Saturday, June 11, 2011

ಉಚಿತ ಸಾಮೂಹಿಕ ವಿವಾಹಚಿಕ್ಕನಾಯಕನಹಳ್ಳಿ,

ಜೂ.11: ಶ್ರೀ ದುಗರ್ಾ ಗ್ರಾಮೀಣ ಶೈಕ್ಷಣಿಕ ಅಭಿವೃದ್ದಿ ಸಂಸ್ಥೆಯ ಉದ್ಘಾಟನೆ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಇದೇ 26ರ ಭಾನುವಾರ ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.ಸಮಾರಂಭವನ್ನು ತಾಲ್ಲೂಕಿನ ನರುವಗಲ್ ಮಜುರೆ, ಹುಲಿಕಲ್ ಬೆಟ್ಟದ ಶ್ರೀ ದುಗರ್ಾಂಬದೇವಿ ಪುಣ್ಯ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದು ಚಿತ್ರದುರ್ಗ ಬೋವಿಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ, ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನದೇಶಿಕೇಂದ್ರಸ್ವಾಮಿ, ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜ ಸೇವಕ ರಮಾಮಣಿ,ಎಸ್.ಜಯಪ್ರಕಾಶ್, ಟ್ಯಾಕ್ಸ್ ಪ್ರೊ.ವ್ಯವಸ್ಥಾಪಕ ನಿದರ್ೇಶಕ ರಾಜೇಶ್ಶೆಟ್ಟಿ, ವಿರೋದ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ, ಚಿಕ್ಕಣ್ಣಸ್ವಾಮಿಕ್ಷೇತ್ರದ ಪ್ರಧಾನ ಅರ್ಚಕ ಪಾಪಣ್ಣ ವಿವಾಹ ಕಾರ್ಯಕ್ರಮದ ನಿರೂಪಣೆ ನೆರವೇರಿಸಲಿದ್ದು ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ ಹಿ.ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಜಿಲ್ಲಾಧಿಕಾರಿ ಸಿ.ಟಿ.ಮುದ್ದುಕುಮಾರ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಹೃದ್ರೋಗ ತಜ್ಞ ಡಾ.ಪರಮೇಶ್ವರಪ್ಪ, ನ್ಯಾಯಾವಾದಿ ಚಂದ್ರಪ್ಪ, ಹಿರಿಯ ಉಪನ್ಯಾಸಕ ಬಿ.ಬಿ.ಬಸವರಾಜು, ಜ.ಸಿ.ಟ್ರಸ್ಟ್ ಕಾರ್ಯಧ್ಯಕ್ಷ ರವಿ.ಹೆಚ್.ಮಾಕಳಿ, ರಾ.ಬೋವಿ ಮಹಾಸಭಾ ಅಧ್ಯಕ್ಷ ಮುನಿರಾಜ್, ಉಪಾಧ್ಯಕ್ಷ ಟಿ.ಹೆಚ್.ಚಂದ್ರು, ಜಿ.ಪಂ.ಮಾಜಿ ಅಧ್ಯಕ್ಷ ಜಿ.ರಘುನಾಥ್ ಉಪಸ್ಥಿತರಿರುವರು.
ಅಂತರ ಹೈಸ್ಕೂಲ್ ಮತ್ತು ಪಿ.ಯು.ವಿದ್ಯಾಥರ್ಿಗಳಿಗೆ ಚಚರ್ಾಸ್ಪಧರ್ೆಚಿಕ್ಕನಾಯಕನಹಳ್ಳಿ,ಜೂ.07: ಶ್ರೀ ಪರಶು ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಅಂತರ ಹೈಸ್ಕೂಲ್, ಅಂತರ ಪಿ.ಯು.ಕಾಲೇಜು ವಿದ್ಯಾಥರ್ಿಗಳಿಗೆ ಚಚರ್ಾ ಸ್ಪಧರ್ೆಯನ್ನು ಏರ್ಪಡಿಸಲಾಗಿದೆ ಎಂದು ಪರಶು ಪ್ರತಿಷ್ಠಾನದ ಟ್ರಸ್ಟ್ ಪ್ರಧಾನ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.9ನೇ ತರಗತಿ ವಿದ್ಯಾಥರ್ಿಗಳಿಗೆ ಜುಲೈ 3ರಂದು ಬೆಳಗ್ಗೆ 10.30ಕ್ಕೆ ದೂರದರ್ಶನ ವೀಕ್ಷಣೆ ವಿದ್ಯಾಥರ್ಿಗಳ ಭವಿಷ್ಯಕ್ಕೆ ಮಾರಕವೇ ? ನಮ್ಮ ದೇಶ ಪ್ರಗತಿ ಪಥದಲ್ಲಿದೆಯೇ? ಮಿಲಿಟರಿಗೆ ಸೇರಲು ನಮ್ಮ ಯುವಕರು ಹಿಂಜರಿಯುತ್ತಾರೆಯೇ ? ವಿಷಯಗಳ ಬಗ್ಗೆ 10ನೇ ತರಗತಿಯ ವಿದ್ಯಾಥರ್ಿಗಳಿಗೆ ಜುಲೈ 9ರ ಮಧ್ಯಾಹ್ನ 2.30ಕೆ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಪೋಷಕರೇ ಕಾರಣ, ರಾಮಾಯಣ, ಮಹಾಭಾರತದ ಆದರ್ಶ ಪುರುಷರ ಅನುಕರಣೆ ಮಾರಕವೇ ಪೂರಕವೇ, ಮಿಲಿಟರಿ ಸೇವೆಯನ್ನು ಕಡ್ಡಾಯ ಮಾಡಬೇಕೆ ವಿಷಯಗಳ ಬಗ್ಗೆ , ಪ್ರಥಮ ಪಿಯುಸಿ ವಿದ್ಯಾಥರ್ಿಗಳಿಗೆ ಜುಲೈ 10ರ ಬೆಳಗ್ಗೆ 10ಕ್ಕೆ ಸಕರ್ಾರಿ ನೌಕರಿಯ ಕ್ಷೀಷೆ-ಆರೋಗ್ಯಕರ ಸಮಾಜಕ್ಕೆ ಹಾನಿಕಾರಕ ಪರಿಣಾಮ ಬೀರುವುದೆ ?, ಕಂಪ್ಯೂಟರ್ ಶಿಕ್ಷಣ ಪ್ರಗತಿಗೆ ಅತ್ಯವಶ್ಯಕ, ಮಿಲಿಟರಿ ಸೇವೆಗೆ ಸೇರದಿರುವ ಬಗ್ಗೆ ಇಂದಿನ ಯುವಜನತೆಗೆ ಜ್ಞಾನದ ಕೊರತೆಯೇ ಕಾರಣ ? ವಿಷಯಗಳ ಬಗ್ಗೆ, ದ್ವಿತೀಯ ಪಿಯುಸಿ ವಿದ್ಯಾಥರ್ಿಗಳಿಗೆ ಜುಲೈ 10ರ ಮಧ್ಯಾಹ್ನ 2.30ಕ್ಕೆ ಗ್ರಾಮೀಣ ಜನತೆಯ ನಗರ ವಲಸೆ, ಸಮಾಜ ಮತ್ತು ದೇಶದ ಪ್ರಗತಿಗೆ ಪೂರಕವೇ ಮಾರಕವೇ, ಇಂಗ್ಲೀಷ್ ಭಾಷೆಯ ವ್ಯಾಮೋಹ ನಮ್ಮ ಸಂಸ್ಕೃತಿಯ ವಿನಾಶಕ್ಕೆ ಹಾದಿಯೇ, ಭಾರತ ದೇಶ ಸಮಸ್ಯೆಗಳ ಸುಳಿಯಲ್ಲಿದೆಯೇ ? ವಿಷಯಗಳ ಬಗ್ಗೆ ಚಚರ್ೆ ನಡೆಯಲಿದೆ ವಿದ್ಯಾಥರ್ಿಗಳು ಜೂನ್ 25ರೊಳಗಾಗಿ ಪರಶು ಪ್ರತಿಷ್ಠಾನದ ಪ್ರಧಾನ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ರವರಲ್ಲಿ ಸಂಪಕರ್ಿಸುವಂತೆ ಕೋರಿದ್ದಾರೆ.ಸೂಚನೆ : ಒಂದು ಶಾಲೆಯಿಂದ 9ನೇ ತರಗತಿಯ ಇಬ್ಬರು ವಿದ್ಯಾಥಿಗಳು ವಿಷಯದ ಪರವಾಗಿ ಒಬ್ಬರು ಮತ್ತು ವಿಷಯದ ವಿರೋಧವಾಗಿ ಇನ್ನೊಬ್ಬರು ಭಾಗವಹಿಸಬೇಕು. ಅದೇ ರೀತಿ 10ನೇ ತರಗತಿ, ಪ್ರಥಮ ಪಿಯುಸಿ ಮತ್ತು ದ್ವಿತಿಯ ಪಿಯುಸಿ ವಿದ್ಯಾಥರ್ಿಗಳಿಗೆ ಅನ್ವಯಿಸುತ್ತದೆ. ವಿಷಯದ ಪರವಾಗಿ ಮತ್ತು ವಿರೋಧವಾಗಿ ಪ್ರತಿಯೊಬ್ಬ ಸ್ಪಧರ್ಿಗೆ ತಲಾ ಮೂರು ನಿಮಿಷಗಳ ಕಾಲಾವಕಾಶವಿರುತ್ತದೆ, ಸ್ಪಧರ್ೆ ಪ್ರಾರಂಭವಾಗುವ ಒಂದು ಗಂಟೆ ಮೊದಲು ಶಾಲೆಯ/ಕಾಲೇಜಿನ ತಂಡಕ್ಕೆ ಮೂರು ವಿಷಯಗಳ ಪೈಕಿ ಒಂದು ವಿಷಯವನ್ನು ನೀಡಲಾಗುವುದು, ಅದೇ ವಿಷಯದ ಪರ ಮತ್ತು ವಿರೋಧವಾಗಿ ಸ್ಪಧರ್ಾಳುಗಳ ವಿಷಯ ಮಂಡನೆ ಮಾಡಬೇಕಿರುತ್ತದೆ. ತೀಪರ್ುಗಾರರ ತೀಮರ್ಾನವನ್ನು ಸ್ಪಧರ್ೆ ಮುಗಿದ ಅರ್ಧ ಗಂಟೆಯಲ್ಲಿ ಪ್ರಕಟಿಸಲಾಗುವುದು.