿದ್ದೇಶ್ವರಸ್ವಾಮಿ ಮಠದ ಸಕರ್ಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಸ್ಪಂದನ ಜನಸೇವಾ ಪ್ರಗತಿಪರ ಒಕ್ಕೂಟದ ವತಿಯಿಂದ ವಿದ್ಯಾಥರ್ಿಗಳಿಗೆ ಉಚಿತ ನೋಟ್ಪುಸ್ತಕ ವಿತರಣೆಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ವಿದ್ಯಾಥರ್ಿಗಳ ಅಭ್ಯುದಯಕ್ಕಾಗಿ ಆರ್.ಟಿ.ಇ,  ಸಿ.ಸಿ.ಇ ಕಾಯ್ದೆ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ, ಸಕರ್ಾರಿ ಶಾಲೆಗಳ ಬಡ ವಿದ್ಯಾಥರ್ಿಗಳ ಆಥರ್ಿಕ ನೆರವಿಗಾಗಿ ಹಲವು ಸಂಘ ಸಂಸ್ಥೆಗಳು ಉಚಿತ ನೋಟ್ಬುಕ್, ತಟ್ಟೆಲೋಟ, ವಿದ್ಯಾಥರ್ಿ ವೇತನ ಸೇರಿದಂತೆ ಹಲವು ಸೌಲಭ್ಯ ಒದಗಿಸುತ್ತಿದ್ದು ಇದರಿಂದ ವಿದ್ಯಾಥರ್ಿಗಳು ತಮ್ಮ ಹೆಚ್ಚಿನ ಸಮಯವನ್ನು ಶಿಕ್ಷಣದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು.
ಸಕರ್ಾರಿ ಶಾಲಾ ವಿದ್ಯಾಥರ್ಿಗಳಿಗಾಗಿ ಬಿಸಿಯೂಟ, ಉಚಿತ ಸೈಕಲ್ ಹಾಗೂ ನೂತನವಾಗಿ ವಿದ್ಯಾಥರ್ಿಗಳಿಗೆ ಹಾಲು ವಿತರಣೆ ಸೇರಿದಂತೆ ಬಡ ಮಕ್ಕಳಿಗೆ  ಶೂ ನೀಡುವ  ಯೋಜನೆಯ ಬಗ್ಗೆಯೂ ಚಿಂತನೆ ನಡೆದಿದೆ ಎಂದರು. 
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸಕರ್ಾರಿ ಶಾಲೆಗಳಲ್ಲಿ ಓದಿದಂತಹ ವಿದ್ಯಾಥರ್ಿಗಳೇ  ಇಂಜನಿಯರಿಂಗ್, ವೈದ್ಯಕೀಯ ಪದವೀಧರರಾಗಿದ್ದಾರೆ, ಈ   ರೇವಣ ಸಿದ್ದೇಶ್ವರ ಶಾಲೆಯಲ್ಲಿ ಓದಿದಂತಹ ವಿದ್ಯಾಥರ್ಿಗಳು ಹೊರದೇಶದಲ್ಲೂ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ ಎಂದರು. ಈ ಶಾಲೆಯು ಮೊದಲು ಬಾಡಿಗೆ ಕಟ್ಟಡದಲ್ಲಿ ವಿದ್ಯಾಥರ್ಿಗಳಿಗೆ ಶಿಕ್ಷಣ ನೀಡುತ್ತಿತ್ತು, ಈಗ ಸಿ.ಕೆ.ಪರುಶುರಾಮಯ್ಯನವರಿಂದ ಕೊಡುಗೆಯಾಗಿ ಬಂದಂತಹ ಜಮೀನಿನಲ್ಲಿ ಕಟ್ಟಡವಾಗಿದೆ ಎಂದರಲ್ಲದೆ ಬಾಡಿಗೆಯಲ್ಲಿದ್ದಾಗಿನ ಹಣವನ್ನು  ಶಿಕ್ಷಣ ಇಲಾಖೆ ಇನ್ನೂ ನೀಡಿಲ್ಲ ಎಂದರು. ಈ ಬಗ್ಗೆ ಶೀಘ್ರ ತೀಮರ್ಾನವಾಗದಿದ್ದರೆ ಹೋರಾಟ ಮಾಡುವುದಾಗಿ ತಿಳಿಸಿದರು. 
ಸ್ಪಂದನ ಪ್ರಗತಿಪರ ಒಕ್ಕೂಟದ ಕಾಯರ್ಾಧ್ಯಕ್ಷ ಸಿ.ಬಿ.ಲೋಕೇಶ್ ಮಾತನಾಡಿ ಸ್ಪಂದನ ಒಕ್ಕೂಟ ಆರಂಭವಾಗಿ 2ವರ್ಷವಾಗಿದೆ, ಆಗಿನಿಂದಲೂ ಒಕ್ಕೂಟ ಹಲವಾರು ಹೋರಾಟ, ಜನರಿಗೆ ಸ್ಪಂದನೆ ನೀಡುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಗಿದೆ ಎಂದರಲ್ಲದೆ ಸ್ಪಂದನ ಒಕ್ಕೂಟ ಬಡವಿದ್ಯಾಥರ್ಿಗಳನ್ನು ಹುಡುಕಿ ನೋಟ್ಬುಕ್ ನೀಡುತ್ತಿದ್ದು ಇದರ ಸದುಪಯೋಗವಾಗಬೇಕೆಂದರು.
ಸಿ.ಆರ್.ಪಿ. ದುರ್ಗಯ್ಯ ಮಾತನಾಡಿ ನಾವು ವಿದ್ಯಾಥರ್ಿಗಳಾಗಿದ್ದ ಸಂದರ್ಭದಲ್ಲಿ ನಮಗೆ ಯಾವುದೇ ರೀತಿಯ ಸೌಕರ್ಯ ದೊರಕುತ್ತಿರಲಿಲ್ಲ ಆದರೆ ಈಗಿನ ವಿದ್ಯಾಥರ್ಿಗಳಿಗೆ ಸಕರ್ಾರ ಹಾಗೂ ಸಂಘ ಸಂಸ್ಥೆಗಳು ಅವರ ಆಥರ್ಿಕ ಪರಿಸ್ಥಿತಿ ಬದಲಾಯಿಸಲು ಮಾಡುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದಲ್ಲಿ  ಸ್ಪಂದನ ಒಕ್ಕೂಟದ ತ್ಯಾಗರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು ಪ್ರಾಥರ್ಿಸಿದರೆ, ಶಾಲೆಯ ಮು.ಶಿ. ತಿಲೋತ್ತಮೆ ಸ್ವಾಗತಿಸಿ ಬಸವರಾಜು ನಿರೂಪಿಸಿದರೆ ಚಂದ್ರಮತಿ ವಂದಿಸಿದರು.

ಜು.14ರಂದು ರೋಟರಿ ಪದವಿ ಸ್ವೀಕಾರ ಸಮಾರಂಭ
ಚಿಕ್ಕನಾಯಕನಹಳ್ಳಿ,ಜು.12  ;  2013-14ನೇ ರೋಟರಿ ಇಂಟರಾಕ್ಟ್-ಕಿಂಡರಾಕ್ಟರ್ ನೂತನ ಪದಾಧಿಕಾರಿಗಳ 38ನೇ ಪದವಿ ಸ್ವೀಕಾರ ಸಮಾರಂಭವನ್ನು ಇದೇ 14ರ ಭಾನುವಾರ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ ಸಂಜೆ 5.30ಕ್ಕೆ ಹಮ್ಮಿಕೊಂಡಿದ್ದು ಕಲ್ಪತರು ಕಾಲೇಜು ಅತಿಥಿ ಉಪನ್ಯಾಸಕ ದಿಲೀಪ್ಕುಮಾರ್ ಷಾ ಉದ್ಘಾಟನೆ ನೆರವೇರಿಸಲಿದ್ದಾರೆ. ಡಿಸ್ಟ್ರಿಕ್ಟ್ 3190 ಗವರ್ನರ್ ನಾಮಿನಿ ರೊ.ಕೆ.ಪಿ.ನಾಗೇಶ್ ಪದವಿ ಪ್ರಧಾನ, ಹೊಸ ಸದಸ್ಯರ ಸೇರ್ಪಡೆ, ಸನ್ಮಾನ ಮಾಡಲಿದ್ದು ಅಸಿಸ್ಟೆಂಟ್ ಗವರ್ನರ್ ರೊ.ಜಯರಾಂ ಇಂಟರಾಕ್ಟ್ ಮತ್ತು ಕಿಂಡರಾಕ್ಟ್ ಪದವಿ ಪ್ರಧಾನ ಮಾಡಲಿದ್ದಾರೆ. ಬೆಂಗಳೂರು ರೋಟರಿ ಅಸಿಸ್ಟೆಂಟ್ ಗವರ್ನರ್ ರೊ.ಎಚ್.ಆರ್.ಶ್ರೀನಾಥ್ಬಾಬು ರೋಟರಿ ಪತ್ರಿಕೆ ನಾಯಕ ಮತ್ತು ನೂತನ ಕ್ಲಬ್ ವೆಬ್ಸೈಟ್ ಬಿಡುಗಡೆ ಮಾಡಲಿದ್ದಾರೆ. ಕವಿ-ಲೇಖಕ ವಿದ್ಯಾವಾಚಸ್ಪತಿ ಕವಿತಾಕೃಷ್ಣ ರೋಟರಿಯಲ್ಲಿ ತೊಡಗಿಸಿಕೊಳ್ಳಿ-ಜೀವನವನ್ನು ಉತ್ತಮಗೊಳಿಸಿ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದ್ಲಲಿ ಕನ್ನಡದ ಕೋಟ್ಯಾಧಿಪತಿ ಭಾಗವಹಿಸಿದ್ದ  ಸಿ.ಎಸ್.ಬೀರಪ್ಪ, ಪ್ರತಿಭಾನ್ವಿತ ಕ್ರೀಡಾಪಟು ಅನುಷಾ ಎಸ್.ಶೆಟ್ಟಿ, ಪ್ರತಿಭಾನ್ವಿತ ವಿದ್ಯಾಥರ್ಿ ಟಿ.ಎನ್.ಪಲ್ಲವಿ, ಆರ್.ಮಧುಸೂದನ್ರವರಿಗೆ ಸನ್ಮಾನಿಸಲಾಗುವುದು. 

ಜು.15ರಂದು ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ


ಚಿಕ್ಕನಾಯಕನಹಳ್ಳಿ,ಜು.12 ;ನವೋದಯ ಪ್ರಥಮ ದಜರ್ೆ ಕಾಲೇಜ್ನ ಕನ್ನಡ ವಿಭಾಗ ಹೊಸ ಪೀಳಿಗೆಗಾಗಿ ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಎಂಬ ವಿಷಯವಾಗಿ  ರಾಜ್ಯ ಮಟ್ಟದ ವಿಚಾರ ಸಂಕಿರಣ ಇದೇ15ರ ಸೋಮಾವಾರ ಏರ್ಪಡಿಸಲಾಗಿದೆ ಎಂದು ಪ್ರಾಂಶುಪಾಲ ಬಿ.ಎಸ್.ಬಸವಲಿಂಗಯ್ಯ ತಿಳಿಸಿದರು.
ಪಟ್ಟಣದ ಎನ್.ಎಫ್.ಜಿ.ಸಿ.ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನವೋದಯ ಕಾಲೇಜು ಯುಜಿಸಿ ಅನುದಾನಕ್ಕೆ ಒಳಪಟ್ಟು ಪ್ರಗತಿ ಪಥದಲ್ಲಿ ಸಾಗುತ್ತಿದೆ. ಪಠ್ಯ ಚಟುವಟಿಕೆಗಳಲ್ಲದೆ ವ್ಯಕ್ತಿತ್ವ ವಿಕಸನಕ್ಕೆ ಇಂಬು ನೀಡುವಂತಹ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ವಿಚಾರ ಸಂಕಿರಣಗಳ, ವಚನ ಕಮ್ಮಟ, ಪ್ರತಿಭೆಯ ಅನಾವರಣಕ್ಕಾಗಿ ಪೂರಕವಾದ ಚಟುವಟಿಕೆಗಳಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ, ನಮ್ಮ  ಸಂಸ್ಥೆ ಯುಜಿಸಿ ಪ್ರಾಯೋಜಿಕತ್ವದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದೆ. 15ರ ಸೋಮಾವರ ಬೆಳಗ್ಗೆ 10ಕ್ಕೆ ನಡೆಯುವ ವಿಚಾರ ಸಂಕಿರಣದ ಉದ್ಘಾಟನೆಯನ್ನು ನವೋದಯ ಸಂಸ್ಥೆಯ ಅಧ್ಯಕ್ಷರಾದ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಉದ್ಘಾಟನೆ ನೆರವೇರಿಸಲಿದ್ದು ಅಂತರ ರಾಷ್ಟ್ರೀಯ ಕಲಾವಿದ ಡಾ.ಕೆ.ಟಿ.ಶಿವಪ್ರಸಾದ್ ಆಶಯ ಭಾಷಣ ಮಾಡಲಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷ ಪ್ರೊ.ಎಂ.ರೇಣುಕಾರ್ಯ ಅತಿಥಿಗಳಾಗಿ ಭಾಗವಹಿಸುವರು.
ವಿಚಾರ ಸಂಕಿರಣದಲ್ಲಿ ಬೆಳಗ್ಗೆ 11ಕ್ಕೆ ಮೊದಲ  ಗೋಷ್ಠಿ ನಡೆಯಲಿದ್ದು ಆಹಾರ ತಜ್ಞ ಮತ್ತು ಕೃಷಿ ಚಿಂತಕ ಡಾ.ಕೆ.ಸಿ.ರಘು, ಅನ್ನ ಮತ್ತು ಬೇಸಾಯ ಪೂರ್ಣಚಂದ್ರ ಪೂರ್ಣಚಂದ್ರ ತೇಜಸ್ವಿ ನಿಲುವುಗಳು ಎಂಬ ವಿಷಯವಾಗಿ ಮಾತನಾಡಿಲಿದ್ದಾರೆ,  ಲೇಖಕ ಮತ್ತು ಸಂಸ್ಕೃತಿ ಚಿಂತಕ ಡಾ.ಎಸ್.ನಟರಾಜ ಬೂದಾಳು ತೇಜಸ್ವಿ ಸಾಹಿತ್ಯದ ಮೀಮಾಂಸ ನಿಲುವುಗಳು ಎಂಬ ವಿಷಯವಾಗಿ ಹಾಗೂ ಲೇಖಕ ಡಾ.ಚಂದ್ರಶೇಖರ ನಂಗಲಿ ತೇಜಸ್ವಿ ನಿಸರ್ಗದ ಅನುಸಂಧಾನ ವಿಷಯದ ಬಗ್ಗೆ ಮಾತನಾಡಲಿದ್ದಾರೆ. 
ಎರಡನೇ ಗೋಷ್ಠಿಯಲ್ಲಿ ಕವಿಯಿತ್ರಿ ಮತ್ತು ವಿಮರ್ಶಕರಾದ ಡಾ.ತಾರಿಣಿ ಶುಭದಾಯಿನಿ ತೇಜಸ್ವಿ ಸಾಹಿತ್ಯ ವರ್ತಮಾನದ ಪ್ರಸ್ತುತತೆ ವಿಷಯದ ಬಗ್ಗೆ ಹಾಗೂ  ಲೇಖಕ ಮತ್ತು ವಿಮರ್ಶಕ ಡಾ.ಬಂಜಗೆರೆ ಜಯಪ್ರಕಾಶ್ ತೇಜಸ್ವಿ ಸಾಹಿತ್ಯದಲ್ಲಿ ವಿಜ್ಞಾನದ ಅನುಸಂಧಾನ ವಿಷಯದ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. 
ಗೋಷ್ಠಿ ಮಧ್ಯಾಹ್ನ 3ಕ್ಕೆ ಪ್ರತಿನಿಧಿಗಳಿಂದ ತೇಜಸ್ವಿಯವರ ಕಾದಂಬರಿಗಳು-ವರ್ತಮಾನದ ಅನುಸಂಧಾನ, ತೇಜಸ್ವಿಯವರ ವಿಜ್ಞಾನದ ಬರವಣಿಗೆಗಳು ಹೊಸ ದೃಷ್ಠಿಕೋನ. ತೇಜಸ್ವಿ ಸಣ್ಣ ಕತೆಗಳು-ಪ್ರಸ್ತುತ ಕನ್ನಡ ಸಂದರ್ಭ ವಿಷಯದ ಬಗ್ಗೆ ಪ್ರಬಂಧ ಮಂಡನೆ ಹಾಗೂ ಸಮಾರೋಪ ನಡೆಯಲಿದ್ದು ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ.ಜಿ.ಎಸ್.ರಮೇಶ್ ವಹಿಸಲಿದ್ದಾರೆ.
ವಿಚಾರ ಸಂಕಿರಣದ ಉಪಯೋಗವನ್ನು ಎಲ್ಲಾ ಕನ್ನಡ ಮನಸ್ಸುಗಳು ಬಳಸಿಕೊಳ್ಳುವಂತೆ ತಿಳಿಸಿದರಲ್ಲದೆ, ಭಾಗವಹಿಸುವ ಉಪನ್ಯಾಸಕರುಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕರಿಗೆ ಓ.ಓ.ಡಿ ಸೌಲಭ್ಯವಿದೆ ಎಂದು  ಪ್ರೊ.ಬಸವಲಿಂಗಯ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಿವಯೋಗಿಸ್ವಾಮಿ, ಸಿ.ರವಿಕುಮಾರ್ ಉಪಸ್ಥಿತರಿದ್ದರು.


Tuesday, July 9, 2013

ತಾಲೂಕಿನಲ್ಲಿ 35845 ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ,ಜು.09 : ರಾಜ್ಯ ಸಕರ್ಾರದ ಅನ್ನಭಾಗ್ಯ ಮಹತ್ವದ ಯೋಜನೆಗೆ ಈ ತಿಂಗಳ 10ರಂದ ಜಿಲ್ಲೆಯಲ್ಲಿ ಚಾಲನೆಯಾಗಲಿದ್ದು ತಾಲ್ಲೂಕಿನಲ್ಲಿಯೂ ಈ ಯೋಜನೆ  ಅಂದೇ ಪ್ರಾರಂಭವಾಗಲಿದೆ, ತಾಲೂಕಿನಲ್ಲಿ ಈ ಯೋಜನೆಯ ಲಾಭವನ್ನು 35845 ಫಲಾನುಭವಿಗಳು ಪಡೆಯಲಿದ್ದಾರೆ  ಎಂದು ತಹಶೀಲ್ದಾರ್ ಕಾಮಾಕ್ಷಮ್ಮ ತಿಳಿಸಿದ್ದಾರೆ.
ಯಾವುದೇ ಕಡು ಬಡವರು ಹಸಿವಿನಿಂದ ನರಳಬಾರದು ಎಂಬ ಉದ್ದೇಶದಿಂದ ಸಕರ್ಾರಿ ಅನ್ನಭಾಗ್ಯ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದು ಈ ಯೋಜನೆಯಡಿ ಬರುವ ತಾಲ್ಲೂಕಿನ ಎಲ್ಲಾ ಚಾಲ್ತಿಯಿರುವ ಬಿಪಿಎಲ್ ಪಡಿತರದಾರರಿಗೂ 1ರೂ ದರದಲ್ಲಿ 10ಕೆ.ಜಿ. ಪಡೆಯುವವರು 1568 ಪಡಿತರದಾರರು, 20ಕೆ.ಜಿಯಂತೆ 3596, 30ಕೆಜಿಯಂತೆ 30681 ಪಡಿತರದಾರರು ಈ ಯೋಜನೆಯ ಉಪಯೋಗ ಪಡೆಯಲಿದ್ದಾರೆ.
  ಕನಿಷ್ಟ 10ಕೆ.ಜಿ, ಗರಿಷ್ಠ 30.ಕೆ.ಜಿ ಅಂದರೆ ಪಡಿತರ ಚೀಟಿಯಲ್ಲಿ ಒಬ್ಬ ಸದಸ್ಯರಿದ್ದರೆ 10ಕೆ.ಜಿ, ಇಬ್ಬರು ಸದಸ್ಯರಿದ್ದರೆ 20ಕೆ.ಜಿ, ಹಾಗೂ ಮೂರು ಮತ್ತು ಅದರ ಮೇಲ್ಪಟ್ಟ ಸದಸ್ಯರಿದ್ದರೆ 30ಕೆಜಿ ಅಕ್ಕಿಯಂತೆ ನ್ಯಾಯಬೆಲೆ ಅಂಗಡಿಗಳ ಮುಖಾಂತರ ನೀಡಲಾಗುವುದು, ಅಂತ್ಯೋದಯ ಪಡಿತರ ಚೀಟಿಗಳಿಗೆ 1ರೂ ದರದಲ್ಲಿ 29ಕೆ.ಜಿ ಅಕ್ಕಿ, 2ರೂ ದರದಲ್ಲಿ 6ಕೆ.ಜಿ.ಗೋದಿಯನ್ನು ನೀಡಲಾಗುವುದು ಹಾಗೂ  ಜುಲೈ ತಿಂಗಳಲ್ಲಿ ಗೋದಿಯ ಹಂಚಿಕೆ ಇರುವುದಿಲ್ಲ ಎಂದು ತಿಳಿಸಿರುವ ಅವರು  ಎಪಿಎಲ್ ಪಡಿತರ ಚೀಟಿದಾರರಿಗೆ ಯಾವುದೇ ಆಹಾರ ದಾನ್ಯ ಹಂಚಿಕೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. 
ಈಗಾಗಲೇ ಶೇ.40ರಷ್ಟು ಅಕ್ಕಿ ದಾಸ್ತಾನು ನಮ್ಮ ಗೋಡೋನ್ಗೆ ಬಂದಿದ್ದು 10ಕೆಜಿಯಂತೆ 156.80 ಕ್ವಿಂಟಾಲ್, 20ಕೆ.ಜಿಯಂತೆ 719.20ಕ್ವಿಂಟಾಲ್, 30ಕೆ.ಜಿಯಂತೆ 9204.30ಕ್ವಿಂಟಾಲ್ ಅಕ್ಕಿ ವಿತರಿಸಲಾಗುವುದು, ತಾಲ್ಲೂಕಿನಲ್ಲಿ 35800 ಬಿಪಿಎಲ್ ಪಡಿತರ ಚೀಟಿ, 10779 ಎಪಿಎಲ್ ಪಡಿತರ ಚೀಟಿ, 4152 ಅಂತ್ಯೋದಯ ಪಡಿತರ ಚೀಟಿ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ. 
ಈ ಸಂದರ್ಭದಲ್ಲಿ ಆಹಾರ ಶಿರಸ್ತೆದಾರ್ ಮಂಜುನಾಥ್, ಆಹಾರ ನಿರೀಕ್ಷಕರಾದ ಪ್ರೇಮ ಉಪಸ್ಥಿತರಿದ್ದರು.

ಜು.22ರಂದು ಸಕರ್ಾರಿ ನೌಕರರ ಸಂಘದ ಚುನಾವಣೆ
ಚಿಕ್ಕನಾಯಕನಹಳ್ಳಿ,ಜು.09 : 2013-18ನೇ ಸಾಲಿನ ಅವಧಿಗೆ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ತಾಲೂಕು  ಶಾಖೆಯ ಕಾರ್ಯಕಾರಿ ಸಮಿತಿ ಚುನಾವಣೆಯು ಇದೇ ಜುಲೈ ತಿಂಗಳ 22ರ ಸೋಮವಾರ ಬೆಳಗ್ಗೆ 11ರಿಂದ ಸಂಜೆ 4ಗಂಟೆವರೆಗೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಹಾಗೂ  ತಹಶೀಲ್ದಾರ್ ಕಾಮಾಕ್ಷಮ್ಮ ತಿಳಿಸಿದ್ದಾರೆ.
ಜುಲೈ 11 ಗುರುವಾರದಿಂದ 15ರ ಸೋಮವಾರ ಸಂಜೆ 4 ಗಂಟೆಯವರೆಗೆ ನಾಮಪತ್ರಗಳನ್ನು ವಿತರಣೆ ಮಾಡಲಿದ್ದು 15ರ ಸಂಜೆ 5ಗಂಟೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. 15ರ ಸಂಜೆ 5.30ರ ನಂತರ ನಾಮಪತ್ರ ಪರಿಶೀಲಿಸಲಿದ್ದು ಪರಿಶೀಲನೆ ನಂತರ ಅರ್ಹ ಅಭ್ಯಥರ್ಿಗಳ ಹೆಸರು ಪ್ರಕಟಣೆ ಮಾಡಲಾಗುವುದು. 16ರ ಮಂಗಳವಾರ ಸಂಜೆ 4ಗಂಟೆವರೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಅಂದು ಸಂಜೆ 5ಗಂಟೆಯ ನಂತರ ನಾಮಪತ್ರಗಳನ್ನು ವಾಪಸ್ ಪಡೆದ ನಂತರ ಚುನಾವಣಾ ಕಣದಲ್ಲಿ ಉಳಿದ ಅಭ್ಯಥರ್ಿಗಳ ಹೆಸರು ಪ್ರಕಟಿಸಲಾಗುವುದು. 22ರ ಸೋಮವಾರ ಬೆಳಗ್ಗೆ 11ರಿಂದ ಸಂಜೆ 4ಗಂಟೆವರೆಗೆ ಚುನಾವಣೆ ನಡೆಯಲಿದ್ದು 22ರ ಸೋಮವಾರ ಮಧ್ಯಾಹ್ನ 4.30ರ ನಂತರ ಮತಗಳ ಎಣಿಕೆ ನಡೆಯಲಿದೆ. ಮತ ಎಣಿಕೆ ನಂತರ ಅಂದೇ ಫಲಿತಾಂಶ ಪ್ರಕಟಿಸಲಾಗುವುದು.
ನಾಮಪತ್ರಗಳನ್ನು ತಾಲ್ಲೂಕು/ಯೋಜನಾ ಸಂಘದ ಕಛೇರಿಯಲ್ಲಿ ನಾಮಪತ್ರಗಳ ವಿತರಣೆ ದಿನಾಂಕದಿಂದ ನಾಪತ್ರಗಳ ವಿತರಣೆಯ ಕೊನೆಯ ದಿನಾಂಕದವರೆಗೆ ಬೆಳಗ್ಗೆ 11ರಿಂದ ಸಂಜೆ 5ಗಂಟೆಯವರೆಗೆ ಪಡೆಯಬಹುದಾಗಿದ್ದು, ಚುನಾವಣಾ ಪ್ರಕ್ರಿಯೆ ಪ್ರಕಾರ ಸಂಘದ ಕಛೇರಿಯು ರಜಾ ದಿನಗಳಂದು ಸಹ ತೆರೆದಿರುತ್ತದೆ 

Monday, July 8, 2013

ಡಿ.ಸಿ.ಸಾಹೇಬರೇ ನಮ್ಮ ಗೋಳು ಕೇಳುವಿರಾ..............(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಜು.08 : ಆಧಾರ್ ಕಾಡರ್್ಗೆ ನೊಂದಾಯಿಸಿಕೊಳ್ಳಲು ಪರಿತಪಿಸುತ್ತಿರುವ ಜನರ ಗೋಳು ಕೇಳುವವರೇ ಇಲ್ಲವಾಗಿದೆ. ತಾಲ್ಲೂಕಿನ ಐವತ್ತು ಸಾವಿರಕ್ಕೂ ಅಧಿಕ ಜನರು ಇನ್ನೂ ಆಧಾರ್ ಯೋಜನೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಸಾಧ್ಯವಾಗಿಲ್ಲ ಅವರೆಲ್ಲಾ ಈಗ ನಾ ಮುಂದು ತಾ ಮುಂದು ಎಂದು ಮುಗೀಬೀಳುತ್ತಿದ್ದಾರೆ.
ಇರುವ ಎರಡು ಕಂಪ್ಯೂಟರ್ ತಾಲ್ಲೂಕಿನ 5ಹೋಬಳಿಯ 50ಸಾವಿರ ಜನರ ಹೆಸರನ್ನು ನೊಂದಾಯಿಸಿಕೊಳ್ಳಬೇಕು, ಆದರೆ ಒಬ್ಬರು ತಮ್ಮ ಹೆಸರು ನೊಂದಾಯಿಸಿಕೊಂಡು ಪೋಟೋ ತೆಗೆಸಿಕೊಂಡು ಫಿಂಗರ್ ಪ್ರಿಂಟ್ ಪಡೆಯಲು ಕನಿಷ್ಟ ಇಪ್ಪತ್ತು ನಿಮಿಷ ತೆಗೆದುಕೊಳ್ಳುತ್ತದೆ. ಆದ್ದರಿಂದ ಆಧಾರ್ ಯೋಜನೆಯ ಕಂಪನಿಯವರು ಒಂದು ದಿನಕ್ಕೆ 70 ಜನರಿಗೆ ಮಾತ್ರ ಟೋಕನ್ ಕೊಡುವುದರಿಂದ ಹಳ್ಳಿ ಭಾಗದ ಜನ ರಾತ್ರಿಯಲ್ಲಾ ಕಛೇರಿ ಬಾಗಿಲ ಕಾಯುತ್ತಾ ಅಲ್ಲೆ ಊ.ಮ.ಹೇ (ಊಟ, ಮಲಗುವುದು, ಹೇ....) ಮಾಡುವಂತಹ ಪರಿಸ್ಥಿತಿ ನಿಮರ್ಾಣವಾಗಿದೆ. 
ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಮೀನುಗಾರಿಕೆ ಇಲಾಖೆ ಕಟ್ಟಡದಲ್ಲಿ ನಡೆಯುತ್ತಿರುವ ಈ ಕಾರ್ಯಕ್ಕೆ ಮಕ್ಕಳು ಮರಿಯಾದಿಯಾಗಿ ಮನೆಯಲ್ಲಿರುವ ಮುದುಕರು ತದಕರೆಲ್ಲಾ ಬೆಳಗಿನ ಜಾವ 3ಕ್ಕೆ ಬಂದು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಈಗಾಗಿ ತಾಲ್ಲೂಕಿನ ಎಲ್ಲಾ ಜನರು ಏನೇ ಬರಲಿ ಆಧಾರ್ ಇರಲಿ ಎಂಬ ಘೋಷಣೆಗೆ ಕಟ್ಟು ಬಿದ್ದು ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹೊರಗಡೆ ಕೆಲಸಕ್ಕಾಗಿ ವಲಸೆ ಹೋಗಿರುವವರೆಲ್ಲಾ ಇಲ್ಲಿಗೆ ಬಂದು ಆಧಾರ್ ಕಾಡರ್್ ಪಡೆಯುತ್ತಿರುವುದರಿಂದ ಇರುವ ಎರಡು ಕಂಪ್ಯೂಟರ್ಗೆ ಒತ್ತಡ ಹೆಚ್ಚಾಗಿದೆ.
ಆಧಾರ್ ಕಾಡರ್್ ಏಕೆ ಬೇಕು? : ಸಿ.ಎಂ.ಸಿದ್ರಾಮಯ್ಯನವರು ಒಂದು ರೂ.ಗೆ ಒಂದು ಕೆ.ಜಿ.ಅಕ್ಕಿ ಘೋಷಿಸಿದ್ದೇ ತಡ ರೇಷನ್ ಕಾಡರ್್ ಬೇಡಿಕೆ ಜಾಸ್ತಿಯಾಯಿತು. ರೇಷನ್ ಕಾಡರ್್ ಬೇಕು ಎಂದರೆ ಆಧಾರ್ ಕಾಡರ್್ ಇರಲೇ ಬೇಕು. ಇನ್ನು ಅಡುಗೆ ಅನಿಲದ ಸಬ್ಸಿಡಿ ಬೇಕು ಎಂದರೂ ಆಧಾರ್ ಕಾಡರ್್ ಲಿಂಕ್ ಮಾಡಿಸಬೇಕು, ನೌಕರರು ಸೇರಿದಂತೆ ಬ್ಯಾಂಕಿನಲ್ಲಿ ವ್ಯವಹರಿಸುವವರೂ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡಿಸಬೇಕು ಈಗಾಗಿ ಏಕಾಏಕಿ ಆಧಾರ್ಗೆ ಬೇಡಿಕೆ ಹೆಚ್ಚಿದೆ.
ಆಧಾರ್ ಕಾಡರ್್ಗಾಗಿ ಹುಳಿಯಾರು, ಹಂದನಕೆರೆ, ಕಂದಿಕೆರೆ ಜನರು ಅತೀ ಹೆಚ್ಚು ಕಷ್ಟ ಅನುಭವಿಸುತ್ತಿದ್ದಾರೆ. ಕಾರಣ ಹುಳಿಯಾರು ಹೋಬಳಿಯ ದಸೂಡಿ, ದಬ್ಬಗುಂಟೆ ಪಂಚಾಯಿತಿಗಳ ಜನರು ಹಂದನಕೆರೆಯ ದೊಡ್ಡಎಣ್ಣೆಗೆರೆ, ಚಿಕ್ಕೆಣ್ಣೆಗೆರೆ ಭಾಗದ ಜನರು ಚಿ.ನಾ.ಹಳ್ಳಿಗೆ ಬರಬೇಕೆಂದರೆ 50ರಿಂದ 60 ಕಿ.ಮೀ ದೂರದಿಂದ ಬರಬೇಕು, ಅವರು ಒಂದು ದಿವಸ ಇಲ್ಲಿಗೆ ಬಂದು ಹೋಗಲಿಕ್ಕೆ ಒಬ್ಬರಿಗೆ ಒಂದು ನೂರು ರೂಗಳಾದದರೂ ಬೇಕು, ಇನ್ನು ಮನೆ ಮಂದಿಯಲ್ಲಾ ಬಂದರೆ ಅವರಿಗೆ ತಿಂಡಿ ಊಟದ ಪಾಡೇನು, ಕನಿಷ್ಟವೆಂದರೂ ಆಧಾರ್ ಕಾಡರ್್ ಮಾಡಿಸಲೆಂದೇ ಏಳು ನೂರರಿಂದ ಸಾವಿರ ರೂಗಳ ಖಚರ್ು ತಗಲುತ್ತದೆ ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಹಣಕಾಸಿನ ತೊಂದರೆ ಒಂದಡೆಯಾದರೆ ಈ ಕೆಲಸಕ್ಕೆ ಚಿ.ನಾ.ಹಳ್ಳಿಗೆ ಬಂದು ಹೋಗುವುದರಿಂದ ಕೆಲಸಕ್ಕೆ ಹೋಗಲಾಗದಿರುವುದರಿಂದ ಕೂಲಿ ಹಣವೂ ಇಲ್ಲದೆ ಪರದಾಡುತ್ತಿದ್ದೇವೆ, ಕನಿಷ್ಟ ಈ ಹೆಸರು ನೊಂದಾಯಿಸುವ ಪೋಟೋ ತೆಗೆಸುವ ವ್ಯವಸ್ಥೆಯನ್ನು ಹೋಬಳಿ ಕೇಂದ್ರಗಳಲ್ಲಾದರೂ ಮಾಡಿದರೆ ಅಷ್ಟರ ಮಟ್ಟಿಗೆ ಡಿ.ಸಿ. ಸಾಹೇಬ್ರು ಬಡವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎನ್ನುತ್ತಾರೆ ದಸೂಡಿ ಗ್ರಾಮದ ಮುತ್ಯಾನಾಯ್ಕ. 


ನಾನು ಚಿಕ್ಕಮಂಗಳೂರಿನ ಕಾಫಿ ಎಸ್ಟೇಟ್ನಲ್ಲಿದ್ದೇನೆ,   ಆಧಾರ್ ಕಾಡರ್್ ಮಾಡಿಸಲು ಕಳೆದ ಮೂರು ದಿನಗಳಿಂದ ಪರದಾಡುತ್ತಿದ್ದೇನೆ ಇನ್ನೂ ಆಗಿಲ್ಲ ಮೂರು ದಿನಗಳ ಸಂಬಳವೂ ಇಲ್ಲ, ಕಾಡರ್್ ನೊಂದಾಣಿನೂ ಆಗಿಲ್ಲ ಅಜ್ಜಿ ತಾತನನ್ನು ಕರೆದುಕೊಂಡು ಚಿ.ನಾ.ಹಳ್ಳಿಗೆ ಬರುವುದು ಬಹಳ ತ್ರಾಸದಾಯಕವಾಗಿದೆ.
-ಸಂಗಮೇಶ್, ಚಿಕ್ಕೇಣ್ಣೆಗೆರೆ 

ದಸೂಡಿಯಿಂದ ಚಿ.ನಾ.ಹಳ್ಳಿಗೆ ನಾವು ಐದು ಜನರು ಬಂದು ಆಧಾರ್ ಕಾಡರ್್ ಮಾಡಿಸಲು ನಮ್ಮ ಕುಟುಂಬಕ್ಕೆ ಕನಿಷ್ಟವೆಂದರೂ ಏಳು ನೂರು ಖಚರ್ಾಗುತ್ತಿದೆ, ಜೊತೆಗೆ ಕೂಲಿ ಕೆಲಸಕ್ಕೋಗುವ ನನಗೆ ತುಂಬಾ ಲುಕ್ಸಾನಾಗುತ್ತಿದೆ, ದೂರದೂರುಗಳಲ್ಲಿ ಒಂದೊಂದು ಕೇಂದ್ರಗಳನ್ನು ಒಂದು ತಿಂಗಳ ಮಟ್ಟಿಗಾದರೂ ತೆರೆದರೆ ಏಷ್ಟೋ ಜನರಿಗೆ ಅನುಕೂಲವಾಗುತ್ತೆ.
-ಮಾರಯ್ಯ ದಸೂಡಿ  


ಸರಗಳ್ಳರನ್ನು ಸೆರೆ ಹಿಡಿದಿರುವ ಚಿ.ನಾ.ಹಳ್ಳಿ ಪೊಲೀಸರು.
ಚಿಕ್ಕನಾಯಕನಹಳ್ಳಿ,ಜೂ.8: ಎರಡು ಪ್ರಕರಣಗಳಲ್ಲಿ ಮಹಿಳೆಯರ ಚಿನ್ನದ ಸರವವನ್ನು ಅಪಹರಿಸಿದ್ದ ಐದು ಮಂದಿ ಸರಗಳ್ಳರನ್ನು ಬಂಧಿಸಿ 2 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಆಭರಣವನ್ನು ವಶಪಡಿಸಿಕೊಳ್ಳುವಲ್ಲಿ  ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇದೇ ಮಾಚರ್್ 15ರಂದು ತಾಲ್ಲೂಕಿನ ಶೆಟ್ಟಿಕೆರೆಯ ಎಸ್.ವಿ. ಪ್ರೇಮ ಎಂಬುವರು  ಬೆಳಗ್ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ದ್ವಿಚಕ್ರವಾಹನದಲ್ಲಿ ಬಂದ ದುಷ್ಕಮರ್ಿಗಳು ಅವರ ಕತ್ತಿನಲ್ಲಿದ್ದ ಚಿನ್ನದಸರವನ್ನು ಕಿತ್ತು ಪರಾರಿಯಾಗಿದ್ದರು. ಮತ್ತೊಂದು ಪ್ರಕರಣದಲ್ಲಿ ನಗರದ ಸಮೀಪದ ತರಬೇನಹಳ್ಳಿಯ ತುಳಸಮ್ಮ ಎಂಬುವರಿಗೆ ಡ್ರಾಪ್ ಕೊಡುವ ನೆಪದಲ್ಲಿ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ್ದ ಚೋರರ ತಂಡವನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ  ತಾಲ್ಲೂಕಿನ  ಶೆಟ್ಟಿಕೆರೆ ಗ್ರಾಮದ  ಆಚಾರರ ಬೀದಿಯ ವಿಷ್ಣುಕುಮಾರ್, ತೋಟದ ಮನೆ ಶೆಟ್ಟಿಕೆರೆಯ ನಟರಾಜು, ನೆಲಮಂಗಲ ತಾಲ್ಲೂಕಿನ ಬಸವನಹಳ್ಳಿಯ ವಾಲ್ಮೀಕಿನಗರವಾಸಿ ನಟರಾಜು ಮತ್ತು ಸಿ.ಕೃಷ್ಣಪ್ಪ ಹಾಗೂ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿಯ ಸೋಮಲಾಪುರ ವಾಸಿ ಸಂತೋಷ್  ಅವರಿಂದ 67 ಚಿನ್ನದ ಗುಂಡುಗಳು, 6 ಚೈನು ಪೀಸುಗಳು, 8 ಗ್ರಾಂ ತೂಕದ ಎರಡು  ಚಿನ್ನದ ತಾಳಿ, ಚಿನ್ನದ ಎರಡು ಎಳೆ ಮಾಂಗಲ್ಯಸರದ ಅರ್ಧಭಾಗವನ್ನು ವಶಪಡಿಸಿಕೊಂಡಿದ್ದಾರೆ. ಈ ಎರಡು ಪ್ರಕರಣಗಳಿಗೆ  ಬಳಸಿದ್ದ ಎರಡು ದ್ವಿಚಕ್ರವಾಹವನ್ನು ಜಪ್ತಿ ಮಾಡಲಾಗಿದೆ. ಈ ತಂಡವನ್ನು ಬಂಧಿಸುವಲ್ಲಿ ಸಿಪಿಐ ಕೆ. ಪ್ರಭಾಕರ್, ಪಿಎಸ್ಐ ಬಿ.ಟಿ. ಗೋವಿಂದ್, ಸಿಬ್ಬಂದಿಗಳಾದ ಚಿಕ್ಕಲಕ್ಕೇಗೌಡ್ರು, ವೆಂಕಟೇಶ್, ರಬ್ಬಾನಿ, ದಯಾನಂದ್ ಹಾಗೂ ತಿಪ್ಪೇಸ್ವಾಮಿ ಯಶಸ್ವಿಯಾಗಿದ್ದಾರೆ. 

Saturday, July 6, 2013

cm


ಕಂಬಳಿ ಉತ್ಪಾದನೆಯ  ಬಲವರ್ಧನೆಗೆ ಬಜೆಟ್ನಲ್ಲಿ ಅನುದಾನ ನೀಡುವಂತೆ ಒತ್ತಾಯಿಸಿ ಸಿ.ಎಂ.ಬಳಿಗೆ  ನಿಯೋಗ
ಚಿಕ್ಕನಾಯಕನಹಳ್ಳಿ,ಜು.06 : ಉಣ್ಣೆ ಕಂಬಳಿ ನೇಕಾರರ ಹಾಗೂ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಬಲವರ್ಧನೆಗೆ ಬಜೆಟ್ನಲ್ಲಿ ಅನುದಾನ ಮಂಜೂರು ಮಾಡಿಸಿ ಕಂಬಳಿ ನೇಯ್ಗೆಯನ್ನು ನಂಬಿಕೊಂಡು ಜೀವಿಸುತ್ತಿರುವ ಕಂಬಳಿ ನೇಕಾರರ ಜೀವನಕ್ಕೆ ಹಾಗೂ ಸಂಘದ ಬಲವರ್ಧನೆಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿ ಇಲ್ಲಿನ ಎಸ್.ಆರ್.ಎಸ್. ಕಂಬಳಿ ಸೊಸೈಟಿಯ ನಿಯೋಗ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಎಸ್.ಆರ್.ಎಸ್.ಕಂಬಳಿ ಸೊಸೈಟಿಯು ತಾಲ್ಲೂಕಿನಾದ್ಯಂತ 3ಸಾವಿರ ಜನ ಕಂಬಳಿ ನೇಕಾರ ಸದಸ್ಯರನ್ನು ಹೊಂದಿರುವ ಸಹಕಾರ ಸಂಘ, ಈ ನೇಕಾರರೆಲ್ಲಾ ಕುಲಕಸುಬಾಗಿ ಉಣ್ಣೆ ಕಂಬಳಿಗಳ ನೇಕಾರಿಕೆಯನ್ನು ನಡೆಸಿಕೊಂಡು ಕಸುಬಾಗಿಸಿಕೊಂಡು, ಬದುಕನ್ನು ಕಟ್ಟಿಕೊಂಡಿದ್ದಾರೆ.
 ನೇಕಾರರನ್ನು ಆಥರ್ಿಕವಾಗಿ ಸದೃಡಗೊಳಿಸುವ ನಿಟ್ಟಿನಲ್ಲಿ ಸಂಘವು ಉಣ್ಣೆ ಖರೀದಿಸಿ, ನೇಕಾರರಿಗೆ ವಿತರಿಸುವುದು, ನೇಕಾರರಿಂದ ಕಂಬಳಿಗಳನ್ನು ಖರೀದಿಸುವುದು ಹಾಗೂ ಮಾರಾಟ ಮಾಡಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಜೊತೆಗೆ ಸಂಘವು ಸಹ ಉತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಂಬಳಿಗಳಿಗೆ ಬೇಡಿಕೆ ಇಲ್ಲದೆ ಹಾಗೂ ಸರಿಯಾದ ಬೆಲೆ ಸಿಗದ ಕಾರಣ ಮತ್ತು ಕಚ್ಚಾ ಮಾಲುಗಳ ಬೆಲೆ ದುಬಾರಿಯಗಿರುವುದರಿಂದ ಕಂಬಳಿ ನೇಕಾರರ ಜೀವನ ಅತಂತ್ರ ಸ್ಥಿತಿಯಿಂದ ಕೂಡಿದ್ದು ಜೀವನ ನಿರ್ವಹಣೆಗಾಗಿ ನೇಕಾರರು ಉದ್ಯೋಗವನ್ನು ಅವಲಂಬಿಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವಂತಹ ಸ್ಥಿತಿ ನಿಮರ್ಾಣವಾಗಿದೆ.
 ಈ ಭಾಗದಲ್ಲಿ ಯಾವುದೇ ಕೈಗಾರಿಕೆಗಳಿಲ್ಲದ ಕಾರಣ ಜೀವನ ನಿರ್ವಹಣೆಗೆ ಇತರೆ ಸಣ್ಣಪುಟ್ಟ ಕೂಲಿ ಕೆಲಸ ಮಾಡುತ್ತಿದ್ದು ಅವರಿಗೆ ಸಂಘದಿಂದ ಉದ್ಯೋಗವಕಾಶ ಕಲ್ಪಿಸಲು ಸಂಘದಲ್ಲಿ ಸುಸ್ಥಿರವಾಗಿರುವ ವಕರ್್ಶೆಡ್ಗಳು ಹಾಗೂ ಹೊಸ ತಂತ್ರಜ್ಞಾನದ ಮಗ್ಗಗಳ ಕೊರತೆ ಮತ್ತು ಯಂತ್ರೋಪಕರಣಗಳ ಕೊರತೆ ಇರುವುದರಿಂದ ಸಂಘವು ಸ್ವಂತಕ್ಕೆ ಜಮೀನನ್ನು ಹೊಂದಿದ್ದು ಆ ಜಾಗದಲ್ಲಿ ಕಂಬಳಿ ನೇಕಾರರಿಗೆ ಕಾರ್ಯಗಾರವನ್ನು ನಿಮರ್ಾಣ ಮಾಡಲು ಹಾಗೂ ಅತ್ಯಾಧುನಿಕ ಮಗ್ಗಗಳನ್ನು ಅಳವಡಿಸಲು ಮತ್ತು ಕಂಬಳಿಗಳನ್ನು ನುಳುಪುಗೊಳಿಸುವಂತಹ  ಯಂತ್ರೋಪಕರಣಗಳನ್ನು ಖರೀದಿ ಮಾಡಲು ಸಕರ್ಾರದಿಂದ ಯೋಜನೆಯನ್ನು ರೂಪಿಸಿ  ಬಜೆಟ್ನಲ್ಲಿ ಅದನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿರುವ ಅವರು, ಈ ಯೋಜನೆಗೆ ಅಂದಾಜು ಮೂರು ಕೋಟಿ ಹಣಬೇಕಾಗಿದ್ದು, ಈ ಹಣವನ್ನು ಮಂಜೂರು ಮಾಡಿಸಿ ಕೊಟ್ಟರೆ ಕಂಬಳಿ ನೇಕಾರರ ಹಾಗೂ ಸಂಘದ ಬಲವರ್ಧನೆಗೆ ಅನುಕೂಲವಾಗುತ್ತದೆ ಎಂದು ಮನವಿ ಸಲ್ಲಿಸಿದ್ದಾರೆ.
ನಿಯೋಗದಲ್ಲಿ ರಾಜ್ಯ ಉಣ್ಣೆ ನೇಕಾರರ ಮಹಾಮಂಡಲದ ನಿದರ್ೇಶಕ ಸಿ.ಡಿ.ಚಂದ್ರಶೇಖರ್, ಎಸ್.ಆರ್.ಎಸ್. ಕಂಬಳಿ ಸೊಸೈಟಿಯ ಅಧ್ಯಕ್ಷರಾದ ಗಂಗಾಧರಯ್ಯ, ರಾಜ್ಯ ಅಹಿಂದ ಸಂಚಾಲಕ ಸಿ.ಎಲ್.ರವಿಕುಮಾರ್, ನಿದರ್ೇಶಕರುಗಳಾದ ಸಿ.ಹೆಚ್.ಅಳವೀರಯ್ಯ, ಸಿ.ಎಂ.ಬೀರಲಿಂಗಯ್ಯ, ಸಿ.ಕೆ.ಲೋಕೇಶ್, ಗೋವಿಂದಯ್ಯ, ವಿಜಯಕುಮಾರ್, ಭಾರತಮ್ಮ, ಪತ್ರಕರ್ತ ಸಿ.ಬಿ.ಲೋಕೇಶ್, ಕಾರ್ಯದಶರ್ಿ ಕೋದಂಡಯ್ಯ ಇದ್ದರು.

ನಮ್ಮ ಜೀವನದ ಶಿಲ್ಪಿಗಳು ನಾವೇ, ಅದನ್ನರಿತು ಶಿಕ್ಷಣ ಪಡೆಯುವಂತೆ ವಿದ್ಯಾಥರ್ಿಗಳಿಗೆ ಶಾಸಕರಿಂದ ಕಿವಿ ಮಾತು
ಚಿಕ್ಕನಾಯಕನಹಳ್ಳಿ,ಜು.06 : ನಮ್ಮ ಜೀವನದ ಶಿಲ್ಪಗಳು ನಾವೇ, ಅದನ್ನರಿತು ವಿದ್ಯಾಥರ್ಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಪಡೆದರೆ, ಜೀವನದ ಒಂದು ಭಾಗವನ್ನು ಗೆದ್ದಂತೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಪ್ತತಿ ಸಭಾಂಗಣದಲ್ಲಿ 2012-13ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಸಮಾವೇಶದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರ್ಯಾಂಕ್ ಬಂದ ವಿದ್ಯಾಥರ್ಿಗಳಂತೆ ಕಡಿಮೆ ಅಂಕಗಳನ್ನು ಪಡೆದಂತಹ ವಿದ್ಯಾಥರ್ಿಗಳು ಹೆಚ್ಚಿನ ಶ್ರಮ ವಹಿಸಿದರೆ ಮುಂದಿನ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಬಹುದು ಎಂದುರು. 
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಎಲ್ಲರಿಗಿಂತ ನಾವು ಹೆಚ್ಚು ಅಂಕ ಪಡೆದಿದ್ದೇವೆ ಎಂಬ ಗರ್ವದಿಂದ ವತರ್ಿಸದೆ ಗುರು ಹಿರಿಯರು, ಸ್ನೇಹಿತರಲ್ಲಿ ವಿನಯವಂತಿಕೆಯಿಂದ ವತರ್ಿಸಿ, ಮುಂದೆ ಎದುರಾಗುವ ಇನ್ನಿತರ ಪರೀಕ್ಷೆಗಳಲ್ಲಿಯೂ ಉತ್ತಮ ಅಂಕ ಪಡೆಯಿರಿ ಎಂದು ತಿಳಿಸಿದರು.
 ನಮ್ಮ ತಾಲ್ಲೂಕು ಶೈಕ್ಷಣಿವಾಗಿ ಅಭಿವೃದ್ದಿಯತ್ತ ಸಾಗುತ್ತಿದೆ, ಶಾಸಕರು ಶಿಕ್ಷಣದ ಬಗ್ಗೆ ಹೊಂದಿರುವ ಆಸಕ್ತಿಯಿಂದ  ಹೆಚ್ಚಿನ ಅಂಕ ಪಡೆದ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸಲು ಅವರಿಗೆ ಅಭಿನಂದನೆ ಸಲ್ಲಿಸುತ್ತಿರುವುದಲ್ಲದೆ, ಪ್ರತಿ ಶಾಲೆಯ ಶಿಕ್ಷಕರು ಹೇಗೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ವಿದ್ಯಾಥರ್ಿಗಳು ಹೇಗೆ ಕಲಿಯುತ್ತಿದ್ದಾರೆಂಬ ಬಗ್ಗೆ ಸದಾ ನನ್ನೋಂದಿಗೆ ಚಚರ್ಿಸುತ್ತಿರುತ್ತಾರೆ ಎಂದರು.
 2013ನೇ ಸಾಲಿನಲ್ಲಿ ತಾಲ್ಲೂಕಿನ ಶೈಕ್ಷಣಿಕ ಗುರಿ ಶೇ.85ರಷ್ಟು ಗುರಿ ಇಟ್ಟುಕೊಂಡಿದ್ದೆವು, ಆದರೆ ಶೇ.5ರಷ್ಟು ಕಡಿಮೆಯಾಗಿದೆ ಆದರೂ ನಿರಾಸೆ ಇಲ್ಲ, ಇದು ಋಜು ಮಾರ್ಗದಲ್ಲಿ ಬಂದಿರುವ ಫಲಿತಾಂಶ,  ಶಿಕ್ಷಕರು ವಿದ್ಯಾಥರ್ಿಗಳಿಗೆ ಗುಣಮಟ್ಟ ಶಿಕ್ಷಣ ನೀಡಿದ್ದಾರೆ, ಯಾವುದೇ ರೀತಿಯ ಅವ್ಯವಹಾರಕ್ಕೆ ಒಳಗಾಗದೆ ವಿದ್ಯಾಥರ್ಿಗಳು ಉತ್ತಮ ಫಲಿತಾಂಶ ತಂದಿದ್ದಾರೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.45ರಷ್ಟು ಅಂಕ ಪಡೆದ ವಿದ್ಯಾಥರ್ಿ ಛಲದಿಂದ ಓದಿ ಪಿಯುಸಿ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ ಪಡೆದಿರುವ ಹಾಗೆಯೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರ್ಯಾಂಕ್ ಬಂದ ವಿದ್ಯಾಥರ್ಿ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿರುವ ಘಟನೆಯು ನಮಗೆ ಮುಂದಿದೆ,  ವಿದ್ಯಾಥರ್ಿಗಳು ಹೆಚ್ಚಿನ ಸಮಯವನ್ನು ಓದಿನ ಕಡೆಗೆ ಹರಿಸಬೇಕು ಹಾಗೂ ಪೋಷಕರು ಮಕ್ಕಳನ್ನು ಈಗಿನಿಂದಲೇ ಸ್ಮಧರ್ಾತ್ಮಕ ನವೋದಯ ಪರೀಕ್ಷೆಗಳಲ್ಲಿ ಸ್ಪಧರ್ಿಸಲು ಪ್ರೋತ್ಸಾಹಿಸಿದರೆ ಮುಂದೆ ಅವರು ಐ.ಎ.ಎಸ್, ಕೆ.ಎ.ಎಸ್ ಪರೀಕ್ಷೆಗಳಲ್ಲಿ ಸ್ಪಧರ್ಿಸಿದಾಗ ಭಯವಿಲ್ಲದೆ ಅನುಭವದಿಂದ ಉತ್ತರಿಸಲು ಸಹಕಾರಿಯಾಗುತ್ತದೆ ಎಂದರು.
ತಿಪಟೂರು ಕಾಲೇಜು ಪ್ರಾಧ್ಯಾಪಕ ಡಾ.ಜಿ.ಎಸ್.ರಮೇಶ್ ಮಾತನಾಡಿ, ಗುರುವಿಗೆ ತನ್ನ ಶಿಷ್ಯ ತನಗಿಂತ ಮೇಲೇರಿದಾಗಲೇ ತೃಪ್ತಿಯಾಗುವುದು, ಅಂತಹ ತೃಪ್ತಿಯನ್ನು ವಿದ್ಯಾಥರ್ಿಗಳು ಶಿಕ್ಷಕರಿಗೆ ನೀಡಬೇಕು, ಇಲ್ಲಿ ನೆರೆದಿರುವ ಎಲ್ಲಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ನೋಡುತ್ತಿದ್ದೇನೆ, ಪ್ರತಿಭೆ ಅನ್ನುವುದು ಮಾಣಿಕ್ಯವಿದ್ದಂತೆ ಎಲ್ಲರಲ್ಲೂ ಪ್ರತಿಭೆಯಿರುತ್ತದೆ ಆದರೆ ಅದು ಹೊರಗೆ ಬರಲು ಸ್ವಲ್ಪ ಸಮಯವಾಗುತ್ತದೆ. ಐನ್ಸ್ಟೀನ್, ನ್ಯೂಟನ್, ಅಬ್ದುಲ್ಕಲಾಂರಂತಹ ಮಹಾ ಪ್ರತಿಭೆಗಳು ಬೆಳಕಿಗೆ ಬಂದದ್ದೂ ಅದೇ ರೀತಿ ಎಂದರಲ್ಲದೆ ಬಡವರಲ್ಲಿ ಹೆಚ್ಚಿನ ಪ್ರತಿಭೆಗಳು ಇರುತ್ತವೆ, ಆದರೆ ಆ ಪ್ರತಿಭೆಗಳು ಆಥರ್ಿಕ ಕಾರಣದಿಂದ ಹೊರಗೆ ಬರಲು ಸೊರಗುತ್ತಿವೆ ಎಂದರಲ್ಲದೆ ವಿಜ್ಞಾನ ಕಲೆ, ಪರಂಪರೆ ಮತ್ತು ವರ್ತಮಾನಗಳೆಲ್ಲವೂ ಒಟ್ಟಿಗೆ ಸೇರಿದಾಗ ಸಾಧನೆಯೂ, ಸಮಾಜವು ಮುನ್ನೆಡೆಯುತ್ತದೆ ಎಂದು ಅಭಿಪ್ರಾಯಪಟ್ಟರು. 
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳಿಗೆ ದಿ.ಎನ್.ಬಸವಯ್ಯನವರ ಸ್ಮರಣಾರ್ಥ ಬೆಳ್ಳಿ ಪದಕಗಳನ್ನು ಕೊಡಗೆಯಾಗಿ ನೀಡಲಾಯಿತು. 
ಸಮಾರಂಭದಲ್ಲಿ ಕ.ಕೋ.ಆ.ಬ್ಯಾಂಕ್ನ ಅಧ್ಯಕ್ಷ ಸಿ.ಎಸ್.ರಮೇಶ್, , ಕ್ಷೇತ್ರ ಸಮನ್ವಯಾಧಿಕಾರಿ ತಿಮ್ಮರಾಯಪ್ಪ, ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ಸಿ.ಆರ್.ತಿಮ್ಮರಾಜು, ತಾ.ಪ್ರೌ.ಶಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ತಾ.ದೈ.ಶಿ. ಪರಿವೀಕ್ಷಕ ಎನ್.ನರಸಿಂಹಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ನಾಗರಾಜು, ಕಾರ್ಯದಶರ್ಿ ರಾಜಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜೋಗಿಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಆಹ್ವಾನ

ಚಿಕ್ಕನಾಯಕನಹಳ್ಳಿ,ಜು.06 : ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಪುರಸಭೆ ವ್ಯಾಪ್ತಿಯ ಜೋಗಿಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಕೇಂದ್ರ ವ್ಯಾಪ್ತಿಯ ಅರ್ಹ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ.
ಅಜರ್ಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇದೇ 27ರ ಸಂಜೆ 5.30ರೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ತಲುಪುವಂತೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗೆ ಕಛೇರಿಯನ್ನು ಸಂಪಕರ್ಿಸಬಹುದಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, June 28, 2013

ಸಕರ್ಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಸವಲತ್ತು ಸಿಗಲಿ ಪ್ರೊ.ಸಿ.ಹೆಚ್.ಮರಿದೇವರು
ಚಿಕ್ಕನಾಯಕನಹಳ್ಳಿ,ಜೂ.28 : ಕಾನ್ವೆಂಟ್ ಶಾಲೆಗಳ ಅಬ್ಬರದಲ್ಲಿ ಕನ್ನಡದ ಸೊಲ್ಲು ಅಡಗಿಹೋಗುತ್ತದೇನೋ ಎನ್ನುವಂತಾಗಿದೆ, ಇದಕ್ಕೆ ಕನ್ನಡಿಗರೆಲ್ಲ ಕಂಕಣ ಕಟ್ಟಿಕೊಂಡು ಕನ್ನಡವನ್ನು ಉಳಿಸುವ ಬೆಳೆಸುವ ಪ್ರತಿಜ್ಞೆಯನ್ನು ತೊಡಬೇಕು. ಸಕರ್ಾರ ಕನ್ನಡ ಶಾಲೆಗಳಿಗೆ ಕಾನ್ವೆಂಟ್ ಶಾಲೆಗಳಲ್ಲಿರುವಂತಹ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ಕನ್ನಡವನ್ನು ಸಂರಕ್ಷಿಸುವ ಹೊಣೆಗಾರಿಗೆ ತಾಳಬೇಕಿದೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಹೆಚ್.ಮರಿದೇವರು ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ನಡೆದ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ಇಂಗ್ಲೀಷ್ ಎಂಬ ಸಾಂಕ್ರಾಮಿಕ ರೋಗ ಕನರ್ಾಟಕ ರಾಜ್ಯಕಷ್ಟೇ ಅಲ್ಲ, ಇಡೀ ಭರತಖಂಡಕ್ಕೆಲ್ಲ ಹಬ್ಬಿದೆ. ಅದು ವಿಶ್ವವೆಲ್ಲವನ್ನೂ ಆವರಿಸಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಕನರ್ಾಟಕ ರಾಜ್ಯದಲ್ಲಿ ಕನ್ನಡ ಶಾಲೆಗಳ ಸ್ಥಿತಿ ಚಿಂತಾಜನಕ. ಸಕರ್ಾರವೇ ಕನ್ನಡ ಶಾಲೆಗಳನ್ನು ಮುಚ್ಚುವ ತರದೂರಿನಲ್ಲಿದೆ. ಇದೊಂದು ಬಹುದೊಡ್ಡ ದುರಂತ. ಸಾಹಿತ್ಯ ಜನಜೀವನದ ಗತಿಬಿಂಬವಾಗಬೇಕು ಮತ್ತು ಪ್ರತಿಬಿಂಬವಾಗಬೇಕು ನಿಜ. ಸಾಹಿತ್ಯವು ಜೀವನದಲ್ಲಿ ಅನ್ನ ಬಟ್ಟೆ ವಸತಿಗಳನ್ನು ಒದಗಿಸಿಕೊಡುವುದಿಲ್ಲ. ಆದರೆ ಅವುಗಳನ್ನು ಸನ್ಮಾರ್ಗದಲ್ಲಿ ಸಂಪಾದಿಸಿಕೊಳ್ಳಲು ತಿಳುವಳಿಕೆ ನೀಡುತ್ತದೆ. ಅದು ಜೀವನಕ್ಕೆ ಹೊಸ ದೃಷ್ಠಿ ನೀಡಲು ನೆರವಾಗುತ್ತದೆ. ಸತತ ಅಧ್ಯಯನದಿಂದ ಜೀವನ ನವನವೋನ್ಮೇಶಾಲಿಯಾಗುತ್ತದೆ. 
ಉತ್ತಮ ಸಂಸ್ಕೃತಿ ಸಂಸ್ಕಾರ ಮತ್ತು ನಾಗರಿಕತೆಗಳನ್ನು ರೂಪಿಸಿಕೊಳ್ಳಲು ಶಕ್ತಿ ನೀಡುತ್ತದೆ. ವ್ಯಕ್ತಿ ವ್ಯಕ್ತಿತ್ವವು ಪರಿಮಳಭರಿತವಾದ ದುಂಡುಮಲ್ಲಿಗೆಯ ಪುಷ್ಪದಂತೆ ಅರಳಲು ಸಹಾಯಕವಾಗುತ್ತದೆ. ಇಂದಿನ ರಾಜಕೀಯ, ಚಲನಚಿತ್ರ, ದೂರದರ್ಶನ, ಕ್ರಿಕೆಟ್ ಮೊದಲಾದವುಗಳಿಗೆ ಅತಿಯಾದ ಪ್ರಚಾರ ದೊರೆಯುತ್ತಿರುವುದರಿಂದ, ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುವ ವರ್ಗ, ಅಭ್ಯಸಿಸುವ ವರ್ಗ ಕಡಿಮೆ ಆಗುತ್ತಿದೆಯೇನೊ ಎಂಬ ಅನುಮಾನ ಕಾಡುತ್ತಿದೆ. ಆದರೆ ಅವುಗಳಿಗಿಂತಲೂ ಸಾಹಿತ್ಯವನ್ನು ಹೆಚ್ಚಿನ ರೀತಿಯಲ್ಲಿ ಅಧ್ಯಯನ ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳುವುದು ತುಂಬಾ ಒಳ್ಳೆಯದು.
ಇಂದಿಗೂ ಕ್ರಿಯಾಶೀಲವಾಗಿ ಹಾಗೂ ಸೃಜನಾತ್ಮಕವಾಗಿ ಉಳಿದಿರುವ ಒಂದು ಧೀಮಂತ ಭಾಷೆ ಕನ್ನಡ ಈ ಕನ್ನಡದ ಅಭಿವೃದ್ದಿಗಾಗಿ ಅನ್ಯಭಾಷೆಗಳಿಂದ ಕೊಳ್ಳೆಹೊಡೆದು ಕನ್ನಡ ಭಾಷಾ ಕಣಜವನ್ನು ತುಂಬಿಸಿ ಅದನ್ನು ಶ್ರೀಮಂತ ಮಾಡಬೇಕಾದ್ದು ಕನ್ನಡ ನಾಡಿನ ಎಲ್ಲ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ. ಈಲ್ಲೆಯಲ್ಲಿ ಗಮಕಕಲೆ, ಚಿತ್ರಕಲೆ, ನೃತ್ಯಕಲೆ, ಸಂಗೀತಕಲೆ, ಜಾನಪದ ಕಲೆ, ಶಿಲ್ಪಕಲೆ ಮತ್ತು ಕಲಾವಿದರುಗಳು ಅಗಣಿತ ಪ್ರಮಾಣದಲ್ಲಿದ್ದಾರೆ.
ಸಂಸ್ಕೃತ, ತಮಿಳು, ತೆಲುಗು ಭಾಷೆಗಳಿಗೆ ಸಿಕ್ಕಂತೆ ಕನ್ನಡಕ್ಕೂ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಲಭ್ಯವಾಗಿದೆ. ಆದರೆ ಅದಕ್ಕೆ ಸಿಕ್ಕಬೇಕಾದ ಸೌಲಭ್ಯಗಳು ಇನ್ನೂ ಲಭ್ಯವಾಗಿಲ್ಲ. ಆ ದಿಕ್ಕಿನಲ್ಲಿ ನಮ್ಮ ರಾಜ್ಯದ ಸಂಸದರು ಪಕ್ಷಾತೀತವಾಗಿ ಹೋರಾಟ ನಡೆಸಬೇಕಾಗಿದೆ ಎಂದರು.
ಇತ್ತೀಚೆಗೆ ಕೊಬರಿಗೆ ಸರಿಯಾದ ಬೆಲೆ ನಿಗದಿಗೊಳ್ಳದೇ ತೆಂಗು ಬೆಳೆವ ರೈತರು ಕಂಗಾಲಾಗಿ ಹೋಗಿದ್ದಾರೆ. ಜತೆಗೆ ಮಳೆಯ ಅಭಾವ, ಬೋರ್ವೆಲ್ಗಳೆಲ್ಲ ಬತ್ತಿಹೋಗಿರುವುದು, ಅಂತರ್ ಜಲ ಕುಸಿತ, ನುಸಿಪೀಡೆ, ಕಪ್ಪುತಲೆ ಹುಳುವಿನ ಬಾದೆ ಇತ್ಯಾದಿ ಅನೇಕಾನೇಕ ಸಂಕಷ್ಟಗಳಿಗೆ ಸಿಕ್ಕಿ ತೆಂಗು ಬೆಳೆಗಾರರು ನಲುಗಿಹೋಗಿದ್ದಾರೆ. ವಿಶೇಷವಾಗಿ ಈ ಸಮಸ್ಯೆಗಳ ನಿವಾರಣೆಗಾಗಿ ಪ್ರಸ್ತುತ ಸಕರ್ಾರದ ಜನಪ್ರತಿನಿಧಿಗಳು ನಮ್ಮ ರೈತರ ಉತ್ಪನ್ನಗಳಿಗೆ ನ್ಯಾಯೋಚಿತ ಬೆಲೆ ನಿಗಧಿಗೊಳಿಸಲು ಶ್ರಮಿಸಬೇಕಾಗಿದೆ.
ತೆಂಗು ಬೆಳೆಗಾರ ರೈತರ ನೆರವಿಗೆ ಇರುವುದೊಂದೇ ಮಾರ್ಗ. ಸಕರ್ಾರ ಭದ್ರಾ ಮೇಲ್ದಂಡೆ ಯೋಜನೆ, ನೇತ್ರಾವತಿ ತಿರುವು ಯೋಜನೆ ಮತ್ತು ವಾಟರ್ಗ್ರಿಡ್ ಕೆನಾಲ್ ಮೂಲಕ ರಾಜ್ಯದ ಅನೇಕ ಜಿಲ್ಲೆಗಳ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದರೆ ತೆಂಗು ಬೆಳೆ ರೈತರು ಬದುಕಲು ದಾರಿಯಾಗುತ್ತದೆ.
101ಜನ ವಿಭೂತಿ ಪುರುಷರ ಶಿಲಾ ಪ್ರತಿಮೆಗಳನ್ನು ಪ್ರತಿಷ್ಠಾಪಿಸುವ ಹುಚ್ಚನ್ನು ಹತ್ತಿಸಿಕೊಂಡಿದ್ದೇನೆ. ಕೆವಲ ಶಿಲಾಪ್ರತಿಮೆಗಳನ್ನು ನಿಲ್ಲಿಸುವುದಷ್ಟೇ ಅಲ್ಲ. ಪ್ರತಿಯೊಂದು ಶಿಲಾಪ್ರತಿಮೆಯ ಪೀಠಭಾಗದಲ್ಲಿ ಅವರವರ ಸುಪ್ರಸಿದ್ದ ಧ್ಯೇಯವಾಕ್ಯಗಳನ್ನು ಶಿಲಾಫಲಕದಲ್ಲಿ ಕೆತ್ತಿಸಿ ಹಕುವುದು ಎಂದರಲ್ಲದೆ ಶಿಲಾಪ್ರತಿಮೆಗಳ ಸ್ಥಾಪನೆಗಾಗಿ ಸಿದ್ದರಮನಗರಕ್ಕೆ 3ಕಿ.ಮೀ ಚಿಕ್ಕನಾಯಕನಹಳ್ಳಿಗೆ 8ಕಿ.ಮೀ ತುಮಕೂರಿಗೆ 28 ಕಿ.ಮೀ ಬೆಂಗಳೂರಿಗೆ 118ಕಿ.ಮೀ ದೂರದಲ್ಲಿರುವ ಸುಂಟರಮಳೆಗೆ ಶ್ರೀ ಗುರುಸಿದ್ದರಾಮೇಶ್ವರರ ದಏವಾಲಯದ ಬೆಟ್ಟದ ತಪ್ಪಲಿನ ಪ್ರದೇಶ. ಅಲ್ಲಿ ಒಂದಷ್ಟು ಸಕರ್ಾರಿ ಭೂಮಿ ಇದೆ. ಅದನ್ನು ಲೀಸ್ ಪಡೆದುಕೊಳ್ಳಲು ಶ್ರೀ ಸಿದ್ದರಾಮೇಶ್ವರ ಸೇವಾ ಟ್ರಸ್ಟ್ನವರು ಅಜರ್ಿ ಸಲ್ಲಿಸುವವರಿದ್ದಾರೆ. ಅದಕ್ಕೆ ಜಿಲ್ಲಾ ಸಚಿವರಾದ ಟಿ.ಬಿ.ಜಯಚಂದ್ರರವರು ಹಾಗೂ ಸ್ಥಳೀಯ ಶಾಸಕ ಸುರೇಶ್ಬಾಬುರವರು ಹೆಚ್ಚು ಮುತುವಜರ್ಿ ವಹಿಸಿ ಆ ಜಮೀನನ್ನು ನಿಯಮಗಳ ಪ್ರಕಾರ ಲೀಸ್ ಕೊಡಿಸಬೇಕಾಗಿ ಪ್ರಾಥರ್ಿಸುತ್ತೇನೆ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಸಾಹಿತ್ಯದ ಸೋಂಕಿಲ್ಲದೇ ಪರಿಪೂರ್ಣ ಮನುಷ್ಯನಾಗಲು ಸಾಧ್ಯವಿಲ್ಲ ಎಂದ ಅವರು ಸಾಹಿತ್ಯದ ಓದು-ಬರವಣಿಗೆ ಮನಷ್ಯನ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುತ್ತದೆ ಅಲ್ಲದೇ ಮಾನವೀಯತೆ ಹೃದಯ ವೈಶಾಲ್ಯತೆಯನ್ನು ಬೆಳೆಸಲು ಸಹಕಾರಿಯೆಂದರು.
ಸಾಹಿತ್ಯ ಸಮ್ಮೇಳನಗಳು ಕನ್ನಡದ ಬೇರುಗಳನ್ನು ಗಟ್ಟಿಮಾಡುವ ಕೆಲಸಮಾಡಬೇಕಿದೆ ಎಂದು ಆಶಿಸಿದ ಸಚಿವರು ಕನರ್ಾಟಕ ಏಕೀಕರಣವಾಗಿ 60 ವರ್ಷಗಳು ಕಳೆದಿದ್ದು, ಸಂಪೂರ್ಣ ಕನ್ನಡೀಕರಣದ ಆಶಯ ಇನ್ನೂ ಈಡೇರಿಲ್ಲ. ಕೇಂದ್ರ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಸೌಲಭ್ಯ ಕಲ್ಪಿಸಿದ್ದರೂ ಆಡಳಿತ ಕ್ಷೇತ್ರದಲ್ಲಿ ಕನ್ನಡದ ಶಬ್ದ ಭಂಡಾರ ವಿಸ್ತ್ರತಗೊಳ್ಳದಿರುವುದು ವಿಷಾದನೀಯವೆಂದರು.
ಚಿ.ನಾ.ಹಳ್ಳಿಗೆ ಶಾಶ್ವತ ನೀರಿನ ಯೋಜನೆ: ಚಿಕ್ಕನಾಯಕನಹಳ್ಳಿ ನನಗೆ ಜನ್ಮ ನೀಡಿ, ರಾಜಕೀಯ ನೆಲೆ ಕಲ್ಪಿಸಿಕೊಟ್ಟ ತಾಲೂಕು ಎಂದು ಸ್ಮರಿಸಿದ ಸಚಿವರು ತೆಂಗು ಬೆಳೆದು ಸಮೃದ್ದ ಜೀವನ ನಡೆಸುತ್ತಿದ್ದ ಜನರು ಇಂದು ಮಳೆಯಿಲ್ಲದೆ, ಬೆಳೆಯಿಲ್ಲದೆ ಬರಗಾಲದಿಂದ ತತ್ತರಿಸಿದ್ದಾರೆ. ಈ ಭಾಗಕ್ಕೆ ನೀರು ಹರಿಸಬೇಕೆಂದು ದಿ.ಎನ್.ಬಸವಯ್ಯ ಅವರ ಕಾಲದಿಂದಲೂ ಪ್ರಯತ್ನ ನಡೆಯುತ್ತಾಬಂದಿದೆ. ಈ ಭಾಗಕ್ಕೆ ಶಾಶ್ವತ ನೀರು ಕಲ್ಪಿಸಲು ಬಜೆಟ್ನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ಕನ್ನಡ ಭವನ ನಿಮರ್ಾನಕ್ಕೆ ಬದ್ದ: ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನೆನಪಿಗಾಗಿ ತುಮಕೂರಿನಲ್ಲಿ ನಿಮರ್ಿಸುತ್ತಿರುವ ಕನ್ನಡ ಭವನ ಪೂರ್ಣಗೊಳಿಸಲು ಬದ್ಧರಿರುವುದಾಗಿ ಭರವಸೆ ನೀಡಿದ ಸಚಿವರು ಚಿ.ನಾ.ಹಳ್ಳಿಯ ತೀನಂಶ್ರೀ ಭವನ ಹಾಗೂ ಕನ್ನಡ ಭವನ ನಿಮರ್ಾಣ ಪೂರ್ಣಗೊಳಿಸಲು ಸಹಕಾರ ನೀಡುವುದಾಗಿ ಘೋಷಿಸಿದರು.
ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರ್ ರವರ ಕನ್ನಡಿಗನ ಕಣ್ಣಲ್ಲಿ ಕಠ್ಮಾಂಡು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅಬ್ಕಾರಿ ಆಯುಕ್ತ ಡಾ.ಸಿ.ಸೋಮಶೇಖರ್, ಕನ್ನಡ ಭಾಷೆಯ ಮೇಲೆ ಅನೇಕ ಆಕ್ರಮಣಗಳು ನಡೆದರೂ ಭಾಷೆಯ ಸತ್ವಕ್ಕೆ ಕುಂದು ಉಂಟಾಗಿಲ್ಲ.ಆದರೆ ದೃಶ್ಯ ಮಾಧ್ಯಮದವರ ಅಕ್ಷರ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದು, ಈ ಬಗ್ಗೆ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು. 
ಕನ್ನಡ ಭಾಷೆ, ನೆಲ,ಜಲ,ಬದುಕು ಹಾಗೂ ಸಂಸ್ಕೃತಿಯ ಮೇಲೆ ಆಕ್ರಮಣಗಳು ಹೆಚ್ಚಾಗಿರುವುದು ವಿಷಾದ ಸಂಗತಿಯಾಗಿದೆಯೆಂದರು. 
ಸಮ್ಮೇಳನದ ಅಂಗವಾಗಿ ಹೊರತಂದ ಕಣಜ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕೇಂದ್ರ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಕನ್ನಡಿಗರಿಗೆ ಸಿಇಟಿಯಲ್ಲಿ ಶೇ.50ರಷ್ಟು ಹಾಗೂ ಉದ್ಯೋಗದಲ್ಲಿ ಮೀಸಲು ಕಲ್ಪಿಸಬೇಕಲ್ಲದೇ 7ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಕಡ್ಡಾಯವಾಗಿ ಓದುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಚಾರ್ ಆಶಯ ನುಡಿಗಳನ್ನಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮ, ಜಿಲ್ಲಾಧಿಕಾರಿ ಸತ್ಯಮೂತರ್ಿ, ಸಿಇಓ ಗೋವಿಂದರಾಜು, ಜಿ.ಪಂ.ಉಪಾಧ್ಯಕ್ಷೆ ಮಮತ, ಸದಸ್ಯರಾದ ಲೋಹಿತಾಬಾಯಿ, ಜಾನಮ್ಮ ರಾಮಚಂದ್ರಯ್ಯ , ತಾಲೂಕು ಕಸಾಫ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಪತ್ರಕರ್ತ ಚಿ.ನಿ.ಪುರುಷೋತ್ತಮ,ಹಾಲು ಒಕ್ಕೂಟದ ಅಧ್ಯಕ್ಷ ಹಳೆಮನೆ ಶಿವನಂಜಪ್ಪ ಸಾಹಿತಿ ಎಂ.ವಿ.ನಾಗರಾಜರಾವ್, ನಿಕಟಪೂರ್ವ ಅಧ್ಯಕ್ಷ ಪ್ರೊ.ಡಿ.ಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ವೇದಿಕೆಯಲ್ಲಿದ್ದರು.
ಬಾಕ್ಸ್
ರಾಜ್ಯ ಸರಕಾರದ ಕಾನೂನು, ಅಧಿನಿಯಮಗಳನ್ನು ಸಂಪೂರ್ಣ ಕನ್ನಡೀಕರಣ ಗೊಳಿಸಲು ಚಿಂತನೆ ನಡೆದಿದ್ದು, ಅನೇಕ ಸವಾಲುಗಳು ಎದುರಾಗಿವೆ. ಆಡಳಿತ ಕನ್ನಡದ ಶಬ್ದ ಬಂಡಾರ ವಿಸ್ತರಣೆಗೆ ಕಸಾಪ ನೆರವು ಅಗತ್ಯವಾಗಿದೆ.,
-ಟಿ.ಬಿ.ಜಯಚಂದ್ರ ಕಾನೂನು ಸಚಿವರು


ಮೆರವಣಿಗೆಯ ಮೂಲಕ ಪ್ರಧಾನ ವೇದಿಕೆಗೆ ಆಗಮಿಸಿದ ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಹೆಚ್.ಮರಿದೇವರು
ಚಿಕ್ಕನಾಯಕನಹಳ್ಳಿ,ಜೂ.28 : ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನವು ಸಮ್ಮೇಳನಾಧ್ಯಕ್ಷ ಪ್ರೊ.ಸಿ.ಹೆಚ್.ಮರಿದೇವರು ಕುಳಿತಿರುವ ಪುಷ್ಪಾಲಂಕೃತವಾದ ವಾಹನವು  ಕನ್ನಡ ಸಂಘದ ವೇದಿಕೆಯಿಂದ ಆರಂಭಗೊಂಡು, ಪಟ್ಟಣದ ರಾಜ ಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಪ್ರಧಾನ ವೇದಿಕೆಗೆ ಕರೆದೊಯ್ಯಲಾಯಿತು.
ಸಮ್ಮೇಳನಾಧ್ಯಕ್ಷರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ವೀರಗಾಸೆ, ಚಕ್ಕೆಭಜನೆ, ಗಾರುಡಿಗೊಂಬೆ, ಗೊವರನ ಕುಣಿತ, ಪೂಜಾ ಕುಣೀತ, ಹೆಜ್ಜೆಮೇಳ, ಮಹಿಳಾ ತಮಟೆ, ಕೋಲಾಟ, ಲಂಬಾಣಿ ನೃತ್ಯ, ಗಾಲ್ಡಿಗನ ಕುಣಿತ, ಕಂಸಾಳೆ, ಡೊಳ್ಳುಕುಣಿತ, ನಾದಸ್ವರ, ತಮಟೆ ವಾದ್ಯ, ಅರೇವಾದ್ಯ, ಕಹಳೆ, ಚಿಟ್ಟಿಮೇಳ, ಸೋಮನಕುಣಿತ, ಸ್ತ್ರೀಭಜನಾತಂಡ, ಗೊರವಯ್ಯನ ಕುಣಿತ ಹಾಗೂ ವಿವಿಧ ಜಾನಪದ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಮ್ಮೇಳನದಲ್ಲಿ ಪ್ರದಶರ್ಿನಿ ಸಮುಚ್ಛಯ , ಗುಡಿಕೈಗಾರಿಕಾ ಪ್ರದಶರ್ಿನ, ಪುಸ್ತಕ ಮಳಿಗೆ ಉದ್ಘಾಟನೆ, ರಂಗೋಲಿ ಚಿತ್ತಾರ, ಕಣದ ರಾಶಿ, ಛಾಯಾಚಿತ್ರ ಪ್ರದರ್ಶನ, ಭುವೇಶ್ವರಿ ಶಿಲ್ಪ ಅನಾವರಣ ಸಾರ್ವಜನಿಕರನ್ನು ಆಕಷರ್ಿಸಿತು.
ಪಟ್ಟಣದ ತುಂಬ ಊರಿನ ಹಿರಿಯ ಹೆಸರಿನಿಂದ ಕೂಡಿದ ಬಾಗಿಲುಗಳು, ಕಮಾನುಗಳು ಆಕಷರ್ಿಸಿದವು.
ಮೆರವಣಿಗೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಾ.ಪಂ.ಅಧ್ಯಕ್ಷ ಶಶಿಧರ್, ಜಿ.ಪಂ.ಸದಸ್ಯ ಹೆಚ್.ಬಿಕ.ಪಂಚಾಕ್ಷರಿ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಸಿ.ಬಿ.ರೇಣುಕಸ್ವಾಮಿ, ತಾ.ಪಂ.ಸದಸ್ಯ ಎಂ.ಎಂ.ಜಗದೀಶ್, ರವಿಚಂದ್ರ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ, ಸೀಮೆಎಣ್ಣೆ ಕೃಷ್ಣಯ್ಯ ಸೇರಿದಂತೆ ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

Monday, June 24, 2013


9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ದತೆ: ಎಂ.ಎಸ್.ರವಿಕುಮಾರ್

ಚಿಕ್ಕನಾಯಕನಹಳ್ಳಿ,ಜೂ.24 : 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ದತೆ ನಡೆಯುತ್ತಿದ್ದು ಸಮ್ಮೇಳನಕ್ಕೆ ಗ್ರಾಮೀಣ ಹೆಣ್ಣುಮಕ್ಕಳು ರೊಟ್ಟಿ ತಯಾರಿಸಿ ತರುವುದು,  ಆರಂಭವಾಗುವ ಒಂದು ದಿನ ಮುಂಚಿತವಾಗಿಯೇ ಗಿಳಿವಿಂಡು ಮಕ್ಕಳ ತಂಡದಿಂದ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮ್ಮೇಳನಕ್ಕೆ ಪ್ರಾರಂಭವಾಗಲಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದರು.
ಪಟ್ಟಣದ ಕಸಾಪ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 28,29, ಹಾಗೂ 30ರಂದು ವಿದ್ಯುಕ್ತವಾಗಿ ಸಮ್ಮೇಳನ ನಡೆಯಲಿದೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಕನ್ನಡ ಸಂಘದಿಂದ ಆರಂಭಗೊಂಡು  ಪಟ್ಟಣದ ನಾಲ್ಕು ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು. ಈ ವೇಳೆ 30ಕ್ಕೂ ಹೆಚ್ಚು ಕಲಾ ತಂಡಗಳು ಸಾವಿರಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ, ಸಮ್ಮೇಳನದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಕ್ಕೂ  ಅಗತ್ಯವಿರುವ ಪೂರ್ವ ಸಿದ್ದತೆಗಳನ್ನು ಸಿದ್ದಪಡಿಸಿಕೊಂಡಿದ್ದೇವೆ, 25ರಂದು ಸಮ್ಮೇಳನದ ಪರವಾಗಿ ಪಟ್ಟಣದ ಬೀದಿಗಳಲ್ಲಿ ಧನ ಧಾನ್ಯ ಸಂಗ್ರಹಣೆಗಾಗಿ ಕನ್ನಡ ಪರ ಸಂಘಟನೆಗಳು, ಆಟೋ ಚಾಲಕರ ಸಂಘದಿಂದ  ಜಾಥಾ ನಡೆಸಲಿವೆ. 27ರಂದು ಮಕ್ಕಳ ನಾಟಕಗಳು ವಿಶೇಷ ಆಕರ್ಷಣೆ ಪಡೆಯಲಿದ್ದು ಶಾಲಾ ಕಾಲೇಜು ವಿದ್ಯಾಥರ್ಿಗಳ ಎನ್.ಎಸ್.ಎಸ್ ವಿದ್ಯಾಥರ್ಿಗಳು ನಮಗೆ ಕೈಜೋಡಿಸಲಿದ್ದಾರೆ ಎಂದರು. 
ಸಮ್ಮೇಳನದಲ್ಲಿ ವಿಶೇಷವಾಗಿ ನಮ್ಮೂರಲ್ಲಿ ಗಜಲ್ ಎಂಬ ವಿಶೇಷ ಕವಿಗೋಷ್ಠಿ ಹಾಗೂ  ವಿವಿಧ ಗೋಷ್ಠಿಗಳಲ್ಲಿ ನಡೆಯುವ ಸಾಹಿತ್ಯ, ಸಾಂಸ್ಕೃತಿಯ, ವೈಶಿಷ್ಟ್ಯತೆಗಳ ಅನಾವರಣ, ಕೃಷಿಗೆ ಸಂಬಂಧಿಸಿದ ವಿಷಯಗಳ ಮಂಡನೆ, ಚಚರ್ೆ ತೆಂಗು ಬೆಳೆಗೆ ಸಂಬಂಧಿಸಿದ ಮಾರುಕಟ್ಟೆ, ಅದರ ಮುಂದಿನ ಪರಿಣಾಮಗಳ ಚಿಂತನೆ, ಕುಂಚಾಂಕುರ ಕಲಾ ಸಂಘದ ಆಕರ್ಷಕ ಚಿತ್ರಕಲೆಗಳ ಪ್ರದರ್ಶನ, ಶಿಲ್ಪಿ ವಿಶ್ವನಾಥ್ರವರಿಂದ ಕೆತ್ತಲ್ಪಟ್ಟ ಭುವನೇಶ್ವರಿ ವಿಗ್ರಹದ ಅನಾವರಣ, ಛಾಯಾಚಿತ್ರ ಸಂಘಗಳಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ದರ್ಶನ, ರಾಜ್ ಅಭಿಮಾನಿ ಸಿ.ಹೆಚ್.ರೂಪೇಶ್ರವರ ರಾಜ್ ಪ್ರದರ್ಶನ, ರಂಗೋಲಿ ಚಿತ್ತಾರ, ಗುಡಿ ಕೈಗಾರಿಕೆಗಳಾದ ಕಂಬಳಿ, ಬುಟ್ಟಿ, ಕುಂಬಾರಿಕೆಗಳ ಪ್ರದರ್ಶನ, ಹಾಗೂ ಮೆರವಣಿಗೆಯಲ್ಲಿ ವೈಶಿಷ್ಟ್ಯಪೂರ್ಣ ಕಲಾ ತಂಡಗಳ, ಸಾಂಸ್ಕೃತಿ ವೈಭವ ಪ್ರತಿಬಿಂಬಿಸುವ ಜಾನಪದ ಕಲೆಗಳ ಪ್ರದರ್ಶನವಿರುತ್ತದೆ ಎಂದರು.
ಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ಜಿ.ರಾಜೀವಲೋಚನ, ಪರಿಷತ್ನ ಪ್ರಧಾನ ಕಾರ್ಯದಶರ್ಿಗಳಾದ ಉಪನ್ಯಾಸಕ ರವಿಕುಮಾರ್ ಮಂಜುನಾಥರಾಜ ಅರಸ್,  ನಂದೀಶ್ ಬಟ್ಲೇರಿ, , ಸಿ.ಟಿ.ಗುರುಮೂತರ್ಿ, ಎಸ್.ಬಿ.ಕುಮಾರ್, ಸಿ.ಹೆಚ್.ಗಂಗಾಧರ್ ಉಪಸ್ಥಿತರಿದ್ದರು. 

Friday, June 21, 2013


ಹೇಮಾವತಿ ನೀರು ತರುವ ಯೋಜನೆಗೆ 35 ಕೋಟಿ ರೂ ಬಿಡುಗಡೆ: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಜೂ.21 ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಬಳಿ ಒಂದುವರೆ ಎಕರೆ ಜಮೀನಿದ್ದು ಈ ಸ್ಥಳದಲ್ಲಿ ಶಾಸಕರ ಅನುದಾನ ಸೇರಿದಂತೆ ಭಕ್ತಾಧಿಗಳ ನೆರವಿನಿಂದ ಕಲ್ಯಾಣ ಮಂಟಪ ನಿಮರ್ಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ನೂತನ ರಾಜಗೋಪುರ ಹಾಗೂ ಕಳಶ ಪ್ರತಿಷ್ಠಾಪನ ಧಾಮರ್ಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ್ಲ ತಾಲೂಕಿಗೆ  ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಗೆ 35ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ತಿಳಿಸುವುದು ನನಗೆ ಸಂತಸತಂದಿದೆ ಎಂದರಲ್ಲದೆ, .ತಾಲ್ಲೂಕು ರಾಜ್ಯದಲ್ಲಿಯೇ ಅತಿ ಹೆಚ್ಚು ದೇವಾಲಯಗಳಿರುವ  ಬೀಡಾಗಿದ್ದು ಪ್ರಸಿದ್ದ ಹಳೆಯೂರು ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಹಲವು ಪುರಾತನ ದೇವಾಲಯಗಳು ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯವಿರುವುದು ತಾಲ್ಲೂಕಿನ ಹೆಮ್ಮೆಯ ವಿಷಯ ಎಂದರು.
ಪಟ್ಟಣದಲ್ಲಿ ಹಲವಾರು ವರ್ಷಗಳಿಂದ  ನೆನಗುದಿಗೆ ಬಿದ್ದಿದ್ದ ರಾಜಗೋಪುರ ಹಾಗೂ ಕಳಶ ಪ್ರತಿಷ್ಠಾಪನೆ ಭಕ್ತಾಧಿಗಳ ನೆರವಿನಿಂದ ಕೈಗೊಂಡು ಪೂರ್ಣಗೊಂಡಿದೆ ಎಂದರಲ್ಲದೆ, ದೇವಾಲಯದ ಸಮಿತಿಯ ಸದಸ್ಯರು ರಾತ್ರಿ ಹಗಲು ಎನ್ನದೆ ದೇವಾಲಯದ ಜೀಣರ್ೋದ್ದಾರ ಶ್ರಮಿಸಿರುವುದು ಶ್ಘಾಘನೀಯ ಎಂದರು.
ನಿವೃತ್ತ ವಾತರ್ಾ ಮತ್ತು ಪ್ರಸಾರ ಇಲಾಖೆ ಜಂಟಿ ನಿದರ್ೇಶಕ ಸಿ.ಕೆ.ಪರುಶುರಾಮಯ್ಯ ಮಾತನಾಡಿ ಹಾಲಿ ಕನ್ವಿನಿಯರ್ ಚಂದ್ರಶೇಖರ್ಶೆಟ್ಟಿರವರ ಧಾಮರ್ಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಜೀಣೋದ್ದಾರ ಮಾಡಿರುವುದು ಶ್ಘಾಘನೀಯವಾದುದು ಎಂದರು.
ರಾಜ್ಯ ಜೆ.ಡಿ.ಎಸ್.ವಕ್ತಾರ ರಮೇಶಬಾಬು ಮಾತನಾಡಿ ಚಿ.ನಾ.ಹಳ್ಳಿ ತಾಲ್ಲೂಕು ದೇವಾಲಯದ ಬೀಡಾಗಿದೆ, ಧಾಮರ್ಿಕ ಕಷೇತ್ರದಲ್ಲಿ ತಾಲ್ಲೂಕಿಗೆ ವಿಶೇಷ ಸ್ಥಾನಮಾನವಿದೆ,ಪಟ್ಟಣದ ವೆಂಕಟರಮಣ ದೇವಾಲಯ ಪ್ರಸನ್ನರಾಮೇಶ್ವರದೇವಾಲಯ, ಬನಶಂಕರಿದೇವಾಲಯ, ಆದಿಆಂಜನೇಯಸ್ವಾಮಿ ದೇವಾಲಯ 600ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿವೆ ಎಂದರು.
ಈ ಸಂದರ್ಭದಲ್ಲಿ ಅರ್ಚಕರಾದ ನಾಗೇಶ್ ಹಾಗೂ ರಾಮಕೃಷ್ಣಜೋಯಿಸ್ರವರನ್ನು ಸನ್ಮಾನಿಸಲಾಯಿತು. ಹಾಗೂ ವೃದ್ದಾಪ್ಯ, ಅಂಗವಿಕಲ ಮತ್ತು ವಿಧವಾ ವೇತನದ ಫಲಾನುಭವಿಗಳಿಗೆ ಚೆಕ್ನ್ನು ವಿತರಿಸಲಾಯಿತು.
ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಶಂಕುಸ್ಥಾಪನೆ ರಾಜಗೋಪುರ ಕಳಸಸ್ಥಾಪನೆಸ ಪ್ರಾಣಪ್ರತಿಷ್ಠಾಪನೆ, ಶ್ರೀ ರಾಮತಾರಕ ಹೋಮವನ್ನು ತುಮಕೂರು ರಾಮಕೃಷ್ಣಾಶ್ರಮದ ಶ್ರೀ ವೀರೇಶಾನಂದಸ್ವಾಮಿಯವರು ನೆರವೇರಿಸಿದರು.
ಕಾರ್ಯಕ್ರಮವನ್ನು ತಹಶೀಲ್ದಾರ್ ಕಾಮಾಕ್ಷಮ್ಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಸಾಹಿತಿ ಎಂ.ವಿ.ನಾಗರಾಜ್ರಾವ್, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ದೇವಾಲಯದ ಕನ್ವಿನಿಯರ್ ಚಂದ್ರಶೇಖರ್ಶೆಟ್ಟಿ, ತಾ.ಜೆಡಿಎಸ್ ಅಧ್ಯಕ್ಷ ಜಿ.ರಘುನಾಥ್, ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್, ಸಿ.ಎಂ.ರಂಗಸ್ವಾಮಯ್ಯ, ಸಿ.ಎಸ್.ರಮೇಶ್, ಪ್ರಕಾಶ್, ರವಿಚಂದ್ರ, ದಯಾನಂದ್, ಮೈನ್ಸ್ಶಾಂತಕುಮಾರ್, ಸಿ.ಬಿ.ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
 ತರಬೇತಿಯನ್ನು ಹಾಗೂ ಅನುದಾನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿ
ಚಿಕ್ಕನಾಯಕನಹಳ್ಳಿ,ಜೂ.21 : ಗ್ರಾಮದ ಅಭಿವೃದ್ದಿಗಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಗ್ರಾಮಸ್ಥರಿಗೆ ನೀಡುವ ತರಬೇತಿಯನ್ನು ಹಾಗೂ ಅನುದಾನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ನಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಪರ್ಾಡು ಮಾಡಬೇಕು ಎಂದು ಒಕ್ಕೂಟದ ಅಧ್ಯಕ್ಷ ನಿರಂಜನಮೂತರ್ಿ ಹೇಳಿದರು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ಚಿಂತಮಣಿ ನೇರಳೆ ನಾಟಿ ಮತ್ತು ನಿರ್ವಹಣೆ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
 ಕುಪ್ಪೂರು ವಲಯದ ಮೇಲ್ವಿಚಾರಕರಾದ ನಾಗರಾಜು ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿ ಸ್ವಸಹಾಯ ಸಂಘಗಳಲ್ಲಿ ಆಥರ್ಿಕ ಗುಣಮಟ್ಟವನ್ನು ಹೆಚ್ಚಿಸಲು ಸ್ವ-ಉದ್ಯೋಗದ ಜೊತೆಗೆ ತೋಟಗಾರಿಕ ಬೆಳೆಯಾದ ನೇರಳೆಯನ್ನು ಮಿಶ್ರ ಕೃಷಿ ಮಾಡಿ ಲಾಭಗಳಿಸಲು  ತಿಳಿಸಿದರು. ಹೇಮಾವತಿ ನಾಲೆಯಿಂದ ಚಿ.ನಾ.ಹಳ್ಳಿ ತಾಲ್ಲೂಕಿಗೆ ಕುಡಿಯುವ ನೀರಿನ ಯೋಜನೆಗೆ 35ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ತಿಳಿಸುವುದು ನನಗೆ ಸಂತಸತಂದಿದೆ ಎಂದರು.
ತಾಲೂಕು ಕೃಷಿ ಮೇಲ್ವಿಚಾರಕರಾದ ಎಸ್.ಹೆಚ್ ನಾಗಪ್ಪ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿ  ತೋಟಗಾರಿಕ ಬೆಳೆ ರೈತರ ಕೈ ಹಿಡಿದಿದ್ದು ಇದರ ಅಡಿಯಲ್ಲಿ ನಮ್ಮ ಯೋಜನೆ ವತಿಯಿಂದ ಗೋಪಾಲನಹಳ್ಳಿ ಗ್ರಾಮದಲ್ಲಿ 10 ಕುಟುಂಬಗಳಲ್ಲಿ 1 ಕುಟುಂಬಕ್ಕೆ 30 ಸಸಿಗಳನ್ನು ವಿತರಿಸಿ ಮಾದರಿ ಮಿಶ್ರ ಬೆಳೆಯ ಪ್ರಾತ್ಯಕ್ಷಿಕೆಯನ್ನು ಗ್ರಾಮದ 10 ಕುಟುಂಬಗಳಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಈ 10 ಕುಟುಂಬಗಳಿಗೆ ಉಚಿತ ಚಿಂತಾಮಣಿ ನೇರಳೆ ಸಸಿಯನ್ನು ನೀಡಿ ನಿರ್ವಹಣೆಗೆ ಉಚಿತ ತರಬೇತಿಯನ್ನು ನೀಡಿ ಗ್ರಾಮೀಣ ಜನತೆಯ ಆಥರ್ಿಕ ಮಟ್ಟವನ್ನು ಸುಧಾರಿಸುವಲ್ಲಿ ನಮ್ಮ ಸಂಸ್ಥೆ ನಿರಂತರವಾಗಿ ತಾಲೂಕಿನಾದ್ಯಾಂತ ಕಾರ್ಯನಿರ್ವಹಿಸುತ್ತಿದೆ. ಎಂದರಲ್ಲದೆ ಗೋಪಾಲನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಉದ್ದೇಶದಿಂದ ನಾವು ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಸುನಿಲ್ಕುಮಾರ್, ಗ್ರಾಮಸ್ಥರಾದ ಉಪನ್ಯಾಸಕ ರಘು, ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.


ಮಾಸ್ತಿ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರಿಗೆ ಅಭಿನಂದನಾ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.20 : ರೋಟರಿ ಕ್ಲಬ್ ವತಿಯಿಂದ  ಮಾಸ್ತಿ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಜಿ.ಸಿದ್ದರಾಮಯ್ಯ ನವರಿಗೆ ಅಭಿನಂದನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಇದೇ 26ರ ಬುಧವಾರ ಸಂಜೆ 6.45ಕ್ಕೆ ಪಟ್ಟಣದ ರೋಟರಿ ಬಾಲಭವನದಲಿಏರ್ಪಡಿಸಲಾಗಿದೆ ಎಂದು ರೋಟಿರಿ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ತಿಳಿಸಿದರು.
2012-13ರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರಿಗೆ, ಬೆಂಗಳೂರಿನ ಅಂಬೇಡ್ಕರ್ ಡೆಂಟಲ್ ಕಾಲೇಜು ಮುಖ್ಯಸ್ಥ ಡಾ.ಮಹಮದ್ ಫೈಜುದ್ದೀನ್ರವರಿಗೆ ಗೌರವಾಭಿನಂದನೆ ಹಾಗೂ ಸಾಹಿತಿ ಎಂ.ವಿ.ನಾಗರಾಜ್ರವರ ನಾಲ್ಕನೇ ಮುದ್ರಣ ಕಂಡಿರುವ 'ಅಘೋರಿಗಳ ನಡುವೆ' ಎಂಬ ಕಾದಂಬರಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಸಮಾರಂಭವನ್ನು ವಕೀಲ ಎಂ.ಮಹಾಲಿಂಗಯ್ಯ, ಡಾ,ಸಿ.ಎಂ.ಸುರೇಶ್ ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರೋಟರಿಯ ಜಿಲ್ಲಾ 3190 ಅಸಿಸ್ಟೆಂಟ್ ಗವರ್ನರ್ ರೊ.ಬಿಳಿಗೆರೆ ಶಿವಕುಮಾರ್ ಶಾಲಾ ಸಾಮಗ್ರಿ ವಿತರಣೆ ಮಾಡಲಿದ್ದಾರೆ.

Tuesday, June 18, 2013


ಗ್ರಾಮೀಣ ಜನರ ಆರೋಗ್ಯ ಕಾಪಾಡಿದರೆ ವೈದ್ಯ ಜನರ ಪಾಲಿನ ದೇವರಾಗುತ್ತಾನೆ.

ಚಿಕ್ಕನಾಯಕನಹಳ್ಳಿ,ಜೂ.81 : ಸೇವೆ ಪರಮಾತ್ಮ ನಿಯೋಜಿಸಿದ ಕರ್ತವ್ಯ ಎಂದು ಹಳ್ಳಿಗಾಡಿನ ಪ್ರದೇಶದಲ್ಲಿ ಹಲವಾರು ವರ್ಷಗಳ ಕಾಲ ಗ್ರಾಮೀಣ ಜನರ ಮನಸ್ಸನ್ನು ಅರ್ಥ ಮಾಡಿಕೊಂಡು ಸೇವೆ ಸಲ್ಲಿಸಿದಂತಹ ಉತ್ತಮ ವ್ಯಕ್ತಿಗೆ ಅಭಿನಂದಿಸುವುದರಿಂದ ಗ್ರಾಮದವರ ಮನಸ್ಥಿತಿ ಬದಲಾಗಲಿದೆ, ಅಂತಹ ಕಾರ್ಯವನ್ನು ಗೋಡೆಕೆರೆ ಗ್ರಾಮದ ಯುವಕರು ಮಾಡುತ್ತಿರುವುದು ಶ್ಲಾಘನೀಯವಾದುದು ಎಂದು ಗೋಡೆಕೆರೆ ಮಠದ ಸಿದ್ದರಾಮದೇಶೀಕೇಂದ್ರಸ್ವಾಮಿ ಹೇಳಿದರು.
ತಾಲ್ಲೂಕಿನ ಗೋಡೆಕೆರೆಯ ಸಕರ್ಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು 15ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಡಾ.ಗಣೇಶ್ರವರು ಉನ್ನತ ಶಿಕ್ಷಣ ನಿಮಿತ್ತ ವಗರ್ಾವಾಗಿರುವುದರಿಂದ ಗೋಡೆಕೆರೆಯ ಗ್ರಾಮಸ್ಥರು ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಉತ್ತಮ ಸೇವೆ ಸಲ್ಲಿಸಿದಂತಹ ವ್ಯಕ್ತಿಗಳಿಗೆ ಗ್ರಾಮಸ್ಥರು ಇತ್ತೀಚೆಗೆ ನಡೆಸುತ್ತಿರುವ ಸನ್ಮಾನ ಕಾರ್ಯಕ್ರಮವು ಇತರರಿಗೆ ಮಾದರಿಯಾಗಿದೆ, ತಮ್ಮ ನಿಷ್ಠಾವಂತ ಸೇವೆಯನ್ನು ಗ್ರಾಮದ ಎಲ್ಲರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ತಮ್ಮ ಕರ್ತವ್ಯ ನಿರ್ವಹಿಸಿದವರಿಗೆ ಇಂತಹ ಕಾರ್ಯಕ್ರಮ ಇನ್ನೂ ಆದರ್ಶ ಪ್ರಜೆಗಳ ಸಾಲಿಗೆ ಕೊಂಡೊಯ್ಯುತ್ತದೆ ಎಂದ ಅವರು ಈ ಕಾರ್ಯಕ್ರಮದಿಂದ ಗ್ರಾಮದ ಯುವಕರ ಮನಸ್ಥಿತಿಯೂ ಬದಲಾಗಲಿದೆ ಎಂದರು.
ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರ ಸ್ವಾಮಿರವರ ಮಾತನಾಡಿ ಡಾ.ಗಣೇಶ್ರವರು ತಮ್ಮ ಬದುಕಿನ ಸೇವೆಯನ್ನು ಹೆಚ್ಚಿನದಾಗಿ ಗೋಡೆಕೆರೆ ಗ್ರಾಮದಲ್ಲಿಯೇ ಸಲ್ಲಿಸಿ ಬದುಕಿನ ಸಾಕಷ್ಟು ತಮ್ಮ ಅನುಭವವನ್ನು ಇಲ್ಲಿನ ಜನರಿಗೆ ನೀಡಿದ್ದಾರೆ, ಗೋಡೆಕೆರೆ ಗ್ರಾಮದಲ್ಲಿ ಮಾತ್ರವಲ್ಲದೆ ಸುತ್ತಮುತ್ತಲಿನ ಊರಿನ ಜನತೆಯಲ್ಲೂ ಡಾ.ಗಣೇಶ್ ಉತ್ತಮ ವೈದ್ಯಾಧಿಕಾರಿಯಾಗಿ ಚಿಕಿತ್ಸೆ ನೀಡಿದ್ದಾರೆ ಎಂದರಲ್ಲದೆ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವ ವೈದ್ಯರು ಡಾ.ಗಣೇಶ್ರವರನ್ನು ಮಾದರಿಯಾಗಿಸಿಕೊಂಡರೆ ಉತ್ತಮ ಸೇವೆ ಸಲ್ಲಿಸಬಹುದು ಎಂದು ಸಲಹೆ ನೀಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಗಣೇಶ್, ಕಡುಬಡತನದಿಂದ ಬಂದಂತಹ ನಾನು ವೈದ್ಯನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ, ಸಿದ್ದರಾಮನ ಕೃಪೆಯಿಂದ ವೈದ್ಯನಾಗಿದ್ದೇನೆ,  ಇಷ್ಟು ವರ್ಷಗಳ ಕಾಲ ಗ್ರಾಮದ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸದ ಜೊತೆಗೆ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದೆನು, ಹದಿನೈದು ವರ್ಷಗಳ ಕಾಲ ಗ್ರಾಮದ ಆಸ್ಪತ್ರೆಯಲ್ಲಿಯೇ ಸೇವೆ ಸಲ್ಲಿಸುತ್ತಿರುವ ನಾನು ಗ್ರಾಮದವರು ತೋರಿಸುತ್ತಿರುವ ಆತ್ಮೀಯತೆಗೆ ಚಿರಋಣಿಯಾಗಿದ್ದು, ತನ್ನ ಉನ್ನತ ಶಿಕ್ಷಣ ಹೋಗುತ್ತಿರುವುದಾಗಿ ತಿಳಿಸಿದರು.
ಮಾಜಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಡಾ.ಗಣೇಶ್ರವರು ಗೋಡೆಕೆರೆ ಆಸ್ಪತ್ರೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿರುವುದರಿಂದ 2011-12ನೇ ಸಾಲಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಹೆರಿಗೆ ಮಾಡಿಸಿದ ಕೀತರ್ಿ ಗೋಡೆಕೆರೆ ಆಸ್ಪತ್ರೆಗೆ ಬಂದಿದೆ ಎಂದರಲ್ಲದೆ ಈ ಆಸ್ಪತ್ರೆಗೆ ಬೇಕಾಗಿರುವ ಹೆಚ್ಚಿನ ಕೊಠಡಿಯೊಂದಕ್ಕೆ ಅಜರ್ಿ ಸಲ್ಲಿಸಿದ್ದು, ಅದಕ್ಕೆ ಅನುಮೋದನೆ ದೊರಕಬೇಕಿದೆ ಎಂದರು.
ಸಮಾರಂಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮರಿಸ್ವಾಮಿ, ವ್ಯವಸಾಯೋತ್ಪನ್ನ ಸಹಕಾರ ಸಂಘದ ಸದಸ್ಯ ಸಿದ್ದರಾಮಣ್ಣ, ಗ್ರಾ.ಪಂ.ಸದಸ್ಯ ಲೋಕೇಶ್, ಪ್ರಾಂಶುಪಾಲ ಪಾಂಡುರಂಗಪ್ಪ ಉಪಸ್ಥಿತರಿದ್ದರು.

ಗ್ರಾಮೀಣ ಜನರಿಗೆ ಶುದ್ದ ನೀರು, ಉತ್ತಮ ಆರೋಗ್ಯ ನೀಡಲು ಗ್ರಾ.ಪಂ.ಗಳಿಗೆ ಸೂಚನೆ:


ಚಿಕ್ಕನಾಯಕನಹಳ್ಳಿ,ಜೂ.18 : ತಾಲ್ಲೂಕಿನಲ್ಲಿ ಡೆಂಗ್ಯೂ, ಚಿಕನ್ಗುನ್ಯಾ ಹರಡದಂತೆ ಫಾಗಿಂಗ್ ಮಾಡಲು ಹಾಗೂ ಬಡವರುಗೆ ಸರಿಯಾಗಿ ಪಡಿತರ ಚೀಟ ವಿತರಿಸಲು, ಕುಡಿಯುವ ನೀರು ಸರಬರಾಜು ಮಾಡಲು ಗ್ರಾ.ಪಂ.ಅಧ್ಯಕ್ಷ ಹಾಗೂ ಪಿಡಿಓಗಳಿಗೆ ತಾ.ಪಂ.ಅಧ್ಯಕ್ಷ ಹೆಚ್.ಆರ್.ಶಶಿಧರ್ ಸಲಹೆ ನೀಡಿದರು.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಪಡಿತರ ಚೀಟಿ ವಿತರಣೆ ಸಂಬಂಧ ತಾಲ್ಲೂಕು ಗ್ರಾ.ಪಂ.ಅಧ್ಯಕ್ಷ, ಪಿಡಿಓ, ಹಾಗೂ ಕಾರ್ಯದಶರ್ಿಗಳ ತುತರ್ುಸಭೆಯಲ್ಲಿ ಮಾತನಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಪಡಿತರ ಚೀಟಿಗೆ 50ರೂ ಸಕರ್ಾರ ನಿಗಧಿ ಪಡಿಸಿದ್ದು ಖಾಸಗಿ ಕಂಪ್ಯೂಟರ್ ಸೆಂಟರ್ಗಳಲ್ಲಿ 100ರಿಂದ 150ರೂ ವಸೂಲು ಮಾಡಿ ಜನರನ್ನು ಸುಲಿಗೆ ಮಾಡುತ್ತಿವೆ ಎಂಬ ದೂರುಗಳು ಬಂದಿದ್ದು ಗ್ರಾ.ಪಂ. ಪಿಡಿಓಗಳು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. 
2011-12ನೇ ಸಾಲಿನ ಬಸವ ಇಂದಿರಾ ವಸತಿ ಯೋಜನೆ ಅಡಿಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಲ್ಲಿ ಮನೆಗಳನ್ನು ಮಂಜೂರಾತಿ ನೀಡಿದ್ದು 390 ಮನೆಗಳು ಬ್ಲಾಕ್ ಆಗಿದ್ದು ಈಗ ಈ ಮನೆಗಳನ್ನು ಕಟ್ಟಲು ಸಕರ್ಾರ ಹಸಿರು ನಿಶಾನೆ ನೀಡಿದೆ. ಸಂಬಂಧಪಟ್ಟ ಗ್ರಾ.ಪಂ.ಅಧ್ಯಕ್ಷರು ಪಿಡಿಓ ಹಾಗೂ ಕಾರ್ಯದಶರ್ಿಗಳು ಜೂನ್ 25ರ ಒಳಗಾಗಿ ವರದಿ ನೀಡುವಂತೆ ನಂತರ ನೀಡುವ ಮನೆಗಳಿಗೆ ಸಕರ್ಾರ ಮಂಜೂರಾತಿ ನೀಡುವುದಿಲ್ಲ, ಎರಡನೇ ಹಂತದಲ್ಲಿರುವ ಮನೆಗಳಗೆ ಮಾತ್ರ ಹಣ ಬಿಡುಗಡೆ ಆಗುವುದೆಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಎ.ಜಿ.ತಿಮ್ಮಯ್ಯ ಸಭೆಯಲ್ಲಿ ತಿಳಿಸಿದರು.
ಜೂನ್ ಕೊನೆ ವಾರ ಸಕರ್ಾರ ಎನ್.ಆರ್.ಇ.ಜಿ ಹಣ ಬಿಡುಗಡೆ ಮಾಡುತ್ತಿದ್ದು ಎನ್.ಆರ್.ಇ.ಜಿಯಲ್ಲಿ ಕೆಲಸ ಮಾಡುವ ಕೂಲಿ ಕಾಮರ್ಿಕರಿಗೆ ಹಣ ಪಡೆಯಲು ಆಧಾರ್ ಕಾಡರ್್ ಕಡ್ಡಾಯ ಇದರ ಬಗ್ಗೆ ಪಿಡಿಓಗಳು ಕೂಲಿ ಕಾಮರ್ಿಕರಿಗೆ ಮಾಹಿತಿ ನೀಡುವಂತೆ ತಿಳಿಸಿದರು.
ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯುವ ಗುತ್ತಿಗೆದಾರರು ಪಂಪ್ಸೆಟ್ ಅಳವಡಿಸುತ್ತಾರೆ ಆದರೆ ಗ್ರಾಮ ಪಂಚಾಯ್ತಿ ವಶಕ್ಕೆ ನೀಡುವುದಿಲ್ಲ ಎಂದು ಗ್ರಾ.ಪಂ.ಕಾರ್ಯದಶರ್ಿಗಳು ದೂರಿದರು.
ಪಡಿತರ ಚೀಟಿ ವಿತರಣೆಯಲ್ಲಿ ಗ್ರಾಮ ಪಂಚಾಯ್ತಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗಳಿಂದಲೇ ಗೊಂದಲ ಸೃಷ್ಠಿಯಾಗುತ್ತಿದೆ ಎಂದು ತಾ.ಪಂ.ಅಧ್ಯಕ್ಷ ದೂರಿದರು. ಗ್ರಾ.ಪಂ.ಗಳಲ್ಲಿ ಪಡಿತರ ಚೀಟಿ ವಿತರಿಸಲು ಸಕರ್ಾರ ಕ್ರಮ ಕೈಗೊಂಡಿರುವುದರಿಂದ ಗ್ರಾ.ಪಂ.ಗಳ ಸಾರ್ವಜನಿಕರ ಕೆಲಸಗಳೇ ಮಾಡಲಾಗುತ್ತಿಲ್ಲ ಎಂದು ಪಿಡಿಓಗಳು ತಮ್ಮ ಅಳಲನ್ನು ತೋಡಿಕೊಂಡರು.
ಒಂದು ಕುಟುಂಬಕ್ಕೆ ಒಂದೇ ಪಡಿತರ ಚೀಟಿ ನೀಡಬೇಕು, ಆದರೆ ಒಂದೇ ಪಡಿತರ ಚೀಟಿ ಆರು ಬಾರಿ ಮುದ್ರಣವಾಗಿದ್ದು ಎಲ್ಲಾ ಕಾಡರ್ುಗಳನ್ನು ಹಿಂದಿರುಗಿಸಲಾಗಿದೆ ಎಂದು ಪಿಡಿಓ ಶಿವಕುಮಾರ್ ತಿಳಿಸಿದರು.
 ಕೆಂಕೆರೆಯಲ್ಲಿ ನೀರಿನ ಅಭಾವವಿದ್ದು ಕೊಡಲೇ 2ಕೊಳವೆ ಬಾವಿಗಳನ್ನು ಕೊರೆಸುವಂತೆ  ಪಿಡಿಓ ಶಿವಕುಮಾರ್ ಸಭೆಯಲ್ಲಿ ಮನವಿ ಮಾಡಿದರು.
ಗ್ರಾಮ ಪಂಚಾಯ್ತಿಗಳಲ್ಲಿ ಸಮಸ್ಯೆಗಳ ಬಗ್ಗೆ ಪಿ.ಡಿ.ಓಗಳ ಗಮನಕ್ಕೆ ತರಲು ದೂರವಾಣಿ ಮಾಡಿದರೂ ಕೆಲವು ಪಿಡಿಓಗಳು ದೂರವಾಣಿ ಕರೆ ಸ್ವೀಕರಿಸುವುದಿಲ್ಲ ಹೀಗೆ ಮಾಡಿದರೆ ಹೇಗೆ ಎಂದು ಗ್ರಾ.ಪಂ.ಅಧ್ಯಕ್ಷರುಗಳು ಪ್ರಶ್ನಿಸಿದ್ದಾರೆ. 
 ಹೊಸ ಮೋಟಾರುಗಳಿಗೆ ಕಾಯದೇ ಹೊಸದಾಗಿ ಕೊರೆಸಿರುವ ಕೊಳವೆ ಬಾವಿಗಳಿಗೆ ಮೋಟಾರು ಅಳವಡಿಸಲು ನಿಧಾನವಾದರೆ ಹಳೆ ಬೋರ್ವೆಲ್ಗಳಲ್ಲಿ ಇರುವ ಮೋಟಾರುಗಳನ್ನು ತೆಗೆದು ಅಳವಡಿಸುವಂತೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಿರಂಜನಮೂತರ್ಿ ಸಲಹೆ ನೀಡಿದರು. ಇದರಿಂದ ಗ್ರಾಮಗಳ ಜನತೆಯ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು, ಕಾರ್ಯದಶರ್ಿಗಳು ಚಿಂತಿಸಿ ಎಂದರು.
ತಾಲ್ಲೂಕಿನ ದುಗಡಿಹಳ್ಳಿ, ಮಲ್ಲಿಗೆರೆಹಟ್ಟಿ, ಕಾಮಲಾಪುರ ಗೊಲ್ಲರಹಟ್ಟಿ, ಮಾದೀಹಳ್ಳಿ, ಅಜ್ಜೇನಹಳ್ಳಿ, ಗಂಟಗನಪಾಳ್ಯ, ಸಾಲಕಟ್ಟೆ, ವಡೇರಹಳ್ಳಿ, ಗೌಡನಹಳ್ಳಿ, ಚುಂಗನಹಳ್ಳಿ, ಜೋಡಿಕಲ್ಲೇನಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಕೊರತೆ ಇದ್ದು ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ತಹಶೀಲ್ದಾರ್ರವರಿಗೆ ಪಿಡಿಓಗಳು ಮನವಿಸಲ್ಲಿಸಿ ನಂತರ ನೀರು ಸರಬರಾಜು ಮಾಡುವಂತೆ ಇ.ಓ ತಿಮ್ಮಯ್ಯ ತಿಳಿಸಿದರು.
ತಿಮ್ಮಲ್ಲಾಪುರ ಗ್ರಾ.ಪಂ.ಯ ಹೊಸಹಳ್ಳಿ ಗ್ರಾಮದ ಕುಡಿಯುವ ನೀರಿನ ತೊಟ್ಟ ತೊಳೆಯುತ್ತಿಲ್ಲ ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ, ಇದರ ಬಗ್ಗೆ ಪಿಡಿಓಗೆ ತರಾಟೆಗೆ ತೆಗೆದುಕೊಂಡ ತಾ.ಪಂ.ಅಧ್ಯಕ್ಷ ಶಶಿಧರ್ ಕೂಡಲೇ ತೊಟ್ಟಿಯನ್ನು ಸ್ವಚ್ಛಗೊಳಿಸುವಂತೆ ಸಲಹೆ ನೀಡಿದರು. 
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷ ರಮೇಶ್ಕುಮಾರ್, ಆಹಾರ ಶಿರಸ್ತೆದಾರ್ ಮಂಜುನಾಥ್, ಇ.ಓ ಎ.ಜಿ.ತಿಮ್ಮಯ್ಯ, ಎಇಇ ಚಿಕ್ಕದಾಸಪ್ಪ, ಗ್ರಾ.ಪಂ.ಅಧ್ಯಕ್ಷರುಗಳಾದ ಎಂಜಯ್ಯ, ಸಿದ್ದರಾಮಯ್ಯ, ಅಜ್ಜಿಗುಡ್ಡೆಕುಮಾರ್ ಮತ್ತಿತರರು ಉಪಸ್ಥಿತರಿದ್ದರು.