Friday, May 31, 2013


ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಜಾಗೃತರಾಗಿ
ಚಿಕ್ಕನಾಯಕನಹಳ್ಳಿ,ಮೇ.31 : ಸಕರ್ಾರದ ಯಾವುದೇ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಜಾಗೃತರಾಗಿದ್ದಷ್ಟೂ ಕಾಮಗಾರಿಯ ಕಾರ್ಯದಕ್ಷತೆ ಹಚ್ಚಲಿದೆ ಎಂದು ಶಾಸಕ ಸಿ.ಬಿ. ಸುರೇಶ್ಬಾಬು ತಿಳಿಸಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ನವಿಲೆ ಗ್ರಾಮದ ಹೆಬ್ಬಾಗಿಲಿನಿಂದ ಕೋಟೆಯವರೆಗೂ ಕಾಂಕ್ರೀಟ್ ರಸ್ತೆ ನಿಮರ್ಾಣದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ ಸಕರ್ಾರ ಗ್ರಾಮಾಭಿವೃದ್ದಿಗಾಗಿ ಹೆಚ್ಚಿನ ಅನುದಾನ ನೀಡುತ್ತಿದೆ ಆದರೆ ಕಾಮಗಾರಿ ಗುಣಮಟ್ಟದ ದೋಶದಿಂದ ಕಾ


ಮಗಾರಿಗಳ ಕಾರ್ಯಕ್ಷಮತೆ ಕುಂಟಿತಗೊಳ್ಳುತ್ತಿವೆ. ಸಕರ್ಾರಿ ಅನುದಾನಗಳ ಸದ್ಭಳಕೆಯಾಗುವಂತೆ ಮಾಡುವುದು ಆಯಾವ್ಯಾಪ್ತಿಯ ಜನರ ಮೇಲಿನ ಜವಾಬ್ದಾರಿಯಾಗಿದೆ ಎಂದರು.
 ಗ್ರಾಮದ ಯಾವುದೇ ಕಾಮಗಾರಿಗಳ ಬಗ್ಗೆ ಆಯಾ ಗ್ರಾಮದ ಸ್ಥಳೀಯರು ನಮ್ಮ ಸ್ವಂತ ಕೆಲಸವೆಂಬಂತೆ ಗುಣಮಟ್ಟ ವೀಕ್ಷಣೆ ಮಾಡಬೇಕು. ಯಾವುದೇ ಸಂದರ್ಭದಲ್ಲಿ ಲೋಪಕಂಡು ಬಂದರೆ ಸಂಬಂಧಿಸಿದ ಕಂಟ್ರಾಕ್ಟರ್ ಹಾಗೂ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ಸರಿಯಾಗುವವರೆಗೂ ಧೃಡತೆಯಿಂದ ನಿಲ್ಲಬೇಕೆಂದರು. ಇದರ ಜೊತೆಗೆ ಸಿಮೆಂಟ್ ಕಾಮಗಾರಿಗಳಲ್ಲಿ ಕ್ಯೂರಿಂಗ್ ಮಾಡುವಲ್ಲಿ ಮತ್ತು ರಸ್ತೆ ಹಾಗೂ ಚರಂಡಿ ಕಾಮಗಾರಿಗಳನ್ನು ಮಾಡುವ ಸಂದರ್ಭದಲ್ಲಿ ಒತ್ತುವರಿಗಳು ಮತ್ತು ಇನ್ನಿತರ ಅಡಚಣೆಗಳನ್ನು ನಿವಾರಿಸುವಲ್ಲಿ ಸಹಕರಿಸಬೇಕೆಂದರು. 
ಈ ಸಂದರ್ಭದಲ್ಲಿ ಇಂಜಿನಿಯರ್ ಪುರುಷೋತಮ್, ಮುಖಂಡರಾದ ಚನ್ನಿಗಪ್ಪ, ಮಧುಸೂಧನ್, ಲೋಕೇಶ್ ಮುಂತಾದವರಿದ್ದರು.

                                             

Thursday, May 30, 2013


ಚರಂಡಿಯ ಸೇತುವೆಯಲ್ಲಿ ಗುಂಡಿ : ಸಾರ್ವಜನಿಕರಿಗೆ
ತೊಂದರೆ  

ಚಿಕ್ಕನಾಯಕನಹಳ್ಳಿ : ಪಟ್ಟಣದ ದೇಶೀಯ ವಿದ್ಯಾಪೀಠ ಶಾಲೆಯ ಬಳಿ ಇರುವ ಚರಂಡಿಯ ಸೇತುವೆಗೆ ಗುಂಡಿ ಬಿದ್ದಿದ್ದು, ಶಾಲೆಗೆ ಹೋಗುವ ಮಕ್ಕಳಿಗೆ ಇದರಿಂದ ತೀವ್ರ ತೊಂದರೆಯಾಗಿದೆ.
ನಿತ್ಯ ನೂರಾರು ಮಕ್ಕಳು ಶಾಲೆಗೆ ಸೈಕಲ್ ಮೇಲೆ ಹಾಗೂ ನಡೆದುಕೊಂಡು ಈ ದಾರಿಯಲ್ಲಿ ಹೋಗುತ್ತಾರೆ ಅಲ್ಲದೆ ಡಿವಿಪಿ ಶಾಲಾ ಮೈದಾನಕ್ಕೆ ಬೆಳಗಿನ ಜಾವ ಹಾಗೂ ಸಂಜೆ ನಿವೃತ್ತ ನೌಕರರು, ವಯೋವೃದ್ದರು ಸೇರಿದಂತೆ ನೂರಾರು ಜನ ವಾಯು ವಿಹಾರಕ್ಕೆ ತೆರಳುತ್ತಾರೆ, ಆಕಸ್ಮಿಕವಾಗಿ ಗುಂಡಿಗೆ ಬಿದ್ದರೆ ಶಾಲಾ ಮಕ್ಕಳು ಹಾಗೂ ವೃದ್ದರ ಕೈ ಕಾಲು ಮುರಿಯುವ ಭೀತಿಯಿರುವುದರಿಂದ ಕೂಡಲೇ ಅಧಿಕಾರಿಗಳು ಸೇತುವೆಯನ್ನು ರಿಪೇರಿ ಮಾಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ವಿದ್ಯುತ್ ಕಂಬದಲ್ಲಿ ಬಿರುಕು 

ಚಿಕ್ಕನಾಯಕನಹಳ್ಳಿ : ಪಟ್ಟಣದ ದಶಾವತಾರ ದೇವಾಲಯದ ಮುಂಭಾಗದ ರಸ್ತೆಯಲ್ಲಿರುವ ಅತ್ಯಂತ ಹಳೆಯದಾದ ಸಿಮೆಂಟಿನ ವಿದ್ಯುತ್ ಕಂಬ ಬಿರುಕುಬಿಟ್ಟಿದೆ.
 ಕಂಬದ ತಳಭಾಗ ಕಬ್ಬಿಣದ ಸಲಾಕೆಗಳ ಮೇಲೆ ನಿಂತಿದ್ದು ಮಳೆಗಾಲವಾದ್ದರಿಂದ ಮಳೆ ಬಿರುಗಾಳಿಗೆ ಕಂಬ ಮುರಿದು ಬೀಳುವ ಸಂಭವವಿದ್ದು ಈ ಭಾಗದಲ್ಲಿ ನಿತ್ಯ ನೂರಾರು ಜನರು ತಮ್ಮ ಮನೆಗಳಿಗೆ ಹೋಗುವಾಗ ಹಾಗೂ ಸುತ್ತಮುತ್ತಲು ವಾಸದ ಮನೆಗಳಿರುವುದರಿಂದ ಆಕಸ್ಮಿಕವಾಗಿ ವಿದ್ಯುತ್ ಕಂಬ ಮುರಿದು ಬಿದ್ದರೆ ಪ್ರಾಣ ಹಾನಿ ಸಂಭವಿಸುವ ಮುನ್ನ ವಿದ್ಯುತ್ ಕಂಬವನ್ನು ತೆಗೆದು ಹೊಸ ವಿದ್ಯುತ್ ಕಂಬವನ್ನು ನೆಡುವಂತೆ ಕೆಪಿಟಿಎಸ್ಎಲ್ ಅಧಿಕಾರಿಗಳಿಗೆ ಈ ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ತಿಪ್ಪೆಗುಂಡಿಯಾಗಿ ಮಾರ್ಪಟ್ಟ ಮತಿಘಟ್ಟ ಗ್ರಾಮ

ಚಿಕ್ಕನಾಯಕನಹಳ್ಳಿ,ಮೇ.30: ಸುಮಾರು 650 ಮನೆಗಳನ್ನು ಹೊಂದಿರುವ ಮತಿಘಟ್ಟ ಗ್ರಾಮದ ಊರಿನ ಒಳಭಾಗದಲ್ಲಿ ಹೆಚ್ಚಿನ ತಿಪ್ಪೆಗುಂಡಿಗಳ ಸೃಷ್ಠಿಯಿಂದ ಸೊಳ್ಳೆಗಳ ವಾಸಸ್ಥಾನವಾಗಿ ಡೆಂಗ್ಯೂ, ಮಲೇರಿಯದಂತಹ ರೋಗಗಳನ್ನು ತರಲಿವೆ ಎಂದು ಮತಿಘಟ್ಟ ಗ್ರಾಮಸ್ಥರು ದೂರಿದ್ದಾರೆ.
ತಾಲ್ಲೂಕಿನ ಹಂದನಕೆರೆ ಹೋಬಳಿಯ ಮತಿಘಟ್ಟ ಗ್ರಾಮ ಸುಮಾರು 650 ಮನೆಗಳನ್ನು ಹೊಂದಿದೆ, ಈಗಾಗಲೇ ಹಂದನಕೆರೆ ಹೋಬಳಿಯ ಸುತ್ತಮುತ್ತಲಿನಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ, ಮತಿಘಟ್ಟ ಗ್ರಾಮದಲ್ಲಿರುವ ತಿಪ್ಪೆಗುಂಡಿಗಳಿಂದಾಗಿ ಈ ಭಾಗದಲ್ಲಿ ಸೊಳ್ಳೆಗಳ ತಾಣ ಹೆಚ್ಚಾಗಿವೆ. ತಿಪ್ಪೆಗಳ ವಾಸನೆಯಿಂದ ಜನತೆ ವಾಸಿಸಲೂ ಆಗದಂತಾಗಿದೆ ಎಂದು ದೂರಿರುವ ಮತಿಘಟ್ಟ ಗ್ರಾಮಸ್ಥರು ಇದರಿಂದ ಈ ಭಾಗದಲ್ಲಿ ವಾಸಿಸುವುದೇ ಕಷ್ಟವಾಗಿದ್ದು, ಮಲೇರಿಯ ಡೆಂಗ್ಯೂನಂತಹ ಕಾಯಿಲೆಗೆ ತುತ್ತಾಗುವ ಮುನ್ನ ಸ್ಥಳೀಯ ಆಡಳಿತ ಈ ಬಗ್ಗೆ ಗಮನಹರಿಸಿ ಗ್ರಾಮದ ನೈರ್ಮಲ್ಯವನ್ನು ಕಾಪಾಡುವಂತೆ ಒತ್ತಾಯಿಸಿದ್ದಾರೆ. 

ಕುಪ್ಪೂರು ಭಾಗಕ್ಕೆ ಸಕರ್ಾರಿ ಬಸ್ ಬಿಡಲು ಆಗ್ರಹ

ಚಿಕ್ಕನಾಯಕನಹಳ್ಳಿ,ಮೇ.30 : ತಾಲ್ಲೂಕಿನ ಕುಪ್ಪೂರು ಸುತ್ತಮುತ್ತಲಿನಿಂದ ಚಿಕ್ಕನಾಯಕನಹಳ್ಳಿ, ತಿಪಟೂರು, ತುಮಕೂರಿಗೆ ಸಂಚರಿಸುವ ವಿದ್ಯಾಥರ್ಿಗಳು, ಉದ್ಯೋಗಿಗಳು ಸಾರ್ವಜನಿಕರು ಪ್ರತಿದಿನವೂ ಕೆಎಸ್ಆರ್ಟಿಸಿ ಇಲಾಖೆಗೆ ಬೈಗುಳದ ಮಳೆಯನ್ನೇ ಹರಿಸುತ್ತಿದ್ದು ಈ ಭಾಗಕ್ಕೆ ಸಕರ್ಾರಿ ಬಸ್ ಬಿಡಲು ಒತ್ತಾಯಿಸಿದ್ದಾರೆ.
  ತಾಲ್ಲೂಕಿನಿಂದ ಕುಪ್ಪೂರು ಮತ್ತು ಈ ಭಾಗದ ಸುತ್ತಮುತ್ತಲಿನ ಗ್ರಾಮಕ್ಕೆ ತೆರಳಲು ಹಾಗೂ ಗ್ರಾಮದಿಂದ ಪಟ್ಟಣಕ್ಕೆ ಬರಲು ಅಲ್ಲಿನ ಗ್ರಾಮಸ್ಥರು ಪ್ರತಿದಿನ ಆಟೋರಿಕ್ಷಕ್ಕಾಗಿ ಮತ್ತು  ಆಗೊಮ್ಮೆ, ಈಗೊಮ್ಮೆ ಇರುವ ಖಾಸಗಿ ಬಸ್ಗಳಿಗೆ ಪರದಾಡುವಂತಾಗಿದೆ.
 ಚಿಕ್ಕನಾಯಕನಹಳ್ಳಿಯಿಂದ ಕುಪ್ಪೂರಿಗೆ ಹೋಗುವ ಭಾಗದಲ್ಲಿ ಸುಮಾರು 16ಗ್ರಾಮಗಳಿದ್ದು ಈ ಭಾಗದ ಜನರು ಪ್ರತಿದಿನ ಸಂಚರಿಸಲು ಬಸ್ ಸಮಸ್ಯೆ ಎದುರಿಸುತ್ತಿದ್ದಾರೆ ಈ ಭಾಗದಲ್ಲಿ ಬರುವ ಖಾಸಗಿ ಬಸ್ಗಳ ಸಂಖ್ಯೆ ಕಡಿಮೆಯಿದ್ದು,  ಕೆಎಸ್ಆರ್ಟಿಸಿ ಬಸ್ ಬಿಡಲು ಒತ್ತಯಿಸಿದ್ದಾರೆ.
ಸಾರ್ವಜನಿಕರು ಈ ಸಮಸ್ಯೆ ಬಗ್ಗೆ ಹಲವು ಬಾರಿ ತಿಪಟೂರು ಕೆಎಸ್ಆರ್ಟಿಸ ಡಿಪೋ, ಮೇನೇಜರ್ ರವರಿಗೆ ಸಮಸ್ಯೆ ನಿವಾರಿಸುವಂತೆ ಅಜರ್ಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರು ದೂರುತ್ತಾರೆ.  ಇಲ್ಲಿಯವರೆಗೆ ಬಂದಂತಹ ಯಾವ ಶಾಸಕರು ಹಾಗೂ ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಯತ್ನ ಪಡಲೇ ಇಲ್ಲ ಎಂದು ಗ್ರಾಮಸ್ಥರು ಆರೊಪಿಸಿದ್ದಾರೆ. 

Wednesday, May 29, 2013


ಚಿ.ನಾ.ಹಳ್ಳಿ ತಾ.ಪಂ: ಅಧ್ಯಕ್ಷ, ಉಪಾಧ್ಯಕ್ಷರ ರಾಜಿನಾಮೆ, ಪ್ರಭಾರ ಅಧ್ಯಕ್ಷರಾಗಿ ಸ್ಥಾಯಿ ಸಮಿತಿ ಅಧ್ಯಕ್ಷ
ಚಿಕ್ಕನಾಯಕನಹಳ್ಳಿ,ಮೇ.29 : ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಎಂ.ಎಂ.ಜಗದೀಶ್ ಹಾಗೂ ಉಪಾಧ್ಯಕ್ಷೆ ಎಂ.ಇ.ಲತಾರವರು ತಮ್ಮ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಅಧ್ಯಕ್ಷ ಎಂ.ಎಂ.ಜಗದೀಶ್ ಮೇ 10ರಂದು ಹಾಗೂ ಉಪಾಧ್ಯಕ್ಷೆ ಲತಾ ಮೇ 4ರಂದು ರಾಜೀನಾಮೆ ಸಲ್ಲಿಸಿದ್ದು ಮೇ 20ರಂದು ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.
ಕನರ್ಾಟಕ ಪಂಚಾಯತ್ರಾಜ್ ಅಧಿನಿಯಮ 1993ರ ಸೆಕ್ಷನ್ 140(1)ರಂತೆ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ ದಿನಾಂಕದಿಂದ 15ದಿನಗಳೊಳಗೆ ರಾಜೀನಾಮೆಯನ್ನು ವಾಪಸ್ ಪಡೆಯಲು ಅವಕಾಶವಿದ್ದು, ಮೇ 10ರಂದು ರಾಜೀನಾಮೆ ಸಲ್ಲಿಸಿದ್ದು ಮೇ 24ಕ್ಕೆ 15ದಿನಗಳು ಮುಗಿದಿರುತ್ತದೆ, ಈ ಅವಧಿಯಲ್ಲಿ ಅಧ್ಯಕ್ಷರು ರಾಜೀನಾಮೆಯನ್ನು ಹಿಂದಕ್ಕೆ ಪಡೆದಿರುವುದಿಲ್ಲ. ಕನರ್ಾಟಕ ಪಂಚಾಯತ್ರಾಜ್ ಅಧಿನಿಯಮ 1993ರ ಸೆಕ್ಷನ್ 140(1)ರಡಿ ಎಂ.ಎಂ.ಜಗದೀಶ್ ತಾ.ಪಂ.ಅಧ್ಯಕ್ಷರ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ತಕ್ಷಣ ಜಾರಿಗೆ ಬರುವಂತೆ ಅಂಗೀಕರಿಸಲಾಗಿದ್ದು, ಮೇ 25ರಿಂದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನ ತೆರವಾಗಿದೆ ಎಂದು ತುಮಕೂರು ಪ್ರಭಾರ ಜಿಲ್ಲಾಧಿಕಾರಿ ಆರ್.ಎಸ್.ಪೆದ್ದಪ್ಪಯ್ಯ ಘೋಷಿಸಿದ್ದಾರೆ. ನೂತನ ಅಧ್ಯಕ್ಷರ ಆಯ್ಕೆಯಾಗುವವರೆಗೆ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ನಿರಂಜನಮೂತರ್ಿ ತಾ.ಪಂ.ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಬಿದಿರುಕೊಂತಮ್ಮ ದೇವಿಯ 6ನೇ ವರ್ಷದ ವಾಷರ್ಿಕೋತ್ಸವ
ಚಿಕ್ಕನಾಯಕನಹಳ್ಳಿ,ಮೇ.29 : ಪಟ್ಟಣದ ಶ್ರೀ ಬಿದಿರುಕೊಂತಮ್ಮ ಲಕ್ಷ್ಮೀದೇವಿ ಹಾಗೂ ಮಾಸ್ತಮ್ಮ ದೇವಿಯವರ 6ನೇ ವರ್ಷದ ವಾಷರ್ಿಕೋತ್ಸವವು ಇದೇ 30 ಹಾಗೂ 31ರಂದು ನಡೆಯಲಿದೆ.
ಶ್ರೀ ಬನಶಂಕರಿ ಅಮ್ಮನವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು 30ರ ಗುರುವಾರ ಸಂಜೆ 6.30ಕ್ಕೆ ಅನುಘ್ನೆ, ಸಂಕಲ್ಪ, ಗಣಪತಿ ಪೂಜೆ, ಪುಣ್ಯಾಹ, ನವಗ್ರಹಪೂಜೆ, ಮೃತ್ಯುಂಜಯಪೂಜೆ, ಕಳಶಸ್ಥಾಪನೆ, ಆರಾಧನೆ, ಗಣಪತಿಹೋಮ, ನವಗ್ರಹಹೋಮ, ಮೃತ್ಯುಂಜಯ ಹೋಮ, ಹಾಗೂ 31ರ ಶುಕ್ರವಾರ ಪ್ರಾತಃಕಾಲ ಸುಪ್ರಭಾತ, ಪ್ರಧಾನ ಕುಂಭಾರಾಧನೆ, ಅಷ್ಟಲಕ್ಷ್ಮಿ ಹೋಮ, ಪ್ರಾಯಶ್ಚಿತ್ತ ಹೋಮ, ಮಧ್ಯಾಹ್ನ 12.05ಕ್ಕೆ ಪೂಣರ್ಾಹುತಿ, ಬಲಿ ಪ್ರಧಾನ, ಕಳಸಾಭಿಷೇಕ, ಅಲಂಕಾರ, 1.15ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗಿಸಲಾಗುವುದು.
ಮತಿಘಟ್ಟ ಗ್ರಾ.ಪಂ.ಸಾಮಾನ್ಯ ಸಭೆ
ಚಿಕ್ಕನಾಯಕನಹಳ್ಳಿ,ಮೇ.29 : 13ನೇ ಹಣಕಾಸು ಯೋಜನೆಯಲ್ಲಿ ಲಭ್ಯವಿರುವ ಆರು ಲಕ್ಷದ ಅರವತ್ತನಾಲ್ಕು ಸಾವಿರ ರೂ.ಗಳನ್ನು ವಿವಿಧ ಕಾಮಗಾರಿ ನೀಮರ್ಾಣಕ್ಕೆ ಹಾಗೂ ಶೌಚಾಲಯ ನಿಮರ್ಾಣಕ್ಕೆ ಹಣವನ್ನು ಮೀಸಲಿಡಲು ತಾಲ್ಲೂಕಿನ ಮತಿಘಟ್ಟ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀಮರ್ಾನಿಸಲಾಯಿತು.
  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತಿಘಟ್ಟ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸಭೆ ಗ್ರಾ.ಪಂ. ಅಧ್ಯಕ್ಷರಾದ ಸಿದ್ದರಾಮಯ್ಯ  ಅಧ್ಯಕ್ಷತೆಯಲ್ಲಿ ನಡೆಯಿತು, ಈಗಾಗಲೆ 240 ಶೌಚಾಲಯಗಳನ್ನು ನಿಮರ್ಾಣ ಮಾಡಲಾಗಿದ್ದು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಹದಿನೈದು ಸಾವಿರ ರೂಗಳನ್ನು  ರೂಪಾಯಿಗಳನ್ನು ನಿಗಧಿಪಡಿಸಲಾಯಿತು.
ಎನ್ಆರ್ಇಜಿಗೆ ಸಂಬಂಧಿಸಿದಂತೆ 64ಲಕ್ಷರೂಗಳಿಗೆ ಕ್ರಿಯಾಯೋಜನೆ ಮಾಡಿದ್ದು ತೋಟಗಾರಿಕೆ, ಜಲಾನಯನ, ಶೌಚಾಲಯ ಮುಂತಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಾರ್ಯಗಳನ್ನು ಪೂರೈಸಲಾಗಿದೆ. ಇಂದಿರಾ ಆವಾಜ್ ಯೋಜನೆಯಲ್ಲಿ 26ಮನೆ, ಅಂಬೇಡ್ಕರ್ ಆವಾಸ್ ಯೋಜನೆಯಲ್ಲಿ 15 ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಕಾರ್ಯದಶರ್ಿ ಗಂಗಾಧರಯ್ಯ ತಿಳಿಸಿದರು.
ಉಪಾಧ್ಯಕ್ಷರಾದ ನಾಗಮ್ಮ ಹಾಗೂ ಸದಸ್ಯರು ಮತ್ತು ಕಾರ್ಯದಶರ್ಿ ಹೆಚ್.ಗಂಗಾಧರಯ್ಯನವರು ಸಭೆಯಲ್ಲಿ ಪಾಲ್ಗೊಂಡಿದ್ದರು. 
 ಡೆಂಗ್ಯೂ ಪ್ರಕರಣ ಪತ್ತೆ: ತಾಲೂಕಿನಾದ್ಯಂತ ಕ್ರಿಮಿನಾಶಕ ಸಿಂಪಡಿಸಲು ಶಾಸಕರಿಂದ ಅಧಿಕಾರಿಗಳಿಗೆ ತಾಕೀತು.
ಚಿಕ್ಕನಾಯಕನಹಳ್ಳಿ,ಮೇ.27: ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ತಾಲೂಕಿನಾದ್ಯಂತ  ಕ್ರಿಮಿನಾಶಕ ಸಿಂಪಡಿಸಬೇಕು, ಈ ಕಾರ್ಯಕ್ಕೆ ಒಂದು ದಿನ ನಿಗಧಿಪಡಿಸಿ ಆ ದಿನವೇ ಎಲ್ಲಾ ಪಂಚಾಯಿತಿಗಳಲ್ಲಿನ ಗ್ರಾಮಗಳಿಗೆ, ಪುರಸಭೆಯ ವಾಡರ್್ಗಳಿಗೆ ಅಬೇಕ್ ಕ್ರಿಮಿನಾಶಕ ಸಿಂಪಡಿಸಿ ಒಂದು ದಿನಕ್ಕೆ ಪೂರ್ಣಗೊಳದಿದ್ದರೆ ಎರಡು ದಿನ ಬಳಸಿಕೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಅಧಿಕಾರಿಗಳಿಗೆ ತಾಕೀತು ಮಾಡಿದರು. 
ತಾ.ಪಂ. ಸಭಾಂಗಣದಲ್ಲಿ ನಡೆದ  ಸಭೆಯಲ್ಲಿ ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ.ನ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ಕಾರ್ಯ ತುತರ್ಾಗಿ ಆಗಬೇಕು ಎಂದರು. 
ತಾಲೂಕಿನ ವೈದ್ಯರು ಸಮರ್ಪಕವಾಗಿ ಕೆಲಸ ಮಾಡಬೇಕು, ಹುಳಿಯಾರಿಗೆ ಈಗಿರುವ ವೈದ್ಯರ ಜೊತೆಗೆ ಇನ್ನೊಬ್ಬರು ಸಮರ್ಥ ವೈದ್ಯರನ್ನು ನೇಮಿಸಿ ಅಲ್ಲಿಗೆ ಹಳ್ಳಿ ಜನರು  ಆರೋಗ್ಯ ತಪಾಸಣೆಗೆ ಹೆಚ್ಚು ಬರುತ್ತಾರೆ,  ಈ ಬಗ್ಗೆ ಹೆಚ್ಚು  ಕಾಳಜಿವಹಿಸಬೇಕೆಂದು ಎಂದರು. ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿರುವ ಬಗ್ಗೆ  ತಾಲೂಕು ವೈದ್ಯಾಧಿಕಾರಿಗಳು ಸಭೆಗೆ ಸಂಪೂರ್ಣ ಮಾಹಿತಿ ನೀಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ತಾಲೂಕಿನಲ್ಲಿ ಏಳು ಡೆಂಗ್ಯೂ ಪ್ರಕರಣಗಳಿವೆ ಎಂದು ಶಂಕಿಸಲಾಗಿದ್ದು ಇದರಲ್ಲಿ, ಒಬ್ಬ ಬಾಲಕಿ ಸಾವನ್ನಪ್ಪಿದ್ದು ಮೂವರು ಚಿಕಿತ್ಸೆ ಪಡೆಯುತ್ತಿದ್ದು, ಮೂವರು ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕಾತ್ರಿಕೆಹಾಳ್, ಕಂಪನಹಳ್ಳಿ, ಸೋರಲಮಾವು ಗ್ರಾಮದಲ್ಲಿನ ಮೂವರು ಚೇತರಿಸಿಕೊಂಡಿದ್ದು, ಹುಳಿಯಾರು, ಚಿ.ನಾ.ಹಳ್ಳಿಯಲ್ಲಿನ ಡೆಂಗ್ಯೂ ಪೀಡಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
 ಸಭೆಯಲ್ಲಿದ್ದ ತಾ.ಪಂ.ಸದಸ್ಯೆ ಸವಿತಾ ಮಾತನಾಡಿ, ನಮ್ಮ ಭಾಗದ ಗ್ರಾ.ಪಂ.ಗಳಲ್ಲಿ ವರ್ಷವಾದರೂ ನೀರಿನ ಸಿಸ್ಟನ್ಗಳನ್ನು ಸ್ವಚ್ಚಗೊಳಿಸುವುದಿಲ್ಲ, ಮೂರು ವರ್ಷವಾದರೂ ಚರಂಡಿಗಳನ್ನು ತಿರುಗಿ ನೋಡುವುದಿಲ್ಲ ಈಗಾದರೆ ರೋಗಗಳು ಬರುವುದಿಲ್ಲವೇ ಎಂದರು. ಈ ಮಾತಿಗೆ ಜಿ.ಪಂ. ಸದಸ್ಯೆ ಮಂಜುಳಾ ಗವಿರಂಗಯ್ಯ ಧ್ವನಿಗೂಡಿಸಿ ಇಡೀ ಹೋಬಳಿಯಲ್ಲಿ ಈ ಸಮಸ್ಯೆ ಇದೆ ಎಂದರು. 
ಈ ಸಮಸ್ಯೆಗೆ ಶಾಸಕ ಸಿ.ಬಿ.ಸುರೇಶ್ ಬಾಬು ಪ್ರತಿಕ್ರಿಯಿಸಿ ಸಭೆಯಲ್ಲಿದ್ದ ಇ.ಓ.ರವರಿಗೆ ಶೀಘ್ರವೇ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಇ.ಓ. ತಿಮ್ಮಯ್ಯ ಮಾತನಾಡಿ ಇದೇ 29ರಂದು ಗ್ರಾ.ಪಂ. ಅಧ್ಯಕ್ಷರು, ಪಿ.ಡಿ.ಓ. ಹಾಗೂ ಕಾರ್ಯದಶರ್ಿಗಳ ಸಭೆ ಕರೆದು ಈ ಬಗ್ಗೆ ಕೂಲಂಕುಶವಾಗಿ ನಿದರ್ೇಶನ ನೀಡುವುದಾಗಿ ತಿಳಿಸಿದರು.   (ಪೋಟೊ ಇದೆ)
ಸುದ್ದಿ:2
ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ತಾಲೂಕು ಆಡಳಿತದ ಸಹಕಾರವಿದೆ: ಶಾಸಕ ಸಿ.ಬಿ.ಎಸ್
ಚಿಕ್ಕನಾಯಕನಹಳ್ಳಿ,ಮೇ.27 : ಜೂನ್ ತಿಂಗಳ 28,29,30ರಂದು ಪಟ್ಟಣದಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥಿತವಾಗಿ, ವಿಜೃಂಭಣೆಯಿಂದ ನಡೆಸಲು ಅಗತ್ಯವಾದ  ಎಲ್ಲಾ ಜವಬ್ದಾರಿಗಳನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾಹಿತ್ಯ ಪರಿಷತ್ನ ಪದಾಧಿಕಾರಿಗಳನ್ನು ಒಳಗೊಂಡಂತೆ ಇರುವ ವಿವಿಧ ಸಮಿತಿಗಳು ಜವಬ್ದಾರಿಯುತವಾಗಿ  ಕೆಲಸ ನಿರ್ವಹಿಸುವಂತೆ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. 
  ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಅಂಗವಾಗಿ ಶಾಸಕ ಸಿ.ಬಿ.ಸುರೇಶ್ಬಾಬುರವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಧ್ಯಕ್ಷರುಗಳು ಹಾಗೂ ಸಾಹಿತ್ಯಾಭಿಮಾನಿಗಳು ಸಭೆಗೆ ಹಾಜರಾಗಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
ಸಮ್ಮೇಳನಕ್ಕೆ ವಿವಿಧ ತಾಲ್ಲೂಕುಗಳಿಂದ ಆಗಮಿಸುವವ ಸಾಹಿತ್ಯಾಸಕ್ತರಿಗೆ ಉಳಿದುಕೊಳ್ಳಲು ಹಾಸ್ಟಲ್ಗಳು, ಶಾಲೆ ಹಾಗೂ ಕಾಲೇಜು ಬಳಸಿಕೊಳ್ಳಲು ಹಾಗೂ ಸಮ್ಮೇಳನದ ವಿವಿಧ ಖಚರ್ಿನ ಮೊತ್ತಕ್ಕೆ ಬೇಕಾಗುವ ಹಣಕ್ಕಾಗಿ ದೇಣಿಗೆ ಸಂಗ್ರಹಿಸುವ ಬಗ್ಗೆ ತೀಮರ್ಾನಿಸಲಾಯಿತು.
ಸಮ್ಮೇಳನದಲ್ಲಿ ಶಿಕ್ಷಣ, ಮಾಧ್ಯಮ, ಸಾಮಾಜಿಕ, ಕಲೆ, ಕೃಷಿ, ವಿಜ್ಞಾನ ಕ್ಷೇತ್ರಗಳಲ್ಲಿ  ಸೇವೆ ಸಲ್ಲಿಸಿರುವ ಪ್ರಮುಖರಿಗೆ ಸನ್ಮಾನಿಸಲು ಸೂಚಿಸಿದರಲ್ಲದೆ ಸಮ್ಮೇಳನಕ್ಕಾಗಿ ವೈಯಕ್ತಿಕವಾಗಿ 1ಲಕ್ಷರೂಗಳನ್ನು ದೇಣಿಗೆಯಾಗಿ ನೀಡುವ ಜೊತೆಗೆ ಸಾಂಸ್ಕೃತಿಕ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ತಿಳಿಸಿದರು.
ಸಮ್ಮೇಳನದ ದಿನದಂದು 7.45ಕ್ಕೆ ಧ್ವಜಾರೋಹಣ ನೆರವೇರಲಿದ್ದು ನಂತರ ಮೂರು ದಿನಗಳ ಕಾಲ ಎರಡು ವೇದಿಕೆಯಲ್ಲಿ ವಿಸ್ಕೃತವಾದ ಕವಿಗೋಷ್ಠಿಗಳು, ವಿಶೇಷಗೋಷ್ಠಿ, ಕಥಾಸಮಯ, ಕವಿಸಮಯ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಚಿತ್ರಕಲಾ ಪ್ರದರ್ಶನಗಳು, ಕೃಷಿ ಬಗ್ಗೆ ಉತ್ತೇಜನ ನೀಡುವ ಪ್ರದರ್ಶನಗಳು ನಿಮರ್ಾಣವಾಗಲಿದ್ದು, 8.30ಕ್ಕೆ ಆರಂಭಗೊಳ್ಳುವ ಮೆರವಣಿಗೆಯಲ್ಲಿ ಕಂಸಾಳೆ, ಜಾನಪದ ತಂಡ ಹಾಗೂ ತಾಲ್ಲೂಕನ್ನು ಪ್ರತಿಬಿಂಬಿಸುವ ವಿವಿಧ ಪ್ರದರ್ಶನಗಳ ಮೆರವಣಿಗೆ ನಡೆಯಲಿದೆ.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ತಿಮ್ಮಯ್ಯ, ಬಿ.ಇ.ಓ.ಸಾ.ಚಿ.ನಾಗೇಶ್, ಕಸಾಪ ಅಧ್ಯಕ್ಷ ರವಿಕುಮಾರ್,  ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ದಿ: 3
ಜನ ಮನ್ನಣೆಯಿಂದ ಮುಖಂಡರಾಗುತ್ತಾರೆ ಹೊರತು, ಮುಖಂಡರಂತೆ ವತರ್ಿಸಿದರೆ  ಜನ ಮನ್ನಣೆ ಸಿಗುವುದಿಲ್ಲ
ಚಿಕ್ಕನಾಯಕನಹಳ್ಳಿ,ಮೇ.27 : ಸಾರ್ವಜನಿಕ ಜೀವನಕ್ಕೆ ಇಳಿದ ಮೇಲೆ ಸಮಾಜಸೇವೆ ನಮ್ಮ ಗುರಿಯಾಗಿರಬೇಕು, ಆಗ ಸೇವೆ ಮಾಡುವ ವ್ಯಕ್ತಿ ಜನರಿಂದ ಮನ್ನಣೆ ಪಡೆಯುತ್ತಾನೆ ನಂತರ ಮುಖಂಡನಾಗುತ್ತಾನೆಯೇ ಹೊರತು, ಮುಖಂಡರಾಗಿ ಜನರ ವಿಶ್ವಾಸಗಳಿಸಲು ಎಂದಿಗೂ ಸಾಧ್ಯವಿಲ್ಲ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವ ಸಿ.ಬಿ.ಸುರೇಶ್ಬಾಬುರವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ವಿವಿದ ಸಂಘ-ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆಂದು ಭಾವಿಸಿದ್ದೆವು, ಆದರೆ ಕಾಂಗ್ರೆಸ್ ಸಕರ್ಾರಕ್ಕೆ ಅಧಿಕಾರಕ್ಕೆ ಬಂದಿದ್ದರಿಂದ ಸಿದ್ದರಾಮಯ್ಯನವರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ, ಆದರೂ ಸಿದ್ದರಾಮ್ಯನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲ್ಲೂಕಿನ ಅಭಿವೃದ್ದಿಗಾಗಿ ಶ್ರಮಪಡುವೆ ಎಂದರಲ್ಲದೆ ಎಲ್ಲಾ ಜನತೆಯನ್ನು ಪ್ರೀತಿ, ವಿಶ್ವಾಸದಿಂದ ಅವರ ಭಾವನೆಗಳಿಗೆ ಸ್ಪಂದಿಸುತ್ತಿರುವುದರಿಂದಲೇ ತಾಲ್ಲೂಕಿನ ಜನತೆ ನನ್ನನ್ನು ಶಾಸಕನಾಗಿ ಮರು ಆಯ್ಕೆ ಮಾಡಿದ್ದಾರೆ, ತಾಲ್ಲೂಕಿನ ಹೇಮಾವತಿ ನೀರಿನ ಸಮಸ್ಯೆ, ತಾಲ್ಲೂಕಿನ ವಿದ್ಯಾಥರ್ಿಗಳಿಗೆ ಬೇಕಾಗಿರುವ ಪಾಲಿಟೆಕ್ನಿಕ್ ಕಾಲೇಜು, ನಿರುದ್ಯೋಗಿಗಳ ಉದ್ಯೋಗ ಸಮಸ್ಯೆ ನಿವಾರಿಸಲು ಈಗಾಗಲೇ ಶ್ರಮಿಸುತ್ತಿದ್ದೇನೆ, ಎಂದರಲ್ಲದೆ ತೀನಂಶ್ರೀ ಭವನದ ಕಾಮಗಾರಿ ಶೀಘ್ರ ಮುಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ ದರ್ಪದಿಂದ ಎಂದೂ ವತರ್ಿಸದ ಸುರೇಶ್ಬಾಬು ತಮ್ಮ ವಿರೋಧಿಯನ್ನು ಆತ್ಮೀಯವಾಗಿ ಕಾಣವ ಗುಣದಿಂದಲೇ ಈಗಿನ ಚುನಾವಣೆಯಲ್ಲಿ ಮರುಆಯ್ಕೆಯಾಗಿದ್ದಾರೆ, 42ವರ್ಷದ ಯುವಕರಾಗಿರುವ ಸುರೇಶ್ಬಾಬು ಶಾಸಕರಾಗಿ ಉತ್ತಮ ಆಡಳಿತ ನೀಡಲಿದ್ದು, ಅವರು ತಾಲ್ಲೂಕಿಗೆ ಅಗತ್ಯವಾಗಿ ಬೇಕಾಗಿರುವ ನೀರಾವರಿಗೆ ಆದ್ಯತೆ ನೀಡುವುದು, ನಶಿಸುತ್ತಿರುವ ನೇಕಾರಿಕೆಗೆ ಜೀವ ತುಂಬುವುದು, ತೀ.ನಂ.ಶ್ರೀ ಸಭಾ ಭವನವನ್ನು  ಪೂರ್ಣಗೊಳಿಸುವುದು, ತೀ.ನಂ.ಶ್ರೀ ಕಾಲೇಜನ್ನು ಆಚಾರ್ಯ ತೀ.ನಂ.ಶ್ರೀ ಕಾಲೇಜು ಎಂದು ಮರುಹೆಸರಿಡುವುದು, ಚಿಕ್ಕದಾಗಿರುವ ತೀ.ನಂ.ಶ್ರೀ ಗ್ರಂಥಾಲಯ ವಿಸ್ತರಿಸುವ ಬಗ್ಗೆ ತಿಳಿಸಿದರು.
ಜಾತ್ಯಾತೀತ ಜನತಾದಳದ ಪ್ರಧಾನ ಕಾರ್ಯದಶರ್ಿ ರಮೇಶ್ಬಾಬು ಮಾತನಾಡಿ 1972ರಲ್ಲಿ ಎನ್.ಬಸವಯ್ಯನವರು ಒಮ್ಮೆ ಗೆದ್ದು, ಮತ್ತೆ ಎದುರಾದ ಚುನಾವಣೆಯಲ್ಲಿ ಶಾಸಕನಾಗಿ ಮರು ಆಯ್ಕೆಗೊಂಡು ಸಚಿವರಾಗಿದ್ದು, ಅದೇ ರೀತಿ ಅವರ ಮಗ ಸುರೇಶ್ಬಾಬು ವಿಧಾನಸಭೆಗೆ ಮರು ಆಯ್ಕೆಗೊಂಡಿದ್ದು ಮುಂದೆ ಸಚಿವರಾಗುವ ಮುನ್ಸೂಚನೆ ನೀಡಿದ್ದಾರೆ, ಈಗ ಸುರೇಶ್ಬಾಬುರವರಿಗೆ ನಡೆಸುತ್ತಿರುವ ಅಭಿನಂದನೆ ಅವರಿಗೆ ಮುಂದೆ ಅನೇಕ ಜವಬ್ದಾರಿಗಳಿವೆ ಎಂಬ ಸೂಚನೆ ನೀಡಿದ್ದು, ದೇವೇಗೌಡರು ಹಾಗೂ ಕುಮಾರಸ್ವಾಮಿರವರಿಗೆ ಇವರ ಬಗ್ಗೆ ಉತ್ತಮ ಅಭಿಪ್ರಾಯವಿದೆ ಎಂದರಲ್ಲದೆ ಎಲ್ಲರೊಂದಿಗೆ ಗೌರವವಾಗಿ ನಡೆಸಿಕೊಳ್ಳುವುದರಿಂದಲೇ ಸುರೇಶ್ಬಾಬುರವರ ಬಗ್ಗೆ ತಾಲ್ಲೂಕಿನ ಜನತೆಯಲ್ಲಿ ಉತ್ತಮ ಅಭಿಪ್ರಾಯವಿದೆ ಎಂದರು.
ಚಲನಚಿತ್ರ ನಟ ಹನುಮಂತೇಗೌಡ ಮಾತನಾಡಿ ಎನ್.ಬಸವಯ್ಯನವರು ಅಕಾಲ ಮರಣವನ್ನಪ್ಪಿದಾಗ ಸುರೇಶ್ಬಾಬುರವರು ವಿಧಾನಸಭೆ ಚುನಾವಣೆಗೆ ಸ್ಪಧರ್ಿಸಿದ್ದರು ಆಗ ಅವರ ವಿರೋಧಿಗಳು ಆಡೋ ಹುಡುಗನನ್ನು ಕರೆತಂದು ಚುನಾವಣೆಯಲ್ಲಿ ನಿಲ್ಲಿಸಿದ್ದಾರೆ ಎಂಬ ಹುಡುಗಾಟ ಮಾತುಗಳು ಬರುತ್ತಿದ್ದವು, ಅದೇ ಆಡೋ ಹುಡುಗ ಈಗ ತಾಲ್ಲೂಕಿನಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ ತಂದೆಯಂತೆ ಮಗನೂ ಜನರ ಮನಸ್ಸಿನಲ್ಲಿ ನೆಲೆಯೂರಿದ್ದಾರೆ ಎಂದರು.
ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮಧುಸೂಧನ್, ಪೂಜಾ.ಕೆ, ದರ್ಶನ್.ಕೆ.ಎಸ್, ಚಂದನ್.ಬಿ.ಎಸ್.ರವರಿಗೆ ಸನ್ಮಾನಿಸಲಾಯಿತು. 
ಸಮಾರಂಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ಜಿ.ರಘುನಾಥ್, ರೋಟರಿ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಮಂಜುಳಗವಿರಂಗಯ್ಯ,  ತಾ.ಪಂ.ಸದಸ್ಯರಾದ ಲತಾ, ಚೇತನ, ಕವಿತ, ಹೇಮಾವತಿ ವಕೀಲ ಎಂ.ಬಿ.ನಾಗರಾಜು, ಜೆಡಿಎಸ್ ಮುಖಂಡ ಆಲದಕಟ್ಟೆ ತಿಮ್ಮಯ್ಯ, ಜೆಡಿಎಸ್ ವಕ್ತಾರ ಸಿ.ಎಸ್.ನಟರಾಜು, ಪುರಸಭಾ ಸದಸ್ಯರುಗಳಾದ ರಂಗಸ್ವಾಮಯ್ಯ, ಸಿ.ಡಿ.ಚಂದ್ರಶೇಖರ್, ಮಹಮದ್ಖಲಂದರ್, ಸಿ.ಆರ್.ತಿಮ್ಮಪ್ಪ, ರವಿ, ದಯಾನಂದ್, ಮಲ್ಲೇಶ್, ಅಶೋಕ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹೆಸರಳ್ಳಿ ರಾಜ್ಕುಮಾರ್ ಪ್ರಾಥರ್ಿಸಿದರೆ, ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿ, ಎಸ್.ಕೆ.ವಿಜಯಕುಮಾರ್ ನಿರೂಪಿಸಿದರು. (ಪೊಟೋ ಇದೆ)
ಸುದ್ದಿ:4
ಪಡಿತರ ಚೀಟಿ ನೊಂದಣಿ ಮಾಡಲು ನಿಗಧಿಗಿಂತ ಹೆಚ್ಚು ಹಣ ವಸೂಲಿ: ಆರೋಪ
ಚಿಕ್ಕನಾಯಕನಹಳ್ಳಿ,ಮೇ.27: ತಾಲ್ಲೂಕ ಹಂದನಕೆರೆ ಗ್ರಾ.ಪಂ.ಯಲ್ಲಿ ಪಡಿತರ ಚೀಟಿ ನೊಂದಾಯಿಸಲು ಸಕರ್ಾರ ನಿಗಧಿ ಮಾಡಿರುವುದಕ್ಕಿಂತ ಹೆಚ್ಚಿನ ಹಣಕ್ಕೆ ಗ್ರಾ.ಪಂ.ಯವರು ಒತ್ತಾಯಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
 ಒಂದು ಪಡಿತರ ಚೀಟಿಯನ್ನು ನೊಂದಣಿ ಮಾಡಲು 100ರೂಪಾಯಿಗಳನ್ನು ಪಡೆಯಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಈ ಬಗ್ಗೆ ಪಂಚಾಯಿತಿ ಕಾರ್ಯದಶರ್ಿಯವರನ್ನು ವಿಚಾರಿಸಿದರೆ ಈ ಬಗ್ಗೆ ಮಾಹಿತಿ ತಿಳಿದಿಲ್ಲ, ನೀವು ಕಂಪ್ಯೂಟರ್ ಆಪರೇಟರ್ ರವರನ್ನೇ ವಿಚಾರಿಸಿ ಎಂದರು. ಅಲ್ಲಿನ ಕಂಪ್ಯೂಟರ್ ಆಪರೇಟರ್ ರವರನ್ನು ವಿಚಾರಿಸಿದರೆ, 100ರೂ ಪಡೆಯತ್ತಿರುವುದು ಸತ್ಯವೆಂದು ಓಪ್ಪಿಕೊಂಡಿದ್ದಾರೆ.
ಗ್ರಾಮಸ್ಥರು  ಪಂಚಾಯತಿಯವರು ನಮಗೆ ಪಡಿತರ ಚೀಟಿಯ ಬಗ್ಗೆ ನೊಂದಣಿಯ ಬಗ್ಗೆ ಸೂಕ್ತ ಮಾಹಿತಿಯನ್ನು ನೀಡುತ್ತಿಲ್ಲ ನಾವು ಎಲ್ಲಾ ಕೆಲಸ ಕಾರ್ಯಗಳನ್ನು ತೊರೆದು ಬಂದಾಗ ನಮಗೆ ಪಡಿತರ ಚೀಟಿ ನೊಂದಣಿಯನ್ನು ಮಾಡುವುದಿಲ್ಲ ಹಾಗಾಗಿ ಸ್ಥಳಿಯ ಆಡಳಿತ ಜನರ ಸಮಸ್ಯೆಯನ್ನು ಕೊಡಲೆ ಬಗೆಹರಿಸ ಬೇಕು ಇಲ್ಲವಾದರೆ ಪ್ರತಿಭಟನೆ ಮಾಡುತ್ತೆವೆಂದು ಆಗ್ರಹಿಸಿದರು. ಈ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮತೆಗೆದುಕೊಂಡು ಈ ಸಮಸ್ಯೆಯನ್ನು ಬಗೆಹರಿಸುವಂತೆ  ಆಗ್ರಹಿಸಿದ್ದಾರೆ.
ಸುದ್ದಿ:4
ಕನರ್ಾಟಕ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಸತಿ ನಿಲಯಕ್ಕೆ ಪ್ರವೇಶ ಪ್ರಾರಂಭ
   ಚಿಕ್ಕನಾಯಕನಹಳ್ಳಿ,ಮೇ.27: ತಾಲೂಕಿನ ಸಕರ್ಾರಿ ಶಾಲೆಯಲ್ಲಿ 6 ನೇ ತರಗತಿಯಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ, ಗ್ರಾಮೀಣ ಪ್ರದೇಶದ ಆಥರ್ಿಕವಾಗಿ ಹಿಂದುಳಿದ, ಹಾಗೂ ಶಾಲೆ ಬಿಟ್ಟ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಮತ್ತು ಇತರೆ ಹಿಂದುಳಿದ ವರ್ಗಗಳ ಹೆಣ್ಣು ಮಕ್ಕಳ ಬಾಲಕಿಯರ ವಸತಿ ನಿಲಯಕ್ಕೆ ದಾಖಾಲಾತಿ ಆರಂಭವಾಗಿದೆ ಎಂದು ಬಿ.ಇ.ಓ ಸಾ.ಚಿ. ನಾಗೇಶ್ ತಿಳಿಸಿದ್ದಾರೆ. 
ಈ  ವಸತಿ ನಿಲಯವು ಪಟ್ಟಣದ ಗುರುಭವನದಲ್ಲಿ ನಡೆಯುತ್ತಿದ್ದು, 100 ವಿದ್ಯಾಥರ್ಿನಿಯರಿಗೆ ಮಾತ್ರ ಅವಕಾಶವಿದ್ದು ಈ ಕೊಡಲೆ ಪೋಷಕರು ತಮ್ಮ ಮಕ್ಕಳನ್ನು ದಾಖಲಿಸಬಹದು ಈ ವಸತಿ ನಿಲಯದಲ್ಲಿನ ಮಕ್ಕಳಿಗೆ ಉಚಿತ ತಿಂಡಿ, ಊಟ, ಹಾಸಿಗೆ, ಹೊದಿಕೆ, ಸಮವಸ್ರ, ವ್ಯೆದ್ಯಕೀಯ ಚಿಕಿತ್ಸೆ, ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು.
         ಹೆಚ್ಚಿನ ಮಾಹಿತಿಗಾಗಿ ಮುಖ್ಯಶಿಕ್ಷಕರು  ಸಕರ್ಾರಿ ಪ್ರೌಢಶಾಲೆ, ಚಿಕ್ಕನಾಯಕನಹಳ್ಳಿ ಹಾಗೂ ಶಿಕ್ಷಣ ಸಂಯೋಜಕರು, ಹಂದನಕೆರೆ ಇವರನ್ನು ಸಂಪಕರ್ಿಸಲು ಕೋರಿದೆ, ಹೆಚ್ಚಿನ ವಿವರಗಳಿಗೆ    08133-267267, 943713086, 9535467764  ಇಲ್ಲಿ ಸಂಪರ್ಕಇಸಲು ಕೋರಿದೆ.  

Saturday, May 25, 2013

ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಗೆ ಬರಹಗಳ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.25: 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರತರುತ್ತಿದ್ದು, ಈ ಸಂಚಿಕೆಗೆ ಜಿಲ್ಲೆಯ ಸಂಸ್ಕೃತಿ, ಸಾಹಿತ್ಯವನ್ನು ಬಿಂಬಿಸುವಂತಹ ಲೇಖನ, ಕವನ, ಪ್ರಬಂಧ, ವಿಡಂಬನೆ, ಶಿಶು ಸಾಹಿತ್ಯ ಒಳಗೊಂಡಂತೆ ಸಾಹಿತ್ಯದ ಎಲ್ಲಾ ಪ್ರಕಾರಗಳ ಹೊತ್ತಿಗೆಯನ್ನು ತರ ಬಯಸಿದ್ದು ಆಸಕ್ತರು ತಮ್ಮ ಬರಹಗಳನ್ನು ಜೂನ್ 15ರೊಳಗೆ ತಲುಪಿಸುವಂತೆ ಸ್ಮರಣ ಸಂಚಿಕೆ ಸಮಿತಿ ಕೋರಿದೆ.
ಜೂನ್ 28,29 ಮತ್ತು 30ರಂದು ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುವ ಈ ಜಿಲ್ಲಾ ಸಮ್ಮೇಳನದಲ್ಲಿ ಬಿಡುಗಡೆಗೊಳಿಸಲಿದ್ದು ಆಸಕ್ತರು ತಮ್ಮ ಬರಹದ ಜೊತೆಗೆ ಇತ್ತೀಚಿನ ಭಾವಚಿತ್ರ, ದೂರವಾಣಿ ಸಂಖ್ಯೆ, ಅಂಚೆ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸುವುದು, ಆಯ್ಕೆಯಾಗದ ಬರಹಗಳನ್ನು ವಾಪಸ್ ಕಳುಹಿಸಲಾಗುವುದಿಲ್ಲ. ತಮ್ಮ ಬರಹಗಳನ್ನು ಸೋ.ಮು.ಭಾಸ್ಕರಾಚಾರ್ ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತುಮಕೂರು ಅಥವಾ ಸಿ.ಗುರುಮೂತರ್ಿ ಕೊಟಿಗೆಮನೆ ಕಾರ್ಯನಿವರ್ಾಹಕ ಸಂಪಾದಕರು ಸ್ಮರಣ ಸಂಚಿಕೆ ವಿಭಾಗ ಸುವರ್ಣಮುಖಿ ಮಾಧ್ಯಮ ಕೇಂದ್ರ, ಕೆನರಾ ಬ್ಯಾಂಕ್ ಎದರು, ಬಿ.ಎಚ್.ರಸ್ತೆ ಚಿಕ್ಕನಾಯಕನಹಳ್ಳಿ ಇಲ್ಲಿಗೆ ಕಳುಹಿಸಲು ಕೋರಿದೆ.  ಹೆಚ್ಚಿನ ವಿವರಗಳಿಗೆ 9844483844 ಅಥವಾ 9448659573 ಸಂಪಕರ್ಿಸಲು ಕೋರಿದೆ.
ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಡಕು.
ಆಂತರಿಕ ಕಿತ್ತಾಟದಿಂದ ಕಟ್ಟಡದ ಉಧ್ಘಾಟನೆಗೆ  ತಡೆ.
                             
ಚಿಕ್ಕನಾಯಕನಹಳ್ಳಿ,ಮೇ25 : ಸಾಮಾನ್ಯ ಸಭೆಯಲ್ಲಿ ರೈತರ ಉತ್ಪಾದಕರ ಸಮಸ್ಯೆಗಳನ್ನು ಚಚರ್ಿಸುತ್ತಿದ್ದ ಸಂದರ್ಭದಲ್ಲಿ ಅಮಾನತ್ತುಗೊಂಡ ಸಂಘದ ಅಧ್ಯಕ್ಷೆ ಭಾಗ್ಯಮ್ಮ ಏಕಾಎಕಿ ಸಭೆಗೆ ನುಗ್ಗಿ ಜಗಳವಾಡಿ ಸಂಘದ ಎಲ್ಲಾ ನಿದರ್ೇಶಕಿಯರನ್ನು ಅವಾಚ್ಯಾವಾಗಿ ಬೈದು ಅವಮಾನ ಮಾಡಿ ಸಂಘದ ರೆಸಲ್ಯೂಷನ್ ಪುಸ್ತಕವನ್ನು ಹರಿದಿರುವುದಲ್ಲದೆ ಹೊರಗಡೆಯಿದ್ದ ಹಾಲು ಉತ್ಪಾದಕರನ್ನೂ ಅವಾಚ್ಯವಾಗಿ ಬೈದು ಅವಾಂತರವೆಬ್ಬಿಸಿದ್ದಾರೆ ಎಂದು ಸಂಘದ ನಿದರ್ೇಶಕಿಯರು, ಸದಸ್ಯರುಗಳು ಹಾಗೂ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಾಲ್ಲೂಕಿನ ಕುಪ್ಪೂರು ಗ್ರಾಮದ ತಮ್ಮಡಿಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈ ಘಟನೆ ಸಂಭವಿಸಿದೆ. ಸಂಘದ ಅಧ್ಯಕ್ಷೆ ಭಾಗ್ಯಮ್ಮ ಕಟ್ಟಡ ನಿಮರ್ಾಣದ ಸಂದರ್ಭದಲ್ಲಿ ಅಕ್ರಮವೆಸಗಿರುವುದು ಅಸಿಸ್ಟೇಂಟ್ ರಿಜೀಸ್ಟರ್ ಕಾಂತರಾಜುರವರ ಮುಂದೆ ಸಾಭೀತಾಗಿದ್ದು ಅಕ್ರಮವಾಗಿ ಹಣವನ್ನು ಪಡೆದಿದ್ದಾರೆ ಹಾಗೂ ಅಸಿಸ್ಟೇಂಟ್ ರಿಜೀಸ್ಟರ್ ಕಾಂತರಾಜುರವರ ಅನುಮತಿ ಪಡೆಯದೆ ಕಟ್ಟಡ ನಿಮರ್ಾಣಕ್ಕೆ ಮುಂದಾಗಿದ್ದಾರೆ ಹಾಗೂ ಕಟ್ಟಡ ನಿಮರ್ಾಣಕ್ಕೆ ಹಣವನ್ನು ಬಿಡುಗಡೆ ಮಾಡುವಲ್ಲಿ ಯಾವುದೇ ರೆಸಲ್ಯéೂಷನ್ ಪಾಸ್ ಮಾಡದೆ, ಸರಿಯಾದ ಧಾಖಲೆಯನ್ನು ನೀಡದೆ ಉತ್ಪಾದಕರ ಹಣವನ್ನು ದುರೂಪಯೋಗ ಪಡಿಸಿಕೊಂಡಿರುವುದು ಹಾಗೂ ಜಮಾ ಖಚರ್ಿನಲ್ಲಿ 150000 ರೂ ಹಣ ವ್ಯತ್ಯಸ ಬಂದಿದೆ. ಈ ಅಂಶಗಳು ಸಾಬೀತಾದೆ.
ಇದರಿಂದ ಎ.ಆರ್.ಕಾಂತರಾಜುರವರು ಭಾಗ್ಯಮ್ಮನವರನ್ನು  ಇದೇ 14 ರಂದು ಅದಿನಿಯಮ 106(3)ರಅಡಿ ಅಮಾನತು ಮಾಡಿದ್ದರು. ಇದರಿಂದ ಉತ್ಪಾದಕರು ಹಾಲಿನ ಪೇಮೆಂಟ್ಗಾಗಿ ಪರದಾಡುವಂತಾಗಿದೆ. ಸಂಘದಿಂದ  ಉತ್ಪಾದಕರಿಗೆ 3 ವರ್ಷದಿಂದ ಬೋನಸ್ ನೀಡದೆ ಸತಾಯಿಸಲಾಗಿದೆ. 2013 ಜನವರಿಯಿಂದ 2 ರೂ ಸಬ್ಸಿಡಿಯ ಹಣವನ್ನು ಒಕ್ಕೂಟ ಬೀಡುಗಡೆ ಮಾಡಿಲ್ಲ. ಉತ್ಪಾದಕರು ಆಡಳಿತ ಮಂಡಳಿ ಹಾಗೂ ಒಕ್ಕೂಟದ ನಡುವಿನ ಸಂಘರ್ಷದಲ್ಲಿ ಸಿಲುಕಿ  'ಗಂಡ ಹೆಂಡತಿಯ ಜಗಳದಲ್ಲಿ ಕುಸು ಬಡವಾದ' ಹಾಗೆ ಆಗಿದೆ. ಅಧ್ಯಕ್ಷರಾದ ಭಾಗ್ಯಮ್ಮನವರ ಸವರ್ಾಧಿಕಾರಿ ವರ್ತನೆಯು ಉಳಿದೆಲ್ಲ ನಿದರ್ೇಶಕಿಯರುಗಳಿಗೆ ಅಸಮಧಾನವನ್ನು ಉಂಟುಮಾಡಿದೆ ಹಾಗೂ ತುಮಕೂರು ಹಾಲು ಒಕ್ಕೂಟದ ಅಧ್ಯಕ್ಷರಾದ ಹಳೇಮನೆ ಶಿವನಂಜಪ್ಪನವರು ನಮ್ಮ ಡೈರಿ ಹಾಳಾಗಲು ಕಾರಣ ಎಂದು ಹಾಲು ಉತ್ಪಾದಕರು ಪತ್ರಿಕೆಗೆ ತಿಳಿಸಿದರು.
ತಮ್ಮಡಿಹಳ್ಳಿ ಸುಮಾರು 150 ಮನೆಗಳ ಗ್ರಾಮವಾಗಿದ್ದು ತುಮಕೂರು ಹಾಲು ಒಕ್ಕೂಟದ ಸಹಕಾರದಿಂದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ತೆರೆಯಲಾಗಿದೆ, ಸರಿ ಸುಮಾರು 200 ಸೀಮೆ ಹಸುಗಳಿದ್ದು ಪ್ರತಿದಿನ ಬೆಳಿಗ್ಗೆ ಸಂಜೆಯಿಂದ 400 ಲೀಟರ್ ಹಾಲು ಶೇಖರಣೆಯಾಗುತ್ತಿದ್ದು ಉತ್ತಮ ಲಾಭವನ್ನುಗಳಿಸಿ 200000 ರೂ ಲಾಭದಲ್ಲಿದ್ದ ಡೈರಿ, ಇಂದು ನಷ್ಟದಲ್ಲಿ ಸಿಲುಕಿದೆ. 
ಸಂಘದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಎಲ್ಲರನ್ನು ಬೈದು ರೆಸಲ್ಯೂಷನ್ ಪುಸ್ತಕವನ್ನು ಹರಿದು ಹಾಕಿ ದಾಂದಲೆ ಮಾಡಿದ್ದಾರೆ ಎಂದು ಕಾರ್ಯದಶರ್ಿಯಾದ ನೀಲಮ್ಮ, ನಿಧರ್ೇಶಕಿಯರಾದ ವಸಂತಕುಮಾರಿ, ಮಂಜುಳ, ನಿಂಗರಾಜಮ್ಮ, ಮಂಜುಳ.ಬಿ, ಬಸಮ್ಮ, ಪ್ರಮೀಳ  ರವರು ಎಆರ್. ಕಾಂತರಾಜುರವರ ಮಾರ್ಗದರ್ಶನದಲ್ಲಿ ನಿದರ್ೇಶಕಿಯರು ಹಾಗೂ ಉತ್ಪಾದಕರು ಗ್ರಾಮಸ್ಥರು ದೂರಿದ್ದಾರೆ. ಇಂತಹ ಅದ್ಯಕ್ಷೆಗೆ ಒಕ್ಕೂಟದ ಅಧ್ಯಕ್ಷರಾದ ಹಳೇಮನೆ ಶಿವನಂಜಪ್ಪನವರು ಕುಮ್ಮಕು ನೀಡಿರುವುದರಿಂದ ನಮ್ಮೂರಿನ ಡೈರಿ ಹಾಳಾಗುತ್ತಿದೆ. ಆದ್ದರಿಂದ ಆಡಳಿತ ಮಂಡಳಿ ಹಾಗೂ ಒಕ್ಕೂಟ ಎಲ್ಲಾ ಹಳೇ ವೈಷಮ್ಯವನ್ನು ಮರೆತು ನಿಮರ್ಾಣವಾದ ಕಟ್ಟಡವನ್ನು ಉದ್ಘಾಟಿಸಲಿ ಮತ್ತು ಉತ್ಪಾದಕರಿಗೆ ಸರಿಯಾಗಿ ಪೆಮೆಂಟ್ ಮಾಡಲಿ, ಒಕ್ಕೂಟ ಸರಿಯಾಗಿ ಸಹಾಯದನ ನೀಡಿ ಹೈನುಗಾರಿಕೆ ಪ್ರಗತಿ ಕಾಣಲಿ ಇವುಗಳನ್ನು ಬಗೆಹರಿಸುವಲ್ಲಿ ಒಕ್ಕೂಟದ ಅಧಿಕಾರಿಗಳು ಸರಿಯಾದ ಕ್ರಮ ಕೈಗೊಳ್ಳಲಿ ಎಂದು ಸಂಘದ ನಿದರ್ೇಶಕರು, ಉತ್ಪಾದಕರು, ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನೇಕಾರರಿಗಿರುವ ಸಕರ್ಾರಿ ಸವಲತ್ತುಗಳನ್ನು
ಬಳಸಿಕೊಳ್ಳುವಂತೆ ಕರೆ
ಚಿಕ್ಕನಾಯಕನಹಳ್ಳಿ,ಮೇ.25 : ನೇಕಾರರಿಗೆ ಸಕರ್ಾರದಿಂದ ಆರೋಗ್ಯ ವಿಮೆ, ಅಂತ್ಯಸಂಸ್ಕಾರದ ಸಹಾಯಧನ, ವಸತಿ ಸೌಕರ್ಯ, ವಿದ್ಯಾಥರ್ಿ ವೇತನದ ಜೊತೆಗೆ ಇನ್ನಿತರ ಸವಲತ್ತುಗಳು ಸಕರ್ಾರದಿಂದ ಸಿಗಲಿದ್ದು ಈ ಸೌಲಭ್ಯಗಳನ್ನು ನೇಕಾರರು ಪಡೆದು ಸದುಪಯೋಗ ಪಡಿಸಿಕೊಳ್ಳಿ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿದರ್ೇಶಕ ಗಂಗಯ್ಯ ತಿಳಿಸಿದರು.
ಪಟ್ಟಣದ ರೇವಣಸಿದ್ದೇಶ್ವರ ಉಣ್ಣೆ ಸಹಕಾರ ಸಂಘದಲ್ಲಿ ನೇಕಾರರ ಸೇವಾ ಕೇಂದ್ರದ ವತಿಯಿಂದ ನಡೆದ ಸಮಗ್ರ ಕೌಶಲ್ಯ ಅಭಿವೃದ್ದಿ ಯೋಜನೆಯಲ್ಲಿ ವಾರ್ಪರ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತರಬೇತಿ ಕಾರ್ಯಕ್ರಮವು 30ದಿನಗಳು ನಡೆಯಲಿದ್ದು 20ಮಂದಿ ನೇಕಾರರಿಗೆ ತರಬೇತಿ ನೀಡಲಾಗುವುದು ಹಾಗೂ ತರಬೇತಿಯಲ್ಲಿ ಪಾಲ್ಗೊಂಡವರಿಗೆ 3ಸಾವಿರ ರೂಪಾಯಿಗಳ ಶಿಷ್ಯ ವೇತನ ನೀಡಲಾಗುವುದು ಹಾಗೂ ವಾರ್ಪಾರ್ ತರಬೇತಿಯಲ್ಲಿ ಉತ್ತಮವಾಗಿ ತರಬೇತಿ ಪಡೆಯಿರಿ ಎಂದು ತಿಳಿಸಿದರು.
ನೇಕಾರರ ಸೇವಾಕೇಂದ್ರದ ಉಪನಿದರ್ೇಶಕ ವಿ.ಕೆ.ಹರಿಪ್ರಸಾದ್ ಮಾತನಾಡಿ ನೇಕಾರರಿಗೆ ಉತ್ತಮ ನೇಕಾರಿಕೆಗಾಗಿ ನಡೆಯುವ ಈ ತರಬೇತಿಯನ್ನು ನೇಕಾರರು ಸದುಪಯೋಗ ಪಡಿಸಿಕೊಳ್ಳಿ, ಕೇಂದ್ರ ಸಕರ್ಾರಿದಂದ ಈ ಯೋಜನೆ ನಡೆಯುತ್ತಿದ್ದು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ತಿಳುವಳಿಕೆ ಪಡೆದುಕೊಳ್ಳಿರಿ ಎಂದು ಸಲಹೆ ನೀಡಿದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ನೆಲಮೂಲ ಪಾರಂಪರಿಕ ಉದ್ಯೋಗವನ್ನು ಉಳಿಸಿ, ಬೆಳಸುತ್ತಿರುವ ಕಂಬಳಿ ನೇಕಾರರು ಇಂದು ಕಣ್ಮರೆಯಾಗುತ್ತಿದ್ದಾರೆ, ಈ ನೇಕಾರಿಕೆಯನ್ನು ಉಳಿಸಲು ಕೇಂದ್ರ ಮತ್ತು ರಾಜ್ಯ ಸಕರ್ಾರ ಅನೇಕ ಸವಲತ್ತುಗಳನ್ನು ನೀಡುತ್ತಿದೆ, ನೇಕಾರರು ಇವುಗಳನ್ನು ಬಳಸಿಕೊಂಡು ತಮ್ಮ ಆಥರ್ಿಕತೆ ಸುಬದ್ರ ಪಡಿಸಿಕೊಳ್ಳಲು ಕರೆ ನೀಡಿದರು.
ಸಮಾರಂಭದಲ್ಲಿ ರೇವಣಸಿದ್ದೇಶ್ವರ ಉಣ್ಣೆ ಸಹಕಾರ ಸಂಘದ ನಿದರ್ೇಶಕರುಗಳಾದ ಸಿ.ಎಂ.ಬೀರಲಿಂಗಯ್ಯ, ಸಿ.ಕೆ.ಲೋಕೇಶ್, ಸಿ.ಹೆಚ್.ಅಳವೀರಯ್ಯ, ಗೋವಿಂದಯ್ಯ ಉಪಸ್ಥಿತರಿದ್ದರು, ಸಮಾರಂಭದಲ್ಲಿ ಸೊಸೈಟಿ ಕಾರ್ಯದಶರ್ಿ ಕೋದಂಡಯ್ಯ ಸ್ವಾಗತಿಸಿ, ನಿರೂಪಿಸಿದರು.
ಕುಪ್ಪೂರು ಪಶು ಆಸ್ಪತ್ರೆಯಲ್ಲಿ  ವೀರ್ಯನಳಿಕೆಗಳ ಅಭಾವದಿಂದ ಮಾತಿನ ಚಕಮಕಿ.
ಚಿಕ್ಕನಾಯಕನಹಳ್ಳಿ,ಮೇ.25: ತಾಲ್ಲೂಕು ಶೆಟ್ಟೇಕೆರೆ ಹೋಬಳಿಯ ಕುಪ್ಪೂರು ಪಶು ಆಸ್ಪತ್ರೆಯಲ್ಲಿ ಇಂದು ಹಸುಗಳಿಗೆ ಗರ್ಭದಾರಣೆ ಮಾಡಿಸಲು ಬಂದಾಗ ವೀರ್ಯನಳಿಕೆಯ ಅಭಾವದಿಂದ ಗರ್ಭದಾರಣೆ ಸಾಧ್ಯವಾಗದ ಕಾರಣ ರೈತರು ಮತ್ತು ಪಶು ವೈದ್ಯಾಧಿಕಾರಿ ಶಾಂತಕುಮಾರ್ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ಡಾ.ಶಾಂತಕುಮಾರ್ ರವರು ಹಳ್ಳೀಕಾರ್ ವೀರ್ಯನಳಿಕೆ ಹಾಗೂ ಅಮೃತ್ ಮಹಲ್ ವೀರ್ಯನಳಿಕೆ ಈ ತಿಂಗಳಲ್ಲಿ ನಮ್ಮ ಆಸ್ಪತ್ರೆಗೆ ಸರಬರಾಜು ಆಗದೆ ಇರುವುದರಿಂದ  ನಮ್ಮಲ್ಲಿ  ಹಳ್ಳೀಕಾರ್ ವೀರ್ಯದ ಗರ್ಭಧಾರಣೆ ಸಾಧ್ಯವಾಗುತ್ತಿಲ್ಲ ಆದ್ದರಿಂದ ನಮ್ಮ ಕೇಂದ್ರದ ವ್ಯಾಪ್ತಿಯಲ್ಲಿನ 25 ಗ್ರಾಮಗಳ ಹಸುಗಳಿಗೆ ಈ ಸೌಲಭ್ಯಸಿಗುತ್ತಿಲ್ಲವೆಂದರು. ಈ ಭಾಗದಲ್ಲಿ ಮಿಶ್ರತಳಿ ಹಸುಗಳು 1287 ಇದ್ದು, ನಾಟಿ ಹಸುಗಳು 1762 ಇವೆ ಈ ವೀರ್ಯದ ಅಭಾವದಿಂದ ಇಲ್ಲಿನ ಹಸುಗಳಿಗೆ ಗರ್ಭಧಾರಣಾ ಸೌಲಭ್ಯ ದೊರೆಯುತ್ತಿಲ್ಲ ಹಾಗಾಗಿ ರೈತರು ನಮ್ಮ ಕೇಂದ್ರದಲ್ಲಿ ರೈತರು ನಮ್ಮೊಂದಿಗೆ ಮಾತಿನ ಚಕಮಕಿಗೆ ಮುಂದಾದರು ಎಂದು ಸ್ಪಷ್ಟಪಡಿಸಿದರು.
ಪಶು ಆಸ್ಪತ್ರೆಗಳಲ್ಲಿ ಹಸುಗಳಿಗೆ ಗರ್ಭಧಾರಣಾ ಸೌಲಭ್ಯ ಕೇವಲ 5 ರೂಗಳಲ್ಲಿ ದೊರೆಯುತಿತ್ತು, ಇದೇ ಕಾರ್ಯಕ್ಕೆ ರೈತರು ಹೊರಗಡೆ ಹೋರಿ ಕೊಡಿಸಲು ಹೋದರೆ 100ರೂಗಳು ತೆರಬೇಕಾಗಿರುವುದರಿಂದ ಇದು ರೈತರಿಗೆ ಹೊರೆಯಾಗುತ್ತಿದೆ ಆದ್ದರಿಂದ ಪಶು ಆಸ್ಪತ್ರೆಗಳಿಗೆ ಶೀಘ್ರವೇ ಹಳ್ಳೀಕಾರ್ ಮತ್ತು ಅಮೃತ್ ಮಹಲ್ ವೀರ್ಯನಳಿಕೆಯನ್ನು ಸರಬರಾಜು ಮಾಡುವಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

Friday, May 24, 2013



ಮನಸ್ಸು ವಿಕಾಸಗೊಳ್ಳಲು ಬೇಸಿಗೆಶಿಬಿರ ಸಹಕಾರಿ.
ಚಿಕ್ಕನಾಯಕನಹಳ್ಳಿ,ಮೇ24: ಸಕರ್ಾರದ ಯೋಜನೆಯ ಸದ್ಬಳಕೆಯಿಂದ ಹಚ್ಚಿನ ಅನುಕೂಲವಾಗಲಿದೆ ಎಂದು ಪುರಸಭಾ ಸದಸ್ಯೆ ರೇಣುಕಮ್ಮ ತಿಳಿಸಿದರು.
ಅವರು ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ 10 ದಿನಗಳ ಕಾಲ ನಡೆದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳ ಜ್ಞಾನವಿಕಾಸಕ್ಕೆ ಇಂತಹ ಶಿಬಿರಗಳು ಹೆಚ್ಚಿನ ಅನುಕೂಲವಾಗಲಿದೆ. ನಮ್ಮಲ್ಲಿನ ವೈವಿದ್ಯಮಯ ಸಂಸ್ಕೃತಿಗಳ ಪರಿಚಯ ಹಾಗೂ ವಿನಿಮಯಗಳಿಂದ  ಮಕ್ಕಳ ಮೇಲೆ ಉತ್ತಮ ಪರಿಣಾಮ ಬೀರಿ ಭವಿಷ್ಯದಲ್ಲಿ ಸುಶಿಕ್ಷಿತ ಸಮಾಜ ನಿಮರ್ಾಣಕ್ಕೆ ದಾರಿಯಾಗಲಿದ್ದು ಈ ಶಿಬಿರದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಪ್ರಚಾರ ನೀಡಬೇಕಾಗಿತ್ತೆಂದರು.
ಸಮಾಜ ಕಲ್ಯಾಣ ಇಲಾಖೆ ಪ್ರಭಾರಿ ಅಧಿಕಾರಿ ಈರಣ್ಣ ಮಾತನಾಡಿ ಇಂದು ಮಕ್ಕಳಿಗೆ ಶಾಲೆಯ ಪುಸ್ತಕಗಳು ಹೆಚ್ಚು ಹೊರೆಯಾಗಿದ್ದು ಅವರ ಮನೋವಿಕಾಸ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಲಿದೆ.  ಈ ಶಿಬಿರದಿಂದ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಹಾಕುವ ಮೂಲಕ ಮಕ್ಕಳಲ್ಲಿ ಕ್ರಿಯಾತ್ಮಕ ಬೆಳವಣಿಗೆಗೆ ಕಾರಣವಾಗಲಿದೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ತಿಮ್ಮರಾಯಪ್ಪ ಮಾತನಾಡಿ ರಜಾದಿನಗಳಲ್ಲಿ ಮಕ್ಕಳು ಪರ ಊರುಗಳಿಗೆ ತೆರಳುವುದರಿಂದ ವಿವಿಧ ರೋಗ ರುಜಿನಗಳ ಬಾದೆಗೆ ತುತ್ತಾಗಲಿದ್ದಾರೆ. ಇಂತಹ ಶಿಬಿರಗಲ್ಲಿ ಮಕ್ಕಳು ತಮ್ಮ ಬೇಸಿಗೆ ರಜಾದಿನಗಳನ್ನು ಕರಕುಶಲ ಕಲೆ, ನೃತ್ಯ, ಪೇಪರ್ ಕಟಿಂಗ್ ಮುಂತಾದ ಮನೋವಿಕಾಸ ಚಟುವಟಿಕೆಯಿಂದ ಮನಸ್ಸು ಅರಳಲಿದೆ ಎಂದರು.
ಸಮಾರಂಭದಲ್ಲಿ ಸಂಪನ್ಮೂಲವ್ಯಕ್ತಿಗಳಾದ ಸಿ.ಎನ್. ಕೃಷ್ಣಾಚಾರ್, ಕುಮಾರಯ್ಯ, ಮಾಜಿ ಪುರಸಭಾ ಸದಸ್ಯೆ ರಾಜಲಕ್ಷ್ಮಿ, ನಾಗರತ್ನಮ್ಮ, ಶಶಿಕಲಾ ಹಾಗೂ ಎಸಿಡಿಪಿಒ ಪರಮೇಶ್ವರಪ್ಪ ಉಪಸ್ಥಿತರಿದ್ದರು. ಕುಮಾರ್ನಿರೂಪಿಸಿದರು. 
(ಪೊಟೋ ಇದೆ)
ಕೊಲೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯ.
ಚಿಕ್ಕನಾಯಕನಹಳ್ಳಿ,ಮೇ.24: ಸಾಲವಾಗಿ ನೀಡಿದ್ದ ಹಣವನ್ನು ವಾಪಸ್ ಮಾಡುವಂತೆ ಕೇಳಿದವರ ಮೇಲೆ ಅನೈತಿಕ ಸಂಬಂಧ ಹುಟ್ಟುಹಾಕಿ ಸಾವಿಗೆ ಕಾರಣವಾಗಿದ್ದವರನ್ನು ಪೊಲೀಸರು ಈವರೆಗೂ ಬಂದಿಸಿಲ್ಲ ಎಂದು ದೂರುದಾರರಾದ ಅನುಸೂಯಮ್ಮ ಆರೋಪಿಸಿದ್ದಾರೆ.
ಅವರು ತಾಲ್ಲೂಕಿನ ಹಂದನಕೆರೆವಾಸಿ ಜಗದೀಶನ ಪತ್ನಿ ಶಶಿಕಲಾ ಎಂಬುವರು ತನ್ನ ತಾಯಿ ಅನುಸೂಯಮ್ಮನ ಕಡೆಯಿಂದ ತರಕಾರಿ ಗಂಗಮ್ಮ ಎಂಬುವರ ಅಳಿಯನಾದ ಚಲುವರಾಜುಗೆ ಹತ್ತು ಸಾವಿರ ಹಣವನ್ನು ಸಾಲವಾಗಿ ಕೊಡಿಸಿದ್ದರು ಎನ್ನಲಾಗಿದ್ದು,  ಸಾಲ ಪಡೆದ ಚಲುವರಾಜು ತಿಂಗಳುಗಳು ಕಳೆದರೂ ಹಣ ವಾಪಸ್ಮಾಡದ ಕಾರಣ ಚಲುವರಾಜು ಹಾಗೂ ಶಶಿಕಲಾ ನಡುವೆ ವಾಗ್ವಾದ ನಡೆದು ಚಲುವರಾಜು ಕೊರಳಲ್ಲಿದ್ದ ಚಿನ್ನದ ಸರವನ್ನು ಶಶಿಕಲ ಪಡೆದು ಹಣ ಪಡೆದ ನಂತರ ಸರ ನೀಡಲಾಗುವುದು ಎಂದು ಹೇಳಿದ ಹಿನ್ನಲೆಯಲ್ಲಿ ಅದೇ ಗ್ರಾಮದ ಪಂಚಾಯಿತಿದಾರರ ಸಮ್ಮುಖದಲ್ಲಿ ಬಡ್ಡಿ ಇಲ್ಲದೆ ಅಸಲು ಹತ್ತು ಸಾವಿರ ಹಣವನ್ನು ಚಲುವರಾಜು ರವರಿಗೆ  ಶಶಿಕಲಾ ಸಾಲದ ರೂಪದಲ್ಲಿ ಕೊಡಿಸಿದ್ದ ಹಣವನ್ನು ವಾಪಸ್ ಮಾಡಿ ಚಿನ್ನದ ಸರವನ್ನು ಮೇ 14 ರಂದು ವಾಪಸ್ ಪಡೆದಿದ್ದರು. ಈ ಎಲ್ಲಾ ವಿಚಾರವನ್ನು ಮನದಲ್ಲಿಟ್ಟುಕೊಂಡಿದ್ದ ಚಲುವರಾಜು, ಪತ್ನಿ ಸವಿತಾ ಹಾಗೂ ಅತ್ತೆ ತರಕಾರಿ ಗಂಗಮ್ಮ ಈ ಮೂವರು ಸಾರ್ವಜನಿಕರೆದರು ಶಶಿಕಲಾ ಮೇಲೆ ದ್ವೇಷದಿಂದ ಸವಿತಾಳು ತನ್ನ ಗಂಡನ ಜೊತೆ ಅಕ್ರಮ ಸಂಬಂಧವಿರಿಸಿಕೊಂಡಿದ್ದಿಯ ಎಂದು ಬೀದಿಯಲ್ಲಿ ಎಳೆದಾಡಿದ ಪರಿಣಾಮ ಅವಮಾನ ತಾಳಲಾರದೆ ಶಶಿಕಲಾ ಹಂದನಕೆರೆಯ ತೋಟದ ಮನೆಯಲ್ಲಿ ಮೇ.19ರಂದು  ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. 
ಈ ಪ್ರಕರಣದ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಅನುಸೂಯಮ್ಮ 505/306 ಪ್ರಕರಣ ದಾಖಲಿಸಿದ್ದರು. ಈ ದೂರಿನ ಮೇಲೆ ತರಕಾರಿ ಗಂಗಮ್ಮನನ್ನು ಬಂದಿಸಲಾಗಿದೆ. ಆದರೆ ಚಲುವರಾಜು ಮತ್ತು ಸವಿತಾ ಎಂಬುವರಿರುವ ಸ್ಥಳದ ಮಾಹಿತಿಯನ್ನು ನೀಡಿದರೂ ಅವರನ್ನು ಬಂಧಿಸುವಲ್ಲಿ ಪೊಲೀಸರು ನಿಲ್ರ್ಯಕ್ಷ ತೋರಿದ್ದಾರೆ ಎಂದು ಅನುಸೂಯಮ್ಮ ಆರೋಪಿಸಿದ್ದಾರೆ.

ಕಾಲೇಜ್ ದಿನಗಳನ್ನು ಸ್ಮರಿಸಿಕೊಳ್ಳಲು 12 ವರ್ಷಗಳ ನಂತರ ಒಂದಾದ ಸ್ನೇಹಿತರು.
ಚಿಕ್ಕನಾಯಕನಹಳ್ಳಿ,ಮೇ.24: ಕಾಲೇಜ್ ದಿನಗಳನ್ನು ನೆನಪಿಸಿಕೊಳ್ಳುವ, ಬದುಕಿನ ಜಂಜಾಟದಿಂದ ಕೆಲ ಕಾಲ ಸ್ನೇಹಿತರೊಂದಿಗೆ ತಮ್ಮ ಯಶೋಗಾಧೆಗಳನ್ನು ಹೇಳಿಕೊಳ್ಳುವ ಹಾಗೂ ಸ್ನೇಹಿತೆಯರಿಗೆ ಬಾಗಿಣ ನೀಡುವ ಹೊಸ ಕಲ್ಪನೆಗೆ ನಾಂದಿ ಹಾಡಿದ್ದು, ತಮ್ಮ ಹೆಂಡತಿ, ಮಕ್ಕಳಿಗೆಲ್ಲಾ ತನ್ನ ಕಾಲೇಜ್ ದಿನಗಳ  ಸ್ನೇಹತರನ್ನು ಪರಸ್ಪರ ಪರಿಚಯಿಸಿಕೊಳ್ಳುವ ಮೂಲಕ  ಮರೆತೇನೆಂದರೆ ಮರೆಯಲಿ ಹ್ಯಾಂಗ. . . . ! ಎಂಬ ವಿಶೇಷ ಕಾರ್ಯಕ್ರಮ ಅಭೂತ ಪೂರ್ವವಾಗಿ ನಡೆದಿದೆ.
2001ರಲ್ಲಿ ಪಿ.ಯು.ಸಿ.ಓದುತ್ತಿದ್ದ ವಿದ್ಯಾಥರ್ಿಗಳು ಹನ್ನೆರಡು ವರ್ಷಗಳ ಬಳಿಕ ತಾವು ಒಂದೆಡೆ ಕಲೆಯುವ ಮೂಲಕ ತಾವು ಓದುತ್ತಿದ್ದ ಕುಪ್ಪಾಳಿನ ಶ್ರೀ ಮಲ್ಲಿಕಾರ್ಜನ ಸಂಯುಕ್ತ ಪದವಿ ಪೂರ್ವ ಕಾಲೇಜ್ನ ಆವರಣದಲ್ಲಿ ಬೆರೆತು ತಮ್ಮ ಭಾವನೆಗಳನ್ನು ಹಂಚಿಕೊಂಡರು. ಈ ರೀತಿಯ ಆಲೋಚನೆ ಮಾಡಿದ್ದು ಕಲಾವಿದ ಗೋಪಾಲನಹಳ್ಳಿ ಆತ್ಮಾನಂದ, ತನ್ನ ಜೊತೆಯ 80 ವಿದ್ಯಾಥರ್ಿಗಳ ವಿಳಾಸ, ಪೋನ್ ನಂಬರ್ಗಳನ್ನು ಸಂಗ್ರಹಿಸಿ ಅವರಿಗೆಲ್ಲಾ ವಿಷಯ ತಿಳಿಸಿ ಕಾಲೇಜ್ಗೆ ಬರಮಾಡಿಕೊಂಡು ವೈಭವದ ಕಾರ್ಯಕ್ರಮವನ್ನು ಗೆಳೆಯರ ಸಹಾಯದಿಂದ ಆಯೋಜಿಸಿದ್ದರು. 
ಸಮಾರಂಭದಲ್ಲಿ ಸ್ನೇಹಿತರೆಲ್ಲಾ ತಮ್ಮ ವೃತ್ತಿ ಜೀವನ, ಸಿಹಿ ಕಹಿ ಘಟನೆಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು. ನಿವೃತ್ತ ಪ್ರಾಂಶುಪಾಲರಾದ ಕೆ.ಸಿ.ಮಲ್ಲಿಕಾಜರ್ುನಯ್ಯ ಹಾಗೂ ನಿವೃತ್ತ ಹಿರಿಯ ಶಿಕ್ಷಕ ಬಾಲರಾವ್ರವರನ್ನು ಸನ್ಮಾನಿಸಲಾಯಿತು.  ಸ್ನೇಹಿತ ಶಿವಕುಮಾರ್ ಆಕಸ್ಮಿಕ ಮರಣಹೊಂದಿದ್ದು ಅವರ ಸ್ಮರಣೆಯ ಪ್ರಯುಕ್ತ ಮೌನ ಆಚರಿಸಿದರು.
 ಮುಂದಿನ ದಿನಗಳಲ್ಲಿ ಸ್ನೇಹಿತರು ಪರಸ್ಪರ ಕಷ್ಟ ಸುಖಗಳನ್ನು ಭಾಗಿಯಾಗಬೇಕೆಂದು ದೃಢ ತೀಮರ್ಾನ ತೆಗೆದುಕೊಂರು, ಸಮಾರಂಭದ ನಂತರ ಎಲ್ಲಾ ಸ್ನೇಹಿತರು ತಮ್ಮೊಂದಿಗೆ ಕಲಿತಿದ್ದ ಸ್ನೇಹಿತೆಯರಿಗೆ ಬಾಗಣ ನೀಡಿ ಆತ್ಮೀಯವಾಗಿ ಗೌರವಿಸಿ ಕಳುಹಿಸಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ನಾಗರಾಜು ವಹಿಸಿದ್ದರು, ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.



(ಸಿ.ಗುರುಮೂತರ್ಿ ಕೊಟಿಗೆಮನೆ)
ಮುತ್ಸದ್ದಿ ರಾಜಕಾರಣಿ   ಜೆ.ಸಿ.ಮಾಧುಸ್ವಾಮಿ ನಿವೃತ್ತರಾಗುತ್ತಾರೆಯೇ. . . . . ?!


ಚಿಕ್ಕನಾಯಕನಹಳ್ಳಿ,ಮೇ.22: ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಕೆ.ಎಂ.ಎಫ್ ಅಧ್ಯಕ್ಷರಾಗಿ, ಜೆ.ಡಿ.ಯು.ನಿಂದ  ಸದನದ ನಾಯಕರಾಗಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ, ಸದನ ಶೂರ ಎನಿಸಿಕೊಂಡಿದ್ದ ಹಾಗೂ ಈ ಬಾರಿಯ ಚುನಾವಣೆಯಲ್ಲಿ ಕೆ.ಜೆ.ಪಿ. ಪಕ್ಷದಿಂದ ಸೋಲುಂಡ ಮುತ್ಸದ್ದಿ ರಾಜಕಾರಣಿ ಜೆ.ಸಿ.ಮಾಧುಸ್ವಾಮಿ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡುತ್ತಿರುವುದು  ಕ್ಷೇತ್ರದ ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚಚರ್ೆಯಾಗುತ್ತಿದೆ.
ಈ ರೀತಿಯ ಚಚರ್ೆಯನ್ನು ಆರಂಭಿಸಿರುವವರು ಸ್ವತಃ ಜೆ.ಸಿ.ಮಾಧುಸ್ವಾಮಿಯವರೇ, ತಮ್ಮ ಬಳಿ ಬರುವ ತಮ್ಮ ಅಭಿಮಾನಿಗಳ ಬಳಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಈ ವಿಚಾರವಾಗಿ ಪ್ರಸ್ತಾಪಿಸುತ್ತಿರುವುದು ಗುಟ್ಟಾಗಿ ಉಳಿದಿರುವ ವಿಷಯವಲ್ಲ. ಅವರ  ಈಗಲೂ ಯಾರೇ ಕೆಲಸ ಕೇಳಿಕೊಂಡು ಹೋದವರಿಗೆ ರಾಜಕೀಯದಿಂದ ದೂರ ಉಳಿಯಬೇಕೆಂದಿದ್ದೇನೆ ಯಾಕೆ ನಮ್ಮ ಬಳಿ ಬರುತ್ತೀರ ಎನ್ನುತ್ತಲೇ ಬಂದವರ ಕೆಲಸದ ಬಗ್ಗೆ  ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಮಾಡಿ ಕೆಲಸ ಮಾಡಿಸುತ್ತಾರೆ. ಅಭಿಮಾನಿಗಳು, ಕಾರ್ಯಕರ್ತರು ಮುಂದೆ ಏನು ಮಾಡುವುದು ಎಂದು ಕೇಳಿದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ ಎಂಬ ಮಾತುಗಳಾಡುತ್ತಾರೆ ಎಂದು ಅವರ ಆಪ್ತರು ಹೇಳುತ್ತಾರೆ.
ಕಳೆದ ಎರಡು ಬಾರಿಯಿಂದ ಸೋಲು ಅನುಭವಿಸಿರುವ ನೇರ ನಿಷ್ಠುರ ಮಾತುಗಾರ ಜೆ.ಸಿ.ಎಂ. ತಮ್ಮ ರಾಜಕೀಯ ನಿವೃತ್ತಿಯ ಬಗ್ಗೆಯೂ ಅಷ್ಟೇ ದಿಟ್ಟವಾಗಿ ನೇರವಾಗಿ ಮಾತನಾಡುತ್ತಿದ್ದಾರೆ ಎಂಬುದು ಅವರ ಆಪ್ತರ ಅಭಿಪ್ರಾಯ. ಈ ಬಾರಿಯ ಚುನಾವಣೆಯಲ್ಲಿ ಗೆದ್ದೇತೀರಬೇಕೆಂದು ತಂತ್ರಗಾರಿಕೆಯ ಜೊತಗೆ ಎಲ್ಲಾ ರೀತಿಯಲ್ಲೂ ಬಹಳಷ್ಟು ಶ್ರಮ ಹಾಕಿದ್ದ ಜೆ.ಸಿ.ಎಂ. ತಮ್ಮ ಸೋಲಿನಿಂದ ವಿಚಲಿತರಾಗಿದ್ದಾರೆ. ಅಷ್ಟೇ ಅಲ್ಲ ತಮ್ಮ ರಾಜಕೀಯ ನಡೆಯ ಬಗ್ಗೆಯೂ ಅಸ್ಪಷ್ಟ ಚಿತ್ರಣದಿಂದಾಗಿ ಗೊಂದಲಕ್ಕೀಡಾಗಿದ್ದಾರೆ.
ಹಿನ್ನೆಡೆಗೆ ಕಾರಣಗಳೇನು...?: ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಪುನರ್ ವಿಂಗಡಣೆಯಿಂದ ಇವರ ಓಟ್ ಬ್ಯಾಂಕ್ ಬದಲಾಗಿರುವುದಷ್ಟೇ ಅಲ್ಲ, ಯಾವ ಪಕ್ಷದ ಚಿಹ್ನೆ ಅಡಿಯಲ್ಲಿ ನಿಲ್ಲಬೇಕೆಂಬ ಗೊಂದಲದಿಂದ  ಶುರುವಾದ ಇವರ ಚುನಾವಣಾ ಪರ್ವ ಕೆ.ಜೆ.ಪಿ.ಗೆ ಸೇರುವ ವರೆಗೆ ಅನಿಶ್ಚಿತವಾಗಿಯೇ ನಡೆಯಿತು. ಚುನಾವಣೆಗೆ ಮುನ್ನ ಕಾಂಗ್ರೆಸ್ಗೆ ಸೇರಬೇಕೊ ಅಥವಾ ಕೆ.ಜೆ.ಪಿ.ಗೆ ಸೇರಬೇಕೊ ಎಂಬ ಗೊಂದಲವೇ ಇವರನ್ನು ಬಹಳಷ್ಟು ತಿಂಗಳು ಕಾಡಿತು, ಈ ಮಧ್ಯೆ ಜೆ.ಸಿ.ಎಂ. ಕೆ.ಜೆ.ಪಿ.ಸೇರದಿದ್ದರೆ ಆ ಪಕ್ಷದಿಂದ ಮತ್ತೊಬ್ಬ ಲಿಂಗಾಯಿತ ಹೊಸ ಅಭ್ಯಾಥರ್ಿ ಹುಟ್ಟುವ ಲಕ್ಷಣಗಳು ಕಂಡಿದ್ದರಿಂದ ಹಾಗೂ 2008ರ ಚುನಾವಣೆಯಲ್ಲಿ ತನ್ನ ಸೋಲಿಗೆ ಯಡಿಯೂರಪ್ಪನವರ ಅಲೆಯೇ ಕಾರಣ ಎಂಬ ಅಭಿಪ್ರಾಯವಿದದ್ದರಿಂದ ಕೊನೆಗೆ ಕೆ.ಜೆ.ಪಿ.ಗೆ ಸೇರ್ಪಡೆಗೊಂಡು ಆ ಪಕ್ಷದಿಂದ ಸ್ಪಧರ್ಿಸಿದ್ದರು.
ಚುನಾವಣೆ ಇನ್ನೂ ಆರು ತಿಂಗಳು ಇರುವಾಗಲೇ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ತೆರಳಿ ಅಲ್ಲಿ ಅವರ ಕಾರ್ಯಕರ್ತರು, ಅಭಿಮಾನಿಗಳನ್ನೆಲ್ಲಾ ಭೇಟಿ ಮಾಡಿ ತಮ್ಮ ಮುಂದಿನ ಆಲೋಚನೆಗಳನ್ನೇಲ್ಲಾ ಹಂಚಿಕೊಂಡು ತಮ್ಮ ಪರವಾದ ಪಡೆಯನ್ನೇ ಕಟ್ಟುತ್ತಿದ್ದರು.  ಹುಳಿಯಾರು, ಬುಕ್ಕಾಪಟ್ಟಣ ಹೋಬಳಿಗಳಿಗೂ ಅಷ್ಟೇ ಮಹತ್ವವನ್ನು ಕೊಟ್ಟಿದ್ದರೂ, ಇಷ್ಟೆಲ್ಲಾ ಪ್ರಯತ್ನ ಪಟ್ಟರು ಹೀಗಾಯಿತಲ್ಲಾವೆಂಬುದು ಒಂದಡೆಯಾದರೆ, ಮುಂದೇನು ಎಂಬ ವಿಚಾರ ಅವರನ್ನು ಸಾಕಷ್ಟು ಚಿಂತನೆಗೆ ಈಡುಮಾಡಿದೆ.
ಮುಂದಿನ ಅವಕಾಶಗಳು: ಇನ್ನೂ ಒಂದುವರ್ಷವಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದ ಕಸರತ್ತು ಶುರು ಮಾಡುತ್ತಾರೆಂಬ ಒಂದು ಲಹರಿ ಇದೆ, ತುಮಕೂರು ಎಂ.ಪಿ.ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪಧರ್ಿಸುವ ಈರಾದೆ ಇದೆ, ಆದರೆ ಅಲ್ಲಿಗಾಗಲೇ ಈಗಿರುವ ಎಂ.ಪಿ.ಯವರು ಕಾಂಗ್ರೆಸ್ಗೆ ಹೋಗುತ್ತಾರೆ, ಆ ಪಕ್ಷದಿಂದ ಸ್ಪಧರ್ಿಸುತ್ತಾರೆ ಎಂಬು ಕೂಗು ಕೇಳಿಬರುತ್ತಿರುವುದು ಇವರ ದಾರಿಗೆ ತೊಂದರೆಯಾಗಿದೆ. 
ಇನ್ನೂ ಕ್ಷೇತ್ರ ಬದಲಾಯಿಸುವ ಬಗ್ಗೆ ಯೋಚಿಸುವ ಆಲೋಚನೆಯ ಬಗ್ಗೆ ವಿಚಾರ ಬಂದರೂ ಕಳೆದ ಬಾರಿ ಸೋತ ಸಂದರ್ಭದಲ್ಲೇ ಅವರು ಒಂದು ಮಾತು ಹೇಳಿದ್ದರು, ಏನೇ ಆದರೂ ಸೋತ ಕ್ಷೇತ್ರದಲ್ಲಿ ಗೆದ್ದನಂತರವೇ  ಬದಲಾವಣೆಯ ಆಲೋಚನೆಯೇ ಹೊರತು ಅಲ್ಲಿಯವರೆಗೆ ನಾನು ಕ್ಷೇತ್ರ ಬದಲಾವಣೆಯ ಮಾತನಾಡುವುದಿಲ್ಲವೆಂದಿದ್ದರು. ಹಾಗಾಗಿ ಈ ಅವಕಾಶಗಳೂ ಕಡಿಮೆ ಈ ಎಲ್ಲಾ ಲೆಕ್ಕಾಚಾರಗಳ ತಾಳೆ ನೋಡಿದರೆ, ಅವರು ರಾಜಕೀಯ ನಿವೃತ್ತಿಯ ಮಾತನಾಡುತ್ತಿರುವುದು ಸಹಜವೇ ಎನಿಸುತ್ತಿದೆ ಆದರೆ ಅವರು ಮಾತ್ರ ಅಧಿಕೃತವಾಗಿ ಏನನ್ನು ಹೇಳಿಲ್ಲಾ, ಎಲ್ಲವನ್ನು ಕಾದು ನೋಡುವ ತಂತ್ರದ ಜೊತೆಗೆ ಮುಂದಿನ ಅವಕಾಶಗಳ ತೆರೆದಿಟ್ಟುಕೊಂಡಿದ್ದಾರೆ.
ರಾಜಕೀಯ ವಲಯದಲ್ಲಿನ ಅಭಿಪ್ರಾಯಗಳು: ಇನ್ನೂ ಅವರ ರಾಜಕೀಯ ವಲಯದಲ್ಲಿ ಗುತರ್ಿಸಿಕೊಂಡವರ ಪ್ರಕಾರ, ಅವರು ಮಾತುಗಳು ಬಹಳ ಮಾಮರ್ಿಕವಾಗಿರುತ್ತವೆ, ಅದನ್ನು ಹೇಗೆ ಸ್ವೀಕರಿಸಬೇಕೆಂಬುದು ಇಷ್ಟು ಹತ್ತಿರದಲ್ಲಿರುವ ನಮಗೆ ತಿಳಿದಿರುವುದಿಲ್ಲ, ಅವರ ಪ್ರತಿ ನಡೆಯೂ ಒಂದು ರೀತಿ ನಿಗೂಢ, ಏನೇ ಆಗಲಿ ಅಂತಹ ಮುತ್ಸದ್ದಿ ರಾಜಕಾರಣಿಯೊಬ್ಬರು ಸೋಲು ಗೆಲವನ್ನು ಸಮಾನವಾಗಿ ತೆಗೆದುಕೊಳ್ಳಬೇಕು, ಆಟಕ್ಕೆ ಬಂದವರೆಲ್ಲಾ ಗೆಲ್ಲಲಾಗುವುದಿಲ್ಲ ಹಾಗಂತ ರಾಜಕೀಯ ನಿವೃತ್ತಿಯಂತಹ  ನಿಧರ್ಾರ ತೆಗೆದುಕೊಳ್ಳುವುದು ಸರಿಯಲ್ಲ ಎನ್ನುತ್ತಾರೆ ಅವರ ಅಭಿಮಾನಿ ಧನಂಜಯ.
ಇನ್ನೂ ಮಾಧುಸ್ವಾಮಿಯವರು ತಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕು, ಬಿರುನುಡಿಗಳನ್ನು ಬಿಡಬೇಕು, ಬಡವರ, ದೀನ ದಲಿತರ ಬಗ್ಗೆ  ಮೃದುಧೋರಣೆ ಇರಬೇಕು, ಯಾವ ರಾಜಕಾರಣಿಯೂ ಸತ್ಯಸಂದನಲ್ಲ ಕೆಲವೊಂದನ್ನಾದರೂ ಅನುಸರಿಸಿಕೊಂಡು ಹೋಗುವ ಗುಣ ಬೆಳಸಿಕೊಳ್ಳಬೇಕು ಜನ ಸಾಮಾನ್ಯರೊಂದಿಗೆ ಬೆರಯುವ ಗುಣ ಬೆಳಸಿಕೊಂಡರೆ ಭರವಸೆಯ ನಾಯಕರಾಗಬಲ್ಲ  ಎಂದು ಹೇಳುತ್ತಲೇ ಆಕಾಶದ ಕಡೆ ಮುಗ ಮಾಡುತ್ತಾನೆ ಹೆಸರು ಬಹಿರಂಗ ಪಡಿಸಲಿಚ್ಚಸದ ಅವರ ನಿಕಟವತರ್ಿ. 

 ಜನರ ಪ್ರೀತಿ,ವಿಶ್ವಾಸದ ಜೊತೆಗೆ ಕ್ಷೇತ್ರದ ಅಭಿವೃದ್ದಿಯೇ ನನ್ನ ಆದ್ಯತೆ: ಶಾಸಕ ಸಿ.ಬಿ.ಸುರೇಶ್ಬಾಬು

ಚಿಕ್ಕನಾಯಕನಹಳ್ಳಿ,ಮೇ.23 : ಕ್ಷೇತ್ರದ ಎಲ್ಲಾ ವರ್ಗದ ಜನತೆಯ ಆಶೀವರ್ಾದದಿಂದ ಮೂರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದು ನನ್ನ 42ವರ್ಷ ಜೀವನದಲ್ಲಿ ಐದು ಬಾರಿ ಚುನಾವಣೆ ಎದುರಿಸಿ 3ಬಾರಿ ಗೆಲುವು ಹಾಗೂ 2ಬಾರಿ ಸೋಲನ್ನು ಕಂಡಿರುವೆ, ಶಾಸಕನಾಗಿ ಅಧಿಕಾರವಿದೆ ಎಂದು ನಾನೂ ಎಂದಿಗೂ ದರ್ಪದಿಂದ ವತರ್ಿಸದೆ ಜನರ ಪ್ರೀತಿ, ವಿಶ್ವಾಸಗಳಿಸಿ ಕ್ಷೇತ್ರದ ಅಭಿವೃದ್ದಿಗೆ ಮುಂದಾಗಿರುವೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ವಿಧಾನಸಭೆಗೆ ಅಧಿಕ ಮತದಿಂದ ಆಯ್ಕೆಯಾದ ಸಿ.ಬಿ.ಸುರೇಶ್ಬಾಬು ಹಾಗೂ ಪುರಸಭೆಯ ಎಲ್ಲಾ ವಾಡರ್್ಗಳ ನೂತನ ಸದಸ್ಯರಿಗೆ ಗೌರವಾಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಈ ಅಧಿಕಾರಾವಧಿಯಲ್ಲಿ ತಾಲ್ಲೂಕಿನಲ್ಲಿ ಒಂದು ಸುಸಜ್ಜಿತವಾದ ತೀ.ನಂ.ಶ್ರೀ ಭವನ ನಿಮರ್ಾಣ, ಹೇಮಾವತಿ ಕುಡಿಯುವ ನೀರನ್ನು ತಾಲ್ಲೂಕಿನ ಜನತೆಗೆ ಸಿಗುವಂತೆ ಮಾಡುವುದು, ತಾಲ್ಲೂಕಿನಲ್ಲಿ ವಿದ್ಯಾಥರ್ಿಗಳಿಗಾಗಿ ಒಂದು ಸಕರ್ಾರಿ ಅಥವಾ ಖಾಸಗಿ ಪಾಲಿಟೆಕ್ನಿಕ್ ಕಾಲೇಜು ತರುವುದಾಗಿ ತಿಳಸಿದರು.
ತಾಲ್ಲೂಕಿನಲ್ಲಿ ಆರಂಭಿಸಲು ಉದ್ದೇಶಿಸಿರುವ  ಗಾಮರ್ೆಂಟ್ಸ್ಗೆ ಈಗಾಗಲೇ ನಾಲ್ಕೈದು ಪ್ರತಿಷ್ಠಿತ ಗಾಮರ್ೆಂಟ್ಸ್ ಕಂಪನಿಗಳಲ್ಲಿ ಚಚರ್ಿಸಿದ್ದು ಅವರು ತಾಲ್ಲೂಕಿನಲ್ಲಿ ಗಾಮರ್ೆಂಟ್ಸ್ ಆರಂಭಿಸಲು ಮುಂದಾಗಿದ್ದಾರೆ ಎಂದರಲ್ಲದೆ, ಈ ಮೂಲಕ ತಾಲ್ಲೂಕಿನ ನಿರುದ್ಯೋಗ ಯುವಕ, ಯುವತಿಯರು ಗುಳೇ ಹೋಗದೇ ತಮ್ಮ ಸ್ಥಳದಲ್ಲೇ ಉತ್ತಮ ಸಂಬಳ ಪಡೆದು ನೆಮ್ಮದಿಯಿಂದ ಜೀವನ ನಡೆಸಬಹುದಾಗಿದೆ ಈ ಕಾರ್ಯಕ್ಕೆ ಎಲ್ಲಾ ಸಂಘ-ಸಂಸ್ಥೆಗಳ ನೆರವು ಮತ್ತು ಮಾರ್ಗದರ್ಶನ ಅಗತ್ಯವಾಗಿದೆ ಎಂದರಲ್ಲದೆ ಜನತೆಯಲ್ಲಿ ಮನೆ ಮಾಡಿರುವ ಜಾತಿ ವ್ಯವಸ್ಥೆ ಹಾಗೂ ಭೇದ-ಭಾವ ತೊಲಗಿಸಲು ಕರೆ ನೀಡಿದರು.
ಸಾರ್ವಜನಿಕ ಸೇವೆಗೆ ಹೆಚ್ಚಿನ ಒತ್ತು ನೀಡಿ ಅವರ ಅಭಿವೃದ್ದಿ ಮೂಲಕ ತಮ್ಮ ಸಂಸ್ಥೆಯ ಏಳಿಗೆಯನ್ನು ಕಾಣುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದ್ದು, ಈ ಸಂಸ್ಥೆಯ ಶಿಸ್ತಿನ ಆದರ್ಶದ ಸೇವೆ ಇನ್ನಷ್ಟು ಹೆಚ್ಚಲಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಆಶಿಸಿದರು.
ರೋಟರಿಯ ಜಿಲ್ಲಾ 3190ರ ಗವರ್ನರ್ ರೊ.ಆರ್.ಬದರಿಪ್ರಸಾದ್ ಮಾತನಾಡಿ ರೋಟರಿ ಅಧ್ಯಕ್ಷ ಹಾಗೂ ಕಾರ್ಯದಶರ್ಿ ಹುದ್ದೆ ಜವಬ್ದಾರಿಯುತವಾದ ಅಧಿಕಾರ, ಇಲ್ಲಿ ಸಾರ್ವಜನಿಕರ ಸೇವೆಗೆ ತಮ್ಮ ಸಮಯವನ್ನು ಮುಡಿಪಾಗಿಡಬೇಕು, ರೋಟರಿ ಸಂಸ್ಥೆ ಸಾರ್ವಜನಿಕರಿಗಾಗಿ ಹಲವು ಸೇವೆ ನೀಡಿದ್ದು ತಾಲ್ಲೂಕಿನಲ್ಲಿ ಪುರಸಭೆ ಜಾಗ ನೀಡಿದ್ದರೆ ಸಂಸ್ಥೆ ವತಿಯಿಂದ 50 ಮನೆಗಳನ್ನು ನಿಮರ್ಿಸಲು ಮುಂದಾಗಿದ್ದೆವು ಆದರೆ ಜಮೀನಿನ ಸಮಸ್ಯೆಯಿಂದ ಕೆಲಸವಾಗಲಿಲ್ಲ ಮುಂದೆ ಪುರಸಭೆ ಹಾಗೂ ಶಾಸಕರು ಸಂಸ್ಥೆಯೊಂದಿಗೆ ಕೈ ಜೋಡಿಸಿದರೆ  ಉತ್ತಮ ಸೇವೆ ನೀಡುವುದಾಗಿ ತಿಳಿಸಿದರು.
ರೊಟರಿಯ ಅಸಿಸ್ಟೆಂಟ್ ಗವರ್ನರ್ ರೊ.ಬಿಳಿಗೆರೆ ಶಿವಕುಮಾರ್ ಮಾತನಾಡಿ ಒಂದು ತಿಂಗಳಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ರೋಟರಿ ಅಧ್ಯಕ್ಷ, ಕಾರ್ಯದಶರ್ಿಗಳ ಅಧಿಕಾರಾವಧಿಯು  ಮುಗಿಯಲಿದ್ದು ಮುಂದೆ ಅಧಿಕಾರ ವಹಿಸಿಕೊಳ್ಳಲಿರುವ ಅಧ್ಯಕ್ಷರು, ಎಂ.ವಿ.ನಾಗರಾಜ್ರಾವ್ರವರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಉತ್ತಮ ಕಾರ್ಯಕ್ರಮಗಳನ್ನು ನಡೆಸಿರಿ ಎಂದು ತಿಳಿಸಿದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಸನ್ಮಾನ ಸ್ವೀಕರಿಸಿ ಮಾತನಾಡಿ ರೋಟರಿ ಸಂಸ್ಥೆ ಪೋಲಿಯೋ ನಿಮರ್ೂಲನಾ ರಾಷ್ಟ್ರ ಮಾಡುವಲ್ಲಿ ಯಶಸ್ವಿಯೂ ಆಗಿದೆ, ರೋಟರಿ ಸಂಸ್ಥೆಯಿಂದ ತಾಲ್ಲೂಕಿನಲ್ಲಿ 50ಮನೆಗನ್ನು ನಿಮರ್ಾಣ ಮಾಡಿಕೊಡುವ ಕಾರ್ಯ ಉತ್ತಮವಾಗಿದ್ದು ಈ ಕಾರ್ಯಕ್ಕೆ ಪುರಸಭೆ ಸ್ಪಂದಿಸುತ್ತದೆ ಎಂದರಲ್ಲದೆ ತಾಲ್ಲೂಕನ್ನು ಕಸಮುಕ್ತ ನಗರವಾಗಲು ಪುರಸಭೆ ತೀಮರ್ಾನಿಸಿದ್ದು ಇದಕ್ಕೆ ರೋಟರಿ ಸಂಸ್ಥೆ ನಮ್ಮೊಂದಿಗೆ ಕೈ ಜೋಡಿಸುವಂತೆ ಕೋರಿದರು. 
ಸಮಾರಂಭದಲ್ಲಿ ವಿಧಾನಸಭೆಗೆ ಅಧಿಕ ಮತದಿಂದ ಆಯ್ಕೆಯಾದ ಸಿ.ಬಿ.ಸುರೇಶ್ಬಾಬು ಹಾಗೂ ಪುರಸಭೆಯ ಎಲ್ಲಾ ವಾಡರ್್ಗಳ ನೂತನ ಸದಸ್ಯರಿಗೆ ಗೌರವಿಸಲಾಯಿತು. ಹಾಗೂ ತಾಲ್ಲೂಕಿನ 30 ಶಾಲೆಗಳಿಗೆ ಉಚಿತ ವಾಟರ್ ಪಿಲ್ಟರ್ನ್ನು ನೀಡಲಾಯಿತು. 
ಸಮಾರಂಭದಲ್ಲಿ  ರೋಟರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸಿ.ಎಂ.ಸುರೇಶ್, ಇನ್ನರ್ವೀಲ್ ಅಧ್ಯಕ್ಷೆ ಭವಾನಿಜಯರಾಂ, ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಎಂ.ದೇವರಾಜು ಉಪಸ್ಥಿತರಿದ್ದರು.

ಬೇಸಿಗೆಯ ರಂಗತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ,ಮೇ.23: ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಬೇಸಿಗೆಯ ರಂಗತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿ.ಎಸ್.ಗಂಗಾಧರ್ ತಿಳಿಸಿದ್ದಾರೆ.
ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇ26 ಭಾನುವಾರ ಬೆಳಿಗ್ಗೆ 10ಗಂಟೆಗೆ ಬೇಸಿಗೆಯ ರಂಗತರಬೇತಿ ಶಿಬಿರ ಪ್ರಾರಂಭವಾಗುವುದು. ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜಿನ ವಿಧ್ಯಾಥರ್ಿಗಳಿಗೆ ಚಿ.ನಾ.ಹಳ್ಳಿಯ ಸ್ವರಗಂಗಾ ಸ್ಕೂಲ್ ಆಫ್ ಅಕಾಡಮಿ ವತಿಯಿಂದ ವಚನಗಳು, ಶ್ಲೋಕಗಳು, ಸುಗಮ ಸಂಗೀತ, ಭಕ್ತಿಗೀತೆಗಳು, ಚಲನಚಿತ್ರ ಗೀತೆಗಳಿಗೆ ತರಬೇತಿ ಮತ್ತು ರಂಗ ಅಭಿನಯವನ್ನು ಹೇಳಿಕೊಡಲಾಗುವುದು. ಗಾನವಿಶಾರದ ಸಂಗೀತ ವಾದ್ಯವೈವಿದ್ಯ ನಾಟ್ಯ ಸಂಘದ ಜೂ.ಪಿ.ಬಿ.ಶ್ರೀನಿವಾಸ್ ಎಂ.ಸಿ.ಕಲ್ಲೇಶ್ ಮತ್ತು ತಾಲ್ಲೂಕು ರಂಗಕಲಾವಿದರ ಸಂಘ ಇವರ ಸಹಕಾರದಲ್ಲಿ ವಿಶೇಷವಾಗಿ ಶಿಬಿರದಲ್ಲಿ ತರಬೇತಿಯಾದ ಉತ್ತಮ ಕಲಾಪ್ರತಿಭೆಗಳನ್ನು ಗುರುತಿಸಿ ದೂರದರ್ಶನ(ಚಂದನ ವಾಹಿನಿ)ಹಾಗು ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ನೀಡಲು ಅವಕಾಶ ಕಲ್ಪಿಸಿ ಕೊಡುವುದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 9538431494.
ಬೆಸ್ಕಾಂ ಸಿಬ್ಬಂದಿಗಳ ಬೇಜವಬ್ದಾರಿಗೆ ಮುಗ್ಧ ಜೀವವೊಂದು ಬಲಿ
ಚಿಕ್ಕನಾಯಕನಹಳ್ಳಿ,ಮೇ.23 :ಬೆಸ್ಕಾಂ ಸಿಬ್ಬಂದಿಗಳ ಬೇಜವಬ್ದಾರಿಗೆ ಮುಗ್ಧ ಜೀವವೊಂದು ಬಲಿಯಾಗಿದ್ದು ಪಾರದರ್ಶಕ ತನಿಖೆ ನಡೆಸಿ ಬೇಜವ್ದಾರಿ ತೋರಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಅಧಿಕಾರಿಗಳಿಗೆ ತಾಕೀತು ಮಾಡಿದರು.
 ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಶೆಟ್ಟಿಕೆರೆ ಹೋಬಳಿ ದಿಬ್ಬದಹಳ್ಳಿಯಲ್ಲಿ ಬುಧವಾರ ಸಂಜೆ 7.30ರ ಸುಮಾರಿನಲ್ಲಿ ಹೈ ಓಲ್ಟೇಜ್ ವಿದ್ಯತ್ ಪ್ರವಹಿಸಿದ್ದರ ಪರಿಣಾಮ ಶಿವಕುಮಾರ್ ಅವರ ಪುತ್ರ ಸುಮಾರು 3 ವರ್ಷದ ಪ್ರಜ್ವಲ್ ಎಂಬ ಬಾಲಕ ಟಿ.ವಿ.ಸ್ಟಾಂಡ್ ಮುಟ್ಟುತ್ತಲೇ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದು ಸಂತ್ರಸ್ತ ಕುಟುಂಬಕ್ಕೆ ಗುರುವಾರ ಬೆಸ್ಕಾಂನಿಂದ ಕೊಡಮಾಡಿದ 2ಲಕ್ಷ ಮೊತ್ತದ ಚಕ್ ವಿತರಿಸಿ ಮಾತನಾಡುತ್ತಿದ್ದರು
   ಈ ಗ್ರಾಮದಲ್ಲಿ ಕಳೆದ 4 ದಿನಗಳಿಂದ ವಿದ್ಯುತ್ ಏರುಪೇರಾಗುತ್ತಿತ್ತು. 220 ವೋಲ್ಟೇಜ್ ಬದಲಿಗೆ 440 ವೋಲ್ಟೇಜ್ ವಿದ್ಯುತ್ ಹರಿಯುತ್ತಿತ್ತು. ಗೋಡೆಗಳಿಗೆ ಗ್ರೌಂಡ್ ಆಗಿ ಹಲವರಿಗೆ ಸಣ್ಣ ಪುಟ್ಟ ಶಾಕ್ಗಳೂ ಆಗಿದ್ದು ಈ ಬಗ್ಗೆ ಗ್ರಾಮಸ್ಥರು ಚಿಕ್ಕನಾಯಕನಹಳ್ಳಿ ಎಇಇ ಅವರಿಗೆ ತಿಳಿಸಿದ್ದರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ ಆದ್ದರಿಂದ ಗ್ರಾಮಸ್ತರೇ ವಿದ್ಯತ್ ಸಂಪರ್ಕವನ್ನು ತೆಗೆದಿದ್ದರು ಎಂದು ಗ್ರಾಮಸ್ತರು ದೂರಿದರಲ್ಲದೆ. ಬುಧವಾರ ಗ್ರಾಮಕ್ಕೆ ಆಗಮಿಸಿದ ಬೆಸ್ಕಾಂ ಸಿಬ್ಬಂದಿ ವಿದ್ಯತ್ ಪರಿವರ್ತಕಕ್ಕೆ ಸಂಪರ್ಕ ಕಲ್ಪಿಸಿ ಪರಿಶೀಲಿಸದೆ ಮರಳಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ತರು ದೂರಿದರು
 ತನಿಕೆ ಕೈಗೋಂಡಿರುವ ಡೆಪ್ಯೂಟಿ ಎಲೆಕ್ಟ್ರಿಕಲ್ ಇಂಜಿನಿಯರ್ ಹರ್ಷ ಕುಮಾರ್ ತನಿಕೆ ಪೂರ್ಣಗೊಂಡ ನಂತರ ಘಟನೆಯ ಪೂರ್ಣವಿವರ ನೀಡಲಾಗುವುದು ಎಂದು ತಿಳಿಸಿದರು.
 ಸ್ಥಳಕ್ಕೆ ತಹಶಿಲ್ದಾರ್ ಕಾಮಾಕ್ಷಮ್ಮ,ಸಿಡಿಪಿಒ ಅನೀಸ್ ಖೈಸರ್,ಡೆಪ್ಯೂಟಿ ಎಲೆಕ್ತ್ರಿಕಲ್ ಇಂಜಿನಿಯರ್ ಹರ್ಷ ಕುಮಾರ್,ವೈತ್ತ ನಿರೀಕ್ಷಕ ಪ್ರಭಾಕರ್,ಎಎಸೈ ನರಸಿಂಹಯ್ಯ ಮುಂತಾದವರು ಬೇಟಿ ನೀಡಿದ್ದರು.
ವಿದ್ಯಾಥರ್ಿ ನಿಲಯಗಳಿಗೆ ವಿದ್ಯಾಥರ್ಿಗಳನ್ನು ದಾಖಲು ಮಾಡಿಕೊಳ್ಳಲು ಅಜರ್ಿ
ಚಿಕ್ಕನಾಯಕನಹಳ್ಳಿ,ಮೇ.23 : ತಾಲ್ಲೂಕು ಸಮಾಜಕಲ್ಯಾಣ ಇಲಾಖಾ ವ್ಯಾಪ್ತಿಯ ವಿದ್ಯಾಥರ್ಿ ನಿಲಯಗಳಿಗೆ ವಿದ್ಯಾಥರ್ಿಗಳನ್ನು ದಾಖಲು ಮಾಡಿಕೊಳ್ಳಲು ಅಜರ್ಿಗಳನ್ನು ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ 2013-14ನೇ ಸಾಲಿಗೆ ಸೇರ ಬಯಸುವ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಠ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳ 5ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾಥರ್ಿ, ವಿದ್ಯಾಥರ್ಿನಿಯರಿಂದ ಅಜರ್ಿಯನ್ನು ಆಹ್ವಾನಿಸಿದ್ದು ಜೂನ್ 2013ರ 10ನೇ ತಾರೀಖು ಅಜರ್ಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿನಿಲಯ, ಚಿಕ್ಕನಾಯಕನಹಳ್ಳಿ ಟೌನ್, ಬೆಳಗುಲಿ, ಬರಕನಹಾಳ್, ಹುಳಿಯಾರು, ದಸೂಡಿ, ಗುರುವಾಪುರ ಮತ್ತು ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯ, ಚಿಕ್ಕನಾಯಕನಹಳ್ಳಿ ಟೌನ್, ಹುಳಿಯಾರು ಈ ನಿಲಯಗಳಲ್ಲಿ ಅಜರ್ಿ ಸಲ್ಲಿಸಬಹುದು. ಸಂಬಂಧಿಸಿದ ವಿದ್ಯಾಥರ್ಿ ನಿಲಯಗಳಲ್ಲಿ ಅಜರ್ಿಗಳನ್ನು ಉಚಿತವಾಗಿ ಪಡೆಯಬಹುದು ಮತ್ತು ಕಛೇರಿ ವೇಳೆಯಲ್ಲಿ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಅಜರ್ಿಗಳನ್ನು ಪಡೆಯಬಹುದು.
ಅಜರ್ಿಯೊಂದಿಗೆ ಇತ್ತೀಚಿನ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಅಂಕಪಟ್ಟಿ ಲಗತ್ತಿಸಿ ಸಲ್ಲಿಸಲು ಕೋರಿದೆ. ಹಾಗೂ ಈ ವಸತಿ ನಿಲಯಗಳಲ್ಲಿ ಉಚಿತವಾಗಿ ಊಟ, ತಿಂಡಿ, ಸಮವಸ್ತ್ರ, ಸ್ಟೇಷನರಿ, ಸಂಕೀರ್ಣ ವಸ್ತುಗಳನ್ನು ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Monday, May 20, 2013



ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ಸಭೆ ಮತ್ತು ರೈತರ ಸಲಹಾ ಸಮಿತಿ
ಚಿಕ್ಕನಾಯಕನಹಳ್ಳಿ,ಮೇ.20 : ಪ್ರತಿ ಹೋಬಳಿಯಲ್ಲಿ ಎರಡು ಕುಚ್ಚಗ್ರಾಮಗಳನ್ನು ರಚಿಸಿ, ಆ ಗ್ರಾಮಗಳಿಗೆ ನವಣೆ ಮತ್ತು ತೊಗರಿಬೇಳೆ ಬೆಳಸಿ ಕೃಷಿ ಪ್ರಾತ್ಯಕ್ಷಿಕೆ ತರಬೇತಿ ಕ್ಷೇತ್ರೋತ್ಸವ ಪ್ರವಾಸವನ್ನು ವ್ಯವಸ್ಥಿತವಾಗಿ ನಡೆಸುವಂತೆ  ಆತ್ಮಯೋಜನೆಯ ತಾಲ್ಲೂಕು ತಾಂತ್ರಿಕ ಸಭೆ ಮತ್ತು ರೈತರ ಸಲಹಾ ಸಮಿತಿಯಲ್ಲಿ ರೈತರಿಗೆ ತಿಳಿಸಲಾಯಿತು.
ಕೃಷಿ ಇಲಾಖೆ ವತಿಯಿಂದ ಸೋಮವಾರದಂದು ನಡೆದ ಆತ್ಮಯೋಜನೆಯ ತಾಂತ್ರಿಕ ಸಭೆ, ತಾಲ್ಲೂಕು ರೈತರ ಸಲಹಾ ಸಮಿತಿಯಲ್ಲಿ ರೈತರು ಕೃಷಿಯಲ್ಲಿ ಬೆಳೆಗಳನ್ನು ಯಾವ ರೀತಿ ಬೆಳೆಯಬೇಕು ಅದಕ್ಕೆ ಅಳವಡಿಸಿಕೊಳ್ಳಬಹುದಾದ ವಿಧಾನದ ಬಗ್ಗೆ ತಿಳಿಸಲಾಯಿತು.
ತಾಂತ್ರಿಕ ಸಭೆಯಲ್ಲಿ ತಾಲ್ಲೂಕಿನ ಕೃಷಿ ಅಭಿವೃದ್ದಿ ಅಧಿಕಾರಿಗಳಾದ ಹೆಚ್.ಎನ್.ಕೃಷ್ಣಪ್ಪ, ಕೆವಿಕೆಯ ಕಾರ್ಯಕ್ರಮ ಸಂಯೋಜಕ ಸುಜಿತ್ ಜಿ.ಎಮ್, ಮತ್ತು ಕೃಷಿ ವಿಸ್ತರಣೆ ವಿಷಯ ತಜ್ಞರಾದ ಎಮ್.ಎಮ್.ಶಂಕರ್ ಭಾಗವಹಿಸಿ ರೈತರ ಸಲಹಾ ಸಮಿತಿಯ ಸದಸ್ಯರುಗಳಿಗೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ಗೋಪಾಲನಹಳ್ಳಿ, ಕುಪ್ಪೂರು ಇತರೆ ಹಳ್ಳಿಗಳ ರೈತ ಸಲಹಾ ಸಂಘದ ಸದಸ್ಯರುಗಳು ಭಾಗವಹಿಸಿದ್ದರು. ಅಧಿಕಾರಿಗಳಾದ ಕಾಂತರಾಜು ಕಾರ್ಯಕ್ರಮ ನಿರೂಪಿಸಿದರು.


ಹಳ್ಳಿಗಾಡಿನ ಜನ ಪ್ರಾಥಮಿಕ ಹಂತದಲ್ಲೇ ರೋಗ ತಪಾಸಣೆ ನಡೆಸಿಕೊಳ್ಳಿ
ಚಿಕ್ಕನಾಯಕನಹಳ್ಳಿ,ಮೇ.20 : ಹಳ್ಳಿಗಾಡಿನ ಜನ ಪ್ರಾಥಮಿಕ ಹಂತದಲ್ಲೇ ರೋಗ ತಪಾಸಣೆ ನಡೆಸಿಕೊಂಡು ಪರಿಹಾರ ಕಂಡುಕೊಳ್ಳುವುದರಿಂದ ಆಸ್ಪತ್ರೆಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸುವುದನ್ನ ತಪ್ಪಿಸಬಹುದು ಎಂದು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಸಲಹೆ ನೀಡಿದರು.
   ಪಟ್ಟಣದ ರೋಟರಿ ಭವನದಲ್ಲಿ ತಾಲ್ಲೂಕ್ ಡಾಕ್ಟರ್ಸ್ ಅಸೋಸಿಯೇಷನ್, ರೋಟರಿ ಕ್ಲಬ್ ಮತ್ತು ಸಕರ್ಾರಿ ಸಾರ್ವಜನಿಕ ಆಸ್ಪತ್ರೆ, ವಾಸನ್ ಐ ಕೇರ್ ತುಮಕೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ರೋಟರಿ ಸಂಸ್ಥೆ ಈ ರೀತಿಯ ಸಮಾಜ ಸೇವಾ ಕಾರ್ಯಗಳಿಗೆ ಯಾವಾಗಲೂ ಮುಂದಿದ್ದು ಜನರು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಕರೆ ನೀಡಿದರು.
  ಶಿಬಿರದಲ್ಲಿ ಕಿವಿ,ಗಂಟಲು,ಮೂಗು ಹಾಗು ನೇತ್ರ ದೋಷ ತಪಾಸಣೆಯನ್ನು ಮಾಡಲಾಯಿತು. ಶಿಬಿರದ ಮೇಲ್ವಿಚಾರಣೆಯನ್ನು ಆಡಳಿತ ವೈದ್ಯಾಧಿಕಾರಿ ಡಾ.ಎನ್.ಎಂ.ಶಿವಕುಮಾರ್, ತಾ.ವೈದ್ಯಾಧಿಕಾರಿ ಡಾ.ಕೆ.ಎಂ.ಶಿವಕುಮಾರ್ ನಡೆಸಿದರೆ ರೊಟೇರಿಯನ್ಗಳಾದ ಸಿ.ಎನ್.ಪ್ರದೀಪ್ ಕುಮಾರ್, ಎಸ್.ಜಿ.ಸುರೇಶ್ ಮತ್ತು ಇಬ್ರಾಹಿಂಸಾಬ್ ಶಿಬಿರಾಧಿಪತ್ಯವನ್ನು ನೋಡಿಕೊಂಡರು. ಡಾಕ್ಟರ್ಸ್ ಅಸೋಷಿಯನ್ನ ಅಧ್ಯಕ್ಷ ಸಿ.ಜಿ.ಜಗದೀಶ್, ರೋಟರಿ ಕಾರ್ಯದಶರ್ಿ ಎಂ.ದೇವರಾಜ್ ಮತ್ತು ಕಾರ್ಯದಶರ್ಿ ಡಾ.ಜಿ.ಪ್ರಶಾಂತ್ ಕುಮಾರ್ ಶೆಟ್ಟಿ ಉಸ್ತುವಾರಿ ವಹಿಸಿದ್ದರು. ಇನ್ನರ್ ವ್ಹೀಲ್ ಅಧ್ಯಕ್ಷೆ ನಾಗರತ್ನಮ್ಮ ಉಪಸ್ತಿತರಿದ್ದರು. ನೂರಾರು ಜನ ಶಿಬಿರದ ಸದುಪಯೊಗ ಪಡೆದುಕೊಂಡರು.


Saturday, May 18, 2013


ತಾಲೂಕಿನ ಸಕರ್ಾರಿ ಆಸ್ಪತ್ರೆಗಳಲ್ಲಿ ಶೇ.45ರಷ್ಟು ಸಿಬ್ಬಂದಿಗಳ ಕೊರತೆ
              

ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕಿನ ಆಸ್ಪತ್ರೆಗಳಲ್ಲಿ ಶೇ.45 ಸಿಬ್ಬಂದಿಗಳ ಕೊರತೆ ಇದ್ದು, ಜನಸಂಖ್ಯೆಗೆ ಅನುಗಣವಾಗಿ ಆಸ್ಪತ್ರೆಗಳಲ್ಲಿ ಮೂಲಭೂತ ಅಗತ್ಯಗಳಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ತಿಳಿಸಿದರು.
ತಾಲೂಕಿನ ಶೆಟ್ಟೀಕೆರೆಯಲ್ಲಿ ನಡೆದ ರಕ್ತದೊತ್ತಡ, ಮಧುಮೇಹ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ  ಮೂಲಭೂತ ಸೌಕರ್ಯಗಳಿಲ್ಲದೆ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿದೆ ಎಂದರಲ್ಲದೆ, ಈ ಬಗ್ಗೆ ಜನರಿಗೆ ಆರೋಗ್ಯ ಶಿಕ್ಷಣ ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಜನರೇ ಇರುವುದಿಲ್ಲವೆಂದ ಅವರು, ಅದೇ ಹಣ ಹಂಚುವ ಕಾರ್ಯಕ್ರಮ ಹಮ್ಮಿಕೊಂಡರೆ ನಾ ಮುಂದು, ತಾ ಮುಂದು ಎಂದು ಒಬ್ಬರ ಮೇಲೊಬ್ಬರು ಬರುತ್ತರೆ, ಶಿಕ್ಷಣ ನೀಡುತ್ತವೆಂದರೆ ಬೆರಳೆಣಿಕೆಯಷ್ಟು ಜನರು ಇರುವುದಿಲ್ಲವೆಂದರು. ಆನರು ಆಸ್ಪತ್ರೆಯಿಂದ ಹೇಗೆ ತಮ್ಮ ಕಾಯಿಲೆ ನಿವಾರಣೆಗೆ ಸ್ಪಂದಿಸಬೇಕೆಂದು ಅಪೇಕ್ಷಿಸುತ್ತಾರೋ ಅದೇರೀತಿ ಇಲಾಖೆಯು ಸಮುದಾಯದಿಂದ ಕೆಲವೊಂದು ಸಮಸ್ಯೆಗಳ ನಿವಾರಣೆಗೆ ಸ್ಪಂದಿಸಬೇಕೆಂಬ ಹಂಬಲವನ್ನು ಹೊಂದಿರುತ್ತದೆ ಎಂದರು.
ತಾ.ಪಂ.ಸದಸ್ಯ ರಮೇಶ್ ಕುಮಾರ್ ಮಾತನಾಡಿ,ಇಲ್ಲಿನ ಆಸ್ಪತ್ರೆಯ ವ್ಯವಸ್ಥೆ ಸುಧಾರಿಸಬೇಕು, ಇಲ್ಲಿನ ನಸರ್್ಗಳು ಹೆರಿಗೆ ಮಾಡಿ ಅವರ ಕಡೆಯಿಂದ ಹಣವನ್ನು ವಸೂಲಿ ಮಾಡಿ ಹಂಚಿಕೊಳ್ಳಲು ಕಿತ್ತಾಟಮಾಡುತ್ತಾರೆ, ಒಂದಿಬ್ಬರು ನಸರ್್ಗಳು ರೋಗಿಗಳ ಜೊತೆ ಅಸಭ್ಯವಾಗಿ ವತರ್ಿಸುತ್ತಾರೆ ಎಂದರಲ್ಲದೆ, ನಾನು ಈ ರೀತಿ ನೇರವಾಗಿ ಮಾತನಾಡುವುದು ಹಾಗೂ ಈ ಸಭೆಗೆ ಬಂದಿರುವುದೇ ಅವರಿಗೆ ಅಪಥ್ಯವಾಗಿದೆ ಎಂದರು.
ಗ್ರಾಮಸ್ವರಾಜ್ಯ ಚಿಂತಕ ರಘು ಗೋಪಾಲನಹಳ್ಳಿ ಮಾತನಾಡಿ, ರಕ್ತದಾನ, ಮರಣದ ನಂತರ ನೇತ್ರದಾನ ಹಾಗೂ ವೈದ್ಯಕೀಯ ಕಾಲೇಜ್ಗಳಿಗೆ ದೇಹದಾನ ಮಾಡುವುದರಿಂದ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಜೊತೆಗೆ ದಾನದ ಮಹತ್ವವನ್ನು ಮುಂದಿನ ಪೀಳಿಗೆಗೆ  ಒಳ್ಳೆಯ ಮಾರ್ಗವನ್ನು ತೋರಿಸಿಕೊಟ್ಟಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಗಣೇಶ್, ನೂತನ ವೈದ್ಯಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದ ಡಾ.ರಾಧಿಕ ಉಪಸ್ಥಿತರಿದ್ದರು.
ಫಾರ್ಮಸಿಸ್ಟ್ ರಘುನಾಥ್ ಸ್ವಾಗತಿಸಿ ನಿರೂಪಿಸಿದರೆ, ಆರೋಗ್ಯ ಸಹಾಯಕ ನರೇಂದ್ರ ವಂದಿಸಿದರು.
13ನೇ ಹಣಕಾಸು ಆಯೋಗದಡಿ ಬಿಡುಗಡೆ ಮಾಡುವ ಹಣವನ್ನು ಕುಡಿಯುವ ನೀರಿಗೆ ಮೀಸಲಿಡಿ
           

ಚಿಕ್ಕನಾಯಕನಹಳ್ಳಿ,ಮೇ.18 : 13ನೇ ಹಣಕಾಸು ಆಯೋಗದಡಿ ಬಿಡುಗಡೆ ಮಾಡುವ ಹಣದಲ್ಲಿ ಶೇ.90ರಷ್ಟು ಕಟ್ಟಡಗಳ ಅಭಿವೃದ್ದಿ ಕಾರ್ಯಗಳಿಗೆ ಕಾಯ್ದಿರಿಸಿ ಸುತ್ತೋಲೆ ಹೊರಡಿಸಿರುವುದನ್ನು ಪ್ರಶ್ನಿಸಿದ ತಾ.ಪಂ.ಸದಸ್ಯರು ಕುಡಿಯುವ ನೀರಿನ ಯೋಜನೆಗಳಿಗೆ ಹಣವನ್ನು ವಿನಿಯೋಗಿಸಲು ಸಕರ್ಾರ ಕ್ರಮ ಕೈಗೊಳ್ಳುವಂತೆ ತಾ.ಪಂ.ಸಾಮಾನ್ಯ ಸಭೆಯಲ್ಲಿ ಸಕರ್ಾರವನ್ನು ಒತ್ತಾಯಿಸಿದ್ದಾರೆ.
ಪಟ್ಟಣದ ತಾ.ಪಂ.ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯರು, ಜಿಲ್ಲೆಯಲ್ಲಿ ಮಳೆ ಇಲ್ಲದೆ ಕುಡಿಯುವ ನೀರಿಗಾಗಿ ಹಳ್ಳಿಗಳಲ್ಲಿ ತೀವ್ರ ನೀರಿನ ಕೊರತೆಯಿಂದ ಜನ ತತ್ತರಿಸುವ ಸಂದರ್ಭದಲಿ ಸಾವಿರ ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಬರುತ್ತಿಲ್ಲ, ತೆಂಗು ಅಡಿಕೆ ಬೆಳೆಗೆ ನೀರಿಲ್ಲದೆ ಮರಗಳು ಒಣಗುತ್ತಿವೆ, ತೆಂಗು ಅಡಿಕೆ ಬೆಳೆಗಾರರ ನೆರವಿಗೆ ಬರಬೇಕಾದ ಸಕರ್ಾರ ಕುಡಿಯುವ ನೀರಿಗೆ ಆದ್ಯತೆ ನೀಡದೇ, ಕಟ್ಟಡಗಳಿಗೆ ಆದ್ಯತೆ ನೀಡಿರುವುದನ್ನು ಪುನರ್ ಪರಿಶೀಲಿಸುವಂತೆ ತಾ.ಪಂ.ಸದಸ್ಯರು ಸಕರ್ಾರವನ್ನು ಒತ್ತಾಯಿಸಿದ್ದಾರೆ. ಅದ್ದೂರಿಯಾಗಿ ಆಚರಿಸಬೇಕಾದ ಬಸವಜಯಂತಿ ಕಾರ್ಯಕ್ರಮಕ್ಕೆ ಕೆಲವು ತಾ.ಪಂ.ಸದಸ್ಯರಿಗೆ ತಿಳಿಸದೆ ತಾಲ್ಲೂಕು ಆಡಳಿತ ಅವಮಾನಿಸಿದೆ ಎಂದು ಸದಸ್ಯ ಶಶಿಧರ್ ಆರೋಪಿಸಿದರು.
ಜಿಲ್ಲಾ ಪಂಚಾಯತ್ನಲ್ಲಿ ತಾಲ್ಲೂಕಿನ ಯಾವುದೇ ಅಭಿವೃದ್ದಿಗೆ ಅನುದಾನವನ್ನು ಪಡೆಯಬೇಕಾದರೆ ಪ್ರತಿಯೊಂದು ಹಂತದಲ್ಲೂ ಶೇ.35ರಷ್ಟು ಕಮಿಷನ್ಗೆ ಹಣ ಹೋಗುತ್ತದೆ, ಕಳಪೆ ಕಾಮಗಾರಿ ಮಾಡಿದರೆ ಜನ ನಮ್ಮನ್ನು ದೂರುತ್ತಾರೆ, ಆಕ್ಷನ್ ಪ್ಲಾನ್ ಮಾಡಿ ಅನುಮೋದನೆಗೆ ಕಳಿಸಿದರೆ ಎರಡು ತಿಂಗಳಾದರೂ ಮಂಜೂರಾತಿ ನೀಡುವುದಿಲ್ಲ, ಆಕ್ಷನ್ ಪ್ಲಾನ್ ಬದಲಾಯಿಸಿಲು ಅಧಿಕಾರಿಗಳಿಗೆ ಹಣ ನೀಡಿದರೆ ಮಾತ್ರ ಮಂಜೂರಾತಿ ನೀಡುತ್ತಾರೆ ಎಂದರಲ್ಲದೆ ಟ್ರಜರಿಯಲ್ಲಿ ಬಿಲ್ ತೆಗೆದುಕೊಳ್ಳಬೇಕಾದರೆ ಶೇ.1ರಷ್ಟು ಕಮಿಷನ್ ತೆಗೆದುಕೊಳ್ಳುತ್ತಾರೆ ಎಂದು ಆಕ್ಷೇಪಿಸಿ ಟ್ರಜರಿ ಕ್ಲಕರ್್ನ್ನು ಸಭೆಗೆ ಕರೆಸಿ ಛೀಮಾರಿ ಹಾಕಿದ ಪ್ರಸಂಗ ನಡೆಯಿತು.
ತಾಲ್ಲೂಕಿನಲ್ಲಿ ಎನ್.ಬಿ.ಎ ಹಾಗೂ ಎನ್.ಆರ್.ಇ.ಜಿ.ಇ ಯೋಜನೆ ಅಡಿಯಲ್ಲಿ ನಿಮರ್ಿಸಿದ ಶೌಚಾಲಯಕ್ಕೆ ಒಟ್ಟು 1,36,22,400 ರೂ ಬಿಡುಗಡೆಯಾಗಿದ್ದು ಇದರಲ್ಲಿ 67,84,300ರೂ ಖಚರ್ಾಗಿದೆ, ತಾಲ್ಲೂಕಿನಲ್ಲಿ 4800 ಶೌಚಾಲಯ ನಿಮರ್ಿಸಲು ನಿಗದಿಪಡಿಸಲಾಗಿತ್ತು 5039 ಶೌಚಾಲಯಗಳನ್ನು ನಿಮರ್ಿಸಲಾಗಿದೆ, ಜಿಲ್ಲೆಯಲ್ಲಿ ನಾವು ಪ್ರಥಮಸ್ಥಾನದಲ್ಲಿದ್ದೇವೆ ಎಂದು ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ತಿಳಿಸಿದರು.
ಕನ್ನಡ ಸಂಘದ ವೇದಿಕೆ ಬಳಿ ಕಳೆದ 5ವರ್ಷಗಳ ಹಿಂದೆ 5ಮಳಿಗೆಯನ್ನು  ತಾ.ಪಂ.ವತಿಯಿಂದ ನಿಮರ್ಿಸಿದ್ದು ಅದನ್ನು ಇದುವರೆಗೆ ಬಾಡಿಗೆಗೆ ನೀಡದೇ ಇರುವುದರಿಂದ ಸಕರ್ಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಠ ಉಂಟಾಗಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ತಾ.ಪಂ.ಸದಸ್ಯ ಶಶಿಧರ್ ಒತ್ತಾಯಿಸಿದರು.
ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಇದ್ದು ಕೊಳವೆ ಬಾವಿಗಳನ್ನು ಕೊರೆಸಿ ಎಂದು ಶಶಿಧರ್ ಆಗ್ರಹಿಸಿದರು. ಸಮಾಜ ಕಲ್ಯಾಣಿ ಇಲಾಖೆ ಅಧಿಕಾರಿಗಳು ಯಾವಾಗಲೂ ಕಛೇರಿಯಲ್ಲಿ ಇರುವುದಿಲ್ಲ ಎಂದು ತಾ.ಪಂ.ಸದ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.  ತಿಪಟೂರಿನಿಂದ ಸಮಾಜ ಕಲ್ಯಾಣಾಧಿಕಾರಿಯನ್ನು ನಿಯೋಜಿಸಲಾಗಿದೆ ಆದರೂ ಇದುವರೆಗೂ ಅವರು ರಿಪೋಟ್ ಮಾಡಿಕೊಂಡಿಲ್ಲ ಆದ್ದರಿಂದ ಇವರಿಗೆ ನೋಟಿಸ್ ನೀಡುವಂತೆ ಕಾರ್ಯನಿರ್ವಹಣಾಧಿಕಾರಿಗೆ ಸಲಹೆ ನೀಡಿದರು.
ಸಭೆಯಲ್ಲಿ ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಇ.ಓ. ತಿಮ್ಮಯ್ಯ ಸೇರಿದಂತೆ ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚೇತನಗಂಗಾಧರ್, ಹೇಮಾವತಿ, ಲತಾ, ಸೀತಾರಾಮಯ್ಯ, ನವೀನ್, ರಮೇಶ್ಕುಮಾರ್, ಜಯಣ್ಣ  ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಕಿ ಆಕಸ್ಮಿಕದಿಂದ ಸಾವನ್ನಪ್ಪಿದ ನಾಗರತ್ನಮ್ಮ ಕುಟುಂಬದವರಿಗೆ ಸಕರ್ಾರದಿಂದ ಪರಿಹಾರ: ಶಾಸಕ ಸಿ.ಬಿ.ಎಸ್.
              

ಚಿಕ್ಕನಾಯಕನಹಳ್ಳಿ,ಮೇ.18: ತಾಲೂಕಿನ ದೊಡ್ಡೇಣ್ಣೆಗೆರೆ ಗ್ರಾಮದಲ್ಲಿ ಇತ್ತೀಚೆಗೆ ಅಗ್ನಿ ದುರಂತ ನಡೆದು ಮೂರು ಮನೆ ಸುಟ್ಟು ಹೋಗಿದ್ದು, ನಾಗರತ್ನಮ್ಮ ಎಂಬುವರು ಅಸುನೀಗಿದ್ದು ನೊಂದ ಕುಟುಂಬಗಳ ಮನೆಗೆ ಭೇಟಿ ನೀಡಿದ್ದ ಶಾಸಕ ಸಿ.ಬಿ.ಸುರೇಶ್ಬಾಬು ಸಾಂತ್ವಾನ ಹೇಳಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕರು, ಈ ಬಗ್ಗೆ ಕೂಲಂಕುಷವಾಗಿ ಮಾಹಿತಿ ಪಡೆದರಲ್ಲದೆ, ಪರಿಹಾರದ ವಿಷಯವಾಗಿ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಕರ್ಾರದಿಂದ ಹೆಚ್ಚಿನ ಪರಿಹಾರವನ್ನು ನೀಡುವಂತೆ ಒತ್ತಾಯಿಸದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಘಟನೆ ನಡೆದ 24 ಗಂಟೆ ಒಳಗೆ ನಾಗರತ್ನಮ್ಮ ಕುಟುಂಬದವರಿಗೆ ಪ್ರಕೃತಿ ವಿಕೋಪ ನಿಧಿಯಿಂದ ಒಂದುವರೆ ಲಕ್ಷ ರೂಗಳ ಚೆಕ್ನ್ನು ನೀಡುವಂತೆ ತಹಶೀಲ್ದಾರ್ ರವರಿಗೆ ನೀಡಿದ ಆದೇಶದ ಮೇರೆಗೆ ತಹಶೀಲ್ದಾರ್ ಕಾಮಾಕ್ಷಮ್ಮ ಶಾಸಕರ ನೇತೃತ್ವದಲ್ಲಿ ನಾಗರತ್ನಮ್ಮ ಕುಟುಂಬದವರಿಗೆ ಚೆಕ್ ವಿತರಿಸಿದರು.
 ಬೆಂಕಿ ಅವಘಡದಿಂದಾದ ನಷ್ಟ: ಬಸಮ್ಮ ಎಂಬವರ ಮನೆಯಲ್ಲಿದ್ದ ಒಂದು ಜೊತೆ ಬಂಗಾರದ  ಓಲೆ, 50 ಸಾವಿರ ರೂ ಬೆಲೆ ಬಾಳುವ ವಸ್ತುಗಳು ಹಾಗೂ ವರದಯ್ಯನವರ ಮನೆ ಮತ್ತು ಅದರಲ್ಲಿದ್ದ ಒಂದುವರೆ ಲಕ್ಷ ರೂಗಳಷ್ಟು ವಸ್ತುಗಳ ನಾಶವಾಗಿವೆ ಹಾಗೂ ಮಕ್ಕಳ ಎಸ್.ಎಸ್.ಎಲ್.ಸಿ.ಯ ಅಂಕಪಟ್ಟಿ ಸೇರಿದಂತೆ ಶಾಲಾ ದಾಖಲಾತಿಗಳು ನಾಶವಾಗಿವೆ.
ಕಲ್ಲಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.18 : ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯಲ್ಲಿ ಬರುವ ದೊಡ್ಡಬಿದರೆ ಪಂಚಾಯಿತಿಯ ಕಲ್ಲಹಳ್ಳಿ ಅಂಗನವಾಡಿ ಸಹಾಯಕಿ ಹುದ್ದೆಗೆ ಅಜರ್ಿ ಕರೆಯಲಾಗಿದೆ ಎಂದು ಸಿ.ಡಿ.ಪಿ.ಓ. ಅನೀಸ್ ಖೈಸರ್ ತಿಳಿಸಿದ್ದಾರೆ.
ಅಂಗನವಾಡಿ ಕೇಂದ್ರ ವ್ಯಾಪ್ತಿಯ ಸಾಮಾನ್ಯ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ. ಅಗತ್ಯ ದಾಖಲಾತಿಗಳೊಂದಿಗೆ ಜೂನ್ 15ರ ಸಂಜೆ 5.30ರೊಳಗಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೆ ತಲುಪವಂತೆ ಸಲ್ಲಿಸುವುದು, ಹೆಚ್ಚಿನ ವಿವರಗಳಿಗಾಗಿ ಕಛೇರಿಯನ್ನು ಸಂಪಕರ್ಿಸಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪೂರ್ವಭಾವಿ ಸಭೆ

ಚಿಕ್ಕನಾಯಕನಹಳ್ಳಿ,ಮೇ.18: ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಸಲುವಾಗಿ ಶಾಸಕ ಸಿ.ಬಿ.ಸುರೇಶ್ಬಾಬು ರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಇದೇ 20ರ ಸೋಮವಾರ ಮಧ್ಯಾಹ್ನ 3ಗಂಟೆಗೆ ತಾಲೂಕು ಕಛೇರಿಯಲ್ಲಿ ಕರೆಯಲಾಗಿದೆ ಎಂದು ಕಾರ್ಯದಶರ್ಿ ಮಂಜುನಾಥರಾಜ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾಲೋಕಾಯುಕ್ತ ನಿರೀಕ್ಷಕರ ಜನ ಸಂಪರ್ಕ ಸಭೆ
ಚಿಕ್ಕನಾಯಕನಹಳ್ಳಿ,ಮೇ.18 : ತಾಲ್ಲೂಕಿನ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇದೇ 21ರಂದು ಮಂಗಳವಾರ ಮಧ್ಯಾಹ್ನ 3ಗಂಟೆಯಿಂದ ಸಂಜೆ 5ಗಂಟೆಯವರೆಗೆ ತುಮಕೂರು ಲೋಕಾಯುಕ್ತ ಪೋಲಿಸ್ ನಿರೀಕ್ಷಕರು ಜನಸಂಪರ್ಕ ಸಭೆಯನ್ನು ನಡೆಸಲಿದ್ದು ಸಾರ್ವಜನಿಕರಿಂದ ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ ಎಂದು ತಹಶೀಲ್ದಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Friday, May 17, 2013

ಬಿಸಿಎಂ ವಿದ್ಯಾಥರ್ಿ ನಿಲಯಕ್ಕೆ ಪ್ರವೇಶವಕಾಶ
ಚಿಕ್ಕನಾಯಕನಹಳ್ಳಿ,ಮೇ.17 : 2013-14ನೇ ಸಾಲಿಗೆ ಸಕರ್ಾರಿ ಹಾಗೂ ಅನುದಾನಿತ ಮೆಟ್ರಿಕ್-ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ ಎಂದು ಬಿಸಿಎಂ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.
ತಾಲ್ಲೂಕಿನ ಚಿಕ್ಕನಾಯಕನಹಳ್ಳಿ, ಕಂದಿಕೆರೆ, ಹುಳಿಯಾರು, ತಿಮ್ಮನಹಳ್ಳಿ, ಹೊಯ್ಸಳಕಟ್ಟೆಯ ಸಕರ್ಾರಿ ಬಿ.ಸಿ.ಎಂ. ಮೆಟ್ರಿಕ್-ಪೂರ್ವ ಬಾಲಕರ ಹಾಗೂ ಬಾಲಕಿಯರ ವಿದ್ಯಾಥರ್ಿನಿಲಯಗಳಲ್ಲಿ ಅಜರ್ಿ ಆಹ್ವಾನಿಸಿದ್ದು ನಿಗದಿತ ಅಜರ್ಿನಮೂನೆಗಳನ್ನು ಉಚಿತವಾಗಿ ಬಿ.ಸಿ.ಎಂ ಇಲಾಖೆಯ ವಿಸ್ತರಣಾಧಿಕಾರಿಗಳು ಇವರಿಂದ ಪಡೆಯಬಹುದಾಗಿದ್ದು ಭತರ್ಿ ಮಾಡಿದ ಅಜರ್ಿಗಳನ್ನು ಜೂನ್ 5ರ ಸಂಜೆ 5.30ರೊಳಗಾಗಿ ಕಛೇರಿಗೆ ಸಂಬಂಧಿಸಿದ ನಿಲಯ ಮೇಲ್ವಿಚಾರಕರಿಗೆ ದಾಖಲಾತಿಗಳೊಂದಿಗೆ ಸಲ್ಲಿಸಬೇಕು, ಅಪೂರ್ಣವಾದ ಹಾಗೂ ತಡವಾಗಿ ಬಂದಂತಹ ಅಜರ್ಿಗಳನ್ನು ತಿರಸ್ಕರಿಸಲಾಗುವುದು, ನವೀಕರಣ ವಿದ್ಯಾಥರ್ಿಗಳು ಮೇ 29ರೊಳಗೆ ಅಜರ್ಿಯನ್ನು ಸಲ್ಲಿಸಲುಬೇಕು.
ಪ್ರವೇಶ ಬಯಸುವ ವಿದ್ಯಾಥರ್ಿ ತಹಶೀಲ್ದಾರ್ರವರಿಂದ ಪಡೆದ ಜಾತಿ/ಆದಾಯ ಪ್ರಮಾಣ ಪತ್ರ, ಶಾಲೆಗಳಲ್ಲಿ ಪ್ರವೇಶ ಪಡೆದಿರುವ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಂದ ಪಡೆದ ಪ್ರವೇಶ ದೃಢೀಕರಣ ಪತ್ರ, ಗ್ರಾಮ ಪಂಚಾಯಿತಿ ಕಾರ್ಯದಶರ್ಿಯಿಂದ ಪಡೆದ ವಸತಿ ನಿಲಯಕ್ಕೂ ವಿದ್ಯಾಥರ್ಿಯ ಸ್ವಂತ ಸ್ಥಳಕ್ಕೂ ಇರುವ ಅಂತರದ ಸಟರ್ಿಫಿಕೇಟ್, ಹಿಂದಿನ ತರಗತಿಯಲ್ಲಿ ಉತ್ತೀರ್ಣರಾದ ಬಗ್ಗೆ ಅಂಕಪಟ್ಟಿ ಪ್ರತಿ, ವಿದ್ಯಾಥರ್ಿಯ ಪಾಸ್ಪೋಟರ್್ ಅಳತೆಯ ಇತ್ತೀಚಿನ ಎರಡು ಭಾವಚಿತ್ರಗಳು ಸಲ್ಲಿಸಬೇಕು.
ಅಜರ್ಿ ಸಲ್ಲಿಸ ಬಯಸುವ ವಿದ್ಯಾಥರ್ಿಗಳು ಹಿಂದಿನ ವರ್ಷದ ವಾಷರ್ಿಕ ಪರೀಕ್ಷೆಯಲ್ಲಿ ಉತೀರ್ಣರಾಗಿರತಕ್ಕದ್ದು, ಅಭ್ಯಥರ್ಿಯ ಪೋಷಕರ ವಾಷರ್ಿಕ ವರಮಾನ 2ಎ, 2ಬಿ, 3ಎ, 3ಬಿ ವರ್ಗದವರು 44500/-ರೊಳಗೆ, ಪ್ರವರ್ಗ-1ರ ವಿದ್ಯಾಥರ್ಿಗಳಿಗೆ 100000/-ರೊಳಗೆ ಹಾಗೂ ಪರಿಶಿಷ್ಠ ಜಾತಿ/ ಪರಿಶಿಷ್ಟವರ್ಗಕ್ಕೆ ಸೇರಿದ ವಿದ್ಯಾಥರ್ಿಗಳಿಗೆ ರೂ.200000/-ರೊಳಗೆ ವರಮಾನ ಇರಬೇಕು, ಸಕರ್ಾರಿ ಅಂಗೀಕೃತ ಶಿಕ್ಷಣ ಸಂಸ್ಥೆಗಳಲ್ಲಿ 5ನೇ ತರಗತಿಯಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಪ್ರವೇಶಕ್ಕೆ ಅರ್ಹರಾಗಿದ್ದು ಶೈಕ್ಷಣಿಕ ಸಂಸ್ಥೆಯಿಂದ 5.ಕಿ.ಮೀ ದೂರದ ಸ್ಥಳಗಳಿಂದ ಬರುವ ವಿದ್ಯಾಥರ್ಿಗಳಿಗೆ ಪ್ರವೇಶವನ್ನು ನೀಡಲಾಗುವುದು, ವಿದ್ಯಾಥರ್ಿನಿಲಯಗಳಲ್ಲಿ ಪ್ರವೇಶ ಪಡೆದವರು ಯಾವುದೇ ರೀತಿಯ ವಿದ್ಯಾಥರ್ಿ ವೇತನ ಪಡೆಯಲು ಅರ್ಹರಿರುವುದಿಲ್ಲ, ನವೀಕರಣ ವಿದ್ಯಾಥರ್ಿಗಳು ಪೇಲ್ ಆಗಿದ್ದಲ್ಲಿ ಅಂತಹ ವಿದ್ಯಾಥರ್ಿಗಳನ್ನು ವಿದ್ಯಾಥರ್ಿ ನಿಲಯದಲ್ಲಿ ಮುಂದುವರೆಸಲಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 


Monday, May 13, 2013



ಬೆಂಕಿಗಾಹುತಿಯಾದ ಕಾಯಿ, ಕೊಬ್ಬರಿ
ಚಿಕ್ಕನಾಯಕನಹಳ್ಳಿ,ಮೇ.13 : ತಾಲೂಕಿನ ಅಣೆಕಟ್ಟೆಯ ಶಿವಣ್ಣ ಎಂಬವರ ತೋಟದಲ್ಲಿ ಸಂಗ್ರಹಿಸಲಾಗಿದ್ದ ತೆಂಗಿನ ಕಾಯಿ ಹಾಗೂ ಕೊಬ್ಬರಿಗೆ ಬೆಂಕಿ ಬಿದ್ದರಿಂದ ಸುಮಾರು ಒಂದುವರೆ ಲಕ್ಷ ರೂಗಳಿಗೂ ಅಧಿಕ ಮೌಲ್ಯದ ಕಾಯಿ, ಕೊಬ್ಬರಿ ಬೆಂಕಿಗೆ ಆಹುತಿಯಾಗಿದೆ.
ಸೋಮವಾರ ಮಧ್ಯಾಹ್ನ 1.30ರ ಸುಮಾರಿನಲ್ಲಿ ತೊಟದಲ್ಲಿ ತೆರೆದ ಸ್ಥಳದಲ್ಲಿ ಸಂಗ್ರಹಿಸಲಾಗಿದ್ದ ಕಾಯಿ-ಕೊಬ್ಬರಿ ರಾಶಿಗೆ ಬೆಂಕಿ ಕಾಣಿಸಿಕೊಂಡಿದೆ, ಸುತ್ತ ಮುತ್ತಲಿನ ತೋಟದವರು ಹಾಗೂ ಗ್ರಾಮಸ್ಥರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದರಾದರೂ ಬೆಂಕಿ ಹತೋಟಿಗೆ ಬರಲಿಲ್ಲ ನಂತರ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಸಫಲವಾಯಿತು. 
ರೋಗಗಳ ಭರಾಟೆಯಲ್ಲಿ ತತ್ತರಿಸಿರುವ ತೆಂಗಿನ ಬೆಳೆಗಾರರಿಗೆ, ಬರದ ಬರೆ, ವೈಜ್ಞಾನಿಕ ಬೆಲೆಯಿಲ್ಲದೆ, ಬರದಾಡುತ್ತಿರುವ ಜೊತೆಗೆ ಮಳೆಗಾಳಿಯಂತಹ ಪ್ರಾಕೃತಿಕ ಮುನಿಸು ಜೊತೆಗೆ ಅಗ್ನಿ ಹಾವುತಿ ಇಂತಹ ಘಟನೆಗಳಿಂದ  ರೈತರ ಬದುಕು ಅತಂತ್ರವಾಗಿದೆ, ಇಂತಹ  ಅವಘಡಗಳಿಗೆಲ್ಲಾ ಪರಿಹಾರವನ್ನು  ನೀಡಲು ಸಕರ್ಾರ ಚಿಂತನೆ ನಡೆಸಬೇಕೆಂದು ಪಿ.ಎಲ್.ಡಿ.ಬ್ಯಾಂಕ್ ನಿದರ್ೇಶಕ ಎಂ.ಬಿ.ನಾಗರಾಜ್ ಒತ್ತಾಯಿಸಿದ್ದಾರೆ.

Friday, May 10, 2013



ಪಟಾಕಿ ಸಿಡಿಸಿ, ಘೋಷಣೆ ಕೂಗಿದ ಸಿದ್ದರಾಮಯ್ಯನವರ ಅಭಿಮಾನಿಗಳು

ಚಿಕ್ಕನಾಯಕನಹಳ್ಳಿ,ಮೇ.10 : ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಆಯ್ಕೆಗೊಂಡಿದ್ದಾರೆ ಎಂಬ ವಿಷಯವನ್ನು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಪಟ್ಟಣದಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು ಅವರ ಪರವಾಗಿ ಘೋಷಣೆಗಳನ್ನು ಕೂಗುತ್ತ ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ, ರಾಜ್ಯದ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಯಿಂದ ಉತ್ಸಾಹಗೊಂಡು ಸಿದ್ದರಾಮಯ್ಯನವರಿಗೆ ಜೈಕಾರಗಳನ್ನು ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳಾದ   ಸಿ.ಎಂ.ಬೀರಲಿಂಗಯ್ಯ, ಸಿ.ಟಿ.ಗುರುಮೂತರ್ಿ, ಓಂಕಾರಮೂತರ್ಿ, ರವಿಕುಮಾರ್(ಲ್ಯಾಬ್), ಸಿ.ಎಸ್.ಬಸವರಾಜು, ನಾಗರಾಜು ಸೇರಿದಂತೆ ಹಲವರಿದ್ದರು.

ಜೋರು ಬಿರುಗಾಳಿಗೆ ಎದರಿ ಎರಡು ದಿನದಿಂದ ಹಾಲು ನೀಡದ ಹಸುಗಳು

ಚಿಕ್ಕನಾಯಕನಹಳ್ಳಿ,ಮೇ.10 :  ಜೋರು ಮಳೆಗಾಳಿಯಿಂದ  ದನದಕೊಟ್ಟಿಗೆಗೆ ಹಾಕಲಾಗಿದ್ದ ಶೆಡ್ ಹಾರಿಹೋಗಿ, ಬೀಸುತ್ತಿದ್ದ ಭಾರಿ ಶಬ್ದಕ್ಕೆ ಹೆದರಿ ಹಸುವು ಎರಡು ದಿನದಿಂದ ಹಾಲು ನೀಡದೆ ಭಯಭೀತವಾಗಿವೆ, ಶೆಡ್ ಹಾರಿಹೋದ ಪರಿಣಾಮ  ಸಾವಿರಾರು ರೂಪಾಯಿ ನಷ್ಟ ಸಂಭವಿರುವ ಘಟನೆ ಪಟ್ಟಣದ 1ನೇ ವಾಡರ್್ನ, ಪಿ.ಯು.ಕಾಲೇಜ್ನ ಹಿಂಭಾಗದ  ಕೆ.ಎಮ್.ವಠಾರದಲ್ಲಿ ನಡೆದಿದೆ.
ಭಾರಿ ಬಿರುಗಾಳಿಗೆ ತಮ್ಮ ಜಮೀನಿನಲ್ಲಿ ಹಾಕಲಾಗಿದ್ದ ಶೆಡ್ ಬಿರುಗಾಳಿಗೆ ನೆಲಕ್ಕುರುಳಿದೆ, ಶೆಡ್ನಲ್ಲಿ ದನದಕೊಟ್ಟಿಗೆ, ಕಾಯಿ ಹಾಗೂ ಅಡಕೆ ದಾಸ್ತಾನು ಮಾಡಲಾಗಿತ್ತು, ಗಾಳಿಗೆ ಶೆಡ್ ಹಾರಿದ ಪರಿಣಾಮ ದಾಸ್ತಾನು ಮಾಡಿದ್ದ ವಸ್ತುಗಳಿಗೆ ಹಾನಿಯಾಗಿದ್ದು ಹಸುಕರುಗಳು ಭಯಭೀತವಾಗಿವೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ, ಹಾನಿಯಾಗಿರುವ ಸಾವಿರಾರು ರೂಪಾಯಿಗೆ ಪರಿಹಾರ ದೊರಕಿಸಿಕೊಡಬೇಕೆಂದು ಮಾಲೀಕ ಸಿ.ಎಸ್ ನಾಗರಾಜು ಒತ್ತಾಯಿಸಿದ್ದಾರೆ.

ಶನಿಮಹಾದೇವರ ವಾಷರ್ಿಕ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮೇ.10 : 19ನೇ ವರ್ಷದ ಶ್ರೀ ಶನಿಮಹಾದೇವರ ವಾಷರ್ಿಕ ಜಾತ್ರಾ ಮಹೋತ್ಸವವು ಇದೇ 11ರ ಶನಿವಾರ ತಾಲ್ಲೂಕಿನ ಕಾಡೇನಹಳ್ಳಿಯಲ್ಲಿ ನಡೆಯಲಿದೆ.
11ರ ಬೆಳಗ್ಗೆ 7.30ಕ್ಕೆ ಶನಿದೇವರಿಗೆ ಪಂಚಾಮೃತ ಅಭಿಷೇಕ ಮತ್ತು ನವಗ್ರಹ ಪೂಜೆ, ಹೋಮಾದಿಗಳು ಹಾಗೂ ಗ್ರಾಮಸ್ಥರಿಂದ ಆರತಿ, ದೇವರ ಉತ್ಸವ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನೆಡಯಲಿದೆ.




ರೋಟರಿ ಶಾಲೆಗೆ 96.87ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.10 : ಪಟ್ಟಣದ ರೋಟರಿ ಆಂಗ್ಲ ಪ್ರೌಡಶಾಲೆಗೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.96.87ರಷ್ಟು ಪಲಿತಾಂಶ ದೊರೆತಿದೆ.
ಶಾಲೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟು 64 ವಿದ್ಯಾಥರ್ಿಗಳು ಪರೀಕ್ಷೆ ತೆಗೆದುಕೊಂಡಿದ್ದು ಅದರಲ್ಲಿ ಒಟ್ಟು 62 ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. 11ಮಂದಿ ವಿದ್ಯಾಥರ್ಿಗಳು ಅತ್ಯುನ್ನತದಜರ್ೆ, 34ವಿದ್ಯಾಥರ್ಿಗಳು ಪ್ರಥಮದಜರ್ೆ, 11ದ್ವಿತೀಯದಜರ್ೆ ಹಾಗೂ 6ವಿದ್ಯಾಥರ್ಿಗಳು ತೇರ್ಗಡೆ ಹೊಂದಿದ್ದಾರೆ.
ಹೀನಾ.ಎ561(89.76), ನಿದಾ557(89.12), ಅನುಷಾ552(88.32), ದೀಕ್ಷಿತ.ಡಿ.546(87.36), ನವ್ಯಶ್ರೀ.ಸಿ.ಕೆ540(86.40) ಶಾಮ್ಪ್ರಸಾದ್.ಎಸ್.ವಿ.539(86.24), ಶಿಲ್ಪ.ಎಮ್.537(85.92), ಪಲ್ಲವಿ.ಎನ್.537(85.92), ಗೌತಮಿ ಡಿ.ಕೆ.535(85.60), ಪೂಜಾಜೈನ್533(85.28), ಲಾವಣ್ಯ.ಎಮ್.ಪಿ.533(58.28) ಅಂಕಗಳನ್ನು ಪಡೆದಿದ್ದಾರೆ.

ಎಸ್.ಎಮ್.ಎಸ್.ಕಾಲೇಜಿಗೆ 90.42ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.10 : ಪಟ್ಟಣದ ಎಸ್.ಎಮ್.ಎಸ್.ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90.42ರಷ್ಟಿ ಪಲಿತಾಂಶ ದೊರೆತಿದೆ.
ಮಾಚರ್್ 2013ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಳಿದ 94 ವಿದ್ಯಾಥರ್ಿಗಳಲ್ಲಿ 85ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ.        
ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ಸಿ.ಜಿ.ರೋಜಾ543(90.5), ಬಿ.ಎನ್.ಕೀರ್ತನಕುಮಾರಿ504(84.00), ಸಿ.ಆರ್.ನವೀನ್ಕುಮಾರ್489(81.55), ವಾಣಿಜ್ಯ ವಿಭಾಗದಲ್ಲಿ ವಿದ್ಯಾ.ಎಮ್.ಎನ್.476(79.3), ಅರುಣ್ಕುಮಾರ್.ಡಿ.ಆರ್.453(75.5) ಅಂಕಗಳನ್ನು ಪಡೆದಿದ್ದಾರೆ.

ಕ್ಷೇತ್ರದ ಜನತೆ ಗುಳೇ ಹೋಗುವುದನ್ನು ತಪ್ಪಿಸಲು ಗಾಮರ್ೇಂಟ್ಸ್ಗೆ ಮೊರೆಹೋದ ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಮೇ.9 : ಕ್ಷೇತ್ರದ ಮತದಾರರ ಆಶೀವರ್ಾದ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಂದ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದು, ಈ ಗೆಲುವು ತಾಲ್ಲೂಕಿನ ಕ್ಷೇತ್ರದ ಜನತೆಯ ಗೆಲುವಾಗಿದ್ದು ಕ್ಷೇತ್ರದ ಜನತೆಗೆ ಎಂದೆಂದು ನಾನು ಚಿರಋಣಿಯಾಗಿರುವೆ ಎಂದು ಚುನಾವಣೆಯಲ್ಲಿ ಮರು ಆಯ್ಕೆಗೊಂಡ ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಗೆಲುವಿನ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಸುರೇಶ್ಬಾಬು, ಜ್ಯಾತ್ಯಾತೀತ ಮನೋಭಾವನೆಯಿಂದ  ಎಲ್ಲ ವರ್ಗಗಳಿಗೂ ಸ್ಥಾನಮಾನ ಕಲ್ಪಿಸಿ ತಾಲ್ಲೂಕಿನ ಅಭಿವೃದ್ದಿ ಕಡೆ ಯೋಚಿಸಿದ್ದರಿಂದಲೇ ತಾಲ್ಲೂಕಿನ ಎಲ್ಲಾ ವರ್ಗಗಳ ಮತದಾರರು ನನ್ನನ್ನು ಮರು ಆಯ್ಕೆಮಾಡಿದ್ದಾರೆ. ಶಾಸಕನಾದ ಮೇಲೆ ನಾವು ಮಾಡಿರುವ ಅಭಿವೃದ್ದಿ ಕೆಲಸಗಳು ಹಾಗೂ ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವೇ ನಮ್ಮ ಗೆಲುವಿಗೆ ಸಹಾಯಕವಾಯಿತು ಎಂದರಲ್ಲದೆ ಈ ಮೂಲಕ ತಾಲ್ಲೂಕಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನನ್ನ ಕ್ಷೇತ್ರದಿಂದ ಪಟ್ಟಣಕ್ಕೆ ಗುಳೇ ಹೋಗುವವರು ಹೆಚ್ಚಾಗಿದ್ದಾರೆ, ಅದಕ್ಕಾಗಿ ಇಲ್ಲಿ ಗಾಮರ್ೆಂಟ್ಸ್ ಅನ್ನು ತೆರೆದು ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿ ಅವರನ್ನು ಕ್ಷೇತ್ರದಲ್ಲಿಯೇ ಜೀವನ ನಡೆಸುವಂತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವುದಾಗಿ ತಿಳಿಸಿದರು, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು  ಕ್ಷೇತ್ರದ ಜನತೆಯ ಸಮಸ್ಯೆ ನಿವಾರಿಸಲು ಮುಂದಾಗುವೆ ಎಂದರು.
ಚುನಾವಣೆಯಲ್ಲಿ ಗೆಲುವು ಪಡೆದ ನಂತರ ಪಟ್ಟಣದನ ಜನರಿಗೆ ಕೃತಜ್ಞತೆ ತಿಳಿಸಲು ರಾಜ ಬೀದಿಗಳಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಮಳೆಯ ನಡುವೆಯೂ ಅಪಾರ ಅಭಿಮಾನಿಗಳೊಂದಿಗೆ ನಡೆದ ವಿಜಯೋತ್ಸವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಮೇ.12ರಂದು ತಾ.ಕ.ಸಾ.ಪ ಆಜೀವ ಸದಸ್ಯರ ಸಭೆ
ಚಿಕ್ಕನಾಯಕನಹಳ್ಳಿ,ಮೇ.9: ತಾಲೂಕು ಸಾಹಿತ್ಯ ಪರಿಷತ್ನ ಎಲ್ಲಾ ಆಜೀವ ಸದಸ್ಯರ ಸಭೆಯನ್ನು ಇದೇ 12ರ ಭಾನುವಾರ ಮಧ್ಯಾಹ್ನ 2ಗಂಟೆಗೆ ಪಟ್ಟಣದ ಜ್ಞಾನಪೀಠ ಪ್ರೌಢಶಾಲೆಯ ಆವರಣದಲ್ಲಿ ಕರೆಯಲಾಗಿದೆ ಎಂದು ತಾ.ಕ.ಸಾ.ಪ. ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ತಾಲೂಕಿನಲ್ಲಿ  ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಸಲುವಾಗಿ ಈ ಸಭೆಯನ್ನು ಕರೆದಿದ್ದು ಸಭೆಯಲ್ಲಿ ಜಿಲ್ಲಾ.ಕ.ಸಾ.ಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್ ಉಪಸ್ಥಿತರಿರುವವರು ಆದ್ದರಿಂದ ಎಲ್ಲಾ ಆಜೀವ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.



Wednesday, May 8, 2013


ತಂದೆಯ ದಾಖಲೆ ಸರಿಗಟ್ಟಿದ ಚಿ.ನಾ.ಹಳ್ಳಿ ಶಾಸಕ ಸಿ.ಬಿ.ಸುರೇಶ್ಬಾಬು.
ಚಿಕ್ಕನಾಯಕನಹಳ್ಳಿ,ಮೇ.8: ಈ ಬಾರಿಯ ಚುನಾವಣೆ ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬುವಿನ ಮುಖದಲ್ಲಿ ನಗೆಯ ಹೊನಲನ್ನು ತಂದಿದ್ದರೆ, ಕೆ.ಜೆ.ಪಿ. ಯ ಜೆ.ಸಿ.ಮಾಧುಸ್ವಾಮಿ ಹಾಗೂ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ ರವರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಿದೆ ಅದೇನೆಂದರೆ ಈ ಕ್ಷೇತ್ರದ ಚುನಾವಣಾ ಕಣದಲ್ಲಿ ಜೆ.ಸಿ.ಎಂ. ಇರಬೇಕು ಇಲ್ಲ, ಕೆ.ಎಸ್.ಕೆ ಇರಬೇಕು. ಇಬ್ಬರಲ್ಲೊಬ್ಬರು ಇರಬೇಕು ಎಂಬುದನ್ನು ದೃಡಪಡಿಸಿದೆ.
ಜೆ.ಡಿ.ಎಸ್.ನ ಸಿ.ಬಿ.ಸುರೇಶ್ಬಾಬು ತಮ್ಮ ತಂದೆಯ ದಾಖಲೆಗೆ ಸರಿಸಮನಾಗಿ, ತಂದೆಗೆ ತಕ್ಕ ಮಗ, ನಾನು ತಂದೆಯಂತೆಯೇ ಜನನಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ, 1974ರ ಚುನಾವಣೆಯಲ್ಲಿ ಮಾಜಿ ಸಚಿವ ದಿ.
ಎನ್.ಬಸವಯ್ಯ ಸಂಸ್ಥಾ ಕಾಂಗ್ರೆಸ್ನಿಂದ ಗೆಲವು ಸಾಧಿಸಿದ್ದರು,  ನಂತರ 1979ರಲ್ಲಿ ನಡೆದ ಚುನಾವಣೆಯಲ್ಲೂ ಇಂದಿರಾ ಕಾಂಗ್ರೆಸ್ನಲ್ಲಿ ಗೆಲುವು ಸಾಧಿಸಿದ್ದರು. ಅದೇ ರೀತಿ ಸಿ.ಬಿ.ಸುರೇಶ್ಬಾಬು 2008ರಲ್ಲಿ ಹಾಗೂ 2013ರಲ್ಲಿ ನಡೆದ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಪ್ಪನಿಗೆ ತಕ್ಕ ಮಗ ಎಂಬುದನ್ನು ಸಾಬೀತು ಮಾಡಿದ್ದರೆ, ಆದರೆ ಎನ್.ಬಿ.ಯವರು ಪಕ್ಷ ಬದಲಾಯಿಸಿ ಜಯಪಡೆದಿದ್ದರು, ಸಿ.ಬಿ.ಎಸ್. ಎರಡೂ ಬಾರಿಯೂ ಹೊರೆಹೊತ್ತ ಮಹಿಳೆಯನ್ನೇ ನಂಬಿ ಜಯಶೀಲರಾಗಿದ್ದಾರೆ. 

ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರದ ಇತ್ತೀಚಿನ ಇತಿಹಾಸದಲ್ಲಿ ಒಮ್ಮೆ ಗೆದ್ದವರು ಮತ್ತೇ ಹಿಂದೆಯೇ ಆಯ್ಕೆ ಬಯಸಿದರೆ ಅದು ಸಾಧ್ಯವಾಗದ ಮಾತು ಎಂಬ ಪ್ರತೀತಿ ಇತ್ತು ಅದನ್ನು ಈ ಚುನಾವಣೆಯಲ್ಲಿ ಸಿ.ಬಿ.ಎಸ್. ಸುಳ್ಳು ಮಾಡಿದ್ದಾರೆ. ಅದೇ ರೀತಿ ಈ ಕ್ಷೇತ್ರದಲ್ಲಿ ಜಯಗಳಿಸಿದ ಪಕ್ಷ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವುದಿಲ್ಲವೆಂಬ ಮಾತು ಮಾತ್ರ ಸುಳ್ಳಾಗಿಲ್ಲ ಎಂಬುದು ಇಲ್ಲಿನ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
2008ರ ಚುನಾವಣೆಗೆ ಹೊಲಿಸಿದರೆ ಸಿ.ಬಿ.ಸುರೇಶ್ಬಾಬು ಪಡೆದಿರುವ ಓಟುಗಳು 6,287 ಕಡಿಮೆಯಾಗಿದೆ.  ಕಳೆದ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆ 1,84,288 ಇತ್ತು ಇದರಲ್ಲಿ ಚಲಾವಣೆಗೊಂಡಿದ್ದ ಮತಗಳು 1,43,589 ಮತಗಳು.  ಈ ಬಾರಿ ಕ್ಷೇತ್ರದಲ್ಲಿದ್ದ ಒಟ್ಟು ಮತಗಳು 1,98,349, ಇದರಲ್ಲಿ ಚಲಾವಣೆಗೊಂಡವು 1,60,041 ಮತಗಳು ಮಾತ್ರ, ಸಿ.ಬಿ.ಸುರೇಶ್ ಬಾಬು 60,759 ಮತಗಳನ್ನು ಪಡೆದು 11,139 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 
 ಜೆ.ಸಿ.ಮಾಧುಸ್ವಾಮಿ 49,620 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ಬಂದಿದ್ದರೆ, ಕಳೆದ ಬಾರಿ ಜೆ.ಡಿ.ಯುನಲ್ಲಿ ಸ್ಪಧರ್ಿಸಿದ್ದ ಜೆ.ಸಿ.ಎಂ. 24308 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು.
ಈ ಬಾರಿ ಬಿ.ಜೆ.ಪಿ.ಯ ಕೆ.ಎಸ್.ಕಿರಣ್ಕುಮಾರ್ 29150 ಮತಗಳನ್ನು ಪಡೆದು ಮೂರನೇ ಸ್ಥಾನ ತಲುಪಿದ್ದಾರೆ. ಕಳೆದ ಬಾರಿ ಕೆ.ಎಸ್.ಕಿರಣಕುಮಾರ್ 38,002 ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು.
ಕಳೆದ ಬಾರಿಯ ಚುನಾವಣೆಗೆ ಹೊಲಿಸಿದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಬಹಳಷ್ಟು ಚೇತರಿಸಿಕೊಂಡಿದೆ, ಕಾಂಗ್ರೆಸ್ನ ಸಾಸಲು ಸತೀಶ್ 10,344 ಮತಗಳನ್ನು ಪಡೆದಿದ್ದಾರೆ, ಕಳೆದ ಬಾರಿ ಕಾಂಗ್ರೆಸ್ನ ಎನ್. ರೇಣುಕಪ್ರಸಾದ್ 3941 ಮತಗಳನ್ನು ಪಡೆದಿದ್ದರು.
 ರೈತ ಸಂಘದ ಕೆಂಕೆರೆ ಸತೀಶ್ 2086 ಮತಗಳು, ಬಿ.ಎಸ್.ಪಿ.ಯ ಕ್ಯಾಪ್ಟನ್ ಸೋಮಶೇಖರ್ 1743 ಮತಗಳು, ಬಿ.ಎಸ್.ಆರ್.ನ ದೇವರಾಜ್ 1624 ಮತಗಳು, ಸಿ.ಎಂ.ಮಂಜುಳಾ ನಾಗರಾಜ್ 1725, ಬರಗೂರು ರಾಮಚಂದ್ರಯ್ಯ 1648, ಜೆ.ಡಿ.ಯು.ನ ಜಿ.ಪ್ರಕಾಶ್ 1108, ಹನುಮಂತ ರಾಮನಾಯಕ್ 1019 ಮತಗಳನ್ನು ಪಡೆದಿದ್ದಾರೆ. 
 

Tuesday, May 7, 2013


ಆಟೋರಿಕ್ಷಾ ಚಾಲಕನ ಮಗ ಎಸ್.ಎಸ್.ಎಲ್.ಸಿ.ಯಲ್ಲಿ
ತಾಲೂಕಿಗೆ ಮೊದಲು


ಚಿಕ್ಕನಾಯಕನಹಳ್ಳಿ,ಮೇ.7; ಸಕರ್ಾರಿ ಶಾಲೆಗಳೆಂದರೆ ಮೂಗು ಮುರಿಯುವ ಮಂದಿಗೆ ಇಲ್ಲೊಂದು ಸಾಧನೆಯ ಸುದ್ದಿ ಇದೆ, ಟ್ಯೂಶನ್ಗೆ ಹೋಗದೆ, ಆಟೋರಿಕ್ಷಾ ಚಾಲಕನ ಮಗನಾಗಿ ಅತ್ಯಲ್ಪ ಸೌಲತ್ತುಗಳಲ್ಲೇ, ಸಕರ್ಾರಿ ಪ್ರೌಢಶಾಲೆಯಲ್ಲಿ ಓದಿರುವ ಆರ್. ಮಧುಸೂಧನ್ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 590 (ಶೇ.94.40)ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮನೆನಿಸಿಕೊಂಡಿದ್ದಾನೆ.
ಸ್ವಾಮಿ ವಿವೇಕನಂದರೇ ನನ್ನ ಗುರುಗಳು, ಅವರೇ ನನಗೆ ಸ್ಪೂತರ್ಿ, ತಂದೆ-ತಾಯಿಗಳ ಪೋಷಣೆ, ಗುರುಗಳ ಮಾರ್ಗದರ್ಶನದಿಂದಾಗಿ ನಾನು ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು ಎಂದು ಹೆಮ್ಮೆಯಿಂದ ಹೇಳುವ ಮಧುಸೂಧನನ ಕಣ್ಣಲ್ಲಿ ಐ.ಎ.ಎಸ್.ಮಾಡುವ ಕನಸಿದೆ.
ಶಾಲೆಯಲ್ಲಿ ಏಕಾಗ್ರಚಿತ್ತದಿಂದ ಕೇಳುವ, ಅಂದಿನ ಪಾಠವನ್ನು ಅಂದೇ ಓದುವ ಪ್ರವೃತ್ತಿನನಗೆ ಸಹಾಯವೆನಿಸುತು ಎನ್ನುವ ಮಧು, ಸಕರ್ಾರಿ ಶಾಲೆಯಲ್ಲಿ ಉತ್ತಮ ಕೌಶಲ್ಯವಿರುವ ಶಿಕ್ಷಕರಿದ್ದಾರೆ ಅವರ ಮಾರ್ಗದರ್ಶನ ಯಶಸ್ಸಿಗೆ ರಾಜಮಾರ್ಗವಾಯಿತು ಎನ್ನುವ ಹೊತ್ತಿನಲ್ಲೇ, ಗ್ರಾಮೀಣ ಹಾಗೂ ಬಡ ಮಕ್ಕಳಿರುವ ಇಂತಹ ಸಕರ್ಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಿ ಮುಂದಿನ ಬಡ ಮಕ್ಕಳ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಿ ಎಂಬುದಷ್ಟೇ ಶಿಕ್ಷಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಲ್ಲಿ ನನ್ನ ವಿನಮ್ರ ಮನವಿ ಎನ್ನುತ್ತಾನೆ ಮಧು.
ತನ್ನ ಮಗನ ಸಾಧನೆಯಿಂದ ಉಲ್ಲಾಸಿತರಾಗಿರುವ ಆಟೋರಿಕ್ಷಾ ಚಾಲಕ ಸಿ.ಎನ್.ರವಿಕುಮಾರ್, ನನಗೆ ಎಷ್ಟೇ ಕಷ್ಟವಾಗಲಿ ಅವನು ಅಂದುಕೊಂಡಿದ್ದನ್ನು ಓದುಸುತ್ತೇನೆ ಎಂದು ಹೇಳುವಷ್ಟರಲ್ಲಿ ಗದ್ಗಿತರಾಗುವ ಅವರು, ಅವನು ಒಳ್ಳೆಯ ಸ್ಥಾನಕ್ಕೆ ಮುಟ್ಟಿದ ಮೇಲೆ ಅವನಿಂದ ಹೆಚ್ಚಿನದೇನು  ಬಯಸುವುದಿಲ್ಲ, ಒಂದು ಬ್ಯಾಕ್ ಇಂಜಿನ್ ಆಟೋ ಕೊಡಿಸಿದರೆ ಸಾಕು, ಅದನ್ನು ಓಡಿಸಿಕೊಂಡು ಆನಂದವಾಗಿರುತ್ತೇನೆ ಎನ್ನುವಷ್ಟರಲ್ಲಿ ರವಿಯವರ ಕಣ್ಣಲ್ಲಿದ್ದ ನೀರು ಜಳ ಜಳನೆ ಕೆನ್ನೆ ಮೇಲೆ ಬಂದೇ ಬಿಟ್ಟವು.
ಪಡೆದ ಅಂಕಗಳು: ಕನ್ನಡ-119, ಇಂಗ್ಲೀಷ್ 96, ಹಿಂದಿ-95, ಗಣಿತ-90, ವಿಜ್ಞಾನ-93, ಸಮಾಜವಿಜ್ಞಾನ-97 ಅಂಕಗಳು ಒಟ್ಟು 590(ಶೇ.94.4) ತಾಲೋಕಿಗೆ ಪ್ರಥಮ


ಚಿ.ನಾ.ಹಳ್ಳಿ: ಎಸ್.ಎಸ್.ಎಲ್.ಸಿ.ಯಲ್ಲಿ ಶೇ.75.63 ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.7: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ.75.63ರಷ್ಟು ಫಲಿತಾಂಶ ದೊರೆತಿದ್ದು, ಒಟ್ಟು ಮೂರು ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ, 44 ವಿದ್ಯಾಥರ್ಿಗಳು ಅತ್ಯುನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಬಿ.ಇ.ಓ, ಸಾ.ಚಿ.ನಾಗೇಶ್ ತಿಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 59 ಶಾಲೆಗಳಿದ್ದು,  ಒಟ್ಟು 2577  ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದು, ಇದರಲ್ಲಿ 1949ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 1072ಹೆಣ್ಣುಮಕ್ಕಳು ಹಾಗೂ 877ಗಂಡುಮಕ್ಕಳು ತೇರ್ಗಡೆಯಾಗಿದ್ದಾರೆ, ತಾಲೂಕಿನಲ್ಲಿ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳೆಂದರೆ, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ 44 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು, ತಿಮ್ಮನಹಳ್ಳಿ ಶ್ರೀ ಶಾರದ ವಿದ್ಯಾಪೀಠ ಪ್ರೌಡಶಾಲೆಯಲ್ಲಿ 30 ವಿದ್ಯಾಥರ್ಿಗಳು, ಚಿ.ನಾ.ಹಳ್ಳಿ ನವೋದಯ ಪ್ರೌಡಶಾಲೆ(ಆಂಗ್ಲ) ಶಾಲೆಯಲ್ಲಿ 16 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು, ಈ ಮೂರು ಶಾಲೆಗಳು ಆಂಗ್ಲಮಾಧ್ಯಮ ಶಾಲೆಗಳು.
 ಸಕರ್ಾರಿ ಪ್ರೌಢಶಾಲೆಗಳ ಪೈಕಿ ಸಾಸಲು ಸಕರ್ಾರಿ ಪ್ರೌಢಶಾಲೆ ಶೇ.94.59 ಫಲಿತಾಂಶ ಪಡೆದಿದೆ. ಬರಗೀಹಳ್ಳಿಯ ಬೂದೇವಿ ಗ್ರಾಮಾಂತರ ಪ್ರೌಢಶಾಲೆ 6.67 ಪಡೆದಿದೆ, ಮುದ್ದೇನಹಳ್ಳಿಯ ಇಂದಿರಾಗಾಂಧಿ ಪ್ರೌಢಶಾಲೆ ಶೂನ್ಯ ಫಲಿತಾಂಶ ಪಡೆದಿದೆ,  ಈ ಶಾಲೆಯಲ್ಲಿ 25 ವಿದ್ಯಾಥರ್ಿಗಳು ಪರೀಕ್ಷೆಗೆ ಕುಳಿತಿದ್ದರು. 
ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳು:  ಸಕರ್ಾರಿ ಪ್ರೌಡಶಾಲೆ ವಿದ್ಯಾಥರ್ಿ ಮಧುಸೂದನ್.ಆರ್ 590 (94.40) ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಹುಳಿಯಾರಿನ ವಾಸವಿ(ಆಂಗ್ಲ) ಶಾಲೆಯ ಸೀಮ.ಎಸ್584(93.44), ತನುಶ್ರೀ ಬಿ.ಎಂ.580(92.80), ಕನಕದಾಸ ಪ್ರೌಡಶಾಲೆ ಹುಳಿಯಾರು ಮಸ್ತಾನ್.ಎಂ.566(90.56), ವಾಸವಿ ಪ್ರೌಡಶಾಲೆ(ಆಂಗ್ಲ)ಹುಳಿಯಾರು ಸಚಿನ್.ಪಿ564(90.24), ಸ.ಪ.ಪೂ.ಕಾ(ಪ್ರೌ.ವಿ) ಹುಳಿಯಾರು-ಕೆಂಕೆರೆ ಸೋನಿಯ ಕೆ.ಎಂ.563(90.08) , ಶ್ರೀ ವಿಶ್ವಭಾರತಿ ಪ್ರೌಡಶಾಲೆ ಬರಕನಹಾಳ್ ಪ್ರಮೋದ್ಕುಮಾರ್.ಹೆಚ್.ಎಲ್563(90.08) ಸೇರಿದಂತೆ ಉಳಿದ 37ವಿದ್ಯಾಥರ್ಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ತಾಲ್ಲೂಕಿನ ಸಕರ್ಾರಿ ಶಾಲೆಗಳ ಶೇಕಡಾವಾರು ಫಲಿತಾಂಶದ ವಿವರ :ಸ.ಪ.ಪೂ.ಕಾಲೇಜು ಗೋಡೆಕೆರೆ ಶೇ.73.58, ಸ.ಪ.ಪೂ.ಕಾಲೇಜು ಹುಳಿಯಾರು ಕೆಂಕೆರೆ80.56, ಸ.ಪ.ಪೂ.ಕಾಲೇಜು ಬೋನಕಣಿವೆ 69.23, ಸಕರ್ಾರಿ ಪ್ರಡಶಾಲೆ ಯಳನಡು 76.92, ಸಕರ್ಾರಿ ಪ್ರೌಢಶಾಲೆ ದಸೂಡಿ 91.18, ಸಕರ್ಾರಿ ಪ್ರೌಢಶಾಲೆ ಸಾಸಲು 94.59, ಸಕರ್ಾರಿ ಪೌಢಶಾಲೆ ಚಿಕ್ಕನಾಯಕನಹಳ್ಳಿ 82.35, ಸಕರ್ಾರಿ ಪ್ರೌಡಶಾಲೆ ಉದರ್ು ಹುಳಿಯಾರು 83.33, ಸಕರ್ಾರಿ ಪ್ರೌಡಶಾಲೆ ಬರಗೂರು 92.11, ಸಕರ್ಾರಿ ಪ್ರೌಡಶಾಲೆ ಬರಶಿಡ್ಲಹಳ್ಳಿ 87.50, ಸಕರ್ಾರಿ ಪ್ರೌಡಶಾಲೆ ದಬ್ಬಗುಂಟೆ 90.00, ಸಕರ್ಾರಿ ಪ್ರೌಡಶಾಲೆ ಜೆ.ಸಿ.ಪುರ 86.96, ಸಕರ್ಾರಿ ಪ್ರೌಡಶಾಲೆ ಕಾಮಲಾಪುರ 60.00, ಸಕರ್ಾರಿ ಪ್ರೌಡಶಾಲೆ ಬಡಕೆಗುಡ್ಲು 86.96, ಸಕರ್ಾರಿ ಪ್ರೌಡಶಾಲೆ ಕೆಂಕೆರೆ 61.11, ಸಕರ್ಾರಿ ಪ್ರೌಡಶಾಲೆ ಗೂಬೆಹಳ್ಳಿ-ನಂದಿಹಳ್ಳಿ 93.75, ಸಕರ್ಾರಿ ಪ್ರೌಡಶಾಲೆ ಹೆಚ್.ತಮ್ಮಡಿಹಳ್ಳಿ 88.00, ಸಕರ್ಾರಿ ಪ್ರೌಡಶಾಲೆ ತೀರ್ಥಪುರ 85.71, ಮೊರಾಜರ್ಿ ದೇಸಾಯಿ ವಸತಿ ಶಾಲೆ ಮೇಲನಹಳ್ಳಿ 100.00, ಯು.ಪಿ.ಆರ್.ಎಮ್.ಎಸ್.ಸಿ ಜಿಎಚ್ಎಸ್ಬೆಳ್ಳಾರ 68.42, 
 ತಾಲ್ಲೂಕಿನ ಅನುದಾನಿತ ಶಾಲೆಗಳ ಶೇ.ಫಲಿತಾಂಶದ ವಿವರ: ಡಿವಿಪಿಬಾಲಕರ ಪ್ರೌಡಶಾಲೆ ಚಿ.ನಾ.ಹಳ್ಳಿ ಶೇ.74.75, ಶಾರದ.ಪ.ಪೂ.ಕಾಲೇಜು ತಿಮ್ಮನಹಳ್ಳಿ 72.22, ಶ್ರೀ ಜಯಬಾರತಿ ಪ.ಪೂ.ಕಾಲೇಜು ಮತಿಘಟ್ಟ 71.43, ಜಿ.ವಿ.ಪಿ.ಕಿರಿಯ ಕಾಲೇಜು ಹಂದನಕೆರೆ 58.62, ಜನತಾಪ.ಪೂ.ಕಾಲೇಜು ಶೆಟ್ಟಿಕೆರೆ 62.86, ಡಿವಿಪಿ ಬಾಲಕಿಯರ ಪ್ರೌಡಶಾಲೆಚಿ.ನಾ.ಹಳ್ಳಿ 86.49, ಶ್ರೀ ಸಿದ್ದಗಂಗಾ ಪ್ರೌಡಶಾಲೆ ಕಂದಿಕೆರೆ 63.16, ಟಿ.ಆರ್.ಎಸ್.ಆರ್.ಬಾ.ಪ್ರೌಡಶಾಲೆ ಹುಳಿಯಾರು 89.47,  ಶ್ರೀ ರಂಗನಾಥ ಪ್ರೌಡಶಾಲೆ ಬೆಳಗುಲಿ 83.56, ಡಾ.ಅಂಭೇಡ್ಕರ್ ಪ್ರೌಡಶಾಲೆ ಚಿ.ನಾ.ಹಳ್ಳಿ 58.33, ಶ್ರೀಗವಿರಂಗನಾಥ ಪ್ರೌಡಶಾಲೆ ದೊಡ್ಡೆಣ್ಣಗೆರೆ 86.79, ಶ್ರೀ ಸ್ವಾಮಿವಿವೇಕಾನಂದ ಪ್ರೌಡಶಾಲೆ ಕುಪ್ಪೂರು 68.89, ಡಾ.ಅಂಭೇಡ್ಕರ್ ಪ್ರೌಡಶಾಲೆ ತೀರ್ಥಪುರ-ಕಾತ್ರಿಕೆಹಾಳ್ 78.13, ಶ್ರೀ ಕನಕದಾಸ ಪ್ರೌಡಶಾಲೆ ಹುಳಿಯಾರು 73.68, ಕಾಳಿದಾಸ ಪ್ರೌಡಶಾಲೆ ಹಂದನಕೆರೆ 81.25, ಶ್ರೀ ಮಾರುತಿ ಗ್ರಾಮಾಂತರ ಪ್ರೌಡಶಾಲೆ ಚಿಕ್ಕಬಿದರೆ 73.02, ಶ್ರೀ ಜ್ಞಾನಪೀಠ ಪ್ರೌಡಶಾಲೆ ಚಿ.ನಾ.ಹಳ್ಳಿ 63.83, ನಿವರ್ಾಣೇಶ್ವರ ಬಾಲಿಕ ಪ್ರೌಡಶಾಲೆ ಚಿ.ನಾ.ಹಳ್ಳಿ 78.72, ಶ್ರೀ ಲಕ್ಷ್ಮೀನರಸಿಂಹಸ್ವಾಮಿಬೈಲಪ್ಪನಮಠ 66.67, ದೇವರಾಜುಅರಸ್ ಪ್ರೌಡಶಾಲೆ ಮಲಗೊಂಡನಹಳ್ಳಿ 96.77, ವಿಶ್ವಭಾರತಿ ಪ್ರೌಡಶಾಲೆ ಗಾಣದಾಳು 57.89, ಬಸವೇಶ್ವರ ಪ್ರೌಡಶಾಲೆ ಅಣೇಕಟ್ಟೆ79.41, ಶ್ರೀ ರಾಮಲಿಂಗೇಶ್ವರ ಪ್ರೌಡಶಾಲೆ ರಾಮನಹಳ್ಳಿ 68.75, ವಿಶ್ವಭಾರತಿ ಪ್ರೌಡಶಾಳೆ ಬರಕನಹಾಳ್ 52.17, ಬಸವೇಶ್ವರ ಪ್ರೌಡಶಾಲೆ ಹುಳಿಯಾರು 70.00, ಜಿ.ವಿ.ಪಿ.ಬಾಲಿಕ ಪ್ರೌಡಶಾಲೆ ಹಂದನಕೆರೆ 60.00, ಜಿ.ವಿ.ಪಿ.ಪ್ರೌಡಶಾಲೆ ಸೀಗೇಬಾಗಿ 60.00, ವಿದ್ಯಾರಣ್ಯಾ ಪ್ರೌಡಶಾಲೆ ಬೊಮ್ಮೇನಹಳ್ಳಿ 62.50, ಶ್ರೀ ಚಿತ್ರಲಿಂಗೇಶ್ವರ ಪ್ರೌಡಶಾಲೆ ಹರೇನಹಳ್ಳಿಗೇಟ್ 58.33, ಬಾಪೂಜಿ ಪ್ರೌಡಶಾಲೆ ಬೇವನಹಳ್ಳಿ 40.00, ಮಾರಮ್ಮದೇವರ ಪ್ರೌಡಶಾಲೆ ದೊಡ್ಡರಾಂಪುರ 67.74, ಭೂದೇವಿ ಗ್ರಾಮಾಂತರ ಪ್ರೌಡಶಾಲೆ ಬರಗೀಹಳ್ಳಿ 6.67.
 ತಾಲ್ಲೂಕಿನ ಅನುದಾನ ರಹಿತ ಶಾಲೆಗಳ ಶೇಕಡವಾರು ಫಲಿತಾಂಶದ ವಿವರ: ರಾಮಾಂಜನೇಯ ಪ್ರೌಡಶಾಳೆ ಗೂಬೇಹಳ್ಳಿ 32.00, ಸಾಕ್ಷರತಾ ಮಹಿಳಾ ಪ್ರೌಡಶಾಲೆ ಗುರುವಾಪುರ 56.00, ವಾಸವಿ ಆಂಗ್ಲ ಪ್ರೌಡಶಾಲೆ ಹುಳಿಯಾರು 91.57, ರೋಟರಿ ಆಂಗ್ಲ ಪ್ರೌಡಶಾಲೆ ಚಿ.ನಾ.ಹಳ್ಳಿ 96.88, ಶ್ರೀ ಶಾರದ ವಿದ್ಯಾಪೀಠ ಪ್ರೌಡಶಾಲೆ ಆಂಗ್ಲ ತಿಮ್ಮನಹಳ್ಳಿ 100.00, ಇಂದಿರಾಗಾಂಧಿ ಪ್ರೌಡಶಾಲೆ ಮುದ್ದೇನಹಳ್ಳಿ 00.00, ನವೋದಯ ಪ್ರೌಡಶಾಲೆ(ಆಂಗ್ಲ)ಚಿ.ನಾ.ಹಳ್ಳಿ 100.00, ಒಟ್ಟು ತಾಲ್ಲೂಕು ಶೇಖಡ.76.87 ಫಲಿತಾಂಶ ಪಡೆದಿದೆ.