Wednesday, July 7, 2010



10ನೇ ಬಾರಿ ಇನ್ನರ್ವೀಲ್ ಕ್ಲಬ್ ಅಧ್ಯಕ್ಷರಾಗಿ ನಾಗರತ್ನರಾವ್
ಚಿಕ್ಕನಾಯಕನಹಳ್ಳಿ,ಜು.07: 2010-11ನೇ ಸಾಲಿನ ಇನ್ನರ್ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಇದೇ ಜುಲೈ 8ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದು ತಾಲೂಕಿನ ಇನ್ನರ್ವೀಲ್ ಕ್ಲಬ್ ಅಧ್ಯಕ್ಷರಾಗಿ ನಾಗರತ್ನರಾವ್ ಮತ್ತು ಕಾರ್ಯದಶರ್ಿಯಾಗಿ ತೇಜಾವತಿ ನರೇಂದ್ರರವರು ಆಯ್ಕೆಯಾಗಿದ್ದು ಜಿಲ್ಲಾ 319ರ ಚೇರ್ಮನ್ ರೇಣುಅಯ್ಯರ್ ಅಧಿಕಾರ ಪ್ರದಾನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ 319ರ ಕಾರ್ಯದಶರ್ಿ ಆಶಾ ಶೈಲೇಂದ್ರ, ಮತ್ತು ಇ.ಎಸ್.ಒ ಮಾಲಿನಿರಾವ್ ಬಡವಿದ್ಯಾಥರ್ಿಗಳಿಗೆ ನೋಟ್ ಬುಕ್ ವಿತರಿಸಲಿದ್ದಾರೆ.
ಈ ಅವಧಿಯಲ್ಲಿ ಅಂಗವಿಕಲ ಮಕ್ಕಳಿಗೆ ಸಲಕರಣೆ ವಿತರಣೆ, ಮತ್ತು ಸ್ತ್ರೀ ರೋಗಗಳ ತಪಾಸಣಾ ಶಿಬಿರಗಳು ಸೇರಿದಂತೆ ವಿವಿಧ ಸೇವಾ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ವೋಲ್ಟೇಜ್ ವ್ಯತ್ಯಯದಿಂದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ
ಚಿಕ್ಕನಾಯಕನಹಳ್ಳಿ,ಜು.07: ವಿದ್ಯುತ್ನ ಅಧಿಕ ಪ್ರಮಾಣದ ವೋಲ್ಟೇಜ್ನ ಪ್ರಸರಣದಿಂದ ಮನೆಗಳ ಟಿ.ವಿ. ಮತ್ತು ಬಲ್ಪ್ಗಳು ಹೊಡೆದು ಸುಮಾರು 40ಸಾವಿರ ರೂ.ಗಳುಷ್ಟು ನಷ್ಟ ಸಂಭವಿಸಿರುವ ಘಟನೆ ಪಟ್ಟಣದ ಬನಶಂಕರಿ ಗುಡಿ ಬೀದಿಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಮಳೆ ಬಂದ ನಂತರ ಘಟನೆ ನಡೆದಿದ್ದು ರಾತ್ರಿಯಿಂದಲೇ ವೊಲ್ಟೇಜ್ ಹೆಚ್ಚಾಗಿ ಮನೆಯಲ್ಲಿನ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟಿ ಹೋಗಿದ್ದು ಮನೆಗಳಲ್ಲಿ ಅಳವಡಿಸಿದ್ದ ಬಲ್ಪ್ಗಳು ಮತ್ತು ಟಿ.ವಿ.ಗಳು ಸುಟ್ಟುಹೋಗಿವೆ.

ಜು.9ರಂದು ಅಂಗನವಾಡಿಗಳ ಬಂದ್
ಚಿಕ್ಕನಾಯಕನಹಳ್ಳಿ,ಜು.07: ಅಂಗನವಾಡಿ ನೌಕರರರು ತಮ್ಮ ಹಲವು ಬೇಡಿಕೆಗಳಿಗಾಗಿ ಜುಲೈ 9ರಂದು ಅಖಿಲ ಭಾರತ ಅಂಗನವಾಡಿ ನೌಕರರ ಮುಷ್ಕರದ ಪ್ರಯುಕ್ತ ತಾಲೂಕಿನ ಎಲ್ಲಾ ಅಂಗನವಾಡಿ ನೌಕರರು ಕೇಂದ್ರಗಳನ್ನು ಬಂದ್ ಮಾಡುವಂತೆ ಅಧ್ಯಕ್ಷೆ ಪೂಣರ್ಿಮ ಕರೆ ನೀಡಿದ್ದಾರೆ.
ಅಂಗನವಾಡಿ ನೌಕರರ ಹಲವು ಬೇಡಿಕೆಗಳಾದ 2010ರ ಬಜೆಟ್ನಲ್ಲಿ ಘೋಷಿಸಿರುವಂತೆ ನಿವೃತ್ತಿ ಸೌಲಭ್ಯವನ್ನು ಜಾರಿ ಮಾಡಬೇಕು, ನೌಕರರ ನಿವೃತ್ತಿಯಾಗುವ ಕಡೇ ಸಂಬಳದ ಅರ್ಧಭಾಗವನ್ನು ಪೆನ್ಷನ್ ಆಗಿ ಕೇಂದ್ರ ಸಕರ್ಾರವೇ ಕೊಡಬೇಕು, ಒಂದು ಲಕ್ಷ ಮತ್ತು ಐವತ್ತು ಸಾವಿರ ರೂಗಳ ಗ್ರಾಚ್ಯುಟಿಯನ್ನು ಕಾರ್ಯಕತರ್ೆ ಮತ್ತು ಸಹಾಯಕಿಯರಿಗೆ ಕೊಡಬೇಕು, ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುತ್ತಿರುವ ರೆಡಿಮೇಡ್ ಆಹಾರವನ್ನು ನಿಲ್ಲಿಸಿ, ಮೊದಲಿನಂತೆ ವಸ್ತುಗಳ ರೂಪದಲ್ಲಿ ಕೊಡಬೇಕು, ಅಂಗನವಾಡಿ ಕಾರ್ಯಕತೆ ಮತ್ತು ಸಹಾಯಕಿಯರಿಗೆ ಕುಶಲ ಮತ್ತು ಅರೆ ಕುಶಲ ಉದ್ಯೋಗಿಗಳಿಗೆ ಕೊಡುವ ಕನಿಷ್ಟ ಕೂಲಿಯನ್ನು ನಿಗದಿ ಮಾಡಬೇಕು ಮತ್ತು ಜಾರಿ ಮಾಡಬೇಕು, 3 ಮತ್ತು 4ನೇ ದಜರ್ೆ ನೌಕರರಾಗಿ ಖಾರ್ಯ ಮಾಡಬೇಕು, ಮತ್ತು ಐಸಿಸಿಎಸ್ ಯೋಜನೆಯನ್ನು ಖಾಸಗೀಕರಣ ಮಾಡಬಾರದು ಎಂಬ ಬೇಡಿಕೆಗಳನ್ನು ಈಡೇರಿಸುವವರೆಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ತಾಲೂಕು ಅಂಗನವಾಡಿ ನೌಕರರ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೇಷ್ಮೇ, ಹತ್ತಿಗೆ ಸಿಗುವಷ್ಟು ಸೌಲಭ್ಯಗಳು ಉಣ್ಣೆಗೂ ಸಿಗಲಿ
ಚಿಕ್ಕನಾಯಕನಹಳ್ಳಿ,ಜು.07: ರೇಷ್ಮೆ ಹತ್ತಿಗೆ ದೊರೆಯುವಷ್ಟೇ ಸಕರ್ಾರಿ ಸೌಲಭ್ಯಗಳು ಉಣ್ಣೆಗೂ ದೊರೆಯಬೇಕು ಈ ವಿಷಯವಾಗಿ ಕೇಂದ್ರ ಸಕರ್ಾರಕ್ಕೆ ಮನವರಿಕೆ ಮಾಡಿಕೊಡಲು ಜನಪ್ರತಿನಿಧಿಗಳ ನಿಯೋಗದೊಂದಿಗೆ ದೆಹಲಿಗೆ ತೆರಳುವುದಾಗಿ ರಾಜ್ಯ ಉಣ್ಣೆ ಕೈಮಗ್ಗ ನೇಕಾರರ ಖಾದಿಯೇತರಸಹಕಾರ ಸಂಘಗಳ ಮಹಾ ಮಂಡಲದ ಅಧ್ಯಕ್ಷ ಆರ್.ಮಲ್ಲೇಶಪ್ಪ ತಿಳಿಸಿದರು.
ಪಟ್ಟಣದ ಶ್ರೀ ರೇವಣಸಿದ್ದೇಶ್ವ ಕಂಬಳಿ ಉತ್ಪಾದನಾ ಮತ್ತು ಮಾರಾಟ ಸಹಕಾರ ಸಂಘದ ಆವರಣದಲ್ಲಿ ನೇಕಾರ ಮಕ್ಕಳಿಗೆ ವಿದ್ಯಾಥರ್ಿ ವೇತನ ಹಾಗೂ ಮೃತ ನೇಕಾರರ ನಾಮಿನಿಗಳಿಗೆ ಅಂತ್ಯ ಸಂಸ್ಕಾರ ಸಹಾಯಧನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕೇಂದ್ರ ಸಕರ್ಾರ ಉಣ್ಣೆ ಉತ್ಪನ್ನಗಳನ್ನು ಕಡೆಗಣಿಸುತ್ತಿತ್ತು ಈ ಉತ್ಪನ್ನಗಳನ್ನು ಬಳಸುವ ಕಡೆಯಲ್ಲಾ ಪಯರ್ಾಯ ಉತ್ಪನ್ನಗಳಿಗೆ ಅವಕಾಶ ಕಲ್ಪಿಸುವ ಮೂಲಕ ಉಣ್ಣೆ ಉತ್ಪನ್ನಗಳ ಮಾರುಕಟ್ಟೆ ಕುಸಿಯುವಂತೆ ಮಾಡುತ್ತಿದೆ ಎಂದ ಅವರು ಹತ್ತಿ ಮತ್ತಿತರ ಉತ್ಪನ್ನಗಳಿಗೆ ಕೋಟಿಗಟ್ಟಲೆ ಅನುದಾನ ನೀಡಿ ಅವುಗಳನ್ನು ದೊಡ್ಡ ದೊಡ್ಡ ಉದ್ಯಮವನ್ನಾಗಿಸುತ್ತಿದೆ, ಉಣ್ಣೆಯ ಕಡೆ ಮಾತ್ರ ಕಿರುಗಣ್ಣಿನಿಂದಲೂ ನೋಡುತ್ತಿಲ್ಲವೆಂದರು.
ನಮ್ಮ ಉಣ್ಣೆ ನೇಕಾರರು ಸಹ ಕಂಬಳಿ ನೇಯ್ಗೆಯನ್ನು ಗುಡಿ ಕೈಗಾರಿಕೆಗಷ್ಟೇ ಸೀಮಿತಗೊಳಿಸಿದೆ ಎಂದರಲ್ಲದೆ, ಕಂಬಳಿ ನೇಕಾರರು ಯಂತ್ರಗಳನ್ನು ಬಳಸುವ ಮೂಲಕ ಅಧಿಕ ಉಣ್ಣೆ ಉತ್ಪನ್ನಗಳನ್ನು ತಯಾರಿಸಿ ದೊಡ್ಡ ಕೈಗಾರಿಕೆಯನ್ನಾಗಿಸುವಂತೆ ಮನವಿ ಮಾಡಿದರು.
ಸಮಾರಂಭವನ್ನು ಉದ್ಘಾಟಿಸಿದ ಎಂ.ಎಲ್.ಸಿ ಡಾ.ಎಂ.ಆರ್ ಹುಲಿನಾಯ್ಕರ್ ಮಾತನಾಡಿ ರಾಜ್ಯದ ಉಣ್ಣೆ ಸಹಕಾರ ಸಂಘಗಳ ಅಭಿವೃದ್ದಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು ಈ ಬಗ್ಗೆ ಸಕರ್ಾರದ ಅಧಿವೇಶನದಲ್ಲಿ ಮಾತನಾಡುವುದಾಗಿ ತಿಳಿಸಿದರಲ್ಲದೆ, ನೇಕಾರರ ಅಭಿವೃದ್ದಿಗೂ ದುಡಿಯುವುದಾಗಿ ತಿಳಿಸಿದರು.
ಉಣ್ಣೆ ಉತ್ಪನ್ನಗಳನ್ನು ಆಧುನಿಕ ಯುಗಮಾನಕ್ಕೆ ಹೊಂದಿಕೆಯಾಗುವಂತೆ ಉತ್ಪಾದಿಸುವುದರಿಂದ ಮಾರುಕಟ್ಟೆ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಬಾರದು ಎಂದರು.
ವಿದ್ಯಾಥರ್ಿ ವೇತನ ವಿತರಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ಬಾಬು ನೇಕಾರರ ಸಮಸ್ಯೆಗಳನ್ನು ಸಕರ್ಾರದ ಮಟ್ಟದಲ್ಲಿ ಚಚರ್ಿಸಲು ಉತ್ಸುಕರಾಗಿರುವುದಾಗಿ ತಿಳಿಸಿದರಲ್ಲದೆ ನೇಕಾರರ ಮಕ್ಕಳ ವಿದ್ಯಾಭ್ಯಾಸಕ್ಕೂ ಯೋಜನೆಯೊಂದನ್ನು ರೂಪಿಸುವಂತೆ ಸಕರ್ಾರವನ್ನು ಒತ್ತಾಯಿಸುವುದಾಗಿ ತಿಳಿಸಿದರು.
ಉಣ್ಣೆ ಸಹಕಾರ ಸಂಘಗಳ ಪುನಃಶ್ಚೇತನ್ಕ ಅಗತ್ಯವಿದ್ದು ಸೊಸೈಟಿಗೆ ವರಮಾನವನ್ನು ತಂದುಕೊಡುವಂತಹ ಯೋಜನೆಗಳನ್ನು ರೂಪಿಸುವಂತೆ ಸೊಸೈಟಿಯ ಆಡಳಿತ ಮಂಡಳಿಗೆ ಸೂಚಿಸಿದರು.
ಸಮಾರಂಭದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿದರ್ೇಶಕ ಸುನೀಲ್, ಹಿಂದುಳಿದ ವರ್ಗಗಳ ಹಾಗೂ ಅಲ್ಪ ಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಸಿ.ಟಿ.ಮುದ್ದುಕುಮಾರ್, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ಸಿ.ಎಂ.ರಂಗಸ್ವಾಮಿ ಮಾತನಾಡಿದರು.
ಸೊಸೈಟಿಯ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಪ್ರಾಸ್ತಾವಿಕ ಮಾತನಾಡಿದರು. ಸಿ.ಪಿ.ಗಿರೀಶ್ ಪ್ರಾಥರ್ಿಸಿದರು, ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿದರು. ಸಿ.ಎಸ್.ದೇವರಾಜು ವಂದಿಸಿದರು.

ತೀರ್ಥಪುರ, ತೀರ್ಥಹಳ್ಳಿ ನನ್ನ ಪಾಲಿನ ಪುಣ್ಯ ಧಾಮಗಳು:ದೇ.ಜ.ಗೌ
ಚಿಕ್ಕನಾಯಕನಹಳ್ಳಿ,ಜು.07: ನನ್ನ ಜೀವನದಲ್ಲಿ ಎರಡು ಪುಣ್ಯ ಸ್ಥಳಗಳೆಂದರೆ ತೀರ್ಥಹಳ್ಳಿ ಹಾಗೂ ಚಿಕ್ಕನಾಯಕನಹಳ್ಳಿ ಇವೆರಡೂ ನನ್ನ ಬಾಳನ್ನು ಬೆಳಗಿಸಿ ಗುರುಗಳ ಹುಟ್ಟೂರು ಎಂದು ನಾಡೋಜ ಕನರ್ಾಟಕ ರತ್ನ ಡಾ. ದೇ.ಜವರೇಗೌಡ ಮನಬಿಚ್ಚಿ ಮಾತನಾಡಿದರು.
ಪಟ್ಟಣದಲ್ಲಿ ಡಾ.ದೇಜವರೇಗೌಡರಿಗೆ ಕನರ್ಾಟಕ ರತ್ನ ಲಭಿಸಿದ ಹಿನ್ನೆಲೆಯಲ್ಲಿ ತಾಲೂಕು ಕ.ಸಾ.ಪ ಹಮ್ಮಿಕೊಂಡಿದ್ದ ಗೌರವಾರ್ಪಣೆಯನ್ನು ಸ್ವೀಕರಿಸಿ ಮಾತನಾಡಿದರು.
ತೀರ್ಥಹಳ್ಳಿ ಹಾಗೂ ತೀರ್ಥಪುರ ಇವೆರಡೂ ಸಹ ನನ್ನ ಬಾಳಿನ ಪುಣ್ಯ ಧಾಮಗಳು ಎಂದು ಬಣ್ಣಿಸಿದ ಅವರು ತೀರ್ಥಪುರದಲ್ಲಿ ಜನಿಸಿದ ತೀ.ನಂ.ಶ್ರೀಕಂಠಯ್ಯನವರು ನನ್ನ ಗುರುಗಳು ನನ್ನಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿದರೆ ತೀರ್ಥಹಳ್ಳಿ ತಾಲೂಕಿನಲ್ಲಿ ಹುಟ್ಟಿದ ಕು.ವೆಂ.ಪು.ರವರು ಸರಸ್ವತ ಲೋಕದಲ್ಲಿ ನನ್ನನ್ನು ನೆಲೆ ನಿಲ್ಲುವಂತೆ ಮಾಡಿ ನನ್ನಲ್ಲಿ ಮೇಲಿರುಮೆಯನ್ನು ಬೆಳೆಸಿದರು ಎಂದರು.
ಚಿಕ್ಕನಾಯಕನಹಳ್ಳಿಯ ಹೆಸರು ಕೇಳಿದಾಗಲೆಲ್ಲಾ ತೀ.ನಂ.ಶ್ರೀ.ಯವರ ವ್ಯಕ್ತಿತ್ವ ಕಣ್ಣುಮುಂದೆ ಬಂದು ನಿಲ್ಲುತ್ತದೆ ಎಂದ ಅವರು ಗುರುಗಳಾಗಿ ಅವರು ನನ್ನಂತಹ ಸಾವಿರಾರು ವಿದ್ಯಾಥರ್ಿಗಳಿಗೆ ಮಾರ್ಗದರ್ಶನ ನೀಡಿ ಈ ನಾಡಿನ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಾಹಿತ್ಯದ ವಿದ್ಯಾಥರ್ಿಗಳು ಸೃಜನಶೀಲ ಮನಸ್ಸನ್ನು ವೃದ್ದಿಸಿಕೊಳ್ಳುತ್ತ ಹೋದಂತೆ ಅವರ ಸಾಹಿತ್ಯ ಕೃಷಿಯೂ ಫಲವತ್ತಾಗುತ್ತಾ ಹೋಗುತ್ತದೆ. ಓದು ಮತ್ತು ಬರಹವನ್ನು ಅಪ್ಪಿಕೊಂಡವರು ಜೀವನದಲ್ಲಿ ಸಂತೃಪ್ತಿಯನ್ನು ಕಾಣಬಲ್ಲರು, ಸಾಹಿತ್ಯದ ಕೃಷಿ ಮನಸ್ಸಿಗೆ ನೆಮ್ಮದಿಯನ್ನು ತರಬಲ್ಲದು ಎಂದುರ.
ಕನರ್ಾಟಕ ರತ್ನ ದೇ.ಜವರೇಗೌಡರಿಗೆ ಗೌರವಾರ್ಪಣೆಯನ್ನು ಸಲ್ಲಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಜವರೇಗೌಡರಂತಹ ವಿದ್ವಾಂಸರನ್ನು ಗೌರವಿಸುತ್ತಿರುವುದು ನಮ್ಮ ತಾಲೂಕಿಗೆ ಹಮ್ಮೆಯ ವಿಷಯ ಎಂದ ಅವರು ಸಕರ್ಾರ ಗೌಡರಿಗೆ ಕನರ್ಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದ ನಂತರದಲ್ಲಿ ನಾವೇ ಮೊದಲು ಅವರನ್ನು ಗೌರವಿಸುತ್ತಿರುವುದು ಎಂಬುದು ಸಹ ನಮ್ಮ ತಾಲೂಕಿನ ಹೆಚ್ಚುಗಾರಿಕೆಯ ವಿಷಯ ಎಂದರು.
ಇದೇ ಸಂದರ್ಭದಲ್ಲಿ ಡಾ.ಜವರೇಗೌಡ ಅವರಿಗೆ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ರೋಟರಿಕ್ಲಬ್ನ ಕಾರ್ಯದಶರ್ಿ ಅಶ್ವತ್ಥ್ನಾರಾಯಣ್ ಪತ್ರಕರ್ತರ ಸಂಘದ ಕಾರ್ಯದಶರ್ಿ ಸಿ.ಹೆಚ್.ಚಿದಾನಂದ್, ಕನ್ನಡ ಸಂಘದ ಕೆ.ಜಿ.ಕೃಷ್ಣೇಗೌಡ ಸೇರಿದಂತೆ ಹಲವಾರು ಗೌರವಾರ್ಪಣೆ ಅಪರ್ಿಸಿದರು.
ಸಮಾರಂಭದಲ್ಲಿ ಕು.ವೆಂ.ಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಪ್ರಧಾನ ಗುರುದತ್ತ, ಪ್ರೊ.ನಾ.ದಯಾನಂದ, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿದ್ದರು.

ಸಿ.ಎಂ.ರೇವಣ್ಣ, ಪ್ರೊ. ಕೆ.ಬಸವಯ್ಯ ಸ್ಮರಣ ಸಮಿತಿಯ 4ನೇ ವಷರ್ಾಚರಣೆ
ಚಿಕ್ಕನಾಯಕನಹಳ್ಳಿ,ಜು.07: ದಿವಂಗತರಾದ ಸಿ.ಎಂ.ರೇವಣ್ಣನವರು ಮತ್ತು ಪ್ರೊ.ಕೆ.ಬಸವಯ್ಯನವರ ಸ್ಮರಣ ಸಮಿತಿ ತನ್ನ 4ನೇ ವರ್ಷದ ವಾಷರ್ಿಕೊತ್ಸವ ಹಾಗೂ ಪುತ್ಥಳಿಗಳಿಗೆ ಪೂಜಾ ಕಾರ್ಯಕ್ರಮವನ್ನು ಇದೇ 10ರಂದು ಶನಿವಾರ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮವನ್ನು ಪಟ್ಟಣದ ಕನಕ ಭವನದ ಮುಂಭಾಗದಲ್ಲಿರುವ ಪುತ್ಥಳಿ ಪ್ರತಿಷ್ಟಾಪನಾ ದೇಗುಲದಲ್ಲಿ ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷ ಕ್ಯಾಪ್ಟನ್ ಸೋಮಶೇಖರ್, ಅಧ್ಯಕ್ಷ ರಾಜಪ್ಪ, ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಸಮಿತಿಯ ಹಿರಿಯರಾದ ಸಿ.ಡಿ.ಮುದ್ದಲಿಂಗಯ್ಯನವರನ್ನು ಸನ್ಮಾನಿಸಲಾಗವುದು ಎಂದು ಕಾರ್ಯದಶರ್ಿ ಎಂ.ಸೀರಯ್ಯ ತಿಳಿಸಿದ್ದಾರೆ.