Saturday, May 25, 2013

ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗೆ ಬರಹಗಳ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.25: 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರತರುತ್ತಿದ್ದು, ಈ ಸಂಚಿಕೆಗೆ ಜಿಲ್ಲೆಯ ಸಂಸ್ಕೃತಿ, ಸಾಹಿತ್ಯವನ್ನು ಬಿಂಬಿಸುವಂತಹ ಲೇಖನ, ಕವನ, ಪ್ರಬಂಧ, ವಿಡಂಬನೆ, ಶಿಶು ಸಾಹಿತ್ಯ ಒಳಗೊಂಡಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಹೊತ್ತಿಗೆಯನ್ನು ತರ ಬಯಸಿದ್ದು ಆಸಕ್ತರು ತಮ್ಮ ಬರಹಗಳನ್ನು ಜೂನ್ 15ರೊಳಗೆ ತಲುಪಿಸುವಂತೆ ಸ್ಮರಣ ಸಂಚಿಕೆ ಸಮಿತಿ ಕೋರಿದೆ.
ಜೂನ್ 28,29 ಮತ್ತು 30ರಂದು ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುವ ಈ ಜಿಲ್ಲಾ ಸಮ್ಮೇಳನದಲ್ಲಿ ಬಿಡುಗಡೆಗೊಳಿಸಲಿದ್ದು ಆಸಕ್ತರು ತಮ್ಮ ಬರಹದ ಜೊತೆಗೆ ಇತ್ತೀಚಿನ ಭಾವಚಿತ್ರ, ದೂರವಾಣಿ ಸಂಖ್ಯೆ, ಅಂಚೆ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸುವುದು, ಆಯ್ಕೆಯಾಗದ ಬರಹಗಳನ್ನು ವಾಪಸ್ ಕಳುಹಿಸಲಾಗುವುದಿಲ್ಲ. ತಮ್ಮ ಬರಹಗಳನ್ನು ಸೋ.ಮು.ಭಾಸ್ಕರಾಚಾರ್ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಅಥವಾ ಸಿ.ಗುರುಮೂತರ್ಿ ಕೊಟಿಗೆಮನೆ ಕಾರ್ಯನಿವರ್ಾಹಕ ಸಂಪಾದಕರು ಸ್ಮರಣ ಸಂಚಿಕೆ ವಿಭಾಗ ಸುವರ್ಣಮುಖಿ ಮಾಧ್ಯಮ ಕೇಂದ್ರ, ಕೆನರಾ ಬ್ಯಾಂಕ್ ಎದರು, ಬಿ.ಎಚ್.ರಸ್ತೆ ಚಿಕ್ಕನಾಯಕನಹಳ್ಳಿ ಇಲ್ಲಿಗೆ ಕಳುಹಿಸಲು ಕೋರಿದೆ.  ಹೆಚ್ಚಿನ ವಿವರಗಳಿಗೆ 9844483844 ಅಥವಾ 9448659573 ಸಂಪಕರ್ಿಸಲು ಕೋರಿದೆ.
ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಡಕು.
ಆಂತರಿಕ ಕಿತ್ತಾಟದಿಂದ ಕಟ್ಟಡದ ಉಧ್ಘಾಟನೆಗೆ  ತಡೆ.
                             
ಚಿಕ್ಕನಾಯಕನಹಳ್ಳಿ,ಮೇ25 : ಸಾಮಾನ್ಯ ಸಭೆಯಲ್ಲಿ ರೈತರ ಉತ್ಪಾದಕರ ಸಮಸ್ಯೆಗಳನ್ನು ಚಚರ್ಿಸುತ್ತಿದ್ದ ಸಂದರ್ಭದಲ್ಲಿ ಅಮಾನತ್ತುಗೊಂಡ ಸಂಘದ ಅಧ್ಯಕ್ಷೆ ಭಾಗ್ಯಮ್ಮ ಏಕಾಎಕಿ ಸಭೆಗೆ ನುಗ್ಗಿ ಜಗಳವಾಡಿ ಸಂಘದ ಎಲ್ಲಾ ನಿದರ್ೇಶಕಿಯರನ್ನು ಅವಾಚ್ಯಾವಾಗಿ ಬೈದು ಅವಮಾನ ಮಾಡಿ ಸಂಘದ ರೆಸಲ್ಯೂಷನ್ ಪುಸ್ತಕವನ್ನು ಹರಿದಿರುವುದಲ್ಲದೆ ಹೊರಗಡೆಯಿದ್ದ ಹಾಲು ಉತ್ಪಾದಕರನ್ನೂ ಅವಾಚ್ಯವಾಗಿ ಬೈದು ಅವಾಂತರವೆಬ್ಬಿಸಿದ್ದಾರೆ ಎಂದು ಸಂಘದ ನಿದರ್ೇಶಕಿಯರು, ಸದಸ್ಯರುಗಳು ಹಾಗೂ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಾಲ್ಲೂಕಿನ ಕುಪ್ಪೂರು ಗ್ರಾಮದ ತಮ್ಮಡಿಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈ ಘಟನೆ ಸಂಭವಿಸಿದೆ. ಸಂಘದ ಅಧ್ಯಕ್ಷೆ ಭಾಗ್ಯಮ್ಮ ಕಟ್ಟಡ ನಿಮರ್ಾಣದ ಸಂದರ್ಭದಲ್ಲಿ ಅಕ್ರಮವೆಸಗಿರುವುದು ಅಸಿಸ್ಟೇಂಟ್ ರಿಜೀಸ್ಟರ್ ಕಾಂತರಾಜುರವರ ಮುಂದೆ ಸಾಭೀತಾಗಿದ್ದು ಅಕ್ರಮವಾಗಿ ಹಣವನ್ನು ಪಡೆದಿದ್ದಾರೆ ಹಾಗೂ ಅಸಿಸ್ಟೇಂಟ್ ರಿಜೀಸ್ಟರ್ ಕಾಂತರಾಜುರವರ ಅನುಮತಿ ಪಡೆಯದೆ ಕಟ್ಟಡ ನಿಮರ್ಾಣಕ್ಕೆ ಮುಂದಾಗಿದ್ದಾರೆ ಹಾಗೂ ಕಟ್ಟಡ ನಿಮರ್ಾಣಕ್ಕೆ ಹಣವನ್ನು ಬಿಡುಗಡೆ ಮಾಡುವಲ್ಲಿ ಯಾವುದೇ ರೆಸಲ್ಯéೂಷನ್ ಪಾಸ್ ಮಾಡದೆ, ಸರಿಯಾದ ಧಾಖಲೆಯನ್ನು ನೀಡದೆ ಉತ್ಪಾದಕರ ಹಣವನ್ನು ದುರೂಪಯೋಗ ಪಡಿಸಿಕೊಂಡಿರುವುದು ಹಾಗೂ ಜಮಾ ಖಚರ್ಿನಲ್ಲಿ 150000 ರೂ ಹಣ ವ್ಯತ್ಯಸ ಬಂದಿದೆ. ಈ ಅಂಶಗಳು ಸಾಬೀತಾದೆ.
ಇದರಿಂದ ಎ.ಆರ್.ಕಾಂತರಾಜುರವರು ಭಾಗ್ಯಮ್ಮನವರನ್ನು  ಇದೇ 14 ರಂದು ಅದಿನಿಯಮ 106(3)ರಅಡಿ ಅಮಾನತು ಮಾಡಿದ್ದರು. ಇದರಿಂದ ಉತ್ಪಾದಕರು ಹಾಲಿನ ಪೇಮೆಂಟ್ಗಾಗಿ ಪರದಾಡುವಂತಾಗಿದೆ. ಸಂಘದಿಂದ  ಉತ್ಪಾದಕರಿಗೆ 3 ವರ್ಷದಿಂದ ಬೋನಸ್ ನೀಡದೆ ಸತಾಯಿಸಲಾಗಿದೆ. 2013 ಜನವರಿಯಿಂದ 2 ರೂ ಸಬ್ಸಿಡಿಯ ಹಣವನ್ನು ಒಕ್ಕೂಟ ಬೀಡುಗಡೆ ಮಾಡಿಲ್ಲ. ಉತ್ಪಾದಕರು ಆಡಳಿತ ಮಂಡಳಿ ಹಾಗೂ ಒಕ್ಕೂಟದ ನಡುವಿನ ಸಂಘರ್ಷದಲ್ಲಿ ಸಿಲುಕಿ  'ಗಂಡ ಹೆಂಡತಿಯ ಜಗಳದಲ್ಲಿ ಕುಸು ಬಡವಾದ' ಹಾಗೆ ಆಗಿದೆ. ಅಧ್ಯಕ್ಷರಾದ ಭಾಗ್ಯಮ್ಮನವರ ಸವರ್ಾಧಿಕಾರಿ ವರ್ತನೆಯು ಉಳಿದೆಲ್ಲ ನಿದರ್ೇಶಕಿಯರುಗಳಿಗೆ ಅಸಮಧಾನವನ್ನು ಉಂಟುಮಾಡಿದೆ ಹಾಗೂ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾದ ಹಳೇಮನೆ ಶಿವನಂಜಪ್ಪನವರು ನಮ್ಮ ಡೈರಿ ಹಾಳಾಗಲು ಕಾರಣ ಎಂದು ಹಾಲು ಉತ್ಪಾದಕರು ಪತ್ರಿಕೆಗೆ ತಿಳಿಸಿದರು.
ತಮ್ಮಡಿಹಳ್ಳಿ ಸುಮಾರು 150 ಮನೆಗಳ ಗ್ರಾಮವಾಗಿದ್ದು ತುಮಕೂರು ಹಾಲು ಒಕ್ಕೂಟದ ಸಹಕಾರದಿಂದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ತೆರೆಯಲಾಗಿದೆ, ಸರಿ ಸುಮಾರು 200 ಸೀಮೆ ಹಸುಗಳಿದ್ದು ಪ್ರತಿದಿನ ಬೆಳಿಗ್ಗೆ ಸಂಜೆಯಿಂದ 400 ಲೀಟರ್ ಹಾಲು ಶೇಖರಣೆಯಾಗುತ್ತಿದ್ದು ಉತ್ತಮ ಲಾಭವನ್ನುಗಳಿಸಿ 200000 ರೂ ಲಾಭದಲ್ಲಿದ್ದ ಡೈರಿ, ಇಂದು ನಷ್ಟದಲ್ಲಿ ಸಿಲುಕಿದೆ. 
ಸಂಘದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಎಲ್ಲರನ್ನು ಬೈದು ರೆಸಲ್ಯೂಷನ್ ಪುಸ್ತಕವನ್ನು ಹರಿದು ಹಾಕಿ ದಾಂದಲೆ ಮಾಡಿದ್ದಾರೆ ಎಂದು ಕಾರ್ಯದಶರ್ಿಯಾದ ನೀಲಮ್ಮ, ನಿಧರ್ೇಶಕಿಯರಾದ ವಸಂತಕುಮಾರಿ, ಮಂಜುಳ, ನಿಂಗರಾಜಮ್ಮ, ಮಂಜುಳ.ಬಿ, ಬಸಮ್ಮ, ಪ್ರಮೀಳ  ರವರು ಎಆರ್. ಕಾಂತರಾಜುರವರ ಮಾರ್ಗದರ್ಶನದಲ್ಲಿ ನಿದರ್ೇಶಕಿಯರು ಹಾಗೂ ಉತ್ಪಾದಕರು ಗ್ರಾಮಸ್ಥರು ದೂರಿದ್ದಾರೆ. ಇಂತಹ ಅದ್ಯಕ್ಷೆಗೆ ಒಕ್ಕೂಟದ ಅಧ್ಯಕ್ಷರಾದ ಹಳೇಮನೆ ಶಿವನಂಜಪ್ಪನವರು ಕುಮ್ಮಕು ನೀಡಿರುವುದರಿಂದ ನಮ್ಮೂರಿನ ಡೈರಿ ಹಾಳಾಗುತ್ತಿದೆ. ಆದ್ದರಿಂದ ಆಡಳಿತ ಮಂಡಳಿ ಹಾಗೂ ಒಕ್ಕೂಟ ಎಲ್ಲಾ ಹಳೇ ವೈಷಮ್ಯವನ್ನು ಮರೆತು ನಿಮರ್ಾಣವಾದ ಕಟ್ಟಡವನ್ನು ಉದ್ಘಾಟಿಸಲಿ ಮತ್ತು ಉತ್ಪಾದಕರಿಗೆ ಸರಿಯಾಗಿ ಪೆಮೆಂಟ್ ಮಾಡಲಿ, ಒಕ್ಕೂಟ ಸರಿಯಾಗಿ ಸಹಾಯದನ ನೀಡಿ ಹೈನುಗಾರಿಕೆ ಪ್ರಗತಿ ಕಾಣಲಿ ಇವುಗಳನ್ನು ಬಗೆಹರಿಸುವಲ್ಲಿ ಒಕ್ಕೂಟದ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳಲಿ ಎಂದು ಸಂಘದ ನಿದರ್ೇಶಕರು, ಉತ್ಪಾದಕರು, ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನೇಕಾರರಿಗಿರುವ ಸಕರ್ಾರಿ ಸವಲತ್ತುಗಳನ್ನು
ಬಳಸಿಕೊಳ್ಳುವಂತೆ ಕರೆ
ಚಿಕ್ಕನಾಯಕನಹಳ್ಳಿ,ಮೇ.25 : ನೇಕಾರರಿಗೆ ಸಕರ್ಾರದಿಂದ ಆರೋಗ್ಯ ವಿಮೆ, ಅಂತ್ಯಸಂಸ್ಕಾರದ ಸಹಾಯಧನ, ವಸತಿ ಸೌಕರ್ಯ, ವಿದ್ಯಾಥರ್ಿ ವೇತನದ ಜೊತೆಗೆ ಇನ್ನಿತರ ಸವಲತ್ತುಗಳು ಸಕರ್ಾರದಿಂದ ಸಿಗಲಿದ್ದು ಈ ಸೌಲಭ್ಯಗಳನ್ನು ನೇಕಾರರು ಪಡೆದು ಸದುಪಯೋಗ ಪಡಿಸಿಕೊಳ್ಳಿ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿದರ್ೇಶಕ ಗಂಗಯ್ಯ ತಿಳಿಸಿದರು.
ಪಟ್ಟಣದ ರೇವಣಸಿದ್ದೇಶ್ವರ ಉಣ್ಣೆ ಸಹಕಾರ ಸಂಘದಲ್ಲಿ ನೇಕಾರರ ಸೇವಾ ಕೇಂದ್ರದ ವತಿಯಿಂದ ನಡೆದ ಸಮಗ್ರ ಕೌಶಲ್ಯ ಅಭಿವೃದ್ದಿ ಯೋಜನೆಯಲ್ಲಿ ವಾರ್ಪರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತರಬೇತಿ ಕಾರ್ಯಕ್ರಮವು 30ದಿನಗಳು ನಡೆಯಲಿದ್ದು 20ಮಂದಿ ನೇಕಾರರಿಗೆ ತರಬೇತಿ ನೀಡಲಾಗುವುದು ಹಾಗೂ ತರಬೇತಿಯಲ್ಲಿ ಪಾಲ್ಗೊಂಡವರಿಗೆ 3ಸಾವಿರ ರೂಪಾಯಿಗಳ ಶಿಷ್ಯ ವೇತನ ನೀಡಲಾಗುವುದು ಹಾಗೂ ವಾರ್ಪಾರ್ ತರಬೇತಿಯಲ್ಲಿ ಉತ್ತಮವಾಗಿ ತರಬೇತಿ ಪಡೆಯಿರಿ ಎಂದು ತಿಳಿಸಿದರು.
ನೇಕಾರರ ಸೇವಾಕೇಂದ್ರದ ಉಪನಿದರ್ೇಶಕ ವಿ.ಕೆ.ಹರಿಪ್ರಸಾದ್ ಮಾತನಾಡಿ ನೇಕಾರರಿಗೆ ಉತ್ತಮ ನೇಕಾರಿಕೆಗಾಗಿ ನಡೆಯುವ ಈ ತರಬೇತಿಯನ್ನು ನೇಕಾರರು ಸದುಪಯೋಗ ಪಡಿಸಿಕೊಳ್ಳಿ, ಕೇಂದ್ರ ಸಕರ್ಾರಿದಂದ ಈ ಯೋಜನೆ ನಡೆಯುತ್ತಿದ್ದು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ತಿಳುವಳಿಕೆ ಪಡೆದುಕೊಳ್ಳಿರಿ ಎಂದು ಸಲಹೆ ನೀಡಿದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ನೆಲಮೂಲ ಪಾರಂಪರಿಕ ಉದ್ಯೋಗವನ್ನು ಉಳಿಸಿ, ಬೆಳಸುತ್ತಿರುವ ಕಂಬಳಿ ನೇಕಾರರು ಇಂದು ಕಣ್ಮರೆಯಾಗುತ್ತಿದ್ದಾರೆ, ಈ ನೇಕಾರಿಕೆಯನ್ನು ಉಳಿಸಲು ಕೇಂದ್ರ ಮತ್ತು ರಾಜ್ಯ ಸಕರ್ಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ, ನೇಕಾರರು ಇವುಗಳನ್ನು ಬಳಸಿಕೊಂಡು ತಮ್ಮ ಆಥರ್ಿಕತೆ ಸುಬದ್ರ ಪಡಿಸಿಕೊಳ್ಳಲು ಕರೆ ನೀಡಿದರು.
ಸಮಾರಂಭದಲ್ಲಿ ರೇವಣಸಿದ್ದೇಶ್ವರ ಉಣ್ಣೆ ಸಹಕಾರ ಸಂಘದ ನಿದರ್ೇಶಕರುಗಳಾದ ಸಿ.ಎಂ.ಬೀರಲಿಂಗಯ್ಯ, ಸಿ.ಕೆ.ಲೋಕೇಶ್, ಸಿ.ಹೆಚ್.ಅಳವೀರಯ್ಯ, ಗೋವಿಂದಯ್ಯ ಉಪಸ್ಥಿತರಿದ್ದರು, ಸಮಾರಂಭದಲ್ಲಿ ಸೊಸೈಟಿ ಕಾರ್ಯದಶರ್ಿ ಕೋದಂಡಯ್ಯ ಸ್ವಾಗತಿಸಿ, ನಿರೂಪಿಸಿದರು.
ಕುಪ್ಪೂರು ಪಶು ಆಸ್ಪತ್ರೆಯಲ್ಲಿ  ವೀರ್ಯನಳಿಕೆಗಳ ಅಭಾವದಿಂದ ಮಾತಿನ ಚಕಮಕಿ.
ಚಿಕ್ಕನಾಯಕನಹಳ್ಳಿ,ಮೇ.25: ತಾಲ್ಲೂಕು ಶೆಟ್ಟೇಕೆರೆ ಹೋಬಳಿಯ ಕುಪ್ಪೂರು ಪಶು ಆಸ್ಪತ್ರೆಯಲ್ಲಿ ಇಂದು ಹಸುಗಳಿಗೆ ಗರ್ಭದಾರಣೆ ಮಾಡಿಸಲು ಬಂದಾಗ ವೀರ್ಯನಳಿಕೆಯ ಅಭಾವದಿಂದ ಗರ್ಭದಾರಣೆ ಸಾಧ್ಯವಾಗದ ಕಾರಣ ರೈತರು ಮತ್ತು ಪಶು ವೈದ್ಯಾಧಿಕಾರಿ ಶಾಂತಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಡಾ.ಶಾಂತಕುಮಾರ್ ರವರು ಹಳ್ಳೀಕಾರ್ ವೀರ್ಯನಳಿಕೆ ಹಾಗೂ ಅಮೃತ್ ಮಹಲ್ ವೀರ್ಯನಳಿಕೆ ಈ ತಿಂಗಳಲ್ಲಿ ನಮ್ಮ ಆಸ್ಪತ್ರೆಗೆ ಸರಬರಾಜು ಆಗದೆ ಇರುವುದರಿಂದ  ನಮ್ಮಲ್ಲಿ  ಹಳ್ಳೀಕಾರ್ ವೀರ್ಯದ ಗರ್ಭಧಾರಣೆ ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ಕೇಂದ್ರದ ವ್ಯಾಪ್ತಿಯಲ್ಲಿನ 25 ಗ್ರಾಮಗಳ ಹಸುಗಳಿಗೆ ಈ ಸೌಲಭ್ಯಸಿಗುತ್ತಿಲ್ಲವೆಂದರು. ಈ ಭಾಗದಲ್ಲಿ ಮಿಶ್ರತಳಿ ಹಸುಗಳು 1287 ಇದ್ದು, ನಾಟಿ ಹಸುಗಳು 1762 ಇವೆ ಈ ವೀರ್ಯದ ಅಭಾವದಿಂದ ಇಲ್ಲಿನ ಹಸುಗಳಿಗೆ ಗರ್ಭಧಾರಣಾ ಸೌಲಭ್ಯ ದೊರೆಯುತ್ತಿಲ್ಲ ಹಾಗಾಗಿ ರೈತರು ನಮ್ಮ ಕೇಂದ್ರದಲ್ಲಿ ರೈತರು ನಮ್ಮೊಂದಿಗೆ ಮಾತಿನ ಚಕಮಕಿಗೆ ಮುಂದಾದರು ಎಂದು ಸ್ಪಷ್ಟಪಡಿಸಿದರು.
ಪಶು ಆಸ್ಪತ್ರೆಗಳಲ್ಲಿ ಹಸುಗಳಿಗೆ ಗರ್ಭಧಾರಣಾ ಸೌಲಭ್ಯ ಕೇವಲ 5 ರೂಗಳಲ್ಲಿ ದೊರೆಯುತಿತ್ತು, ಇದೇ ಕಾರ್ಯಕ್ಕೆ ರೈತರು ಹೊರಗಡೆ ಹೋರಿ ಕೊಡಿಸಲು ಹೋದರೆ 100ರೂಗಳು ತೆರಬೇಕಾಗಿರುವುದರಿಂದ ಇದು ರೈತರಿಗೆ ಹೊರೆಯಾಗುತ್ತಿದೆ ಆದ್ದರಿಂದ ಪಶು ಆಸ್ಪತ್ರೆಗಳಿಗೆ ಶೀಘ್ರವೇ ಹಳ್ಳೀಕಾರ್ ಮತ್ತು ಅಮೃತ್ ಮಹಲ್ ವೀರ್ಯನಳಿಕೆಯನ್ನು ಸರಬರಾಜು ಮಾಡುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.