Saturday, July 24, 2010


ಪ್ರತಿಭೆಗಳ ಭವಿಷ್ಯ ಬೆಳಗಿಸಲು ಸ್ಪಧರ್ೆಗಳನ್ನು ಏರ್ಪಡಿಸಲು ನಾಯಕರು ಮುಂದೆ ಬರಬೇಕು
ಚಿಕ್ಕನಾಯಕನಹಳ್ಳಿ,ಜು.24: ಪ್ರತಿಭೆಗಳನ್ನು ಗುರುತಿಸುವ ಮತ್ತು ಅವರ ಭವಿಷ್ಯವನ್ನು ಬೆಳೆಗಿಸುವ ಉತ್ತಮ ಕಾರ್ಯವು ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯಾಗಿದೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ಸ್ಪಧರ್ೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಇಲ್ಲಿಗೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಸ್ಪಧರ್ಿಗಳು ಗೆಲುವು-ಸೋಲು ಎರಡು ಒಂದೇ ಮುಖಗಳೆಂದು ಭಾವಿಸಿ ಉತ್ತಮ ನೃತ್ಯಪ್ರದರ್ಶನವನ್ನು ನೀಡಿ ಮನರಂಜನೆ ಕೊಡಬೇಕು ಎಂದ ಅವರು ಹಳೆಯೂರು ಆಂಜನೇಯ ಸ್ವಾಮಿ ಜಾತ್ರೆಯಲ್ಲಿ ಇನ್ನಿತರ ಸಣ್ಣಪುಟ್ಟ ಕಾರ್ಯಕ್ರಮ ನಡೆದು ಜಾತ್ರೆಯನ್ನು ಇನ್ನೂ ಹೆಚ್ಚು ಜನಪ್ರಿಯಗೊಳಿಸಬೇಕು ಎಂದರು.
ಕರಿಸಿದ್ದೇಶ್ವರ ಮಠದ ಶಿವಪ್ರಕಾಶ್ಶಿವಚಾರ್ಯಸ್ವಾಮಿ ಮಾತನಾಡಿ ಸ್ಪಧರ್ಿಗಳು ಸ್ಪಧರ್ೆಗೆ ಭಾಗವಹಿಸುವುದರ ಜೊತೆಗೆ ತಮ್ಮ ಪ್ರತಿಭೆಯಿಂದ ಸಾಧನೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಅನ್ನಪೂರ್ಣಕಲಾ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಪುರಸಭಾ ಸದಸ್ಯ ಸಿ.ಟಿ.ವರದರಾಜು, ಬಿ.ಇ.ಓ ಬಿ.ಜೆ.ಪ್ರಭುಸ್ವಾಮಿ, ಕುಶಾಲ್ ಗಾಮರ್ೆಂಟ್ಸ್ ಮಾಲೀಕ ಶಾಂತಕುಮಾರ್, ರವಿಚಂದ್ರ, ಶಶಿಕುಮಾರ್ ಉಪಸ್ಥಿತರಿದ್ದರು.
ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ನೆರವಾಗಬೇಕು
ಚಿಕ್ಕನಾಯಕನಹಳ್ಳಿ,ಜು.24 ಮಕ್ಕಳ ಭವಿಷ್ಯ ಮತ್ತು ಅವರ ಪ್ರಗತಿಗೆ ಸಕರ್ಾರ ರೂಪಿಸಿರುವ ಕಾರ್ಯಕ್ರಮಗಳ ಜೊತೆಗೆ ಪೋಷಕರು ನೆರವಾಗಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಪ್ರಸನ್ನರಾಮೇಶ್ವರ ದೇವಾಲಯದಲ್ಲಿ ನಡೆದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದಿನ ಮಕ್ಕಳು ಪುಣ್ಯವಂತರು, ಸಕರ್ಾರದ ಹಲವಾರು ಯೋಜನೆಗಳು ಅವರ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದ್ದು ಉನ್ನತ ಶಿಕ್ಷಣ ಪಡೆಯಬೇಕು ಎಂದರಲ್ಲದೆ ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಬೇಕು ಎಂದರು.
ಸಮಾರಂಭದಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಉಪಾಧ್ಯಕ್ಷೆ ರುಕ್ಮಿಣಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂತರ್ಿ ಉಪಸ್ಥಿತರಿದ್ದರು.
ವಿದ್ಯುತ್ ಸಮಸ್ಯೆ ನೀಗಿಸಲು ಮನವಿ
ಚಿಕ್ಕನಾಯಕನಹಳ್ಳಿ,ಜು.24:ತಾಲೂಕಿನ ಗಾಂಧಿನಗರದ ನಿವೇಶನಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ರಾತ್ರಿ ಹೊತ್ತು ಹಾವು ಹಾಗೂ ಕಾಡು ಹಂದಿಗಳ ಹಾವಳಿ ಹೆಚ್ಚಾಗಿ ತುಂಬಾ ತೊಂದರೆ ಅನುಭವಿಸಿತ್ತಿದ್ದೇವೆ ಎಂದು ಗಾಂದಿನಗರದ ನಿವಾಸಿಗಳು ಪತ್ರಿಕೆಯ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಗಾಂಧಿನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನಿವೇಶನ ಪತ್ರಗಳನ್ನು ನೀಡಿದ್ದು ಅದರ ಜೊತೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಬೇಕು, ವಿದ್ಯುತ್ ಸಂಪರ್ಕವು ಗಾಂಧಿನಗರದಲ್ಲಿ ಇಲ್ಲದೆ ಹಲವಾರು ಪ್ರಾಣಿಗಳಿಂದ ಜನರ ಪ್ರಾಣಕ್ಕೆ ಸಂಚಕಾರವಿದೆ ಮತ್ತು ಇಲ್ಲಿನ ವಿದ್ಯಾಥರ್ಿಗಳಿಗೆ ರಾತ್ರಿ ಹೊತ್ತು ವಿದ್ಯಾಭ್ಯಾಸ ಮಾಡಲು ತೊಂದರೆಯಾಗುತ್ತಿದೆ ಈ ಸಮಸ್ಯೆಯನ್ನು ಪರಿಹರಿಸಲು ಅಲ್ಲಿನ ನಿವಾಸಿಗಳು ಪುರಸಭೆಯವರನ್ನು ಕೋರಿದ್ದಾರೆ.