Monday, February 21, 2011


ಜಮೀನು ವಿವಾದಕ್ಕೆ ಬೆಂಕಿಗಾಹುತಿಯಾದ ಒಂದೇ ಕುಟುಂಬದ ಐವರು.
ಚಿಕ್ಕನಾಯಕನಹಳ್ಳಿ,ಫೆ.19: ಕುಟುಂಬದಲ್ಲಿನ ಜಮೀನಿನ ವಿವಾದದಿಂದಾಗಿ ಒಂದೇ ಕುಟುಂಬದ 5 ಜನ ಸಜೀವ ದಹನವಾದರೆ, ಒಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೊಯ್ಯಲಾಗಿದೆ. ಈ ಘಟನೆ ತಾಲೂಕಿನ ಗೋಡೆಕೆರೆಯ ಸೊಂಡೆನಹಳ್ಳಿಯ ಯಾದವರಹಟ್ಟಿಯ ತೋಟದ ಮನೆಯಲ್ಲಿ ನಡೆದಿದೆ.
ಘಟನೆಯಲ್ಲಿ ಜುಂಜಮ್ಮ(75), ಕೃಷ್ಯಯ್ಯ(60), ಶಿವಮ್ಮ(40), ಜೀವಂತ್(7), ಹೇಮಂತ್(2) ಸಜೀವ ದಹನಗೊಂಡಿದ್ದರೆ, ಕೃಷ್ಣಯ್ಯನ ಮಗ ಜಗದೀಶ್(25) ಎಂಬುವವನನ್ನು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.
ಘಟನೆಗೆ ಕಾರಣ: ಇಡೀ ಘಟನೆಗೆ ಜಮೀನಿನ ವಿವಾದವೇ ಕಾರಣವೆನ್ನಲಾಗಿದ್ದು, ಮೃತ ಕೃಷ್ಣಯ್ಯನ ಮಾವ ಚಿಕ್ಕಣ್ಣ ಮತ್ತು ಜುಂಜಮ್ಮ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬಾಕೆ ಹಲವು ವರ್ಷಗಳ ಹಿಂದೆಯೇ ಮರಣಹೊಂದಿದ್ದರು, ಚಿಕ್ಕಣ್ಣನ ಎರಡನೇ ಮಗಳು ಶಿವಮ್ಮನಿಗೆ ತಿಪಟೂರು ತಾಲೂಕಿನ ಕೃಷ್ಣಯ್ಯನೊಂದಿಗೆ ಮದುವೆ ಮಾಡಿ, ಮನೆಯ ಅಳಿಯನನ್ನಾಗಿ ಮಾಡಿಕೊಳ್ಳಲಾಗಿತ್ತು. ಕೃಷ್ಣಯ್ಯನ ಅತ್ತೆ, ಈ ಘಟನೆಯಲ್ಲಿ ಮೃತಳಾಗಿರುವ ಜುಂಜಮ್ಮನೊಂದಿಗೆ ಸೊಂಡೆನಹಳ್ಳಿಯ ತೋಟದ ಮನೆಯಲ್ಲಿ ಕುಟುಂಬ ಊಡಿದ್ದು ಚಿಕ್ಕಣ್ಣನ ಸಂಬಂಧಗಳಿಗೆ ಸಮಾಧಾನ ತಂದಿರಲಿಲ್ಲ, ಚಿಕ್ಕಣ್ಣನ ಮರಣಾನಂತರ ಈ ಶೀತಲ ಸಮರ ಕಳೆದ 20 ವರ್ಷಗಳಿಂದ ನಡೆಯುತ್ತಿತ್ತು. ಈ ಮಧ್ಯೆ ಚಿಕ್ಕಣ್ಣನಿಗೆ ಗಂಡು ಸಂತಾನವಿಲ್ಲದಿದ್ದರಿಂದ ಅವರಿಗಿದ್ದ 10 ಎಕರೆ ಜಮೀನನ್ನು ಲಪಟಾಯಿಸಬೇಕೆಂದು ಚಿಕ್ಕಣ್ಣನ ಸಂಬಂಧಿಗಳು ಹೊಂಚು ಹಾಕುತ್ತಿದ್ದರು,
ಕೃಷ್ಣಯ್ಯನಿಗೆ ಇಬ್ಬರು ಗಂಡು ಮಕ್ಕಳು ಮೂವರು ಹೆಣ್ಣು ಮಕ್ಕಳು. ಇದರಲ್ಲಿ ಕೃಷ್ಣಯ್ಯನ ಮಗ ನಾಗೇಶ್ ಜಮೀನಿನ ವಿಷಯವಾಗಿ ತಂದೆಯೊಂದಿಗೆ ಜಗಳವಾಡಿಕೊಂಡು ಬೆಂಗಳೂರಿಗೆ ಹೋಗಿದ್ದ, ಈ ಸಂದರ್ಭವನ್ನೇ ಹೊಂಚು ಹಾಕುತ್ತಿದ್ದ ಮಠದ ತಮ್ಮಯ್ಯ, ಜಂಜಪ್ಪ, ಹಾಗೂ ಮಗ ಜಂಜಯ್ಯ, ಬಸವರಾಜ ನಾಗೇಶ್ನ ಜೊತೆಗೂಡಿ ಈ ಕೃತ್ಯ ಎಸೆಗಿರಬಹುದು ಎಂದು ಕೃಷ್ಣಯ್ಯನ ಹೆಣ್ಣು ಮಕ್ಕಳಾದ ರಾಧಮ್ಮ, ರತ್ನಮ್ಮ ಪತ್ರಿಕೆಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಮರಣ ಹೊಂದಿರುವ ಜೀವಂತ್ ಕೃಷ್ಣಯ್ಯನ ಎರಡನೇ ಮಗಳಾದ ರಾಧಮ್ಮನ ಮಗ, ಈತ ತಾತನ ಮನೆಯಲ್ಲಿಯೇ ಇದ್ದು ಎರಡನೇ ತರಗತಿಯಲ್ಲಿ ಓದುತ್ತಿದ್ದರೆ, ಕೊನೆಯ ಮಗಳು ಲತಾಳ ಮಗ ಎರಡು ವರ್ಷದ ಹೇಮಂತನು ಘಟನೆಯ ಹಿಂದಿನ ದಿನ ಅವರ ತಾಯಿ ತವರು ಮನೆಯಾದ ಕೃಷ್ಣಯ್ಯನ ಮನೆಯಲ್ಲಿ ಬಿಟ್ಟಿದ್ದರು. ಕೃಷ್ಣಯ್ಯನ ಮೂರು ಜನ ಹೆಣ್ಣು ಮಕ್ಕಳು ಕೃಷ್ಣಯ್ಯನ ಮೊದಲ ಮಗಳಾದ ರತ್ನಮ್ಮ ವಾಸವಿದ್ದ ಸೊಂಡೆನಹಳ್ಳಿಯ ಊರೊಳಗಿನ ಮನೆಯಲ್ಲಿ ಮಲಗಿದ್ದರಿಂದ ಇವರು ಜೀವಂತವಾಗಿದ್ದಾರೆ.
ಈ ಘಟನೆ ಶನಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದಿರಬಹುದೆಂದು ಊಹಿಸಲಾಗಿದ್ದು, ಕೃಷ್ಣಯ್ಯನ ಮನೆಗೆ ಹೊರಗಿನಿಂದ ಬೀಗ ಹಾಕಿ ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದೆ. ಇದರಿಂದಾಗಿ ಸಾವಿನ ಪ್ರಮಾಣ ಹೆಚ್ಚಿದೆ. ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ.
ಘಟನೆಯ ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ಮಾಜಿ ಶಾಸಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ ಕುಮಾರ್, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಎಸ್.ಪಿ. ಡಾ.ಹರ್ಷ ಭೇಟಿ ನೀಡಿದ್ದರು.






ಸಕರ್ಾರಿ ನೌಕರರಿಗೆ ಕ್ರೀಡಾ ಕೂಟ ಮತ್ತು ಪ್ರತಿಭಾ ಪುರಸ್ಕಾರ
ಚಿಕ್ಕನಾಯಕನಹಳ್ಳಿ,ಫೆ.21: ರಾಜ್ಯ ಸಕರ್ಾರಿ ನೌಕರರ ಕ್ರೀಡಾ ಕೂಟ ಮತ್ತು ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಇದೇ 26ರ ಬೆಳಗ್ಗೆ 9ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದು ಕ್ರೀಡೆಯಲ್ಲಿ ಭಾಗವಹಿಸಿದವರಿಗೆ ಓ.ಓ.ಡಿ. ಸೌಲಭ್ಯವಿದ್ದು, ಶಿಕ್ಷಣ ಇಲಾಖೆ ಉಪನಿದರ್ೇಶಕ ಮೋಹನ್ಕುಮಾರ್ ಸಮಾರಂಭದ ಧ್ವಜಾರೋಹಣ ನೆರವೇರಿಸಲಿದ್ದು ತಾ.ರಾ.ಸ.ನೌ.ಸಂಘದ ಆರ್.ಪರಶಿವಮೂತರ್ಿ ಅಧ್ಯಕ್ಷತೆ ವಹಿಸಲಿದ್ದು ರಾ.ಸ.ನೌ,ಸಂಘದ ಅಧ್ಯಕ್ಷ ಎಲ್.ಭೈರಪ್ಪ ನಿವೃತ್ತ ನೌಕರರಿಗೆ ಸನ್ಮಾನಿಸಲಿದ್ದಾರೆ.
ರಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಬಸವರಾಜ್ ಗುರಿಕಾರ್ ಪ್ರತಿಭಾ ಪುರಸ್ಕಾರ ನೀಡಲಿದ್ದು ಜಿಲ್ಲಾ ಕ.ರಾ.ಸ.ನೌ.ಸಂಘದ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಕ್ರೀಡಾ ಜ್ಯೋತಿ ಮತ್ತು ತಹಶೀಲ್ದಾರ್ ಟಿ.ಸಿ.ಕಾಂತರಾಜು ವಂದನಾ ಸ್ವೀಕರಣೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷ ಕವಿತಾಚನ್ನಬಸವಯ್ಯ, ತಾ.ಪಂ.ಅಧ್ಯಕ್ಷ ಸೀತಾರಾಮಯ್ಯ, ಉಪಾಧ್ಯಕ್ಷೆ ಬಿ.ಫಾತೀಮ, ಜಿ.ಪಂ.ಸದಸ್ಯೆ ಮಂಜುಳಗವಿರಂಗಯ್ಯ, ಜಾನಮ್ಮರಾಮಚಂದ್ರಯ್ಯ, ಹೆಚ್.ಬಿ.ಪಂಚಾಕ್ಷೆರಿ, ನಿಂಗಮ್ಮರಾಮಯ್ಯ, ಲೋಹಿತಾಬಾಯಿ, ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ರಂಗೇಗೌಡರು, ನಾರಾಯಣಸ್ವಾಮಿ, ಇ.ಓ ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್, ಬಿ.ಭಾಸ್ಕರಾಚಾರ್ಯ, ಡಾ.ಶ್ರೀಧರ್, ಸಿ.ಪಿ.ಐ. ರವಿಪ್ರಸಾದ್, ವಿಶೇಷ ಆಹ್ವಾನಿತರಾಗಿ ಸೈಯದ್ಮುನೀರ್, ರಂಗಸ್ವಾಮಿ, ಹೆಚ್.ಆಂಜನೇಯ, ಅನೀಸ್ಖೈಸರ್, ಡಿ.ಉಮೇಶ್, ರೇಣುಕಪ್ರಸನ್ನ, ಬಿ.ಹೆಚ್.ಮಾರುತಿ, ಆರ್.ಎಂ.ಜಯರಾಮ್, ಹೊನ್ನಪ್ಪ, ತಿಮ್ಮರಾಜು, ನರಸಿಂಹಮೂತರ್ಿ, ಸಿ.ಎಚ್.ಶೋಭಾ, ಹೆಚ್.ಎಂ.ಸುರೇಶ್ ಸಿ.ಎಸ್.ಕುಮಾರಸ್ವಾಮಿ ಉಪಸ್ಥಿತರಿರುವರು.
ಸೊಂಡೇನಹಳ್ಳಿಯ ಹೃದಯ ವಿದ್ರಾವಕ ಘಟನೆ ನಾಗರೀಕ ಸಮಾಜ ತಲೆ ತಗ್ಗಿಸುವಂತ ವಿಷಯ
ಚಿಕ್ಕನಾಯಕನಹಳ್ಳಿ,ಫೆ.21: ಸೊಂಡೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ದ್ವೇಷದಿಂದ ಐವರನ್ನು ಸಜೀವವಾಗಿ ಸುಟ್ಟು ಹಾಕಿರುವ ಹೃದಯ ವಿದ್ರಾವಕ ಘಟನೆಯು ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ ಎಂದು ಚಿತ್ರದುರ್ಗದ ಯಾದವಾನಂದಸ್ವಾಮೀಜಿ ವಿಷಾದಿಸಿದರು.
ತಾಲೂಕಿನ ಸೊಂಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಯಾರಿಗಾದರೂ ಈ ಘಟನೆಯ ಸತ್ಯ ಸಂಗತಿ ಗೊತ್ತಿದ್ದರೂ ಮುಚ್ಚಿಟ್ಟರೆ ಅದು ಕಾನೂನು ಅಪರಾಧವಾಗುತ್ತದೆ, ಸೊಂಡೇನಹಳ್ಳಿಯ ಗೊಲ್ಲರಹಟ್ಟಿ ಘಟನೆಯಿಂದ ಯಾದವ ಸಮಾಜದಲ್ಲಿ ಇಂತಹ ಕ್ರೂರಿಗಳು ಇದ್ದಾರಯೇ ಎಂದು ನನಗೆ ಸಮಾಜದಲ್ಲಿ ಕೇಳುತ್ತಿದ್ದಾರೆ. ಈ ಘಟನೆಗೆ ಕಾರಣರಾದವರ ಬಗ್ಗೆ ಪೋಲಿಸರಿಗಾಗಲಿ ಶಾಸಕರಿಗಾಗಲಿ, ತಮಗಗಾಲಿ ದೂರವಾಣಿಯ ಮುಖೇನ ತಿಳಿಸಿ, ಎಂದ ಅವರು ಸಣ್ಣ ಪುಟ್ಟ ಸಮುದಾಯಗಳಲ್ಲಿ ಇಂತಹ ಘಟನೆಗಳು ನಡೆದರೆ ಹೇಗೆ? ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಎಲ್ಲೂ ಇಂತಹ ಕೃತ್ಯ ನಡೆಯಬಾರದು ಈ ಕೃತ್ಯಕ್ಕೆ ಕಾರಣರಾದವರನ್ನು ಊರಿನ ಒಳಗೆ ಸೇರಿಸಬೇಡಿ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಹೋಗಬೇಕಾಗಿದೆ, ಸಮಾಜದಲ್ಲಿ ಯಾದವ ಜನಾಂಗ ಮುಗ್ದರು ಎಂಬ ಭಾವನೆ ಇದೆ ಈ ಕೃತ್ಯದ ಬಗ್ಗೆ ಪೋಲಿಸರಿಗೆ ಸಹಕರಿಸಿ, ಯಾರು ಗ್ರಾಮ ಬಿಟ್ಟು ತೆರಳ ಬೇಡಿ ಇದರಿಂದ ಪೋಲಿಸರಿಗೆ ಅನುಮಾನ ಬರುತ್ತದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮುಂದೆ ಇಂತಹ ಕೃತ್ಯ ಎಲ್ಲಿಯೂ ಆಗಬಾರದು ಮಾನವೀಯತೆಯನ್ನು ಕಾಪಾಡಿಕೊಂಡು ಹೋಗುವುದು ಎಲ್ಲರ ಕರ್ತವ್ಯ ಎಂದರು.
ಸಿ.ಪಿ.ಐ ರವಿಪ್ರಸಾದ್ ಮಾತನಾಡಿ ಸೊಂಡೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದ ರಕ್ಷಣೆಗೆ ಮಾತ್ರ ಪೋಲಿಸರನ್ನು ನಿಯೋಜಿಸಿದ್ದೇವೆ ಇದರಿಂದ ಜನ ಭೀತಿಗೆ ಒಳಗಾಗಬಾರದು ಈ ಕೃತ್ಯದ ಹಿಂದೆ ಯಾರಿದ್ದಾರೆ ಎಂಬುದನ್ನು ಸ್ಥಳೀಯರಿಂದ ತಿಳಿಯಬೇಕಾಗಿದೆ ಅದ್ದರಿಂದ ಗ್ರಾಮಸ್ಥರು ಪೋಲಿಸರ ಆಡಳಿತಕ್ಕೆ ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ಶಾಂತಿ ಸಭೆಯಲ್ಲಿ ತಿಪಟೂರು ಡಿವೈಎಸ್ಪಿ ಡಾ.ಬೋರಲಿಂಗೇಗೌಡ, ಡಿವೈಎಸ್ಪಿ ಶಿವಣ್ಣ, ತಾ.ಪಂ.ಕಾರ್ಯನಿವರ್ಾಹಣಾಧಿಕಾರಿ ದಯಾನಂದ್, ಗ್ರಾ.ಪಂ.ಸದಸ್ಯ ತಿಮ್ಮೇಗೌಡ ಮುಂತಾದವರಿದ್ದರು.
ಸೊಂಡೇನಹಳ್ಳಿ ಘಟನೆಯ ಸ್ಥಳಕ್ಕೆ ಕೆ.ಪಿ.ಸಿ.ಸಿ. ಅಧ್ಯಕ್ಷರ ಭೇಟಿ
ತಪ್ಪಿತಸ್ಥರನ್ನು ಶೀಘ್ರ ಬಂಧಿಸುವಂತೆ ಒತ್ತಾಯ
ಚಿಕ್ಕನಾಯಕನಹಳ್ಳಿ,ಫೆ.21: ಕುಟುಂಬದಲ್ಲಿನ ಸದಸ್ಯರ ವೈಷಮ್ಯ ಇಡೀ ಕುಟುಂಬ ಬೆಂಕಿಗೆ ಆಹುತಿಯಾಗಿರುವುದು ದುರದೃಷ್ಟಕರ ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ತಕ್ಷಣವೇ ಬಂಧಿಸವಂತೆ ಸಕರ್ಾರವನ್ನು ಒತ್ತಾಯಿಸುತ್ತೇನೆ ಎಂದು ರಾಜ್ಯ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆಗ್ರಹಿಸಿದರು.
ತಾಲೂಕಿನ ಸೊಂಡೇನಹಳ್ಳಿ ಯಾದವರ ಹಟ್ಟಿಯ ಬೆಂಕಿಗೆ ಆಹುತಿಯಾಗಿರುವ ತೋಟದ ಮನೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಂತರ ಪತ್ರಕರ್ತರ ಜೊತೆ ಮಾತನಾಡಿದರು.
ಈ ದುರ್ಘಟನೆಯಿಂದ ಇಡೀ ಕುಟುಂಬ ಬೆಂಕಿಯಲ್ಲಿ ಬೆಂದಿದ್ದು, ಉಳಿದ ಹೆಣ್ಣು ಮಕ್ಕಳಿಗೆ ಮಾನವೀಯ ದೃಷ್ಠಿಯಲ್ಲಾದರೂ ಸಕರ್ಾರ ಪರಿಹಾರ ನೀಡಬೇಕೆಂದರು.
ಈ ಕುಟುಂಬದ ಸಾವಿಗೆ ಕಾರಣನಾಗಿರಬಹುದೆಂದು ಊಹಿಸಲಾಗಿರುವ ಮೃತ ಕೃಷ್ಣಯ್ಯನ ಸಂಬಂಧಿ ಹಾಗೂ ಅವನ ಸಹಚರರನ್ನು ಶೀಘ್ರ ಬಂಧಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದು, ಈ ವಿಷಯವಾಗಿ ಪೊಲೀಸ್ ಇಲಾಖೆಯೂ ಎಚ್ಚರವಾಗಿದೆ ಎಂದರಲ್ಲದೆ, ಎಸ್.ಪಿ.ಯವರ ನೇತೃತ್ವದಲ್ಲಿ ರಚನೆಯಾಗಿರುವ ತಂಡಗಳು ಕಾರ್ಯ ಪ್ರವೃತ್ತವಾಗಿವೆ ಎಂದರಲ್ಲದೆ, ತನಿಖೆಯನ್ನು ಚುರುಕುಗೊಳಿಸಲು ಸಕರ್ಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಮೀನು ವಿಷಯಕ್ಕಾಗಿ ಉಂಟಾಗುತ್ತಿರುವ ಗೊಂದಲಗಳು ಪ್ರಾಣ ಹತ್ಯೆಯಂತಹ ಅಮಾನವೀಯ ಹಂತವನ್ನು ತಲುಪುತ್ತಿರುವುದರ ಹಿನ್ನೆಲೆಯಲ್ಲಿ ಲೋಕ ಅದಾಲತ್, ತಹಶೀಲ್ದಾರ್ರವರ ನೇತೃತ್ವದಲ್ಲಿ ರಚನೆಯಾಗಿರುವ ಪಂಚಾಯ್ತಿಗಳು ರಾಜಿ ಸಂಧಾನದ ಮೂಲಕ ನಡೆಯುವಂತಹ ಜಮೀನು ವಿವಾದದ ಕಾನೂನು ಪ್ರಕ್ರಿಯೆಗಳು ಶೀಘ್ರ ಇತ್ಯಾರ್ಥ ಮಾಡುವ ಮೂಲಕ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬಾಳುವಂತಾಗಬೇಕೆಂದರು.
ರಾಜ್ಯದಲ್ಲಿರುವ ಜಮೀನು ವಿವಾದಗಳ ಬಗ್ಗೆ ಪೊಲೀಸರು ಹೆಚ್ಚು ಜಾಗೃತರಾಗಿರಬೇಕೆಂದರು.
ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ ಮಾತನಾಡಿ, ಹೆಣ್ಣು, ಹೊನ್ನು, ಮಣ್ಣು, ಈ ಮೂರು ವಿಷಯಗಳಿಗೆ ಏಳುತ್ತಿರುವ ಗಲಾಟೆಗಳು ಹೆಚ್ಚುತ್ತಿವೆ ಎಂದರಲ್ಲದೆ, ಅದರಲ್ಲೂ ಜಮೀನು ವಿವಾದಗಳು ಇತ್ತೀಚೆಗೆ ಕೊಲೆಯ ಹಂತ ತಲುಪುತ್ತಿರುವುದಕ್ಕೆ ನ್ಯಾಯ ನಿರ್ಣಯಗಳಲ್ಲಿ ಆಗುತ್ತಿರುವ ವಿಳಂಬ ಕಾರಣ, ಇದನ್ನು ತಪ್ಪಿಸಲು ಸಕರ್ಾರ ಚಿಂತನೆ ನಡೆಸಬೇಕೆಂದರು.
ಮೃತ ಕೃಷ್ಣಯ್ಯನ ಕುಟುಂಬದಲ್ಲಿ ಉಳಿದಿರುವ ಮಕ್ಕಳಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ನೀಡಬೇಕೆಂದರು.
ಸ್ಥಳದಲ್ಲಿದ್ದ ಡಿ.ಸಿ.ಸಿ.ಬ್ಯಾಂಕ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಜಿಲ್ಲೆಯಲ್ಲಿ ಜಮೀನು ವಿವಾದಗಳು ಅತಿಯಾಗುತ್ತಿವೆ, ಜಿಲ್ಲೆಯ ಸಿಂಗೋನಹಳ್ಳಿಯಲ್ಲಿ ಜಮೀನು ವಿವಾದಕ್ಕಾಗಿ ನಡೆದ ಕೊಲೆಯ ಘಟನೆಯ ನಂತರದಲ್ಲಿ ಸೊಂಡೇನಹಳ್ಳಿ ಘಟನೆ ಜನರನ್ನು ಭೀತಿಗೊಳಿಸಿದೆ. ಆಮೀನು ಕಾನೂನಿನಲ್ಲಿ ಆಗುತ್ತಿರುವ ತೊಡಕುಗಳನ್ನು ತಪ್ಪಿಸಲು ಅಧಿಕಾರಿಗಳು ಸೇರಿದಂತೆ ಎಲ್ಲರೂ ಸಹಕಾರಯುತವಾಗಿ ವತರ್ಿಸಬೇಕೆಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕೆ.ಪಿ.ಸಿ.ಸಿ.ಸದಸ್ಯ ಸೀಮೆಣ್ಣೆ ಕೃಷ್ಣಯ್ಯ, ನಗರ ಘಟಕದ ಅಧ್ಯಕ್ಷ ಕೆ.ಜಿ.ಕೃಷ್ಣೇಗೌಡ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್, ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಕೊಡಲಾಗರ ಲೋಕೇಶ್, ರಾಮನಹಳ್ಳಿ ವಿ.ಎಸ್.ಎಸ್.ಎನ್. ಅಧ್ಯಕ್ಷ ಕೇಶವಮೂತರ್ಿ ಉಪಸ್ಥಿತರಿದ್ದರು.

Friday, February 18, 2011


ಚಿಕ್ಕನಾಯಕನಹಳ್ಳಿ ಜೆ.ಡಿ.ಎಸ್ ಬಿಜೆಪಿ ಒಂದಾಗಿ ತಾಲೂಕು ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿರುವುದು ರಾಜ್ಯದಲ್ಲಿಯೇ ಪ್ರಥಮ
ಚಿಕ್ಕನಾಯಕನಹಳ್ಳಿ,ಫೆ.18: ಮೈಸೂರಿನಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಎಸ್ ಪಕ್ಷ ಒಂದಾಗಿ ಜಿಲ್ಲಾ ಪಂಚಾಯಿತ್ನಲ್ಲಿ ಅಧಿಕಾರ ಹಿಡಿದರೆ, ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್, ಬಿಜೆಪಿ ಒಂದಾಗಿ ತಾಲೂಕು ಪಂಚಾಯಿತಿಯಲ್ಲಿ ಅಧಿಕಾರ ಹಿಡಿದಿರುವುದು ರಾಜ್ಯದಲ್ಲಿಯೇ ಪ್ರಥಮ.
ಬಿಜೆಪಿ ಮತ್ತು ಜೆಡಿಎಸ್ ಒಂದಾದ ಪರಿಣಾಮ ಬಿಜೆಪಿಯ ಗಾಣದಾಳು ಕ್ಷೇತ್ರದ ಜಿ.ಆರ್.ಸೀತರಾಮಯ್ಯ ಅಧ್ಯಕ್ಷರಾಗಿ, ಜೆ.ಡಿ.ಎಸ್ನ ಹುಳಿಯಾರು ಕ್ಷೇತ್ರದ ಬಿ.ಬಿ.ಫಾತೀಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿ.ಜೆ.ಪಿ ಮತ್ತು ಜೆ.ಡಿ.ಯು ರಾಷ್ಟ್ರಮಟ್ಟದಲ್ಲೂ ಹೊಂದಾಣಿಕೆ ಇದ್ದರೂ ಚಿನಾಹಳ್ಳಿಯಲ್ಲಿ ಮಾತ್ರ ಬಿನ್ನವಾಗಿ, ಜೆ.ಡಿ.ಎಸ್ ಮತ್ತು ಬಿ.ಜೆ.ಪಿಯ ತಾ.ಪಂ.ಸದಸ್ಯರು ಒಂದಾಗಿ ಸಂಮ್ಮಿಶ್ರ ಆಡಳಿತಕ್ಕೆ ಮತ ಹಾಕಿದ್ದಾರೆ.
ಒಟ್ಟು 19ಸ್ಥಾನದ ತಾಲೂಕು ಪಂಚಾಯಿತಿಯಲ್ಲಿ ಜೆ.ಡಿ.ಎಸ್ 7ಸ್ಥಾನ, ಬಿ.ಜೆ.ಪಿ 6ಸ್ಥಾನ, ಜೆ.ಡಿ.ಯು 6ಸ್ಥಾನಗಳನ್ನು ಹೊಂದಿದ್ದು ಇದರಲ್ಲಿ ಅಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು.
ಈ ಸ್ಥಾನಗಗಳಿಗೆ ಜೆ.ಡಿ.ಎಸ್ನ ಸಿ.ಬಿ.ಸುರೇಶ್ಬಾಬು . ಬಿ.ಜೆ.ಪಿಯ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ತಾ.ಪಂ.ಸದಸ್ಯರು ಸಂಮ್ಮಿಶ್ರ ಆಡಳಿತಕ್ಕೆ ಒಪ್ಪಿಗೆ ಸೂಚಿಸಿ, ಮತ ಹಾಕಿ, ಅಧಿಕ ಮತದಿಂದ 13ಸ್ಥಾನಗಳನ್ನು ಪಡೆದು ಬಿಜೆಪಿಯ ಜಿ.ಆರ್.ಸೀತಾರಾಮಯ್ಯ ಅಧ್ಯಕ್ಷ ಮತ್ತು ಜೆ.ಡಿ.ಎಸ್ನ ಬಿ.ಬಿ.ಫಾತೀಮ ಉಪಾಧ್ಯಕ್ಷ ಸ್ಥಾನಗಳನ್ನು ಪಡೆದರು.
ಜೆಡಿಯುನ ಸ್ಪಧರ್ೆಯಲ್ಲಿ ಜೆಡಿಯು ಪಕ್ಷದ ಚಿಕ್ಕಮ್ಮ ಗಂಗಾಧರಯ್ಯ ಅಧ್ಯಕ್ಷ ಸ್ಥಾನಕ್ಕೂ ಉಪಾಧ್ಯಕ್ಷ ಸ್ಥಾನಕ್ಕೆ ಲತಾ ನಾಮಪತ್ರ ಸಲ್ಲಿಸಿದ್ದರು.
ಚುನಾವಣೆಯಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ಎ.ಸಿ. ವೈ.ಎಸ್.ಪಾಟೀಲ್ ಉಪಸ್ಥಿತರಿದ್ದರು.
ರೋಟರಿ ವತಿಯಿಂದ ಉಚಿತ ಆರೋಗ್ಯ ಶಿಬಿರ
ಚಿಕ್ಕನಾಯಕನಹಳ್ಳಿ,ಫೆ.18: ರೋಟರಿ ಕ್ಲಬ್ ಮತ್ತು ಬ್ರಹ್ಮವಿದ್ಯಾ ಸಮಾಜದ ವತಿಯಿಂದ ಉಚಿತ ಶ್ರವಣ ರೋಗ ತಪಾಸಣಾ ಶಿಬಿರವನ್ನು ಇದೇ 20ರ ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರವರಗೆ ಹಮ್ಮಿಕೊಳ್ಳಲಾಗಿದೆ.
ಶಿಬಿರವನ್ನ ಬ್ರಹ್ಮ ವಿದ್ಯಾ ಸಮಾಜದ ಕಟ್ಟಡದಲ್ಲಿ ಏರ್ಪಡಿಸಿದ್ದು ವಿಶ್ವರ್ ಹಿಯರಿಂಗ್ ವಡ್ಸ್ನ ಡಾ.ಪುರುಷೋತ್ತಮ್, ನಾಯಕ್ ಹಿಯರಿಂಗ್ ಕೇರ್ನ ಡಾ.ಎಂ.ಎಸ್.ಜೆ.ನಾಯಕ್ ಈ ಶಿಬಿರದಲ್ಲಿ ಭಾಗವಹಿಸುವರು.
ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರ
ರೋಟರಿ ಕ್ಲಬ್ ಮತ್ತು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಇದೇ 22ರ ಮಂಗಳವಾರ 9ರಿಂದ ಸಂಜೆ 1ರವರಗೆ ತಾಲೂಕಿನ ಬೆಳಗುಲಿ ಗ್ರಾಮದಲ್ಲಿ ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

Thursday, February 17, 2011




ಶಾಸಕರನ್ನು ನಾಯಿ, ಕತ್ತೆ, ಹಂದಿಗಳಗೆ ಹೋಲಿಸಿದ ಗುಬ್ಬಿ ಎಂ.ಎಲ್.ಎ ಶ್ರೀನಿವಾಸ
ಚಿಕ್ಕನಾಯಕನಹಳ್ಳಿ,ಫೆ.17: ರಾಜ್ಯದ ಇತ್ತೀಚಿನ ಬೆಳವಣಿಗೆಯಿಂದ ಶಾಸಕರೆಂದರೆ ನಾಯಿ, ಕತ್ತೆ, ಹಂದಿಗಳಿಗಿಂತ ಕಡೆಯಾಗಿ ಹೋಗಿದ್ದೇವೆಂದು ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವ್ಸಾ ವಿಶ್ಲೇಷಿಸಿದರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಸಕ ಸಿ.ಬಿ.ಸುರೇಶ್ಬಾಬುರವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರೇಕ್ಷಕರನ್ನು ರಂಜಿಸಲು ಇನ್ನಿಲ್ಲದ ಮಾತಿನ ಕಸರತ್ತು ನಡೆಸಿದರು.
ಮಾತನಾಡುವ ಭರಾಟೆಯಲ್ಲಿ ಸಭಾ ಮಯರ್ಾದೆಯನ್ನು ಮರೆತು ಮಾತನಾಡಿದ ಶ್ರೀನಿವಾಸ್ ಆಪರೇಶನ್ ಕಮಲದಲ್ಲಿ ಯಡಿಯೂರಪ್ಪ ಶಾಸಕರನ್ನು ಕೊಂಡುಕೊಳ್ಳುವ ರೀತಿಯೇ ಶಾಸಕರ ಬಗ್ಗೆ ಜನರಲ್ಲಿ ಇಂತಹ ಅಭಿಪ್ರಾಯ ಮೂಡಿದೆ ಎಂದರು.
ಈ ಸಕರ್ಾರದಲ್ಲಿ ಪಕ್ಷದ ಶಾಸಕರಿಗೆ ಕನಿಷ್ಠ ರಸ್ತೆಯಲ್ಲಿ ಬಿಟ್ಟಿರುವ ಗುಂಡಿಯನ್ನು ಮುಚ್ಚಿಸಲು ಯೋಗ್ಯತೆ ಇಲ್ಲವಾಗಿದೆ ಎಂದ ಅವರು ರಾಜ್ಯದ ಬಡವರು ತಮ್ಮ ಹೆಂಡತಿಗೆ ಸೀರೆ ಕೊಡಿಸಲಿಕ್ಕೂ ಯೋಗ್ಯತೆ ಇಲ್ಲದವರು ಎಂಬಂತೆ ಬಿಂಬಿಸುತ್ತಿದ್ದಾರೆ, ಹೊರ ರಾಜ್ಯದಲಿ 100 ರೂಗಳಿಗೊಂದು ಸೀರೆ ತಂದು ಅದನ್ನು ಇಲ್ಲಿ ವಿತರಿಸಿ ಸಕರ್ಾರದ ಲೆಕ್ಕದಲ್ಲಿ ಮೂರು ನೂರು ರೂ ಲೆಕ್ಕ ತೋರಿಸುತ್ತಿದ್ದಾರೆ ಎಂದರು.
ಜನರೂ ಅಷ್ಟೇ, ಯಡಿಯೂರಪ್ಪನವರ ಗಿಮಿಕ್ಗಳಿಗೆ ಒಳಗಾಗಿ ಗ್ರಾ.ಪಂ ಹಾಗೂ ಜಿ.ಪಂ.ಗಳಲ್ಲಿ ಅವರ ಪಕ್ಷಕ್ಕೆ ಓಟು ಹಾಕುತ್ತಿದ್ದಾರೆ ಎಂದರು.
ಈ ರಾಜ್ಯವನ್ನು ಕತ್ತಲೆಗೆ ನೂಕಿರುವ ಯಡಿಯೂರಪ್ಪ ರೈತರಿಗೆ ಸಮಪರ್ಕವಾಗಿ ಕರೆಂಟ್ ನೀಡಲಾಗುತ್ತಿಲ್ಲ, ಶೋಭಾ ಮೇಡಂ ಇಂಧನ ಸಚಿವರಾದ ಮೇಲಾದರೂ ಕರೆಂಟಿನ ಸಮಸ್ಯೆ ಬಗೆಹರಿಯಬಹುದೆಂರೆ ನಾವಂದು ಕೊಂಡಿದ್ದು ತಪ್ಪಾಯಿತು, ಈ ಯಡಿಯೂರಪ್ಪನವೇ ಕರೆಂಟ್ ಮುಟ್ಟಿದರೂ ಶಾಕ್ ಹೊಡೆಯುವುದಿಲ್ಲ ಈಗಿದೆ ರಾಜ್ಯದಲ್ಲಿ ಕರೆಂಟ್ನ ವೋಲ್ಟೇಜ್ನ ಸ್ಥಿತಿ ಎಂದು ಹೀಯಾಳಿಸಿದರು.
ಶಾಸಕ ಸಿ.ಬಿ.ಎಸ್ರವರ ಹುಟ್ಟು ಹಬ್ಬದ ಆಚರಣೆಯ ಬಗ್ಗೆ ಮಾತನಾಡಿದ ಅವರು, ನಾನು ಹುಟ್ಟು ಹಬ್ಬವನ್ನೇ ಆಚರಿಸಿಕೊಳ್ಳುವುದಿಲ್ಲ, ಏಕೆಂದರ ನನಗೆ ನನ್ನ ಹುಟ್ಟಿದ ದಿನಾಂಕವೇ ಗೊತ್ತಿಲ್ಲ, ಗೆಳೆಯ ಬಾಬುಗೆ ಅವರ ಪೋಷಕರು ಹುಟ್ಟಿದ ದಿನದ ಬಗ್ಗೆ ತಿಳಿಸಿರುವುದರಿಂದ ಅವರು ಆಚರಿಸಿಕೊಳ್ಳುತ್ತಿದ್ದಾರೆ, ನಾವೆಲ್ಲ ಆಚರಣೆಯಲ್ಲಿ ಭಾಗಿಯಾಗಿದ್ದೇವೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ತುಂಬಾ ಧಾರಾಳಿ, ಈ ಕ್ಷೇತ್ರದ ಜನ ಅವರನ್ನೇ ಹಂದಿ ಕುಯ್ದುಕೊಂಡಂತೆ, ಕೊಯ್ದಿಕೊಂಡರೂ ಸುಮ್ಮನಿರುತ್ತಾರೆ, ಹಾಗಂತ ಅವರು ಯಾವಾಗಲೂ ಬೆಂಗಳೂರಿನಲ್ಲೇ ಇರಬಾರದು, ಕ್ಷೇತ್ರದಲ್ಲಿ ಓಡಾಡಿಕೊಂಡಿರಬೇಕು, ಜನರು ಪೋನ್ ಮಾಡಿದರೆ, ಪೋನೆತ್ತಿ ಜನರೊಂದಿಗೆ ಮಾತನಾಡಬೇಕು, ಜನರು ಸಹ ಬಾಬುನ ಬಳಿ ಸಣ್ಣ ಪುಟ್ಟದಕ್ಕೆಲ್ಲಾ ದುಡ್ಡು ಕೇಳಬಾರದು ಎಂದ ಅವರು , ಈ ಬಗ್ಗೆ ನಮ್ಮ ನಾಯಕ ಕುಮಾರಣ್ಣನವರು ಬಾಬುಗೆ ಬುದ್ದಿ ಹೇಳಿದ್ದಾರೆ.
ನಾನು ಚಿ.ನಾ.ಹಳ್ಳಿಗೆ ಹಿಂದೊಮ್ಮೆ ಕಾರ್ಯಕ್ರಮಕ್ಕೆ ಬಂದಾಗ ಹೆಚ್ಚು ಜನ ಸೇರಿದ್ದರು , ಈಗ ಜನರ ಸಂಖ್ಯೆ ಆಗಿನಷ್ಠು ಇಲ್ಲ, ಇಲ್ಲಿನ ಜನ ಬಾಬುರವರನ್ನು ಬೆಂಬಲಿಸಬೇಕು, ಚುನಾವಣೆಗಳಲ್ಲಿ ಅವರ ಕೈ ಬಲ ಪಡಿಸಬೇಕು, ಮುಂದೆ ಏನಾದರೂ ಅದೃಷ್ಠಕ್ಕೆ ಬಾಬು ಸಚಿವರಾದರೆ ಅದರ ಲಾಭ ಈ ಕ್ಷೇತ್ರದ ಜನಕ್ಕೆ ಎಂದರು.





ಚಿ.ನಾ.ಹಳ್ಳಿಯಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಕಛೇರಿ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಫೆ.17: ಆಥರ್ಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಈ ಎಲ್ಲಾ ಕ್ಷೇತ್ರಗಳಲ್ಲಿ ತಾಲೂಕು ಮುಂದುವರಿಯಬೇಕಾದರೆ ಸಕರ್ಾರ ಹಾಗೂ ಖಾಸಗಿ ಸಂಸ್ಥೆಗಳು ಜೊತೆಗೂಡಿ ಸಾರ್ವಜನಿಕ ಕೆಲಸ ಮಾಡಿದರೆ ತಾಲೂಕು ಅಭಿವೃದ್ದಿಯಾಗುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಕಛೇರಿಯನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಾಲೂಕು ಅಭಿವೃದ್ದಿಯಾಗಬೇಕಾದರೆ ತಾಲೂಕಿನ ಎಲ್ಲಾ ಗ್ರಾಮಗಳು ಶೈಕ್ಷಣಿಕವಾಗಿ ಮುಂದುವರಿಯಬೇಕು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಗ್ರಾಮೀಣ ಕೃಷಿಕರು ಹಾಗೂ ಮಹಿಳೆಯರ ಸಂಘಟನೆಯ ಸಬಲೀಕರಣಕ್ಕಾಗಿ ಮುಂದೆ ಬಂದಿದೆ, ಈ ಯೋಜನೆಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದ ಅವರು ಉಳಿತಾಯ ಸಾಲ ವಿತರಣೆ ಮೂಲಕ ಆಥರ್ಿಕ ಸಂಪನ್ಮೂಲಗಳನ್ನು ಸ್ವಸಹಾಯ ಪದ್ದತಿಯಲ್ಲಿ ಕ್ರೂಡಿಕರಿಸಿ ಕೃಷಿಕ ಮತ್ತು ಮಹಿಳೆಯರನ್ನು ಆಥರ್ಿಕ, ಸಾಮಾಜಿಕ ಬದಲಾವಣೆ ಮಾಡಲು ಈ ಮೂಲಕ ಪ್ರಯತ್ನಿಸುತ್ತಿರುವುದು ಯೋಜನೆಯ ಉತ್ತಮ ಉದ್ದೇಶವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿದರ್ೇಶಕ ಸಿ.ಪಿ.ಪುರುಷೋತ್ತಮ್ ಮಾತನಾಡಿ ತಾಲೂಕಿನಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಘಗಳನ್ನು ರೂಪಿಸಿ, ಗ್ರಾಮಗಳನ್ನು ಅಭಿವೃದ್ದಿ ಪಡಿಸಲು ಯತ್ನಿಸುತ್ತೇವೆ ಅಲ್ಲದೆ ಗ್ರಾಮಗಳಲ್ಲಿ ಸಂಘಗಳನ್ನು ರಚಿಸಿ ಅಲ್ಲಿ ಹೈನುಗಾರಿಕೆ, ಕೃಷಿ, ತೋಟಗಾರಿಕೆ, ಮೈಕ್ರೋಫೈನಾನ್ಸ್ಗಳ ಬಗ್ಗೆ ತರಬೇತಿ ನೀಡುತ್ತೇವೆ ಎಂದ ಅವರು ಪ್ರತಿ ಜಿಲ್ಲೆಯಲ್ಲಿ ಇರುವ ತಾಲೂಕುಗಳಿಗೆ ಈಗಾಗಲೇ ಈ ಯೋಜನೆ ಮೂಲಕ 850ಕೋಟಿ ಹಣವನ್ನು ಸಂಘಗಳ ಸದಸ್ಯರಿಗೆ ವಿಸ್ತರಿಸಿದ್ದು 250ಕೋಟಿ ಉಳಿತಾಯವಾಗಿದೆ. ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅನ್ನದಾನ, ಮೆಡಿಕಲ್ ಮತ್ತು ಇಂಜನಿಯರ್ ಕಾಲೇಜುಗಳನ್ನು ಸ್ಥಾಪಿಸಿದ್ದು ಸಂಚಾರಿ ಆಸ್ಪತ್ರೆ, ಉಚಿತ ಔಷದಿಗಳನ್ನು ಶಾಂತವನ ಟ್ರಸ್ಟ್ ವತಿಯ ಮುಖಾಂತರ ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ತಾಲೂಕು ಹಿಂದುಳಿದ ಪ್ರದೇಶವಾಗಿದ್ದು ಕೃಷಿಯಲ್ಲಿ ತಾಲೂಕು ಮುಂದುವರಿದರೆ ತಾಲೂಕು ಅಭಿವೃದ್ದಿಯಾಗುತ್ತದೆ ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ರೈತರಿಗೆ ಬೆಳೆಯ ಮತ್ತು ಮಹಿಳೆಯರಿಗೆ ಸಂಘಗಳ ರಚನೆಯ ಮಾಹಿತಿ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಸದಸ್ಯ ಸಿ.ಡಿ.ಚಂದ್ರಶೇಖರ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ದರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ರೋಹಿತಾಕ್ಷ ಉಪಸ್ಥಿತರಿದ್ದರು.
ಮುಹಿಳಾ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪಧರ್ೆಗಳು
ಚಿಕ್ಕನಾಯಕನಹಳ್ಳಿ,ಫೆ.17: ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪಧರ್ೆಗಳನ್ನು ಸೃಜನ ಮಹಿಳಾ ಸಂಘಟನೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಸದಸ್ಯೆ ಎನ್.ಇಂದಿರಮ್ಮ ತಿಳಿಸಿದ್ದಾರೆ.
ಇದೇ 19 ಮತ್ತು 20ರಂದು 9.30ಕ್ಕೆ ಪಟ್ಟಣದ ದೇಶೀಯ ವಿದ್ಯಾಪೀಠ ಪ್ರೌಡಶಾಲಾ ಆವರಣದಲ್ಲಿ ಸ್ಪಧರ್ೆಗಳನ್ನು ಏರ್ಪಡಿಸಲಾಗಿದ್ದು ಜನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಏಕಪಾತ್ರಾಭಿನಯ, ಛದ್ಮವೇಶ, ಆಶುಭಾಷಣ ಸ್ಪಧರ್ೆ, ರಂಗೋಲಿ, ಬಕೇಟ್ಗೆ ರಿಂಗ್ ಹಾಕುವುದು, ಮ್ಯೂಸಿಕಲ್ ಛೇರ್, ಮಡಿಕೆ ಒಡೆಯುವುದು, ಚಮಚ ಮತ್ತು ನಿಂಬೆಹಣ್ಣು ಓಟ, ಪಾಸಿಂಗ್ ದಿ ಬಾಲ್, ಬಾಂಬ್ ಇನ್ ದಿ ಸಿಟಿ, ಥ್ರೋಬಾಲ್, ಬಾವಿದಡ ಸ್ಪದರ್ೆಗಳನ್ನು ಹಮ್ಮಿಕೊಂಡಿದ್ದು ಸ್ಪಧರ್ೆಗೆ ಭಾಗವಹಿಸುವವರು ಹೆಚ್ಚಿನ ವಿವರಗಳಿಗಾಗಿ 9448648436, 9980760326 ನಂ.ಗಳಿಗೆ ಸಂಪಕರ್ಿಸಬಹುದು ಎಂದು ತಿಳಿಸಿದ್ದಾರೆ.

ಕಂದಿಕೆರೆ ಗವಿಶಾಂತವೀರಸ್ವಾಮಿ ಜಾತ್ರ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಫೆ.17: ಅವಧೂತ ಶ್ರೀ ಗವಿಶಾಂತವೀರಸ್ವಾಮಿಗಳ 21ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವವು ಇದೇ 19ರವರಗೆ ನಡೆಯಲಿದೆ.
18ರಂದು ರಥಕ್ಕೆ ಕಳಸ ಸ್ಥಾಪನೆ, ಪುಣ್ಯಾರ್ಚನೆ, ರಥದ ಗಾಲೆಗೆ ಅಭಿಷೇಕ, 19ರಂದು ರಥೋತ್ಸವ ಹಾಗೂ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ.

Wednesday, February 16, 2011



ಖಜಾನೆ ಬರಿದಾಗಿರುವಾಗ ಕೃಷಿ ಬಜೆಟ್ಗೆ ಅನುದಾನ ಎಲ್ಲಿದೆ: ಎಚ್.ಡಿ.ಕೆ. ಬಡವರ ಪರವಾಗಿ ಕೆಲಸ ಮಾಡುವುದು ತಪ್ಪೇ ಎಚ್.ಡಿ.ಕೆ. ಕಣ್ಣಂಚಿನಲ್ಲಿ ನೀರು ನನಗೇನು ರಾಜಕೀಯ ಬೇಡ, ಜನ ಇಂದೇ ರಾಜಕೀಯ ಬಿಡಿ ಎಂದರೆ ಬಿಟ್ಟು
ಬಿಡುತ್ತೇನೆ
ಚಿಕ್ಕನಾಯಕನಹಳ್ಳಿ,ಫೆ.16: ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರದ ಬಗ್ಗೆ ಮಾತನಾಡಿದರೆ ಲಿಂಗಾಯಿತರ ವಿರೋಧಿ ಎಂಬ ಪಟ್ಟ ಕಟ್ಟುತ್ತಾರೆ, ಹಾಗಾದರೆ ನಾನು ಒಕ್ಕಲಿಗರಾಗಿ ಹುಟ್ಟಿದ್ದೇ ತಪ್ಪಾ, ಬಡವರ ಪರ ಕೆಲಸ ಮಾಡುವುದೇ ತಪ್ಪಾ, ನಾನು ಹೋರಾಡುತ್ತಿರುವುದು ರಾಜ್ಯದ ಜನತೆಗಾಗಿ, ಜನ ನನ್ನು ರಾಜಕೀಯ ಬಿಡಿ ಎಂದರೆ ಇವತ್ತೇ ಬಿಟ್ಟು ಬಿಡುತ್ತೇನೆ, ಎಂದು ಹುಮ್ಮಳಿಸಿ ಬಂದ ದುಃಖವನ್ನು ತಡೆಯಲಾರದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಣ್ಣಂಚಿನಲ್ಲಿ ನೀರು ಸುರಿಸುತ್ತಾ ಗದ್ಗದಿತರಾಗಿ ನುಡಿದರು.
ಬಡವರ ಬಗ್ಗೆ, ದೀನ ದಲಿತರ ಬಗ್ಗೆ, ಹಗಲಿರುಳ ದುಡಿಯುತ್ತಿದ್ದೇನೆ, ಜನತಾ ದರ್ಶನ, ಗ್ರಾಮವಾಸ್ಥವ್ಯದ ಮೂಲಕ ಜನರ ಸಂಕಷ್ಟುಗಳನ್ನು ಹತ್ತಿರದಿಂದ ನೋಡಿದ ಮೇಲೆ, ನನಗಿರುವ ಹೃದಯ ರೋಗದ ತೊಂದರೆಯನ್ನು ಲೆಕ್ಕಿಸಿದೆ ಜನರ ಸಂಕಷ್ಟವನ್ನು ಆಲಿಸಿ ಅವರಿಗೆ ಪರಿಹಾರವನ್ನು ನೀಡುತ್ತಿದ್ದೇನೆ ಎನ್ನುವ ಸಂದರ್ಭಕ್ಕಾಗಲೇ ಮುಂದೆ ಮಾತನಾಡದೆ ದುಃಖದಿಂದ ಮುಖ ಮುಚ್ಚಿಕೊಂಡು ಕ್ಷಣಕಾಲ ಮಾತನ್ನು ನಿಲ್ಲಿಸಿದರು. ನಂತರದಲ್ಲಿ ಮುಂದೆ ಕಂಠ ಸರಿ ಪಡಿಸಿಕೊಂಡು ಮಾತನಾಡಲು ಪ್ರಯತ್ನಿಸಿದರಾದರೂ ಸ್ಪಷ್ಟ ಉಚ್ಚಾರಣೆ ಬಾರದೆ ಭಾಷಣವನ್ನು ಮೊಟಕು ಮಾಡಿ ಕರವಸ್ತ್ರದಲ್ಲಿ ಕಣ್ಣು ಒರಿಸಿಕೊಂಡು ತಮ್ಮ ಕುಚರ್ಿಯಲ್ಲಿ ಕುಣಿತೇ ಬಿಟ್ಟರು.
ಇದಿಷ್ಟು ನಡೆದಿದ್ದು ಪಟ್ಟಣದ ಸಕರ್ಾರಿ ಪ್ರೌಢಶಾಲೆಯ ಆವರಣದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ರವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ಉದ್ಯೋಗ ಮೇಳ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ.
ಯಡಿಯೂರಪ್ಪನವರು ಕಳೆದ ಬಜೆಟ್ನ ಯೋಜನೆಗಳೇ ಸಮರ್ಪಕವಾಗಿ ಅನುಷ್ಠಾನಗೊಳಿಸಲ್ಲ ಎಂದು ದೂರಿದ ಅವರು, ಈಗ ಕೃಷಿ ಬಜೆಟ್ ನೀಡುತ್ತೇನೆ ಎನ್ನುವ ಯಡಿಯೂರಪ್ಪ ಹಣವಿಲ್ಲದೆ ಖಜಾನೆ ಬರಿದು ಮಾಡಿಕೊಂಡಿರುವ ಇವರು, ಏನೇ ವಾಗ್ದಾನ ಮಾಡಿದರೂ ಅದನ್ನು ಅನುಷ್ಠಾನಗೊಳಿಸಲು ಹಣವಿಲ್ಲದ ಮೇಲೆ ಇವರು ಬಜೆಟ್ ನೀಡಿ ಏನು ಉಪಯೋಗ ಎಂದರಲ್ಲದೆ, 2009ರಲ್ಲಿ ಉತ್ತರ ಕನರ್ಾಟಕದಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜನರಿಗೆ ಪರಿಹಾರವಾಗಿ ನೀಡಿದ ಚೆಕ್ಗಳ ನಗದು ಮಾಡಿಸಿಕೊಳ್ಳಲಾಗಿಲ್ಲ, ಈ ಚೆಕ್ಗಳ ಸಂಬಂಧ ಅಲ್ಲಿನ ತಹಶೀಲ್ದಾರ್ ಈ ಚೆಕ್ಗಳಿಗೆ ಸಕರ್ಾರದಿಂದ ಹಣ ಬಿಡುಗಡೆಯಾಗಿಲ್ಲವೆಂದು ಹಿಂಬರ ನೀಡುತ್ತಾರೆ ಇಂತಹ ಸಕರ್ಾರಕ್ಕೆ ಕೃಷಿ ಬಜೆಟ್ನಲ್ಲಿ ವಿಶೇಷವಾಗಿ ಅನುದಾನ ನೀಡಲು ಹಣವೆಲ್ಲಿದೆ ಎಂದು ಪ್ರಶ್ನಿಸಿದ ಅವರು, ಈಗಾಗಲೇ ಯಡಿಯೂರಪ್ಪ 45 ಸಾವಿರ ಕೋಟಿ ಸಾಲವನ್ನು ಈ ರಾಜ್ಯದ ಜನತೆಯ ಮೇಲೆ ಹೊರೆಸಿದ್ದಾರೆ ಎಂದರು.
ಯಡಿಯೂರಪ್ಪನವರು ಯಾವೊಬ್ಬ ಸಚಿವರ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ, ಎಲ್ಲರೂ ಅವರಿಗೆ ಅಸಹಕಾರ ತೋರಿಸುತ್ತಿದ್ದಾರೆ, ಸಕರ್ಾರದಲ್ಲಿ ಉತ್ತಮ ಕೆಲಸಗಳನ್ನು ನಡೆಯುತ್ತಿಲ್ಲ, ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷದವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ದೂರುವುದು ಸರಿಯಲ್ಲ ಎಂದ ಎಚ್.ಡಿ.ಕೆ, ಅವರೇ ವಿಧಾನ ಸೌಧದ ಅಧಿಕಾರಿಗಳ ಸಭೆಯೊಂದರಲ್ಲಿ ಮಾತನಾಡುತ್ತಾ ನಾವು ನೀವು ತಿಂದದ್ದು ಸಾಕು, ಇನ್ನಾದರೂ ಜನರ ಪರವಾಗಿ ಕೆಲಸ ಮಾಡೋಣ ಎನ್ನುವ ಮೂಲಕ ಅವರ ಯೋಗ್ಯತೆಯನ್ನು ಪರಾಮಶರ್ಿಸಿಕೊಂಡಿದ್ದಾರೆ ಎಂದರು. ಯಡಿಯೂರಪ್ಪನವರು ಒಬ್ಬ ಬಡವನನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ, ಅವರಿಗೆ ಮಾನವೀಯ ಸ್ಪಂದನೆ ಎಂಬುದೇ ಇಲ್ಲವೆಂದರು.
ಇಷ್ಟೊಂದು ಭ್ರಷ್ಟಾಚಾರ ನಡೆಸುತ್ತಿರುವ ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ, ನನ್ನನ್ನು ಲಿಂಗಾಯಿತರ ವಿರೋಧಿ ಇನ್ನುತ್ತಾರೆ. ನಾನು ಕೇಳುವುದು ಇಷ್ಟೇ, ಈ ರಾಜ್ಯ ಉಳಿಯಬೇಕಾ ಅಥವಾ ಯಡಿಯೂರಪ್ಪ ಉಳಿಯಬೇಕಾ ನಿರ್ಧರಿಸಿ ಎಂದರು.
ಗ್ರಾಮೀಣ ಬಡ ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸಬೇಕಾದ ಕೆಲಸ ಸಕರ್ಾರದ ಜವಬ್ದಾರಿ, ಈ ಕೆಲಸವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ಮಾಡುತ್ತಿರುವುದು ಶ್ಲಾಘನೀಯ, ಬಡವರ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ ಎಂದ ಅವರು, ಮುಂದೆ ಯಾವುದೇ ಚುನಾವಣೆಗಳು ಬಂದರೂ ಸುರೇಶ್ ಬಾಬು ರವರ ಕೈಬಲ ಪಡಿಸಿ ಎಂದರಲ್ಲದೆ, ಸುರೇಶ್ ಬಾಬುರವರಿಗೆ ಸಚಿವರಾಗುವ ಲಕ್ಷಣ ಹಾಗೂ ಅವಕಾಶಗಳು ಹೆಚ್ಚಿವೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ನನ್ನ ಹುಟ್ಟು ಹಬ್ಬವನ್ನು ಆಡಂಬರಕ್ಕಾಗಿ ಆಚರಣೆ ಮಾಡಿಕೊಳ್ಳುತ್ತಿಲ್ಲ, ಜನತೆಯ ಆರೋಗ್ಯ ಮತ್ತು ಉದ್ಯೋಗದ ಸಮಸ್ಯೆಗಳನ್ನು ಈಡೇರಿಸುವ ಪ್ರಯತ್ನವಾಗಿ ಈ ಕಾರ್ಯವನ್ನು ಮಾಡುತ್ತಿದ್ದೇನೆ ಎಂದರು.
ಮಾಚರ್ಿ ಎಂಟರಂದು ಮಹಿಳಾ ದಿನಾಚರಣೆ ಅಂಗವಾಗಿ ಈ ತಾಲೂಕಿನಲ್ಲಿ ಪ್ರಥಮವಾಗಿ 2001 ಗಭರ್ಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಹುಲಿನಾಯ್ಕರ್, ಶಾಸಕರುಗಳಾದ ಎಂ.ಟಿ.ಕೃಷ್ಣಪ್ಪ, ಶ್ರೀನಿವಾಸ, ಜೆ.ಡಿ.ಎಸ್. ಮುಖಂಡ ಮುದ್ದುಹನುಮೇಗೌಡ ಮಾತನಾಡಿದರು.
ಜಿ.ಪಂ.ಅಧ್ಯಕ್ಷ ಡಾ.ರವಿ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಪುರಸಭಾ ಅಧ್ಯಕ್ಷ ರಾಜಣ್ಣ ಉಪಸ್ಥಿತರಿದ್ದರು.

Saturday, February 12, 2011




ಬೀದಿಗೆ ಬಿದ್ದ ವ್ಯಾಪಾರಿಗಳ ನೆರವಿಗೆ ಪುರಸಭೆ ಬರುತ್ತದೆಯೇ...?
(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಫೆ.11: ಆಡಳಿತ ಸಭೆಗೆ ದೂರದೃಷ್ಠಿ ಇಲ್ಲದೆ ಇದ್ದರೆ ಯಾರು ಬೇಕಾದರೂ ಬೀದಿಗೆ ಬೀಳಬಹುದು, ಎಂಬುದಕ್ಕೆ ಸ್ಪಷ್ಠ ನಿದರ್ಶನ ಪಟ್ಟಣದ ಖಾಸಗಿ ಬಸ್ಸ್ಟಾಂಡ್ ವ್ಯಾಪಾರಿಗಳ ಇಂದಿನ ಸ್ಥಿತಿ.
ಪಟ್ಟಣದ ಖಾಸಗಿ ಬಸ್ಸ್ಟ್ಯಾಂಡ್ ಸುಂದರವಾಗಿ ಕಾಣಬೇಕು, ನಾಗರೀಕ ಸೌಲಭ್ಯಗಳು ಪ್ರಯಾಣಿಕರಿಗೆ ಕಣ್ಣೋಟದಷ್ಠು ದೂರದಲ್ಲಿರಬೇಕು. ಪಟ್ಟಣಕ್ಕೆ ಹೊಸಬರು ಬಂದಾಗ ಬಸ್ಟಾಂಡ್ ಮೊದಲ ನೋಟಕ್ಕೆ ಆಕಷರ್ಿಸಬೇಕು ಸರಿ, ಎಲ್ಲವೂ ಸರಿ, ಅಟ್ ದ ಸೇಮ್ ಟೈಮ್ ಬಸ್ಟಾಂಡ್ ವ್ಯಾಪಾರಿಗಳ ಬದುಕು ಬೀದಿಗೆ ಬೀಳಬಾರದಲ್ಲವೆ?.
ಕಳೆದ 45ವರ್ಷಗಳಿಂದ ವ್ಯಾಪಾರ ವಹಿವಾಟನ್ನು ನಡೆಸುತ್ತಾ ತಮ್ಮ ಬಾಳಿನ ಬುತ್ತಿಯನ್ನು ಕಟ್ಟಿಕೊಳ್ಳುತ್ತಿದ್ದ ಜನರ ಅನ್ನಕ್ಕೆ ಮಣ್ಣಾಕಬಾರದಲ್ಲವೇ?. ಈಗ ಆಗಿರುವುದು ಇದೇ ಸ್ಥಿತಿ, ಬಸ್ಟ್ಯಾಂಡ್ನಲ್ಲಿ ಶೌಚಾಲಯ ನಿಮರ್ಿಸಬೇಕೆಂದು ಅಲ್ಲಿದ್ದ 27 ವಿವಿಧ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಕಾನೂನು ಪ್ರಕಾರ ಪುರಸಭೆಯ ದಿಟ್ಟ ಕ್ರಮ ಓ.ಕೆ, ಆದರೆ ಅದರಾಚೆಗೆ ಮಾನವೀಯತೆ ಎಂಬುದೊಂದು ಇರುತ್ತದೆ. ಅದು ಕಾನೂನು ಕಟ್ಟಲೆಗಳಾಚೆಗೆ ಇರುವ ಮನುಷ್ಯ ಪ್ರೀತಿಯ ಬಾಂಧವ್ಯ, ಅದನ್ನೇ ಮರೆತರೆ , ಈ ವಿಶ್ವಾಸ, ನಂಬಿಕೆ. ಕಷ್ಠಕಾರ್ಪಣ್ಯಗಳ ಸಂಕೋಲೆ ಅದನ್ನು ಪರಿಹರಿಸುವ ಪುರಪಿತೃಗಳು, ಜನಪ್ರತಿನಿಧಿಗಳ ಸಂಬಂಧ, ಇವೆಲ್ಲವೂ ಈ ವ್ಯಾಪಾರಿಗಳ ಪಾಲಿಗೆ ಇಲ್ಲವಾಗಿದೆ.
ಕಾರಣ ಇಷ್ಠೆ, ಇಲ್ಲಿ ಶೌಚಾಲಯ ನಿಮರ್ಿಸಬೇಕು, ಉದ್ಯಾನವನ್ನು ಮಾಡಬೇಕು ಎಂಬ ಯೋಜನೆ, ಹಲವು ವರ್ಷಗಳಿಂದ ಪುರಸಭೆಯ ಪುರಪಿತೃಗಳ ಮುಂದೆ ಇದ್ದ ಪ್ರಾಜೆಕ್ಟ್. ಈ ಪ್ರಾಜೆಕ್ಟ್ಗೆ ಆಡಳಿತ ಮಂಜೂರಾತಿಗೆ ಕಳುಹಿಸುವಾಗಲೇ ಈ ವ್ಯಾಪಾರಿಗಳ ಬಗ್ಗೆ ಪುರಸಭೆ ಕನಿಷ್ಠ ಹತ್ತು ನಿಮಿಷ ಯೋಚಿಸಿದ್ದರೂ ಈ ರೀತಿಯ ಸ್ಥಿತಿಯಲ್ಲಿ ವ್ಯಾಪಾರಿಗಳು ಇರಬೇಕಾಗಿರಲಿಲ್ಲ.
ಈ ವ್ಯಾಪಾರಿಗಳ ವಹಿವಾಟಿಗೆ ಬೇರೊಂದು ಸ್ಥಳವನ್ನು ಕಲ್ಪಿಸಿ ಅಲ್ಲಿಗೆ ವ್ಯಾಪಾರಿಗಳನ್ನು ಶಿಪ್ಟ್ ಮಾಡಿಸಿದ್ದರೆ, ಅವರು ಅಲ್ಲಿಗೆ ತಮ್ಮ ಸಾಮಾನು ಸರಂಜಾಮಗಳನ್ನು ಎತ್ತಿಕೊಂಡು ಎಂದಿನಂತೆ ವ್ಯಾಪಾರ ವಹಿವಾಟುಗಳನ್ನು ನಡೆಸಿಕೊಂಡು ತುತ್ತಿನ ಚೀಲಕ್ಕೆ ಮಾರ್ಗ ಮಾಡಿಕೊಳ್ಳುತ್ತಿದ್ದ್ದರೆ. ಆದರೆ ಈಗ ಆ ಜನ ಪುರಸಭೆಯ ಆಡಳಿತಕ್ಕೆ ಹಿಡಿ ಶಾಪವಾಕುತ್ತಿದ್ದಾರೆ. ಅದರಲ್ಲಿ 45ವರ್ಷಗಳಿಂದ ಈ ಜಾಗದಲ್ಲಿ ವ್ಯಾಪಾರ ಮಾಡುತ್ತಿರುವ ವೆಂಕಟಪ್ಪ, ನನ್ನ 70ವರ್ಷಗಳ ಇತಿಹಾಸದಲ್ಲಿ ಈ ರೀತಿ ಕರುಣೆ ಇಲ್ಲದ ಆಡಳಿತವನ್ನು ನೋಡಿಲ್ಲ ಎನ್ನುವ ಅವರು, ಹಿಂದೆ ಮೂರು ಬಾರಿ ಇಲ್ಲಿನ ಅಂಗಡಿಗಳಿಗೆ ಬೆಂಕಿ ಬಿದ್ದಾಗಲೂ ಇಷ್ಟು ನೋವಾಗಿರಲಿಲ್ಲ. ಇರಲಿ ಬಿಡು ನಮ್ಮ ಅಂಗಡಿಗಳಿಗಷ್ಟೇ ಬೆಂಕಿ ಬಿದ್ದಿರುವುದು. ಎರಡು ದಿನಗಳಲ್ಲಿ ಮತ್ತೇ ಅದೇ ಜಾಗದಲ್ಲಿ ನಮ್ಮ ಬದುಕು ಕಟ್ಟಿ ಕೊಳ್ಳುತ್ತೇವೆಂಬ ವಿಶ್ವಾಸವಿತ್ತು. ಆದರೆ ಈಗ ನಾವು ಕುಳಿತುಕೊಳ್ಳಲು ಜಾಗವೇ ಇಲ್ಲದಾಗ, ನಾವು ನಿಂತ ಜಾಗವೇ ಬೆಂಕಿ ಹತ್ತಿ ಹುರಿಯುವಾಗ ನಿಲ್ಲವುದಾದರೂ ಎಲ್ಲಿ ? ಎಂಬ ಚಿಂತೆಯಿಂದ ಕಳೆದು ಎರಡು ದಿನಗಳಿಂದ ಹೊಟ್ಟೆಗೆ ಊಟ ಸೇರಿಲ್ಲವೆಂದು ಕಣ್ಣಂಚಿನಲ್ಲಿ ನೀರು ಸುರಿಸುತ್ತಾರೆ.
ಈ ಶೌಚಾಲಯವನ್ನು ಇಲ್ಲಿಯೇ ಕಟ್ಟಲಿ, ಆದರೆ ನಮಗೂ ಒಂದೈದಡಿ ಜಾಗ ತೋರಿಸಿ, ಅಲ್ಲಿ ನಾವು ನಮ್ಮ ಪೆಟ್ಟಿಗೆ ಇಟ್ಟುಕೊಳ್ಳುತ್ತೇವೆಂದರೆ ಅದೆಲ್ಲಾ ನಮಗೆ ಗೊತ್ತಿಲ್ಲ, ನಾವು ಈ ಮಾಚರ್ಿ ಒಳಗೆ ಶೌಚಾಲಯ ನಿಮರ್ಿಸದಿದ್ದರೆ ದುಡ್ಡು ವಾಪಸ್ ಹೋಗುತ್ತದೆ. ಮೊದಲು ನಾವು ಶೌಚಾಲಯದ ಬಿಲ್ ಮಾಡಿಯಾದ ಮೇಲೆ ನಿಮಗೆ ಜಾಗ ತೋರಿಸುವುದರ ಬಗ್ಗೆ ಆಲೋಚಿಸುತ್ತೇವೆಂದು ಪುರಸಭೆಯ ಅಧಿಕಾರಿಗಳು ಕರುಣೆ ಇಲ್ಲದಂತೆ ಮಾತನಾಡಿ ಇಲ್ಲಿದ್ದ ಮರ ಮಂಡಿಯನ್ನೇಲ್ಲಾ ಜೆ.ಸಿ.ಬಿಯಲ್ಲಿ ತಳ್ಳಿ ಬಿಟ್ರು ಎಂದು ವೆಂಕಟಪ್ಪ ಆ ಚಿತ್ರಣವನ್ನು ನೊಂದ ಧ್ವನಿಯಲ್ಲಿ ಚಿತ್ರಿಸುತ್ತಾರೆ.
ಈ ಜಾಗವನ್ನು ತೆರವುಗೊಳಿಸಲು ಇಡೀ ತಾಲೂಕು ಆಡಳಿತವೇ ಮುಂದೆ ನಿಂತು ಕಾಯರ್ಾಚರಣೆ ನಡೆಸುತ್ತಿದ್ದರಿಂದ ನಾವೇನು ಮಾಡಲಾಗದೇ ಮೂಕ ಪ್ರೇಕ್ಷಕರಂತೆ ನಿಂತಿದ್ದೆವು ಎನ್ನುತ್ತಾರೆ ವ್ಯಾಪಾರಿ ಲೋಕೇಶ್.
ನಮ್ಮದು ಈಗಲೂ ಒಂದೇ ಮನವಿ, ನಾವಿರುವುದು 27ಜನ ವ್ಯಾಪಾರಿಗಳು, ನಮಗೆ ತಲಾ ಐದಡಿಯಷ್ಟು ಜಾಗವನ್ನು ಕಲ್ಪಿಸಿಕೊಟ್ಟರೆ ಈ ಪುರಸಭೆಗೆ ಋಣಿಯಾಗಿರುತ್ತೇವೆ. ಈ ಹಿಂದೆ ಕೆ.ಎಸ್.ಆರ್.ಟಿ.ಸಿ ಸ್ಟಾಂಡ್ನ ಜಾಗದಲ್ಲಿ ಮನೆ ಕಟ್ಟಿ ಕೊಂಡವರಿಗೆ ಅನುಸರಿಸಿದರಲ್ಲಾ, ಆ ನಿಯಮವನ್ನೇ ನಮಗೂ ಅನ್ವಯಿಸಿದರೆ ನಾವು ಪುರಸಭೆಗೆ ಹಣವನ್ನು ಕಟ್ಟಲು ಸಿದ್ದರಿದ್ದೇವೆ ಎನ್ನುತ್ತಾರೆ. ಈ ವ್ಯಾಪಾರಿಗಳು ಆದರೆ ಪುರಸಭೆಯ ಆಡಳಿತವರ್ಗ ಈ ಬಡ ವ್ಯಾಪಾರಿಗಳ ಕೂಗು ಕೇಳಿಸಿಕೊಳ್ಳುತ್ತಿದೆಯೇ..?



ಕುರುಬರಶ್ರೇಣಿ ಶಾಲೆಯಲ್ಲಿ ಓದಿ,ಎಸ್.ಎಸ್ಎಲ್.ಸಿ. ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದವರಿಗೆ ಪ್ರತಿಭಾ ಪುರಸ್ಕಾರ
ಚಿಕ್ಕನಾಯಕನಹಳ್ಳಿ,ಫೆ.11: ಕುರುಬರಶ್ರೇಣಿ ಶಾಲೆಯಲ್ಲಿ ಓದಿದ ವಿದ್ಯಾಥರ್ಿಗಳು 200-10ನೇ ಶೈಕ್ಷಣಿಕ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಪ್ರತಿಭಾ ಪುರಸ್ಕಾರವನ್ನು ಕುರುಬರಶ್ರೇಣಿ ಹಿರಿಯ ವಿದ್ಯಾಥರ್ಿಗಳ ಸಂಘದ ವತಿಯಿಂದ ಏರ್ಪಡಿಸಲಾಗಿದೆ.
ಕುರುಬರಶ್ರೇಣಿ ಶಾಲೆಯಲ್ಲಿ 1ರಿಂದ 7ನೇ ತರಗತಿವರಗೆ ಓದಿದ್ದರೆ ಆ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಇದೇ 13ರ ಭಾನುವಾರ ಬೆಳಗ್ಗೆ 10.30ಕ್ಕೆ ನೀಡಲಿದ್ದು, ಅರ್ಹ ವಿದ್ಯಾಥರ್ಿಗಳು ಸಂಘದ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದಶರ್ಿಗಳಲ್ಲಿ ಮಾಚರ್್ 1ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಿಳಿಸಿದ್ದಾರೆ.

ಪ್ರತಿಷ್ಠಾಪನಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಫೆ.11: ಕಂಬದ ನರಸಿಂಹ ಸ್ವಾಮಿ ನೂತನ ದೇವಾಲಯದ ಪ್ರಾರಂಭೊತ್ಸವ ಹಾಗೂ ನೂತನ ಶಿಲಾಮೂತರ್ಿ ಪ್ರತಿಷ್ಠಾಪನಾ ಮಹೋತ್ಸವ ಮತ್ತು ಶಿಖರ ಕಳಸ ಸ್ಥಾಪನೆ ಮತ್ತು ಧಾಮರ್ಿಕ ಸಮಾರಂಭವನ್ನು ಇದೇ 16 ಮತ್ತು 17ರಂದು ಏರ್ಪಡಿಸಲಾಗಿದೆ.
ಸಮಾರಂಭವನ್ನು ಶೆಟ್ಟಿಕೆರೆ ಹೋಬಳಿಯ ಅಗಸರಹಳ್ಳಿಯಲ್ಲಿ ಏರ್ಪಡಿಸಿದ್ದು ರಂಗಾಪುರದ ಸುಕ್ಷೇತ್ರಾಧ್ಯಕ್ಷರಾದ ಗುರು ಪರದೇಶಿಕೇಂದ್ರ ಮಹಾಸ್ವಾಮಿ ದಿವ್ಯ ಸಾನಿದ್ಯ ವಹಿಸಲಿದ್ದು ತಮ್ಮಡಿಹಳ್ಳಿಯ ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರ ಸ್ವಾಮಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮಿ, ಇಮ್ಮಡಿ ಕರಿಬಸವದೇಶೀಕೇಂದ್ರಸ್ವಾಮಿ, ಮೃಂತ್ಯುಂಜಯದೇಶೀಕೇಂದ್ರ ಸ್ವಾಮಿ, ಸಿದ್ದರಾಮದೇಶೀಕೇಂದ್ರ ಸ್ವಾಮಿ, ಆಶೀರ್ವಚನ ನೀಡಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ದೇವಾಲಯ ನಿಮರ್ಾಣ ಸಮಿತಿ ಅಧ್ಯಕ್ಷ ಅಗಸರಹಳ್ಳಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಲೋಕಸಬಾ ಸದಸ್ಯ ಜಿ.ಎಸ್.ಬಸವರಾಜು, ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್, ತು.ಹಾ.ಒ.ಅಧ್ಯಕ್ಷ ಹಳೇಮನೆ ಶಿವನಂಜಪ್ಪ ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯ ರಮೇಶ್ಕುಮಾರ್, ಮಾಜಿ.ಜಿ.ಪಂ.ಸದಸ್ಯ ಸುಶೀಲಸುರೇಂದ್ರಯ್ಯ, ಗ್ರಾ.ಪಂ.ಅಧ್ಯಕ್ಷ ಪಾರ್ವತಮ್ಮ, ಗ್ರಾ.ಪಂ.ಸದಸ್ಯರಾದ ಎ.ಎಸ್.ಮಲ್ಲಿಕಾಜರ್ುನಯ್ಯ, ಶಶಿಧರ್, ಉಪಸ್ಥಿತರಿರುವರು.


ರೈತರು ಮತ್ತು ಸಂಘಗಳಿಗೆ ತಿಳುವಳಿಗೆ ತರಬೇತಿ ಶಿಬಿರ
ಚಿಕ್ಕನಾಯಕನಹಳ್ಳಿ,ಫೆ.11: ಸ್ವಸಹಾಯ ಸಂಘಗಳಿಗೆ, ರೈತರ ಇತರ ಚಟುವಟಿಕೆಗಳಿಗೆ ತಿಳುವಳಿಕೆ ನೀಡುವ ಸಲುವಾಗಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಗೋಡೆಕೆರೆ ಗ್ರಾಮದಲ್ಲಿ ಶಿಬಿರವನ್ನು ಇದೇ 14ರ ಸೋಮವಾರ ಹಮ್ಮಿಕೊಂಡಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಪಿ.ಎನ್.ಸ್ವಾಮಿ ತಿಳಿಸಿದ್ದಾರೆ.
ಅಂದು ಬೆಳಗ್ಗೆ 10ಗಂಟೆಯಿಂದ ಸಂಜೆ 4ರವರಗೆ ನಡೆಯುವ ಶಿಬಿರದಲ್ಲಿ ಭಾರತೀಯ ರಿಸವರ್್ ಬ್ಯಾಂಕಿನ ಡೆಪ್ಯೂಟಿ ಗವರ್ನರ್ ಶ್ಯಾಮಲಾ ಗೋಪಿನಾಥ್, ಎಸ್.ಬಿ.ಎಂನ ವ್ಯವಸ್ಥಾಪಕ ನಿದರ್ೇಶಕ ಪಿ.ವಿಜಯ್ಭಾಸ್ಕರ್, ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ಅಧ್ಯಕ್ಷೆ ಎಲ್.ಟಿ.ಅಂಬುಜಾಕ್ಷಿ ಉಪಸ್ಥಿತರಿರುವರು.

ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಉದ್ಘಾಟನೆ ಸಮಾರಂಭ
ಚಿಕ್ಕನಾಯಕನಹಳ್ಳಿ,ಫೆ.12: ನವೋದಯ ಪ್ರಥಮ ದಜರ್ೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾಷರ್ಿಕ ಶಿಬಿರದ ಉದ್ಘಾಟನಾ ಸಮಾರಂಭವನ್ನು ಇದೇ 14ರ ಸೋಮವಾರ ಸಂಜೆ 6-30ಕ್ಕೆ ನಡೆಯಲಿದೆ.
ಸಮಾರಂಭವನ್ನು ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದು ಕುಪ್ಪೂರು ಗದ್ದಿಗೆ ಮಠದ ಪೀಠಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮಿ ಉದ್ಗಾಟನೆ ನೆರವೇರಿಸಲಿದ್ದು ತಮ್ಮಡಿಹಳ್ಳಿಯ ಪೀಠಾಧ್ಯಕ್ಷ ಡಾ.ಅಭಿನವ ಮಲ್ಲಿಕಾಜರ್ುನಸ್ವಾಮಿ ಆಶೀರ್ವಚನ ನೀಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ವಹಿಸಲಿದ್ದು ಪ್ರಾಂಶುಪಾಲ ಕೆ.ಸಿ.ಬಸಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ನವೋದಯ ವಿದ್ಯಾಸಂಸ್ಥೆ ನಿದರ್ೇಶಕ ಮಹದೇವಣ್ಣ, ಖಜಾಂಚಿ ಎಸ್.ಜಿ.ಸಿದ್ದಲಿಂಗಪ್ಪ, ಕೃಷಿ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಈಶ್ವರಮೂತರ್ಿ, ತಾ.ಪಂ.ಸದಸ್ಯೆ ಚಿಕ್ಕಮ್ಮ, ವರದಿಗಾರರಾದ ಕೆ.ಜಿ.ರಾಜೀವ್, ಸಿದ್ದರಾಮಣ್ಣ ಅಣೇಕಟ್ಟೆ, ಲೇಖಕ ಸಿ.ಗುರುಮೂತರ್ಿ ಕೊಟಿಗೆಮನೆ ಉಪಸ್ಥಿತರಿರುವರು.
ಶಿಕ್ಷಕರಿಗೆ ಬಡ್ತಿ ಆದೇಶ ಹೊರಡಿಸಿರುವ ಸಕರ್ಾರಕ್ಕೆ ತಾ.ಪ್ರಾ.ಶಾ.ಶಿ.ಸಂಘದಿಂದ ಅಬಿನಂದನೆ
ಚಿಕ್ಕನಾಯಕನಹಳ್ಳಿ,ಫೆ.12: ಜಿಲ್ಲೆಯಿಂದ ಜಿಲ್ಲೆಗೆ ವಗರ್ಾವಣೆಗೊಂಡ ಸಕರ್ಾರಿ ಪ್ರಾಥಮಿಕ ಹಾಗೂ ಪ್ರೌಡ ಶಾಲಾ ಶಿಕ್ಷಕರುಗಳಿಗೆ ಹೆಚ್ಚುವರಿ ಬಡ್ತಿ ಮಂಜೂರು ಮಾಡಿ ಆದೇಶ ಹೊರಡಿಸಿರುವ ಸಕರ್ಾರಕ್ಕೆ ತಾಲೂಕು ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜಾಧ್ಯಕ್ಷ ಬಸವರಾಜ್ ಗುರಿಕಾರ್, ಪ್ರಧಾನ ಕಾರ್ಯದಶರ್ಿ ನಾರಾಯಣಸ್ವಾಮಿ ಹಾಗೂ ಜಿಲ್ಲಾಧ್ಯಕ್ಷ ಆರ್.ಪರಶಿವಮೂತರ್ಿ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎನ್.ಗೋಪಾಲಕೃಷ್ಣರವರಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದಶರ್ಿ ಎಸ್.ಎನ್.ಶಶಿಧರ್ ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Thursday, February 10, 2011


ಫೆ.16ರಂದು 3 ಸಾವಿರ ಯುವಕರಿಗೆ ಸ್ಥಳದಲ್ಲೇ ನೇಮಕಾತಿ ಆದೇಶ: ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಫೆ.10: ಕನಿಷ್ಟ ಮೂರು ಸಾವಿರ ಯುವಕರಿಗೆ ಉದ್ಯೋಗ ನೇಮಕಾತಿ ಆದೇಶ ಪತ್ರ ವಿತರಿಸಲಾಗುವುದಲ್ಲದೆ, ಅಬಾಲ ವೃದ್ದರಾಗಿ ಎಲ್ಲಾ ವರ್ಗದ ಜನರ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣಾ ಕಾರ್ಯಕ್ರಮವನ್ನು ಸಿ.ಬಿ.ಎಸ್. ಸಮಾಜ ಸೇವಾ ಟ್ರಸ್ಟ್ ಹಮ್ಮಿಕೊಂಡಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಭಾಗದ ಯುವಕರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸಬೇಕು, ತನ್ಮೂಲಕ ಬಡ ಕುಟುಂಬಗಳು ಆಥರ್ಿಕವಾಗಿ ಸದೃಢಗೊಳ್ಳಬೇಕು ಎಂಬ ಉದ್ದೇಶ ಅದೇ ರೀತಿ, ಗ್ರಾಮೀಣ ಜನತೆಯ ಆರೋಗ್ಯ ಸುಧಾರಣೆಯ ದೃಷ್ಠಿಯನ್ನಿಟ್ಟುಕೊಂಡು ಹೆಚ್ಚಿನ ವೈದ್ಯಕೀಯ ಸೌಲಭ್ಯಗಳು ಸಾಮಾನ್ಯ ಜನತೆಗೂ ತಲುಪುವಂತಾಗಲಿ ಎಂಬ ಸದುದ್ದೇಶದಿಂದ, ಬಿ.ಜಿ.ಎಸ್. ಗ್ಲೋಬಲ್ ಆಸ್ಪತ್ರೆಯ ಸಹಕಾರದಲ್ಲಿ ನಮ್ಮ ಹುಟ್ಟು ಹಬ್ಬದಂದು ಈ ಎರಡೂ ಕಾರ್ಯಕ್ರಮಗಳನ್ನು ಬೃಹತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ 16 ರಂದು ಪಟ್ಟಣದ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ, ಜಿಲ್ಲೆಯಾದ್ಯಂತ ಯುವಕರು ಭಾಗವಹಿಸಲಿದ್ದು, 12 ರಿಂದ 15 ಸಾವಿರ ಉದ್ಯೋಗಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸ್ಥಳೀಯ ತಾ.ಪಂ.ಯ ಕಾರ್ಯನಿವರ್ಾಹಣಾಧಿಕಾರಿಗಳ ಮೂಲಕ ಎಲ್ಲಾ ಪಂಚಾಯ್ತಿಯ ನಿರುದ್ಯೋಗಿಗಳಿಗೆ ವಿಷಯ ತಿಳಿಸಿದ್ದು, ಇದೇ ಸಂದರ್ಭದಲ್ಲಿ ನಿರುದ್ಯೋಗಿ ಯುವಕರ ವೈಯಕ್ತಿಕ ವಿವರಗಳ ದಾಖಲೀಕರಣವನ್ನು ಮಾಡಲಾಗುವುದು ಎಂದರು.
ಉದ್ಯೋಗಾಂಕ್ಷಿಗಳು ತಮ್ಮ ಬಯೋಡೇಟಾ ಹಾಗೂ ಇತ್ತೀಚಿನ ಮೂರು ಭಾವಚಿತ್ರಗಳನ್ನು ಕಡ್ಡಾಯವಾಗಿ ಮೇಳಕ್ಕೆ ತರಬೇಕು ಎಂದರಲ್ಲದೆ, ಈ ಮೇಳ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟನಲ್ಲಿ ಸಾಗುವುದರ ಜೊತೆಗೆ ಉದ್ಯೋಗ ಹುಡುಕಿಕೊಂಡ ಹೊರಟವರಿಗೆ ಮಾರ್ಗ ಸೂಚಿಯಾಗಿಯೂ ಕೆಲಸ ನಿರ್ವಹಿಸುವುದು.
ಈ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳಾದ ಟಫೇ, ವಿಡಿಯೋಕಾನ್ ವಿಕ್ರಾಂತ್ ಟೈರ್ಸ್, ಜೆ.ಕೆ.ಟೈರ್ಸ್, ರಿಲೆಯಾನ್ಸ್ ಫ್ರೆಶ್, ಅಪೊಲೋ ಪವರ್ ಸಿಸ್ಟಂ, ಮೋರ್ ಆದಿತ್ಯ ಬಿಲರ್ಾ, ಹಿಂದೂಜಾ, ವಿನ್ನರ್ ಗ್ರೂಪ್, ಶ್ರೀಸಾಯಿ ಟೆಲಿಕಮ್ಯುನಿಕೇಶನ್, ಸೇರಿದಂತೆ 45 ರಿಂದ 50 ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳು ಈ ಮೇಳದಲ್ಲಿ ಭಾಗವಹಿಸುವರು ಎಂದರು.
ಸಕರ್ಾರ ತಾಲೂಕಿನ ಸಾಲ್ಕಟ್ಟೆ ಬಳಿ ಒಂದು ಸಾವಿರ ಎಕರೆ ಭೂ ಪ್ರದೇಶವನ್ನು ಕೈಗಾರಿಕೆಗೆ ಬಳಸಿಕೊಳ್ಳಲು ಯೋಜಿಸಿದ್ದು, ಅಲ್ಲಿ ಗಾಮರ್ೆಂಟ್ಸ್ ಫ್ಯಾಕ್ಟರಿ ಅಥವಾ ಐರನ್ ಸ್ಪಾಂಜಸ್ ಕಾಖರ್ಾನೆಗೆ ಅವಕಾಶ ನೀಡಬಹುದು ಎಂದರು.
ಕಳೆದ ವರ್ಷದಂತೆ ಈ ವರ್ಷವೂ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದು, ಈ ಶಿಬಿರಕ್ಕೆ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಸುಮಾರು 130 ತಜ್ಞ ವೈದ್ಯರ ಸಿಬ್ಬಂದಿ ಭಾಗವಹಿಸುತ್ತಾರೆ, ಶಿಬಿರದಲ್ಲಿ ಹೃದ್ರೋಗ, ನರರೋಗ, ಮೂತ್ರಪಿಂಡ ಮತ್ತು ಮೂತ್ರಾಂಗಗಳ ಕಲ್ಲು, ಸಕ್ಕರೆ ರೋಗ, ಗಭರ್ಿಣ ಮತ್ತು ಸ್ತ್ರೀರೋಗ, ಕೀಲು ಮತ್ತು ಮೂಳೆ, ಕಿವಿ ಮೂಗು ಗಂಟಲು, ಕಣ್ಣು, ಚರ್ಮ, ಮಕ್ಕಳ ತಜ್ಞರು ಸೇರಿದಂತೆ ಮಾನಸಿಕ ತಜ್ಞರು ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ವೈದ್ಯಕೀಯ ತಪಾಸಣೆ ನಡೆಸಿದ ನಂತರ, ಗಂಭೀರ ವ್ಯಾಧಿಗಳಿಗೆ ತಜ್ಞ ವೈದ್ಯರುಗಳಿಂದ ಚಿಕಿತ್ಸೆಗಳನ್ನು ನೀಡಿ ಅಗತ್ಯ ಬಂದಲ್ಲಿ ಆದಿ ಚುಂಚುನಗಿರಿ ಆಸ್ಪತ್ರೆಗೆ ಹೋಗಲು ಗುರುತಿನ ಚೀಟಿ ನೀಡಲಾಗುವುದು ಹಾಗೂ ಆಸ್ಪತ್ರೆ ವಾಹನದಲ್ಲಿ ಕರೆದೊಯ್ದು ಹೆಚ್ಚಿನ ಚಿಕಿತ್ಸೆ ಕೊಡಿಸಿ ಪುನಃ ವಾಪಸ್ಸು ಕರೆತರಲಾಗುವುದು. ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದವರಿಗೆ ಉಚಿತವಾಗಿ ಆಪರೇಷನ್ ಮಾಡಲಾಗುವುದು, ರೋಗಿಗೆ ಊಟದ ವ್ಯವಸ್ಥೆ, ವೈದ್ಯಕೀಯ ಸೌಲಭ್ಯ, ಜನರಲ್ ವಾಡರ್್ಗಳ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುವುದು.
ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಹಾಗೂ ಉಚಿತ ಕನ್ನಡಕವನ್ನು ನೀಡಲಾಗುವುದು ಎಂದರು.
ಶಾಸಕರ ಹುಟ್ಟು ಹಬ್ಬದ ಅಂಗವಾಗಿ ಸಿ.ಬಿ.ಎಸ್. ಅಭಿಮಾನಿ ಬಳಗದ ವತಿಯಿಂದ ಬಸವೇಶ್ವರ ನಗರ ಹಾಗೂ ಕೇದಿಗೆಹಳ್ಳಿ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಉಚಿತವಾಗಿ ಸಿದ್ದ ಉಡುಪುಗಳನ್ನು ವಿತರಿಸಲಾಗುವುದು.
ಈ ಎಲ್ಲಾ ಕಾರ್ಯಕ್ರಮಗಳ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆ ವಹಿಸುವರು.
ಸಮಾರಂಭದಲ್ಲಿ ಮಾಯಸಂದ್ರ ಆದಿಚುಂಚನ ಗಿರಿ ಮಠದ ಶಿವಕುಮಾರ ನಾಥ ಸ್ವಾಮಿ, ಆದಿಚುಂಚನಗಿರಿ ಮಠದ ಕಾರ್ಯದಶರ್ಿ ನಿರ್ಮಲಾನಂದನಾಥಸ್ವಾಮಿ, ಎ.ಐ.ಎಂ.ಎಸ್.ನ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು, ವೈದ್ಯಾಧೀಕ್ಷಕ ಡಾ.ಎಸ್.ಬಿ.ವಸಂತಕುಮಾರ್ ಉಪಸ್ಥಿತರಿರುವರು ಎಂದು ಸಿ.ಬಿ.ಸುರೇಶ್ ಬಾಬು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಗೋಷ್ಠಿಯಿಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಟೌನ್ ಕೊ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್, ಸದಸ್ಯರುಗಳಾದ ಎಂ.ಎನ್.ಸುರೇಶ್, ದೊರೆಮುದ್ದಯ್ಯ, ರವಿ(ಮೈನ್ಸ್) ಹಾಜರಿದ್ದರು.

ಹಂದನಕೆರೆಯ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ 1.50 ಕೋಟಿ ರೂ ಬಿಡುಗಡೆ
ಚಿಕ್ಕನಾಯಕನಹಳ್ಳಿ,ಫೆ.10: ಸಕರ್ಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸ್ಥಾನಗಳಲ್ಲಿ ಕೆಲಸ ಮಾಡಿದಾಗ ಮಾತ್ರ ಗ್ರಾಮಗಳು ಅಭಿವೃದ್ದಿಯಾಗುತ್ತದೆ ಎಂದು ಜಿ.ಪಂ.ಮಾಜಿ ಅಧ್ಯಕ್ಷ ಜಿ.ರಘುನಾಥ್ ಹೇಳಿದರು.
ತಾಲೂಕಿನ ಹಂದನಕೆರೆಯಲ್ಲಿ ನಡೆದ ಸುವರ್ಣ ಗ್ರಾಮೋದಯ ಯೋಜನೆ ಹಾಗೂ ಶಿಕ್ಷಕರು ವಸತಿ ನಿಲಯ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅತ್ಯಂತ ಹಿಂದುಳಿದ ಹೋಬಳಿ ಕೇಂದ್ರವಾಗಿರುವ ಹಂದನಕೆರೆ ಒಂದೇ ಮನೆಯಲ್ಲಿ 5ರಿಂದ 6ಜನ ವಾಸಿ ಮಾಡುವುದರಿಂದ ಮನೆಗಳು ಕಿಸ್ಕಿಂದೆಯಾಗಿದೆ, ಆದ್ದರಿಂದ ಶಾಸಕರು ಈ ಗ್ರಾಮದ ಜನತೆಗೆ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದರು. ಜಿ.ಪಂ.ಅಧ್ಯಕ್ಷರಾದ ಸಮಯದಲ್ಲಿ 28ಗ್ರಾಮ ಪಂಚಾಯ್ತಿಗಳಿಗೆ ತಲಾ 29 ನಿವೇಶನ ಹಂಚಿದ್ದಾಗಿ ತಿಳಿಸಿದ ಅವರು, ಈಗ ಪ್ರತಿ ಗ್ರಾ.ಪಂ.ಗಳಿಗೆ 50 ನಿವೇಶನ ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ರಾಜೀವ್ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ನೀಡಬೇಕಾದೆರೆ, ನಿವೇಶನ ಬೇಕು, ಆದರೆ ಶಾಸಕರಿಗೆ ಮನೆ ನೀಡುವ ಅಧಿಕಾರವಿಲ್ಲ ಎಂದು ವಿಷಾದಿಸಿದರು.
ಎಲ್ಲವೂ ಸಕರ್ಾರದ ಕೈಯಲ್ಲಿದೆ, ಹಿಂದೆ ಶಾಸಕರಿಗೆ ಮನೆ ಹಾಗೂ ನಿವೇಶನ ನೀಡುವ ಅಧಿಕಾರವಿತ್ತು. ಇದನ್ನು ಸಕರ್ಾರ ಕಿತ್ತುಕೊಂಡಿದೆ, ಈ ಭಾಗದಲ್ಲಿನ ಜನ ಆಥರ್ಿಕವಾಗಿ ಹಿಂದುಳಿದಿರುವುದರಿಂದ ಪ್ರತಿ ಮನೆಯಲ್ಲಿ 5ರಿಂದ 6ಜನ ವಾಸಿಸುತ್ತಿದ್ದಾರೆ ಆದ್ದರಿಂದ ಈ ಹಂದನಕೆರೆ ಗ್ರಾಮದ ಬಡವರಿಗೆ ನಿವೇಶನ ಹಾಗೂ ಮನೆ ನಿಮರ್ಿಸಿ ಕೊಡುವ ಕಡೆ ಸಕರ್ಾರ ಶಾಸಕರು ಗಮನ ಹರಿಸುವಂತೆ ತಿಳಿಸಿದರು.
ಸುವರ್ಣ ಗ್ರಾಮ ಯೋಜನೆ ಅಡಿಯಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಗುತ್ತಿಗೆದರರು ಗುಣಮಟ್ಟವನ್ನು ಕಾಪಾಡಿಕೊಳ್ಳುವ ಜೊತೆಗೆ ಬೇಗನೇ ಕಾಮಗಾರಿ ಪೂರೈಸಿಕೊಡಬೇಕು ಇದಕ್ಕೆ ಗ್ರಾಮಸ್ಥರೆಲ್ಲರೂ ಸಹಕಾರ ನೀಡುತ್ತೇವೆಂದರು, ಹಂದನಕೆರೆ ಸಮುದಾಯ ಭವನಕ್ಕೆ 22ಲಕ್ಷ ಮಂಜೂರಾಗಿದೆ, ಇಲ್ಲಿ ಮದುವೆ, ಮುಂಜಿ ಮಾಡಲು ಈ ಸಮುದಾಯ ಭವನ ಚಿಕ್ಕದಾಗುತ್ತದೆ ಆದ್ದರಿಂದ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ದೊಡ್ಡ ಸಮುದಾಯ ಭವನ ನಿಮರ್ಿಸಲು ಕ್ರಮ ಕೈಗೊಳ್ಳಬೇಕೆಂದು ರಘುನಾಥ್ ಮನವಿ ಮಾಡಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸುವರ್ಣ ಗ್ರಾಮದ ಯೋಜನೆ ಅಡಿಯಲ್ಲಿ ಹಂದನಕೆರೆಗೆ 1.48.ಕೋಟಿ ರೂ ಬಿಡುಗಡೆಯಾಗಿದ್ದು, ಕಾಂಕ್ರಿಟ್ ರಸ್ತೆ ನಿಮರ್ಾಣಕ್ಕೆ 20.35 ಲಕ್ಷ, ಡಾಂಬರು ರಸ್ತೆ ನಿಮರ್ಾಣಕ್ಕೆ 42.65 ಲಕ್ಷ, ಸಿಮೆಂಟ್ ಕಾಂಕ್ರಿಕಟ್ ಚರಂಡಿ ನಿಮರ್ಾಣಕ್ಕೆ ಹಾಗೂ 8ಸೇತುವೆ ನಿಮರ್ಾಣಕ್ಕೆ 36ಲಕ್ಷ, ಸಮುದಾಯ ಭವನ್ಕೆ 22ಲಕ್ಷ, ಅಂಗನವಾಡಿ ಕಟ್ಟಡಕ್ಕೆ 5ಲಕ್ಷ ತ್ಯಾಜ್ಯ ವಸ್ತು ವಿಲೇವಾರಿಗಾಗಿ 10ಲಕ್ಷ, ತರಬೇತಿಗಾಗಿ 9.2ಲಕ್ಷ, ವಿದ್ಯುತ್ ಸಲಕರಣೆಗೆ 1.48ಲಕ್ಷ ಐ.ಇ ಗೆ 1.48ಲಕ್ಷ ಬಿಡುಗಡೆಯಾಗಿದ್ದು ಸಕರ್ಾರ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ ಕೋಂಟ್ಯಾಂತರ ರೂ ಹಣ ಬಿಡುಗಡೆ ಮಾಡಿದೆ, ಇದರ ಸದುಪಯೋಗ ಪಡಿಸಿಕೊಂಡು ಗುಣ ಮಟ್ಟದ ಕಾಮಗಾರಿಯ ಕಡೆ ಜನರು ಗಮನ ಹರಿಸಿ ಎಂದರಲ್ಲದೆ, ಹಂದನಕೆರೆಗೆ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಹಾಗೂ ಕೃಷಿ ಮಾರುಕಟ್ಟೆ ತರಲು ಅಧಿವೇಶನದಲ್ಲಿ ಪ್ರಾಸ್ತಾಪಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಸೂತಿ ಹಾಗೂ ಜನನಿ ರಕ್ಷ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಚೆಕ್ ವಿತರಿಸಿದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಶಿಕ್ಷಕರ ವಸತಿ ಗೃಹ ಕೆಲವು ಕಡೆ ಪಾಳು ಬಿದ್ದಿವೆ, ಹಂದನಕೆರೆ ಹೃದಯ ಭಾಗದಲ್ಲಿ ನಿಮರ್ಿಸುತ್ತಿರುವ 8ವಸತಿ ಗೃಹಗಳಲ್ಲಿ ಶಿಕ್ಷಕರು ವಾಸಮಾಡುವ ಮೂಲಕ ಶಿಕ್ಷಣದ ಅಭಿವೃದ್ದಿಗೆ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯರಾದ ಹೇಮಾವತಿ, ಮಂಜುನಾಥ್, ಚೇತನಗಂಗಾಧರ್, ಗ್ರಾ.ಪಂ.ಅಧ್ಯಕ್ಷೆ ನಾಗವೇಣಿ ಈರಪ್ಪ, ತಹಶೀಲ್ದಾರ್ ಟಿ.ಸಿ.ಕಾಂತರಾಜು ಇ.ಓ ದಯಾನಂದ್ ಉಪಸ್ಥಿತರಿದ್ದರು.

Wednesday, February 9, 2011


ಬೇಡಿಕೆ ಈಡೇರುವ ತನಕ ಹೋರಾಟ ನಿರಂತರ: ಆರ್.ಪರಶಿವಮೂತರ್ಿ
ಚಿಕ್ಕನಾಯಕನಹಳ್ಳಿ.ಫೆ.09: ಕೇಂದ್ರ ಹಾಗೂ ರಾಜ್ಯ ಸಕರ್ಾರಿ ನೌಕರರ ವೇತನ, ಭತ್ಯೆಗಳಲ್ಲಿ ಅಘಾದವಾದ ವ್ಯತ್ಯಾಸವಿದ್ದು, ಇಬ್ಬರಿಗೂ ಒಂದೇ ರೀತಿಯ ವೇತನವನ್ನು ನೀಡುವ ಮೂಲಕ ಇದನ್ನು ಸರಿಪಡಿಸುವುದರ ಜೊತೆಗೆ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು, ಶೀಘ್ರವಾಗಿ ಸಕರ್ಾರ ಈಡೇರಿಸಬೇಕೆಂದು ತಾಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಕೋರಿದರು.
ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ನಡೆದ ಸಕರ್ಾರಿ ನೌಕರರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರ ಹಾಗೂ ಇತರೆ ರಾಜ್ಯ ಸಕರ್ಾರಿ ನೌಕರರ ವೇತನ ಹಾಗೂ ಭತ್ಯೆಗಳಿಗೆ ಹೊಲಿಸಿದರೆ, ಕನರ್ಾಟಕ ರಾಜ್ಯ ಸಕರ್ಾರಿ ನೌಕರರು ಸುಮಾರು ಶೇ.40 ರಷ್ಟು ವೇತನದ ವ್ಯತ್ಯಾಸವನ್ನು ಹೊಂದಿದ್ದು ಇದರಿಂದ ರಾಜ್ಯ ಸಕರ್ಾರಿ ನೌಕರರು ಆಥರ್ಿಕವಾಗಿ ನಷ್ಠವನ್ನು ಅನುಭವಿಸುತ್ತಿದ್ದಾರೆ, ಅಲ್ಲದೆ ಕೇಂದ್ರ ಸಕರ್ಾರಿ ನೌಕರರು ಪ್ರತಿ 10ವರ್ಷಗಳಿಗೊಮ್ಮೆ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಿಸುವ ಪರಿಪಾಠ ಹೊಂದಿದ್ದಾರೆ. ಇದನ್ನು ರಾಜ್ಯ ಸಕರ್ಾರಿ ನೌಕರರಿಗೂ ಅನ್ವಯಿಸಬೇಕೆಂದರು.
ಕೇಂದ್ರ ಸಕರ್ಾರ 1998ರ 5ನೇ ವೇತನ ಆಯೋಗದ ಶಿಪಾರಸ್ಸುಗಳನ್ನು ಜಾರಿಗೊಳಿಸಿದ ನಂತರ 6ನೇ ವೇತನ ಆಯೋಗವನ್ನು ರಚಿಸುವ ಪೂರ್ವದಲ್ಲಿ ನೌಕರರಿಗೆ ಶೇಕಡ 50ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ, ವಿಲೀನಗೊಂಡ ಮೂಲ ವೇತನಕ್ಕನುಗುಣವಾಗಿ ತುಟ್ಟಿಭತ್ಯೆ, ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಪರಿಷ್ಕರಿಸಿತ್ತು ಆದರೆ ರಾಜ್ಯ ಸಕರ್ಾರ ಇಂತಹ ಯಾವುದೇ ಸೌಲಭ್ಯಗಳನ್ನು ನೌಕರರಿಗೆ ಕಲ್ಪಿಸಿಲ್ಲ, ಈ ವ್ಯತ್ಯಾಸವನ್ನು ಸರಿಪಡಿಸಬೇಕು ಎಂದ ಅವರು, 2001ರ ಜನಗಣತಿಯ ಆಧಾರದ ಮೇಲೆ ಕೇಂದ್ರ ಸಕರ್ಾರ ತನ್ನ ನೌಕರರಗೆ ಜಿಲ್ಲಾ ಮತ್ತು ತಾಲೂಕುಗಳನ್ನು ಪುನರ್ ವಿಂಗಡಿಸಿ ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಮತ್ತು ಇತರ ಸೌಲಭ್ಯ ನೀಡಿದೆ ಅದೇ ಮಾದರಿಯಲ್ಲಿ ರಾಜ್ಯ ಸಕರ್ಾರಿ ನೌಕರರಿಗೂ ಭತ್ಯೆಗಳನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್ ಮಾತನಾಡಿ ನಮ್ಮ ಬೇಡಿಕೆಗಳು ಈಡೇರುವ ತನಕ ಈ ಹೋರಾಟ ಮುಂದುವರೆಯಲಿದೆ ಎಂದರಲ್ಲದೆ, ಈ ಹೋರಾಟದ ವಿರುದ್ದವಾಗಿ ನಾವು ನೌಕರಿಯಿಂದ ವಜಾಗೊಳಿಸಿದರೂ ಹೋರಾಟ ಮುಂದುವರೆಯುತ್ತದೆ ಎಂದರು.
ಈ ಸಂದರ್ಭದಲ್ಲಿ ಸಕರ್ಾರಿ ನೌಕರರು ಶಿರಸ್ತೆದಾರ್ ಕೆ.ವಿ.ಕುಮಾರ್ರವರಿಗೆ ಮನವಿ ಅಪರ್ಿಸಿದರು.
ಸಭೆಯಲ್ಲಿ ಎಸ್.ಸಿ.ನಟರಾಜು, ನೌಕರರ ಸಂಘದ ತಿಮ್ಮಾಬೋವಿ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಸ್.ಕುಮಾರಸ್ವಾಮಿ, ನರಸಿಂಹಮೂತರ್ಿ, ಬಸವರಾಜು ಮಾತನಾಡಿದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಶೋಭಾ, ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಸಿ.ನಟರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.


Tuesday, February 8, 2011








ಚಿಕ್ಕನಾಯಕನಹಳ್ಳಿ.ಫೆ.08: ಮಹಿಳೆಯರು ತಮಗೆ ಸಿಗಬೇಕಾದ ಹಕ್ಕು, ಮೀಸಲಾತಿ ಹಾಗೂ ಕಾನೂನಿನ ಅರಿವಿನ ಬಗ್ಗೆ ತಿಳಿದುಕೊಳ್ಳಲು ಮಹಿಳೆಯರಿಗಾಗಿ ನಡೆಯುವ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ಕಾನೂನಿನ ಅರಿವಿನ ನೆರವನ್ನು ಪಡೆದುಕೊಳ್ಳಬೇಕು ಎಂದು ಸಿವಿಲ್ ಹಿರಿಯ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ ಕರೆ ನೀಡಿದರು.
ತಾಲೂಕಿನ ಹಂದನಕೆರೆ ಗ್ರಾಮದಲ್ಲಿ ನಡೆದ ಮಹಿಳೆಯರ ಕೌಟುಂಬಿಕ ದೌರ್ಜನ್ಯ ಸಂ ರಕ್ಷಣಾ ಕಾಯ್ದೆಯ ಕಾನೂನು ಅರಿವು ನೆರವು ಕಾರ್ಯಗಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕೌಂಟುಬಿಕ ಸಮಸ್ಯೆಯನ್ನು ಬಗೆಹರಿಸಲು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ದೂರಿನ ಅಜರ್ಿಯನ್ನು ಸಲ್ಲಿಸಿ, ರಾಜಿ ಸಂದಾನದ ಮೂಲಕ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು, ಸಮಸ್ಯೆ ರಾಜಿ ಸಂದಾನದ ಮೂಲಕ ಇತ್ಯರ್ಥವಾಗದೆ ಇದ್ದಲ್ಲಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿ, ಶೀಘ್ರವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿದರು.
ವಕೀಲ ವೈ.ಜಿ.ಲೋಕೇಶ್ ಮಾತನಾಡಿ ಮಹಿಳೆಯರು ಕಾಖರ್ಾನೆ ಮತ್ತು ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಹೆರಿಗೆ ರಜೆ, ತಂದೆ ಆಸ್ತಿಯಲ್ಲಿನ ಹಕ್ಕು, ಜೀವನಾಂಶದ ಬಗ್ಗೆ ಆಸ್ತಿಯನ್ನು ಮಾರಾಟಮಾಡುವುದು ಹಾಗೂ ಆಸ್ತಿಯನ್ನು ವಿಲ್ ಮಾಡುವ ಬಗ್ಗೆ ಇರುವ ಕಾನೂನುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಎಂದ ಅವರು ಕಾಖರ್ಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಸಂಬಳ ಸಾರಿಗೆಯನ್ನು ಹಣದ ರೂಪದಲ್ಲಿಯೇ ನೀಡಬೇಕೇ ಹೊರತು ವಸ್ತು ರೂಪದಲ್ಲಿ ನೀಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ವಕೀಲ ಎಂ.ಎನ್.ಶೇಖರ್ ಮಾತನಾಡಿ ಕುಟುಂಬದಲ್ಲಿನ ಸದಸ್ಯರಲ್ಲಿ ನಡೆಯುವ ಹಿಂಸೆ, ದೈಹಿಕ ಹಿಂಸೆ, ಲೈಂಗಿಕ ಹಿಂಸೆ, ಅಶ್ಲೀಲ ಚಿತ್ರ ಪ್ರದರ್ಶನ, ಭಾವನಾತ್ಮಕ ಹಿಂಸೆ ಮತ್ತು ಆಥರ್ಿಕ ಹಿಂಸೆ ಇವೆಲ್ಲಾ ಕೌಟುಂಬಿಕ ಹಿಂಸೆಯಡಿಯಲ್ಲಿದ್ದು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕೌಟುಂಬಿಕ ದೌರ್ಜನ್ಯ ತಡೆ ಅಧಿಕಾರಿಗಳಾಗಿದ್ದು ಇಂತಹ ಪ್ರಕರಣಗಳ ಬಗ್ಗೆ, ದೂರಿನ ಅಜರ್ಿಯನ್ನು ಸಲ್ಲಿಸಿ ನ್ಯಾಯವನ್ನು ದೊರಕಿಸಿಕೊಳ್ಳಬೇಕು ಮತ್ತು ಪ್ರಕರಣಗಳು ಇತ್ಯರ್ಥವಾಗದಿದ್ದಲ್ಲಿ ನ್ಯಾಯಾಲಯದಲ್ಲಿ ಉಚಿತವಾಗಿ ಕಾನೂನಿನ ನೆರವು ಪಡೆದು 60ದಿನಗಳ ಒಳಗಾಗಿ ನ್ಯಾಯವನ್ನು ಪಡೆಯುವಂತೆ ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ..ಪರ್ವತಯ್ಯ ಮಾತನಾಡಿ ಮಹಿಳೆಯ ಮೇಲಿನ ಕೌಟುಂಬಿಕ ದೌರ್ಜನ್ಯಗಳು ಹಾಗೂ 2005-06 ಕಾನೂನಿನ ಬಗ್ಗೆ ವಿವರವಾಗಿ ತಿಳಿಸಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕೌಟುಂಬಿಕ ದೌರ್ಜನ್ಯ ತಡೆ ಅಧಿಕಾರಿಗಳಾಗಿದ್ದು. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಅಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಸಲಹೆ ಮತ್ತು ಪರಿಹಾರಗಳನ್ನು ಪಡೆಯುವಂತೆ ತಿಳಿಸಿದ ಅವರು ಭಾಗ್ಯಲಕ್ಷ್ಮಿ ಯೋಜನೆಯಡಿ ಬಂದಿರುವ ಬಾಂಡ್ಗಳ ಸಂಖ್ಯೆಗಳನ್ನು ಆಧಾರ್ ಯೋಜನೆಯಡಿ ಅಳವಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಬಿ.ಸಿ.ಹೇಮಾವತಿ, ವಕೀಲರ ಸಂಘದ ಗೋಪಾಲಕೃಷ್ಣ, ಸಹಾಯಕ ಸಕರ್ಾರಿ ಅಭಿಯೋಜಕ ಕೆ.ಎಲ್.ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಮಹದೇವಮ್ಮ ಪ್ರಾಥರ್ಿಸಿದರೆ, ವಕೀಲರಾದ ಎಂ.ಕೆ.ಸುಲೋಚನ ಸ್ವಾಗತಿಸಿ, ಆರ್.ಎಲ್. ಎಲಿಜಬೆತ್ ರಾಣಿ ನಿರೂಪಿಸಿ, ವೈ.ಜಿ.ಲೋಕೇಶ್ವರ ವಂದಿಸಿದರು.


Monday, February 7, 2011

ಅಧಿಕಗೊಂಡಿರುವ ಸರಣಿ ಕಳ್ಳತನ, ಆತಂಕದಲ್ಲಿ ಜನತೆ: ರಾತ್ರಿ ಪಹರೆಯಲ್ಲಿ ಯುವಕರು.
ಚಿಕ್ಕನಾಯಕನಹಳ್ಳಿ.ಫೆ.07: ತಾಲೂಕಿನ ಕುಪ್ಪೂರು ಸೇರಿದಂತೆ ಹಲವು ಭಾಗಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು ಪೋಲೀಸ್ನ ಪೇದೆಯೊಬ್ಬರ ಮನೆಯ ಬೀಗ ಹೊಡೆದಿರುವುದರಿಂದ ಜನರು ಭಯದ ನೆರಳಿನಲ್ಲಿ ಬದುಕುವಂತಾಗಿದೆ.
ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಮಠದಲ್ಲಿ ಭಾರಿ ಪ್ರಮಾಣದಲ್ಲಿ ಆದ ಕಳ್ಳತನವಿನ್ನು ಜನರ ಮನದಲ್ಲಿ ಹಸಿರಾಗಿರುವಾಗಲೇ, ಅದೇ ಕುಪ್ಪೂರಿನಲ್ಲಿ ಒಂದೇ ರಾತ್ರಿ 10 ಕಡೆ ಬೀಗ ಮುರಿದಿದ್ದಾರೆ, ಇದರಲ್ಲಿ ಒಂದು ದೇವಸ್ಥಾನವೂ ಸೇರಿದೆ. ಮಲ್ಲಿಗೆರೆಯಲ್ಲಿ ಮೂರು ಮನೆ ಬೀಗ ಹೊಡೆದಿದ್ದಾರೆ ಇದರಲ್ಲಿ ಒಂದು ಪೋಲೀಸ್ನವರ ಮನೆಯೂ ಸೇರಿದೆ, ಮತಿಘಟ್ಟದಲ್ಲಿ 2 ಮನೆ, ಅಣೆಕಟ್ಟೆಯಲ್ಲಿ ಒಂದು ಅಂಗಡಿ, ಚಿನಾಹಳ್ಳಿ ಪಟ್ಟಣದಲ್ಲಿ ಮೂರು ಅಂಗಡಿ, ಹಂದನಕೆರೆಯಲ್ಲಿ ಹಗಲಿನ ಸಮಯದಲ್ಲೇ ಕಳವು ಮಾಡಿರುವ ಪ್ರಕರಣಗಳು ನಡೆದಿವೆ.
ಕುಪ್ಪೂರಿನ ಜನ ಕಳ್ಳರ ಭಯಕ್ಕೆ ರೋಸಿ, ಗ್ರಾಮವನ್ನು ಕಾಯಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು ಪ್ರತಿ ರಾತ್ರಿ ಐದಾರು ಜನರ ಗುಂಪು ಪ್ರತಿದಿನ ರಾತ್ರಿ ಗ್ರಾಮವನ್ನು ಕಾಯಲು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು ರಾತ್ರಿ ಐದಾರು ಜನರ ಗುಂಪು ಪೋಲಿಸನವರೊಂದಿಗೆ ಪಹರೆ ಮಾಡುತ್ತಿದ್ದಾರೆ.
ಮೊನ್ನೆ ರಾತ್ರಿ ಅಣೆಕಟ್ಟೆ, ಕುಪ್ಪೂರು, ಮತಿಘಟ್ಟ ಮಲ್ಲಿಗೆರೆ ಈ ನಾಲ್ಕು ಊರುಗಳಲ್ಲಿ ಒಂದೇ ರಾತ್ರಿ ಬೀಗ ಮುರಿದಿರುವುದು ಹಲವು ಅನುಮಾನಗಳಿಗೆ ಗ್ರಾಸವಾಗಿದೆ. ಅಣೆಕಟ್ಟೆಯಲ್ಲಿ ಅಂಗಡಿಯೊಂದರ ಬೀಗ ಮುರಿದು ಕೈಗೆ ಸಿಕ್ಕಿದ್ದು ತೆಗೆದುಕೊಂಡು ಹೋಗಿದ್ದಾರೆ. ಕುಪ್ಪೂರಿನಲ್ಲಿ ಬ್ರಹ್ಮದೇವರ ದೇವಸ್ಥಾನದ ಬೀಗ ಮುರಿದಿದ್ದು ಎರಡು ಹೊಸ ಸೈಕಲ್ಗಳನ್ನು ಕದಿದ್ದಾರಲ್ಲದೆ, ಅಲ್ಲಿದ್ದ ಟೈರು, ಟ್ಯೂಬ್, ಆಯಿಲ್ ಸೇರಿದಂತೆ 25 ಸಾವಿರ ರೂ ಮೌಲ್ಯದ ವಸ್ತುಗಳನ್ನು ಕದಿದ್ದಾರೆ. ರಾಮು ಟೈಲರ್ ಅಂಗಡಿಗೆ ನುಗ್ಗಿರುವ ಕಳ್ಳರು ಬಟ್ಟೆ ಬರೆಗಳನ್ನು ಹೊತ್ತು ಹೊಯ್ದಿದ್ದಾರೆ. ಇದಲ್ಲದೆ ಕುಪ್ಪೂರಿನ ಗೋವಿಂದಪ್ಪ ಬಿನ್ ನಾರಾಯಣಪ್ಪ, ಪೋಸ್ಟಮನ್ ಮರುಳಯ್ಯ, ಸಿದ್ದಮರಿ, ನರಸಿಂಹಯ್ಯ, ಲಕ್ಕಮ್ಮ, ರಾಮಣ್ಣ ಎಂಬುವರ ಮನೆಗಳ ಬೀಗ ಮುರಿದಿದ್ದಾರೆ.
ಮಲ್ಲಿಗೆರೆ ಮೂಲ ನಿವಾಸಿ ಮತ್ತಿಘಟ್ಟ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿರುವ ರವಿ ಎಂಬುವರ ಮನೆಯ ಬೀಗವನ್ನು ಹೊಡೆದಿದ್ದಾರೆ, ಅದೇ ಗ್ರಾಮದ ಸಿದ್ದರಾಮಣ್ಣ ಎಂಬುವರ ಮನೆಯ ಬೀಗವನ್ನು ಮುರಿದಿದ್ದಾರೆ.
ಒಟ್ಟಿನಲ್ಲಿ ಈ ಕಳ್ಳರ ಗುಂಪು ಮನೆ ಬಾಗಿಲಿನ ಚಿಲಕಕ್ಕೆ ಬೀಗ ಹಾಕಿರುವ ಮನೆಗಳನ್ನು ಹುಡುಕಿಕೊಂಡು ಅಂತಹ ಮನೆಗಳ ಬೀಗವನ್ನೇ ಹೊಡಿದಿದ್ದಾರೆ.
ಈ ಮೇಲಿನ ವಿಷಯಗಳು ಒಂದೇ ರಾತ್ರಿ ಬೀಗ ಮುರಿದ ಪ್ರಕರಣಗಳಾದರೆ, ಈ ಭಾಗದಲ್ಲಿ ಎರಡು ತಿಂಗಳಿಂದ ನಿರಂತರವಾಗಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ.
ಮೊದಲು ಆರಂಭಗೊಂಡಿದ್ದು ದೇವಸ್ಥಾನಗಳ ಬೀಗ ಮುರಿಯುವ ಹಾಗೂ ದೇವರ ಆಭರಣಗಳನ್ನು ಕದ್ದು ಹೊಯ್ಯುವ ಪ್ರಕರಣಗಳು, ಆರಂಭದಲ್ಲಿ ಸೋರಲಮಾವಿನಲ್ಲಿ ಗ್ರಾಮದೇವರ ದೇವಸ್ಥಾನದ ಬೀಗಹೊಡೆದು ಅಲ್ಲಿದ್ದ ಸಣ್ಣಪುಟ್ಟ ವಸ್ತಗಳನ್ನು ಕದ್ದಿರುವುದು, ನಂತರ ಹೊಸಕೆರೆಯಲ್ಲಿನ ತೋಟದಲ್ಲಿನ ದೇವಸ್ಥಾನ, ತದನಂತರ ಕುಪ್ಪೂರು ಬಳಿಯ ತೋಟದಲ್ಲಿರುವ ಆಂಜನೇಯ ದೇವಸ್ಥಾನ, ಇದಾದನಂತರ ತಮ್ಮಡಿಹಳ್ಳಿಯಲ್ಲಿ, ನಂತರದಲ್ಲಿ ಬಹುದೊಡ್ಡ ಮಟ್ಟದ ಕಳ್ಳತನವೆಂದರೆ ಕುಪ್ಪೂರು ಶ್ರೀ ಮರಳಸಿದ್ದೇಶ್ವರ ಮಠದಲ್ಲಿ ಲಕ್ಷಗಟ್ಟಲೆ ಮೌಲ್ಯದ ಬೆಳ್ಳಿ ಆಭರಣಗಳನ್ನು ಕದ್ದು ಹೊಯ್ದಿರುವುದು. ತಾಲೂಕಿನ ಇತಿಹಾಸದಲ್ಲೇ ಮಠ ಒಂದಕ್ಕೆ ನುಗ್ಗಿ ದೊಡ್ಡ ಮಟ್ಟದಲ್ಲಿ ಬೆಳ್ಳಿ ಆಭರಣಗಳನ್ನು ಕದ್ದಿರುವುದು ಇದೇ ಪ್ರಥಮ.
ಇವಿಷ್ಟು ತಾಲೂಕಿನ ಗ್ರಾಮಾಂತರ ಮಟ್ಟದಲ್ಲಾದರೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲೂ ಒಂದೇ ದಿನ ಮೂರು ಅಂಗಡಿಗಳಿಗೆ ನುಗ್ಗಿ ಅಲ್ಲಿದ್ದ ಸಾಮಾನು ಸರಂಜಾಮುಗಳನ್ನು ಹಾಗೂ ನಗದನ್ನು ಹೊತ್ತು ಹೊಯ್ದಿರುವ ಘಟನೆಯೂ ನಡೆದಿದೆ. ಪಟ್ಟಣದ ಬಿ.ಎಚ್.ರಸ್ತೆಯಲ್ಲಿರುವ ಗುರು ಬಾರ್ ರೆಸ್ಟೋರೆಂಟ್ಗೆ ನುಗ್ಗಿ ಅಲ್ಲಿದ್ದ ಮಧ್ಯವನ್ನು ಕದ್ದು ಅದೇ ರಸ್ತೆಯಲ್ಲಿನ ಎಸ್.ಆರ್.ಎಸ್. ಕಂಬಳಿ ಸೊಸೈಟಿ ಬಳಿಯ ಪ್ರಕಾಶ್ ಎಂಬುವರ ಅಂಗಡಿಗೆ ನುಗ್ಗಿ ಅಲ್ಲೇ ಮಧ್ಯೆವನ್ನು ಕುಡಿದು, ಸಿಕ್ಕ ಕುರುಕಲು ತಿಂಡಿಯನ್ನು ತಿಂದ್ದು ಬಾಟಲಿ ಮತ್ತಿತರ ವಸ್ತುಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಅದೇ ದಿನ ಆ ರಸ್ತೆಯ ಹಿಂಭಾಗದ ಬೀದಿಯಲ್ಲಿ ಸೋಮಶೇಖರ್ ಎಂಬುವರಿಗೆ ಸೇರಿದ ಅಂಗಡಿಯಲ್ಲೂ ನಗದು ಮತ್ತು ದಿನ ಬಳಕೆಯ ವಸ್ತುಗಳನ್ನು ಕದಿದ್ದಾರೆ.
ಪಟ್ಟಣದ ಯುನಿವರ್ಸಲ್ ಕಂಪ್ಯೂಟರ್ ಕೇಂದ್ರದಲ್ಲಿ 6 ಸಿ.ಪಿ.ಯು, ಯು.ಪಿ.ಎಸ್ ಸೇರಿದಂತೆ ಕಂಪ್ಯೂಟರ್ಗಳ ಬಿಡಿ ಭಾಗಗಳನ್ನು ಕದಿದ್ದಾರೆ
ಪಟ್ಟಣದ ಹೊರ ವಲಯದ ಮಸಾಲ್ತಿಗುಡ್ಲುವಿನಲ್ಲಿ ಶಿವಣ್ಣ ಎಂಬವರಿಗೆ ಸೇರಿದ ತೆಂಗಿನ ಕಾಯಿ ಗೋಡೌನ್ನಿನ ಬೀಗ ಹೊಡೆದಿದ್ದಾರೆ.
ಈ ಎಲ್ಲಾ ಪ್ರಕರಣಗಳಿಂದ ಜನ ಆತಂಕದಲ್ಲಿ ಬದುಕುವಂತಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಕುಪ್ಪೂರು ಮಠದ ಕಳ್ಳತನ ಮಾಡಿರುವವರು ಹೈಟೆಕ್ ಕಳ್ಳರು, ಈಗ ಬೀಗ ಮುರಿದಿರುವವರು ಸಣ್ಣ ಪುಟ್ಟ ಕಳ್ಳರು, ಈ ಇಬ್ಬರನ್ನು ಹಿಡಿಯಲು ತಂತ್ರ ರೂಪಿಸಿದ್ದೇವೆ. ಪ್ರಮುಖ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿದ್ದೇವೆ. ನಮ್ಮಲ್ಲೂ ಸಿಬ್ಬಂದಿ ಕೊರತೆಯಿಂದ ಪರಿಣಾಮಕಾರಿಯಾಗಿ ಕಾರ್ಯ ಪ್ರವೃತ್ತರಾಗುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ.
ಆದರೆ ಜನತೆ ಪೊಲೀಸಿನವರ ಸಬೂಬು ಕೇಳುವ ಸ್ಥಿತಿಯಲಿಲ್ಲ, ನಮಗೆ ರಾತ್ರಿ ಹೊತ್ತು ನಿದ್ದೆ ಬಾರದೆ ಸದಾ ಎಚ್ಚರದಲ್ಲಿರುವಂತಾಗಿದೆ. ಪೊಲೀಸ್ ಅಧಿಕಾರಿಗಳು ಹೇಗಾದರೂ ಸರಿಯೇ ಆ ಕಳ್ಳರನ್ನು ಹಿಡಿದು ನಮಗೆ ಕಣ್ಣು ತುಂಬಾ ನಿದ್ದೆ ಮಾಡುವಂತಹ ವಾತಾವರಣ ನಿಮರ್ಿಸುವಂತಾಗಬೇಕು ಎನ್ನುತ್ತಿದ್ದಾರೆ.
ಇದಕ್ಕೆ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಏನೆನ್ನುತ್ತಾರೆ.
ಆರೋಗ್ಯಕ್ಕಾಗಿ ಸತ್ಸಂಗ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಫೆ.07: ಆರೋಗ್ಯಕ್ಕಾಗಿ ಸತ್ಸಂಗ ಎಂಬ ಉಪನ್ಯಾಸವನ್ನು (ಇಂದು) ಪೆ.8ರಿಂದ ಪ್ರತಿ ಮಂಗಳವಾರ ಸಂಜೆ 6ರಿಂದ 7ರವರಗೆ ಹಮ್ಮಿಕೊಳ್ಳಲಾಗಿದೆ ಎಂದು ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಉಪನ್ಯಾಸವನ್ನು ಪಟ್ಟಣದ ಬ್ರಹ್ಮ ವಿದ್ಯಾ ಸಮಾಜದಲ್ಲಿ ಏರ್ಪಡಿಸಲಾಗಿದ್ದು ಆರೋಗ್ಯಸಕ್ತರಿಗೆ ಯೋಗವಿಜ್ಷಾನ ,ಧ್ಯಾನಗಳ ಬಗ್ಗೆ ಶಿಬಿರದಲ್ಲಿ ಹೆಚ್ಚಿನ ವಿವರ ನೀಡಲಿದ್ದು ಪ್ರವೇಶ ಉಚಿತವಾಗಿರುವುದರಿಂದ ಎಲ್ಲಾ ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದ್ದಾರೆ.

Sunday, February 6, 2011


ತಾಲೂಕಿನಲ್ಲಿ ರಾಜ್ಯ ಸಕರ್ಾರಿ ನೌಕರರ ಸಂಘದ ಬೃಹತ್ ಬಹಿರಂಗ ಸಭೆ
ಚಿಕ್ಕನಾಯಕನಹಳ್ಳಿ,ಫೆ.06: ತಾಲೂಕು ಸಕರ್ಾರಿ ನೌಕರರ ಬೃಹತ್ ಬಹಿರಂಗ ಸಭೆಯನ್ನು ಇದೇ 9ರ ಬುಧವಾರ ಮಧ್ಯಾಹ್ನ 1.35ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಕರ್ಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ತಿಳಿಸಿದ್ದಾರೆ.
ಬಹಿರಂಗ ಸಭೆಯನ್ನು ತಾಲೂಕು ಕಛೇರಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ನೌಕರರ ಹಲವು ಬೇಡಿಕೆಗಳಾದ ಕೇಂದ್ರ ಸಕರ್ಾರ ತನ್ನ ನೌಕರರಿಗೆ ಜಾರಿಗೊಳಿಸಿರುವ ವೇತನ ಭತ್ಯೆ ಹಾಗೂ ಇತರೆ ಸೌಲಭ್ಯಗಳನ್ನು ರಾಜ್ಯ ಸಕರ್ಾರಿ ನೌಕರರಿಗೂ ಜಾರಿಗೊಳಿಸುವುದು, ಕೇಂದ್ರ ಸಕರ್ಾರಕ್ಕನುಗುಣವಾಗಿ ರಾಜ್ಯ ಸಕರ್ಾರಿ ನೌಕರರಿಗೂ ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಗಳನ್ನು ಮಂಜೂರು ಮಾಡುವುದು, ವಗರ್ಾವಣೆ ಬಗ್ಗೆ ಕಾಯಿದೆ ರೂಪಿಸುವುದು, ಆರೋಗ್ಯ ಭಾಗ್ಯ ಯೋಜನೆ ಅಡಿಯಲ್ಲಿ ಸಕರ್ಾರಿ ನೌಕರರಿಗೆ ನಗದು ರಹಿತ ಚಿಕಿತ್ಸೆ ಯೋಜನೆ ಮಾಡುವುದು, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಕರ್ಾರಿ ನೌಕರರಿಗೆ ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ವೇತನ ಪಾವತಿಸುವುದು, ರಾಜ್ಯ ಸಕರ್ಾರಿ ನೌಕರರ ಮಕ್ಕಳು ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯುವಾಗ ಮೀಸಲಾತಿ ಪಡೆಯಲು ವರಮಾನದ ಮಿತಿ ಬಹಳ ಹಿಂದೆ ನಿಗದಿಪಡಿಸಲಾಗಿದ್ದು ಕೇಂದ್ರ ಸಕರ್ಾರದ ಮಾದರಿಯಲ್ಲಿಯೇ ವರಮಾನ ಮಿತಿ ಹೆಚ್ಚಿಸುವುದು, ಸೇವಾವಧಿಯ ಅಂತಿಮ ವರ್ಷದ ಸೇವೆಯನ್ನು ಪರಿಗಣಿಸಿ ವಾಷರ್ಿಕ ಮುಂಬಡ್ತಿಯನ್ನು ನೀಡುವುದು, ಸ್ಥಗಿತ ವೇತನ ಬಡ್ತಿಗಳನ್ನು ಹೆಚ್ಚಿಸುವುದು, ಸ್ಥಗಿತ ವೇತನ ಮುಂಬಡ್ತಿಗಳನ್ನು ವೇತನ ಶ್ರೇಣಯ ಕೊನೆಯ ಹಂತದ ವಾಷರ್ಿಕ ಮುಂಬಡ್ತಿಯನ್ನು ನೀಡುವುದರ ಬದಲು ಮುಖ್ಯ ವೇತನ ಶ್ರೇಣಿಯನ್ವಯ ನಂತರದ ಮುಂದಿನ ಹಂತಕ್ಕೆ ಸಮನಾದ ಮುಂಬಡ್ತಿಯನ್ನು ನೀಡುವುದು, ಸಕರ್ಾರಿ ನೌಕರರ ತಂದೆ-ತಾಯಿಗಳು ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಪಡೆಯಲು ನಿಗದಿಪಡಿಸಿದ್ದ 4ಸಾವಿರ ಮಾಸಿಕ ಪಿಂಚಣಿ ನಿರ್ಭಂದವನ್ನು ಸಡಿಲಿಸಿ ಪಿಂಚಣಿ ಪರಿಷ್ಕರಿಸಿದಂತೆ ಅವರ ಮಾಸಿಕ ಆದಾಯವನ್ನು ಪರಿಷ್ಕರಿಸುವುದು ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯ ಸಂದರ್ಭದಲ್ಲಿ ಅವಲಂಬಿತರು ಎಂಬ ಬಗ್ಗೆ ದೃಡೀಕರಣಕ್ಕಾಗಿ ಕುಟುಂಬ ಆಹಾರ ಪಡಿತರ ಚೀಟಿಯನ್ನು ಪರಿಗಣಿಸವುದು ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ತಾಲೂಕಿನ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಲು ಕೋರಿದ್ದಾರೆ ಹಾಗೂ ಪಟ್ಟಣದ ನೌಕರರು ಮಧ್ಯಾಹ್ನ ಉಪಹಾರದ ಸಮಯದಲ್ಲಿ ಮಾತ್ರ ಬಹಿರಂಗ ಸಭೆಯಲ್ಲಿ ಭಾಗವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
ಕುಪ್ಪೂರ್ ಗೋಪಾಲ್ ನಿಧನಕ್ಕೆ ಡಾ.ಅಭಿನವ ಮಲ್ಲಿಕಾರ್ಜನ ಶ್ರೀಗಳ ಸಂತಾಪ
ಚಿಕ್ಕನಾಯಕನಹಳ್ಳಿ,ಫೆ.6: ಸ್ವತಂತ್ರ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಕುಪ್ಪೂರು ಗೋಪಾಲ್ ರವರ ನಿಧನಕ್ಕೆ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತಮಠದ ಅಧ್ಯಕ್ಷ ಡಾ.ಅಭಿನವ ಮಲ್ಲಿಕಾರ್ಜನ ಸ್ವಾಮಿ ಸಂತಾಪ ಸೂಚಿಸಿದ್ದಾರೆ.
ವಿದ್ಯಾಥರ್ಿ ದೆಸೆಯಲ್ಲಿ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸುವ ಮೂಲಕ ದೇಶಾಭಿಮಾನವನ್ನು ಬೆಳಸಿಕೊಂಡಿದ್ದ ಶ್ರೀಯುತರು ಸ್ವಾತಂತ್ರಾನಂತರದಲ್ಲಿ ಪತ್ರಿಕೆಗಳಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಲೇಖನ ಬರೆಯುವ ಮೂಲಕ ಆಳುವ ವರ್ಗದ ಕಣ್ಣು ತೆರೆಸಿದ್ದ ಇವರ ಸಾಮಾಜಿಕ ಕಾಳಜಿಯ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು, ತಾಲೂಕಿನ ಹಿರಿಯ ಪತ್ರಕರ್ತರ ಗುಂಪಿನಲ್ಲಿ ಕೊನೆಯ ಕೊಂಡಿಯೊಂದು ಕಳಜಿದಂತಾಗಿದೆ ಎಂದಿದ್ದಾರೆ.
60 ವರ್ಷಗಳ ಸುದೀರ್ಘಕಾಲ ಪತ್ರಿಕಾ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದ ಗೋಪಾಲ್ ಅವರ ನಿಷ್ಠೆಯನ್ನು ಶ್ಲಾಘಿಸಿದ್ದಾರೆ. ದಯಾಮಯನಾದ ಭಗವಂತ ಅವರ ಕುಟುಂಬಕ್ಕೆ ಹಾಗೂ ಅವರ ಹಿತೈಷಿಗಳಿಗೆ ಅವರ ಅಗಲಿಕೆಯ ದುಃಕಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದರು.



ಹಿರಿಯಪತ್ರಕರ್ತ ಕುಪ್ಪೂರು ಗೋಪಾಲ್ರಾವ್ ಇನ್ನಿಲ್ಲ
ಚಿಕ್ಕನಾಯಕನಹಳ್ಳಿ: 06.02.11: ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಕುಪ್ಪೂರು ಗೋಪಾಲರಾವ್ ನಿಧನರಾಗಿದ್ದಾರೆ.
ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗ್ರಾಮದವರಾಗಿದ್ದು, ಇವರು ವಿದ್ಯಾಭ್ಯಾಸಕ್ಕಾಗಿ ತಿಪಟೂರಿಗೆ ತೆರಳಿ, ಅಲ್ಲಿ ಶ್ರೀ ರಾಮಾಜೋಯಿಸ್ ರವರ ಆಶ್ರಯ ಪಡೆದು, ಅವರು ನಡೆಸುತ್ತಿದ್ದ ಪತ್ರಿಕಾ ಏಜೆನ್ಸಿಯಲ್ಲಿ ಪತ್ರಿಕೆಗಳನ್ನು ಮನೆ ಮನೆಗೆ ಹಂಚಿಕೊಂಡು ವಿದ್ಯಾಭ್ಯಾಸ ಪಡೆದರು, ಆ ಸಂದರ್ಭದಲ್ಲೇ ಶೇಷಪ್ಪನವರ ಕಿಡಿ ಪತ್ರಿಕೆ ಹಾಗೂ ಗಾಂಧೀಜಿಯವರು ಲೇಖನ ಬರೆಯುತ್ತಿದ್ದ ಹರಿಜನ ಪತ್ರಿಕೆ ಓದುವ ಮುಖಾಂತರ ಪ್ರಭಾವಿತರಾಗಿ ವಿದ್ಯಾಥರ್ಿ ಯೂನಿಯನ್ ಮುಖಂಡರಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟ ಚಳುವಳಿಗೆ ಧುಮುಕಿದ್ದರು. ಈ ಸಂದರ್ಭದಲ್ಲಿ ಹಲವು ಬಾರಿ ಬಂಧನಕ್ಕೊಳಗಾದರು ಬಾಲಕ ಎಂಬ ಕಾರಣಕ್ಕೆ ಬ್ರಿಟಿಷ್ ಸಕರ್ಾರ ಬಂಧಿಸುತ್ತಿರಲಿಲ್ಲ, ಆನಂತರ ಇವರು ಜವಾಬ್ದಾರಿ ಸಕರ್ಾರ ರಚನೆಯ ಸಂದರ್ಭದಲ್ಲಿ ಮರು ಹೋರಾಟಕ್ಕೆ ಧುಮುಕಿದಾಗ ತಿಪಟೂರಿನಲ್ಲಿ ಬಂಧಿಸಿ ಇವರನ್ನು ಬೆಂಗಳೂರಿನ ಕಾರಾಗೃಹದಲ್ಲಿ 45 ದಿನಗಳ ಕಾಲ ಸೆರೆವಾಸ ಅನುಭವಿಸಿದರು. ಈ ಸಂದರ್ಭದಲ್ಲಿ ಹೆಚ್. ಎಸ್. ದೊರೆ ಸ್ವಾಮಿ ಹಾಗೂ ಎಂ. ಎಸ್. ಹನುಮಂತರಾವ್ ರವರ ಪರಿಚಯ ಪಡೆದು ಇನ್ನು ಉತ್ಸಾಹದಿಂದ ಹೋರಾಟ ನಡೆಸಿದವರು. ಇವರು ವಿದ್ಯಾಥರ್ಿ ಜೀವನದ ನಂತರ ಬದುಕಿಗಾಗಿ ಚಿಕ್ಕನಾಯಕನಹಳ್ಳಿಯನ್ನು ಹರಸಿ ಬಂದ ಇವರು, ವೃತ್ತಿಯಲ್ಲಿ ಬಸ್ ಎಜೆಂಟ್, ಬೀಡಾ ಅಂಗಡಿ, ಚಿಲ್ಲರೆ ವ್ಯಾಪಾರ, ಗೃಹ ಕೈಗಾರಿಕೆ ವಸ್ತು ತಯಾರಿಕೆಯ ಮೂಲಕ ಪತ್ರಿಕಾ ಜೀವನಕ್ಕೆ ಧುಮುಕಿ ಪ್ರಜಾವಾಣಿ ಪತ್ರಿಕೆಯ ಪ್ರತಿನಿಧಿಯಾಗಿ 60 ವರ್ಷಗಳ ಕಾಲ ಸೇವೆ ಸಲ್ಲಿಸಿ, 50 ವರ್ಷಗಳ ಕಾಲ ಇದೇ ಪತ್ರಿಕೆ ವರದಿಗಾರರಾಗಿ ಇವರ ನಿರಂತರ ಸೇವೆಯ ಮುಖಾಂತರ ಹೆಚ್ಚು ಮನ್ನಣೆಗೆ ಒಳಗಾದವರು. ಪಾಮರ ಎಂಬ ನಾಮಧೇಯದಲ್ಲಿ ಹಲವು ಪತ್ರಿಕೆಗಳಿಗೆ ಕವನಗಳನ್ನು ಬರೆದಿದ್ದಾರೆ. ನೆಹರು ಕುಟುಂಬಕ್ಕೆ ನಿಷ್ಠರಾಗಿದ್ದುಕೊಂಡು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದಶರ್ಿಯಾಗಿ ಸೇವೆ ಮಾಡಿ ಕಾಂಗ್ರೆಸ್ ಅನ್ನು ಸುಭದ್ರವಾಗಿ ಕಟ್ಟಿ ಬೆಳೆಸಿದವರು.
ಇವರು ತಾಲ್ಲೂಕಿನ ಟೌನ್ ಕೋ-ಆಪರೇಟೀವ್ ಬ್ಯಾಂಕ್, ಗೃಹ ನಿಮರ್ಾಣ ಸಹಕಾರಿ ಸಂಘ, ತಾಲ್ಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿಯೂಕಾಡ ಸೇವೆ ಸಲ್ಲಿಸಿದ್ದರು, ಕೈಗಾರಿಕ ಸಹಕಾರಿ ಸಂಘ, ದೇಶೀಯ ವಿದ್ಯಾಪೀಠ ಪ್ರೌಢಶಾಲೆ, ತಾಲ್ಲೂಕು ಕೃಷಿಕ ಸಮಾಜ. ಇವುಗಳಲ್ಲಿ ನಿದರ್ೇಶಕರಾಗಿ ಸೇವೆ ಸಲ್ಲಿಸದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಸಂಘದ ಹಾಲಿ ಅಧ್ಯಕ್ಷರಾಗಿದ್ದರು, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾಗಿದ್ದರಲ್ಲದೆ, ಪುರಸಭೆಯ ನಾಮಿನಿ ಸದಸ್ಯರಾಗಿದ್ದರು. ಇವರು ದಿ|| ಮಾಜಿ ಶಾಸಕರಾದ ಸಿ.ಕೆ. ರಾಜಯ್ಯ ಶೆಟ್ಟಿ, ದಿ|| ಮಾಜಿ ಸಚಿವ ಎನ್ ಬಸವಯ್ಯ, ಮಾಜಿ ಶಾಸಕ ಬಿ ಲಕ್ಕಪ್ಪ ಇವರ ನಿಕಟವತರ್ಿಯಾಗಿದ್ದರು ಮೃತರು ಪತ್ನಿ ರಾಧಾಲಕ್ಷ್ಮಿ, 4ಜನ ಮಕ್ಕಳಾದ ರಾಜೇಂದ್ರ, ಚಿದಾನಂದ, ಭಾಸ್ಕರ, ರಾಜೀವಲೋಚನ, 4 ಸಹೋದರರು, 3ಸಹೋದರಿಯರು, 8 ಮೊಮ್ಮಕ್ಕಳು ಅಲ್ಲದೇ ಅಪಾರ ಬಂಧುಗಳನ್ನು ಅಗಲಿದ್ದಾರೆ.
ತಾಲ್ಲೂಕ ಆಡಳಿತ ವತಿಯಿಂದ ಕಂದಾಯ ನಿರೀಕ್ಷಕ ಚಿಂತಾಮಣಿ ಗೌರವ ವಂದನೆ ಸಲ್ಲಿಸಿದರು. ಮೃತರ ಅಂತಿಮ ದರ್ಶನವನ್ನು ಶಾಸಕ ಸಿ.ಬಿ.ಸುರೇಶ್ಬಾಬು, ಮಾಜಿ ಶಾಸಕರಾದ ಜೆ.ಸಿ. ಮಾಧುಸ್ವಾಮಿ, ಬಿ.ಲಕ್ಕಪ್ಪ, ತಾಲೂಕು ಕ.ಸಾ.ಪ. ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್, ಸ್ವತಂತ್ರ ಹೋರಾಟಗಾರ ಕಲ್ಲೇನಹಳ್ಳಿ ಶಿವಣ್ಣ, ಪುರಸಭಾ ಅಧ್ಯಕ್ಷ ರಾಜಣ್ಣ, ಸಿ. ಎಸ್. ರಮೇಶ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್. ನಟರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ ಬಸವರಾಜು, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜು, ಕ್ಯಾಪ್ಟನ್ ಸೋಮಶೇಖರ್, ಎಸ್.ಆರ್.ಎಸ್ ಸಹಕಾರ ಸಂಘದ ಅಧ್ಯಕ್ಷರಾದ ಸಿ.ಡಿ. ಚಂದ್ರಶೇಖರ್, ಕೃಷಿಕ ಸಮಾಜದ ಕಾರ್ಯದಶರ್ಿ ರಂಗನಕೆರೆ ಮಹೇಶ್ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘ ಸಂತಾಪ ಸೂಚಿಸಿತು ಹಾಗೂ ತಾಲ್ಲುಕಿನ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಇವರ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯಕ್ರಿಯೆಯನ್ನು ಪಟ್ಟಣದ ಹೊರವಲಯದ ಬ್ರಾಹ್ಮಣ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ತೆಲಗು ಚಿತ್ರ ಪ್ರದರ್ಶನವನ್ನು ನಿಲ್ಲಿಸಿದ ರಕ್ಷಣಾ ವೇದಿಕೆ
ಚಿಕ್ಕನಾಯಕನಹಳ್ಳಿ, ಫೆ.6: ನಾಡಿನಲ್ಲಿ ಕನ್ನಡದ ಜಾತ್ರೆ ನಡೆಯುವ ಸಂದರ್ಭದಲ್ಲಿ ತೆಲಗು ಚಿತ್ರ ಪ್ರದರ್ಶನಕ್ಕೆ ಮುಂದಾಗಿದ್ದ ಚಿತ್ರ ಮಂದಿರದ ಬಳಿ ಪ್ರತಿಭಟಿಸಿದ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕನ್ನಡ ಚಿತ್ರ ಪ್ರದರ್ಶನಗೊಳ್ಳುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ.
ನಾಡಿನಲ್ಲಿ ಕನ್ನಡ ಜಾತ್ರೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಚಿತ್ರ ಮಂದಿರವೊಂದು ಶನಿವಾರ ರಾತ್ರಿ ಎರಡನೇ ಪ್ರದರ್ಶನಕ್ಕೆ ತೆಲಗು ಚಿತ್ರ ಪ್ರದಶರ್ಿಸಲು ಮುಂದಾಗಿರುವುದನ್ನು ಮನಗಂಡ ಕನ್ನಡ ಪರ ಸಂಘಟನೆಗಳು ಚಿತ್ರ ಮಂದಿರದ ಬಳಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಚಿತ್ರ ಮಂದಿರವನ್ನು ಗುತ್ತಿಗೆ ಪಡೆದಿದ್ದವರು ಕನರ್ಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರಾದರೂ, ಅಂತಿಮವಾಗಿ ತೆಲಗು ಚಿತ್ರ ಪ್ರದರ್ಶನವನ್ನು ನಿಲ್ಲಿಸಿ ಕನ್ನಡ ಚಿತ್ರವಾದ ಮೈಲಾರಿಯನ್ನು ಪ್ರದಶರ್ಿಸಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.
ಪ್ರತಿಭಟನೆಯಲ್ಲಿ ಸಿ.ಟಿ.ಗುರುಮೂತರ್ಿ, ನಿಂಗರಾಜು ಎಸ್.ಎಂ., ವಾಸು, ಸಿ.ಡಿ.ಸುರೇಶ್, ಸಿ.ಎನ್.ಮೋಹನ್ ಶಾಸ್ತ್ರಿ, ಪುರುಷೋತ್ತಮ್ ಭಾಗವಹಿಸಿದ್ದರು.
ಚಿ.ಮೂ. ಗೌರವ ಡಾಕ್ಟರೇಟ್ಗೆ ಅರ್ಹ ವಿದ್ವಾಂಸ: ಎಂ.ವಿ.ಎನ್. ಚಿಕ್ಕನಾಯಕನಹಳ್ಳಿ,ಫೆ.6: ಹಿರಿಯ ಸಂಶೋಧಕ, ಕನ್ನಡ ಸರಸ್ವತಾ ಲೋಕದ ಗಣ್ಯ ಎಂ.ಚಿದಾನಂದ ಮೂತರ್ಿಯವರಿಗೆ ಗೌರವ ಡಾಕ್ಟರೇಟ್ ನಿಡಲು ಅಡ್ಡಿಪಡಿಸಿದ ರಾಜ್ಯಪಾಲರ ಕ್ರಮಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ವಿ.ನಾಗರಾಜ್ ರಾವ್ ವಿಷಾದ ವ್ಯಕ್ತಪಡಿಸಿದ್ದಾರೆ.
ನಾಡಿನ ಹೆಸರಾಂತ ವಿದ್ವಾಂಸ ಹಾಗೂ ಹಿರಿಯ ಸಂಶೋಧಕ ಎಂ.ಚಿದಾನಂದ ಮೂತರ್ಿಯವರಿಗೆ ಬೆಂಗಳೂರು ವಿ.ವಿ.ಯ ಸಿಂಡಿಕೇಟ್ ಸಭೆ ಗೌರವ ಡಾಕ್ಟರೇಟ್ ನೀಡುವ ಸಂಬಂಧ ನಿರ್ಣಯವೊಂದನ್ನು ಕೈಗೊಂಡು ಅದನ್ನು ರಾಜ್ಯಪಾಲರ ಅನುಮೋದನೆ ಕಳುಹಿಸಿದ ಸಂದರ್ಭದಲ್ಲಿ ರಾಜ್ಯಪಾಲರ ಕಛೇರಿ ಅವರಿಗೆ ಡಾಕ್ಟರೇಟ್ ಗೌರವವನ್ನು ನೀಡಲು ಅನುಮತಿಸದ ಕ್ರಮದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಕನ್ನಡ ಭಾಷೆಗೆ ನೀಡಿದ ಸೇವೆ ಮುಖ್ಯವೇ ಹೊರತು, ಅವರ ವೈಚಾರಿಕ ವಿಚಾರ ಪ್ರಧಾನವಲ್ಲ, ಸಾಹಿತ್ಯ ಲೋಕದಲ್ಲಿ ವೈಚಾರಿಕ ಬಿನ್ನಭಿಪ್ರಾಯಗಳು ಸಹಜ ಅದನ್ನೇ ಮುಂದಿಟ್ಟುಕೊಂಡು ಈ ರೀತಿಯ ತೀಮರ್ಾನವನ್ನು ರಾಜ್ಯಪಾಲರ ಕಛೇರಿ ಕೈಗೊಂಡಿದ್ದರೆ ಅದು ಸರ್ವತ ಅಕ್ಷಮ್ಯವೆಂದಿದ್ದಾರೆ.

Saturday, February 5, 2011

Friday, February 4, 2011

ಚಿಕ್ಕನಾಯಕನಹಳ್ಳಿ,ಫೆ.03: ತಾಲೂಕು ಪಂಚಾಯ್ತಿಯಲ್ಲಿ ಪಕ್ಷ ಭೇದ ಮರೆತು ಒಂದಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ್ದೀರಿ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಶ್ಲಾಘಿಸಿದರು.
ಬುಧವಾರ ತಾಲೂಕು ಪಂಚಾಯ್ತಿಯ ಸಭಾಂಗಣದಲ್ಲಿ ಕಳೆದ ಬಾರಿಯಾಗಿ ಅವಧಿ ಮುಕ್ತಾಯವಾದ 19ಜನ ತಾ.ಪಂ.ಸದಸ್ಯರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಸಮಸ್ಯೆ ಬಂದರು ಪಕ್ಷಬೇದ ಮರೆತು ಒಂದಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮಿಸಿದ್ದೀರಿ ಕಡಿಮೆ ಅನುದಾನದಲ್ಲೂ ತಮ್ಮ ಕೈಲಾದ ಸೇವೆ ಜನತೆಗೆ ಮಾಡಿದ್ದೀರಿ ಅಧಿಕಾರವಿದ್ದಾಗ ಸಾರ್ವಜನಿಕ ಕೆಲಸ ಮಾಡುವುದು ಮುಖ್ಯವಲ್ಲ ಅಧಿಕಾರದ ನಂತರ ಜನರ ಸೇವೆ ಮಾಡುವುದು ಮುಖ್ಯ, ಎಂದ ಅವರು ಮುಂದೆ ಬರುವ ತಾ.ಪಂ.ಸದಸ್ಯರು ಎಲ್ಲರ ಜೊತೆಗೂಡಿ ಹೊಂದಣಿಕೆ ಮಾಡಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.
ತಾ.ಪಂ.ಮಾಜಿ ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನ್ಯಯ ಮಾತನಾಡಿ ಕಳೆದ ಸಕರ್ಾರ ತಾ.ಪಂ.ಕ್ಷೇತ್ರಗಳಿಗೆ ಅತ್ಯಂತ ಕಡಿಮೆ ಅನುದಾನ ನೀಡಿದ್ದರೂ ಎಲ್ಲ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾಲೂಕು ಅಭಿವೃದ್ದಿಗೆ ಶ್ರಮಿಸಿದ್ದೇವೆ ಎಂದ ಅವರು ಸದಸ್ಯರಿಂದ ಅಧಿಕಾರಿಗಳ ಬಗ್ಗೆ ಕಠಿಣವಾಗಿ ವತರ್ಿಸಿದರೆ ಕ್ಷಮೆ ಇರಲಿ, ನಾವು ಅಭಿವೃದ್ದಿಗೆ ಕಾರ್ಯಕಗಳಿಗೆ ಮಾತ್ರ ಕಠಿಣವಾಗಿ ವತರ್ಿಸುತ್ತಿದ್ದೆವೆ ಹೊರತು ನಿಮ್ಮ ಬಗ್ಗೆ ನಮಗೆ ದ್ವೇಶ ಇರಲಿಲ್ಲ ಎಂದರು.
ಮಾಜಿ ಅಧ್ಯಕ್ಷೆ ಶಾರದ ಸೀತರಾಮಯ್ಯ ಮಾತನಾಡಿ ಕಳೆದ ಬಾರಿ ನಾವು ತಾ.ಪಂ.ಗೆ ಆಯ್ಕೆಯಾದ ಸಂದರ್ಭದಲ್ಲಿ ತಾಲೂಕನ್ನು ಅಭಿವೃದ್ದಿ ಮಾಡಬೇಕು, ಜನತೆಯ ಸಮಸ್ಯೆಗಳನ್ನು ಈಡೇರಿಸಬಹುದು ಎಂದು ಅಧಿಕಾರಕ್ಕೆ ಬಂದಿದ್ದು ಸಕರ್ಾರ ತಾ.ಪಂ.ಗಳಿಗೆ ಅನುದಾನ ಬಿಡುಗಡೆ ಮಾಡದೆ ಇದ್ದುದನ್ನು ನೋಡಿ ನಮಗೆ ನಿರಾಸೆಯಾಯಿತು ಎಂದ ಅವರು ಸಕರ್ಾರ ಹಣ ಬಿಡುಗಡೆ ಮಾಡುವಂತೆ ಅನೇಕ ಬಾರಿ ರಾಜ್ಯ ಮಟ್ಟದಲ್ಲಿ ಎಲ್ಲಾ ತಾ.ಪಂ.ಸದಸ್ಯರು ಹೋರಾಟ ಮಾಡಿದರೂ ಏನು ಪ್ರಯೋಜನವಾಗಲಿಲ್ಲ ಎಂದು ವಿಷಾದಿಸಿದರು.
ಈ ಸಂದರ್ಭದಲ್ಲಿ ಇ.ಓ ದಯಾನಂದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಸಿ.ಪಿ.ಐ ಪಿ.ರವಿಪ್ರಸಾದ್, ತಾ.ಪಂ.ಮಾಜಿ ಅಧ್ಯಕ್ಷ ಕೆ.ಟಿ.ಗೋವಿಂದಪ್ಪ ಸೇರಿದಂತೆ ಎಲ್ಲಾ ಸದಸ್ಯರು ಹಾಜರಿದ್ದರು.





Wednesday, February 2, 2011





ರೈತರು ತಮ್ಮ ಹೆಸರಗಳನ್ನು ಇಲಾಖೆಯಲ್ಲಿ ನೊಂದಾಯಿಸಿಕೊಳ್ಳಲು ಸೂಚನೆ
ಚಿಕ್ಕನಾಯಕನಹಳ್ಳಿ. ಫೆ.2: ತಾಲ್ಲೂಕಿನ ರೈತರಿಗೆ ಕೃಷಿ ಇಲಾಖೆಯ ವತಿಯಿಂದ ದೊರೆಯುವ ಸವಲತ್ತುಗಳನ್ನು ನೀಡಲು ತಾಲ್ಲೂಕಿನಾದ್ಯಂತ ಇರುವ ರೈತರ ಸಮಗ್ರ ಮಾಹಿತಿಯನ್ನು ಗಣಕೀಕರಣಗೊಳಿಸಲಾಗುತ್ತಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿದರ್ೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರ್ ನಲ್ಲಿ ದಾಖಲಿಸುವ ಈ ಕಾರ್ಯವನ್ನು ಉಚಿತವಾಗಿ ಇಲಾಖೆ ಕೈಗೊಂಡಿದ್ದು, ರೈತರಿಗೆ ಯಾವುದೇ ಆಥರ್ಿಕ ಹೊರೆ ಇರುವುದಿಲ್ಲ, ಆದ್ದರಿಂದ ಎಲ್ಲಾ ರೈತಬಾಂಧವರು ಇಲಾಖೆಯಲ್ಲಿ ಮುಂದೆ ಸಕರ್ಾರ ನೀಡುವ ಸವಲತ್ತುಗಳನ್ನು ಪಡೆಯಲು ತಮ್ಮ ಹೆಸರಗಳನ್ನು ನೊಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಮೊದಲ ಹಂತವಾಗಿ ತಾಲೂಕಿನ ಕಸಬ ರೈತ ಸಂಪರ್ಕ ಕೇಂದ್ರದಲ್ಲಿ ನೊಂದಣಿ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದಿರುವ ಅವರು, ಸಂಬಂಧಪಟ್ಟ ಹೋಬಳಿಯ ರೈತರುಗಳು ತಮ್ಮ ಜಮೀನಿನ (ಪಟ್ಟೆ ಪಹಣಿ ಜಮೀನಿಗೆ ಸೇರಿದ) ದಾಖಲಾತಿಗಳನ್ನು ತಂದು ದಾಖಲಿಸುವಂತೆ ಸಹಾಯಕ ಕೃಷಿ ನಿದರ್ೇಶಕರು ಮನವಿ ಮಾಡಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಇಲಾಖೆಯ ಯಾವುದೇ ಸವಲತ್ತುಗಳನ್ನು ಈ ದಾಖಲೆಯ ಆಧಾರದ ಮೇಲೆ ವಿತರಣೆ ಕೈಗೊಳ್ಳುವುದರಿಂದ ಸದರಿ ಪ್ರ್ರಕ್ರಿಯೆಯನ್ನು ಅರಿತು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕೋರಿದ್ದಾರೆ.
ಗ್ರಾಮಸ್ಥರ ಮನವಿಗೆ ಶೀಘ್ರ ಸ್ಪಂಧಿಸಿದ ತಹಶೀಲ್ದಾರ್ರವರೆಗೆ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಫೆ.2: ತಾಲೂಕಿನ ಶೆಟ್ಟೀಕೆರೆಯ ಗ್ರಾಮಸ್ಥರ ಮನವಿಯ ಮೇರೆಗೆ ಸ್ಥಳಕ್ಕೆ ಆಗಮಿಸಿ ದೊಡ್ಡಕೆರೆ ತೂಬನ್ನೆತ್ತಲು ಅವಕಾಶ ಮಾಡಿಕೊಟ್ಟ ತಹಶೀಲ್ದಾರ್ ಟಿ.ಸಿ.ಕಾಂತರಾಜು ರವರ ಕಾರ್ಯಶೈಲಿಗೆ ಶೆಟ್ಟೀಕೆರೆ ಗ್ರಾ.ಪಂ. ಅಧ್ಯಕ್ಷ ಶಶಿಧರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಶೆಟ್ಟೀಕೆರೆ ದೊಡ್ಡಕೆರೆ ತುಂಬಿ ಕಾಲುವೆಯಲ್ಲಿ ಸೀಪೆಜ್ ಹೋಗುತ್ತಿದ್ದು, ತೂಬನ್ನೆತ್ತಲು ಗ್ರಾಮಸ್ಥರು ಹಲವು ಸಲ ಸಕರ್ಾರದ ಮೊರೆಹೊಗಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಕೆರೆಯ ಅಚ್ಚುಕಟ್ಟುದಾರರು ಹಾಗೂ ಗ್ರಾಮಸ್ಥರು ಕೆರೆಯ ಕಾಲುವೆಯ ಬಳಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ತಹಶೀಲ್ದಾರ್ರವರು ಆಗಮಿಸಿ ತೂಬೆತ್ತಲು ಅವಕಾಶ ಕೊಡುವವರೆಗೆ ಸ್ಥಳವನ್ನು ಬಿಟ್ಟು ಕದಲುವುದಿಲ್ಲವೆಂದು ಹಠ ಹಿಡಿದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕಾಂತರಾಜು ಸ್ಥಳಕ್ಕೆ ಆಗಮಿಸಿ ಗ್ರಾಮಸ್ಥರ ಮನವಿಯನ್ನು ಆಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಗ್ರಾ.ಪಂ ಅಧ್ಯಕ್ಷ ಶಶಿಧರ್ ಈ ಭಾಗದಲ್ಲಿ 250 ಹೆಕ್ಟೇರ್ಗೂ ಅಧಿಕ ಜಮೀನಿನ ರೈತರು ಈ ಕೆರೆಯ ತೊಬನ್ನೆತ್ತುವುದರಿಂದ ಭತ್ತ ಬೆಳೆಯಲು ಅವಕಾಶವಾಗುತ್ತದೆ, ಯಾರದೋ ಕೆಲವೇ ಬೆರಳಿಕೆಯಷ್ಟು ಜನರ ಹಿತಾಸಕ್ತಿಗೋಸ್ಕರ ನೂರಾರು ಜನರಿಗೆ ಆಗುವ ಅನುಕೂಲವನ್ನು ತಪ್ಪಿಸುವುದು ಸರಿಯಲ್ಲ, ನಮ್ಮ ಮನವಿಯನ್ನು ಪರಿಗಣಿಸಿ ತೊಬನ್ನೆತ್ತಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಗ್ರಾಮಸ್ಥರ ಹಾಗೂ ಕೆರೆ ಅಚ್ಚುಕಟ್ಟುದಾರರ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ರವರು, ಈ ಕೆರೆ ಸಣ್ಣ ನೀರಾವರಿ ಇಲಾಖೆಗೆ ಸೇರಿದ್ದು, ಈ ನೀರು ಬಳಕೆಯ ಬಗ್ಗೆ ತೀಮರ್ಾನಿಸಲು ಎ.ಸಿ.ಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದು ಇದೆ, ಆ ಸಮಿತಿಯ ಸದಸ್ಯನಾಗಿರುವ ನಾನು, ಸಮಿತಿಯ ತೀಮರ್ಾನದಂತೆ ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ತಕ್ಷಣವೇ ಪ್ರತಿಭಟನಾಕಾರರು ತಿಪಟೂರು ಎ.ಸಿ.ಯವರನ್ನು ದೂರವಾಣಿಯಲ್ಲಿ ಸಂಪಕರ್ಿಸಿದ ಹಿನ್ನೆಲೆಯಲ್ಲಿ ಎ.ಸಿ.ಯವರು ಜಿಲ್ಲಾಧಿಕಾರಿಗಳ ಸಭೆಯೊಂದರ ನಡಾವಳಿಯಂತೆ ತಹಶೀಲ್ದಾರ್ರವರೆಗೆ ಸೂಚಿಸಿದ್ದಾರೆ. ತಹಶೀಲ್ದಾರ್ರವರು ಅಚ್ಚುಕಟ್ಟುದಾರರು ಕೆರೆ ನೀರನ್ನು ಉಪಯೋಗಿಸಿಕೊಳ್ಳಲು ತಿಳಿಸಿದ್ದಾರೆ.
ಈ ಕೆರೆಯ ಕಾಲುವೆಯ ದುರಸ್ಥಿಗಾಗಿ ತಂದಿದ್ದ ಪರಿಕರಗಳನ್ನು ಕಿಡಿಗೇಡಿಗಳು ಕದ್ದು ಹೋಯ್ದಿದ್ದಾರೆಂದು ಈ ಸಂದರ್ಭದಲ್ಲಿ ಗ್ರಾಮಸ್ಥರು ತಹಶೀಲ್ದಾರ್ರವರೆಗೆ ದೂರಿದರು.
ತಹಶೀಲ್ದಾರ್ರವರ ಶೀಘ್ರ ಸ್ಪಂದನೆಗೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ, ಈ ಪ್ರತಿಭಟನೆಯಲ್ಲಿ ಭೈರೇಶ್, ಅರುಣ, ರಾಮಕೃಷ್ಣ ಜೋಯಿಸ್, ತೋಂಟಧಾರ್ಯ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.


Tuesday, February 1, 2011




ತು.ಹಾ.ಒಕ್ಕೂಟಕ್ಕೆ ಮೂರು ತಿಂಗಳಲ್ಲಿ 3.89 ಕೋಟಿ ಲಾಭ
ಚಿಕ್ಕನಾಯಕನಹಳ್ಳಿ,ಫೆ.01: ತುಮಕೂರು ಹಾಲು ಒಕ್ಕೂಟದ ಕಳೆದ ತ್ರೈಮಾಸಿಕ ವಹಿವಾಟಿನಲ್ಲಿ ಸುಮಾರು 3.89 ಕೋಟಿ ಲಾಭ ಬಂದಿದೆ ಎಂದು ಹಾಲು ಒಕ್ಕೂಟದ ಜಿಲ್ಲಾ ಅಧ್ಯಕ್ಷ ಹೆಚ್.ಬಿ.ಶಿವನಂಜಪ್ಪ ಹಳೇಮನೆ ತಿಳಿಸಿದರು.
ತಾಲೂಕಿನ ಬೆನಕನಕಟ್ಟೆ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಹಾಲು ಅಳೆಯುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಒಕ್ಕೂಟದ ಅಧ್ಯಕ್ಷನಾಗಿ ಎರಡನೇ ಬಾರಿಗೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡ ಆರಂಭದ ತಿಂಗಳಲ್ಲೇ ಒಕ್ಕೂಟಕ್ಕೆ 1.40ಕೋಟಿ ಲಾಭ ಬಂದಿತು. ನಂತರ ನವೆಂಬರ್ನಲ್ಲಿ ಒಂದು ಕೋಟಿ ಲಾಭ ಬಂದಿದೆ, ಡಿಸೆಂಬರ್ನಲ್ಲಿ 45ಲಕ್ಷ ಲಾಭ ತಂದು ಕೊಡುವ ಮೂಲಕ ತುಮಕೂರು ಹಾಲು ಒಕ್ಕೂಟ ಲಾಭದಾಯಕ ಒಕ್ಕೂಟವಾಗುವಲ್ಲಿ ನಮ್ಮೆಲ್ಲ ನಿದರ್ೇಶಕರ ಸಹಕಾರ ಮಹತ್ವ ಪೂರ್ಣವಾದದ್ದು ಎಂದರು.
ಗ್ರಾಮೀಣ ಭಾಗದಲ್ಲಿ ಹಾಲು ಉತ್ಪಾದನೆ ಒಂದು ಉದ್ಯಮವಾಗಿ ಬೆಳೆದಿದ್ದು, ತೋಟಕ್ಕೆ ಬಂಡವಾಳ ಹಾಕುವುದಕ್ಕಿಂತ ಸೀಮೆ ಹಸು ಮೇಲೆ ಬಂಡವಾಳ ಹೂಡುವುದು ಹೆಚ್ಚು ಲಾಭದಾಯಕ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ ಎಂದರಲ್ಲದೆ, ಹಾಲು ಉತ್ಪಾದಕರು ತಮ್ಮ ಗ್ರಾಮಗಳಲ್ಲೇ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸುವ ಮೂಲಕ ಹಾಲು ಒಕ್ಕೂಟದಿಂದ ದೊರೆಯುವ ಸೌಲಭ್ಯಗಳನ್ನು ಸ್ಥಳೀಯವಾಗಿ ದೊರೆಯುವಂತೆ ಮಾಡಿಕೊಳ್ಳಲು ಮುಂದಾಗುವಂತೆ ಸಲಹೆ ನೀಡಿದರು.
ಪ್ರಸ್ತುತ ಚಿಕ್ಕನಾಯಕನಹಳ್ಳಿಯಲ್ಲಿ 86 ಹಾಲು ಉತ್ಪಾದಕರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು ಈ ಸಂಖ್ಯೆಯನ್ನು ಅಧಿಕಗೊಳಿಸಬೇಕಾಗಿದೆ ಎಂದರಲ್ಲದೆ, ನನ್ನ ಅಧ್ಯಕ್ಷಾವಧಿ ಮುಗಿಯುವುದರೊಳಗೆ ಈ ತಾಲೂಕಿನಲ್ಲಿ 101 ಸಂಘಗಳನ್ನು ಸ್ಥಾಪಿಸಬೇಕೆಂಬ ಹಂಬಲ ಹೊಂದಿದ್ದೇನೆ ಎಂದರು.
ಹಸುಗಳಿಗೆ ನೀಡುವ ಆಹಾರದಲ್ಲಿ ಹಸಿರು ಮೇವಿಗೆ ಹೆಚ್ಚು ಒತ್ತು ನೀಡಿ, ಅದರ ಜೊತೆಗೆ ಅಜೋಲಾವನ್ನು ಹಸುಗಳಿಗೆ ನೀಡಿ ಎಂದರಲ್ಲದೆ, ಬೂಸದ ಉತ್ಪಾದನೆ ಕಡಿಮೆಯಾಗಿರುವುದರಿಂದ ಅದರ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಶೆಟ್ಟಿಕೆರೆ ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ ಮಾತನಾಡಿ, ಹಾಲು ಉತ್ಪಾದಕರ ಸಂಘದ ಅಳಿವು-ಉಳಿವು ಉತ್ಪಾದಕರ ಕೈಯಲ್ಲಿದ್ದು ಯಾವ ಸಂಘ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ ಅಂತಹ ಸಂಘ ಅಭಿವೃದ್ದಿ ಶೀಲವಾಗಿರುತ್ತದೆ ಎಂದರು. ನಾನು ಸಹ ಆರಂಭದಲ್ಲಿ ಹಾಲುಗೊಣ ಹಾಲು ಉತ್ಪಾದಕರ ಸಂಘದ ಕಾರ್ಯದಶರ್ಿಯಾಗಿ ದುಡಿದ ಅನುಭವವನ್ನು ಹಂಚಿಕೊಂಡರು.
ಬೆನಕನಕಟ್ಟೆ ಗ್ರಾಮ ನನ್ನ ರಾಜಕೀಯ ಬೆಳವಣಿಗೆಗೆ ಸ್ಪಂದಿಸಿದೆ, ಚುನಾವಣೆಗೆ ಮುನ್ನ ನಾನು ಈ ಊರಿಗೆ ಭೇಟಿ ನೀಡಿದಾಗ, ಊರಿನ ಕೆರೆಯ ಅಭಿವೃದ್ದಿ ಬಗ್ಗೆ ಹಾಗೂ ಅಲ್ಲಿಗೆ ಮಲ್ಲಿಕಾಜರ್ುನ ಸ್ವಾಮಿ ಬೆಟ್ಟದಿಂದ ನೀರು ಹರಿಸುವ ಬಗ್ಗೆ ಗ್ರಾಮಸ್ಥರು ಚಚರ್ಿಸಿದ್ದರು, ಆ ದಿನ ನಾನು ಏನು ಮಾತು ಕೊಟ್ಟಿದ್ದೆನೋ, ಅದೇ ಮಾತಿಗೆ ಇಂದು ಕಟಿಬದ್ದನಾಗಿದ್ದೇನೆ. ಗ್ರಾಮಸ್ಥರೆಲ್ಲಾ ಯಾವ ಸಂದರ್ಭದಲ್ಲೇ ಈ ಕಾರ್ಯಕ್ಕೆ ಕೈಯಾಕಿದರು ನಾನು ನಿಮ್ಮೊಂದಿಗೆ ಕೈ ಜೋಡಿಸುತ್ತೇನೆ ಎಂದರು. ಈ ಗ್ರಾಮದ ಆಂಜನೇಯ ದೇವಸ್ಥಾನ ಜೀಣರ್ೋದ್ದಾರ ಕಾರ್ಯಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತು.ಹಾ.ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸುಬ್ರಾಯ್ಭಟ್ರು ಮಾತನಾಡಿ, ಹಸು ಸಾಕುವವರು ಕೊಟ್ಟಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಹಾಗೂ ಹಸುಗಳಿಗೆ ಕಾಲಕಾಲಕ್ಕೆ ಚುಚ್ಚು ಮದ್ದುಗಳನ್ನು ಹಾಕಿಸುವುದರ ಕಡೆ ಹೆಚ್ಚು ಗಮನ ನೀಡಿದರೆ ಹಸುಗಳು ಆರೋಗ್ಯ ಪೂರ್ಣವಾಗಿರುವುದರ ಜೊತೆಗೆ ಹೆಚ್ಚು ಹಾಲು ಕೊಡುವ ಮೂಲಕ, ಹೆಚ್ಚು ಆದಾಯವನ್ನು ತಂದು ಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕುಪ್ಪೂರು ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ, ನಮ್ಮೂರಿನ ಹಲವು ದಿನಗಳ ಬೇಡಿಕೆಯಾಗಿದ್ದ ಹಾಲಿನ ಕೇಂದ್ರ ಆರಂಭಗೊಂಡಿರುವುದು ನಮಗೆಲ್ಲಾ ಹರ್ಷ ತಂದಿದೆ ಎಂದರಲ್ಲದೆ, ಈ ಸಂಘದ ಅಭಿವೃದ್ದಿಗೆ ಗ್ರಾ.ಪಂ.ವ್ಯಾಪ್ತಿಯಲ್ಲಿ ದೊರೆಯುವ ಎಲ್ಲಾ ಸೌಕರ್ಯಗಳನ್ನು ಒದಗಿಸಲು ನಮ್ಮ ಪಂಚಾಯಿತಿ ಮುಂದಾಗುವುದಾಗಿ ತಿಳಿಸಿದರು.
ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಗಂಗಾಧರಪ್ಪ, ತು.ಹಾ.ಒಕ್ಕೂಟದ ವಿಸ್ತರಣಾಧಿಕಾರಿ ಎ.ಪಿ.ಯರಗುಂಟಪ್ಪ ಕುಪ್ಪೂರು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಬಿ.ಬಿ.ಕೃಷ್ಣಮೂತರ್ಿ, ಕಾರ್ಯದಶರ್ಿ ಕೆ.ಎಂ.ಕುಮಾರಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕುಪ್ಪೂರು ತಾ.ಪಂಸದಸ್ಯೆ ಚಿಕ್ಕಮ್ಮಗಂಗಾಧರಪ್ಪ, ಗ್ರಾ.ಪಂ.ಸದಸ್ಯರುಗಳಾದ ಬಿ.ಆರ್.ಕೃಷ್ಣಮೂತರ್ಿ, ಪೂಣರ್ಿಮ ಆನಂದ್. ಉಮೇಶ್, ಕುಪ್ಪೂರು ಗದ್ದಿಗೆ ಮಠದ ಏಜೆಂಟ್ ವಾಗೀಶ್ ಪಂಡಿತಾರಾಧ್ಯ, ಕುಪ್ಪೂರು ಹಾ.ಉ.ಸ.ಸಂಘದ ಅಧ್ಯಕ್ಷ ಗೋವಿಂದಸ್ವಾಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಶಾಲಾ ಮಕ್ಕಳು ಪ್ರಾಥರ್ಿಸಿದರೆ, ಸಂಘದ ಕಾರ್ಯದಶರ್ಿ ಬಿ.ಸಿ.ವೆಂಕಟೇಶ್ ಮೂತರ್ಿ ಸ್ವಾಗತಿಸಿ, ಶಿಕ್ಷಕ ಸಿ.ಗುರುಮೂತರ್ಿ ಕೊಟಿಗೆಮನೆ ನಿರೂಪಿಸಿ ವಂದಿಸಿದರು.


ಅಲ್ಪಸಂಖ್ಯಾತರ ಮಕ್ಕಳು ಗೈರು ಹಾಜರಾದರೆ ಶಿಕ್ಷಕರೆ ಹೊಣೆ
ಚಿಕ್ಕನಾಯಕನಹಳ್ಳಿ.ಫೆ.02: ಅಲ್ಪಸಂಖ್ಯಾತ ವರ್ಗಗಳ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ಹೆಚ್ಚು ಜವಬ್ದಾರಿ ಹೊರಬೇಕೆಂದು ತುಮಕೂರು ದಕ್ಷಿಣ ಜೆಲ್ಲೆಯ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಮೋಹನ್ಕುಮಾರ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸಕರ್ಾರಿ ಪ್ರೌಡಶಾಲೆ ಆವರಣದಲ್ಲಿ ಅಲ್ಪಸಂಖ್ಯಾತರ ಮಕ್ಕಳ ನಾವಿನ್ಯಯುತ ಕಾರ್ಯಕ್ರಮದ ಅಂಗವಾಗಿ ನಡೆದ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಅಲ್ಪಸಂಖ್ಯಾತರ ಮಕ್ಕಳು ಶಾಲೆಗೆ ಗೈರು ಹಾಜರಾಗುವ ಪ್ರಮಾಣ ಹೆಚ್ಚುತ್ತಿದೆ, ಇಂತಹ ಮಕ್ಕಳ ಗೈರು ಹಾಜರಿಯನ್ನು ತಪ್ಪಿಸಲು ಸಕರ್ಾರ ಹಲವು ಉತ್ತೇಜಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಅವರ ಗೈರು ಹಾಜರಿ ತಪ್ಪಿಸಲು ಪ್ರಯತ್ನಿಸುತ್ತಿದೆ, ಇದಕ್ಕೆ ಈ ವರ್ಗದ ಶಿಕ್ಷಕರ ಪ್ರಯತ್ನವೂ ಬಹಳ ಮುಖ್ಯ ಎಂದರು.
ಅಲ್ಪಸಂಖ್ಯಾತರ ಶಾಲೆಗಳಲ್ಲಿ ವಿಜ್ಞಾನ ಉಪಕರಣ ಕೊಳ್ಳಲು ತಾಲೂಕಿಗೆ ಒಂದು ಲಕ್ಷರೂಗಳನ್ನು ನೀಡಲಾಗಿದೆ ಎಂದರು.
ಸಿ.ಡಿ.ಪಿ.ಓ ಅನೀಸ್ಖೈಸರ್ ಮಾತನಾಡಿ ಅಲ್ಪಸಂಖ್ಯಾತರ ಶಾಲೆಗಳ ಶಿಕ್ಷಕರು ತಮಗೆ ಸಿಕ್ಕಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವ ಮೂಲಕ ತಾವು ಮಾಡುವ ಕೆಲಸಕ್ಕೆ ನ್ಯಾಯ ಒದಗಿಸಬೇಕೆಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ಅಲ್ಪಸಂಖ್ಯಾತರ ಶಾಲೆಗಳಲ್ಲಿನ ಶಿಕ್ಷಕರು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳ ಗೈರು ಹಾಜರಿಯನ್ನು ಕಡಿಮೆ ಮಾಡಬೇಕು, ಹಾಗೂ ಪ್ರತಿ ಮನೆಗೆ ಭೇಟಿ ನೀಡಿ ದಾಖಲಾಗದ ಮಕ್ಕಳನ್ನು ಶಾಲೆಗೆ ಕರೆತರುವ ಜವಾಬ್ದಾರಿಯನ್ನು ನಿರ್ವಹಿಸಬೇಕು, ಅಲ್ಪಸಂಖ್ಯಾತರ ಶಾಲೆಗಳಿರುವ ಸ್ಥಳಗಳಲ್ಲಿ ದಾಖಲಾಗದ ಹಾಗೂ ದೀರ್ಘಕಾಲದ ಮಕ್ಕಳು ಕಂಡುಬಂದರೆ ಆ ಶಾಲೆಯ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.
ಸಮಾರಂಭದಲ್ಲಿ ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿದರ್ೇಶಕ ತಿಮ್ಮರಾಜು, ಸಮಾಜ ಕಲ್ಯಾಣಾಧಿಕಾರಿ ಸೈಯದ್ ಮುನೀರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದರ್ು ಸಿ.ಆರ್.ಪಿ. ಅಪ್ರೋಜ್ ಉನ್ನೀಸಾ ಪ್ರಾಥರ್ಿಸಿದರೆ, ಬಿ.ಆರ್.ಸಿ.ಸುಧಾಕರ್ ಸ್ವಾಗತಿಸಿದರು, ದುರ್ಗಯ್ಯ ನಿರೂಪಿಸಿ, ಪುಟ್ಟಮಾದಯ್ಯ ವಂದಿಸಿದರು.