Tuesday, March 15, 2011


ತಾತಯ್ಯನವರ 51ನೇ ಉರುಸ್ ಮತ್ತು ಉತ್ಸವ
ಚಿಕ್ಕನಾಯಕನಹಳ್ಳಿ,ಮಾ.13: 51ನೇ ವರ್ಷದ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ ಉರುಸ್ ಮತ್ತು ತಾತಯ್ಯನವರ ಉತ್ಸವ ಕಾರ್ಯಕ್ರಮವನ್ನು ಇದೇ 21ರಿಂದ 23ರ ವರಗೆ ನಡೆಯಲು ಗೋರಿಯ ಕಮಿಟಿ ನಡೆಸಲು ತಿಮರ್ಾನಿಸಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಉತ್ಸವ ನಡೆಯಲಿದ್ದು 21ರಂದು ತಾತಯ್ಯನವರ ಉತ್ಸವ ಗೋರಿಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಲಿದೆ, 22ರಂದು ರಾತ್ರಿ ಹೈಸ್ಕೂಲ್ ಮೈದಾನದಲ್ಲಿ ಅಸ್ಲಂ ಅಕ್ರಮ್ ಸಾಬ್ರಿ ಪಾಟರ್ಿ ಮುಜಫ್ಫರ್ ಪುರ್ ಹಾಗೂ ಕರೀಷ್ಮಾ ತಾಜ್ ನಾಗಪುರ್ ಪಾಟರ್ಿ ಯವರಿಂದ ಜಿದ್ದಾ ಜಿದ್ದಿನ ಖವ್ವಾಲಿ ಏರ್ಪಡಿಸಲಾಗಿದ್ದು ಖವ್ವಾಲಿಯ ಉದ್ಘಾಟನೆಯನ್ನು ಖ್ಯಾತ ಸಾಹಿತಿ ರೆಹಮತ್ ತರೀಖೆರೆ ರವರು ಉದ್ಘಾಟನೆ ನೆರವೇರಿಸಲಿದ್ದು ಕಮಿಟಿ ಉಪಾಧ್ಯಕ್ಷ ಟಿ.ರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ, 23ರಂದು ಅಂತರಾಷ್ಟ್ರೀಯ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂರವರಿಂದ ರಸಸಂಜೆ ಕಾರ್ಯಕ್ರಮ ಏರ್ಪಡಿಸಿದ್ದು ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ
ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸದಸ್ಯ ರಂಗಸ್ವಾಮಯ್ಯ, ಮಹಮದ್ ಖಲಂದರ್, ಟಿ.ರಾಮಯ್ಯ, ಖನ್ನಿಸಾಬ್ ಉಪಸ್ಥಿತರಿದ್ದರು.
.ಸಕರ್ಾರದ ಯೋಜನೆಗಳು ಈಡೇರಲು ಸಫಲವಾಲಿ
ಚಿಕ್ಕನಾಯಕನಹಳ್ಳಿ,ಮಾ.13: ಸಕರ್ಾರಗಳು ತರುವ ಯೋಜನೆಗಳು ಕೇವಲ ಘೋಷಣೆಗಳಾಗುತ್ತವೆಯೇ ಹೊರತು ಫಲನಾಭವಿಗಳಿಗೆ ಸರಿಯಾಗಿ ತಲುಪುವಲ್ಲಿ ವಿಫಲವಾಗಿವೆ ಎಂದು ಕನರ್ಾಟಕ ಜನವಾದಿ ಮಹಿಳಾ ವೇದಿಕೆ ಉಪಾಧ್ಯಕ್ಷೆ ಕೆ.ಎನ್.ವಿಮಲಾ ವಿಷಾದಿಸಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸೃಜನಾ ಮಹಿಳಾ ಸಂಘದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾಚರ್್ 8ರಂದು ನ್ಯೂಯಾಕರ್್ ನಗರದಲ್ಲಿ ಉತ್ತಮ ವೇತನ, ಶೋಷಣೆಯ ವಿರುದ್ದ, ಸಮನಾದ ಹಕ್ಕುಗಳಿಗಾಗಿ ಮಹಿಳೆಯರು, ಜವಳಿ ಕಾಮರ್ಿಕರು ಸಂಘಟಿತರಾಗಿ ಪ್ರತಿಭಟಿಸಿದ ದಿನ, ಬೀದಿಗೆ ಇಳಿದು ಹೋರಾಟ ಮಾಡಿದ ನೆನಪಿಗಾಗಿ ವಿಶ್ವಸಂಸ್ಥೆಯ ನಿರ್ಣಯದಂತೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಘೋಷಿಸಿದರು, ಮಹಿಳೆಯರಿಗೆ ಶಿಕ್ಷಣ ಉದ್ಯೋಗ, ಸಂವಿದಾನ ದತ್ತವಾದ ಮೀಸಲಾತಿ ಸಿಗುತ್ತಿಲ್ಲ, ಮಹಿಳೆಯರು ಶಿಕ್ಷಣ ಉದ್ಯೋಗದಲ್ಲಿ ಆಥರ್ಿಕವಾಗಿ ಸಫಲರಾದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ, ಹೆಣ್ಣು ಮಕ್ಕಳ ವಿರುದ್ದ ದೌರ್ಜನ್ಯ, ಅತ್ಯಾಚಾರ, ಶೋಷಣೆಗಳು ನೆಡಯುವುದು ಸ್ತ್ರೀ ಜಾತಿಗೆ ಅಪಮಾನ ಇಂತಹ ಘಟನೆಗಳ ನಡೆಯದಂತೆ ಸಕರ್ಾರ ಹಾಗೂ ಜನಪ್ರತಿನಿಧಿಗಳು ಕಠಿಣ ಕಾನೂನು ಜಾರಿಗೊಳಿಸುವಂತೆ ಆಗ್ರಹಿಸಬೇಕು ಎಂದ ಅವರು ಹುಟ್ಟಿದ ಪ್ರತಿಯೊಂದು ಮಗುವಿಗೂ ಸೌಲಭ್ಯಗಳು ಸಿಗುವಂತಾಗಬೇಕು, ದೇಶದ ಗೋದಾಮುಗಳಲ್ಲಿ ಆಹಾರ ಧಾನ್ಯ ಕೊಳೆಯುತ್ತಿದ್ದರೂ ವಿತರಣೆ ಸರಿಯಾಗಿ ಆಗದೆ ಜನರಿಗೆ ಸಮಯಕ್ಕೆ ಸರಿಯಾಗಿ ಆಹಾರ ದೊರಕದೆ ನರಳುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಜಾಥಾವನ್ನು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟಿಸಿದರು. ಮಹಿಳೆಯರು ನೆಹರು ಸರ್ಕಲ್ ಬಳಿ ಮೆರವಣಿಗೆಯ ಮೂಲಕ ಮಾನವ ಸರಪಳಿ ನಿಮರ್ಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಲಕ್ಷ್ಮಮ್ಮ, ಪೂರ್ಣಮ್ಮ, ಶಾಂತಮ್ಮ, ಪಂಕಜ ಚಂದ್ರಶೇಖರ್, ಗಂಗಮ್ಮರವರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಬೆಂಗಳೂರಿನ ಪ್ರಗತಿಪರ ಬರಹಗಾತರ್ಿ ವಿ.ಗಾಯಿತ್ರಿ, ಜಿ.ಪಂ.ಸದಸ್ಯೆ ಲೋಹಿತಾಬಾಯಿ, ತಾ.ಪಂ.ಸದಸ್ಯೆ ಚಿಕ್ಕಮ್ಮ, ಪುರಸಭಾ ಸದಸ್ಯರಾದ ಧರಣಿ ಲಕ್ಕಮ್ಮ, ರುಕ್ಮುಣಮ್ಮ, ಸಾವಿತ್ರಿ, ರೇಣುಕಮ್ಮ, ಇಂದ್ರಮ್ಮ ಉಪಸ್ಥಿತರಿದ್ದರು.
ದರ್ಶಗಳನ್ನು ಪಾಲಿಸಲು ವಿದ್ಯಾಥರ್ಿಗಳಿಗೆ ಕರೆ
ಚಿಕ್ಕನಾಯಕನಹಳ್ಳಿ,ಮಾ.14: ವಿದ್ಯಾಥರ್ಿಗಳು ಶಿಕ್ಷಕರ ಆದರ್ಶಗಳನ್ನು ಅನುಸರಿಸಿ ಜೀವನದಲ್ಲಿ ಮುಂದೆ ಬಂದು ಬದುಕನ್ನು ಹಸನುಗೊಳಿಸಿಕೊಳ್ಳುವಂತೆ ಪ್ರೇರಣೆ ನೀಡುತ್ತಾರೆ ಅಂತಹ ಶಿಕ್ಷಕರು ನಮ್ಮ ದೇಶಕ್ಕೆ ಅಗತ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಶತಮಾನ ಕಂಡ ಕುರುಬರ ಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳ ಸಂಘದ ಪ್ರಥಮ ವಾಷರ್ಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಓದಿದ ಶಾಲೆ ಹಾಗೂ ಪಾಠಹೇಳಿಕೊಟ್ಟ ಶಿಕ್ಷಕರು ನಮ್ಮನ್ನು ಪೋಷಿಸಿದ ಪೋಷಕರಷ್ಟೇ ಪ್ರಮುಖರು ಎಂದ ಅವರು ತಮಗೆ ಪಾಠ ಹೇಳಿದ ಶಿಕ್ಷಕರ ಆದರ್ಶವೇ ನಮಗೆ ದಿಕ್ಸೂಚಿ ಆಯಿತು ಎಂದರು.
ಕುರುಬರಶ್ರೇಣಿ ಶಾಲೆಯ ಹಿರಿಯ ವಿದ್ಯಾಥರ್ಿಗಳಂತೆ ಇತರ ಶಾಲೆಯ ಹಿರಿಯ ವಿದ್ಯಾಥರ್ಿಗಳು ಸಂಘಟಿತರಾಗಿ ಶಾಲೆಯ ಅಬ್ಯುದಯಕ್ಕೆ ಶ್ರಮಿಸಿದರೆ ಶಾಲೆಗಳು ಸುಂದರಗೊಳಿಸುವ ಜೊತೆಗೆ ಆ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾಥರ್ಿಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟಂತಾಗುತ್ತದೆ ಎಂದರು.
ಕುರುಬರಶ್ರೇಣಿ ಶಾಲೆಗೆ ಆ ಶಾಲೆಯ ಹಿರಿಯ ವಿದ್ಯಾಥರ್ಿಗಳಾದ ಕ್ಯಾಪ್ಟನ್ ಸೋಮಶೇಖರ್ ಹಾಗೂ ಸಿ.ಪಿ.ಮಹೇಶ್ರವರು ಕೊಟ್ಟಿರುವ ನಿವೇಶನಕ್ಕೆ ಅಗತ್ಯ ಅನುದಾನವನ್ನು ನೀಡಿ ಉತ್ತಮ ಕೊಠಡಿ ನಿಮರ್ಿಸಲಾಗುವುದು ಎಂದರು.
ಸಮಾರಂಭದಲ್ಲಿ ಪ್ರತಿಭಾನ್ವಿನ ವಿದ್ಯಾಥರ್ಿಗಳನ್ನು ಪುರಸ್ಕರಿಸಿದ ವಾಣಿಜ್ಯ ತೆರಿಗೆ ಇಲಾಖೆಯ ಎ.ಸಿ.ಕ್ಯಾಪ್ಟನ್ಸೋಮಶೇಖರ್ ಮಾತನಾಡಿ ಹಿರಿಯ ವಿದ್ಯಾಥರ್ಿಗಳೆಲ್ಲಾ ಒಂದು ಕಡೆ ಸೇರಿ ತಾವು ಓದಿದ ಶಾಲೆಯ ಅಭಿವೃದ್ದಿಯ ಬಗ್ಗೆ ಚಿಂತಿಸುವ ಸಲುವಾಗಿ ಈ ಸಂಘ ಅಸ್ತಿತ್ವಕ್ಕೆ ಬಂದಿತು ಎಂದರಲ್ಲದೆ ಈ ಶಾಲೆಯ ಶತಮಾನ ಕಂಡ ಸಂದರ್ಭದಲ್ಲಿ ಎರಡು ಮೂರು ತಂಡಗಳು ಶತಮಾನೋತ್ಸವ ಆಚರಿಸಲು ಮುಂದಾದವು ಆದರೆ ವ್ಯವಸ್ಥಿತವಾಗಿ ಸಂಘಟಿತರಾಗಲು ಸಾಧ್ಯವಾಗಲಿಲ್ಲ, ಆದರೆ ಶತಮಾನೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಿತಲ್ಲದೆ, ಪ್ರಥಮ ವಾಷರ್ಿಕೋತ್ಸವವನ್ನು ಆಚರಿಸಿ ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಪುರಸ್ಕರಿಸಲಾಗುತ್ತಿದೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ಇಂದು ಗ್ರಾಮೀಣ ಭಾಗದ ಪೋಷಕರು ಮಕ್ಕಳ ವಿದ್ಯಾಭ್ಯಾಸವನ್ನು ಮುಂದಿಟ್ಟುಕೊಂಡು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ, ನಮ್ಮೂರಿನ ಶಾಲೆಗಳು, ವಿದ್ಯಾಥರ್ಿಗಳನ್ನು ಆಕಷರ್ಿಸುವಂತೆ ಮಾಡುವ ಮೂಲಕ ವಲಸೆ ಹೋಗುವ ಪ್ರವೃತ್ತಿ ತಪ್ಪಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ರಂಗಯ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಬೆಂಗಳೂರಿನ ಸಿ.ಎಸ್.ಬನಶಂಕರಯ್ಯ, ಆರ್.ಬಿ.ಐ ಕೆ.ಜಿ.ರಾಜೇಂದ್ರ, ಸಿ.ಗುರುಮೂತರ್ಿ, ಮು.ಶಿ.ಎಸ್.ಗಂಗಾಧರಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕುರುಬರಶ್ರೇಣಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸಿದ ಎನ್.ನರಸಿಂಹಯ್ಯ, ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಲಾಯಿತು. ವೀಣಾ ಹಾಗೂ ಹರೀಶ್ ಎಂಬ ವಿದ್ಯಾಥರ್ಿಗಳನ್ನು ಪುರಸ್ಕರಿಸಲಾಯಿತು.
ಸಮಾರಂಭದಲ್ಲಿ ವಿದ್ಯಾಥರ್ಿನಿ ಗೀತಾ ಪ್ರಾಥರ್ಿಸಿದರೆ, ರಾಜೀವ್ ಸ್ವಾಗತಿಸಿ, ದೇವರಾಜ್ ಸಂಘದ ವರದಿ ವಾಚಿಸಿದರು, ಪುರಷೋತ್ತಮ್ ನಿರೂಪಿಸಿ ಬನಶಂಕರಯ್ಯ ವಂದಿಸಿದರು.


ಅರಿವಿನ ಮೂಲಕ ಏಡ್ಸ್ ಗುಣಪಡಿಸಿ
ಚಿಕ್ಕನಾಯಕನಹಳ್ಳಿ,ಮಾ.14: ಏಡ್ಸ್ ರೋಗವನ್ನು ಅರಿವಿನ ಮೂಲಕ ಗುಣ ಪಡಿಸಬಹುದೇ ಹೊರತು ಔಷದಿ ಮೂಲಕ ಗುಣ ಪಡಿಸಲು ಸಾಧ್ಯವಿಲ್ಲ ಎಂದು ಐ.ಸಿ.ಟಿ.ಸಿ ಆಪ್ತ ಸಲಹಾಗಾರ ನವೀನ್ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ನಡೆದ ಏಡ್ಸ್ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 1983ರಲ್ಲಿ ಅಮೇರಿಕದಲ್ಲಿ ಮೊದಲು ಪತ್ತೆಯಾದ ಏಡ್ಸ್ ರೋಗ ಮನುಷ್ಯನಲ್ಲಿ ಮಾತ್ರ ಕಂಡು ಬಂದಿದೆ, ಮನುಷ್ಯನಲ್ಲಿನ ರೋಗ ನಿರೋಧಕ ಶಕ್ತಿಯನ್ನು ಕುಂದಿಸುವ ಈ ರೋಗ ಬಹಳ ಅಪಾಯಕಾರಿಯಾಗಿ ಸಾವಿನ ದವಡೆಗೆ ಎಳೆದೊಯ್ಯುತ್ತದೆ ಎಂದ ಅವರು ಏಡ್ಸ್ ರೋಗವು ಮನುಷ್ಯನಲ್ಲಿ ಕಂಡು ಬಂದರೆ ಕನಿಷ್ಠ 6ವರ್ಷ ಬದುಕುವ ಸಾಧ್ಯತೆ ಇದ್ದು ಏಡ್ಸ್ ರೋಗದಿಂದ ಹಲವಾರು ಕಾಯಿಲೆಗಳು ಕಾಣದೆ ದೇಹದೊಳಗೆ ಸೇರಿ ಚಿಕಿತ್ಸೆ ಪಡೆದರೂ ಗುಣಪಡಿಸಲಾಗುವುದಿಲ್ಲ ಎಂದರು.
ಈ ರೋಗವು ಲೈಂಗಿಕತೆ, ಏಡ್ಸ್ ರೋಗದವನ ರಕ್ತ ಪಡೆಯುವುದರಿಂದ, ಏಡ್ಸ್ ರೋಗಿ ತಾಯಿಯು ತನ್ನ ಮಗುವಿಗೆ ಹಾಲುಣಿಸುವಾಗ, ಏಡ್ಸ್ ರೋಗಿಗೆ ಬಳಸಿದ ಸಿರಂಜನ್ನು ಬೇರೊಬ್ಬ ವ್ಯಕ್ತಿಗೆ ಬಳಸುವುದರಿಂದ ರೋಗವು ಹರಡಲಿದ್ದು ಈ ರೋಗದ ಬಗ್ಗೆ ಅರಿವನ್ನು ಪಡೆಯಲು ಸಲಹೆ ನೀಡಿದರು.
ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಮಾತನಾಡಿ ಏಡ್ಸ್ ರೋಗದಿಂದ ಆಗುವ ತೊಂದರೆಗಳನ್ನು ತಿಳಿಸಿದರು.
ಸಮಾರಂಭದಲ್ಲಿ ಉಪನ್ಯಾಸಕರಾದ ಶಿವಲಿಂಗಮೂತರ್ಿ, ಸುರೇಶ್, ಚಂದ್ರಶೇಖರ್, ಪ್ರಸನ್ನಕುಮಾರ್, ಮಹೇಶ್ ಉಪಸ್ಥಿತರಿದ್ದರು.
ಗ್ರಾಹಕರು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳದಿದ್ದರೆ ಮೋಸಹೋಗುವುದು ಖಂಡಿತ
ಚಿಕ್ಕನಾಯಕನಹಳ್ಳಿ,ಮಾ.15: ಗ್ರಾಹಕರು ವಸ್ತುಗಳ ಖರೀದಿಯಲ್ಲಿ ಮೋಸಕ್ಕೆ ಒಳಗಾದಾಗ ಪ್ರತಿಯಾಗಿ ಪ್ರಶ್ನಿಸುವಂತಹ ಮನೋಭಾವ ಬೆಳೆಸಿಕೊಂಡು ನ್ಯಾಯ ದೊರಕಿಸಿಕೊಳ್ಳಬೇಕು, ಪ್ರಶ್ನಿಸಿದರೂ ಮೋಸವಾದರೆ ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಬೇಕು ಎಂದು ಜಿಲ್ಲಾ ಗ್ರಾಹಕ ಜಾಗೃತಿ ಹಕ್ಕು ಕಾರ್ಯದಶರ್ಿ ಟಿ.ಎಸ್.ನಿರಂಜನ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮದ್ಯಮ ಹಾಗೂ ಕೆಳ ವರ್ಗದವರ ಮೇಲೆ ಹೆಚ್ಚು ವಂಚನೆಗಳು ನಡೆಯುತ್ತಿದ್ದು ಈ ವಂಚನೆಗೆ ಒಳಗಾದವರು ಕೇಂದ್ರ ಮತ್ತು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ದೂರು ದಾಖಲಿಸಿದರೆ 90ದಿನಗಳ ಒಳಗಾಗಿ ನ್ಯಾಯ ದೊರಕಿಸಿ ಕೊಡುತ್ತೇವೆ ಎಂದ ಅವರು ಗ್ರಾಹಕರು ವಸ್ತುಗಳನ್ನು ಖರೀದಿಸಿದಾಗ ರಸೀತಿಗಳನ್ನು ಮರೆಯದೇ ಪಡೆಯಬೇಕು, ಅಲ್ಲಿ ಮೋಸವಾದರೆ ಗ್ರಾಹಕ ನ್ಯಾಯಾಲಯ ಗ್ರಾಹಕರ ನೆರವಿಗೆ ಬರುತ್ತದೆ ಎಂದರು.
ಗ್ರಾಹಕ ದಿನಾಚರಣೆಯನ್ನು ಜನಸಾಮಾನ್ಯರಿಗೆ ಪಸರಿಸುವದಕ್ಕೆ ಕಾಟಾಚಾರಕ್ಕೆ ನಡೆಯುತ್ತಿದ್ದ ಗ್ರಾಹಕ ದಿನಾಚರಣೆಯನ್ನು ಎಲ್ಲೆಡೆ ಸಮಾರಂಭಗಳ ಮೂಲಕ ತಿಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದ ಅವರು ನಾವು ಸಕರ್ಾರಕ್ಕೆ ಕಟ್ಟಿದಂತಹ ತೆರಿಗೆ ಹಣವನ್ನು ಹಾಗೂ ಸರಿಯಾಗಿ ಸರಬರಾಜಾಗದಂತಹ ವಿದ್ಯುತ್ ಈ ಎರಡು ಅಂಶಗಳನ್ನು ಜನಸಾಮಾನ್ಯರು ಪ್ರಶ್ನಿಸಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯ ಹೆಗಡೆ ನಗರೆ ಮಾತನಾಡಿ, ಸೇವಾ ಕ್ಷೇತ್ರದಲ್ಲಿ ಗ್ರಾಹಕರು ತುಳಿತಕ್ಕೆ ಒಳಗಾಗುತ್ತಿದ್ದಾರೆ, ತುಳಿತಕ್ಕೆ ಒಳಗಾದವರಿಗೆ ಪ್ರತಿ ಜಿಲ್ಲೆಯಲ್ಲಿರುವ ಗ್ರಾಹಕರ ವೇದಿಕೆ ನೆರವಾಗಲಿದೆ ಎಂದ ಅವರು ನಾವು ಸಾರ್ವಜನಿಕರಿಗಾಗಿ ಮಾಡುವ ಕೆಲಸಗಳಿಗೆ ಸಕರ್ಾರ ಬೆಂಬಲವಾಗಿರಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಸದಸ್ಯ ಡಿ.ಶಿವಮಹದೇವಯ್ಯ ಮಾತನಾಡಿ ಗ್ರಾಹಕ ನ್ಯಾಯಾಲಯದಲ್ಲಿ, ಬ್ಯಾಂಕ್ ಖಾತೆದಾರರಾದರೆ ಬ್ಯಾಂಕ್ ಸರಿಯಾದ ಮಾಹಿತಿ ನೀಡದಿದ್ದರೆ, ಎಲ್.ಐ.ಸಿ. ಇತ್ಯಾದಿ ಕೆಲಸಗಳಲ್ಲಿ ಸರಿಯಾದ ಮಾಹಿತಿ ಇದ್ದರೂ ಕೆಲಸ ವಿಳಂಬವಾದರೆ ನ್ಯಾಯಾಲಯ ಸುಲಭ ರೀತಿಯಲ್ಲಿ ಶೀಘ್ರವಾಗಿ ಪರಿಹಾರ ನೀಡಲಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಗಿರಿಜಾ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಭಗೀರಥ ಗ್ರಾಹಕ ಸೇವಾ ಸಂಸ್ಥೆಯ ಡಾ.ನಂದ, ಆಹಾರ ನಾಗರೀಕ ಸರಬರಾಜು ಉಪನಿದರ್ೇಶಕ ಡಿ.ಹೊಂಬಾಳೇಗೌಡ, ಇ.ಓ ಎನ್.ಎಂ.ದಯಾನಂದ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಸಿ.ಗೋವಿಂದಪ್ಪ ಉಪಸ್ಥಿತರಿದ್ದರು
ಹೆಂಜಾರೆ ಭೈರವೇಶ್ವರ ಸ್ವಾಮಿ ರಥೋತ್ಸವ ಹಾಗೂ ದನಗಳ ಜಾತ್ರೆ
ಚಿಕ್ಕನಾಯಕನಹಳ್ಳಿ,ಮಾ.15: ಹೆಂಜಾರೆ ಭೈರವೇಶ್ವರಸ್ವಾಮಿ ಮತ್ತು ಸಿದ್ದರಾಮೇಶ್ವರಸ್ವಾಮಿ, ಅತ್ತಿಮರದಮ್ಮ ಹಾಗೂ ಆಲದಮರದಮ್ಮ ದೇವರುಗಳ ರಥೋತ್ಸವ ಮತ್ತು ದನಗಳ ಜಾತ್ರೆಯನ್ನು ಇದೇ 18ರಿಂದ 23ರವರೆಗೆ ಏರ್ಪಡಿಸಲಾಗಿದೆ.
ಶೆಟ್ಟಿಕೆರೆ ಹೋಬಳಿಯ ಸಿದ್ದರಾಮನಗರ, ದುಗಡಿಹಳ್ಳಿ, ಕೊಡಲಾಗರ, ಬಾಚೀಹಲ್ಳಿ, ವಡೇರಹಳ್ಳಿ, ಬಲ್ಲೇನಹಳ್ಳಿ, ಕಾರೇಹಳ್ಳಿ, ಮಾರಸಂದ್ರ ಗ್ರಾಮಗಳಲ್ಲಿ 18ರಿಂದ 20ರವರಗೆ ಸ್ವಾಮಿಯವರಿಗೆ ಉತ್ಸವವನ್ನು ಏರ್ಪಡಿಸಿದ್ದು 21ರಂದು ಮಡಿ ರಥೋತ್ಸವ, ವೀರಗಾಸೆಕುಣಿತ, 22ರಂದು ದೊಡ್ಡರಥೋತ್ಸವ ಹಾಗೂ 23ರಂದು ಸ್ವಾಮಿಯವರು ಗಂಗಾಸ್ನಾನದ ಮೂಲಕ ಮೂಲಸ್ಥಾನಕ್ಕೆ ತೆರಳುತ್ತಾರೆ.
ರೇಣುಕ ಜಯಂತಿ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮಾ.15: 38ನೇ ವರ್ಷದ ಗುರು ರೇಣುಕ ಜಯಂತಿ ಮಹೋತ್ಸವವನ್ನು ಇದೇ 17ರಂದು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ
ಪಟ್ಟಣದ ಗುರು ರೇವಣಸಿದ್ದೇಶ್ವರ ಮಠದಲ್ಲಿ ಏರ್ಪಡಿಸಿರುವ ಜಯಂತಿಯನ್ನು ಮೂರು ದಿನಗಳ ಕಾಲ ನಡೆಸಲಾಗುವುದು, ಈ ಸಂದರ್ಭದಲ್ಲಿ ರೇಣುಕ ಸಾಂಗತ್ಯ ಪೌರಣಿಕ ಕತೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುವುದು, 17ರಂದು ಜಯಂತಿಯ ಅಂಗವಾಗಿ ಗುರುರೇವಣಸಿದ್ದೇಶ್ವಸ್ವಾಮಿ, ಬೀರಲಿಂಗೇಶ್ವರಸ್ವಾಮಿ, ಕನಕದಾಸರ ಉತ್ಸವ ವಿವಿಧ ಜಾನಪದ ಮನರಂಜನೆಗಳೊಂದಿಗೆ ಊರಿನ ಮುಖ್ಯ ಬೀದಿಗಳಲ್ಲಿ ನಡೆದು ನಂತರ ಮಠದಲ್ಲಿ ಸ್ವಾಮಿಯವರ ಹೂವಿನ ಉಯ್ಯಾಲೆ ಉತ್ಸವ ಹಮ್ಮಿಕೊಳ್ಳಲಾಗಿದೆ.
ಮಲ್ಲಿಗೆರೆ ಗ್ರಾಮದೇವತೆ ಜಾತ್ರೆ
ಚಿಕ್ಕನಾಯಕನಹಳ್ಳಿ,ಮಾ.15: ಮಲ್ಲಿಗೆರೆ ಗ್ರಾಮದ ಗ್ರಾಮದೇವತೆ ಕರಿಯಮ್ಮದೇವಿಯವರ ಜಾತ್ರಾ ಮಹೋತ್ಸವವನ್ನು ಇದೇ 18ರಿಂದ 20ರವರಗೆ ನಡೆಯಲಿದೆ.
18ರಂದು ಧ್ವಜಾರೋಹಣ ಮತ್ತು ಮಡ್ಲಕ್ಕಿ ಸೇವೆ, 19ರಂದು ಬಾನದ ಸೇವೆ, ಮತ್ತು 20ರಂದು ಸಿಡಿಸೇವೆ ಹಾಗೂ ರಾತ್ರಿ 9ಗಂಟೆಗೆ ಕೃಷ್ಣ ಸಂಧಾನ ಪೌರಾಣಿಕ ನಾಟಕವಿದ್ದು 21ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ಸಂಜೆ 7ಕ್ಕೆ ಸುಧಾ ಬರಗೂರು ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು 22ರಂದು ಗಂಗಾಸ್ನಾನದೊಂದಿಗೆ ಮಹಾ ರಥೋತ್ಸವ ಹಾಗೂ ಉಯ್ಯಾಲೆ ಉತ್ಸವ ಏರ್ಪಡಿಸಲಾಗಿದೆ.