Wednesday, November 12, 2014



ಬೆಂಗಳೂರು ಮೆಟ್ರೋಗೆ ಕರಾಟೆಕಿಂಗ್ ಶಂಕರ್ನಾಗ್ ಹೆಸರಿಡಲು ಆಗ್ರಹ
ಚಿಕ್ಕನಾಯಕನಹಳ್ಳಿ,ನ.12: ಬೆಂಗಳೂರು ನಗರಕ್ಕೆ ಮೆಟ್ರೋ ಬರಬೇಕು ಎಂಬುದು ಶಂಕರ್ನಾಗ್ ಕನಸಾಗಿತು. ಈಗ ಆ ಕನಸು ನನಸಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು  ಬೆಂಗಳೂರು ಮೆಟ್ರೋಗೆ ಕರಾಟೆ ಕಿಂಗ್ ಶಂಕರ್ನಾಗ್ ಹೆಸರಿಡಬೇಕು ಎಂದು ಪಟ್ಟಣದ ಶಂಕರ್ನಾಗ್ ಅಭಿಮಾನಿ ಬಳಗದ ಮೊಹಮದ್ ಹುಸೇನ್ ಆಗ್ರಹಿಸಿದರು.
   ಪಟ್ಟಣದ ಶಂಕರ್ನಾಗ್ ಅಭಿಮಾನಿ ಬಳಗದ, ಜೈ ಮಾರುತಿ ಲಘು ವಾಹನಗಳ ಚಾಲಕ ಹಾಗೂ ಮಾಲೀಕರ ಸಂಘದ ಸಹಕಾರದೊಂದಿಗೆ ಕರಾಟೆ ಕಿಂಗ್ ಶಂಕರ್ನಾಗ್ರ 60ನೇ ಹುಟ್ಟು ಹಬ್ಬವನ್ನು ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದ ಎದುರು ಸಂಭ್ರಮದಿಂದ ಆಚರಿಸಿದರು.    ಈ ಸಂದರ್ಭದಲ್ಲಿ ಮಾತನಾಡಿದ ಅವರು ನಂದಿಬೆಟ್ಟಕ್ಕೆ ರೋಪ್ ವೇ ಹಾಕಬೇಕು ಎಂಬುದೂ ಶಂಕರ್ನಾಗ್ ಕನಸಾಗಿತ್ತು ಅದನ್ನೂ ಮುಖ್ಯಮಂತ್ರಿಗಳು ಸಾಕಾರಗೊಳಿಸಬೇಕು ಎಂದರು.
   ಕೆಎಸ್ಆರ್ಟಿಸಿ ನಿಲ್ದಾಣದ ಒಳಗೆ ಬಸ್ಗಳು ಬಾರದೆ ನೆಹರು ಸರ್ಕಲ್ನಲ್ಲಿ ನಿಲ್ಲುತ್ತಿವೆ ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಹಾಗೂ ಲಘು ವಾಹನಗಳು ರಸ್ತೆ ಬದಿಯಲ್ಲೇ ನಿಲ್ಲುತ್ತಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿದೆ ಆದ್ದರಿಂದ ಶಾಸಕರು ನಿಲ್ದಾಣಕ್ಕೆ ಸ್ಥಳ ಕೊಡಿಸಿಕೊಡಬೇಕು ಮತ್ತು ಸಂಸದರ ನಿಧಿಯಲ್ಲಿ ನಿಲ್ದಾಣ ನಿಮರ್ಿಸಿ ಕೊಡಬೇಕು ಎಂದು ಮನವಿ ಮಾಡಿದರು.
  ಕಾರ್ಯಕ್ರಮದಲ್ಲಿ ಜೈ ಮಾರುತಿ ಲಘು ವಾಹನಗಳ ಚಾಲಕ ಹಾಗೂ ಮಾಲೀಕರ ಸಂಘ ಹಾಗೂ ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ,ಉಪಾಧ್ಯಕ್ಷ ಮೊಹಮದ್ ಗೌಸ್,ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್,ನಿವೃತ್ತ ಶಿಕ್ಷಕ ಹನುಮಂತರಾಯಪ್ಪ,ಪುರಸಭೆ ಸದಸ್ಯ ಖಲಂದರ್ ಸೇರಿದಂತೆ ಅಭಿಮಾನಿ ಬಳಗದ ಪದಾಧಿಕಾರಿಗಳು ಇದ್ದರು. ಸಾರ್ವಜನಿಕರಿಗೆ ಕೇಕ್ ಹಾಗೂ ಲಘು ಉಪಾಹಾರ ನೀಡಲಾಯಿತು. 
  ನಮಗೆ ಶಂಕರ್ ನಾಗ್ ಪ್ರೇರಣೆ: ಚಾಲಕ ಮೊಹಮದ್ ಹುಸೇನ್, ಚಾಲಕ ಹಾಗೂ ಮಾಲೀಕರನ್ನು ಸಂಘಟಿಸಿ ಶಂಕರ್ನಾಗ್ ಅಭಿಮಾನಿ ಬಳಗ ಕಟ್ಟಿದ್ದಾರೆ. ಬಳಗದ ಗೆಳೆಯರು ಕಳೆದ 3ವರ್ಷಗಳಿಂದ ಶಂಕರ್ನಾಗ್ ಹುಟ್ಟು ಹಬ್ಬವನ್ನು ತಮ್ಮ ಮನೆಯ ಹಬ್ಬ ಎನ್ನುವಂತೆ ಕಾಳಜಿ ವಹಿಸಿ ಆಚರಿಸುತ್ತಾಬರುತ್ತಿದ್ದಾರೆ. ಅಲ್ಲದೆ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಿಗೆ ಹಾಗೂ ಹದಗೆಟ್ಟ ರಸ್ತೆಗಳ ಬಗ್ಗೆ ಇಲಾಖೆಗಳಿಗೆ ಎಚ್ಚರಿಸುತ್ತ ಬರುತ್ತಿದ್ದಾರೆ. ಈ ಎಲ್ಲಾ ಉಸಾಬರಿ ನಿಮಗೆ ಯಾಕೆ? ಎಂದು ಕೇಳಿದರೆ 'ಆಟೋರಾಜ ಶಂಕರ್ನಾಗ್ ಮೇಲಿನ ಅಭಿಮಾನದಿಂದ, ಅವರು ಚಾಲಕರಿಗೆ ಘನತೆ ತಂದುಕೊಟ್ಟವರು. ಅವರ ಅಭಿಮಾನಿಗಳಾಗಿ ಒಳ್ಳೆಯದು ಮಾಡದಿದ್ದರೆ ಹೇಗೆ? ಜನರ ಒಳಿತಿಗಾಗಿ  ಕೈಲಾದ ಕೆಲಸ ಮಾಡುತ್ತಿದ್ದೇವೆ' ಎನ್ನುತ್ತಾರೆ.

ಮಕ್ಕಳ ದಿನಾಚಾರಣೆ ವಿಶೇಷವಾಗಿ ಆಚರಿಸಲು ಸಿದ್ದತೆ
ಚಿಕ್ಕನಾಯಕನಹಳ್ಳಿ,ನ.12 : ನವಂಬರ್ 14ರಂದು ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಜವಹರ್ಲಾಲ್ ನೆಹರೂರವರ ಹುಟ್ಟುಹಬ್ಬದಂದು ಮಕ್ಕಳ ದಿನಾಚಾರಣೆಯನ್ನು ತಾಲ್ಲೂಕಿನಲ್ಲಿ ವಿಶೇಷವಾಗಿ ಆಚರಿಸುತ್ತಿದ್ದು ಅಂದು ಪಟ್ಟಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ  ಮಕ್ಕಳ ಜಾನಪದ ಹಾಗೂ ಕಲಾಮೇಳವನ್ನು ಸಂಘಟಿಸಲಾಗಿದೆ, ಶಾಲಾ ಮಕ್ಕಳೇ  ಸಮಾರಂಭದ ಅಧ್ಯಕ್ಷತೆ ಹಾಗೂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಿ.ಬಿ.ಸುರೇಶ್ಬಾಬು ಅಭಿಮಾನಿಗಳ ಬಳಗದ ಸಿ.ಎಸ್.ನಟರಾಜ್ ತಿಳಿಸಿದ್ದಾರೆ.
ಮಕ್ಕಳ ದಿನಾಚಾರಣೆ ಅಂಗವಾಗಿ ನವಂಬರ್ 14ರಂದು ಬೆಳಗ್ಗೆ 11ಗಂಟೆಗೆ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ಪ್ರತಿಭಾನ್ವಿತ ಮಕ್ಕಳಿಂದ ಮಕ್ಕಳ ಜಾನಪದ ಹಾಗೂ ಕಲಾಮೇಳ ನಡೆಯಲಿದೆ.
ಶಾಸಕ ಸಿ.ಬಿ.ಸುರೇಶ್ಬಾಬು ಅಭಿಮಾನಿ ಬಳಗ ಹಾಗೂ ಶಿಕ್ಷಣ ಇಲಾಖೆ ಮತ್ತು ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘ ಹಾಗೂ ತಾಲ್ಲೂಕು ಶಿಕ್ಷಕರ ಸಂಘದ  ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚಾರಣೆ ಕಾರ್ಯಕ್ರಮ ನಡೆಯಲಿದೆ. 
ಕಾರ್ಯಕ್ರಮದ ಉದ್ಘಾಟನೆಯನ್ನು ಕಿರುತೆರೆ ಕಲಾವಿದೆ ಪುಟ್ಟಗೌರಿ ಖ್ಯಾತಿಯ ಕುಮಾರಿ ಸಾನಿಯಾ ಅಯ್ಯರ್ ನೆರವೇರಿಸಲಿದ್ದು,  ಜಾನಪದ ಕಲಾಮೇಳದ ಉದ್ಘಾಟನೆಯನ್ನು ಪುಟಾಣಿ ಪಂಟ್ರು ಖ್ಯಾತಿಯ ಕಿರಿಯ ಕಲಾವಿದ ಮಧುಸೂಧನ್ ಉದ್ಘಾಟಿಸುವರು. ಪಟ್ಟಣದ ಪ್ರೌಢಶಾಲಾ ಹತ್ತನೇ ತರಗತಿ ವಿದ್ಯಾಥರ್ಿ ಹೆಚ್.ಕೆ.ದೀಪು ರಾಜಕುಮಾರ್ ಅಧ್ಯಕ್ಷತೆ ವಹಿಸುವರು. 
ಮುಖ್ಯ ಅತಿಥಿಗಳಾಗಿ ವಿದ್ಯಾಥರ್ಿಗಳಾದ ಶರತ್ ಹಳೇಮನೆ, ಡಿ.ಎಸ್.ಅಂಬಿಕಾ, ಗಗನ್, ಎಲ್.ಎನ್.ಸಂಜಯ್, ಚೈತ್ರ, ಸುಷ್ಮಾ ಚೌಡಿಕೆ ಸುದರ್ಶನ್ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 3ಕ್ಕೆ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮವನ್ನು ಹುಲಿಕಲ್ ನಟರಾಜ್ ಹಾಗೂ ತೇಜಸ್ವಿ ನಟರಾಜ್ರವರಿಂದ ಕಾರ್ಯಕ್ರಮ ನಡೆಯಲಿದೆ.

ಮಲ್ಲಿಗೆರೆ ಗ್ರಾ.ಪಂ.ನ ಸಮಸ್ಯೆ ಬಗೆಹರಿಸಲು ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ನ.12: ತಾಲೂಕಿನ ಮಲ್ಲೀಗೆರೆ ಗ್ರಾ.ಪಂ ನಲ್ಲಿ ಕಾರ್ಯದಶರ್ಿ ಕಳೆದ ಒಂದು ತಿಂಗಳಿಂದ ಕೆಲಸಕ್ಕೆ ಬಂದಿಲ್ಲ ಮತ್ತು ಇಲ್ಲಿ ಪಿಡಿಒ ಹುದ್ದೆ ಖಾಲಿ ಇದೆ ಒಂದು ತಿಂಗಳಿಂದ ಅಧಿಕಾರಿಗಳಿಲ್ಲದೆ ಯಾವುದೆ ಗ್ರಾಪಂ ಕಾರ್ಯಗಳು ಆಗದೆ, ಕುಡಿಯುವ ನೀರು, ವಾಸಸ್ಥಳ ಧೃಢೀಕರಣ ಪತ್ರ್ರ, ಕಸ ನಿಮರ್ೂಲನೆಯಂತಹ ಮೂಲಭೂತ ಸೌಕರ್ಯಗಳು ಲಭ್ಯವಿಲ್ಲದೆ  ಜನರು ರೊಸಿ ಹೊಗಿದ್ದಾರೆ ಎಂದು ಗ್ರಾ.ಪಂ.ಸದಸ್ಯರೇ ಪ್ರತಿಭಟಿಸಿದ್ದಾರೆ.
  ಗ್ರಾ.ಪಂ ನಲ್ಲಿ ಕಾರ್ಯಗಳು ಕುಂಟಿತವಾಗಿವೆ, ಕಾರ್ಯ ನಿರ್ವಹಿಸುವಲ್ಲಿ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ  ವಿಫಲವಾಗಿದೆ,  ಈ ಕುರಿತು ಗ್ರಾಪಂ ಅಧ್ಯಕ್ಷೆಯಾದ ಗಿರಿಜಮ್ಮನವರಿಗೆ ಗ್ರಾಮಸ್ಥರು ಮತ್ತು ಗ್ರಾಪಂ ಸದಸ್ಯರು ಹಲವಾರು ಭಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ  ಎಂದಿದ್ದಾರೆ.
ಆದ್ದರಿಂದ ಈ ಕೊಡಲೆ ಸಂಬಂದಿಸಿದ ತಾಲೂಕು ಮಟ್ಟದ ಅಧಿಕಾರಿಗಳು ಸೂಕ್ತ ಅಧಿಕಾರಿಯನ್ನು ನಿಯೋಜಿಸಿ ಕ್ರೀಯಾ ಯೋಜನೆಯನ್ನು ಚಾಲ್ತಿಗೆ ತರುವಂತೆ ಆಗ್ರಹಿಸಿ ಗ್ರಾಪಂ ಮುಂದೆ ಗ್ರಾಪಂ ಸದಸ್ಯರಾದ ನಾಗಭೂಷಣ್, ಮತ್ತು ವಿಶ್ವನಾಥ್, ಹಾಗೂ ಗ್ರಾಮಸ್ಥರು ಪ್ರತಿಭಟಿಸಿ ಅಧ್ಯಕ್ಷರಿಗೆ ಮನವಿಸಲ್ಲಿದರು. ಇನ್ನು ಮುಂದೆಯು ಸಮಸ್ಯೆ ಸರಿಯಾಗದಿದ್ದರೆ ಗ್ರಾಪಂಗೆ ಬೀಗ ಜಡಿದು ಉಗ್ರ ವಾಗಿ ಪ್ರತಿಭಟಿಸುವುದಾಗಿ ತಿಳಿಸಿದರು.
ಹಂದನಕೆರೆ ಹೋಬಳಿಯ ಮಲ್ಲಿಗೆರ ಗ್ರಾಪಂ ನಲ್ಲಿ ಸುಮಾರು 1 ತಿಂಗಳಿದ ಅಧಿಕಾರಿಗಳೆ ಇಲ್ಲದೆ ಯಾವುದೆ ಕೆಲಸಗಳು ಆಗುತ್ತಿಲ್ಲ, ಕೇಳಿದರೆ ಕಾರ್ಯದಶರ್ಿ ಗಂಗಾಧರಯ್ಯ ಬಂದಿಲ್ಲ ಯಾವುದೆ ಕಾರಣ ಕೊಡದೆ ಕೀಗಳನ್ನು ಕೊಡದೆ 1 ತಿಂಗಳಿದ ರಜೆ ಹಾಕಿದ್ದಾರೆ ಎಂದು ಬೀಲ್ ಕಲೆಕ್ಟರ್ ಬಂದವರಿಗೆ ಉತ್ತರಿಸಿ ಕಳುಹಿಸುತ್ತಿದ್ದಾರೆ.
 ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 10 ಗ್ರಾಮಗಳು ಇದ್ದು ಒಟ್ಟು 7500-8000 ಜನಸಂಖ್ಯೆಯನ್ನು ಹೋದಿದೆ. ಒಟ್ಟು 17 ಸದಸ್ಯರಿರವುವ ಗ್ರಾಪಂ ಕುಡಿಯುವ ನೀರಿನ ಸಮಸ್ಯೆ, ಕಸದ ಸಮಸ್ಯೆ, ಗ್ರಾಮ ನೈರ್ಮಲ್ಯದ ಸಮಸ್ಯೆ ಎದುರಾಗಿದೆ ಹಾಗೆಯೇ ಹಲವರಿಗೆ ಶೌಚಾಲಯದ ಬೀಲ್ ಹಾಗಿಲ್ಲ ಹಲವಾರು ಕಾಮಗರಿಗಳು ಅರ್ಧಕ್ಕೆ ನಿಂತಿವೆ ಸರ್ವಜನಿಕರು ಸಣ್ಣ ಕೆಲಸಗಳಿಗೂ ಕಾಯುವಂತಹ ಸ್ಥಿತಿ ಉದ್ಭಯಿಸಿದೆ. 
ಗ್ರಾಪಂ ಅಧ್ಯಕ್ಷೆ ಗಿರಿಜಮ್ಮನವರ ಹೇಳಿಕೆ: ಮಲ್ಲಿಗೆರೆ ಗ್ರಾಪಂ ನಲ್ಲಿ ಕಾರ್ಯದಶರ್ಿ 1 ತಿಂಗಳಿದ ರಜೆಯಲ್ಲಿದ್ದು ಯಾರಿಗೂ ಚಾಜರ್ು ಹಾಕಾದೆ ಇರುವುದರಿಂದ ಈ ರಿತಿಯ ಸಮಸ್ಯಗಳು ಉಧ್ಬವಿಸಿವೆ ನಾನು ಈ ಕುರಿತು ತಾ.ಪಂ.ಇ.ಒ ಅವರಿಗೆ ಮನವಿಯನ್ನು ಮಾಡಿದ್ದೆನೆ ಆದರೆ ಅವರು ಯಾರನ್ನು ನಿಯೋಜಿಸದೆ ಇರುವುದು ಸಮಸ್ಯೆಯಾಗಿದೆ. ಅವರು ಯಾವ ಅಧಿಕಾರಿಯನ್ನು ನಿಯೋಜಿಸದೆ ಹೋದರೆ ನಾನು ಕೊಡ ಪ್ರತಿಭಟನೆಯ ಹಾದಿಯನ್ನೆ ಹಿಡಿದು ಜನರಿಗೆ ನ್ಯಾಯವನ್ನು ಒದಗಿಸ ಬೇಕಾಗುತ್ತದೆ ಎಂದರು.






  



Tuesday, November 11, 2014

ಬಸ್ಪ್ರಯಾಣ ದರ ಕಡಿಮೆ ಮಾಡಲು ಆಗ್ರಹಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ನ.11 :-ಕೇಂದ್ರ ಸಕರ್ಾರ ಪೆಟ್ರೋಲ್ ಹಾಗೂ ಡಿಸೆಲ್ ದರವನ್ನು ಕಡಿಮೆ ಮಾಡಿದರೂ ರಾಜ್ಯ ಸಕರ್ಾರ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡಿಲ್ಲ ಅದ್ದರಿಂದ ಕೂಡಲೇ ಪ್ರಯಾಣದರ ಕಡಿಮೆ ಮಾಡುವಂತೆ ಒತ್ತಾಯಿಸಿ ರಾಜ್ಯ ಸಕರ್ಾರವನ್ನು ಒತ್ತಾಯಿಸಿ ತಾಲ್ಲೂಕು ಬಿಜೆಪಿ ಘಟಕ ರಸ್ತೆ ತಡೆದು ಪ್ರತಿಭಟನೆ ನಡೆಸಿತು.
ಪಟ್ಟಣದ ಶೆಟ್ಟಿಕೆರೆ ಗೇಟ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ತಾ.ಪಂ.ಸದಸ್ಯ ಎಂ.ಎಂ.ಜಗದೀಶ್ ಮಾತನಾಡಿ,  ಕೇಂದ್ರದ ಬಿಜೆಪಿ ಸಕರ್ಾರ ಪ್ರಧಾನಿ ಮೋದಿಯವರ ಸಕರ್ಾರ ಸತತವಾಗಿ ಪೆಟ್ರೋಲ್ದರಲ್ಲಿ ಲೀಟರ್ಗೆ 9ರೂಪಾಯಿ ಹಾಗೂ ಡಿಸೇಲ್ ದರದಲ್ಲಿ 7ರೂಪಾಯಿಗಳನ್ನು ಅಧಿಕಾರಕ್ಕೆ ಬಂದ ಆರು ತಿಂಗಳಿಂದಲೂ ಕಡಿಮೆ ಮಾಡುತ್ತಾ ಬಂದಿದೆ, ಆದರೆ ಇಲ್ಲಸಲ್ಲದ ನೆಪ ಹೇಳುತ್ತಾ ರಾಜ್ಯ ಸಕರ್ಾರ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣ ದರವನ್ನು ಕಡಿಮೆಮಾಡುವಲ್ಲಿ ಯಾವುದೇ ದೋರಣೆ ತಾಳಿಲ್ಲ ಇದು ಖಂಡನೀಯವಾಗಿದ್ದು ಕೇವಲ ಒಂದು ರೂಪಾಯಿಗೆ ಅಕ್ಕಿ ನೀಡಿದ್ದನ್ನೇ ತನ್ನ ಸಾಧನೆ ಎಂದು ಬಿಂಬಿಸುತ್ತಿರುವ ರಾಜ್ಯ ಸಕರ್ಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ ಇಂದು ಶಾಲೆಗಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸುವುದರಲ್ಲಿ ಚಿಂತೆಮೂಡುತ್ತಿದೆ ಈ ನಿಟ್ಟಿನಲ್ಲಿ ನೈತಿಕ ಹೊಣೆಹೊತ್ತ ಕಾನೂನು ಸಚಿವರು ರಾಜಿನಾಮೆ ನೀಡಬೇಕು ಎಂದರು.
ಮುಂದಿನ ಒಂದು ತಿಂಗಳಳೊಗೆ ಬಸ್ಪ್ರಯಾಣದರ ಕಡಿಮೆ ಮಾಡದಿದ್ದರೆ ಇನ್ನೂ ಉಗ್ರವಾದ ಹೋರಾಟ ಮಾಡಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮದ್ಯಮವರ್ಗದ ಹಾಗೂ ಬಡವರು ಓಡಾಡುವಂತಹ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ಕಡಿಮೆ ಮಾಡುವಲ್ಲಿ ಸಕರ್ಾರ ನಷ್ಟವನ್ನು ತೋರಿಸುತ್ತಿದ್ದು ಇದು ಅವರ ದುರಾಡಳಿತವನ್ನು ತೊರಿಸುತ್ತಿದೆ ಎಂದರಲ್ಲದೆ,  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದೇ ಇರುವುದು ವಿಷಾದನೀಯವಾಗಿದ್ದು ಕೂಡಲೇ ಇದಕ್ಕೆ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾ.ಪಂ.ನ ಉಪಾದ್ಯಕ್ಷ ವಸಂತ್ಕುಮಾರ್, ಸದಸ್ಯ ಸೀತರಾಮಯ್ಯ, ಬಿಜೆಪಿ ಮುಖಂಡ ಚೇತನ್ಪ್ರಸಾದ್ ಮಾತನಾಡಿದರು.ಪ್ರತಿಭಟನೆಯಲ್ಲಿ ತಾ.ಪಂ ಸದಸ್ಯರಾದ ಕೆಂಕೆರೆ ನವೀನ್, ತಾ||ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಮಿಲ್ಟ್ರೀಶಿವಣ್ಣ, ಘಟಕದ ಪ್ರ.ಕಾರ್ಯದಶರ್ಿ ಹನುಮಜಯ, ಮುಖಂಡರಾದ ನವಿಲೆ ಮಧು, ನರಸಿಂಹಮೂತರ್ಿ, ಗಂಗಾಧರಯ್ಯ, ರಾಮಲಿಂಗಯ್ಯ, ಮಹಿಳಾ ಮೋಚರ್ಾದ ಮಾಲ ಮುಂತಾದವರು ಪಾಲ್ಗೊಂಡಿದ್ದರು. ಸ್ಥಳಕ್ಕೆ ಆಗಮಿಸಿದ ಉಪತಹಸೀಲ್ದಾರ್ ದೊಡ್ಡಮಾರಯ್ಯ ಪ್ರತಿಭಟನಾಕಾರರಿಂದ ಮನವಿಯನ್ನು ಸ್ವಿಕರಿಸಿದರು.

ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದ ಬಗ್ಗೆ ಸಭೆ
ಚಿಕ್ಕನಾಯಕನಹಳ್ಳಿ,ನ.11 : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಭಾವೈಕ್ಯ ಧರ್ಮ ಸಮಾರಂಭವನ್ನು ಇದೇ 13 ಮತ್ತು 14ರಂದು ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಏರ್ಪಡಿಸಲಾಗಿದೆ ಎಂದು ಮಹೋತ್ಸವದ ಸ್ವಾಗತ ಕಮಿಟಿ ಅಧ್ಯಕ್ಷ ಹಾಗೂ ಪುರೋಹಿತರಾದ ಶಿವಶಂಕರಶಾಸ್ತ್ರಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಹೋತ್ಸವಕ್ಕೆ ಸುಮಾರು 10 ಸಾವಿರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಬರುವ ಭಕ್ತರಿಗೆಲ್ಲರಿಗೂ ದಾಸೋಹದ ವ್ಯವಸ್ಥೆಯಿದೆ ಎಂದರು.
 13ರಂದು ಸಂಜೆ 4.30ಕ್ಕೆ ಗ್ರಾಮದೇವತೆ ಉಡುಸಲಮ್ಮ ದೇವಿಯ ಆಗಮನ ಹಾಗೂ ಗಂಗಾಪೂಜೆ ನೆರವೇರಲಿದೆ. ಅಂದೇ ಪ್ರಾತಃಕಾಲಕ್ಕೆ ಗ್ರಾಮದ ಸರ್ವದೇವತೆಗಳಿಗೆ ರುದ್ರಾಭಿಷೇಕ ವಿಶೇಷ ಅಲಂಕಾರ ಅಷ್ಠೋತ್ತರ ಮಹಾಮಂಗಳಾರತಿ ನಡೆಯಲಿದೆ, ಬೆಳಗ್ಗೆ 9.30ಕ್ಕೆ ರಂಭಾಪುರಿ ಮಹಾಸನ್ನಿಧಿಯವರ ಅಡ್ಡಪಲ್ಲಕ್ಕಿ ಮಹೋತ್ಸವ, ಪುರಪ್ರವೇಶೋತ್ಸವವು ಗ್ರಾಮದ ಕೆರೆಕೋಡಿಯಿಂದ ಪ್ರಾರಂಭಗೊಂಡು ಪೂರ್ಣಕುಂಭದ ಸ್ವಾಗತದೊಂದಿಗೆ ವೇದಘೋಷ, ಮಂಗಳವಾದ್ಯ, ಸಾಂಸ್ಕೃತಿಕ ಕಲಾತಂಡಗಳ ಸಮೇತ ಗ್ರಾಮದ ರಾಜಬೀದಿಗಳಲ್ಲಿ ವಿಜೃಂಭಣೆಯ ಮೆರವಣಿಗೆಯು ಸಾಗಿ ಮಾನವ ಧರ್ಮ ಮಂಟಪಕ್ಕೆ ಆಗಮಿಸುವದು.
ಮಧ್ಯಾಹ್ನ 12ಕ್ಕೆ ಭಾವೈಕ್ಯಧರ್ಮ ಸಮಾರಂಭ ನಡೆಯಲಿದ್ದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸಾನಿಧ್ಯ ವಹಿಸಲಿದ್ದಾರೆ. ಗಂಡಸಿ ದೊಡ್ಡಗುಣಿ ಹಿರೇಮಠದ ರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿರುವರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು.
ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರಶಿವಾಚಾರ್ಯಸ್ವಾಮಿಜಿ, ನೊಣವಿನಕೆರೆ ಕಾಡಸಿದ್ದೇಶ್ವರಸ್ವಾಮಿ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮಿಜಿ, ತಮ್ಮಡಿಹಳ್ಳಿ ವಿರಕ್ತಮಠದ ಅಭಿನವ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮೀಜಿ ಕಾರ್ಯಕ್ರಮದಲ್ಲಿ ಉಪದೇಶಾಮೃತ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯಸ್ವಾಮಿ, ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮಿ, ಅಂಬಲದೇವರಹಳ್ಳಿ ಮಠದ ಉಜ್ಜನೀಶ್ವರಶಿವಾಚಾರ್ಯಸ್ವಾಮಿ, ಚನ್ನಬಸವೇಶ್ವರ ಗದ್ದುಗೆ ಮಠದ ಗೋಸಲ ಚನ್ನಬಸವೇಶ್ವರಶಿವಾಚಾರ್ಯಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕರಾದ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ಕುಮಾರ್, ಜಿಲ್ಲಾಧಿಕಾರಿ ಸತ್ಯಮೂತರ್ಿ, ನಿವೃತ್ತ ಪೋಲಿಸ್ ಆಯುಕ್ತ ಜ್ಯೋತಿಪ್ರಕಾಶ್ಮಿಜರ್ಿ ಸೇರಿದಂತೆ ಹರಗುರು ಚರಮೂತರ್ಿಗಳು, ಸಾಹಿತಿಗಳು, ಕಲಾವಿದರು, ಗಣ್ಯವಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರವಿಕುಮಾರಶಾಸ್ತ್ರಿ, ಕುಮಾರಸ್ವಾಮಿ, ಹೊನ್ನೆಬಾಗಿ ಕಾತರ್ಿಕ್, ಮೋಹನ್ಕುಮಾರ್ ಉಪಸ್ಥಿತರಿದ್ದರು.

 ಸ್ತ್ರೀಶಕ್ತಿ ಮಹಿಳಾ ಸಮಾವೇಶಕ್ಕೆ ಪಾಲ್ಗೊಳ್ಳಲು ಸಿದ್ದರಿರುವ ಮಹಿಳೆಯರು 
ಚಿಕ್ಕನಾಯಕನಹಳ್ಳಿ,ನ.11:-ಸುಮಾರು 250 ಸಂಘಗಳಿಂದ 550ಜನ ಸ್ತ್ರೀಯರು ನಮ್ಮ ತಾಲ್ಲೂಕಿನಿಂದ ಚಿತ್ರದುರ್ಗದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅನೀಸ್ಖೈಸರ್ ತಿಳಿಸಿದರು.
 ಚಿತ್ರದುರ್ಗದ ಸಕರ್ಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ಸ್ತ್ರೀಶಕ್ತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಹೋರಟಿದ್ದ ತಾಲ್ಲೂಕಿನ ಸ್ತ್ರೀಶಕ್ತಿ ಸಂಘಗಳ ಸದಸ್ಯರ ಬಸ್ಗಳಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿ, ಸಮಾವೇಶದಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ಸುತ್ತು ನಿಧಿಯನ್ನು ವಿತರಿಸಲಿದ್ದು ನಮ್ಮ ತಾಲ್ಲೂಕಿಗೆ 22ಲಕ್ಷದ 50ಸಾವಿರ ರೂಪಾಯಿಗಳಷ್ಟು ಸುತ್ತು ನಿಧಿ ಬರಲಿದ್ದು ತಲ ಒಂದು ಸಂಘಕ್ಕೆ 5ಸಾವಿರದಂತೆ ಸ್ತ್ರೀ ಶಕ್ತಿ ಸಂಘಗಳಿಗೆ ವಿತರಣೆ ಮಾಡುತ್ತಿದ್ದು ಅದರ ಉದ್ದೇಶದಿಂದ ಚಿತ್ರ ದುರ್ಗದಲ್ಲಿ ಸ್ತ್ರೀಶಕ್ತಿ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದರು.
 ಈ ಸಮಾವೇಶದಲ್ಲಿ ನಮ್ಮ ತಾಲ್ಲೂಕಿನಿಂದ 250ಸಂಘಗಳಿಂದ ಸುಮಾರು 550ಜನ ಸ್ತ್ರೀಯರು ಪಾಲ್ಗೋಳ್ಳುತ್ತಿದ್ದಾರೆ ಮೊದಲ ಹಂತದಲ್ಲಿ ಸಕರ್ಾರ ಸಮಾವೇಶದಲ್ಲಿ ಸುತ್ತುನಿದಿ ವಿತರಿಸುತ್ತಿದ್ದು ನಂತರದಲ್ಲಿ  ಎಲ್ಲಾ ಸಂಘಗಳಿಗೂ ಇದನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸಿಡಿಪಿಒ ಪರಮೇಶ್ವರಪ್ಪ ಹಾಗೂ ತಾಲ್ಲೂಕಿನ ಎಲ್ಲಾ ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಇದ್ದರು.



 ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಕನಕ ಜಯಂತ್ಯೋತ್ಸವದ ಮೆರವಣಿಗೆಯಲ್ಲಿ ಯುವಕರೊಂದಿಗೆ  ನೃತ್ಯಕ್ಕೆ ಶಾಸಕ ಸಿ.ಬಿ.ಸುರೇಶ್ಬಾಬು ಹೆಜ್ಜೆ ಹಾಕಿದರು.  
 

Saturday, November 8, 2014


ದಾಸ ಸಾಹಿತ್ಯದಲ್ಲಿ 'ಕನಕ'ರದ್ದು ತಳ ಸಮುದಾಯಗಳ ಒಂಟಿಧ್ವನಿಯಾದರೂ ಗಟ್ಟಿ ಧ್ವನಿ: ಸಂಶೋಧಕ ಗಂಗಾಧರ ಕೊಡ್ಲಿಯವರ
ಚಿಕ್ಕನಾಯಕನಹಳ್ಳಿನ. : ಕನಕದಾಸರು ತಳಸಮುದಾಯದ ಒಂಟಿ ಧ್ವನಿಯಾಗಿ ಹೋರಾಟ ಮಾಡಿದರು, ಆಗಿನ ಕಾಲದಲ್ಲಿ ಮೇಲ್ವರ್ಗದವರು ನೀಡಿದ ಕಿರುಕುಳಗಳಿಗೆ ತಮ್ಮ ಕೀರ್ತನೆ, ಮುಂಡಗಿ, ಒಡಪುಗಳ ಮೂಲಕ ಉತ್ತರ ನೀಡುತ್ತಾ ಅವರ ವಿದ್ಯತ್ತಿಗೆ ಸೆಡ್ಡು ಹೊಡೆದರು, ಅವರು ವಿಶ್ವ ಮಾನವಾರಗಬೇಕೆ ಹೊರತು, ಜಾತಿಗೆ ಸೀಮಿತವಾಗಬಾರದು ಎಂದು ಸಂಶೋಧಕ ಗಂಗಾಧರ ಕೊಡ್ಲಿಯವರು ಅಭಿಪ್ರಾಯಪಟ್ಟರು.  
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ತಾಲ್ಲೂಕು ಆಡಳಿತ, ಕನಕ ಯುವಕ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಕನಕ ದಾಸರು ಕನರ್ಾಟಕದಲ್ಲಷ್ಟೇ ಅಲ್ಲದೆ ಆಂಧ್ರ, ತಮಿಳುನಾಡು, ರಾಜಾಸ್ಥಾನಗಳಲ್ಲೂ ಸಂಚರಿಸಿ ತಮ್ಮ ಸಾಮಾಜಿಕ ಚಿಂತೆನಗಳನ್ನು ಸಾರಿದ್ದಾರೆ ಎಂದರು. ತಮಿಳುನಾಡಿನಲ್ಲಿ ಕನಕರ 175 ಕೀರ್ತನೆಗಳು ದೊರೆತಿದೆ ಎಂದರಲ್ಲದೆ, ಪದ ಪುಂಜಗಳಿಂದ ಕಾವ್ಯವನ್ನಾಗಿಸದೆ, ಸಮಾಜ ಮುಖಿಯಾದ ಜನಪದರ ಅನುಭವಗಳನ್ನು ಕಟ್ಟಿಕೊಡುವ ಕಾವ್ಯಕ್ಕೆ ಹೆಚ್ಚು ಒತ್ತು ಕೊಟ್ಟಂತೆ ಸಮಾಜಿಕ ಚಿಂತನೆಗೆ ಆಧ್ಯಾತ್ಮಿಕ ನೆಲೆಯನ್ನು ತಮ್ಮ ಕೀರ್ತನೆಗಳ ಮೂಲಕ ಕೊಟ್ಟ ಕೀತರ್ಿ ಕನಕದಾಸರಿಗೆ ಸಲ್ಲುತ್ತದೆ ಎಂದರು. 
ಕನಕದಾಸರು ರಾಮಧಾನ್ಯ ಚರಿತೆ, ನಳಚರಿತ್ರೆ, ಹರಿದಾಸ ಚರಿತೆ ರಚಿಸಿ ಪ್ರಸಿದ್ದಿ ಪಡೆದಿದ್ದಾರೆ. ಕನಕದಾಸರು ಸಂತನಾಗಿ ಕವಿಯೋಗಿ ಸಮಾಜಮುಖಿ ಚಿಂತನೆಗಳನ್ನು ಇಟ್ಟುಕೊಂಡ ಅವರು,  ಹುಟ್ಟು 1495-1593ರ ಕಾಲದಲ್ಲಿದ್ದವರು ಎಂದು ಇತಿಹಾಸದ ದಾಖಲೆಗಳಲ್ಲಿವೆ ವ್ಯಾಸರಾಯರ ಮಠದಲ್ಲಿ ದಾಸದೀಕ್ಷೆ ಪಡೆದರು  ಉಡುಪಿಯಲ್ಲಿದ್ದ ವ್ಯಾಸಕೂಟ ಹಾಗೂ ದಾಸಕೂಟವೆಂಬ ಪಂಗಡದಲ್ಲಿ ದಾಸಕೂಟವನ್ನು ಇವರು ಸೇರಿಕೊಂಡರು  ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತಿ ವಿನಾಶಕ್ಕೆ ಯುವಕರು ಮುಂದಾಗಬೇಕು, ಅಂತಜರ್ಾತಿ ವಿವಾಹಗಳಿದ ಇದು ಸಾಧ್ಯ. ಎಂದರಲ್ಲದೆ, ಸಾರ್ವಜನಿಕ ಜೀವನದಲ್ಲಿರುವವರು ಮೇಲ್ಪಂಕ್ತಿ ಹಾಕಬೇಕು, ನಮ್ಮ ಮನೆಯಲ್ಲಿ ನನಗೆ ಇಂದಿಗೂ ಊಟ ಕೊಡುವವನು ಪರಿಶಿಷ್ಟ ಜಾತಿಗೆ ಸೇರಿದವರು, ಅವನಂತೆ ಇಲ್ಲಿನ ಹೆಂಗಸರಿಗೂ ರೊಟ್ಟಿ ಮಾಡಲು ಬರುವುದಿಲ್ಲ, ನನ್ನ ಆಪ್ತ ಸಹಾಯಕರೆಲ್ಲಾ ತಳ ಸಮುದಾಯಕ್ಕೆ ಸೇರಿದವರೆ ಎಂದು ತಮ್ಮದೇ ಬದುಕನ್ನು ಉದಾಹರಣೆಯಾಗಿ ನೀಡಿದ ಶಾಸಕರು, ಮುಂದಿನ ತಲೆ ಮಾರಿಗೆ ಜಾತಿ ವ್ಯವಸ್ಥೆಯ ತೀವ್ರತೆ ಕಡಿಮೆಯಾಗುತ್ತದೆ ಎಂದು ಭವಿಷ್ಯ ನುಡಿದರು.
ಜಾತಿ ಹಾಗೂ ಹಣದಿಂದ ಯಾರನ್ನೂ ಆಳಲು ಸಾಧ್ಯವಿಲ್ಲ ದಾಸಶ್ರೇಷ್ಠ ಕನಕದಾಸರ ನಡೆನುಡಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದರ ಜೊತೆಯಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ, ಕನಕದಾಸರನ್ನು ಜಾತಿಗೆ ಸೀಮಿತ ಮಾಡದೇ ಎಲ್ಲರಿಗೂ ಒಂದೇ ಎಂಬ ಭಾವನೆ ನಮ್ಮಲ್ಲಿ ಬರಬೇಕಾಗಿದೆ, ಸಕರ್ಾರ ಎಲ್ಲಾ ಜಾತಿಗಳನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗಬೇಕಾಗಿದೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ತಳಸಮುದಾಯದಲ್ಲಿ ಹುಟ್ಟಿದ ಕೀರ್ತನಕಾರ ಸಂತ ಕನಕದಾಸರು ಜಾತೀಯ ಬೇರುಗಳನ್ನು ಕಿತ್ತೊಗೆಯಲು ಶ್ರಮಿಸಿದರು ಎಂದರು.
ಪುರಸಭೆಯಿಂದ ಹೋರಾಟ ಕನಕದಾಸರ ಮೆರವಣಿಗೆ ಪಟ್ಟಣದ ನೆಹರು ವೃತ್ತ ಬಿ.ಹೆಚ್.ರಸ್ತೆ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ  ಕನ್ನಡ ಸಂಘದ ವೇದಿಕೆಗೆ ಆಗಮಿಸಿತು. ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳಾದ ವೀರಗಾಸೆ, ಡೊಳ್ಳುಕುಣಿತ, ಕೋಲಾಟ, ಚಿಟ್ಟಿಮೇಳ, ಪಾಳೇಗಾರರ ವೇಷ, ಜಾನಪದ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಭಕ್ತಕನಕದಸರ ವೇಷ ಜನರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಕಾರ್ಯಕ್ರಮ ಉದ್ಘಾಟಿಸಿರು. ಪುರಸಭಾಧ್ಯಕ್ಷೆ ಪುಷ್ಪ.ಟಿ.ರಾಮಯ್ಯ, ತಹಶೀಲ್ದಾರ್ ಕಾಮಾಕ್ಷಮ್ಮ, ಜಿ.ಪಂ.ಸದಸ್ಯರಾದ ಜಾನಮ್ಮರಾಮಚಂದ್ರಯ್ಯ, ಲೋಹಿತಬಾಯಿ, ಎನ್.ಜಿ.ಮಂಜುಳಗವಿರಂಗಯ್ಯ,, ಪುರಸಭಾ ಉಪಾಧ್ಯಕ್ಷೆ ನೇತ್ರಾವತಿಶಿವಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಬಿ.ಇ.ಓ ಸಾ.ಚಿ.ನಾಗೇಶ್, ಜಿ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾ.ಪಂ.ಸದಸ್ಯರಾದ ಹೇಮಾವತಿ, ಚೇತನಗಂಗಾಧರ್, ಲತಾವಿಶ್ವೇಶ್ವರಯ್ಯ, ಪುರಸಭಾ ಸದಸ್ಯರಾದ ರೇಣುಕಾಗುರುಮೂತರ್ಿ, ಮಹಮದ್ಖಲಂದರ್, ರಂಗಸ್ವಾಮಿ, ಸಿ.ಎಸ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಉಪನ್ಯಾಸಕ ಹೆಚ್.ಕೆ.ರಾಮಣ್ಣ, ಸಾಹಿತಿ ವೇಣುಗೋಪಾಲ್, ವಾದ್ಯಗಾರ ಸಿದ್ದಲಿಂಗಯ್ಯ, ಆರೋಗ್ಯ ಕ್ಷೇತ್ರದ ರಾಧಮ್ಮ, ಸಬ್ಬೇನಹಳ್ಳಿ ಜ್ಯೋತಿಷಿ ಲಕ್ಷ್ಮಣಶೆಟ್ಟಿ, ಕೃಷಿ ಕ್ಷೇತ್ರದಲ್ಲಿ ಗೋಪಾಲನಹಳ್ಳಿ ರಘು ಮುಂತಾದವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ ಸ್ವಾಗತಿಸಿದರು. ಶಿಕ್ಷಕ ಬಸವರಾಜ್ ನಿರೂಪಿಸಿದರು. ಶಿಕ್ಷಕ ರಾಜ್ಕುಮಾರ್ ಪ್ರಾಥರ್ಿಸಿದರು. 



ತೆಂಗು ಪುನಶ್ಚೇತನಾ ಯೋಜನೆಯನ್ನು ಅನುಷ್ಠಾನಕ್ಕೆ 
ಚಿಕ್ಕನಾಯಕನಹಳ್ಳಿ, : ತೋಟಗಾರಿಕಾ ಇಲಾಖಾ ವತಿಯಿಂದ ತೆಂಗು ಪುನಶ್ಚೇತನಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು ಈ ಯೋಜನೆಯಡಿ ಪ್ರತಿ ಹೆಕ್ಟೇರಿಗೆ 20ಸಾವಿರ ರೂಪಾಯಿಗಳ ಸಹಾಯಧನ ನೀಡುವ ಅವಕಾಶವಿದ್ದು ಗರಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಬಹುದಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕಾ ಇಲಾಖಾ ಅಧಿಕಾರಿ ಮಹಾಲಕ್ಷ್ಮಮ್ಮ ತಿಳಿಸಿದ್ದಾರೆ.
ತೆಂಗಿನ ತೋಟಗಳು 10 ವರ್ಷಕ್ಕೆ ಮೇಲ್ಪಟ್ಟ ಕನಿಷ್ಟ 10 ತೆಂಗಿನ ಮರಗಳು ಒಣಗಿರುವ ರೈತರಿಗೆ ತೆಂಗಿನ ಮರಗಳನ್ನು ತೆರವುಗೊಳಿಸಿ ಹೊಸ ಹೈಬ್ರಿಡ್ ಹಾಗೂ ಎಳೆನೀರು ಸ್ಥಳೀಯ ತಳಿಗಳ ತೆಂಗಿನ ಗಿಡಗಳನ್ನು ಮರುನಾಟಿ ಮಾಡಬೇಕು ಹಾಲಿ ಇರುವ ತೆಂಗಿನ ಮರಗಳಿಗೆ ತೇವಾಂಶ ಕಾಪಾಡಲು ಗಿಡಗಳು ಸುತ್ತಾ ಪಾತಿ ಮಾಡುವುದು, ಪಾತಿಗಳ ಸುತ್ತ ತೆಂಗಿನ ಮಟ್ಟೆ ಅಥವಾ ಕೃಷಿ ತ್ಯಾಜ್ಯಗಳನ್ನು ಹಾಕಿ ತೆಂಗಿನ ಗರಿಗಳನ್ನು ಹೊಂದಿಸುವುದು ಮತ್ತು ತೆಂಗಿನ ಮರಗಳ ಸಾಲುಗಳ ನಡುವೆ ಕಾಲುವೆಗಳನ್ನು ತೆಗೆದು ಮಟ್ಟೆಯನ್ನು ತುಂಬಿ ತೇವಾಂಶ ರಕ್ಷಣೆ ಮಾಡುವುದು. ಹಾಗೂ ತೆಂಗಿನ ತೋಟಗಳಲ್ಲಿ ಆಯಾ ವಾತಾವರಣಕ್ಕೆ ಸೂಕ್ತವಾಗಿರುವ  ಮಿಶ್ರತಳಿ ತೋಟಗಾರಿಕಾ ಬೆಳೆಗಳನ್ನು ಹಾಕುವುದಲ್ಲದೆ, ತೆಂಗಿನ ಮರಗಳಿಗೆ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ ಮತ್ತು ರಾಸಾಯನಿಕ ಗೊಬ್ಬರ ಹಾಕುವುದು, ರೈತರು ಮೊದಲು ಸ್ವಂತ ಖಚರ್ಿನಲ್ಲಿ ಈ  ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಲು ಸಿದ್ದರಿರಬೇಕು ನಂತರ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲಾತಿಗಳನ್ನು ಕಛೇರಿಗೆ ಸಲ್ಲಿಸಿ, ಇಲಾಖಾ ಅಧಿಕಾರಿಗಳಿಂದ ತಾಂತ್ರಿಕ ಸಲಹೆ ಪಡೆಯಬೇಕು, ನಂತರ ಸ್ಥಳ ಪರಿಶೀಲಿಸಿ ಸಹಾಯಧನವನ್ನು ರೈತರ ಬ್ಯಾಂಕ್ ಖಾತೆಯ ಮುಖಾಂತರ ವಿತರಿಸಲಾಗುವುದು ಆದ್ದರಿಂದ ತಾಲ್ಲೂಕಿನ ರೈತರು ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕಾ ಇಲಾಖಾ ಅಧಿಕಾರಿಗಳನ್ನು ಸಂಪಕರ್ಿಸಲು ಕೋರಿದ್ದಾರೆ.