Wednesday, June 1, 2011

ಆಧಾರ್ ಕಾಡರ್್ ಇಲ್ಲದಿದ್ದರೆ ಭವಿಷ್ಯದಲ್ಲಿ ಆಧಾರವಿಲ್ಲ
ಚಿಕ್ಕನಾಯಕನಹಳ್ಳಿ,ಮೇ.01: ಆಧಾರ್ ಕಾಡರ್್ ಹೊಂದಿಲ್ಲದವರಿಗೆ ಭವಿಷ್ಯದಲ್ಲಿ ಸಕರ್ಾರಿ ಸವಲತ್ತುಗಳು ಸಿಗಲಾರವು ಆದ್ದರಿಂದ ಎಲ್ಲರೂ ಆಧಾರ್ ಕಾಡರ್್ ಪಡೆಯುವುದು ಕಡ್ಡಾಯ , ತಾಲ್ಲೂಕಿನಲ್ಲಿ ಈಗಾಗಲೇ ಶೇ.79ರಷ್ಟು ಜನರು ಕಾಡರ್್ ಹೊಂದಿದ್ದು ಉಳಿದವರು ಕೂಡಲೇ ಕಾಡರ್್ ಹೊಂದುವುದು ಅತ್ಯಗತ್ಯ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು ಎರಡುಲಕ್ಷದ ಹನ್ನೆರಡು ಸಾವಿರದ ಅರವತ್ತಮೂರು ಜನರಿದ್ದು ಇದರಲ್ಲಿ ಒಂದು ಲಕ್ಷದ ಎಪ್ಪತ್ತು ಸಾವಿರದಷ್ಟು ಜನರು ಈಗಾಗಲೇ ಈ ಯೋಜನೆಗೆ ಒಳಪಟ್ಟಿದ್ದಾರೆ ಎಂದರು. ಪ್ರತಿ ದಿವಸ ಸರಾಸರಿ ಒಂದು ಸಾವರದಷ್ಟು ಜನರು ತಮ್ಮ ಗುರುತಿನ ಸಂಖ್ಯೆಯನ್ನು ಪಡೆಯುತ್ತಿದ್ದಾರೆ ಎಂದರು.
ತಾಲ್ಲೂಕಿನಲ್ಲಿ 324 ಹಳ್ಳಿಗಳಿದ್ದು ಗ್ರಾ.ಪಂ.ಕೇಂದ್ರಗಳಲ್ಲಿ ಹಾಗೂ ಪ್ರಮುಖ ಗ್ರಾಮಗಳಲ್ಲಿ ಪೋಟೋ ತೆಗೆಯುವ ಕೇಂದ್ರವನ್ನು ತೆರೆಯಲಾಗಿದೆ ಈ ಕಾರ್ಯಕ್ಕೆ ಆರಂಭದಲ್ಲಿ 23 ಲ್ಯಾಪ್ಟ್ಯಾಪ್ಗಳನ್ನು ಬಳಸಲಾಗುತ್ತಿದ್ದು ಈಗ 25ಲ್ಯಾಪ್ಟ್ಯಾಪ್ಗಳನ್ನು ಉಪಯೋಗಿಸಲಾಗುತ್ತದೆ ಎಂದರು. ಜೂನ್ 15ರೊಳಗೆ ಎಲ್ಲರೂ ಈ ಯೋಜನೆಗೆ ಒಳಪಡಬೇಕೆಂದರು.
ಕೇಂದ್ರ ಸಕರ್ಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ವಿಶಿಷ್ಠ ಗುರುತಿನ ಸಂಖ್ಯೆ ನೀಡುವ ಆಧಾರ್ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರು ನೊಂದಣಿ ಮಾಡಿಸಿಕೊಳ್ಳದಿದ್ದದರೆ ಸಕರ್ಾರಿ ಸವಲತ್ತುಗಳಿಗೆ ಅನರ್ಹರಾಗುತ್ತಾರೆ ಎಂದರಲ್ಲದೆ ಆಧಾರ್ ಯೋಜನೆಯಡಿ ನೊಂದಾಣಿ ಮಾಡಿಸದ ಪಡಿತರ ಚೀಟಿದಾರರಿಗೆ ಪಡಿತರ ಆಹಾರ ಪದಾರ್ಥಗಳನ್ನು ವಿತರಿಸದಂತೆ ಎಲ್ಲಾ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಲಾಗುವುದು ಎಂದರು.
ತಾಲ್ಲೂಕಿನ ಎಲ್ಲಾ ಇಲಾಖೆಗಳ ಸಕರ್ಾರಿ ನೌಕರರು ಆಧಾರ್ ಯೋಜನೆಯಡಿ ಗುರುತಿನ ಸಂಖ್ಯೆ ಪಡೆಯುವುದು ಕಡ್ಡಾಯ, ಗುರುತಿನ ಸಂಖ್ಯೆ ಪಡೆಯದ ಸಕರ್ಾರಿ ನೌಕರರಿಗೆ ವೇತನ ಪಾವತಿಸದಂತೆ ಆಯಾ ಇಲಾಖೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರಲ್ಲದೆ ಪೋಲಿಸ್ ಸೇರಿದಂತೆ ಶಾಲಾ ಕಾಲೇಜುಗಳ ಮುಖ್ಯಸ್ಥರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲರಿಗೂ ಸೂಚನೆ ನೀಡಲಾಗಿದೆ.