Wednesday, July 21, 2010

ವಿದ್ಯತ್ ಹರಿದು ಅಜ್ಜಿ ಮತ್ತು ಎಮ್ಮೆ ಸಾವು
ಚಿಕ್ಕನಾಯಕನಹಳ್ಳಿ,ಜು.19: ವಿದ್ಯುತ್ ಹರಿದು ಅಜ್ಜಿಯೊಬ್ಬರು ಹಾಗೂ ಎಮ್ಮೆ, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಡೆಕೆರೆ ಪಂಚಾಯ್ತಿಯ ಸೊಂಡೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ವರದಿಯಾಗಿದೆ.
ತಾಲೂಕಿನ ಸೊಂಡೇನಹಳ್ಳಿ ಗೊಲ್ಲರಹಟ್ಟಿಯ ಮರಿಯಮ್ಮ(60)ಕೊಂ ಚನ್ನಯ್ಯ ಎಂಬುವರು ತಮ್ಮ ತೋಟದಲ್ಲಿ ಎಮ್ಮೆ ಮೇಹಿಯಿಸುವಾಗ ಈ ಘಟನೆ ನಡೆದಿದೆ, ಮೃತ ಮರಿಯಮ್ಮನ ತೋಟದಲ್ಲಿದ್ದ ಟಿ.ಸಿ ಇಟ್ಟಿದ್ದ ಕಂಬದ ಬಳಿ ಎಮ್ಮೆ ಹೋಗಿದ್ದು ಎಮ್ಮೆಯನ್ನು ಹಿಡಿದುಕೊಳ್ಳಲು ಹೋದ ಅಜ್ಜಿ ಮರಿಯಮ್ಮನಿಗೂ ಕಂಬದಿಂದ ವಿದ್ಯುತ್ ಹರಿದಿದು ಎಮ್ಮೆ ಮತ್ತು ಅಜ್ಜಿ ಇಬ್ಬರೂ ಸ್ಥಳದಲ್ಲೇ ಅಸು ನೀಗಿದ್ದಾರೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ ಸದಸ್ಯ ತಿಮ್ಮೇಗೌಡ ಈ ದುರ್ಘಟನೆಗೆ ಬೆಸ್ಕಾಂರವರ ನಿರ್ಲಕ್ಷವೇ ಕಾರಣ ಎಂದು ದೂರಿದ್ದಾರಲ್ಲದೆ ಈ ಅನಾಹುತಕ್ಕೆ ಕಾರಣರಾದ ಬೆಸ್ಕಾಂ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಚಿ.ನಾ.ಹಳ್ಳಿ ಪಿ.ಎಸ್.ಐ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಗ್ರಾಮದ ಸ್ವಚ್ಚತೆಗಾಗಿ ಶ್ರಮದಾನ ಮಾಡಿ, ಸಾಂಕ್ರಾಮಿಕ ರೋಗಗಳಿಂದ ದೂರವಿರಿ: ಜಿ.ಪಂ.ಸಿ.ಇ.ಓ
ಚಿಕ್ಕನಾಯಕನಹಳ್ಳಿ,ಜು.21: ಗ್ರಾಮದ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ತಿಂಗಳಿಗೆ ಒಂದು ದಿನವಾದರೂ ಎಲ್ಲರೂ ಸೇರಿ ಶ್ರಮದಾನ ಮಾಡಿ ಎಂದು ಜಿ.ಪಂ, ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ತುಳಿಸಿಮದ್ದಿನೇನಿ ಮನವಿ ಮಾಡಿದರು.
ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಮುದಾಯದ ಸಹಭಾಗಿತ್ವ''ಎಂಬ ವಿಷಯವಾಗಿ ಗ್ರಾ.ಪಂ.ಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಧಿಕಾರಿಗಳ ವಿಚಾರ ಸಂಕೀರ್ಣದಲ್ಲಿ ಭಾಗಹಿಸಿ ಮಾತನಾಡಿದರು.
ನಮ್ಮ ಗ್ರಾ.ಪಂ.ಗಳು ಎಲ್ಲಾ ಗ್ರಾಮಗಳಲ್ಲಿನ ಗುಂಡಿ, ಗೊಟರುಗಳು ಹಾಗೂ ತಿಪ್ಪೇಗುಂಡಿಗಳನ್ನು ಸ್ವಚ್ಚ ಮಾಡಿಸುವಷ್ಟು ಹಣವನ್ನು ಕೊಡಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಗ್ರಾಮಗಳಲ್ಲಿನ ಜನರು, ವಿದ್ಯಾಥರ್ಿಗಳು ಮುಂದೆ ನಿಂತು ಶ್ರಮದಾನ ಮಾಡಿದರೆ ಗ್ರಾಮದ ಸ್ವಚ್ಚತೆಯನ್ನು ಕಾಯ್ದುಕೊಳ್ಳಬಹುದು, ತನ್ಮೂಲಕ ಸೊಳ್ಳಗಳನ್ನು ನಿಯಂತ್ರಿಸಿಹುದು ಇದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದರು.
ಗ್ರಾ.ಪಂ.ಗಳು ಸೋಡಿಯಂ ಲೈಟ್, ಟ್ಯೂಬ್ಲೈಟ್ಗಳ ಕಡೇ ಅತೀ ವ್ಯಾಮೋಹ ತೋರದೆ ಚರಂಡಿ ಹಾಗೂ ಶೌಚಾಲಯಗಳ ಕಡೆಯೂ ಗಮನ ನೀಡಿ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಇತ್ತೀಚೆಗೆ ಜನರು ಟಿ.ವಿ ಹಾಗೂ ಮೊಬೈಲ್ಗಳಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಶೌಚಾಲಯಗಳ ನಿಮರ್ಾಣಕ್ಕೆ ಗಮನ ಹರಿಸದೆ ಇರುವುದರ ಬಗ್ಗೆ ವಿಷಾದಿಸಿದ ಅವರು, ಮಹಿಳೆಯರು ಈ ಟಿ.ವಿ.ಗಳಲ್ಲಿನ ಧಾರವಾಹಿಗಳನ್ನು ನೋಡಿ ರಾಗ ದ್ವೇಷಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದು ಈ ಹಿಂದೆ ಇದ್ದ ಹೊಂದಾಣಿಕೆ ಹಾಗೂ ಸಾಮರಸ್ಯ ಜೀವನ ಕಾಣೆಯಾಗುತ್ತಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ನಮ್ಮ ತಾಲೂಕು ಮಲೇರಿಯಾ, ಚಿಕನ್ ಗುನ್ಯಾ ಹಾಗೂ ಇತ್ತೀಚೆಗೆ ಕಾಣಿಸಿಕೊಂಡಿರುವ ಡೆಂಗ್ಯೂ ಜ್ವರಗಳನ್ನು ಹರಡುವ ಸೊಳ್ಳೆಗಳು ಹೆಚ್ಚಾಗಿದ್ದು, ಈ ಸೊಳ್ಳೆಗಳನ್ನು ನಿಯಂತ್ರಿಸಲು ಐಕಾನ್ ಎಂಬ ಸೊಳ್ಳೆ ನಾಶಕವನ್ನು ಬಳಸಿದರೆ ಹತೋಟಿಗೆ ತರಲು ಸಾಧ್ಯ ಎಂದ ಅವರು, ಜಿ.ಪಂ.ನವರು ಈ ಐಕಾನ್ ಎಂಬ ಸೊಳ್ಳೆ ನಾಶಕವನ್ನು ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.
ಜೈವಿಕ ವಿಧಾನದಿಂದ ಸೊಳ್ಳೆ ನಾಶ ಪಡೆಸುವಂತ ಗಪ್ಪಿ-ಗಾಂಬೋಜಿಯ ಎಂಬ ಮೀನುಗಳನ್ನು ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳಿಗೆ ಬಿಡುವಂತೆ ಮೀನುಗಾರಿಕೆ ಇಲಾಖೆಯವರಿಗೆ ಸೂಚಿಸಿದರು.
ನೀರು ಸರಬರಾಜು ಮಾಡಲು ಜೊಡಿಸಿರುವ ಪೈಪ್ ಲೈನ್ಗಳು ತುತರ್ು ರಿಪೇರಿ ಇರುವಂತಹ ಕಡೆಗಳಿಗೆ ಟಾಸ್ಕಪೋಸರ್್ನಲ್ಲಿರುವ ಹಣವನ್ನು ಬಳಸಲು ಅವಕಾಶ ಮಾಡಿ ಕೊಡಲಾಗುವುದು ಎಂದರು.
ಜಿ.ಪಂ.ಅಧ್ಯಕ್ಷೆ ಕುಸುಮ ಜಗನಾಥ್ ಮಾತನಾಡಿ ಈ ದೇಶ ಅಭಿವೃದ್ದಿಯಾಗಬೇಕೆಂದರೆ ಗ್ರಾಮಗಳ ಅಭಿವೃದ್ದಿಯಿಂದ ಮಾತ್ರ ಸಾಧ್ಯ ಎಂದ ಅವರು, ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಒಟ್ಟಾಗಿ ಕೂತು ಜನರ ಸಮಸ್ಯೆಗಳ ಬಗ್ಗೆ ಆಲೋಚಿಸಿ, ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ ಎಂದರು.
ಜಿ.ಪಂ.ಉಪಾಧ್ಯಕ್ಷ ಮದುಮಡು ರಂಗಸ್ವಾಮಿ ಮಾತನಾಡಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಸಣ್ಣ ಪುಟ್ಟ ಲೋಪಗಳು ಆಗುವುದು ಸಹಜ ಅದನ್ನು ಕೆದಕಲು ಹೋಗದೆ ಮುಂದೆ ಆಗಬೇಕಾದ ಅಭಿವೃದ್ದಿ ಕಾರ್ಯಗಳ ಕಡೆ ಗಮನ ಕೊಡಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡಿ.ಎಚ್.ಓ. ಡಾ.ಚನ್ನಮಲ್ಲಯ್ಯ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ, ಉಪಾಧ್ಯಕ್ಷೆ ರುಕ್ಮಿಣಮ್ಮ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾ.ಪಂ,ಇ.ಓ. ಡಾ.ವೇದಮೂತರ್ಿ, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್, ತಾ.ಪಂ.ಸದಸ್ಯರಾದ ವೈ.ಆರ್.ಮಲ್ಲಿಕಾರ್ಜನಯ್ಯ, ಮಾತನಾಡಿದರು.
ತಾ.ಪಂ.ಸದಸ್ಯರುಗಳಾದ ಡಿ.ಆರ್.ರುದ್ರೇಶ್, ಜಾನಮ್ಮ ರಾಮಚಂದ್ರಯ್ಯ, ತಿಮ್ಮಕ್ಕ, ಕೆ.ಟಿ.ಗೋವಿಂದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಡಾ.ಶಿವಕುಮಾರ್ ಸ್ವಾಗತಿಸಿದರು, ಸಿ.ಎ.ರಮೇಶ್ ನಿರೂಪಿಸಿ ವಂದಿಸಿದರು.
ದಿವ್ಯ ಜ್ಯೋತಿ ಕಲಾ ಸಂಘದಿಂದ ಏಕಾದಶಿ ಜಾತ್ರೆಯಲ್ಲಿ ತೇರಿಗೆ ಬಾಳೆಹಣ್ಣು ಎಸೆಯುವ ಸ್ಪಧರ್ೆ, ನವ ದಂಪತಿಗಳ ಸ್ಪಧರ್ೆ.
ಚಿಕ್ಕನಾಯಕನಹಳ್ಳಿ,ಜು.21: ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ವತಿಯಿಂದ ಹಳೆಯೂರು ಆಂಜನೇಯ ಸ್ವಾಮಿಯ ಏಕಾದಶಿ ಜಾತ್ರೆಯ ಪ್ರಯುಕ್ತ 19ನೇ ವರ್ಷದ ತೇರಿನ ಮಧ್ಯದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯನ್ನು ಹಾಗೂ ನವದಂಪತಿಗಳ ಸ್ಪಧರ್ೆಯ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತಿಳಿಸಿದ್ದಾರೆ.
ತೇರಿನ ಕಳಸಕ್ಕೆ ಬಾಳೆಹಣ್ಣು ಎಸೆಯುವ ಸ್ಪಧರ್ೆಯನ್ನು 23ರ ಮಧ್ಯಾಹ್ನ 3ಗಂಟೆಗೆ ಪುರಸಭೆ ಮುಂಭಾಗ ಹಮ್ಮಿಕೊಂಡಿದ್ದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಉದ್ಘಾಟನೆ ನೆರವೇರಿಸಲಿದ್ದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಿ.ಪಿ.ಐ.ರವಿಪ್ರಸಾದ್, ಪುರಸಭಾ ಉಪಾಧ್ಯಕ್ಷೆ ರುಕ್ಮಿಣಮ್ಮ, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಶಿವಣ್ಣ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ತಾ.ಸ.ನೌ.ಸಂಘದ ಅಧ್ಯಕ್ಷ ಪರಶಿವಮೂತರ್ಿ ಪುರಸಭಾ ಸದಸ್ಯರುಗಳಾದ ಮಹೇಶ್, ದೊರೆಮುದ್ದಯ್ಯ, ಧರಣಿ, ರೇಣುಕ, ಆರ್.ರವಿ, ಎಂ.ಎನ್.ಸುರೇಶ್, ಬಾಬು ಸಾಹೇಬ್, ಈಶ್ವರ ಭಾಗವತ್, ಎಂ.ಎಸ್.ರವಿಕುಮಾರ್, ಮುಖ್ಯಾಧಿಕಾರಿ ಹೊನ್ನಪ್ಪ, ಹುಚ್ಚೆಗೌಡ್ರು ಉಪಸ್ಥಿತರಿರುವರು.
ನವದಂಪತಿಗಳ ಸ್ಪಧರ್ೆ: ನವದಂಪತಿಗಳ ಸ್ಪಧರ್ೆಯ ಉದ್ಘಾಟನಾ ಸಮಾರಂಭವನ್ನು 24ರ ಮಧ್ಯಾಹ್ನ 3ಕ್ಕೆ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು, ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಉದ್ಘಾಟನೆ ನೆರವೇರಿಸಲಿದ್ದು ಸಂಘದ ಗೌರವಾಧ್ಯಕ್ಷ ಗುರುಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಯ್ಯ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್, ಪ್ರಭಾರ ಉಪವಿಭಾಗಾಧಿಕಾರಿ ವಿಜಯ್ಕುಮಾರ್, ಎ.ಪಿ.ಎಂ.ಸಿ.ಅಧ್ಯಕ್ಷ ಸಿ.ಬಸವರಾಜು, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಲೋಕೇಶ್, ಕಾಂಗ್ರೆಸ್ ಮುಖಂಡ ಸೀಮೆಣ್ಣೆ ಕೃಷ್ಣಯ್ಯ, ಬಿ.ಜೆ.ಪಿ ಮುಖಂಡರಾದ ಮೈಸೂರಪ್ಪ, ಸುರೇಶ್ಹಳೇಮನೆ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಉಪಸ್ಥಿತರಿರುವರು.
ಸಮಾರೋಪ ಸಮಾರಂಭ: ನವದಂಪತಿಗಳ ಸ್ಪಧರ್ೆಯ ಬಹುಮಾನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಇದೇ 24ರ ಶನಿವಾರ ರಾತ್ರಿ 7ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕಲ್ಪವೃಕ್ಷ ಕೋ-ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಸಮಾರೋಪ ನೆರವೇರಿಸಲಿದ್ದು ದಿವ್ಯಜ್ಯೋತಿ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಗೌರವಾನ್ವಿತ ಅತಿಥಿಗಳಾಗಿ ರಂಗಾಯಣ ನಿದರ್ೇಶಕ ಲಿಂಗದೇವರು ಹಳೇಮನೆ, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಚಲನಚಿತ್ರ ನಟರಾದ ದೊಡ್ಡಣ್ಣ, ಶಿವಧ್ವಜ್, ಅಚ್ಯುತ್ ನಟಿ ಹೇಮಶ್ರೀ, ನಿದರ್ೇಶಕ ಬಿ.ಎಸ್.ಲಿಂಗದೇವರು, ಸೆಲ್ವರಾಜ್, ರವೀಶ್ ಆಗಮಿಸಲಿದ್ದು ಸಮಾರಂಭದಲ್ಲಿ ಸಾವಿರ ಪಾಯದ ಸರದಾರ ನಾಗಣ್ಣ ನವರನ್ನು ವಿಶೇಷವಾಗಿ ಸನ್ಮಾನಿಸಲಿದ್ದಾರೆ.