Tuesday, August 23, 2011












ಆಥರ್ಿಕವಾಗಿ ಹಿಂದುಳಿದವರಿಗೆ ನೆರವಾಗಲು ಸಿದ್ದವಾಗಿರುವ ಡಿಸಿಸಿ ಬ್ಯಾಂಕ್ಚಿಕ್ಕನಾಯಕನಹಳ್ಳಿ,ಆ.23 :

ಆಥರ್ಿಕವಾಗಿ ಹಿಂದುಳಿದು ಬೇರೆಯವರ ಮನೆಯಲ್ಲಿ ಜೀತಕ್ಕಿರುವ ಬಡವರ್ಗದವರಿಗೆ ಬಡ್ಡಿರಹಿತ ಸಾಲನೀಡುವುದಾಗಿ ಕೆ.ಎನ್.ರಾಜಣ್ಣನವರು ತಿಳಿಸಿರುವುದಾಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದರು. ಪಟ್ಟಣದ ಮಾರುತಿ ನಗರದಲ್ಲಿ ನಡೆದ ದಿ.ದೇವರಾಜ ಅರಸು ನೆನಪು ದಿನದ ಹಾಗೂ ಸಾಲಸೌಲಭ್ಯ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಅರಸುರವರು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ ದಾರ್ಶನಿಕರು ಅವರ ನೆನಪಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು ಹಿಂದುಳಿದ ವರ್ಗವಾದ ದಕ್ಕಲಿಗರು, ಸುಡುಗಾಡು ಸಿದ್ದರು ಇಂತಹ ಜನಾಂಗದ ಅಭಿವೃದ್ದಿಗಾಗಿ ಜಿಲ್ಲಾ ಬ್ಯಾಂಕ್ ಶ್ರಮಿಸುತ್ತಿದೆ ಅಲ್ಲದೆ ಈ ಜನಾಂಗಗಳಿಗೆ ಸಂಘಗಳನ್ನು ರಚಿಸಿ ಸಾಲಸೌಲಭ್ಯ ನೀಡುವ ಮೂಲಕ ಈ ಜನಾಂಗದ ಸಂಘಟನೆಗೆ ಶ್ರಮಿಸುತ್ತಿರುವುದಾಗಿ ಹಾಗೂ ಈ ಜನಾಂಗದಲ್ಲಿ 24 ಕುಟುಂಬಗಳಿದ್ದು 2 ಸಂಘ ರಚಿಸಿ ಕುಟುಂಬಕ್ಕೆ ತಲಾ ಹತ್ತುಸಾವಿರದಂತೆ ನೀಡಿ ಅವರಿಗೆ ಆಥರ್ಿಕವಾಗಿ ಸಹಾಯ ಮಾಡುತ್ತಿರುವದಾಗಿ ತಿಳಿಸಿದ ಅವರು ತಾಲ್ಲೂಕಿನಾದ್ಯಂತ ಸುಮಾರು 6 ಕೋಟಿರೂಗಳಷ್ಠು ಸ್ವಸಹಾಯ ಸಂಘಗಳಿಗೆ ಜಿಲ್ಲಾ ಬ್ಯಾಂಕಿನಿಂದ ಸಾಲ ಕೊಡಿಸಿರುವುದಾಗಿ ತಿಳಿಸಿದರು. ಅಲೆಮಾರಿ ಜನಾಂಗದ ಮುಖಂಡ ಡಾ.ರಘುಪತಿ ಮಾತನಾಡಿ ಭಾರತ ದೇಶದಲೆಲ್ಲಾ ಅತ್ಯುತ್ತಮ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ ದೇವರಾಜು ಅರಸುರವರು ಧ್ವನಿ ಇಲ್ಲದ, ಹಿಂದುಳಿದ ಜನಾಂಗದ ಅಭಿವೃದ್ದಿಗಾಗಿ ಶ್ರಮಿಸಿದವರು ಎಂದ ಅವರು ಜಿಲ್ಲಾ ಬ್ಯಾಂಕ್ ಅಲೆಮಾರಿ ಮಹಿಳೆಯರಿಗೆ ಆಥರ್ಿಕವಾಗಿ ಸಹಾಯ ಮಾಡುತ್ತಿರುವುದು ಈ ಸಮಾಜದ ಸಂಘಟನೆಯ ಬಲವರ್ಧನೆಗೆ ಮೆಟ್ಟಿಲಾಗಿದ್ದು ಸಂಘಟನೆಯವರು ತಮ್ಮ ಮಕ್ಕಳಿಗೆ ಶಾಲೆಗೆ ಕಳುಹಿಸಿ ಜ್ಞಾನಾರ್ಜನೆ ಮಾಡುವ ಮೂಲಕ ಸಂಘಟಿಸಬೇಕು ಎಂದರು. ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು ಮಾತನಾಡಿ ಅಲೆಮಾರಿ ಜನಾಂಗಕ್ಕೆ ಶಾಸಕರು 40 ಮನೆ ನಿಮರ್ಿಸಲು ತಿಳಿಸಿದ್ದು ಮುಂದಿನ ದಿನಗಳಲ್ಲಿ ಅಲೆಮಾರಿ ನಿವೇಶನದ ಮನೆಗಳ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಬೀರಲಿಂಗಯ್ಯ, ಪುರಸಭಾ ಸದಸ್ಯ ರಾಜು, ಗೋ.ನಿ.ವಸಂತ್ಕುಮಾರ್, ಕೇಶವಮೂತರ್ಿ, ಶಾಮ್ ಮುಂತಾದವರಿದ್ದರು.