Saturday, April 2, 2016

9 ಮತ್ತು 23ನೇ ವಾಡರ್್ಗೆ ಸಿ.ಸಿ.ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ
ಚಿಕ್ಕನಾಯಕನಹಳ್ಳಿ.ಏ.02 : ಕೋಳಚೆ ನಿಮರ್ೂಲನ ಮಂಡಳಿ ಅನುದಾನದ ಅಡಿಯಲ್ಲಿ ಪಟ್ಟಣದ ಬೋವಿಕಾಲೋನಿಯಲ್ಲಿ 25ಲಕ್ಷ ರೂ. ವೆಚ್ಚದ ಸಿ.ಸಿ.ರಸ್ತೆ ನಿಮರ್ಿಸುವುದಾಗಿ ಕ್ಷೇತ್ರದ ಶಾಸಕ ಸಿ.ಬಿ ಸುರೇಶ್ಬಾಬು ತಿಳಿಸಿದರು.
  ಚಿಕ್ಕನಾಯಕನಹಳ್ಳಿ ಪಟ್ಟಣದ 9ನೇವಾಡರ್್ನ ವಿನಾಯಕನಗರದ ಎ.ಡಿ.ಕಾಲೋನಿ ಹಾಗೂ 23ನೇ ವಾಡರ್್ನ ಎ.ಕೆ ಕಾಲೋನಿಯಲ್ಲಿ ಕೋಳಚೆ ನಿಮರ್ೂಲನ ಮಂಡಳಿ 25ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಕೈಗೊಳ್ಳುವಂತೆ ಸಲಹೆ ನೀಡಿದರು ಹಾಗೂ ಪಟ್ಟಣದಲ್ಲಿ ಸ್ವಚ್ಛ ಭಾರತ್ ಅಭಿಯಾನ ಯೋಜನೆಯಡಿಯಲ್ಲಿ ಎಲ್ಲರೂ ಸ್ವಚ್ಛ ನಗರಕ್ಕೆ ಮುಂದಾಗಿ ಎಂದರಲ್ಲದೆ ಸಕರ್ಾರ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
  ಜಿ.ಪಂ.ಸದಸ್ಯ ಮಹಾಲಿಂಗಯ್ಯ, ಪುರಸಭಾ ಅಧ್ಯಕ್ಷ ಸಿ.ಟಿ ದಯಾನಂದ್, ಉಪಾಧ್ಯಕ್ಷೆ ಇಂದಿರಾ, ಪುರಸಭಾ ಸದಸ್ಯರುಗಳಾದ ರೇಣುಕಮ್ಮ, ಎಂ.ಕೆ.ರವಿಚಂದ್ರ, ಕೃಷ್ಣಮೂತರ್ಿ, ಅಶೋಕ್, ರಾಜಶೇಖರ್, ಹೆಚ್.ಬಿ.ಪ್ರಕಾಶ್, ಮಾಜಿ ಪುರಸಭಾಧ್ಯಕ್ಷ ಸಿ.ಟಿ.ವರದರಾಜು, ಕರವೇ ಗುರುಮೂತರ್ಿ, ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಇತರರು ಹಾಜರಿದ್ದರು.   ಜಿ.ಪಂ.ಸದಸ್ಯ ಮಹಾಲಿಂಗಯ್ಯ, ಪುರಸಭಾ ಅಧ್ಯಕ್ಷ ಸಿ.ಟಿ ದಯಾನಂದ್, ಉಪಾಧ್ಯಕ್ಷೆ ಇಂದಿರಾ, ಪುರಸಭಾ ಸದಸ್ಯರುಗಳಾದ ರೇಣುಕಮ್ಮ, ಎಂ.ಕೆ.ರವಿಚಂದ್ರ, ಕೃಷ್ಣಮೂತರ್ಿ, ಅಶೋಕ್, ರಾಜಶೇಖರ್, ಹೆಚ್.ಬಿ.ಪ್ರಕಾಶ್, ಮಾಜಿ ಪುರಸಭಾಧ್ಯಕ್ಷ ಸಿ.ಟಿ.ವರದರಾಜು, ಕರವೇ ಗುರುಮೂತರ್ಿ, ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಇತರರು ಹಾಜರಿದ್ದರು. 
ಒಂದೇ ದಿನ ಡಾ.ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂರವರ ದಿನಾಚಾರಣೆ ನಡೆಸಲು ಸಿದ್ದತೆ
ಚಿಕ್ಕನಾಯಕನಹಳ್ಳಿ,ಏ.02 : ಡಾ.ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂರವರ ಜನ್ಮದಿನಾಚಾರಣೆಯಲ್ಲಿ ಎಸ್.ಸಿ, ಎಸ್.ಟಿ ಜನಾಂಗದವರು ಸೇರಿದಂತೆ ಇತರೆ ಜನಾಂಗದಲ್ಲಿ ಉತ್ತಮ ಸಮಾಜ ಸೇವೆ ಸಲ್ಲಿಸಿರುವ ವ್ಯಕ್ತಿಗಳನ್ನು ಸನ್ಮಾನಿಸಲು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಭೆ ತೀಮರ್ಾನಿಸಿತು. 

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಾ.ಅಂಬೇಡ್ಕರ್ ಹಾಗೂ ಬಾಬುಜಗಜೀವನರಾಂರವರ ದಿನಾಚಾರಣೆಯನ್ನು ಏಪ್ರಿಲ್ 14ರಂದು ಒಂದೇ ದಿನ ನಡೆಸುವಂತೆ ಪೂರ್ವಭಾವಿ ಸಭೆಯಲ್ಲಿ ತೀಮರ್ಾನಿಸಲಾಯಿತು. 
ಡಾ||ಅಂಬೇಡ್ಕರ್ ಹಾಗೂ ಜಗಜೀವನರಾಂರವರ ಜನ್ಮದಿನಾಚರಣೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಂದ ಜನರನ್ನು ಸಭೆಗೆ ಕರೆತರಲು ಗ್ರಾಮಪಂಚಾಯಿತಿ ಶೇ.3% ಅನುದಾನವನ್ನು ಬಳಸಿಕೊಳ್ಳವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದ ಅವರು ತಾಲ್ಲೂಕಿನ ಎಲ್ಲ ದಲಿತ ಕಾಲೋನಿಗಳಲ್ಲಿ ಡಾ|| ಅಂಬೇಡ್ಕರ್ ಭವನ ನಿಮರ್ಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ ಎಂದರು.
 ತಾಲ್ಲೂಕಿನ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಗ್ರಾಮ ಪಂಚಾಯಿತಿಗಳು ಡಾ||ಅಂಬೇಡ್ಕರ್ ಹಾಗೂ ಜಗಜೀವನರಾಂ ರವರ ಜನ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲು ಸಕರ್ಾರದ ಆದೇಶವಿದೆ ಎಲ್ಲರೂ  ಜಯಂತಿಯನ್ನೂ ಆಚರಿಸುವಂತೆ ಅಧಿಕಾರಿಗಳಿಗೆ, ಸಂಘ-ಸಂಸ್ಥೆಗಳ ಮುಖಂಡರಿಗೆ ತಿಳಿಸಲಾಯಿತು.
 ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ನೇತೃತ್ವದಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲು ಸಭೆ ತಿಮರ್ಾನಿಸಿತು, ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ವಿದ್ಯಾಥರ್ಿಗಳು ಹಾಗೂ ಒಬ್ಬ ಪ್ರಗತಿಪರ ರೈತ ಕಲಾವಿದ ಚಂದ್ರಯ್ಯ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಚಿದಾನಂದರವರಿಗೆ ಸನ್ಮಾನಿಸಲು ತಿಮರ್ಾನಿಸಿತು.
ಜಯಂತಿ ದಿನದಂದು ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಅಂಗನವಾಡಿ ನೌಕರರು, ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲರೂ ಕಡ್ಡಾಯವಾಗಿ ಜಯಂತಿಯಲ್ಲಿ ಭಾಗವಹಿಸುವಂತೆ ಹಾಗೂ ವಿವಿಧ ಇಲಾಖೆಗಳಲ್ಲಿ ಆಯ್ಕೆ ಮಾಡುವ ಫಲಾನುಭವಿಗಳಿಗೆ ಸಹಾಯಧನ ಹಾಗೂ ವಿವಿಧ ಇಲಾಖೆಯಲ್ಲಿ ನೀಡುವ ಪರಿಕರಗಳನ್ನು ವಿತರಿಸಲು ತೀಮರ್ಾನಿಸಲಾಯಿತು. 
ಪೂರ್ವಭಾವಿ ಸಭೆಯಲ್ಲಿ ಪುರಸಭಾದ್ಯಕ್ಷ ಸಿ.ಟಿ ದಯಾನಂದ್, ಜಿ.ಪಂ ಸದಸ್ಯರಾದ ರಾಮಚಂದ್ರಯ್ಯ, ಮಹಲಿಂಗಯ್ಯ, ಮಂಜುಳಮ್ಮ, ತಾ.ಪಂ ಸದಸ್ಯರಾದ ಹೆಚ್.ಎನ್. ಕುಮಾರ್, ಇಂದಿರಮ್ಮ, ಪುರಸಭಾ ಉಪಾದ್ಯಕ್ಷೆ, ಇಂದಿರಾಪ್ರಕಾಶ್, ಪುರಸಭಾ ಸದಸ್ಯ ಅಶೋಕ್, ತಾ||ಪಂ ಕಾರ್ಯನಿರ್ವಹಣಾಧಿಕಾರಿ ಕೃಷ್ಣಾಮೂತರ್ಿ, ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್, ದಲಿತ ಸಂಘರ್ಷ ಸಮಿತಿಯ ಬೇವಿನಹಳ್ಳಿ ಚನ್ನಬಸವಯ್ಯ, ಲಿಂಗದೇವರು, ಮಲ್ಲಿಕಾಜರ್ುನ್, ಗೋವಿಂದಪ್ಪ, ತಿಮ್ಮಣ್ಣ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

ಯುವಶಕ್ತಿಯೇ ದೇಶದ ಶಕ್ತಿ
ಚಿಕ್ಕನಾಯಕನಹಳ್ಳಿ,ಏ.02 :  ದೇಶದ ಶಕ್ತಿ ಯುವ ಶಕ್ತಿಯಾಗಿದ್ದು ಅವರು ಹದಿ ಹರೆಯದ ವಯಸ್ಸಿನಲ್ಲಿ ಮಾನಸಿಕ ಸಿಮಿತ ಕಳೆದುಕೊಂಡು ತಪ್ಪು ಹಾದಿ ತುಳಿದರೆ ಜೀವನ ಪರ್ಯಂತ ಕೊರಗಬೇಕಾಗುತ್ತದೆ ಎಂದು  ಐ.ಸಿ.ಟಿ.ಸಿ ಆಪ್ತ ಸಮಾಲೋಚಕ ನವೀನ್ ತಿಳಿಸಿದರು.
    ಸರಕಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ ಪರಿಸರ ಅಧ್ಯಯನ ವಿಭಾಗ, ಯುವ ರೆಡ್ ಕ್ರಾಸ್ ಘಟಕ ಹಾಗೂ ನ್ಯಾಕ್ ವತಿಯಿಂದ ಆಯೋಜಿಸಿದ್ದ ಎಚ್.ಐ.ವಿ ಏಡ್ಸ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ಎಲ್ಲಾ ರೋಗಗಳಿಗೂ ಔಷದಿ ಕಂಡು ಹಿಡಿಯಲಾಗಿದೆ ಆದರೆ ಏಡ್ಸ್ ಅಂತಹ ಮಾಹಮಾರಿ ರೋಗಕ್ಕೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಇಂದು ಮನುಷ್ಯನಿಗೆ ತಿಳುವಳಿಕೆ ಇಲ್ಲದೆ ಇರುವುದರಿಂದ ಹಲವು ಎಚ್.ಐ.ವಿ ರೋಗಿಗಳು ಸರಿಯಾಗಿ ಆಸ್ಪತ್ರೆಗೆ ವಿಚಾರ ತಿಳಿಸದೆ ಬೇಗನೆ ಸಾವನ್ನು ಅಪ್ಪುತ್ತಾರೆ, ಎಚ್.ಐ.ವಿ ವೈರೆಸ್ ಬಂದಂತಹ ವ್ಯಕ್ತಿಗಳು ಕೂಡ ಸುಮಾರು 15 ರಿಂದ 20 ವರ್ಷ ಬದುಕ ಬಹುದಾಗಿದೆ ಅದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ವಿದ್ಯಾಥರ್ಿಗಳು ಕೇವಲ ಶೈಕ್ಷಣಿಕವಾಗಿ ಓದುತ್ತಿದ್ದು  ಅದರ ವಿಚಾರವನ್ನು  ಜೀವನದಲ್ಲಿ  ತಿಳಿದುಕೊಳ್ಳುವುದಕ್ಕೆ ಮುಂದಾಗುತ್ತಿಲ್ಲ ಹಾಗಾಗಿ ಇಂತಹ ವಿಚಾರದ ಬಗ್ಗೆ ಗಂಬೀರವಾಗಿ ತಾವು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
   ರೆಡ್ ಕ್ರಾಸ ಘಟಕದ ಸಂಚಾಲಕ ಕೆ.ಎಸ್ ಚಂದ್ರಶೇಖರ್  ಮಾತನಾಡಿ ವಿದ್ಯಾಥರ್ಿಗಳಲ್ಲಿ ಇಂದು ಆಕರ್ಷಣೆಯ ಮನೋವೃತ್ತಿ ಅಧಿಕವಿದ್ದು ಕೆಟ್ಟದನ್ನು ಬೇಗ ಪಡೆದುಕೊಳ್ಳುವ ನೀವು ಒಳ್ಳೆಯದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿಲ್ಲ ಇಂದು ದೇಶದಲ್ಲಿ ಸಾಕಷ್ಟು ಯುವ ಜನತೆ ಇಂತಹ ರೋಗಗಳಿಗೆ ಬಲಿಯಾಗುತ್ತಿದ್ದಾರೆ ಇದರಿಂದ ದೇಶದ ಮಾನವ ಸಂಪನ್ಮೊಲ ಸರಿಯಾಗಿ ಬಳಸಿಕೊಳ್ಳಲು ಸಾದ್ಯವಾಗುತ್ತಿಲ್ಲ ಎಂದರು.
    ಪರಿಸರ ಅಧ್ಯಯನ ವಿಭಾಗ ಉಪನ್ಯಾಸಕ ಪ್ರಸನ್ನ ಮಾತನಾಡಿ ಇಂದು ಭಾರತ ದೇಶ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದು ಇದೆ ರೀತಿಯಲ್ಲಿ ಎಡ್ಸ ಮುಕ್ತ ದೇಶವಾಗಿ ಮಾಡಬೇಕು ಎಂದರೆ ಅದು ನಿಮ್ಮಂತಹ ಯುವ ಜಾನಂಗದಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ನ್ಯಾಕ್ ಸಂಚಾಲಕ ಡಾ. ಶ್ರೀನಿವಾಸ್, ಐ.ಕ್ಯೊ.ಎ.ಸಿ ಸಂಚಾಲಕ ಶೈಲೇಂದ್ರಕುಮಾರ್, ಪ್ರದ್ಯಾಪಕಿ ದರ್ಶನ ಇನ್ನಿತರರು ಹಾಜರಿದ್ದರು.