Friday, September 13, 2013


ಅಕ್ರಮವಾಗಿ ಪಡಿತರ ಚೀಟಿಯನ್ನು ಪಡೆದಿದ್ದರೆ ತನಿಖೆಯಿಂದ ರದ್ದಾಗಲಿದೆತ; ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ
ಚಿಕ್ಕನಾಯಕನಹಳ್ಳಿ,ಸೆ.12 : ಸಕರ್ಾರ ಬಿಪಿಎಲ್ ಮಾನದಂಡಗಳನ್ನು ಪರಿಷ್ಕರಿಸಿ ಜಾರಿಗೆ ತಂದಿರುವ ಹೊಸ ವ್ಯವಸ್ಥೆಯಲ್ಲಿ ಸಕರ್ಾರಿ ನೌಕರರು, ಮೂರು ಎಕ್ಟೇರ್ ಭೂಮಿ ಹೊಂದಿರುವವರು, ಕಾರು, 100 ಸಿ.ಸಿ.ಮೇಲ್ಪಟ್ಟ ದ್ವಿಚಕ್ರ ವಾಹನ ಹೊಂದಿರುವವರು, ಪ್ರತಿ ತಿಂಗಳು 450ಕ್ಕೂ ಹೆಚ್ಚು ವಿದ್ಯುತ್ ಬಿಲ್ ಪಾವತಿಸುತ್ತಿರುವವರು ಅಕ್ರಮವಾಗಿ ಪಡಿತರ ಚೀಟಿಯನ್ನು ಪಡೆದಿದ್ದರೆ ತನಿಖೆಯಿಂದ ರದ್ದಾಗಲಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂತರ್ಿ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ನಡೆದ ಸಕರ್ಾರಿ ಕಾರ್ಯಕ್ರಮಗಳ ಹಾಗೂ ಯೋಜನೆಗಳ ಅನುಷ್ಠಾನದ ಬಗ್ಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
 ತಾಲ್ಲೂಕಿನಲ್ಲಿ ಮಧ್ಯವತರ್ಿಗಳು ಹಣ ಪಡೆದು ಅಧಿಕಾರಿಗಳೊಂದಿಗೆ ಶಾಮೀಲಾಗಿ ಅಕ್ರಮವಾಗಿ ಪಡಿತರ ಚೀಟಿ ನೀಡುತ್ತಿರುವ ದೂರಿನ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. 
2011ರ ಜನಗಣತಿಯ ಪ್ರಕಾರ ತಾಲ್ಲೂಕಿಲ್ಲಿ 52612 ಕುಟುಂಬಗಳಿವೆ. ಅಂತ್ಯೋದಯ ಕಾಡರ್್ಗಳು ಪಟ್ಟಣದಲ್ಲಿ 123, ಗ್ರಾಮೀಣ ಪ್ರದೇಶದಲ್ಲಿ 3863ಕಾಡರ್್ಗಳು. ಪಟ್ಟಣದಲ್ಲಿ ಬಿಪಿಎಲ್ ಕಾಡರ್್ದಾರರು 3251 ಗ್ರಾಮೀಣ ಪ್ರದೇಶದಲ್ಲಿ 35091 ಕಾಡರ್್, ಪಟ್ಟಣದಲ್ಲಿ ಎ.ಪಿ.ಎಲ್ ಕಾಡರ್್ 444 ಗ್ರಾಮೀಣ ಪ್ರದೇಶದಲ್ಲಿ 9559 ಕಾಡರ್್ದಾರರಿದ್ದಾರೆ. ಒಟ್ಟು 52313 ಪಡಿತರ ಚೀಟಿಗಳಿವೆ ಎಂದು ತಿಳಿಸಿದರು. 
ಜಿಲ್ಲೆಗೆ 9.82 ಕೋಟಿರೂ ಕುಡಿಯುವ ನೀರಿನ ಯೋಜನೆಗೆ ಮಂಜೂರಾಗಿದ್ದು ಜಿಲ್ಲೆಯ 4ನೇ ಹಂತ ಕಾಮಗಾರಿಗೆ ಸಕರ್ಾರ ಅನುಮತಿ ನೀಡಿದೆ, ತಾಲ್ಲೂಕಿನಲ್ಲಿ ಹಿಂದೆ ಕೊರೆದ ಕೊಳವೆ ಬಾವಿಗಳಿಗೆ ಮೋಟಾರು ಪಂಪ್ ಅಳವಡಿಸಲು ಮೊದಲನೆ ಹಂತವಾಗಿ 5ಕೋಟಿ ರೂ ಬಿಡುಗಡೆಯಾಗಿದೆ, ತುಮಕೂರು, ಮಧುಗಿರಿ, ಉಪವಿಭಾಗಕ್ಕೆ ತಲಾ 2.5ಕೋಟಿ ರೂ ಬಿಡುಗಡೆಯಾಗಿದೆ ಎಂದರು.
. ತಾಲ್ಲೂಕಿನಲ್ಲಿ ಮಳೆ, ಬೆಳೆ ಬಗ್ಗೆ ಅಧಿಕಾರಿಗಳ ಮಾಹಿತಿ ಪಡೆದು ಸೆಪ್ಟಂಬರ್ ವಾಡಿಕೆ ಮಳೆ ಬಿತ್ತನೆ ಸ್ಥಿತಿಗತಿ, ಕುಡಿಯುವ ನೀರು, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆ ಅನುಷ್ಠಾನದ ಬಗ್ಗೆ ಅಧಿಕಾರಿಗಳೊಂದಿಗೆ ಚಚರ್ೆ ನಡೆಸಿ ವರದಿಯನ್ನು ಅಧಿಕಾರಿಗಳು ನೀಡಿದ್ದಾರೆ, ಅಧಿಕಾರಿಗಳು ತಾಲ್ಲೂಕಿನಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು. ತಾಲ್ಲೂಕಿನಲ್ಲಿ ಇತ್ತಿಚೆಗೆ ಸುರಿದ ಉತ್ತಮ ಮಳೆಯಿಂದ ಜಾನುವಾರುಗಳಿಗೆ ಮೇವಿನ ಕೊರತೆ ಬರುವುದಿಲ್ಲ ಎಂದರು.
ರಾಜ್ಯದಲ್ಲಿ ಏಕರೂಪ ಸೀಮೆಎಣ್ಣೆ ಬೆಲೆಯನ್ನು ಸಕರ್ಾರ ಜಾರಿಗೆ ತಂದಿದ್ದು ಜಿಲ್ಲೆಯಲ್ಲಿ 16.20 ಬೆಲೆ ನಿಗದಿ ಪಡಿಸಲಾಗಿದೆ. ಪ್ರತಿ ಕಾಡರ್್ ಹೊಂದಿರುವವರು 1ಯುನಿಟ್ಗೆ 10 ಕೆ.ಜಿ ಅಕ್ಕಿಯ ಬದಲು 9.ಕೆ.ಜಿ.ಅಕ್ಕಿ 1ಕೆ.ಜಿ.ಗೋದಿ 2ಯುನಿಟ್ಗೆ 20ಕೆಜಿ ಅಕ್ಕಿ ಬದಲು 18ಕೆ.ಜಿ ಅಕ್ಕಿ, 2ಕೆ.ಜಿ ಗೋದಿ, 3ಯುನಿಟ್ಗೆ 30ಕೆ.ಜಿ.ಅಕ್ಕಿಯ ಬದಲು 27ಕೆ.ಜಿ.ಅಕ್ಕಿ 3ಕೆ.ಜಿ.ಗೋಧಿ ನೀಡಲಾಗುವುದು. ಗೋದಿಗೆ ಕೆ.ಜಿಗೆ ಒಂದು ರೂಪಾಯಿಯಂತೆ ನಿಗಧಿಪಡಿಸಲಾಗಿದೆ.
ಪುರಸಭೆಯ ಹತ್ತಿರವಿರುವ ಆಯುಷ್ ಆಸ್ಪತ್ರೆಗೆ ಸೇರಿದ ಒಂದು ಕಟ್ಟಡವನ್ನು ಕೆಲವು ಖಾಸಗಿ ಪಟ್ಟಭದ್ರ ವ್ಯಕ್ತಿಗಳು ಸ್ವಾಧೀನಕ್ಕೆ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿನ ಮೇಲೆ ತಾ.ವೈದ್ಯಾಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಇದರ ಬಗ್ಗೆ ಪರಿಶೀಲಿಸಿ ಸಕರ್ಾರಿ ಆಸ್ತಿಯ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿಗಳು ತಾ.ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಉಪವಿಭಾಗಾಧಿಕಾರಿ ಬಿ.ಸಿಂಧು, ತಹಶೀಲ್ದಾರ್ ಕಾಮಾಕ್ಷಮ್ಮ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿ.ನಾ.ಹಳ್ಳಿ ಪುರಸಭೆಗೆ ಜೆಡಿಎಸ್ನ ಗೀತಾರಮೇಶ್ ಅಧ್ಯಕ್ಷರಾಗಿ, ಕೆಜೆಪಿಯ ನೇತ್ರಾವತಿ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ.
ಚಿಕ್ಕನಾಯಕನಹಳ್ಳಿ,ಸೆ.12 : ಚಿಕ್ಕನಾಯಕನಹಳ್ಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಗೀತಾರಮೇಶ್, ಉಪಾಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾದರು.
ಸಕರ್ಾರದ ಮೀಸಲಾತಿ ಅನ್ವಯ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡಕ್ಕೆ ಮಹಿಳೆಗೆ ಮೀಸಲಾಗಿದ್ದು, ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ 20ನೇ ವಾಡರ್್ನ ಗೀತಾರಮೇಶ್, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ 4ನೇ ವಾಡರ್್ನ ನೇತ್ರಾವತಿ ಮಾತ್ರ ನಾಮಪತ್ರ ಸಲ್ಲಿಸಿದ್ದರು.
ಪುರಸಭಾ ಸದಸ್ಯರಲ್ಲಿ ಪರಿಶಿಷ್ಠ ಪಂಗಡದ ಮಹಿಳಾ ಸದಸ್ಯರು ಕೆಜೆಪಿಯಿಂದ ಆಯ್ಕೆಯಾದ ನೇತ್ರಾವತಿ ಬಿಟ್ಟರೆ ಬೇರೆ ಯಾರೂ ಆಯ್ಕೆಯಾಗಿರಲಿಲ್ಲ, ಆ ಕಾರಣದಿಂದ ಉಪಾಧ್ಯಕ್ಷ ಸ್ಥಾನ ಪುರಸಭೆಯಲ್ಲಿ ಕೆಜೆಪಿಯು 2ಸ್ಥಾನ ಪಡೆದಿದ್ದರೂ ನೇತ್ರಾವತಿರವರಿಗೆ ಒಲಿದಿದೆ.
ಅಧ್ಯಕ್ಷ ಸ್ಥಾನ ಜೆಡಿಎಸ್ನ ಗೀತಾರಮೇಶ್ಗೆ ಒಲಿದು ಬಂದಿದ್ದು 18ಸದಸ್ಯರ ಬಲವಿರುವ ಪಕ್ಷದಲ್ಲಿ ಒಮ್ಮತದಿಂದ ತೀಮರ್ಾನಿಸಿ ಉಳಿದ ಸದಸ್ಯರಾರು ನಾಮಪತ್ರ ಸಲ್ಲಿಸದೇ ಇರುವುದರಿಂದ ಅಧ್ಯಕ್ಷ ಸ್ಥಾನವನ್ನು ಗೀತಾರಮೇಶ್ ಅಲಂಕರಿಸಿದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗೀತಾರಮೇಶ್-ನೇತ್ರಾವತಿ ಇಬ್ಬರನ್ನು ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕರಿಯಾಗಿದ್ದ ತಹಶೀಲ್ದಾರ್ ಕಾಮಾಕ್ಷಮ್ಮರವರು ನೂತನ ಅಧ್ಯಕ್ಷರಾಗಿ ಗೀತಾರಮೇಶ್, ಉಪಾಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಒಟ್ಟು 23ಸದಸ್ಯರ ಬಲವಿರುವ ಪುರಸಭೆಯಲ್ಲಿ ಜೆಡಿಎಸ್ 18 ಸ್ಥಾನ, ಕೆಜೆಪಿ 2 ಸ್ಥಾನ, ಕಾಂಗ್ರೆಸ್ 3 ಸ್ಥಾನ ಹೊಂದಿದ್ದರೆ ಬಿಜೆಪಿ ಯಾವುದೇ ಸ್ಥಾನಗಳಿಸಿರಲಿಲ್ಲ.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಶಾಸಕ ಸಿ.ಬಿ.ಸುರೇಶ್ಬಾಬು ಅಭಿನಂದಿಸಿದರು. ಜೆಡಿಎಸ್ ಮತ್ತು ಕೆಜೆಪಿ ಕಾರ್ಯಕರ್ತರು ನೆಹರು ಸರ್ಕಲ್ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಸುತ್ತಲಿನ ಪರಿಸರದಲ್ಲಿ ಬದುಕಲು ನೆರೆಹೊರೆಯವರ ಹೊಂದಾಣಿಕೆ
ಚಿಕ್ಕನಾಯಕನಹಳ್ಳಿ,ಸೆ.12 :   ಮನುಷ್ಯ ತನ್ನ ಸುತ್ತಲಿನ ಪರಿಸರದಲ್ಲಿ ಬದುಕಲು ನೆರೆಹೊರೆಯವರ ಹೊಂದಾಣಿಕೆ ಜೊತೆಗೆ ಕತ್ತಲನ್ನು ಬಡಿದೊಡಿಸುವ ದೀಪಗಳನ್ನು ಹಚ್ಚುವ ಮನಸ್ಸುಗಳನ್ನು ಬೆಳೆಸಬೇಕು ಎಂದು ಉಪನ್ಯಾಸಕ ಹೆಚ್.ಎನ್.ಪ್ರಕಾಶ್ ಹೇಳಿದರು.
  ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸದ್ಬಾವನಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾಥರ್ಿಗಳನ್ನು ಕುರಿತು ಮಾತನಾಡಿದರು. 
ಜಾತಿ, ಮತ, ಧರ್ಮಗಳನ್ನು ಮೀರಿ ರಾಷ್ಟೀಯ ಭಾವೈಕ್ಯತೆಯನ್ನು ರೂಡಿಸಿಕೊಳ್ಳುವ ಮನೋಧರ್ಮ ನಮ್ಮಲ್ಲಿ ಮೈಗೂಡಬೇಕು. ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಮಗು, ತಾಯಿಯಂತಹ ಸದ್ಭಾವನೆ ಬೆಳೆಯಬೇಕು. ಎನ್.ಎಸ್.ಎಸ್. ವಿದ್ಯಾಥರ್ಿಗಳು ಒಳ್ಳೆಯ ವಿಚಾರಗಳ ಕಡೆ ಹೊರಾಡುವ ಶಕ್ತಿ ಬೆಳೆಸಿಕೊಂಡು ಸಮಾಜ ಸೇವೆಗೆ ಸಿದ್ದಾರಾಗಬೇಕು. ಇಂದಿನ ಯುವ ಸಮೂಹದ ಶಕ್ತಿ ಅಣುಬಾಂಬ್ಗಿಂತ ಹೆಚ್ಚು ಪ್ರಬಲವಾಗಿದ್ದು ಎಲ್ಲರೂ ಒಂದು ಮನಸ್ಸಿನಿಂದ ಒಗ್ಗೂಡಿ ಸಹೋದರತ್ವ ಭಾವನೆ ಮೂಡಿ ಜೊತೆಯಾಗಿ ಉತ್ತಮ ಸಮಾಜದ ನಿಮರ್ಾಣಕ್ಕೆ ಭದ್ರ ಅಡಿಪಾಯವಾಗಬೇಕು ಎಂದು ಹೇಳಿದರು.
        ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೋ|| ಸಿ.ಚನ್ನಬಸಪ್ಪ ಮಾತನಾಡಿ ವಿದ್ಯಾಥರ್ಿಗಳಲ್ಲಿ ಸತ್ಚಾರಿತ್ಯ ಸತ್ಭಾವನೆ ಮೂಡಿ ಭಾಷೆ-ಧರ್ಮಗಳ ನಡುವೆ ಅಂತರ ಮೂಡದೆ ಏಕತೆಯಿಂದ ಸಮಗ್ರತೆಗೆ ದುಡಿಯಬೇಕು. ಭಾರತ ಸ್ವಾತಂತ್ಯ ಹೋರಾಟದಲ್ಲಿನ ಅನೇಕ ನಾಯಕರು ಮತೀಯ ಭಾವನೆ ದೂರಮಾಡಿಕೊಂಡು ನಿಸ್ವಾರ್ಥವಾಗಿ ದುಡಿದಿದ್ದರ ಫಲವೇ ಸ್ವಾತಂತ್ಯ ಎಂದು ಹೇಳಿದ ಅವರು ದೇಶದ ಬೆಳೆವಣಿಗೆಗೆ ರಾಷ್ಟಿಯ ಭಾವೈಕ್ಯತೆ ಸಹಕಾರಿಯಾಗುತ್ತದೆಂದು ತಿಳಿಸಿದರು.
       ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರುಗಳಾದ ಪ್ರೋ|| ಎಸ್.ಎಲ್.ಶಿವಕುಮಾರಸ್ವಾಮಿ. ಪ್ರೋ|| ಹೆಚ್.ಎಸ್.ಶಿವಯೋಗಿ. ಡಿ.ಎಸ್.ಲೋಕೇಶ್. ಉಮೇಶ್, ಸಿದ್ದೇಗೌಡ  ಉಪಸ್ಥಿತರಿದ್ದರು. 
ಕನ್ನಡ ಉಪನ್ಯಾಸಕರಾದ ರವಿಕುಮಾರ್ ಸದ್ಬಾವನಾ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು. 

ಎ.ಕೃಷ್ಣಪ್ಪನವರಿಗೆ ರಾಜ್ಯ ಜೆ.ಡಿ.ಎಸ್ ಅಧ್ಯಕ್ಷ ಸ್ಥಾನ ನೀಡಿರುವುದು ಸ್ವಾಗತಾರ್ಹ
ಚಿಕ್ಕನಾಯಕನಹಳ್ಳಿ : ಹಿಂದುಳಿದ ವರ್ಗಗಳ ಯಾದವ ಸಮಾಜದ ರಾಜ್ಯಾಧ್ಯಕ್ಷ ಎ.ಕೃಷ್ಣಪ್ಪನವರಿಗೆ ರಾಜ್ಯ ಜೆ.ಡಿ.ಎಸ್ ಅಧ್ಯಕ್ಷ ಸ್ಥಾನ ನೀಡಿರುವುದು ಸ್ವಾಗತಾರ್ಹ ಎಂದು ತಾಲ್ಲೂಕು ಯಾದವ ಸಮಾಜದ ಸಂಘಟನಾ ಕಾರ್ಯದಶರ್ಿ ಲಿಂಗರಾಜು ಹೇಳಿದರು.
ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗದ ಮಾಜಿ ಮುಖ್ಯಮಂತ್ರಿಗಳಾದ ಎ.ಕೃಷ್ಣಪ್ಪನವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದು ಹಿಂದುಳಿದ ವರ್ಗದ ಯಾದವ ಸಮಾಜವನ್ನು ಗುರುತಿಸದೇ ಅನ್ಯಾಯ ಮಾಡಿದ್ದು  ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಎ.ಕೃಷ್ಣಪ್ಪನವರನ್ನು ಗುರುತಿಸಿ ಅಧ್ಯಕ್ಷರನ್ನಾಗಿ ಮಾಡಿರುವುದು ಯಾದವ ಸಮಾಜ ಸ್ವಾಗತಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಖಜಾಂಚಿ ಬಿ.ಕೆ.ಜಯಣ್ಣ, ಟಿ.ಆರ್.ಓಬಣ್ಣರಾಜು, ಶಿವಾನಂದ, ರಾಮಣ್ಣ, ಹೆಚ್.ಸಿ.ರಾಮಣ್ಣ, ವೀರಣ್ಣ, ಕ್ಯಾತಪ್ಪ, ರವಿ ಮತ್ತಿತರರು ಹಾಜರಿದ್ದರು.

: ತುಮಕೂರು ಜಿಲ್ಲೆ ಬಿ.ಎಸ್.ಪಿ ರಾಜ್ಯ ಮುಖಂಡರಾದ ಪ್ರವಾಸ
ಚಿಕ್ಕನಾಯಕನಹಳ್ಳಿ,ಸೆ.13 : ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ, ತುರುವೇಕೆರೆ ತಾಲ್ಲೂಕುಗಳಿಗೆ ಬಿ.ಎಸ್.ಪಿ ರಾಜ್ಯ ಮುಖಂಡರಾದ ಆರ್.ಮುನಿಯಪ್ಪ, ಕ್ಯಾಪ್ಟನ್ ಸೋಮಶೇಖರ್, ನಾರಾಯಣರಾಜು ಪ್ರವಾಸ ಮಾಡಲಿದ್ದಾರೆ.
ಚಿಕ್ಕನಾಯಕನಹಳ್ಳಿಗೆ ಸೆಪ್ಟಂಬರ್ 18ರ ಬುಧವಾರ ಬೆಳಗ್ಗೆ 11ಕ್ಕೆ ಬಿ.ಎಸ್.ಪಿ ಕಛೇರಿಯಲ್ಲಿ, ತಿಪಟೂರಿಗೆ 19ರ ಗುರುವಾರ ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರದ ಬಳಿ, ಗುಬ್ಬಿಗೆ 20ರ ಶುಕ್ರವಾರ ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರದಲ್ಲಿ, ತುರುವೇಕೆರೆಗೆ 21ರ ಶನಿವಾರ ಬೆಳಗ್ಗೆ 11ಕ್ಕೆ ಪ್ರವಾಸಿ ಮಂದಿರದ ಬಳಿ ಸಭೆ ನಡೆಸಲಿದ್ದಾರೆ.
ಇವರ ಜೊತೆ ಇನ್ನಿತರ ಮುಖಂಡರುಗಳು ಪ್ರವಾಸ ಮಾಡಿ ತಾಲ್ಲೂಕು ಸಮಿತಿಗಳನ್ನು ಪುನರ್ ರಚಿಸಲಿದ್ದಾರೆ, ಆದುದರಿಂದ ಪಕ್ಷದ ಮುಖಂಡರುಗಳು ಮತ್ತು ಕಾರ್ಯಕರ್ತರು ಈ ಸಭೆಗೆ ಆಗಮಿಸುವಂತೆ ಸಂಚಾಲಕ ಪ್ರಸನ್ನಕುಮಾರ್ ಕೋರಿದ್ದಾರೆ.
ಜೋಗಿಹಳ್ಳಿ ಗ್ರಾಮದವರಿಗೂ ದಿನಕೂಲಿ ಕೆಲಸವನ್ನು ನೀಡುವಂತೆ ಜೋಗಿಹಳ್ಳಿ ಗ್ರಾಮಸ್ಥರು ಒತ್ತಾಯಿ
ಚಿಕ್ಕನಾಯಕನಹಳ್ಳಿ,ಸೆ.11 : ತಾಲ್ಲೂಕಿನ ಹೊನ್ನೆಬಾಗಿ ಗ್ರಾಮ ಸರಹದ್ದಿನಲ್ಲಿರುವ ಗಣಿಗಾರಿಕೆಯಲ್ಲಿ ಜೋಗಿಹಳ್ಳಿ ಗ್ರಾಮದವರಿಗೂ ದಿನಕೂಲಿ ಕೆಲಸವನ್ನು ನೀಡುವಂತೆ ಜೋಗಿಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 
  ಚಿಕ್ಕನಾಯಕನಹಳ್ಳಿ ತಾಲೂಕಿನ ಹೋನ್ನೆಬಾಗಿ ಸುತ್ತಮುತ್ತಲ ಗಣಿಗಾರಿಕೆ ನಡೆಯುವಾಗ ಜೋಗಿಹಳ್ಳಿ ಗ್ರಾಮದ 200 ಕ್ಕೂ ಹೆಚ್ಚು ಕೂಲಿಕಾಮರ್ಿಕರು ಗಣಿಯಲ್ಲಿ ಕಾಮರ್ಿಕರಾಗಿ ಕೆಲಸ ಮಾಡುತ್ತಿದ್ದು ಈಗ ಗಣಿಗಾರಿಕೆ ನಿಂತು ಹೋಗಿ ಮಳೆ ಬೆಳೆ ಕೂಲಿ ಇಲ್ಲದೆ ಜೀವನ ನಿರ್ವಹಣೆಗೆ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.
   ಈಗಾಗಲೇ ಗಣಿಪ್ರದೇಶದಲ್ಲಿ ಲಕ್ಷಾಂತರ ಟನ್ ಕಬ್ಬಿಣದ ಅದಿರು ದಾಸ್ತಾನು ಇದ್ದು ಸಕರ್ಾರ ದಾಸ್ತಾನು ಇರುವ ಅದಿರನ್ನು ಈ ಟೆಂಡರ್ ಮೂಲಕ ಹರಾಜು ಮಾಡಿದ್ದು, ಇದರಿಂದ ನಿತ್ಯ ಗಣಿ ಪ್ರದೇಶದಿಂದ ನೂರಾರು ಲಾರಿಗಳು ಕಬ್ಬಿಣದ ಅದಿರನ್ನು  ಬಳ್ಳಾರಿ, ಸೊಂಡೂರು ಸೇರಿದಂತೆ ರಾಜ್ಯದ ಹಾಗೂ ಹೊರರಾಜ್ಯಗಳಿಗೆ  ರವಾನಿಯಾಗುತ್ತಿದ.ೆ ಲಾರಿಗಳಲ್ಲಿ ಕಬ್ಬಿಣದ ಅಧಿರು ತುಂಬಿದ ನಂತರ ಕಬ್ಬಿಣದ ಅದಿರನ್ನು ಮಟ್ಟ ಮಾಡುವ ಕೆಲಸವನ್ನು ಬುಳ್ಳೇನಹಳ್ಳಿ ಹೊನ್ನೆಬಾಗಿ ಕೂಲಿ ಕಾಮರ್ಿಕರೇ ಮಟ್ಟ ಮಾಡುತಿದ್ದಾರೆ, ಅದೇ ರೀತಿ ಜೋಗಿಹಳ್ಳಿ ಗ್ರಾಮಸ್ಥರಿಗೂ ವಾರದಲ್ಲಿ 2 ದಿನ  ಕೆಲಸ ನೀಡುವಂತೆ ಸಣ್ಣಕರಿಯಪ್ಪ, ರಮೇಶ್, ಶಂಕರ್, ದೊಡ್ಡಲಿಂಗಪ್ಪ, ನಂಜಪ್ಪ, ದೊಡ್ಡಯ್ಯ, ಪುಟ್ಟಯ್ಯ, ಜೆ.ಎನ್.ಜಗದೀಶ್, ಪರಮೇಶ್ ಸೇರಿದಂತೆ ಹಲವರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ ಉಪಸ್ಥಿತರಿದ್ದರು

ಕಾನೂನು ಸಾಕ್ಷರತಾ ಶಿಬಿರ
ಚಿಕ್ಕನಾಯಕನಹಳ್ಳಿ,ಸೆ.13 : ಕಾನೂನು ಸಾಕ್ಷರತಾ ರಥಯಾತ್ರೆ ಮತ್ತು ಸಂಚಾರಿ ಜನತಾ ನ್ಯಾಯಾಲಯಗಳ ಪ್ರಯೋಜನಗಳ ಕಾನೂನು ಸಾಕ್ಷರತಾ ಶಿಬಿರವು ಇದೇ 16ರ ಸೋಮವಾರದಿಂದ 18ರ ಬುಧವಾರದವೆರೆಗೆ ತಾಲ್ಲೂಕಿನಾದ್ಯಂತ ನಡೆಯಲಿದೆ.
16ರ ಸೋಮಾವರದಂದು ಮೊದಲನೆ ಅಧಿವೇಶನದ ಕಾನೂನು ಸಾಕ್ಷರತಾ ರಥಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ಚಿ.ನಾ.ಹಳ್ಳಿ ನ್ಯಾಯಾಲಯದ ಆವರಣದಲ್ಲಿ ಬೆಳಗ್ಗೆ 10ಕ್ಕೆ ನಡೆಯಲಿದ್ದು ಪ್ರಧಾನ ಸಿವಿಲ್ ನ್ಯಾಯಾಧೀಸರಾದ ಕೆ.ನಿರ್ಮಲ ಉದ್ಘಾಟನೆ ನೆರವೇರಿಸಲಿದ್ದು ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ವಿಶ್ವನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲ ಜಿ.ಚನ್ನಬಸಪ್ಪ ಮಧ್ಯಸ್ಥಿಕೆ ಮತ್ತು ಕಾನೂನು, ಎಂ.ಮಹಾಲಿಂಗಯ್ಯ ಮಹಿಳೆ ಮತ್ತು ಕಾನೂನು ಬಗ್ಗೆ ಮಾತನಾಡಲಿದ್ದಾರೆ.
16ರಂದು ಎರಡನೇ ಅಧಿವೇಶನ ಕಾತ್ರಿಕೆಹಾಲ್ ಸಕರ್ಾರಿ ಪ್ರೌಡಶಾಲೆಯಲ್ಲಿ ಮಧ್ಯಾಹ್ನ 1ಕ್ಕೆ ನಡೆಯಲಿದ್ದು ಶಾಲೆಯ ಮುಖ್ಯೋಪಾಧ್ಯಾಯ ರೇಣುಕಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಸಹಾಯಕ ಸಕರ್ಾರಿ ಅಭಿಯೋಜಕ ರವಿಚಂದ್ರ ಆರ್. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಕೆ.ಎಸ್.ಚಂದ್ರಶೇಖರಯ್ಯ ಮಕ್ಕಳ ಹಕ್ಕುಗಳು, ವೈ.ಜಿ.ಲೋಕೇಶ್ವರ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಮಾತನಾಡಲಿದ್ದಾರೆ.
16ರಂದು ಮಧ್ಯಾಹ್ನ 3ಕ್ಕೆ ಮೂರನೇ ಅಧಿವೇಶನ ತೀರ್ಥಪುರ ಗ್ರಾಮ ಪಂಚಾಯ್ತಿ ಕಾಯರ್ಾಲಯದಲ್ಲಿ ನಡೆಯಲಿದ್ದು ತೀರ್ಥಪುರ ಗ್ರಾ.ಪಂ.ಅಧ್ಯಕ್ಷ ಪದ್ಮಮ್ಮ ಲಿಂಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಎಂ.ಎನ್.ಶೇಖರಯ್ಯ ಮಹಿಳಾ ದೌರ್ಜನ್ಯ ತಡೆ ಕಾಯಿದೆ, ಬಿ.ಎಂ.ಮೋಹನ್ಕುಮಾರ್ ಮೋಟಾರು ವಾಹನ ಅಪಘಾತ ಪರಿಹಾರ ಕಾಯಿದೆ ಬಗ್ಗೆ ಮಾತನಾಡಲಿದ್ದಾರೆ.
17ರ ಮಂಗಳವಾರ ಹುಳಿಯಾರಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನಲ್ಲಿ 10ಕ್ಕೆ ಮೊದಲ ಅಧಿವೇಶನ ನಡೆಯಲಿದ್ದು ಕಾಲೇಜಿನ ಪ್ರಾಂಶುಪಾಲ ಮುರುಗೇಶಪ್ಪ ಅಧ್ಯಕ್ಷತೆ ವಹಿಸಲಿದ್ದು ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಾಧೀಶರಾದ ಎನ್.ವೀಣಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಎ.ಮಂಜುನಾಥ್ ರ್ಯಾಗಿಂಗ್ ತಡೆ ಕಾಯಿದೆ, ಹೆಚ್.ಹನುಮಂತಯ್ಯ ಸೈಬರ್ ಅಪರಾಧಗಳು ಮತ್ತು ಕಾನೂನು ಬಗ್ಗೆ ಮಾತನಾಡಲಿರುವರು.
ಎರಡನೇ ಅಧಿವೇಶನವು 17ರ ಮಧ್ಯಾಹ್ನ 1ಕ್ಕೆ ಯಳನಡುವಿನ ಸಕರ್ಾರಿ ಪ್ರೌಡಶಾಲೆಯಲ್ಲಿ ನಡೆಯಲಿದ್ದು ಮುಖ್ಯೋಪಾಧ್ಯಾಯ ನಾಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಕೆ.ಸಿ.ವಿಶ್ವನಾಥ ಮಕ್ಕಳ ಹಕ್ಕುಗಳು, ಜಿ.ದಿಲೀಪ್ ಜನನ ಮರಣ ನೊಂದಣಿ ಕಾಯಿದೆ ಬಗ್ಗೆ ಮಾತನಾಡುವರು. ಮೂರನೇ ಅಧಿವೇಶನ 17ರ ಮಧ್ಯಾಹ್ನ 3ಕ್ಕೆ ಬೋರನಕಣಿವೆಯ ಸಕರ್ಾರಿ ಪ್ರೌಡಶಾಲೆಯಲ್ಲಿ ನಡೆಯಲಿದ್ದು ಮುಖ್ಯೋಪಾಧ್ಯಾಯರಾದ ಮಂಜಮ್ಮ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ವೈ.ಜಿ.ಲೋಕೇಶ್ವರ ಜನನ ಮತ್ತು ಮರಣ ನೊಂದಣಿ ಕಾಯಿದೆ, ಎಂ.ಶಿವಾನಂದ ಬಾಲ ಕಾಮರ್ಿಕರ ಕಾಯಿದೆ ಬಗ್ಗೆ ಮಾತನಾಡಲಿರುವರು.
18ರ ಬುಧವಾರ ಮೊದಲನೆ ಅಧಿವೇಶನವು ಗೋಡೆಕೆರೆ ಸಕರ್ಾರಿ ಪ.ಪೂ.ಕಾಜೇಜು, ಪ್ರೌಡಶಾಲೆ ಆವರಣದಲ್ಲಿ ಬೆಳಗ್ಗೆ 10ಕ್ಕೆ ನಡೆಯಲಿದ್ದು ಪ್ರಾಂಶುಪಾಲ ಡಿ.ಟಿ.ಪಾಂಡುರಂಗ ಅಧ್ಯಕ್ಷತೆ ವಹಿಸಲಿದ್ದು ಸಿವಿಲ್ ನ್ಯಾಯಾಧೀಶರಾದ ಕೆ.ನಿರ್ಮಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಬಿ.ಎಂ.ಮೋಹನ್ಕುಮಾರ್ ಮೋಟಾರು ವಾಹನ ಕಾಯಿದೆ ಬಗ್ಗೆ ವೈ.ಜಿ.ಲೋಕೇಶ್ವರ ಮಾಹಿತಿ ಹಕ್ಕು ಕಾಯಿದೆ ಬಗ್ಗೆ ಮಾತನಾಡಲಿರುವರು.
ಎರಡನೇ ಅಧಿವೇಶನ ಸಾಸಲು ಸಕರ್ಾರಿ ಪ್ರೌಡಶಾಲೆಯಲ್ಲಿ ಮಧ್ಯಾಹ್ನ 12ಕ್ಕೆ ನಡೆಯಲಿದ್ದು ಮುಖ್ಯೋಪಾಧ್ಯಾಯ ಸಂತೋಷ್.ಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಹೆಚ್.ಎಸ್.ಜ್ಞಾನಮೂತರ್ಿ ಅಪ್ರಾಪ್ತ ವಯಸ್ಕರ ಆಸ್ತಿ ಹಕ್ಕುಗಳು, ವೈ.ಜಿ.ಲೋಕೇಶ್ವರ ಬಾಲ ಕಾಮರ್ಿಕ ಕಾಯಿದೆ ಬಗ್ಗೆ ಮಾತನಾಡಲಿರುವರು. 18ರ ಮಧ್ಯಾಹ್ನ 3ಕ್ಕೆ ಶೆಟ್ಟಿಕೆರೆ ಗ್ರಾಮ ಪಂಚಾಯ್ತಿ ಆವರಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಗ್ರಾ.ಪಂ.ಅಧ್ಯಕ್ಷತೆ ದಾಕ್ಷಾಯಿಣಿರಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲರಾದ ಜಿ.ಪರಮೇಶ್ವರಯ್ಯ ಮಹಿಳಾ ದೌರ್ಜನ್ಯ ತಡೆ ಕಾಯಿದೆ, ಹೆಚ್.ಎಸ್.ಜ್ಞಾನಮೂತರ್ಿ ಮಹಿಳೆಯರ ಆಸ್ತಿಯ ಹಕ್ಕುಗಳು ಬಗ್ಗೆ ಮಾತನಾಡಲಿದ್ದಾರೆ.





ಸಲಪರು ಜಾತಿಗೆ ಸರ್ಪ ವಕ್ಕಲಿಗ ಎಂದು ಸಟರ್ಿಫಿಕೇಟ್ ನೀಡುವಂತೆ ಒತ್ತಾಯ.
ಚಿಕ್ಕನಾಯಕನಹಳ್ಳಿ,ಸೆ.11: ಸಲಪರು ಜಾತಿಗೆ  ಸರ್ಪ ವಕ್ಕಲಿಗ ಎಂದು ದಾಖಲೆ ನೀಡುವಂತೆ ಪಟೇಲ್ ಗರುಡೇಗೌಡ ಅಧ್ಯಯನ ಕೇಂದ್ರದ ಸಂಯೋಜಕ ಜಿ.ಶಾಂತರಾಜು ಆಗ್ರಹಿಸಿದ್ದಾರೆ.
ಒಕ್ಕಲಿಗ ಜಾತಿಯಲ್ಲಿ 114 ಒಳಪಂಗಡಗಳಿದ್ದು ಅದರಲ್ಲಿ ಸರ್ಪವಕ್ಕಲಿಗ ಒಂದು ಉಪ ಪಂಗಡವಾಗಿದೆ,  ಸರಕಾರಿ  ಗೆಜೆಟ್ನಲ್ಲಿ ದಾಖಲೆಯಲ್ಲಿದೆ, ಆದರೆ ನಾಡ ಭಾಷೆಯಲ್ಲಿ ಸಲಪರು ಎಂದು ಕರೆಯುತ್ತಾರೆ, ಸಲಪರು ಎಂದು ದಾಖಲೆ ಮಾಡಿದರೆ ಪ್ರವರ್ಗ1 ಕ್ಕೆ ಸೇರುತ್ತದೆ, ಇಲ್ಲಿ ಹಿಂದಿನಿಂದಲೂ ಬಾಯಿ ಮಾತಿನಲ್ಲಿರುವ  ಸಲಪರು ಸರಕಾರಿ ದಾಖಲೆಯಲ್ಲಿ ಸರ್ಪವಕ್ಕಲಿಗ (3ಎ) ಎಂದು ದಾಖಲೆ ಮಾಡುತ್ತಿದ್ದಾರೆ, ಆದರೆ ಇತ್ತೀಚೆಗೆ ಕೆಲವರು ಸರಕಾರಿ ಸವಲತ್ತು ದೊರೆಯುತ್ತದೆ ಎಂದು ಪ್ರವರ್ಗ1(ಸಲಪರು) ಎಂದು ನಮೂದಿಸಿ ಅತಂತ್ರ ಸ್ಥಿತಿ ಉಂಟಾಗಿದೆ, ಶಾಲಾ ದಾಖಲಾತಿ ಸಲಪರು ಎಂದು ಅಪ್ಪ-ಅಮ್ಮನ ಜಾತಿ ಸರ್ಪವಕ್ಕಲಿಗ ಎಂದು ಇರುವುದರಿಂದ ಅಧಿಕಾರಿವರ್ಗದವರಿಗೂ ಸಹ ಗೊಂದಲ ಉಂಟಾಗಿ ಜಾತಿ ಮತ್ತು ಆದಾಯ ದೃಡೀಕರಣ ಪತ್ರ ಕೊಡಲು ಸಾಧ್ಯವಾಗುತ್ತಿಲ್ಲ, ಅದು ಉಲ್ಲಂಘನೆಯಾಗುತ್ತದೆ,  ಒಂದು ಪಕ್ಷ ಸಲಪರು ಎಂದು ಸಟರ್ಿಫಿಕೇಟ್ ತೆಗೆದುಕೊಂಡರೆ ಮುಂದೆ ಸಿಂಧುವಾಗುವುದಿಲ್ಲ. ಜನಾಂಗದ ಮಕ್ಕಳಿಗೆ ತೊಂದರೆಯಾಗುತ್ತದೆ. ಸಕರ್ಾರಿ ಉದ್ಯೋಗ ಮತ್ತು ವಿದ್ಯಾಭ್ಯಾಸಕ್ಕೆ ಸೇರಲು ಅವಕಾಶ ವಂಚಿತರಾಗುತ್ತಾರೆ ಎಂದು ತಿಳಿಸಿದ್ದಾರೆ.