Friday, June 21, 2013


ಹೇಮಾವತಿ ನೀರು ತರುವ ಯೋಜನೆಗೆ 35 ಕೋಟಿ ರೂ ಬಿಡುಗಡೆ: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಜೂ.21 ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಬಳಿ ಒಂದುವರೆ ಎಕರೆ ಜಮೀನಿದ್ದು ಈ ಸ್ಥಳದಲ್ಲಿ ಶಾಸಕರ ಅನುದಾನ ಸೇರಿದಂತೆ ಭಕ್ತಾಧಿಗಳ ನೆರವಿನಿಂದ ಕಲ್ಯಾಣ ಮಂಟಪ ನಿಮರ್ಿಸಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ನೂತನ ರಾಜಗೋಪುರ ಹಾಗೂ ಕಳಶ ಪ್ರತಿಷ್ಠಾಪನ ಧಾಮರ್ಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ್ಲ ತಾಲೂಕಿಗೆ  ಹೇಮಾವತಿ ನಾಲೆಯಿಂದ ಕುಡಿಯುವ ನೀರಿನ ಯೋಜನೆಗೆ 35ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ತಿಳಿಸುವುದು ನನಗೆ ಸಂತಸತಂದಿದೆ ಎಂದರಲ್ಲದೆ, .ತಾಲ್ಲೂಕು ರಾಜ್ಯದಲ್ಲಿಯೇ ಅತಿ ಹೆಚ್ಚು ದೇವಾಲಯಗಳಿರುವ  ಬೀಡಾಗಿದ್ದು ಪ್ರಸಿದ್ದ ಹಳೆಯೂರು ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಹಲವು ಪುರಾತನ ದೇವಾಲಯಗಳು ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯವಿರುವುದು ತಾಲ್ಲೂಕಿನ ಹೆಮ್ಮೆಯ ವಿಷಯ ಎಂದರು.
ಪಟ್ಟಣದಲ್ಲಿ ಹಲವಾರು ವರ್ಷಗಳಿಂದ  ನೆನಗುದಿಗೆ ಬಿದ್ದಿದ್ದ ರಾಜಗೋಪುರ ಹಾಗೂ ಕಳಶ ಪ್ರತಿಷ್ಠಾಪನೆ ಭಕ್ತಾಧಿಗಳ ನೆರವಿನಿಂದ ಕೈಗೊಂಡು ಪೂರ್ಣಗೊಂಡಿದೆ ಎಂದರಲ್ಲದೆ, ದೇವಾಲಯದ ಸಮಿತಿಯ ಸದಸ್ಯರು ರಾತ್ರಿ ಹಗಲು ಎನ್ನದೆ ದೇವಾಲಯದ ಜೀಣರ್ೋದ್ದಾರ ಶ್ರಮಿಸಿರುವುದು ಶ್ಘಾಘನೀಯ ಎಂದರು.
ನಿವೃತ್ತ ವಾತರ್ಾ ಮತ್ತು ಪ್ರಸಾರ ಇಲಾಖೆ ಜಂಟಿ ನಿದರ್ೇಶಕ ಸಿ.ಕೆ.ಪರುಶುರಾಮಯ್ಯ ಮಾತನಾಡಿ ಹಾಲಿ ಕನ್ವಿನಿಯರ್ ಚಂದ್ರಶೇಖರ್ಶೆಟ್ಟಿರವರ ಧಾಮರ್ಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಜೀಣೋದ್ದಾರ ಮಾಡಿರುವುದು ಶ್ಘಾಘನೀಯವಾದುದು ಎಂದರು.
ರಾಜ್ಯ ಜೆ.ಡಿ.ಎಸ್.ವಕ್ತಾರ ರಮೇಶಬಾಬು ಮಾತನಾಡಿ ಚಿ.ನಾ.ಹಳ್ಳಿ ತಾಲ್ಲೂಕು ದೇವಾಲಯದ ಬೀಡಾಗಿದೆ, ಧಾಮರ್ಿಕ ಕಷೇತ್ರದಲ್ಲಿ ತಾಲ್ಲೂಕಿಗೆ ವಿಶೇಷ ಸ್ಥಾನಮಾನವಿದೆ,ಪಟ್ಟಣದ ವೆಂಕಟರಮಣ ದೇವಾಲಯ ಪ್ರಸನ್ನರಾಮೇಶ್ವರದೇವಾಲಯ, ಬನಶಂಕರಿದೇವಾಲಯ, ಆದಿಆಂಜನೇಯಸ್ವಾಮಿ ದೇವಾಲಯ 600ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿವೆ ಎಂದರು.
ಈ ಸಂದರ್ಭದಲ್ಲಿ ಅರ್ಚಕರಾದ ನಾಗೇಶ್ ಹಾಗೂ ರಾಮಕೃಷ್ಣಜೋಯಿಸ್ರವರನ್ನು ಸನ್ಮಾನಿಸಲಾಯಿತು. ಹಾಗೂ ವೃದ್ದಾಪ್ಯ, ಅಂಗವಿಕಲ ಮತ್ತು ವಿಧವಾ ವೇತನದ ಫಲಾನುಭವಿಗಳಿಗೆ ಚೆಕ್ನ್ನು ವಿತರಿಸಲಾಯಿತು.
ಹಳೆಯೂರು ಆಂಜನೇಯಸ್ವಾಮಿ ದೇವಾಲಯದ ಶಂಕುಸ್ಥಾಪನೆ ರಾಜಗೋಪುರ ಕಳಸಸ್ಥಾಪನೆಸ ಪ್ರಾಣಪ್ರತಿಷ್ಠಾಪನೆ, ಶ್ರೀ ರಾಮತಾರಕ ಹೋಮವನ್ನು ತುಮಕೂರು ರಾಮಕೃಷ್ಣಾಶ್ರಮದ ಶ್ರೀ ವೀರೇಶಾನಂದಸ್ವಾಮಿಯವರು ನೆರವೇರಿಸಿದರು.
ಕಾರ್ಯಕ್ರಮವನ್ನು ತಹಶೀಲ್ದಾರ್ ಕಾಮಾಕ್ಷಮ್ಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಸಾಹಿತಿ ಎಂ.ವಿ.ನಾಗರಾಜ್ರಾವ್, ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ದೇವಾಲಯದ ಕನ್ವಿನಿಯರ್ ಚಂದ್ರಶೇಖರ್ಶೆಟ್ಟಿ, ತಾ.ಜೆಡಿಎಸ್ ಅಧ್ಯಕ್ಷ ಜಿ.ರಘುನಾಥ್, ಪುರಸಭಾ ಸದಸ್ಯರಾದ ಸಿ.ಡಿ.ಚಂದ್ರಶೇಖರ್, ಸಿ.ಎಂ.ರಂಗಸ್ವಾಮಯ್ಯ, ಸಿ.ಎಸ್.ರಮೇಶ್, ಪ್ರಕಾಶ್, ರವಿಚಂದ್ರ, ದಯಾನಂದ್, ಮೈನ್ಸ್ಶಾಂತಕುಮಾರ್, ಸಿ.ಬಿ.ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
 ತರಬೇತಿಯನ್ನು ಹಾಗೂ ಅನುದಾನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿ
ಚಿಕ್ಕನಾಯಕನಹಳ್ಳಿ,ಜೂ.21 : ಗ್ರಾಮದ ಅಭಿವೃದ್ದಿಗಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಗ್ರಾಮಸ್ಥರಿಗೆ ನೀಡುವ ತರಬೇತಿಯನ್ನು ಹಾಗೂ ಅನುದಾನವನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡು ನಮ್ಮ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಪರ್ಾಡು ಮಾಡಬೇಕು ಎಂದು ಒಕ್ಕೂಟದ ಅಧ್ಯಕ್ಷ ನಿರಂಜನಮೂತರ್ಿ ಹೇಳಿದರು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ಚಿಂತಮಣಿ ನೇರಳೆ ನಾಟಿ ಮತ್ತು ನಿರ್ವಹಣೆ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
 ಕುಪ್ಪೂರು ವಲಯದ ಮೇಲ್ವಿಚಾರಕರಾದ ನಾಗರಾಜು ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿ ಸ್ವಸಹಾಯ ಸಂಘಗಳಲ್ಲಿ ಆಥರ್ಿಕ ಗುಣಮಟ್ಟವನ್ನು ಹೆಚ್ಚಿಸಲು ಸ್ವ-ಉದ್ಯೋಗದ ಜೊತೆಗೆ ತೋಟಗಾರಿಕ ಬೆಳೆಯಾದ ನೇರಳೆಯನ್ನು ಮಿಶ್ರ ಕೃಷಿ ಮಾಡಿ ಲಾಭಗಳಿಸಲು  ತಿಳಿಸಿದರು. ಹೇಮಾವತಿ ನಾಲೆಯಿಂದ ಚಿ.ನಾ.ಹಳ್ಳಿ ತಾಲ್ಲೂಕಿಗೆ ಕುಡಿಯುವ ನೀರಿನ ಯೋಜನೆಗೆ 35ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ ಎಂದು ತಿಳಿಸುವುದು ನನಗೆ ಸಂತಸತಂದಿದೆ ಎಂದರು.
ತಾಲೂಕು ಕೃಷಿ ಮೇಲ್ವಿಚಾರಕರಾದ ಎಸ್.ಹೆಚ್ ನಾಗಪ್ಪ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿ  ತೋಟಗಾರಿಕ ಬೆಳೆ ರೈತರ ಕೈ ಹಿಡಿದಿದ್ದು ಇದರ ಅಡಿಯಲ್ಲಿ ನಮ್ಮ ಯೋಜನೆ ವತಿಯಿಂದ ಗೋಪಾಲನಹಳ್ಳಿ ಗ್ರಾಮದಲ್ಲಿ 10 ಕುಟುಂಬಗಳಲ್ಲಿ 1 ಕುಟುಂಬಕ್ಕೆ 30 ಸಸಿಗಳನ್ನು ವಿತರಿಸಿ ಮಾದರಿ ಮಿಶ್ರ ಬೆಳೆಯ ಪ್ರಾತ್ಯಕ್ಷಿಕೆಯನ್ನು ಗ್ರಾಮದ 10 ಕುಟುಂಬಗಳಿಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಈ 10 ಕುಟುಂಬಗಳಿಗೆ ಉಚಿತ ಚಿಂತಾಮಣಿ ನೇರಳೆ ಸಸಿಯನ್ನು ನೀಡಿ ನಿರ್ವಹಣೆಗೆ ಉಚಿತ ತರಬೇತಿಯನ್ನು ನೀಡಿ ಗ್ರಾಮೀಣ ಜನತೆಯ ಆಥರ್ಿಕ ಮಟ್ಟವನ್ನು ಸುಧಾರಿಸುವಲ್ಲಿ ನಮ್ಮ ಸಂಸ್ಥೆ ನಿರಂತರವಾಗಿ ತಾಲೂಕಿನಾದ್ಯಾಂತ ಕಾರ್ಯನಿರ್ವಹಿಸುತ್ತಿದೆ. ಎಂದರಲ್ಲದೆ ಗೋಪಾಲನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡುವ ಉದ್ದೇಶದಿಂದ ನಾವು ಈ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಸುನಿಲ್ಕುಮಾರ್, ಗ್ರಾಮಸ್ಥರಾದ ಉಪನ್ಯಾಸಕ ರಘು, ಸ್ವಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.


ಮಾಸ್ತಿ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರಿಗೆ ಅಭಿನಂದನಾ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.20 : ರೋಟರಿ ಕ್ಲಬ್ ವತಿಯಿಂದ  ಮಾಸ್ತಿ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಜಿ.ಸಿದ್ದರಾಮಯ್ಯ ನವರಿಗೆ ಅಭಿನಂದನೆ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಇದೇ 26ರ ಬುಧವಾರ ಸಂಜೆ 6.45ಕ್ಕೆ ಪಟ್ಟಣದ ರೋಟರಿ ಬಾಲಭವನದಲಿಏರ್ಪಡಿಸಲಾಗಿದೆ ಎಂದು ರೋಟಿರಿ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ತಿಳಿಸಿದರು.
2012-13ರ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರಿಗೆ, ಬೆಂಗಳೂರಿನ ಅಂಬೇಡ್ಕರ್ ಡೆಂಟಲ್ ಕಾಲೇಜು ಮುಖ್ಯಸ್ಥ ಡಾ.ಮಹಮದ್ ಫೈಜುದ್ದೀನ್ರವರಿಗೆ ಗೌರವಾಭಿನಂದನೆ ಹಾಗೂ ಸಾಹಿತಿ ಎಂ.ವಿ.ನಾಗರಾಜ್ರವರ ನಾಲ್ಕನೇ ಮುದ್ರಣ ಕಂಡಿರುವ 'ಅಘೋರಿಗಳ ನಡುವೆ' ಎಂಬ ಕಾದಂಬರಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಸಮಾರಂಭವನ್ನು ವಕೀಲ ಎಂ.ಮಹಾಲಿಂಗಯ್ಯ, ಡಾ,ಸಿ.ಎಂ.ಸುರೇಶ್ ್ಯ ಉದ್ಘಾಟನೆ ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರೋಟರಿಯ ಜಿಲ್ಲಾ 3190 ಅಸಿಸ್ಟೆಂಟ್ ಗವರ್ನರ್ ರೊ.ಬಿಳಿಗೆರೆ ಶಿವಕುಮಾರ್ ಶಾಲಾ ಸಾಮಗ್ರಿ ವಿತರಣೆ ಮಾಡಲಿದ್ದಾರೆ.