Wednesday, August 24, 2011

ಅರಸುರವರು ತಂದ ಮೀಸಲಾತಿಯಿಂದ ಹಿಂದುಳಿದ ವರ್ಗಗಳ ಅಭಿವೃದ್ದಿ : ಸಿ.ಟಿ.ಮುದ್ದುಕುಮಾರ್ಚಿಕ್ಕನಾಯಕನಹಳ್ಳಿಆ.24: ದೇವಾರಾಜ್ ಅರಸರವರು ಅಂದು ಹಿಂದುಳಿದ ವರ್ಗಗಳ ಪರವಾಗಿ ನಿಂತು ಮೀಸಲಾತಿ ತರದೇ ಹೋಗಿದ್ದರೆ ಈಗಿರುವ ನೌಕರರ ಪೈಕಿ ಶೇ.10 ರಷ್ಟು ಹಿಂದುಳಿದ ಜನಾಂಗದವರು ಸಕರ್ಾರಿ ನೌಕರಿಯನ್ನು ಕಾಣಲಾಗುತ್ತಿರಲಿಲ್ಲ ಎಂದು ಜಿಲ್ಲಾ ಬಿ.ಸಿ.ಎಂ. ಅಧಿಕಾರಿ ಸಿ.ಟಿ. ಮುದ್ದುಕುಮಾರ್ ವಿಶ್ಲೇಷಿಸಿದರು. ಪಟ್ಟಣದ ಹಳ್ಳಿಕಾರ ಬೀದಿ ಸಕರ್ಾರಿ ಹಿ.ಪ್ರಾ. ಶಾಲೆಯಲ್ಲಿ ಶಾಸಕ ಸಿ.ಬಿ. ಎಸ್. ಅಭಿಮಾನಿ ಬಳಗ ಹಾಗೂ ತಾಲ್ಲೂಕು ಪತ್ರಕರ್ತರ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿನ ಕಟ್ಟ ಕಡೆಯ ವ್ಯಕ್ತಿಗೂ ಸಕರ್ಾರಿ ಸವಲತ್ತುಗಳು ಸಿಗಬೇಕೆಂಬ ಆಶಯ ಅರಸುರವದಾಗಿತ್ತು ಎಂದರು. ಇಂದು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಾಕಷ್ಟು ಸವಲತ್ತುಗಳು ಸಿಗುತ್ತಿದೆ, ದೇವರಾಜ್ ಅರಸ್ ನಿಗಮವು ಸಣ್ಣ ಪುಟ್ಟ ವ್ಯಾಪಾರಿಗಳನ್ನು ಗಮನದಲ್ಲಿಟ್ಟು ಕೊಂಡು ಅವರಿಗೆ ಹೆಚ್ಚಿನ ಒತ್ತು ನೀಡಿ ಸಾಲ ಸೌಲಭ್ಯ ನೀಡುತ್ತಿದೆ ಎಂದರು ಈ ಬಗ್ಗೆ ಹೆಚಿನ ಮಾಹಿತಿ ಪಡೆಯಲು ದೇವರಾಜ್ ಅರಸ್ ಅಭಿವೃದ್ಧಿ ನಿಗಮವನ್ನು ಸಂಪಕರ್ಿಸಲು ಕೋರಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಕಣ್ಣಯ್ಯ ಮಾತನಾಡಿ ಅರಸು ರವರು ತಮ್ಮ ಮಂತ್ರಿ ಮಂಡಲದಲ್ಲಿ ಮಾಜಿ ಶಾಸಕ ದಿ ಎನ್. ಬಸವಯ್ಯನವರನ್ನು ಕರೆದು ಮಂತ್ರಿ ಪದವಿಯನ್ನು ನೀಡಿದ್ದರು. ಅರಸುರವರು ಅಂದು ಬಸವಯ್ಯನರಿಗೆ ಮಂತ್ರಿ ಪದವಿ ಕೊಡದೆ ಇದಿದ್ದರೆ ಸ್ವತಂತ್ರಾ ನಂತರದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಂತ್ರಿಗಿರಿ ಈ ತಾಲ್ಲೂಕಿಗೆ ಇಂದಿನ ವರೆಗೆ ದೊರಕದೆ ಗಗನ ಕುಸುಮವಾಗಿ ಉಳಿದಿರುವುದು ಎಂದರು. ದಿಬಸವಯ್ಯನವರೂ ಅರಸುರವರ ಮೇಲೆ ಅಷ್ಠೇ ನಿಷ್ಠೆಯನ್ನು ಇಟ್ಟಿದ್ದರು ಎಂದರು. ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ. ರೇಣುಕಸ್ವಾಮಿ ಮಾತನಾಡಿ ದೇವರಾಜ್ ಅರಸ್ ರವರನ್ನು ಚಿ.ನಾ.ಹಳ್ಳಿಗೆ ಕರೆಸಿದ್ದ ನಮ್ಮ ಸಂಘ, ರಾಜ್ಯೋತ್ಸವ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದ ಅವಕಾಶ ನಮ್ಮ ಸಂಘಕ್ಕೆ ದೊರೆತಿತ್ತು ಎಂದು ಸ್ಮರಿಸಿಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷ ಸಿ ಎಲ್. ದೊಡ್ಡಯ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಸಿ.ಬಿ.ಎಸ್. ಅಭಿಮಾನಿ ಬಳಗದ ಸಂಚಾಲಕ ಸಿ.ಎಸ್.ನಟರಾಜ್ ಕ.ರ. ವೇ. ಅಧ್ಯಕ್ಷ ಸಿ.ಟಿ. ಗುರುಮೂತರ್ಿ ತಾ ಪತ್ರಕರ್ತರ ಸಂಘದ ಕಾರ್ಯದಶರ್ಿ ಸಿ ಹೆಚ್ ಚಿದಾನಂದ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಶಾಲೆಯ ಬಡ ವಿದ್ಯಾಥರ್ಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.ಶಾಲೆಯ ಮು.ಶಿ. ಜಯಲಕ್ಷ್ಮಮ್ಮ ಸ್ವಾಗತಿಸಿದರೆ ಶಶಿಕಲಾ ನಿರೂಪಿಸಿ ಶಂಷದ್ ಉನ್ನೀಸ್ ವಂದಿಸಿದರು.

ಕೇಂದ್ರ ಸಕರ್ಾರವು ಮಸೂದೆ ಜಾರಿಗೆ ತರುವುದು ಅನಿವಾರ್ಯ : ಎಂ.ವಿ.ನಾಗರಾಜ್ರಾವ್ ಚಿಕ್ನಾಯಕನಹಳ್ಳಿ,ಆ.24: ಜನಲೋಕಪಾಲ್ ಮಸೂಸೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟಕ್ಕೆ ಇಟೀ ಭಾರತದ ಒಂದು ನೂರು ಕೋಟಿ ಜನ ಬೆಂಬಲಿಸಿರುವುದನ್ನು ಕೇಂದ್ರ ಸಕರ್ಾರ ಅರಿತು ಜಾರಿಗೆ ತರುವುದು ಅನಿವಾರ್ಯವಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಅಭಿಪ್ರಾಯಪಟ್ಟರು. ಪಟ್ಟಣದ ನೆಹರು ವೃತ್ತದಲ್ಲಿ ಕುಂಚಾಂಕುರ ಕಲಾ ಸಂಘ ಹಾಗೂ ವಾಣಿ ಚಿತ್ರಕಲಾ ಕಾಲೇಜ್ ಸಂಯುಕ್ತವಾಗಿ ಅಣ್ಣಾ ಹಜಾರೆರವರನ್ನು ಬೆಂಬಲಿಸಿ ಸಾರ್ವಜನಿಕವಾಗಿ ಚಿತ್ರ ಬಿಡಿಸುವ ಮೂಲಕ ಧರಣಿ ಸತ್ಯಾತಗ್ರಹವನ್ನು ಏರ್ಪಡಿಸಿತ್ತು. ದೇಶದಲೆಲ್ಲಾ ಸಾಮೂಹಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು ವೃತ್ತಿ ನಿರತರೂ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದು ವಿದ್ಯಾಥರ್ಿಗಳ ಭಾಗವಹಿಸುವಿಕೆ ಉತ್ತಮವಾಗಿದೆ, ನಮ್ಮ ತಾಲ್ಲೂಕಿನಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕುಂಚಾಂಕುರ ಕಲಾ ಸಂಘ ಹಾಗೂ ವಾಣಿ ಚಿತ್ರಕಲಾ ಕಾಲೇಜ್ನವರು ಭ್ರಷ್ಠಾಚಾರತೆಯನ್ನು ಖಂಡಿಸಿ ಅಣ್ಣಾ ಹಜಾರೆರವರನ್ನು ಬೆಂಬಲಿಸಿ ಬರೆದಿರುವ ಚಿತ್ರಗಳು ಮನೋಜ್ಞಾವಾಗಿದೆ ಎಂದರು. ಈ ಸಂದರ್ಭದಲ್ಲಿ ಸಿ.ಡಿ.ಚಂದ್ರಶೇಖರ್ ಮಾತನಾಡಿ ಸಕರ್ಾರದಿಂದ ಅನುಕೂಲ ಪಡೆಯುವ ಎಲ್ಲರನ್ನೂ ಈ ಕಾಯಿದೆ ಅಡಿ ಸೇರಿಸಬೇಕೆಂದರಲ್ಲದೆ ಇತ್ತೀಚಿಗೆ ಸಕರ್ಾರದಿಂದ ಮಠಗಳು ಪ್ರಯೋಜನ ಪಡೆಯುತ್ತಿದ್ದು ಮಠಾಧೀಶರನ್ನು ಈ ವ್ಯಾಪ್ತಿಗೆ ಒಳಪಡಿಸಬೇಕೆಂದರು. ಕಲಾವಿದ ಸಿದ್ದು ಜಿ.ಕೆರೆ, ಕುಂಚಾಂಕುರ ಕಲಾ ಸಂಘದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಗ್ಗದ ಮನೆ ಮಾತನಾಡಿದರು.
ಬಸವಣ್ಣ, ಅಬ್ದುಲ್ಕಲಾಂ, ಕಿರಣ್ಬೇಡಿಯಂತೆ ಅಧಿಕಾರಿಗಳು ಕೆಲಸ ನಿರ್ವಹಿಸಿ
ಚಿಕ್ಕನಾಯಕನಹಳ್ಳಿ,ಆ.24 : ಅಧಿಕಾರಿಗಳು ಬಸವಣ್ಣ, ಅಬ್ದುಲ್ಕಲಾಂ, ಕಿರಣ್ಬೇಡಿಯವರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಅಧಿಕಾರವನ್ನು ನಡೆಸಿ ಎಂದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ಸಲಹೆ ನೀಡಿದರು. ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ತಾ.ವೀರಶೈವ ಸಮಾಜ ಅಕ್ಕಮಹಾದೇವಿ ಮಹಿಳಾ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಸಾಸಲು ಗ್ರಾಮದ ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿ.ಸೌಮ್ಯ ಸುಧಾಕರ್ರವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದ ಮೂಲಕ ನೊಂದು, ಬೆಂದವರಿಗೆ ಧ್ವನಿಯಾಗಿ ಬದುಕಿ , ವ್ಯಕ್ತಿಗಳಿಗೆ ನಂಬಿಕೆ, ಕರ್ತವ್ಯ ಆತ್ಮವಿಶ್ವಾಸ ಸಮಯ ಪಾಲನೆ, ಪ್ರಾಮಾಣಿಕ ನಿಷ್ಠೆ ಆದರ್ಶಗಳ ಮೂಲಕ ಬಡವರಿಗೆ ತಮ್ಮ ಅಧಿಕಾರದಿಂದ ನೆರವಾದವರು ಎಂದರು. ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಅಧಿಕಾರ ಬಂದಾಗ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದ ಅವರು ಗ್ರಾಮೀಣ ಪ್ರದೇಶದಿಂದ ಉನ್ನತದಜರ್ೆಗೆ ಏರಿದ ಸೌಮ್ಯರವರ ಪೋಷಕರು ಹಾಗೂ ಪತಿಯವರ ಪ್ರೋತ್ಸಾಹ ಮೆಚ್ಚುವಂತಹದು, ಶಕ್ತಿ ಇಲ್ಲದ ಹಿಂದುಳಿದವರ ಪೋಷಕರಿಗೆ ರಕ್ಚಣೆ ನೀಡಿದರೆ ಭಗವಂತನ ಸೇವೆ ಮಾಡಿದಂತೆ ಕಷ್ಠ ಇರುವವರು ಅನ್ಯಾಯಕ್ಕೆ ಒಳಗಾದವರು ನ್ಯಾಯ ಕೋರಿ ತಮ್ಮ ಬಳಿಗೆ ಬಂದಾಗ ಅವರಿಗೆ ಸ್ಪಂದಿಸಿ ಪ್ರಾಮಾಣಿಕತೆ ತೋರ್ಪಡಿಸಬೇಕು ಎಂದರು.