Monday, June 3, 2013


ಗಣಿ ಧೂಳಿನಿಂದ ಉಂಟಾದ ಬೆಳೆ ನಷ್ಠಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ 
 
ಚಿಕ್ಕನಾಯಕನಹಳ್ಳಿ,ಜೂ.03 : ಗಣಿ ಧೂಳಿನಿಂದ ಈಿ ಭಾಗದ ಜಮೀನುಗಳಲ್ಲಿನ ಬೆಳೆನಾಶದಿಂದ ಉಂಟಾದ ನಷ್ಠವನ್ನು ನೀಡುವಂತೆ ಹಾಗೂ ಗಣಿಭಾಗದ  ಸ್ಥಳೀಯ ನಿರುದ್ಯೋಗಿ ಯುವಕರಿಗೆ  ಉದ್ಯೋಗಕ್ಕಾಗಿ ಒತ್ತಾಯಿಸಿ ಸೊಂಡೇನಹಳ್ಳಿ ಹಾಗೂ ಸುತ್ತಮುತ್ತಲಿನ ನೂರಾರು ರೈತರು ಸೋಮವಾರ ಪ್ರತಿಭಟನೆ ಹಾಗೂ ಧರಣಿ ನಡೆಸಿದರು.
ತಾಲ್ಲೂಕಿನ ಗಣಿ ಭಾಗದ ಪ್ರದೇಶದ ಸುತ್ತಲೂ ಈಗಾಗಲೇ ಗಣಿಧೂಳಿನಿಂದ ತೆಂಗು, ಅಡಿಕೆ, ಬಾಳೆ, ರಾಗಿ ಬೆಳೆನಾಶದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಗಣಿಗಳಲ್ಲಿ ಕಬ್ಬಿಣದ ಅದಿರು ತೆಗೆಯಲು ಸ್ಪೋಟಕಗಳನ್ನು ಬಳಸಿದ ಪರಿಣಾಮ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ, ತುಂಬಾ ತೊಂದರೆಯಾಗಿದೆ, ಈ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ತಾಲ್ಲೂಕಿನ ಗಣಿಗಾರಿಕೆಯಲ್ಲಿ ಟಾಸ್ಕ್ಪೋಸರ್್ ರಚಿಸಿದ್ದು ಇದರ ನಡವಳಿಕೆಯನ್ನು ಅಧಿಕಾರಿಗಳು ಇದುವರೆಗೂ ಜಾರಿಗೆ ತಂದಿಲ್ಲ, ಮೈನ್ಸ್ಲಾರಿಗಳು ಗ್ರಾಮದ ಒಳಗಡೆ ಹೋಗುವುದರಿಂದ ಗ್ರಾಮಗಳ ಮನೆಗಳಲ್ಲಿ ಧೂಳಿನಿಂದ ಆವೃತವಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು ಇದರಿಂದ ಉಬ್ಬಸದಂತಹ ಕಾಯಿಲೆಗಳು ಹರಡುತ್ತಿವೆ. ಈಗಾಗಲೇ ಗಣಿಗಾರಿಕೆ ಭಾಗದಲ್ಲಿ ಕುಡಿಯುವ ನೀರು, ಆಸ್ಪತ್ರೆ, ಶಾಲೆ, ಕಾಂಕ್ರಿಟ್ರಸ್ತೆ ನಿಮರ್ಿಸಲು ಹಣ ಬಿಡುಗಡೆಯಾಗಿದ್ದರೂ ಇದುವರೆಗೂ ಸಮರ್ಪಕವಾದ ಅಭಿವೃದ್ದಿ ಕಾಮಗಾರಿಗಳು ನಡೆದಿಲ್ಲ.
ಲಾರಿಗಳಲ್ಲಿ ಕಬ್ಬಿಣದ ಅಧಿರನ್ನು ಸಾಗಿಸುವಾಗ ರಸ್ತೆ, ಗುಂಡಿಗಳು ಬಿದ್ದಿದ್ದು, ಲಾರಿಗಳು ಚಲಿಸುವಾಗ ಹೆಚ್ಚನ ಧೂಳು ಆವೃತವಾಗುವುದನ್ನು ತಡೆಗಟ್ಟಲು ನೀರನ್ನು ಸಿಂಪಡಿಸುವಂತೆ ರೈತರು ಒತ್ತಾಯಿಸಿದ್ದಾರೆ. ಮೈನ್ಸ್ ಮಾಲೀಕರು ಮಧ್ಯವತರ್ಿಗಳಿಗೆ ಪ್ರತಿ ಲಾರಿಗೆ 350ರೂ ಹಣ ನೀಡುತ್ತಾರೆ ಎಂದು ದೂರಿದರಲ್ಲದೆ ಗಣಿ ವಿಷಯದ ಬಗ್ಗೆ ಚಚರ್ಿಸಿದರೆ ಮೈನ್ಸ್ ಮಾಲೀಕರು ಸುಳ್ಳು ಮೊಕ್ಕದ್ದಮೆ ದಾಖಲಿಸುತ್ತೇವೆಂದು ರೈತರಿಗೆ ಬೆದರಿಕೆ ಹಾಕುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ತಹಶೀಲ್ದಾರ್ ಕಾಮಾಕ್ಷಮ್ಮ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುವುದಾಗಿ, ಮೈನ್ಸ್ ಮಾಲೀಕರನ್ನು ಹಾಗೂ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಹಾಗೂ ಪರಿಸರ ಇಲಾಖಾ ಅಧಿಕಾರಿಗಳನ್ನು ಕರೆಸಿ ಚಚರ್ಿಸಿದ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಗ್ರಾ.ಪಂ.ಸದಸ್ಯ ತಮ್ಮೇಗೌಡ ಮಾತನಾಡಿ ಸುಪ್ರಿಂಕೋಟ್ ಆದೇಶಿಸಿದಂತೆ ಸ್ಥಳೀಯರಿಗೆ ಉದ್ಯೋಗ ಹಾಗೂ ನಾಸರ್ಿಹಳ್ಳಿಯಲ್ಲಿ ಭಾಗದಲ್ಲಿ ಸಿಮೆಂಟ್ ರಸ್ತೆ ಮುಂತಾದ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಂತೆ  ಯಾವುದೇ ಕಾನೂನು ಜಾರಿಗೆ ಬಂದಿಲ್ಲ, ಸ್ಥಳೀಯವಾಗಿ ಸಿಸಿರೋಡ್ ಆಗಬೇಕು, ಈ ಭಾಗದಲ್ಲಿರುವ ಜಮೀನು ಇರುವವರಿಗೆ ಪರಿಹಾರ ನೀಡಬೇಕು ಎಂದು ಹೇಳಿದರು.
ಗುಬ್ಬಿ ತಾಲ್ಲೂಕಿನ ಸಾಮಾಜಿಕ ಪರಿವರ್ತನ ಸಂಸ್ಥೆಯ ನಾಗರತ್ನಮ್ಮ ಮಾತನಾಡಿ  ತಾಲ್ಲೂಕಿನಲ್ಲಿ ಮೈನ್ಸ್ನಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ, ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಸ್ಪಂದಿಸಿಲ್ಲ, ಮೈನ್ಸ್ನಿಂದ ಅಂತಃರ್ಜಲ ಕುಸಿಯುತ್ತಿದೆ, ಜನಸಾಮಾನ್ಯರಿಗೆ ಇದರಿಂದ ಬಹಳ ಸಮಸ್ಯೆ ಉಂಟಾಗುತ್ತಿದ್ದು ಯಾವುದೇ ರೀತಿಯ ಅನುಕೂಲವಾಗುತ್ತಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗುಬ್ಬಿ ತಾಲ್ಲೂಕಿನ ನಂಜುಂಡಪ್ಪ, ವಸಂತಕುಮಾರ್, ಯೋಗಿ, ಪ್ರಕಾಶ್, ಹನುಮಂತಯ್ಯ, ಲಕ್ಷಯ್ಯ ಗೋಡೆಕೆರೆ ಶಿವಲಿಂಗಮೂತರ್ಿ, ಸೊಂಡೇನಹಳ್ಳಿ ಪಾಲಣ್ಣ, ಧರ್ಮಪಾಲ್, ಬಸವರಾಜು, ನರಸಿಂಹಮೂತರ್ಿ, ಚಿದಾನಂದಮೂತರ್ಿ, ಚಿಕ್ಕಣ್ಣ, ಕುಮಾರ್, ಕೆಂಪಯ್ಯ, ತಿಮ್ಮೇಗೌಡ, ಎಸ್.ಎನ್.ಬಸವರಾಜು, ನರಸಿಂಹಯ್ಯ, ತಮ್ಮಯ್ಯ ಸೇರಿದಂತೆ ಗಣಿ ಭಾಗದ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಡಾ.ಎಸ್.ಜಿ.ಪರಮೇಶ್ವರಪ್ಪ ಅವಿರೋಧ ಆಯ್ಕೆ

ಚಿಕ್ಕನಾಯಕನಹಳ್ಳಿ,ಜು.3: ನೂತನವಾಗಿ ತಾಲೂಕು ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಸಂಘದ ಅಧ್ಯಕ್ಷರಾಗಿ ನೀರಾವರಿ ಹೋರಾಟಗಾರ, ಖ್ಯಾತ ವೈದ್ಯ ಡಾ.ಎಸ್.ಜಿ.ಪರಮೇಶ್ವರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಗೌರವಾಧ್ಯಕ್ಷರಾಗಿ ವಕೀಲ ಜಿ.ಶ್ರೀನಿವಾಸಮೂತರ್ಿ, ಕಾರ್ಯದಶರ್ಿಯಾಗಿ ಬಿ.ಜಿ.ರಾಜಣ್ಣ, ಉಪಾಧ್ಯಕ್ಷರಾಗಿ ಎಚ್.ಬಿ.ಪ್ರಕಾಶ್, ಕುಮಾರಸ್ವಾಮಿ(ನಿಶಾನಿ), ಸತ್ಯನಾರಾಯಣ ದಬ್ಬಗುಂಟೆ, ಸಹ ಕಾರ್ಯದಶರ್ಿಯಾಗಿ ವಕೀಲ ಬಿ.ಕೆ.ಸದಶಿವಾ, ಖಜಾಂಚಿಯಾಗಿ ಪುರಸಭಾ ಸದಸ್ಯ ರಾಜಶೇಖರ್, ಸಂಘಟನಾ ಕಾರ್ಯದಶರ್ಿಗಳಾಗಿ  ಎಸ್.ಸತೀಶ್ ಸಿದ್ದನಕಟ್ಟೆ, ಬಿ.ಎನ್.ಲೋಕೇಶ್, ಕಾಂತರಾಜ್ ಬೋರವೆಲ್ ಆಯ್ಕೆಯಾಗಿದ್ದಾರೆ.
ಸಂಘದ ನಿದರ್ೇಶಕರುಗಳಾಗಿ ರಾಮಚಂದ್ರಣ್ಣ, ರಂಗನಾಥಪ್ಪ, ಎಂ.ರಾಮಯ್ಯ, ಬಿ.ಹೆಚ್.ದಯಾನಂದ್, ಗಂಗಾಧರಯ್ಯ, ಕೆ.ನಾರಾಯಣ ಕಂಟಲಗೆರೆ, ನಿರಂಜನಮೂತರ್ಿ.ಎಸ್.ಕೆ, ಕೃಷ್ಣೆಗೌಡ, ತಿಮ್ಮರಾಯಪ್ಪ, ಗೋಪಿನಾಥ, ರಂಗಪ್ಪ, ರಮೇಶ್ ಹಾಗೂ ಸಂಚಾಲಕರಾಗಿ ಸತೀಶ್, ರಮೇಶ್ ಬೆನಕನಕಟ್ಟೆ ಆಯ್ಕೆಯಾಗಿದ್ದಾರೆ. 


ನಿಷೇಧ ನಡುವೆಯೂ ಕಾಳಸಂತೆಯಲ್ಲಿ ಮಾರಟವಾಗುತ್ತಿರುವ ಗುಟ್ಕಾ
ಚಿಕ್ಕನಾಯಕನಹಳ್ಳಿ,ಜೂ.03 : ಸುಪ್ರೀಂಕೋಟರ್್ ಗುಟ್ಕಾ ಮೇಲೆ ನಿಷೇದ ಜಾರಿ ಮಾಡಿದರೂ ರಾಜ್ಯ ಸಕರ್ಾರ ಗುಟ್ಕಾ ನಿಷೇದ ಅನುಷ್ಠಾನಕ್ಕೆ ತಂದ ಪರಿಣಾಮ ಈಗಾಗಲೇ ಗ್ರಾಮೀಣ ಭಾಗದ ಅಂಗಡಿಗಳಲ್ಲಿ ದಾಸ್ತಾನು ಮಾಡಿಕೊಂಡಿದ್ದ ಅಂಗಡಿ ಮಾಲೀಕರು ಇದರ ಲಾಭ ಪಡೆಯಲು ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ.
 2ರೂಗೆ ಮಾರಬೇಕಾದ ಗುಟ್ಕಾವನ್ನು 10ರೂಗೆ, 6ರೂಗೆ ಇದ್ದ ಬೆಲೆ 15ರೂಗೆ ಮಾರಾಟವಾಗುತ್ತಿದ್ದು ಗುಟ್ಕಾ ಗ್ರಾಹಕರು ದುಬಾರಿ ಬೆಲೆಯ ಬಗ್ಗೆ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.