Monday, December 31, 2012



ಯುವತಿಯ ಮೇಲೆ ಅತ್ಯಾಚಾರ: ಶೀಘ್ರ, ಉಗ್ರ ರೂಪದ ಶಿಕ್ಷೆಗೆ ಒತ್ತಾಯಿಸಿ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ
                         
ಚಿಕ್ಕನಾಯಕನಹಳ್ಳಿ,ಡಿ.31 : ಮಹಿಳೆಯರಿಗೆ ಪುರುಷರಿಂದ ಯಾವುದೇ ರೀತಿಯ ದೌರ್ಜನ್ಯ ನಡೆದರೂ ಅಂಜದೆ ಅನ್ಯಾಯದ ವಿರುದ್ದ ಹೋರಾಡಿ ಇಂತಹ ಹೋರಾಟಕ್ಕೆ ಎಲ್ಲಾ ಮಹಿಳಾ ಸಂಘಟನೆಗಳು ಬೆಂಬಲಿಸುತ್ತವೆ ಎಂದು ಸೃಜನಾ ಸಂಘಟನೆಯ ಎನ್.ಇಂದಿರಮ್ಮ ಹೇಳಿದರು.
ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ಸೃಜನಾ ಸಂಘಟನೆ ಹಾಗೂ ಪುರಸಭಾ ಸದಸ್ಯೆಯರು, ಇನ್ನರ್ವೀಲ್ ಸಂಸ್ಥೆ, ಅಕ್ಕಮಹಾದೇವಿ ಮಹಿಳಾ ಸಮಾಜ, ಶಿವಶಕ್ತಿ ಸಂಘ, ವಾಸವಿ ಮಹಿಳಾ ಸಮಾಜ, ತಾಲ್ಲೂಕು ವಿಜ್ಞಾನ ಕೇಂದ್ರ ಹಾಗೂ ಕಾಲೇಜು ವಿದ್ಯಾಥರ್ಿಗಳು ದೆಹಲಿಯ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾಥರ್ಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ನೆಹರು ಸರ್ಕಲ್ನಿಂದ ತಾಲ್ಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಸಕರ್ಾರಕ್ಕೆ ಮನವಿ ಪತ್ರ ಅಪರ್ಿಸಿ ಮಾತನಾಡಿದ ಅವರು, ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಇಡೀ ಸ್ತ್ರೀ ಕುಲದ ಮೇಲೆ ನಡೆದ ಅಮಾನುಷ ಹಲ್ಲೆ, ಈ ಕೃತ್ಯ ಎಸಗಿದ ಎಲ್ಲಾ ಅಪರಾಧಿಗಳಿಗೂ ಗರಿಷ್ಠ ಮಟ್ಟದ ಶಿಕ್ಷೆಯಾಗಬೇಕು ಹಾಗೂ ಇಂತಹ ಪ್ರಕರಣಗಳಲ್ಲಿ ಸಕಾರಿ ವ್ಯವಸ್ಥೆ ಸೂಕ್ತವಾಗಿ ಸ್ಪಂದಿಸುವ ಜೊತೆಗೆ ಆರೋಪಿಗಳ ಮೇಲೆ ತೀವ್ರವಾದ ಕ್ರಮ ಕೈಗೊಳ್ಳಬೇಕು ಎಂದರಲ್ಲದೆ, ಮಹಿಳೆಯರ ಮೇಲೆ ಕುಕೃತ್ಯ ನಡೆಸುವ ಆರೋಪಿಗಳು ಎಷ್ಟೇ ಬಲಾಡ್ಯರಾಗಿದ್ದರೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ದೇಶದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನೈತಿಕ ಶಿಕ್ಷಣ ಭೋದನೆಯಾಗಬೇಕು ಎಂದರು.
ಹುಳಿಯಾರಿನ ಇನ್ನರ್ವೀಲ್ ಕ್ಲಬ್ನ  ಜಯಲಕ್ಷ್ಮೀ ಮಾತನಾಡಿ ನನ್ನ ಗಂಡನಿಂದ ನನಗೂ ಆಸಿಡ್ ಎರಚುವ ಮೂಲಕ ಅನ್ಯಾಯವಾಗಿತ್ತು ಎಂದರಲ್ಲದೆ, ರಾಯಚೂರಿನಲ್ಲಿ ಅತ್ಯಾಚಾರ ನಡೆಸಿದ ವ್ಯಕ್ತಿಯೊಬ್ಬ ಹುಡುಗಿಗೆ ಬೆದರಿಕೆ ಹಾಕಿದ್ದರು ಎರಡು ದಿನಗಳ ನಂತರ ಈ ವಿಷಯ ತಿಳಿದು ಮಹಿಳೆಯರೆಲ್ಲ ಸೇರಿ ಪ್ರತಿಭಟನೆ ನಡೆಸಿ ಈ ಕೃತ್ಯದ ವಿರುದ್ದ ಹೋರಾಡಿ ಜಯಗಳಿಸಿದ್ದೆವು, ಇದೇ ರೀತಿ ಅನ್ಯಾಯದ ನಡೆದ ಮಹಿಳೆಯರು ಹೆದರದೆ ವಿಷಯವನ್ನು ತಿಳಿಸಿದರೆ ನ್ಯಾಯಕ್ಕಾಗಿ ಹೋರಾಡಬಹುದು ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಅತ್ಯಾಚಾರದಂತಹ ಹೇಯ ಕೃತ್ಯ ನಡೆಯುತ್ತಿರುವುದು ಭಾರತೀಯ ಹೆಣ್ಣು ಮಕ್ಕಳ ದೌಭರ್ಾಗ್ಯ, ಪುಸ್ತಕದಲ್ಲಿ ಮಾತ್ರ ಹೆಣ್ಣಿಗೆ ಉತ್ತಮ ಸ್ಥಾನಮಾನವನ್ನು ಸಕರ್ಾರ ಕಲ್ಪಿಸುತ್ತಿದೆ, ಆದರೆ ಭದ್ರತೆ ದುಷ್ಠಿಯಲ್ಲಿ ರಕ್ಷಣೆ ದೊರಕುತ್ತಿಲ್ಲ ಎಂದ ವಿಷಾದಿಸಿದರು.
ಪುರಸಭಾ ಸದಸ್ಯೆ ಕವಿತಾಚನ್ನಬಸವಯ್ಯ ಮಾತನಾಡಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ನಿಲ್ಲಬೇಕು, ಮಹಿಳೆಯರ ಗೌರವ ಪೂರ್ಣ ಬದುಕಿಗೆ ಸಾಧ್ಯವಾಗುವಂತೆ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಸಶಕ್ತಿ ಕಾನೂನು ಜಾರಿ ಮಾಡಿ ಪೋಲೀಸ್ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದರು.
  ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಮಾತನಾಡಿ ಅತ್ಯಾಚಾರಿಗಳು ಭಾರತದ ಉಗ್ರರು ಇವರಿಗೆ ಸಕರ್ಾರ ಉಗ್ರಶಿಕ್ಷೆ ನೀಡಬೇಕೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ  ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಸೃಜನ ಸಂಘದ ಅಧ್ಯಕ್ಷೆ ಎಲ್.ಜಯಮ್ಮ, ಇನ್ನರ್ವೀಲ್ ಸಂಸ್ಥೆ ಅಧ್ಯಕ್ಷೆ ಭವಾನಿಜಯರಾಂ, ತೇಜಾವತಿನರೇಂದ್ರಬಾಬು, ಪುಷ್ಪಶಿವಣ್ಣ, ಚಂದ್ರಿಕಾಮೂತರ್ಿ, ಧರಣಿಲಕ್ಕಪ್ಪ, ಮಾಜಿ ಶಾಸಕ ಬಿ.ಲಕ್ಕಪ್ಪ, ನಿವೃತ್ತ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ವಿಜ್ಞಾನ ಸಂಘದ ರಾಮಕೃಷ್ಣಪ್ಪ,  ಸೇರಿದಂತೆ ಹಲವರಿದ್ದರು.
                         (ಸುದ್ದಿ 2)
ಜೆ.ಡಿ.ಯು.ವತಿಯಿಂದ ಅತ್ಯಾಚಾರ ಖಂಡಿಸಿ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಡಿ.31 : ದೆಹಲಿಯಲ್ಲಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಸಾವಿನಂತಹ ಘಟನೆಗಳು ದೇಶದಲ್ಲಿ ಪದೇ ಪದೇ ನಡೆಯುತ್ತಿದ್ದು ಕೇಂದ್ರ ಸಕರ್ಾರ ಮಹಿಳೆಯರಿಗೆ ರಕ್ಷಣೆಯನ್ನು ನೀಡುವುದರಲ್ಲಿ ವಿಫಲವಾಗಿದ ಎಂದು ತಾಲ್ಲೂಕು ಸಂಯುಕ್ತ ಜನತಾದಳ(ಜೆ.ಡಿ.ಯು) ಪ್ರತಿಭಟನೆ ನಡೆಸಿತು.
ಪಟ್ಟಣದ ನೆಹರು ಸರ್ಕಲ್ನಿಂದ ತಾಲ್ಲೂಕು ಕಛೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಶಿರಸ್ತೆದಾರ್ ಬೊಮ್ಮಯ್ಯರಿಗೆ ಮನವಿ ಪತ್ರ ಸಲ್ಲಿಸಿದರು.
ಇಂದು ಮಹಿಳೆಯರ ರಕ್ಷಣೆಯ ಬಗ್ಗೆ ಸಕಾರ ಭಾರತೀಯ ದಂಡ ಸಂಹಿತೆಯು ಕಲಂನನ್ನು ತಿದ್ದುಪಡಿ ಮಾಡಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಹಾಗೂ ಮರಣ ದಂಡನೆಯಂತಹ ಶಿಕ್ಷೆಯನ್ನು ತರಬೇಕೆಂದು ಒತ್ತಾಯಿಸಿದರು.
ತುಮಕೂರು ಜೆಡಿಯು ಅಧ್ಯಕ್ಷ ಕೆ.ಜಿ.ಎಲ್.ರವಿ, ತಾಲ್ಲೂಕು ಸಂಚಾಲಕ ಪ್ರಕಾಶ್ಯಾದವ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
                      ಕೃಷಿ, ಹೈನುಗಾರಿಕೆ ಒಂದೇ ನೊಗದ ಎರಡು ಎತ್ತುಗಳಿದ್ದಂತೆ
                                   
ಚಿಕ್ಕನಾಯಕನಹಳ್ಳಿ,ಡಿ.31 : ಕೃಷಿ ಮತ್ತು ಹೈನುಗಾರಿಕೆ ಒಂದೇ ನೊಗದ ಎರಡು ಎತ್ತುಗಳಿದ್ದಂತೆ,  ಇವರೆಡನ್ನು ಜೊತೆಯಲ್ಲಿ ತೆಗೆದುಕೊಂಡು ಹೋದರೆ ರೈತರ ಆಥರ್ಿಕ ಸ್ಥಿತಿ ಉತ್ತಮವಾಗುತ್ತದೆ ಎಂದು ಕೃಷಿ ತಜ್ಞ ಡಾ.ಶಶಿಕಾಂತ್ ಅಭಿಪ್ರಾಯಪಟ್ಟರು.
ಪಟ್ಟಣದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಜಾಗೃತಿ ಆಂದೋಲನ ಹಾಗೂ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಾವಯುವ ಕೃಷಿಯಲ್ಲಿ ಮಣ್ಣಿನ ಅಸ್ಥಿತ್ವವಿರುತ್ತದೆ, ರಾಸಾಯನಿಕಗಳನ್ನು ಹೆಚ್ಚು ಬಳೆಸಿದರೆ ಮಣ್ಣು ಈ ಅಸ್ಥಿತ್ವವನ್ನು ಕಳೆದುಕೊಳ್ಳದಂತೆ ಎಂದ ಅವರು, ಹೆಚ್ಚು ಜಮೀನು ಹೊಂದಿರುವ ರೈತರು ತಮ್ಮ ಕೃಷಿ ಜೊತೆಗೆ ಖುಷ್ಕಿಗೆ, ತೋಟಗಾರಿಕೆಗೆ, ಹೈನುಗಾರಿಕೆಗೆ ಹಾಗೂ ಇತ್ಯಾದಿ ಉಪಕಸುಬುಗಳಿಗೆ ಜಮೀನನ್ನು ಮೀಸಲಿಟ್ಟರೆ ಕೃಷಿಯೊಂದಿಗೆ ಉತ್ತಮ ಲಾಭ ಪಡೆಯಬಹುದಾಗಿ ಹಾಗೂ ಹೈನುಗಾರಕೆ ಕೃಷಿ ಮಾಡುವಾಗ ಸುಧಾರಿತ ಹೈನುಗಾರಿಕೆ ಮಾಡಲು ತಿಳಿಸಿದರು.
ಸಮಗ್ರ ಕೃಷಿ ಪದ್ದತಿ ಜೊತೆಗೆ ಎಲ್ಲಾ ಕೃಷಿಯನ್ನು ಅಳವಡಿಸಿಕೊಂಡು ಸಾವಯುವ ಕೃಷಿ ಮಾಡಲು ಹಾಗೂ ಕೃಷಿಯಲ್ಲಿ ಒಂದೇ ರೀತಿಯ ಬೆಳೆ ಬೆಳೆಯುವ ಬದಲು ಪರಿವರ್ತನಾ ಬೆಳೆ ಮಾಡಲು ತಿಳಿಸಿದರು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ ಉತ್ಪಾದನೆ ಹೆಚ್ಚಿಸಬಹುದು ಎಂದರು.
ದೇಶದಲ್ಲಿ ಕಾಡು ನಾಶವಾಗಿರುವುದರಿಂದ ಚರ್ಮರೋಗ ರಕ್ತದೊತ್ತಡ ದಂತಹ ಖಾಯಿಲೆಗಳು ಹೆಚ್ಚುತ್ತಿದೆ. ದೇಶದಲ್ಲಿ ಶೇ.12 ರಷ್ಟು ಮಾತ್ರ ಕಾಡಿರುವುದರಿಂದ ಮಳೆ ಕಡಿಮೇಯಾಗಿ ಕೃಷಿಗೆ ಹಿನ್ನೆಡಿಯಾಗುತ್ತಿದೆ. ಶೇ.32 ರಷ್ಟು ಜನಕ್ಕೆ ಅಸ್ತಮಾ ರೋಗವಿದೆ. ಕಾಡು ಕೃಷಿ ನಶಿಸಿರುವುದಿರಿಂದ ಜಮೀನು ಕೃಷಿ ನಶಿಸಲು ಕಾರಣವಾಗಿ ಪ್ರತಿ ರೈತರು ತಮ್ಮ ತೋಟಗಳಲ್ಲಿ 2 ರಿಂದ 3 ಜೇನು ಪೆಟ್ಟಿಗೆಗಳನ್ನು ಇಡುವ ಮೂಲಕ ಜೇನು ಕೃಷಿಗೆ ಹೆಚ್ಚು ಒತ್ತು ನೀಡಿ ಜೇನು ಸೇವಿಸುವುದರಿಮದ ಅನೇಕ ರೋಗಗಳು ಮಾಯವಾಗುತ್ತದೆ. ಪಟ್ಟಣಗಳು ಕಾಂಕ್ರಿಟ್ ಕಾಡುಗಳಾಗುತ್ತಿವೆ ಇದರಿಂದ ಮನುಷ್ಯ ಆರೋಗ್ಯ ಹದಗೆಡುತ್ತಿದೆ. ಸಮಗ್ರ ಕೃಷಿ ಪದ್ದತಿ ಅಳವಡಿಸಿಕೊಮಡು ರೈತರು ತೋಟಗಾರಿಕೆ ಹೈನುಗಾರಿಕೆ, ಕೋಳಿಸಾಕಾಣಿಕೆ, ಮೀನುಸಾಕಾಣಿಕೆ ಹಾಗೂ ತರಕಾರಿ ಜೊತೆಯಲ್ಲಿ ಸೊಪ್ಪು ಬೆಳೆಯಬೇಕೆಂದು ಸಲಹೆ ನೀಡಿದರು. ನಮ್ಮ ದೇಶದಲ್ಲಿ ಆಹಾರ ಪದ್ದತಿ ಸರಿ ಇಲ್ಲದೆ ವಿದೇಶಿ ಆಹಾರದ ದಾಸರಾಗುತ್ತಿರುವುದರಿಮದ ಇನ್ನು 5 ವರ್ಷಗಳಲ್ಲಿ ದೇಶದಲ್ಲಿ ಪ್ರತಿಯೊಂದು ಮನೆಗಳಲ್ಲಿ ರೋಗದ ಕೇಂದ್ರಗಳಾಗುವುದರಲ್ಲಿ ದೂರವಿಲ್ಲ ಆದ್ದರಿಂದ ಭಾರತದ ಆಹಾರ ಪದ್ದತಿಯನ್ನು ಅಳವಡಿಕೊಸಿಕೊಳ್ಳಬೇಕೆಂದು ತಿಳಿಸಿದರು.
ಜಿ.ಪಂ. ಸದಸ್ಯ ಲೋಹಿತಾಬಾಯಿ ಮಾತನಾಡಿ ನಗರ ಪ್ರದೇಶಗಳಲ್ಲಿ ಗ್ರಾಮೀಣ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ನಗರದಲ್ಲಿನ ಆಹಾರ ಪದ್ದತಿಯನ್ನು ಅಳವಡಿಕೊಳ್ಳುತ್ತಿರುವುದು ವಿಷಾದನೀಯ. ನಮ್ಮ ರೈತರು ಬೆಳೆದ ಬೆಳೆಗೆ ದೇಶದಲ್ಲಿ ಬೆಲೆ ಇಲ್ಲ. ವಿದೇಶಗಳಿಂದ ಆಮದು ಮಾಡಿಕೊಂಡ ನಗರ ಪ್ರದೇಶಗಳಲ್ಲಿ ಬಳಸುತ್ತಿರುವುದು ವಿಷಾದನೀಯ, ಸಕರ್ಾರ ಸಾವಯವ ಕೃಷಿಗೆ ಸಕರ್ಾರ ಹೆಚ್ಚು ಒತ್ತು ನೀಡುತ್ತಿದ. ಆದ್ದರಿಂದ ರೈತರು ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಗೊಬ್ಬರ ಹಾಕಿ ಬೆಳೆ ಬೆಳೆಯುವುದನ್ನು ರೂಡಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು
ಡಾ|| ಮಮತ ಮಾತನಾಡಿ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಬೆಳೆಯುವ ಉತ್ಕೃಷ್ಟ ದಜರ್ೆಯ ಆಹಾರವಾದ ಆರ್ಕ, ನವಣೆ ಬಡವರ ಆಹಾರ ಈಗ ಶ್ರೀಮಂತರ ಆಹಾರವಾಗುತ್ತಿದೆ. ಈ ಎರಡು ಆಹಾರದಲ್ಲಿ ಮನುಷ್ಯನಿಗೆ ಬೇಕಾದ ಇನ್ಸುಲಿನ್ ಉತ್ಪತ್ತಿಮಾಡುವ ಗುಣವಿದೆ. ಆರ್ಕದಲ್ಲಿ ರೋಗ ನಿರೋಧಕ ಅಂಶವಿದೆ ಎಂದರು.
ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರಾದ ಎನ್.ಜಿ.ಮಂಜುಳ, ನಿಂಗಮ್ಮ ರಾಮಯ್ಯ, ತಾ.ಪಂ. ಉಪಾಧ್ಯಕ್ಷ ಲತಾಕೇಶವಮೂತರ್ಿ, ಲತಾವಿಶ್ವೇಶ್ವರಯ್ಯ, ತೀರ್ಥಪುರ ಗ್ರಾ.ಪಂ.ಅಧ್ಯಕ್ಷೆ ಪದ್ಮಮ್ಮ, ಕೃಷಿ ಅಧಿಕಾರಿ ಕೃಷ್ಣಪ್ಪ, ಗೋಪಾಲನಹಳ್ಳಿ ರಘು, ನಿವೃತ್ತ ಕೃಷಿ ಅಧಿಕಾರಿ ಗಂಗಾಧರಪ್ಪ, ಮತ್ತಿತರರು ಹಾಜರಿದ್ದರು.
ಈ ಸಂದರ್ಭದಲ್ಲಿ ಆಧುನಿಕ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಸಾವಯವ ಕೃಷಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

                     
ಕುಪ್ಪೂರು ಗದ್ದಿಗೆ ಮಠದಲ್ಲಿ ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭ
ಚಿಕ್ಕನಾಯಕನಹಳ್ಳಿ,ಡಿ.31 : ಮನುಷ್ಯ ಚಾರಿತ್ರ್ಯ ಹೀನನಾಗದೇ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕೆಂದು ಹಾರನಹಳ್ಳಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಕಪ್ಪೂರು ಗದ್ದಿಗೆ ಮರುಳ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜನಜಾಗೃತಿ ಭಾವೈಕ್ಯ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ ಸಮಾಜದಲ್ಲಿ ಬೇಗ ಶ್ರೀಮಂತರಾಗಬೇಕೆಂಬ ಆಸೆಯಿಂದ  ಬಹುತೇಕರು ಕೆಟ್ಟ ಮಾರ್ಗದಲ್ಲಿ ಹಣ ಸಂಪಾದನೆಗಿಳಿದಿದ್ದಾರೆ. ಅನ್ಯ ಮಾರ್ಗದಲ್ಲಿ ಹಣ ಆಸ್ತಿ ಸಂಪಾದನೆಗೆ ಹೋದರೆ ಜೀವನದ ನೆಮ್ಮದಿ ಮರೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಾಜ-ಮಹಾರಾಜರ ಕಾಲದಲ್ಲಿ ಕಾವಿಧಾರಿಗಳಿಗೆ, ಸನ್ಯಾಸಿಗಳಿಗೆ ಹೆಚ್ಚಿನ ಮಹತ್ವವಿತ್ತು. ಆದರೆ ಇಂದು ಸನ್ಯಾಸಿಗಳ ಬಗ್ಗೆಯೂ ಅಪಸ್ವರ ಕೇಳಿ ಬರುತ್ತಿರುವುದು ದುದರ್ೆವವೆನಿಸಿದೆ. ಸನ್ಯಾಸಿಯೆಂದರೆ ತ್ಯಾಗದ ಸಂಕೇತ. ಮಠಾಧೀಶರುಗಳು ಹರಿಷಡ್ವರ್ಗಗಳನ್ನು ಜಯಿಸಿ ಸಾತ್ವಿಕ ಜೀವನ ನಡೆಸಬೇಕು ಎಂದರು.ದಿನ ಸಮಾಜದಲ್ಲಿ ದಿನನಿತ್ಯ ಅನ್ಯಾಯ ಮೋಸ-ಕ್ರೌರ್ಯಗಳು ಹೆಚ್ಚಾಗುತ್ತಿವೆ ಎಂದ ಅವರು ಈ ಬಗ್ಗೆ ಜನಜಾಗೃತಿ ಮೂಡಿಸಲು ಮಠಾಧೀಶರು ಮುಂದಾಗಬೇಕೆಂದರು. ತುಮಕೂರು ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ ಭಗವಂತನು ಸೃಷ್ಠಿಕರ್ತನೇ ಹೊರತು ಲಯ ಕರ್ತನಲ್ಲ. ಪ್ರಳಯಕ್ಕೆ ಭೀತಿ ಪಡುವುದನ್ನು ಬಿಟ್ಟು  ಕಾನೂನಿಗೆ ಭೀತಿ ಪಡಿ. ಕಾನೂನಿನ ಬಗ್ಗೆ ಹೆದರಿಕೆಯಿದ್ದರೆ ಸಮಾಜ ಸರಿದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ಇಂದು ಧರ್ಮವೂ ವ್ಯವಹಾರವಾಗುತ್ತಿದ್ದು, ಭಕ್ತಿ ಭಾವನೆಗಳು ವಾಣಿಜ್ಯೀಕರಣಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.ುಡಿಯೂರು ರಂಭಾಪುರಿ ಶಾಖಾ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ , ಶಿವಗಂಗೆಯ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಮಳಲಿ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಪವಾಡ ರಹಸ್ಯ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರಿಗೆ ಕುಪ್ಪೂರು ಮರುಳ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿವೃತ್ತ ಸಿಪಿಐ ಲೋಕೇಶ್ವರ್ ಶ್ರೀ ಕುಪ್ಪೂರೇಶ್ವರ ವಡಪುಗಳು ವಿಸಿಡಿ ಬಿಡುಗಡೆಗೊಳಿಸಿದರು.ುಪ್ಪೂರು ಈಶಾ ಮರುಳ ಸಿದ್ಧೇಶ ಭಜನಾಗೀತೆಗಳನ್ನು ಬಿಡುಗಡೆಮಾಡಲಾಯಿತು. ಮಾಜಿ ಶಾಸಕ ಎಸ್.ಪಿ. ಗಂಗಾಧರಪ್ಪ, ಬೆಂಗಳೂರಿನ ಉಮಾಶಂಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ದಯಾಶಂಕರ್ ನಿರೂಪಿಸಿದರು. ಕೋಟೆ ನಾಗರಾಜ್ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

             aPÀÌ£ÁAiÀÄPÀ£ÀºÀ½îAiÀÄ C¨sÁ«¥À ªÀw¬ÄAzÀ zɺÀ°AiÀÄ ¥ÁågÁªÉÄrPÀ¯ï 
             «zÁåyð¤ CvÁåZÁgÀPÉÆ̼ÀUÁV ¸ÁªÀ£ÀߦàzÀPÁÌV ªÉÆA§wÛ ¨É¼ÀV¹ 
             ±ÀæzÁÝAf° C¦ð¸À¯Á¬ÄvÀÄ. F ¸ÀAzÀ¨sÀðzÀ°è C¨sÁ«¥À vÁ.¥ÀæªÀÄÄSï 
            ZÉÃvÀ£ï¥Àæ¸Ázï, vÁ.¨sÁd¥À CzsÀåPÀë «Ä°Ö粪ÀtÚ, PÀgÀªÉà CzsÀåPÀë 
            ¹.n.UÀÄgÀĪÀÄÆwð, C¨sÁ«¥À PÁAiÀÄðzÀ²ð ¢°Ã¥ï, «zÁåyðUÀ¼ÀÄ ¨sÁUÀªÀ»¹zÀÝgÀÄ.

           
2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸದಸ್ಯರಿಗೆ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಡಿ.31 : ಚಿಕ್ಕನಾಯಕನಹಳ್ಳಿ ವಿಧಾನಸಭಾಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜೆ.ಡಿ.ಎಸ್ ಪಕ್ಷದ ವತಿಯಿಂದ 2ನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ಸದಸ್ಯರಿಗೆ ಶಾಸಕ ಸಿ.ಬಿ.ಸುರೇಶ್ಬಾಬು ಇದೇ ಜನವರಿ 1ರಂದು ಅಭಿನಂದನೆ ಸಲ್ಲಿಸಲಿದ್ದಾರೆ.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಅಭಿನಂದನಾ ಕಾರ್ಯಕರಮ ನಡೆಯಲಿದ್ದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಪ್ರೇಮ ಮಹಾಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯರು, ಶಿರಾ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯರು, ಪುರಸಭಾಧ್ಯಕ್ಷರು, ಪುರಸಭಾ ಸದಸ್ಯರು, ಸಂಘಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

Thursday, December 20, 2012



ಕೈಕೊಟ್ಟ ಪ್ರಿಯತಮನ ಮನೆ ಬಾಗಿಲಿನಲ್ಲಿ ಮಹಿಳೆಯ ಬಿಡಾರ
                                     
ಚಿಕ್ಕನಾಯಕನಹಳ್ಳಿ,ಡಿ.20 : ಮದುವೆಯಾಗಿದ್ದ ಮಹಿಳೆಯನ್ನು ತನ್ನ ಪ್ರೇಮ ಪಾಶಕ್ಕೆ ಸಿಲುಕಿಸಿದ ಯುವಕ 5ತಿಂಗಳ ಕಾಲ ಜೊತೆಯಲ್ಲಿ ಜೀವನ ಮಾಡಿ ನಂತರ ಪ್ರೇಯಸಿಗೆ ಕೈಕೊಟ್ಟು ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕುಪ್ಪೂರು ಗ್ರಾಮದಲ್ಲಿ ನಡೆದಿದೆ.
ಕುಪ್ಪೂರು ಗ್ರಾಮದ ಮಹೇಶ್ ಎಂಬ ವ್ಯಕ್ತಿ ಅದೇ ಗ್ರಾಮದ ನಾಗರಾಜುರವರ ಪತ್ನಿ ಮಮತರಾಣಿ ಎಂಬ ಮಹಿಳೆಯನ್ನು ಪ್ರೀತಿಸುತ್ತಿದ್ದೇನೆಂದು ನಂಬಿಸಿ, ಗಂಡನಿಂದ ದೂರವಾಗಿಸಿ ತನ್ನೊಡನೆ ಕಳೆದ 5ತಿಂಗಳ ಹಿಂದೆ ಕರೆದೊಯ್ದು ಬೆಂಗಳೂರು, ತುಮಕೂರಿನಲ್ಲಿ ಒಂದೇ ಮನೆಯಲ್ಲಿ ವಾಸಸಿ, ನಂತರ ತಿಪಟೂರಿನಲ್ಲಿ ಮನೆ ಮಾಡಿರುವುದಾಗಿ ನಂಬಿಸಿ ಕುಪ್ಪೂರು ಮಾರ್ಗವಾಗಿ ತಿಪಟೂರಿಗೆ ಹೋಗೋಣವೆಂದು ನಂಬಿಸಿ ಮಮತಾಳನ್ನು ಕುಪ್ಪೂರಿನಲ್ಲಿ ಬಿಟ್ಟು ಕೈಕೊಟ್ಟಿರುವುದಾಗಿ ಮಮತ ದೂರಿದ್ದಾರೆ. 
ಕುಪ್ಪೂರಿನ ಗ್ರಾಮದವರಾದ ಮಹೇಶ ಮತ್ತು ಮಮತಾ ಇಬ್ಬರು ಮೊದಲಿನಿಂದಲೂ ಪರಿಚಯಸ್ಥರಾಗಿದ್ದು ಮಮತ ನಾಗರಾಜುವಿನೊಂದಿಗೆ ಮದುವೆಯಾಗಿ ಒಂದು ಮಗು ಆದ ನಂತರ ಆರೋಪಿ ಮಹೇಶ ಮಮತಾಳನ್ನು ಪ್ರೇಮಿಸಿರುವುದಾಗಿ ಪುಸುಲಾಯಿಸಿ ಗಂಡ ಮತ್ತು ಮಗುವನ್ನು ಬಿಟ್ಟು ತನ್ನ ಜೊತೆಯಲ್ಲಿ ಸಂಸಾರ ನಡೆಸುವಂತೆ ಒತ್ತಾಯಿಸುತ್ತಿದ್ದರು. ಮಹೇಶನ ಈ ನಡವಳಿಕೆಯನ್ನು ನಂಬಿದ ಮಮತಾ ತನ್ನ ಮಗು ಮತ್ತು ಗಂಡನನ್ನು ಬಿಟ್ಟು ಮಹೇಶನ ಜೊತೆ ಓಡಿ ಹೋಗಿದ್ದಳು. ಈ ಮಧ್ಯೆ ಐದು ತಿಂಗಳ ನಂತರ ಮಹೇಶನ ನಿಜ ಬಣ್ಣ ಬಯಲಾಗಿ,  ತನಗೆ ಮೋಸ ಮಾಡುತ್ತಿರುವುದು ಮಮತನಿಗೆ ಅರಿವಾಗಿ  ಶಾಶ್ವತವಾಗಿ ಒಂದೆಡೆ ನೆಲಸುವಂತೆ ಒತ್ತಾಯಿಸಿದಳು. ಇದರಿಂದ ವಿಚಲಿತನಾದ ಮಹೇಶ ಮಮತಾಗೆ ಇಲ್ಲದ ಸಬೂಬುಗಳನ್ನು ಹೇಳಿ ಕುಪ್ಪೂರಿಗೆ ತಂದು ಬಿಟ್ಟು ಪರಾರಿಯಾಗಿದ್ದಾನೆ.
ಈ ಘಟನೆಯಿಂದ ನೆಲೆ ಇಲ್ಲದಂತಾದ ಮಮತ ಕುಪ್ಪೂರಿನಲ್ಲೇ ಇರುವ ಮಹೇಶನ ಮನೆಯ ಬಾಗಿಲಿನಲ್ಲೇ ಬಿಡಾರ ಹೂಡಿದ್ದಾಳೆ.

ಆರಂಭವಾದ ಮುಕ್ತಿಗಾಗಿ ಒಂದು ಲಕ್ಷ ಮೃಣ್ಮಯ(ಹುತ್ತದ ಮಣ್ಣಿನ) ಪೂಜೆ
                                         



                                       
            
ಚಿಕ್ಕನಾಯಕನಹಳ್ಳಿ,ಡಿ.19 : ಕುಪ್ಪೂರಿನ ಶ್ರೀ ಮರುಳಸಿದ್ದೇಶ್ವರ ಗದ್ದಿಗೆ ಮಠದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪ್ರಳಯ ಬೀತಿಯ ಮುಕ್ತಿಗಾಗಿ ಒಂದು ಲಕ್ಷ ಮೃಣ್ಮಯ(ಹುತ್ತದ ಮಣ್ಣಿನ) ಪೂಜೆಯನ್ನು ಪೀಠಧ್ಯಕ್ಷರಾದ ಡಾ.ಯತೀಶ್ವರ ಶೀವಾಚಾರ್ಯಸ್ವಾಮಿ ಆರಂಭಿಸಿದರು. 
ಮಠದಲ್ಲಿ ಶ್ರೀ ಮರುಳಸಿದ್ದೇಶ್ವರರಿಗೆ ವಿಶೇಷ ಪೂಜೆಯೊಂದಿಗೆ ಹೋಮ, ಹವನ ನೆರವೇರಿಸಲಾಯಿತು.. ಬೆಳಗ್ಗೆ ಮರುಳಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಕ್ಷಿರಾಭಿಷೇಕ, ಸಹಸ್ರಬಿಲ್ವಾರ್ಚನೆ, ಮಹಾಮಂಗಳಾರತಿ ನಡೆಯಿತು.
ನಂತರ ಮೃಣ್ಮಯ(ಹುತ್ತದ ಮಣ್ಣಿನ) ಶಿವಲಿಂಗಗಳಿಗೆ-ಲಕ್ಷ ಬಿಲ್ವಾರ್ಚನೆ, ಶತರುದ್ರಯಾಗ ಮತ್ತು ಶಿವಪಂಚಾಕ್ಷರಿ ಜಪಯಜ್ಞವು  ನೆರವೇರಿತು.
ಈ ಶಾಸಕ ಸಿ.ಬಿ.ಸುರೇಶ್ಬಾಬು ಹಾಗೂ ಭಕ್ತಾಧಿಗಳು ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು. 

ಉಚಿತ ಮಧುಮೇಹ(ಡಯಾಬಿಟಿಸ್) ರೋಗ ತಪಾಸಣೆ, ಚಿಕಿತ್ಸೆ ಮತ್ತು ಸಂವಾದ ಶಿಬಿರ
ಚಿಕ್ಕನಾಯಕನಹಳ್ಳಿ,ಡಿ.19 : ಉಚಿತ ಮಧುಮೇಹ(ಡಯಾಬಿಟಿಸ್) ರೋಗ ತಪಾಸಣೆ, ಚಿಕಿತ್ಸೆ ಮತ್ತು ಸಂವಾದ ಶಿಬಿರ, ಸೀಳುತುಟಿ ಮತ್ತು ಸೀಳು ಅಂಗಳ ಪೀಡಿತರನ್ನು ಗುರುತಿಸುವಿಕೆ ಹಾಗೂ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಇದೇ 23ರ ಭಾನುವಾರ ಏರ್ಪಡಿಸಲಾಗಿದೆ ಎಂದು ರೋಟರಿ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ.
ಶಿಬಿರವನ್ನು ರೋಟರಿ ಹಾಗೂ ಸಕರ್ಾರಿ ಸಾರ್ವಜನಿಕ ಆಸ್ಪತ್ರೆ ವತಿಯಿಂದ ರೋಟರಿ ಬಾಲಭವನದಲ್ಲಿ ಬೆಳಗ್ಗೆ 8ಕ್ಕೆ ಹಮ್ಮಿಕೊಂಡಿದ್ದು ಡಯಾಬಿಟಿಸ್ ರೋಗತಜ್ಞರಾದ ಬೆಂಗಳೂರಿನ ಡಾ.ಪುಟ್ಟಶಂಕರಪ್ಪ, ಮೈಸೂರಿನ ಸಿ.ಎಚ್.ಲಕ್ಷ್ಮೀನಾರಾಯಣ ಮತ್ತು ತುಮಕೂರು ಸಿದ್ದಾರ್ಥ ಮೆಡಿಕಲ್ನ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಬಿ.ಗಿರೀಶ್ರವರಿಂದ ತಪಾಸಣೆ ಏರ್ಪಡಿಸಲಾಗಿದೆ.
ಉಚಿತ ಹೃದಯರೋಗ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನು ಇದೇ 23ರ ಬೆಳಗ್ಗೆ 9ಕ್ಕೆ ಏರ್ಪಡಿಸಲಾಗಿದೆ.
ಬ್ರಹ್ಮವಿದ್ಯಾಸಮಾಜದಲ್ಲಿ ಶಿಬಿರ ಹಮ್ಮಿಕೊಂಡಿದ್ದು ಶಿಬಿರದಲ್ಲಿ ಬಿ.ಪಿ, ಇಸಿಜಿ, ಇಸಿಎಚ್ಓ ಸ್ಕ್ಯಾನಿಂಗ್ಗಳನ್ನು ಅಗತ್ಯವಿದ್ದವರಿಗೆ ಉಚಿತವಾಗಿ ನಡೆಸಲಾಗುವುದು. 

ಸಮಗ್ರ ಕೃಷಿ ಕ್ಷೇತ್ರೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಡಿ.20 : ಉಚಿತ ಬೀಜ, ಗೊಬ್ಬರದ ನೆರವು ನೀಡುವುದರ ಜೊತೆಗೆ ಮಾರುಕಟ್ಟೆ ಬಗ್ಗೆ ತರಬೇತಿ ನೀಡುವುರದ ಮೂಲಕ, ಪರಿಷ್ಕರಣೆಗೆ ಅಗತ್ಯವಾದ ಯಂತ್ರೋಪಕರಣ ಒದಗಿಸಿ ಕೊಡುವ ಪ್ರಯತ್ನ ಮಾಡಿದರೆ, ರೈತ ಬೆಳೆಯುವುದನ್ನು ಹೆಚ್ಚಿಸುತ್ತಾನೆ ಎಂದು ಕೃಷಿ ಸಲಹಾ ಸೇವೆಯ ಯೋಜನಾ ಸಂಯೋಜಕ ಜಿ.ಕೆ.ವಿ.ಕೆ. ಬೆಂಗಳೂರಿನ ಡಾ ಈಶ್ವರಪ್ಪ ಕರೆ ನೀಡಿದರು.
ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ಕೃಷಿ ಸಲಹಾ ಸೇವೆ ವತಿಯಿಂದ ನಡೆದ ಹಾರಕ ಮತ್ತು ಸಮಗ್ರ ಕೃಷಿ ಕ್ಷೇತ್ರೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಕಡಿಮೆ ನೀರುಬಳಸಿ ಬೆಳೆಯಬಹುದಾದಂತಹ ಹಾರಕ ಬೆಳೆಯನ್ನು ಗೋಪಾಲನಹಳ್ಳಿಯ 20 ಯುವಕರು 25 ಎಕರೆ ಪ್ರದೇಶದಲ್ಲಿ ಬೆಳೆದಿದ್ದು ಇವರಿಗೆ ಆತ್ಮಸ್ಥೈರ್ಯ ನೀಡುವಲ್ಲಿ ಎಲ್ಲರು ಮುಂದಾಗಬೇಕು ಎಂದರು.
ಜೆಕೆವಿಕೆ ಸಮಾಲೋಚಕ ಡಾ.ಯಲ್ಲಪ್ಪ ಮಾತನಾಡಿ ಗೋಪಾಲನಹಳ್ಳಿ ಯುವಕರ ಉತ್ಸಾಹ ಮೆಚ್ಚತಕ್ಕಂತದ್ದು. ಇತರೆ ಹಳ್ಳಿಗಳೂ ಇದರ ಸದುಪಯೋಗ ಪಡಿಸಿಕೊಂಡು ಕಣ್ಮರೆಯಾಗುತ್ತಿರುವ ಕಿರುಧಾನ್ಯಗಳನ್ನು ಉಳಿಸೋಣ ಎಂದರು. 
ಸಹ ಸಂಶೋಧನಾ ನಿದರ್ೇಶಕರಾದ ಡಾ. ನೂತನ್ ಮಾತನಾಡಿ ಹಾರಕ ಪರಿಷ್ಕರಣೆ ಕಷ್ಟ ಆದರೂ ಅಗತ್ಯ ಯಂತ್ರೋಪಕರಣಗಳು ಸೇಲಂನಲ್ಲಿ ಲಭ್ಯವಿದ್ದು ನಮ್ಮಲ್ಲಿಯೂ ಈ ಯಂತ್ರಗಳ ಆಗಮನವಾದರೆ ಬೆಳೆಯುವವರ ಸಂಖ್ಯೆ ಹೆಚ್ಚಿ ತಿನ್ನುವವರ ಸಂಖ್ಯೆಯೂ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯುತ್ತಿದೆ ಎಂದರು.
ಹಾಸನ ಎಫ್. ಎಮ್. ರೇಡಿಯೋದ ಕೃಷಿ ಕಾರ್ಯಕ್ರಮಗಳ ನಿರೂಪಕರಾದ, ಬರಹಕಾರ ಡಾ.ವಿಜಯ ಅಂಗಡಿಯವರು ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವುದು. ಬಳಸುವುದು ಹೆಚ್ಚಾದಾಗ ಉತ್ತಮ ಆರೋಗ್ಯವಿರುವ ಸಾಧ್ಯ ರೈತರು ದುಶ್ಟಟಗಳಿಂದ ದೂರವಾಗಿ ಸಮಗ್ರ ಕೃಷಿ ಮೂಲಕ ಮಿತವ್ಯಯದಲ್ಲಿ ಸುಖಜೀವನ ನಡೆಸಬಹಹುದು ಎಂದ ಅವರು ನಾವು ತಿನ್ನುವುದಕ್ಕಿಂತ ಏನನ್ನು ತಿನ್ನುತ್ತೇವೆ ಎನ್ನುವುದು ಮುಖ್ಯ ಆ ನಿಟ್ಟಿನಲ್ಲಿ ಗೋಪಾಲನಹಳ್ಳಿ ಜನತೆ ಇತರೆ ಹಳ್ಳಿಗಳಿಗೆ ಮಾದರಿ ಈ ಕರುಧಾನ್ಯ ಹಾರಕ ರಾಜ್ಯದಾದ್ಯಂತ ವಿಸ್ತರಿಸಿದರೆ ಮದುವೇಹದಂತಹ ರೋಗ ಹತೋಟಿಗೆ ಬರುತ್ತದೆ. ಎಂದರು.  
ಜಿ.ಕೆ.ಯು.ಕೆಯ ಪ್ರೊ.ಕೃಷ್ಣಪ್ಪ ಮಾತನಾಡಿ 3000 ವರ್ಷಗಳ ಇತಿಹಾಸವಿರುವ                                                                         ಈ ಹಾರಕ ಮರಳಿ ಬೆಳೆಯಲು  ಹೆಚ್ಚುತ್ತಿರುವ ರೋಗಗಳೂ ಕಾರಣವಾಗಿದ್ದು, ಈ ರೋಗಗಳ ನಿಯಂತ್ರಣಕ್ಕೆ ಕಿರುಧಾನ್ಯ  ಸೇವನೆ ಸಹಕಾರಿ ಎಂದರು. ಜಿ.ಕೆ. ರಘು ಹಾರಕ ಬೆಳೆದವರ  ಮುಂದಿನ ಉದ್ದೇಶವನ್ನು  ಹಂಚಿಕೊಂಡರು. ಜಿಕೆ.ವಿ.ಕೆ ಯ ಡಾ  ಮಮತರವರು ಹಾರಕದಿಂದ ವಿವಿಧ ತಿನಿಸುಗಳಾದ ರೋಟ್ಟಿ, ದೋಸೆ, ಇಡ್ಲಿ. ಮೊಸರನ್ನ, ಚಿತ್ನಾನ, ಪಲಾವು ಹೀಗೆ ವೈವಿದ್ಯಮಯವಾದ ತಿನಿಸುಗಳನ್ನು ಹೇಗೆ ಮಾಡಬಹುದೆಂದು ಮಾಹಿತಿನೀಡಿದರು. 
ಕಾರ್ಯಕ್ರಮದಲ್ಲಿ ತಿಪಟೂರಿನ ಗುರುಕುಲ ಸಿ.ಇ.ಒ ಹರಿಪ್ರಸಾದ್, ಸಹಾಯಕ ಕೃಷಿ ನಿದರ್ೇಶಕರಾದ (ಎ.ಡಿ.ಎ.) ಕೃಷ್ಣಪ್ಪ,  ಶಿವಣ್ಣ, ನಾಗರಾಜು,ಎನ್. ಸಿ. ತುಮಕೂರು. ಅಶೋಕ್ಕುಮಾರ್. ಜೆ.ಎಸ್.ವೈ.ಎಸ್. ಸಿ.ಎನ್.ಹಳ್ಳಿ ಭಾಗವಹಿಸಿದ್ದರು.  
ಸಮಗ್ರ ಕೃಷಿಯ ಪ್ರಯೋಜನಪಡೆದ ರೈತ ನಿರಂಜನವರು ಬೆಳೆದ ಟಮೋಟ, ಬೆಂಡೆ. ಬದನೆ, ಮೆಣಸಿನಗಿಡ. ವೀಕ್ಷಿಸಿದ ರೈತರು ಹಸು. ಕುರಿ. ಕೋಳಿ ಮೊಲ ಎರೆಹುಳು ತೊಟ್ಟಿ ವೀಕ್ಷಿಸಿದರು. ನಿರಂಜನ್ರವರು ಸ್ಪರಚಿತ ಭಜನೆ ಹಾಡಿದರು. ಈ ಕ್ಷೇತ್ತೋತ್ಪವದ ಆಕರ್ಷಣೆ ಜಿ.ಬಿ. ಆತ್ಮಾನಂದರವರ ಚಿತ್ರಕಲಾ ಕುಟೀರ ನೋಡುಗರ ಮನಸೆಳೆಯಿತು.
ಡಾ. ಸೋಮಶೇಖರ್. ವಂದಿಸಿದರು. ನಿರಂಜನ್. ಸಮಗ್ರ ಕೃಷಿಯ ಬಗ್ಗೆ ಭಜನೆ ಮೂಲಕ ನಿರೂಪಿಸಿದರು. ಡಾ. ಗೋಪಿನಾಥ್. ನಿರೂಪಿಸಿ ಸ್ವಾಗತಿಸಿದರು. ಪೂಜಾ, ಸ್ವಾತಿ. ಪ್ರಾಥರ್ಿಸಿದರು.

ಹೊಲಿಗೆ ಯಂತ್ರದಲ್ಲಿ ಅವ್ಯವಹಾರ, ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ಆರೋಪ
ಚಿಕ್ಕನಾಯಕನಹಳ್ಳಿ,ಡಿ.20 :  ಪರಿಶಿಷ್ಟ ಜಾತಿ-ಪಂಗಡದ ಶೇ.22ರ ಅನುದಾನದಡಿ ಪುರಸಭೆ ಖರೀದಿಸಿರುವ ಹೊಲಿಗೆಯಂತ್ರದಲ್ಲಿ ಅವ್ಯವಹಾರ ನಡೆದಿದೆ ಎ ಂದು ಪುರಸಭಾ ಸದಸ್ಯೆ ರೇಣುಕಾ ಗುರುಮೂತರ್ಿ ಆರೋಪಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ  ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು 3000 ಬೆಲೆಬಾಳುವ ಹೊಲಿಗೆಯಂತ್ರವನ್ನು 6950 ರೂ.ಮೊತ್ತದ ಅಧಿಕ ಬೆಲೆಗೆ ಖರೀದಿಸಿದ್ದು, 6.5 ಲಕ್ಷ ರೂ. ಬಿಲ್ ಪಾವತಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಜಿಲ್ಲಾಧಿಕಾರಿಗಳು ತಾತ್ಕಾಲಿಕ ತಡೆ ನೀಡಿ ಹೊಲೆಗೆಯಂತ್ರ, ಪಾವತಿಸಿರುವ ಬಿಲ್ ಅನ್ನು ಪರಿಶೀಲಿಸಿ ನಂತರ ವಿತರಿಸಲು ಸೂಚಿಸಿದ್ದಾರೆ. ಆದರೆ ಹಾಲಿ ಖರೀದಿಸಿರುವ ಹೊಲಿಗೆಯಂತ್ರಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ದೂರಿದರು.
ಸದಸ್ಯ ಮಹೇಶ್ ಮಾತನಾಡಿ ಪಟ್ಟಣದ ವೆಂಕಣ್ಣನ ಕಟ್ಟೆಯಲ್ಲಿ 13 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನವನ ನಿಮರ್ಿಸಲು  ಭೂ ಸೇನಾ ನಿಗಮಕ್ಕೆ ಗುತ್ತಿಗೆ ನೀಡಲಾಗಿದ್ದು, ಕಳೆದ ಎರಡು ವರ್ಷಗಳಿಂದ ಉದ್ಯಾನವನ ಕಾಮಗಾರಿ ವಿಳಂಬ ಗತಿಯಲ್ಲಿ ಸಾಗುತ್ತಿದೆ ಎಂದುಆರೋಪಿಸಿದರು.
  ಮಟನ್ ಮಾಕರ್ೆಟ್ನಲ್ಲಿ ಮೂರು ವರ್ಷಗಳ ಹಿಂದೆ 8 ಮಳಿಗೆಗಳನ್ನು ನಿಮರ್ಿಸಿದ್ದು, ಮಳಿಗೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿಲ್ಲ. ಈ ಕಾರಣದಿಂದ ಯಾರು ಬಾಡಿಗೆಗೆ ಬರುತ್ತಿಲ್ಲ. ಸೌಲಭ್ಯ ಕಲ್ಪಿಸಲು ವಿಫಲರಾದ ಎಂಜನಿಯರ್ ಅವರಿಂದ ಬಾಡಿಗೆ ವಸೂಲು ಮಾಡುವಂತೆ ಸದಸ್ಯ ಮಹೇಶ್ ಆಗ್ರಹಿಸಿದರು.
ಸದಸ್ಯ ಸಿ.ಎಲ್ ದೊಡ್ಡಯ್ಯ ಪಟ್ಟಣದ 19ನೇ ವಾಡರ್ಿನಲ್ಲಿ 7.5 ಲಕ್ಷ ರೂ. ವೆಚ್ಚದಲ್ಲಿ ನಿಮರ್ಿಸಿರುವ ಶೌಚಾಲಯ ಇದುವರೆಗೂ ಉದ್ಘಾಟನೆಯಾಗದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕ ಉಪಯೋಗಕ್ಕೆ ಶೌಚಾಲಯ ಬೇಡವೇ ಎಂದು ಪ್ರಶ್ನಿಸಿದರು.
ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಐಡಿಎಸ್ಎಂಟಿ ಹಾಗೂ ಪುರಸಭೆ ವತಿಯಿಂದ ನಿಮರ್ಿಸಿರುವ ಮಳಿಗೆಗಳನ್ನು ಹರಾಜಿನಲ್ಲಿ  ಕೂಗಿ ತೆಗೆದುಕೊಂಡವರು ಹೆಚ್ಚಿನ ಬಾಡಿಗೆ ಹಾಗೂ ಗುಡ್ವಿಲ್ ಪಡೆದು ಬೇರೆಯವರಿಗೆ ಬಾಡಿಗೆ ನೀಡಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸದಸ್ಯ ಸಿ.ಡಿ.ಚಂದ್ರಶೇಖರ್ ಒತ್ತಾಯಿಸಿದರು.
ಪುರಸಭಾಧ್ಯಕ್ಷರು ವಾಡರ್್ಗಳಿಗೆ ಸರಿಯಾಗಿ ಭೇಟಿ ನೀಡುತ್ತಿಲ್ಲ. ಇದರಿಂದ ಕಸವಿಲೇವಾರಿ ಸರಿಯಾಗಿ ಆಗುತ್ತಿಲ್ಲ ಎಂದು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ ಪ್ರತಿ ದಿನ ಮಂಜಾನೆ 5ಕ್ಕೆ ಪುರಸಭೆ ಬಳಿ ಬಂದು ಕಸಗುಡಿಸುವವರನ್ನು ವಾಡರ್್ಗಳಿಗೆ ಕಳುಹಿಸುತ್ತಿರುವುದಾಗಿ ಸಮಜಾಯಿಷಿ ನೀಡಿದರು.ಕಸಗುಡಿಸುವ ಆಟೋಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪದೇ ಪದೇ ಕೆಟ್ಟು ನಿಲ್ಲುತ್ತಿರುವ ಕಸವಿಲೇವಾರಿ ವಾಹನಗಳಿಂದಾಗಿ ಪಟ್ಟಣದ ಎಲ್ಲಂದರಲ್ಲಿ ಕಸದ ರಾಶಿಗಳು ಬಿದ್ದಿವೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪುರಸಭೆ ಉಪಾಧ್ಯಕ್ಷೆ ಗಾಯತ್ರಿ ಪುಟ್ಟಣ್ಣ ಮುಖ್ಯಾಧಿಕಾರಿ  ವೆಂಕಟೇಶ್ ಶೆಟ್ಟಿ, ರಂಗಸ್ವಾಮಯ್ಯ, ಸಿಎಲ್.ದೊಡ್ಡಯ್ಯ, ಸಿ.ಎಸ್.ರಮೇಶ್, ಮಿಲಿಟರಿ ಶಿವಣ್ಣ, ರುಕ್ಮಿಣಮ್ಮ , ಶಾರದಮ್ಮ, ಸಿ.ಎಸ್.ರಾಜಣ್ಣ, ಎಂ.ಎನ್.ಸುರೇಶ್ ಮತ್ತಿತರ ಸದಸ್ಯರು ಹಾಗೂ ಅಧಿಕಾರಿವರ್ಗದವರು ಹಾಜರಿದ್ದರು.


ಹುರುಳಿ ಬೆಳೆಗೆ ಬೆಳೆ ವಿಮೆ ಮಾಡಿಸಲು ಅವಕಾಶ
ಚಿಕ್ಕನಾಯಕನಹಳ್ಳಿ,ಡಿ.20 : ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹಿಂಗಾಮಿಗೆ ಕಸಬಾ, ಹುಳಿಯಾರು ,ಮತ್ತು ಹಂದನಕೆರೆ ಹೋಬಳಿಗಳಲ್ಲಿ ಹುರುಳಿ ಬೆಳೆಗೆ ಬೆಳೆ ವಿಮೆ ಮಾಡಿಸಲು ಅವಕಾಶವಿರುತ್ತದೆ ಎಂದು ಸಹಾಯಕ ಕೃಷಿ ನಿದರ್ೇಶಕರು ತಿಳಿಸಿದ್ದಾರೆ.
 ಬೇಸಿಗೆ ಹಂಗಾಮಿಗೆ  ಹುಳಿಯಾರು ಹೋಬಳಿ ದಸೂಡಿ ಗ್ರಾಮ ಪಂಚಾಯಿತಿ ಮತ್ತು ಹೋಯ್ಸಲಕಟ್ಟೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಭತ್ತದ ಬೆಳೆಗೆ ಬೆಳೆವಿಮೆ ಮಾಡಿಸಲು  ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Friday, December 14, 2012



ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಪ್ರತಿಭಾ ಕಾರಂಜಿ  ಕಾರ್ಯಕ್ರಮ ಉತ್ತಮ ವೇದಿಕೆ
                             
ಚಿಕ್ಕನಾಯಕನಹಳ್ಳಿ,ಡಿ.14 : ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರ ಹೊಮ್ಮಿಸಲು ಶಿಕ್ಷಣ ಇಲಾಖೆ ಆಯೋಜಿಸಿರುವ ಪ್ರತಿಭಾ ಕಾರಂಜಿ ಸ್ಪಧರ್ಾ ಕಾರ್ಯಕ್ರಮವು ಉತ್ತಮ ವೇದಿಕೆಯಾಗಿದ್ದು, ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ  ಸಾಂಸ್ಕೃತಿಕ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಳ್ಳಬೇಕು ಎಂದು ಬಿ.ಇ.ಓ ಸಾ.ಚಿ.ನಾಗೇಶ್ ತಿಳಿಸಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲೆ ಆವರಣದಲ್ಲಿ ನಡೆದ ತಾಲ್ಲೂಕು ಮಟ್ದದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಯಾವುದೇ ರೀತಿಯ ತಾರತಮ್ಯ ಮಾಡದಂತೆ ತೀಪರ್ುಗಾರರು ಉತ್ತಮ ರೀತಿಯ ಫಲಿತಾಂಶ ನೀಡಬೇಕು ಎಂದರು. ಈ ತಾಲ್ಲೂಕು ಮಟ್ಟದ ಕಾರ್ಯಕ್ರಮದಲ್ಲಿ ಯಶಸ್ವಿಯಾಗುವ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿಯೂ ಉತ್ತಮ ರೀತಿಯ ಪ್ರದರ್ಶನ ನೀಡುವಂತೆ ಹೆಚ್ಚಿನ ತರಬೇತಿಯನ್ನು ಶಿಕ್ಷಕರು ನೀಡಬೇಕೆಂದರು.
 ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ ಮಾತನಾಡಿ  ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ, ಆ ಪ್ರತಿಭೆ ಹೊರ ತರಲು ಶಿಕ್ಷಕರೊಂದಿಗೆ ಪೋಷಕರು ಮುಂದಾಗಬೇಕು ಎಂದರು.
ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ ಮಾತನಾಡಿ ಮಕ್ಕಳು ಓದುವುದರ ಜೊತೆಗೆ ಇತರೆ ಸ್ಪಧರ್ೆಗಳಲ್ಲಿ ಭಾಗವಹಿಸುವುದು ಮಕ್ಕಳ ಮುಂದಿನ ಭವಿಷ್ಯಕ್ಕೆ ಸಹಾಯವಾಗಲಿದೆ ಎಂದರಲ್ಲದೆ, ಹೋಬಳಿ ಮಟ್ಟದಿಂದ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದು ಮುಂದಿನ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವಂತೆ ಮಕ್ಕಳಿಗೆ ಹಾರೈಸಿದರು.
 ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ ಮಾತನಾಡಿ ಸಕರ್ಾರ ಹಮ್ಮಿಕೊಂಡಿರುವ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಪಠ್ಯೇತರ ಪಾಠದೊಂದಿಗೆ ಸಾಹಿತ್ಯ, ಕಲೆ, ಕ್ರೀಡೆ ಇತ್ಯಾದಿ ಸ್ಪಧರ್ಾತ್ಮಕ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸ ಬೇಕು  ಎಂದರು.
ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಮಾತನಾಡಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯೂ ತಾಲ್ಲೂಕಿನಲ್ಲಿ ನಡೆಯಬೇಕು ಅದಕ್ಕೆ ನಮ್ಮೆಲ್ಲರ ಸಹಕಾರವಿದೆ ಎಂದರು.
ಸಮಾರಂಭದಲ್ಲಿ ತಾ.ಪ್ರೌ.ಶಾ.ಮು.ಶ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ,  ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಡಿ.ನಾಗರಾಜು, ಕಾರ್ಯದಶರ್ಿ ರಾಜಶೇಖರ್, ದೈಹಿಕ ಶಿಕ್ಷಣಾಧಿಕಾರಿ ನರಸಿಂಹಮೂತರ್ಿ, ತಾ.ಪ್ರತಿಭಾ ಕಾರಂಜಿ ಕಾರ್ಯಕ್ರಮದ ನೋಡಲ್ ಅಧಿಕಾರಿ ಮೂತರ್ಿ, ಮುಂತಾದವರಿದ್ದರು.


ಕಂದಿಕೆರೆ ಸಾಹಿತ್ಯ ಸಮ್ಮೇಳನದಲ್ಲಿ ಅಸ್ಪೃಶ್ಯತೆ ಆಚರಣೆ: ಕಪ್ಪುಬಾವುಟ ಪ್ರದರ್ಶನ ಆರೋಪ
ಚಿಕ್ಕನಾಯಕನಹಳ್ಳಿ,ಡಿ.14 : ಕಂದಿಕೆರೆಯಲ್ಲಿ ನಡೆಯುತ್ತಿರುವ ಹೋಬಳಿ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನದ ಸಂಘಟಕರು ಅಸೃಶ್ಯತೆ ಆಚರಣೆ ಮಾಡುತ್ತಿದ್ದಾರೆಂದು ಆರೋಪಿಸಿ ಸಮ್ಮೇಳನದಲ್ಲಿ ಕಪ್ಪು ಬಾವುಟ ಪ್ರದರ್ಶನ ಹಾಗೂ ಪ್ರತಿಭಟನೆ ನಡೆಸುವುದಾಗಿ ಕಂದಿಕೆರೆ ಗ್ರಾ.ಪಂ.ಉಪಾಧ್ಯಕ್ಷ ಸಾದರಹಳ್ಳಿ ಜಯಣ್ಣ ಆರೋಪಿಸಿದ್ದಾರೆ.
ತಾಲ್ಲೂಕು ಕಂದಿಕೆರೆ ಗ್ರಾ.ಪಂ.ಉಪಾಧ್ಯಕ್ಷ ಹಾಗೂ ಮಾದಿಗ ದಂಡೋರ ಸಮಿತಿಯ ಮುಖಂಡನಾದ ನನ್ನನ್ನು ಉದ್ದೇಶ ಪೂರ್ವಕವಾಗಿ ಸಮ್ಮೇಳನಕ್ಕೆ ಆಹ್ವಾನಿಸದೆ ಅಸ್ಪೃಶ್ಯತೆ  ಆಚರಿಸುತ್ತಿದ್ದಾರೆ ಎಂದರಲ್ಲದೆ ನಮ್ಮ ಪಂಚಾಯ್ತಿಯ ಉಳಿದ ಎಲ್ಲರನ್ನು ಸಮ್ಮೇಳನಕ್ಕೆ ಆಹ್ವಾನಿಸಿ ಪತ್ರಿಕೆಗೆ ಹೆಸರು ಹಾಕಿಸಿದ್ದಾರೆ ನಾನು ಅಸ್ಪೃಶ್ಯ ಎಂಬ ಕಾರಣಕ್ಕೆ ನನ್ನ ಹೆಸರನ್ನು ಸಮ್ಮೇಳನದ ಆಹ್ವಾನ ಪತ್ರಿಕೆಗೆ ಹಾಕಿಸಿಲ್ಲ ಈ ಬಗ್ಗೆ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸುತ್ತಿರುವುದಲ್ಲದೆ ಸಮ್ಮೇಳನದ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದಶರ್ಿಸಿ ಪ್ರತಿಭಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, December 13, 2012


ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಸಂಚಾರಿ ವಾಹನ
                           
ಚಿಕ್ಕನಾಯಕನಹಳ್ಳಿ,ಡಿ.13 : ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿರುವ ಉತ್ಪನ್ನಗಳನ್ನು ಮಾರಾಟ ಮಾಡುವ ಸಲುವಾಗಿ ಮೂರು ದಿನಗಳ ವರೆಗೆ ಸಂಚಾರಿ ವಾಹನ ಸೌಲಭ್ಯವನ್ನು ಒದಗಿಸಿಕೊಡುವ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಚಾಲನೆ ನೀಡಿತು.
ಇಲಾಖೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ಖೈಸರ್ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ವಾಹನಕ್ಕೆ ಚಾಲನೆ ನೀಡಿದರು. 
ತಾಲ್ಲೂಕಿನ ವ್ಯಾಪ್ತಿಯಲ್ಲಿನ ಸಮಾರು 30 ಸ್ತ್ರೀಶಕ್ತಿ ಗುಂಪಿನ ಸದಸ್ಯರು ಸ್ವತಃ ತಾವೇ ತಯಾರಿಸಿದ ದೀಪದ ಬತ್ತಿ, ಅಕ್ಕಿ ಹಪ್ಪಳ, ಕಾಳು ಹಪ್ಪಳ, ರಾಗಿ ಮಾಲ್ಟ್, ಸಿಹಿತಿಂಡಿ, ಸಾಂಬಾರ ಪುಡಿ ಮತ್ತು ಖಾರದ ಪುಡಿ, ಮೇಣದ ಬತ್ತಿ, ಊಟದ ಎಲೆ ಹಾಗೂ ವಿಶೇಷವಾಗಿ ಸ್ತ್ರೀಶಕ್ತಿ ಗುಂಪಿನ ಸದಸ್ಯರು ತಯಾರಿಸಿ ಬೆಣ್ಣೆ ಉತ್ಪನ್ನಗಳನ್ನು ಒಳಗೊಂಡು ಸುಮಾರು ಹತ್ತು ಸಾವಿರ ಬೆಲೆ ಬಾಳುವ ವಸ್ತುಗಳನ್ನು ಸಂಚಾರಿ ಮಾರುಕಟ್ಟೆ ವಾಹನದಲ್ಲಿ ಮಾರಾಟಕ್ಕಾಗಿ ಕಛೇರಿಗೆ ವಸ್ತುಗಳನ್ನು ತಂದು ಒಪ್ಪಿಸಿರುವುದು ಶ್ಲಾಘನೀಯ ಎಂದು ಅಧಿಕಾರಿ ಅನೀಸ್ಖೈಸರ್ ತಿಳಿಸಿದರು. ಇದೇ ರೀತಿ ಇನ್ನು ಮುಂದೆ ಹೆಚ್ಚಿನ ಸಂಘಗಳು ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿ ಆಥರ್ಿಕವಾಗಿ ಸಬಲರಾಗುವಂತೆ ಕರೆ ನೀಡಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ  ಹಾಗೂ ಒಕ್ಕೂಟದ ಕಾರ್ಯದಶರ್ಿ ಜಿ.ಈ.ಪರ್ವತಯ್ಯ ಮಾತನಾಡಿ ಮೂರು ದಿವಸಗಳಲ್ಲಿ ವಿವಿಧ ಸ್ಥಳಗಳಲ್ಲಿ ಸ್ತ್ರೀ ಶಕ್ತಿ ಗುಂಪುಗಳು ತಯಾರಿಸಿರುವ ವಸ್ತುಗಳನ್ನು ಸಂಚಾರಿ ಮಾರುಕಟ್ಟೆ ವಾಹನದಲ್ಲಿ ಮಾರಾಟಕ್ಕಾಗಿ ವಾಹನ ಸೌಲಭ್ಯವನ್ನು ಒದಗಿಸಿದ್ದು ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದ ಅವರು  ಇದೇ ಡಿಸೆಂಬರ್ 14ರ ಶುಕ್ರವಾರದಂದು ದುಗಡಿಹಳ್ಳಿ, ಶೆಟ್ಟಿಕೆರೆ, ಮಾದಿಹಳ್ಳಿ, ಮತಿಘಟ್ಟದಲ್ಲಿ ಮತ್ತು 15ರ ಶನಿವಾರ ತಿಮ್ಮನಹಳ್ಳಿ, ಕಂದಿಕೆರೆ, ಬರಗೂರು, ಹಂದನಕೆರೆ, ಕುಪ್ಪೂರಿನಲ್ಲಿ ಸಂಚಾರಿ ಮಾರುಕಟ್ಟೆ ನಡೆಯಲಿದೆ ಎಂದರು. 
ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ.ಈ.ಪರ್ವತಯ್ಯ, ಪರಮೇಶ್ವರಪ್ಪ, ವಿವಿಧ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮತ್ತು ಪ್ರತಿನಿಧಿಗಳು  ಉಪಸ್ಥಿತರಿದ್ದರು.
ಕಂದಿಕೆರೆ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ
ಚಿಕ್ಕನಾಯಕನಹಳ್ಳಿ,ಡಿ.13 : ಕಂದಿಕೆರೆ ಹೋಬಳಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ 15ರ ಶನಿವಾರ ಕಂದಿಕೆರೆಯ ಶ್ರೀ ಗಣಪತಿ ಜ್ಞಾನವಾಹಿತಿ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಸಮ್ಮೇಳನದ ಧ್ವಜಾರೋಹಣವು ಬೆಳಗ್ಗೆ 7-45ಕ್ಕೆ ನಡೆಯಲಿದ್ದು ಜಿ.ಪಂ.ಸದಸ್ಯೆ ಲೋಹಿತಾಬಾಯಿ ರಾಷ್ಟ್ರಧ್ವಜ ಹಾಗೂ ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ಪರಿಷತ್ ಧ್ವಜ, ತಾ.ಪಂ.ಸದಸ್ಯೆ ಉಮಾದೇವಿರಾಜ್ಕುಮಾರ್ ಕನ್ನಡಧ್ವಜ ಹಾರಿಸಲಿದ್ದಾರೆ. ಬೆಳಗ್ಗೆ 8-30ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಗ್ರಾಮದ ರಾಜ ಬೀದಿಗಳಲ್ಲಿ ಜಾನಪದ ಕಲಾ ತಂಡಗಳು ಹಾಗೂ ವಾದ್ಯಗಳೊಂದಿಗೆ ನಡೆಯಲಿದ್ದು ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮೆರವಣಿಗೆ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 9-30ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದ್ದು ತಮ್ಮಡಿಹಳ್ಳಿ ವಿರಕ್ತಮಠದ ಡಾ.ಅಭಿನವ ಮಲ್ಲಿಕಾಜರ್ುನ ದೇಶೀಕೇಂದ್ರಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು  ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಸೋ.ಮು.ಭಾಸ್ಕರಾಚಾರಾ ಉದ್ಘಾಟನೆ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್, ಮಾಜಿ ಶಾಸಕ ಬಿ.ಲಕ್ಕಪ್ಪ, ತಿಪಟೂರು ತಹಶೀಲ್ದಾರ್ ವಿಜಯ್ಕುಮಾರ್, ಸಮಾಜ ಸೇವಕ ರೇವಣ್ಣ ಒಡೆಯರ್ ಆಗಮಿಸಲಿದ್ದು ಸಮ್ಮೇಳನಾಧ್ಯಕ್ಷ ಕೆ.ಎಂ.ನಂಜಪ್ಪ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ.
ಗೋಷ್ಠಿ : ಮಧ್ಯಾಹ್ನ 2.30ರಿಂದ 5ರವರೆಗೆ ಸಮ್ಮೇಳನದಲ್ಲಿ ಗೋಷ್ಠಿ ನಡೆಯಲಿದ್ದು ಸ.ಪ್ರ.ದ.ಕಾ ಅಧ್ಯಾಪಕ ತಿಮ್ಮನಹಳ್ಳಿ ವೇಣುಗೋಪಾಲ್ ಅಧ್ಯಕ್ಷತೆ ವಹಿಸಲಿದ್ದು ಗ್ರಾ.ಪಂ.ಅಧ್ಯಕ್ಷೆ ಟಿ.ಎಸ್.ಲಕ್ಷ್ಮೀದೇವಮ್ಮ ಉದ್ಘಾಟನೆ ನೆರವೇರಿಸಲಿದ್ದಾರೆ. ಗೋಷ್ಠಿಯಲ್ಲಿ ವಿಷಯ 1: ಕವಿ ಜೈಶಂಕರ್ ಗಣೇಶ್ ಕಂದಿಕೆರೆ ಸಾಂಸ್ಕೃತಿ ಅವಲೋಕನ, ಉಪನ್ಯಾಸಕರಾಗಿ ಡಾ.ಮಹೇಶ್ ಶ್ರೀ ಮುಡಲಗಿರಿಯಪ್ಪ, ವಿಷಯ 2: ಗ್ರ್ರಾಮೀಣ ಕೃಷಿ ಮತ್ತು ಆಥರ್ಿಕತೆ, ಉಪನ್ಯಾಸಕರಾಗಿ ತಿಪಟೂರು ತಾ.ಕಸಾಪ ಅಧ್ಯಕ್ಷ ಉಜ್ಜಜ್ಜಿರಾಜಣ್ಣ, ಕವಿ ಸಮಯ ಕೆ.ಎನ್.ಮಲ್ಲಯ್ಯ, ವಿಷಯ 3 : ವಚನ ಸಾಹಿತ್ಯದಲ್ಲಿ ಬಂಡಾಯ ಉಪನ್ಯಾಸಕರಾಗಿ ಅಧ್ಯಾಪಕ ಡಾ.ಶಿವಣ್ಣ ಭಾಗವಹಿಸಲಿದ್ದಾರೆ.



Sunday, December 9, 2012


ಮೇಲ್ಜಾತಿ ಕೆಳಜಾತಿಗಳ ಅಂತರ ಹೆಚ್ಚುತ್ತಿದೆ, ಇದು ತರವಲ್ಲ:  ಡಾ.ವೀರೇಶಾನಂದ ಸರಸ್ವತಿ

                              
ಚಿಕ್ಕನಾಯಕನಹಳ್ಳಿ,ಡಿ.09 :  ಜಾತಿಯ ಅಭಿಮಾನ ನಮ್ಮನ್ನು ಆಳುವ ಜನ ನಾಯಕರು ಸಹ ಕಟ್ಟಿ ಹಾಕುವತಂಹ ರೀತಿಯಲ್ಲಿ ಬೆಳೆದಿದೆ. ನಾವು ಯಾವಾಗಲು ನಿಂತ ನೀರಾಗಿರದೆ ಹರಿಯುವಂತಾಗಿ ಎಲ್ಲಾರನ್ನು ಸಮಾನ ಮನ ಸ್ಥಿತಿಯಲ್ಲಿ ನೊಡಿದರೆ ದಾಸ ಶ್ರéೇಷ್ಟರಿಗೆ ನಾವುಗಳು ಗೌರವ ಅಪರ್ಿಸಿದಂತಾಗುತ್ತದೆ ಎಂದು ಶ್ರೀ ರಾಮಕೃಷ್ಣ ಮಠದ ಡಾ|| ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು. 
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಕನಕಜಯಂತಿ ಆಚರಣಾ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು,  ವ್ಯಾಸ ಕೂಟದ ಸಮೂಹಗಳು, ಮಠ ದೇವಾಲಯಗಳ ಮೂಲಕ ಸಂದೇಶ ಸಾರಿದರೆ ಇವೆಲ್ಲವನ್ನು ಮೀರಿ ದಾಸ ಕೂಟಗಳು ಜಾತ್ರೆ ರಥೋತ್ಸವ, ಹಬ್ಬ ಹರಿದಿನಗಳು ಎನ್ನದೇ ಮನೆ ಮನೆ ಬಾಗಿಲಿಗೆ ಮನು ಕುಲವನ್ನು ಜಾಗೃತಗೊಳಿಸುವಂತಹ ಕೆಲಸವನ್ನು ಮಾಡುವ ಮೂಲಕ ದೇವದೂತರಾದವರು. ಇವತ್ತಿನ ದಿನಗಳಲ್ಲಿ ಮೇಲ್ಜಾತಿ ಮತ್ತು ಕೆಳ ಜಾತಿಗಳಲ್ಲಿನ ಅಂತರ ಹೆಚ್ಚು ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ಅನುಕೂಲಸ್ಥ ವ್ಯಕ್ತಿಗಳು ಅನಾನುಕೂಲಸ್ಥನಿಗೆ ನೆರವು ನೀಡುವ ಮೂಲಕ ಸಮಾನ ಮನಸ್ಥಿತಿ ಹೋಂದಿರೆ ಮಾತ್ರ ನಾವು ಆಚರಣೆಗೆ ತರುವಂತಹ ಜಂಯಂತ್ಯೋತ್ಸವಗಳಿಗೆ ಅರ್ಥ ದೋರೆಯುತ್ತದೆ ಎಂದರು
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಜಾತಿಗಳಿಂದ ಯಾರನ್ನು ಸೀಮಿತಗೊಳಿಸಬಾರದು, ವ್ಯಕ್ತಿಯ ಆದರ್ಶ ಜೀವನದ ಮೂಲಕ ಅವರ ಮಾದರಿ ಅನುಸರಿಸಬೇಕು ಎಂದ ಅವರು ಸಮಾಜ ನಮಗೆ ಏನು ಮಾಡಿತು ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಯಾವ ರೀತಿಯಲ್ಲಿ ನೆರವಾಗಿದ್ದೇವೆ ಎಂಬುದೇ ಉತ್ತಮ ಅಲ್ಲದೆ ಇದರಿಂದ ಸಮಾಜದಲ್ಲಿ ನಾವು ಗುರುತಿಸಿಕೊಳ್ಳಬಹುದು ಎಂದರು. 
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡುತ್ತ ದೇಶದಲ್ಲಿ ಆರು ಸಾವಿರ ಜಾತಿಗಳಿವೆ. 12-15 ನೇ ಶತಮಾನಗಳಲ್ಲಿ ಬಸವಣ್ಣ, ದಾಸಶೇಷ್ಠರು, ವಿವೇಕಾನಂದರು ಶತಮಾನಗಳಿಂದಲು ಮೂಡನಂಬಿಕೆಗಳನ್ನು ದೂರ ಮಾಡಲು ಜಾಗೃತಗೊಳಿಸಿಕೊಂಡು ಬಂದಿದ್ದರು. ಮನುಷ್ಯ ಮನುಷ್ಯರನ್ನು ಸಮಾನ ದೃಷ್ಠಿಯಿಂದ ಕಾಣುವುದು ಇನ್ನು ದೂರ ಉಳಿದಿದೆ ಎಂದರು. 
ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ದಾಸರು ತಮ್ಮ ಕೀರ್ತನೆಯ ಮೂಲಕ ಅನೇಕ  ವಿಚಾರವನ್ನು ಜನಸಾಮಾನ್ಯರಿಗೆ ತಿಳಿಸುತ್ತಾ ಜನರ ಮನದಲ್ಲಿ ನೆಲೆನಿಂತವರು, ಅವರ ಆಧ್ಯ್ಮಾತಿಕ ಚಿಂತನೆ ಎಲ್ಲರಲ್ಲೂ ಮೂಡಬೇಕು ಎಂದರು.
ಇದೇ ಸಂದರ್ಭದಲ್ಲಿ ದೇವರಾಜು ಅಭಿವೃದ್ದಿ ನಿಗಮದ ವತಿಯಿಂದ 106ಜನಕ್ಕೆ ಮೂಲ ಕಸಬುಗಳ ಅಭಿವೃದ್ದಿಗಾಗಿ 106 ಫಲಾನುಭವಿಗಳಿಗೆ 22 ಲಕ್ಷರೂಗಳ ಚೆಕ್ ವಿತರಿಸಲಾಯಿತು.
ಸಮಾರಂಬದಲ್ಲಿ ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆಕೃಷ್ಣಯ್ಯ, ಜಿ.ಪಂ.ಸದಸ್ಯರಾದ ಲೋಹಿತಬಾಯಿ, ಮಂಜುಳ, ಜಾನಮ್ಮರಾಮಚಂದ್ರಯ್ಯ, ತಾ.ಪಂ. ಸದಸ್ಯೆ ಲತಾ ಕೇಶವಮೂತರ್ಿ, ಪುರಸಭಾ ಸದಸ್ಯರಾದ ಸಿ.ಎಸ್.ರಮೇಶ್, ಎಂ.ಎನ್.ಸುರೇಶ್, ರುಕ್ಮಿಣಮ್ಮ, ಸಿ.ಟಿ.ವರದರಾಜು, ಸಿ.ಎಂ.ರಂಗಸ್ವಾಮಯ್ಯ  ಚೇತನಗಂಗಾಧರ್, ಶಾರದಾಶಂಕರ್ ಬಾಬು ಕನಕ ಯುವಕ ಸಂಘದ ಕಾರ್ಯದಶರ್ಿ ಕಣ್ಣಯ್ಯ, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ,  ಸೇರಿದಂತೆ ಹಲವರಿದ್ದರು.
ಪ್ರಾರ್ಥನೆ ಅಂಬಿಕ ಸ್ವಾಗತ ಕಣ್ಣಯ್ಯ ನಿರೂಪಣೆ ಬಸವರಾಜು, ಸುರೇಶ್ ವಂದಿಸಿದರು.

ಪುರಸಭಾ ಸದಸ್ಯ ಮೈನ್ಸ್ ರವಿ ನಿಧನ
ಚಿಕ್ಕನಾಯಕನಹಳ್ಳಿ,ಡಿ.09 : ಪುರಸಭಾ ಸದಸ್ಯ ಮೈನ್ಸ್ ರವಿ(35) ಭಾನುವಾರ ಬೆಳಗ್ಗೆ ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ನಿಧನರಾದರು.
ರವಿ ಪುರಸಭಾ ಉಪಾಧ್ಯಕ್ಷರಾಗಿ, ಟೌನ್ ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು 6ತಿಂಗಳಿನಿಂದ ಕಾಮಾಲೆ ರೋಗದಿಂದ ನರಳುತ್ತಿದ್ದರು. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಂತ್ಯ ಸಂಸ್ಕಾರವನ್ನು  ಅವರ ದಿಬ್ಬದಹಳ್ಳಿಯ ತೋಟದಲ್ಲಿ ನಡೆಯಿತು. 
ಅಂತಿಮ ದರ್ಶನ : ಶಾಸಕ ಸಿ.ಬಿ.ಸುರೇಶ್ಬಾಬು, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ರಮೇಶ್, ಪುರಸಭಾ ಸದಸ್ಯರುಗಳಾದ ದೊರೆಮುದ್ದಯ್ಯ, ರಾಜಣ್ಣ, ಸಿ.ಡಿ.ಚಂದ್ರಶೇಖರ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು ಕಾಂಗ್ರೆಸ್ ಮುಖಂಡರಾದ ಕ್ಯಾಪ್ಟನ್ ಸೋಮಶೇಖರ್, ಸೀಮೆಎಣ್ಣೆಕೃಷ್ಣಯ್ಯ,  ಕೆ.ಜಿ.ಕೃಷ್ಣೇಗೌಡ, ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.

Saturday, December 8, 2012


ಜಿಲ್ಲೆಯಲ್ಲಿ ಪ್ರಥಮ ಶುದ್ದಗಂಗಾ ನೀರಿನ ಘಟಕ ತಾಲ್ಲೂಕಿನ ಶೆಟ್ಟಿಕೆರೆಗೆ

                                 ಚಿಕ್ಕನಾಯಕನಹಳ್ಳಿ,ಡಿ.08 : ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ತಾಲ್ಲೂಕಿನಾದ್ಯಂತ ಸಂಘಗಳನ್ನು ರಚಿಸಿ ಗ್ರಾಮಗಳ ಅಭಿವೃದ್ದಿ ಹಾಗೂ ಸ್ವಚ್ಛತೆಯನ್ನು ಕಾಪಾಡುತ್ತಿದೆ ಈ ನಂಬಿಕೆಯ ಮೇಲೆ ಯೋಜನೆಗೆ ಶುದ್ದಗಂಗಾ ನೀರಿನ ಘಟಕವನ್ನು ಆರಂಭ ಮಾಡಲು ನೆರವು ನೀಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆಯಲ್ಲಿ ಶ್ರೀ ಕ್ಷೇತ್ರ  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಶುದ್ದ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಜನೆಯು ರಾಜ್ಯಾದ್ಯಂತ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿಗ್ರಾಮಗಳ ಅಭಿವೃದ್ದಿ ಬಗ್ಗೆ ಜಾಗೃತಿ ಮೂಡಿಸುತ್ತಿದೆ, ಇದೇ ರೀತಿ ತಾಲ್ಲೂಕಿನಲ್ಲೂ ಯೋಜನೆ ಆರಂಭವಾದ ಒಂದುವರೆ ವರ್ಷದಲ್ಲಿ ಸುಮಾರು ಮುವತ್ತು ಸಾವಿರಕ್ಕೂ ಹೆಚ್ಚು ಸಂಘದ ಸದಸ್ಯರಾಗಿದ್ದಾರೆ ಎಂದ ಅವರು ಈ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಜನರಲ್ಲಿನ ವಿಶ್ವಾಸ ಉಳಿಸಿಕೊಂಡಿದೆ, ಜಿಲ್ಲೆಗೆ ಪ್ರಥಮವಾಗಿ ಆರಂಭವಾಗಿರುವ ಶುದಗಂಗಾ ನೀರಿನ ಘಟಕಕ್ಕೆ ಶಾಸಕರ ನಿಧಿಯಿಂದ 3 ಲಕ್ಷ ನೀಡುತ್ತಿರುವುದಾಗಿ ತಿಳಿಸಿದ ಅವರು ಈ ಯೋಜನೆಗೆ ಗ್ರಾಮ ಪಂಚಾಯಿತಿಯಿಂದ 5ಲಕ್ಷರೂ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆ ವತಿಯಿಂದ  5ಲಕ್ಷ ಭರಿಸುತ್ತಿದ್ದು ಒಟ್ಟು 13 ಲಕ್ಷ ರೂವೆಚ್ಚದಲ್ಲಿ ಘಟಕ ಪ್ರಾರಂಭವಾಗಲಿದೆ ಎಂದರು.
ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ತಾಲ್ಲೂಕಿನ ಮಾದರಿ ಗ್ರಾಮವನ್ನಾಗಿ ಶೆಟ್ಟಿಕೆರೆ ಮಾಡಬೇಕೆಂಬ ಚಿಂತನೆಯಿದೆ ಅದಕ್ಕೆ ಸಾಕ್ಷಿಯೆಂಬಂತೆ ಶುದ್ದಗಂಗಾ ನೀರಿನ ಘಟಕ ಶೆಟ್ಟಿಕೆರೆ ಹೋಬಳಿಗೆ ಬಂದಿರುವುದ ಸ್ವಾಗತಾರ್ಹವಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಮೇಲ್ವಿಚಾರಕ ನಾಗರಾಜು ಮಾತನಾಡಿ ಸಂಸ್ಥೆಯು ಸೇವಾ ಮನೋಭಾವದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಶುದ್ದಗಂಗಾ ನೀರಿನ ಘಟಕದಂತೆ ಇತರೆ 40 ರೀತಿಯ ಯೋಜನೆಯ ಪಟ್ಟಿಯಿದೆ, ಅವುಗಳನ್ನು ಅನುಷ್ಠಾನಗೊಳಿಸಲು ಗ್ರಾಮದ ಜನರ ಸಹಾಯ ಅಗತ್ಯವಾಗಿದೆ ಎಂದರಲ್ಲದೆ ಈಗ ಶಂಕುಸ್ಥಾಪನೆಗೊಳ್ಳುತ್ತಿರುವ ಶುದ್ದಗಂಗ ನೀರಿನ  ಘಟಕ ರಾಜ್ಯದಲ್ಲಿ 51ನೇಯದಾಗಿದ್ದು ತುಮಕೂರು ಜಿಲ್ಲೆಯಲ್ಲಿ ಪ್ರಥಮ ಎಂದರು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಆರಂಭಿಸಿರುವ ಶುದ್ದಗಂಗಾ ನೀರಿನ ಘಟಕ ಯೋಜನೆಯು ಜಾರಿಗೆ ತರುವುದರ ಜೊತೆಗೆ ಉತ್ತಮವಾಗಿ ನಿರ್ವಹಣೆ ಮಾಡಲಿ ಎಂದು ಆಶಿಸಿದರು. ಸಮಾರಂಭದಲ್ಲಿ ಪಿಡಿಓ ಸಿದ್ದರಾಮಯ್ಯ ಪ್ರಾಸ್ತಾವಿಕ ನುಡಿಳಗನ್ನಾಡಿದರು.
ಸಮಾರಂಭದಲ್ಲಿ ತಾ.ಪಂ.ಸದಸ್ಯರಾದ ರಮೇಶ್ಕುಮಾರ್, ಗ್ರಾ.ಪಂ.ಅಧ್ಯಕ್ಷ ಶಶಿಧರ್, ಸಾವಿತ್ರಮ್ಮ, ಲತಾಮಣಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕೃಷಿ ಅಧಿಕಾರಿ ನಾಗರಾಜು ನಿರೂಪಿಸಿದರೆ, ಹರ್ಷ ಸ್ವಾಗತಿಸಿದರು.
ಶನೇಶ್ವರಸ್ವಾಮಿಗೆ ರಜತ ಕವ

ಚಿಕ್ಕನಾಯಕನಹಳ್ಳಿ,ಡಿ.08 : ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀ ಗೌರಮ್ಮ ತಾಯಿ ಮತ್ತು ವರಸಿದ್ದಿ ಶನೇಶ್ಚರ ಸ್ವಾಮಿ ದೇವಾಲಯದಲ್ಲಿ ರಜತ ಕವಚ ಧಾರಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಇದೇ 7 ಶುಕ್ರವಾರ ಬನಶಂಕರಿ ದೇವರ ಉತ್ಸವ ಶ್ರೀ ಬನಶಂಕರಿ ಮಹಿಳಾ ಮಂಡಳಿ ಹಾಗೂ ದೇವಾಂಗ ಯುವಕರಿಂದ ಭಜನೆ ನಡೆಯಿತು  ಶನಿವಾರ ಗಣಹೋಮ, ಸುದರ್ಶನ ಹೋಮ, ನವಗ್ರಹ ಹೋಮಗಳು ಸಾಂಗೋಪಾಂಗವಾಗಿ ಜರುಗಿದವು. ವರಸಿದ್ದಿ ಶನೇಶ್ಚರಸ್ವಾಮಿ ಮತ್ತು ಬನಶಂಕರಮ್ಮ ದೇವರುಗಳಿಗೆ ಸುಮಾರು 4.5ಕೆಜಿ ಬೆಳ್ಳಿಯ ರಜತ ಕವಚ, ಡಮರುಗವನ್ನು ಶ್ರೀಮತಿ ಚಂದ್ರಕಲಾ ಶ್ರೀನಿವಾಸಮೂತರ್ಿ(ಪಾರ್ಥ) ಮಕ್ಕಳು, ಸಿ.ಎಲ್ ಚಕ್ಕಣ್ಣ ಪಾರ್ಥ ಮಕ್ಕಳು ಹಾಗೂ ಪಾರ್ಥ ಕುಟುಂಬದವರು ದಾನಿಗಳಾಗಿ ಕಾರ್ಯಕ್ರಮದ ಸೇವೆಯನ್ನು ನೀಡಿದರು. ದೇವಾಂಗ ಸಂಘದ ಅಧ್ಯಕ್ಷರು ಕಾರ್ಯಕಾರಿ ಮಂಡಳಿ ಸೇವಾಕರ್ತರು ಒಳಗೊಂಡು ಪೂಜಾ ಕೈಂಕರ್ಯದ ಹೋಮಕ್ಕೆ ಪೂಣರ್ಾಹುತಿ ಅಪರ್ಿಸಿದರು.

Tuesday, December 4, 2012


ಸಂಸ್ಕೃತಿ ಕಾಣಬೇಕಾದರೆ ಅದು ಸಾಹಿತ್ಯದಿಂದ ಮಾತ್ರ ಸಾದ್ಯ  : ಸಾ.ಶಿ.ಮರುಳಯ್ಯ

ಚಿಕ್ಕನಾಯಕನಹಳ್ಳಿ,ಡಿ.4 : ಸಂಸ್ಕೃತಿ ವ್ಯಕ್ತಿಯ ಆಂತರಿಕ ಶೋಭೆ, ನಾಗರೀಕತೆ ವ್ಯಕ್ತಿಯ ಬಹಿರಂಗ ಶೋಭೆಯಾಗಿ ಸಮಾಜ ಗುರುತಿಸಿದೆ, ನಮ್ಮ ಸಂಸ್ಕೃತಿ ಕಾಣಬೇಕಾದರೆ ಅದು ಸಾಹಿತ್ಯದಿಂದ ಮಾತ್ರ ಸಾದ್ಯ ಎಂದು ಖ್ಯಾತ ಸಾಹಿತಿ ಸಾ.ಶಿ.ಮರುಳಯ್ಯನವರು ಅಭಿಪ್ರಾಯಪಟ್ಟರು.
ಪಟ್ಟಣದ ಬಲಿಜ ಶ್ರೀ ಸೀತಾರಾಮ ಕಲ್ಯಾಣ ಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಡಶಾಲಾ ಕನ್ನಡ ಭಾಷಾ ಬೋದಕರ ಐದನೆಯ ಶೈಕ್ಷಣಿಕ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ವಿಶ್ವದ ಸಂಸ್ಕೃತಿಯಲ್ಲಿ ಭಾರತೀಯ ಸಂಸ್ಕೃತಿಯು ಶ್ರೇಷ್ಠವಾದದ್ದು ಈ ಸಂಸ್ಕೃತಿಯನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ, ಕುವೆಂಪು ರಚಿಸಿರುವ ನಾಡಗೀತೆ  ಕೊಡುವ ಭಾವಾರ್ಥ ಭರತ ಖಂಡದ ಯಾವ ಭಾಷೆಯಲ್ಲಿಯೂ ಹೊಹೊಮ್ಮಿಲ್ಲ, ಈ ನಾಡಗೀತೆ ದೇಶದ ಸಂಸ್ಕೃತಿಯನ್ನು ಬೆಳಗುತ್ತದೆ ಎಂದರು. ಕ ುವೆಂಪು ರಚಿಸಿರುವ ನಾಟಕಗಳು ಷೇಕ್ಸ್ಪಿಯರ್ ರಚಿಸಿರುವ ನಾಟಕಗಳಿಗಿಂತ ಉತ್ತಮವಾಗಿದೆ ಎಂದರಲ್ಲದೆ ಶಿಕ್ಷಕರು ತಮ್ಮ ವಿದ್ಯಾಥರ್ಿಗಳಿಗೆ ತಿಳುವಳಿಕೆ ನೀಡುವಾಗ ಪ್ರೀತಿಯಿಂದ ತಿಳಿಸಿ, ಶಿಕ್ಷಿಸುವುದರಿಂದ ಸಾದ್ಯವಿಲ್ಲ, ಶಿಷ್ಯರು ಏನೇ ತಪ್ಪು ಮಾಡಿದರು ಆ ಅಪವಾದ ಬರುವುದು ಗುರುವಿನ ಮೇಲೆ ಅದಕ್ಕಾಗಿ ಗುರುಗಳು ಶಿಷ್ಯರಿಗೆ ತಮ್ಮ ಬೋಧನೆಯಲ್ಲಿ ಸನ್ಮಾರ್ಗದತ್ತ ಸಾಗುವ ದಾರಿ ತೋರಬೇಕು ಎಂದರು.
ಯುವಕರು ಸಮಾಜದ ಆಗು ಹೋಗುಗಳನ್ನು ತಿಳಿದುಕೊಂಡು ದೇಶಾಭಿಮಾನವನ್ನು ಉತ್ತುಂಗಕ್ಕೆ ಏರಿಸಬೇಕು, ಯುವಶಕ್ತಿ ಹಾಳಾದರೆ ಇಡೀ ದೇಶ ಹಾಳಾಗುತ್ತದೆ, ಶಿಕ್ಷಕರು ಮಕ್ಕಳಲ್ಲಿ ಈಗಿನಿಂದಲೇ ರಾಷ್ಟ್ರಪ್ರೇಮವನ್ನು ಮೂಡಿಸಬೇಕು ಎಂದು ತಿಳಿಸಿದ ಅವರು ಪುಸ್ತಕವನ್ನು ಪ್ರತಿನಿತ್ಯ ಓದಿ ಅದರಲ್ಲಿನ ಹೊಸ ಹೊಸ ವಿಷಯಗಳನ್ನು ಮಕ್ಕಳಿಗೆ ತಿಳಿಸಿಬೇಕು ಎಂದರು.
ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿದರ್ೇಶಕ ಬಿ.ಮೋಹನ್ಕುಮಾರ್ ಮಾತನಾಡಿ ಕನ್ನಡ ಭಾಷಾ ಶಿಕ್ಷಕರು ಸಾಹಿತ್ಯ ಮತ್ತು ಸಾಹಿತಿಗಳ ಪರಿಚಯ ವಿದ್ಯಾಥರ್ಿಗಳಿಗೆ ಮಾಡಿಕೊಡಿ ಭಾಷೆಯ ಇತಿಹಾಸ ಪರಂಪರೆ ಸಂಸ್ಕೃತಿ ಎಂದು ತಿಳಿಸಿ, ಹಿರಿಯರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಈಗಿನ ಯುವಶಕ್ತಿ ಮುಂದಾಗಬೇಕು, ತಮ್ಮ ಕಾರ್ಯದಲ್ಲಿ ಕ್ರಿಯಾಶೀಲವಾಗುವುದರ ಜೊತೆಗೆ ಸಾಹಿತ್ಯದ ಕಡೆಗೂ ಗಮನ ನೀಡಿ ಎಂದರಲ್ಲದೆ ಶಿಕ್ಷಕರು ಕನ್ನಡ ಸಾಹಿತ್ಯ ಹಾಗೂ ಪರಂಪರೆಯನ್ನು ಮಕ್ಕಳಿಗೆ ತಿಳಿಸಿದರೆ ಕನ್ನಡದ ಬಗ್ಗೆ ಒಲವು ಹೆಚ್ಚುತ್ತದೆ ಎಂದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಧಿಕಾರಿ ಬಿ.ಜೆ.ಪ್ರಭುಸ್ವಾಮಿ ಮಾತನಾಡಿದರು.
  ಸಮಾರಂಭದಲ್ಲಿ ಸಾಹಿತಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ತಾ.ಪ್ರೌ.ಕ.ಭಾ.ಬೋ.ಸಂಘದ ಅಧ್ಯಕ್ಷ ಗೋವಿಂದರಾಜು, ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮರ್, ಜಿಲ್ಲಾ ಕನ್ನಡ ಭಾಷ ಭೋದಕರ ಅಧ್ಯಕ್ಷ ಮಾದಾಪುರ ಶಿವಪ್ಪ, ಜಿಲ್ಲಾ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷೆ ರೇಣುಕಮ್ಮ, ಕನ್ನಡ ವಿಷಯ ಪರಿವೀಕ್ಷಕ ನರಸಿಂಹಯ್ಯ ಉಪಸ್ಥಿತರಿದ್ದರು.



Monday, December 3, 2012


ಗೋಡೆಕೆರೆ ಮಠದಲ್ಲಿ ತತ್ವಪದ, ಜಾನಪದ ನೃತ್ಯ ಸ್ಪಧರ್ೆ
                                          
ಚಿಕ್ಕನಾಯಕನಹಳ್ಳಿ,ಡಿ.03  : ತಾಲೂಕಿನ ಗೋಡೆಕೆರೆ ಶ್ರೀ ಗುರುಸಿದ್ದರಾಮೇಶ್ವರಸ್ವಾಮಿಯವರ ಲಕ್ಷದೀಪೋತ್ಸವದ ಅಂಗವಾಗಿ ಹಾಗೂ ಗೋಡೆಕೆರೆ ಸಂಸ್ಥಾನದ ಸ್ಥಿರ ಪಟ್ಟಾಧ್ಯಕ್ಷರಾಗಿದ್ದ ಲಿಂಗೈಕ್ಯ ಚಂದ್ರಶೇಖರ ಭಾರತಿಸ್ವಾಮಿಯವರ 11ನೇ ವರ್ಷದ ಪುಣ್ಯಾರಾಧನೆಯ ಸ್ಮರಣಾರ್ಥ ಜಿಲ್ಲಾ ಮಟ್ಟದ ಧಾಮರ್ಿಕ ತತ್ವ ಪದಗಳ ಹಾಗೂ ಜಾನಪದ ನೃತ್ಯ ಸ್ಪಧರ್ೆಗಳನ್ನು ಇದೇ 10ರಂದು ಗೋಡೆಕೆರೆಯಲ್ಲಿ ಏರ್ಪಡಿಸಲಾಗಿದೆ ಎಂದು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷ ಸಿದ್ದರಾಮದೇಶಿಕೇಂದ್ರಸ್ವಾಮಿ ತಿಳಿಸಿದರು.
ಪಟ್ಟಣದ ಶಿವಯೋಗಿ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಧಾಮರ್ಿಕ ತತ್ವಪದಗಳಲ್ಲಿ ಸ್ಪಧರ್ೆಯಲ್ಲಿ ಭಾಗವಹಿಸಲು ವಯೋಮಿತಿ ಇರುವುದಿಲ್ಲ, ಯಾವ ತತ್ವಪದವನ್ನಾದರೂ ಹಾಡಬಹುದಾಗಿದ್ದು ಸ್ಪಧರ್ೆಗೆ 50ರೂ ಪ್ರವೇಶ ಶುಲ್ಕವಾಗಿದೆ, ಸ್ಪಧರ್ೆಯು 5ಜನರನ್ನು ಮೀರಿರಬಾರದು, ತಮ್ಮ ಸಲಕರಣೆಗಳನ್ನು ತಾವೇತರುವುದು, ವೇಷ ಭೂಷಣಗಳಿಗೆ ಆದ್ಯತೆ ನೀಡಲಾಗುವುದು, ಪ್ರತಿ ತಂಡಕ್ಕೆ ಸಮಯವನ್ನು ನಿಗದಿ ಪಡಿಸಿದ್ದು ನಗದು ರೂಪದಲ್ಲಿ ಬಹುಮಾನ ನೀಡಲಾಗುತ್ತದೆ, ಭಾಗವಹಿಸಿದ ಪ್ರತಿ ತಂಡಕ್ಕೂ ಪ್ರಶಸ್ತಿ ಪತ್ರ ನೀಡಲಾಗುವುದು ಹಾಗೂ ಜಾನಪದ ನೃತ್ಯ ಸ್ಪಧರ್ೆಯಲ್ಲಿ ದೇವರ ನಾಮಗಳಿಗೆ ಆದ್ಯತೆ ನೀಡಿದ್ದು  ವೇಷ ಭೂಷಣಗಳಿಗೆ ಆದ್ಯತೆಯಿದೆ, ಜಾನಪದ ಗೀತೆ ಹಾಡುವವರನ್ನು ಸೇರಿ 5ಜನ ಮೀರಿರಬಾರದು, ನಗದು ರೂಪದಲ್ಲಿ ಬಹುಮಾನ ನೀಡಲಿದ್ದು ಸ್ಪಧರ್ೆಗೆ ಪ್ರವೇಶ ಶುಲ್ಕ 50ರೂ ಆಗಿದೆ ಎಂದು ತಿಳಿಸಿದ ಅವರು ಹೆಚ್ಚಿನ ಮಾಹಿತಿಗಾಗಿ ಮೊ. 9448709755, 96115436678, 9986904011 ಗೆ ಸಂಪಕರ್ಿಸಲು ಕೋರಿದ್ದಾರೆ. 
ಚಿ.ನಾ.ಹಳ್ಳಿ ರೋಟರಿಗೆ 'ಬೆಸ್ಟ್ ಕ್ಲಬ್'ಆವಾಡರ್್

ಚಿಕ್ಕನಾಯಕನಹಳ್ಳಿ,ಡಿ.3: ಇಲ್ಲಿನ ರೋಟರಿ ಕ್ಲಬ್, ತುಮಕೂರಿನಲ್ಲಿ ನಡೆದ ಇಂಟರ್ ಸಿಟಿ ಜನರಲ್ ಫೋರಂ ಸಮಾವೇಶದಲ್ಲಿ ಬೆಸ್ಟ್ ಕ್ಲಬ್ ಆವಾಡರ್್'' ಪ್ರಶಸ್ತಿಗೆ ಭಾಜನವಾಗಿದೆ. ಇಲ್ಲಿನ ಕ್ಲಬ್ ನಡೆಸುವ ಸರಾಸರಿ ದಿನಕ್ಕೊಂದರಂತೆ ಸೇವಾ ಕಾರ್ಯಕ್ರಮವನ್ನು ನಡೆಸುತ್ತಿರುವುದನ್ನು ಗಮನಿಸಿ ಈ ಪ್ರಶಸ್ತಿ ಫಲಕವನ್ನು ನೀಡಲಾಗಿದೆ, ಸ್ಥಳೀಯ ಕ್ಲಬ್ನ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮತ್ತು ಕಾರ್ಯದಶರ್ಿ ಎಂ.ದೇವರಾಜ್ರವರನ್ನು ರೋಟರಿ ಗವರ್ನರ್ ಆರ್.ಬದರಿ ಪ್ರಸಾದ್ ಅಭಿನಂದಿಸಿದ್ದಾರೆ. ಜಿಲ್ಲಾ 3190ರ 87 ಕ್ಲಬ್ಗಳ ಪೈಕಿ ಇಲ್ಲಿನ ಕ್ಲಬ್ ಪ್ರಶಸ್ತಿಗೆ ಭಾಜನವಾಗಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. 
ತಾ|ಕೃಷಿ ಬ್ಯಾಂಕ್ನಲ್ಲಿ ಲಾಕರ್, ಚಿನ್ನಾಭರಣ ಸಾಲ ಸೌಲಭ್ಯಕ್ಕೆ ಚಾಲನೆ.
ಚಿಕ್ಕನಾಯಕನಹಳ್ಳಿ,ಡಿ.03 : ಇಲ್ಲಿನ ಪ್ರಾ.ಸ.ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ನಲ್ಲಿ ನೂತನ ಲಾಕರ್ ಸೌಲಭ್ಯ, ಚಿನ್ನಾಭರಣ ಸಾಲ ಮತ್ತು ಠೇವಣಿ ಸಂಗ್ರಹಣೆಗೆ ಅಧ್ಯಕ್ಷ ಬಿ.ಎನ್.ಶಿವಪ್ರಕಾಶ್ ಚಾಲನೆ ನೀಡಿದರು.
ತಾಲೂಕಿನ ಎಲ್ಲಾ ರೈತಬಾಂಧವರು, ಸಾಲಗಾರರು, ಷೇರುದಾರರು ಈ ಸೌಲಭ್ಯವನ್ನು ಪಡೆಯಲು ಬ್ಯಾಂಕಿನ ವ್ಯವಸ್ಥಾಪಕರಾದ ಡಿ.ಚಿತ್ತಪ್ಪ ಮಾನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷೆ ಅಹಲ್ಯ ಸಾಂಭವಮೂತರ್ಿ, ನಿದರ್ೇಶಕರಾದ ಎಂ.ಬಿ.ನಾಗರಾಜ್, ಎಂ.ಬಿ.ಆನಂದಕುಮಾರ್, ಪರಮೇಶ್ವರ, ಎಚ್.ಎಂ.ಸುರೇಂದ್ರಯ್ಯ, ಯಳ್ಳೇನಹಳ್ಳಿ ಬಸವರಾಜು ಹಾಜರಿದ್ದರು.

Friday, November 30, 2012



ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ನೂಕು ನುಗ್ಗಲಿನಲ್ಲಿ ಅಜರ್ಿ ಸಲ್ಲಿಸಿದ ಆಕಾಂಕ್ಷಿಗಳು
ಚಿಕ್ಕನಾಯಕನಹಳ್ಳಿ,ನ.30 : ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯಥರ್ಿಗಳಾಗಿ ಕಣಕ್ಕಿಳಿಯಲು ಸುಮಾರು 24ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಾಗಿ ಅಜರ್ಿ ಸಲ್ಲಿಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಆಗಮಿಸಿದ್ದ ಮಹಿಮಾ ಪಾಟೀಲ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಜರ್ಿ ಸಲ್ಲಿಸಿರುವ ಪ್ರಮುಖರೆಂದರೆ ಕ್ಯಾಪ್ಟನ್ ಸೋಮಶೇಖರ್, ಡಾ.ಎಸ್.ಜಿ.ಪರಮೇಶ್ವರಪ್ಪ, ಸಂತೋಷ್ ಜಯಚಂದ್ರ, ರಾಜೇಂದ್ರ, ಬಿ.ಲಕ್ಕಪ್ಪ, ಸತೀಶ್ ಸಾಸಲು, ಟಿ.ಆರ್.ವಾಸುದೇವ್, ಹೆಚ್.ಬಿ.ಎಸ್ ನಾರಾಯಣಗೌಡ, ತುಮಕೂರು ಶಿವಮೂತರ್ಿ, ಸಾದರಹಳ್ಳಿ ಮಲ್ಲಿಕಾಜರ್ುನಯ್ಯ, ವೈ.ಜಿ.ಸಿದ್ದರಾಮಯ್ಯ, ನಿಜಾನಂದಮೂತರ್ಿ, ಆರ್.ರಾಮಚಂದ್ರಯ್ಯ,  ಶಿವಣ್ಣ ಸೇರಿದಂತೆ ಹಲವು ಆಕಾಂಕ್ಷಿಗಳು ಅಜರ್ಿ ಸಲ್ಲಿಸಿದ್ದಾರೆ ಎಂದರು.
ನಂತರ ಮಾತನಡಿದ ಅವರು,  ಪಕ್ಷ ಟಿಕೆಟ್ ನೀಡುವಲ್ಲಿ ಹೆಚ್ಚಿನ ಆದ್ಯತೆಯನ್ನು  ಸ್ಥಳೀಯ ಆಕಾಂಕ್ಷಿಗಳಿಗೆ ನೀಡುವುದಾಗಿ  ತಿಳಿಸಿದರಲ್ಲದೆ,  ಮತದಾರರು ಯಾವ ಆಕಾಂಕ್ಷಿಗೆ ಹೆಚ್ಚಿನ ಆದ್ಯ್ಯತೆ ನೀಡುತ್ತಾರೆಯೋ ಅಂತಹವರನ್ನು ಗಮನದಲ್ಲಿಟ್ಟುಕೊಳ್ಳುವುದಾಗಿ ತಿಳಿಸಿದರು. ಅದಕ್ಕಾಗಿ ಮತದಾರರು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲು ತಾಲ್ಲೂಕಿಗೆ ಆಗಮಿಸಿದ್ದು ಅಭಿಪ್ರಾಯದ ವರದಿಯನ್ನು ಕೆಪಿಸಿಸಿ ಹೈಕಮಾಂಡ್ ಕಛೇರಿಗೆ ನೀಡಲಿದ್ದೇವೆ, ಈ ವರದಿ ಸಲ್ಲಿಸಿದ ನಂತರ ಮತ್ತೊಮ್ಮೆ ಕ್ಷೇತ್ರಕ್ಕೆ ಆಗಮಿಸಿ ವರದಿ ಪಡೆಯಲಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ವರದಿಯನ್ನು ಪಡೆದಿದ್ದು ಎಲ್ಲಾ ತಾಲ್ಲೂಕಿನಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅಭಿಪ್ರಾಯ ಬಂದಿದೆ ಎಂದು ತಿಳಿಸಿದರಲ್ಲದೆ ಕಾಂಗ್ರೆಸ್ ಪಕ್ಷ ಯಾವ ಪಕ್ಷದೊಂದಿಗೆ ಹೊಂದಣಿಕೆ ಮಾಡಿಕೊಳ್ಳದೇ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯಥರ್ಿಗಳು ಕಣಕ್ಕಿಳಿಯಲಿದ್ದಾರೆ ಎಂದರು.
ಕಾಂಗ್ರೆಸ್ ವೀಕ್ಷಕ ಮತ್ತು ಮಾಜಿ ಶಾಸಕ ಐವಾನ್ ನೀಕ್ಲಿ, ಕೆಪಿಸಿಸಿ ಕಾರ್ಯದಶರ್ಿ ನೂರ್ಜಾನ್ಷರೀಪ್, ಕಾರ್ಯದಶರ್ಿ ಶಿವಮೂತರ್ಿ, ವಿಧಾನಸಭಾ ಸಂಘಟನಾ ಉಸ್ತುವಾರಿ ಕ್ಯಾಪ್ಟನ್ ಸೋಮಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ನಗರ ಪ್ರಧಾನ ಕಾರ್ಯದಶರ್ಿ ಕೆ.ಜಿ.ಕೃಷ್ಣೆಗೌಡ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.


aPÀÌ£ÁAiÀÄPÀ£ÀºÀ½î ¥ÉÆÃmÉÆÃUÁæ¥sÀgï ¸ÀAWÀ¢AzÀ  PÀ£ÀßqÀ gÁeÉÆåÃvÀìªÀªÀ£ÀÄß DZÀj¸À¯Á¬ÄvÀÄ. F ¸ÀAzÀ¨sÀðzÀ°è ¸Á»w JA.«.£ÁUÀgÁeïgÁªï, ¸ÀAWÀzÀ CzsÀåPÀë ªÀÄÈAvÀÄåAdAiÀÄ, PÁAiÀÄðzÀ²ð eÉãÀÄPÀ¯ï ªÀÄAdÄ£Áxï, Pˤì®gï ¹.r.ZÀAzÀæ±ÉÃRgï ¸ÉÃjzÀAvÉ ¸ÀAWÀzÀ ¸ÀzÀ¸ÀågÀÄ ºÁdjzÀÝgÀÄ.

aPÀÌ£ÁAiÀÄPÀ£ÀºÀ½îAiÀÄ°è ¸ÀĨsÁµï ZÀAzÀæ¨ÉÆøï DmÉÆà ZÁ®PÀgÀ ªÀÄvÀÄÛ ªÀiÁ°ÃPÀgÀ ¸ÀAWÀ ºÀ«ÄäPÉÆArzÀÝ 56£Éà PÀ£ÀßqÀ gÁeÉÆåÃvÀìªÀªÀPÉÌ ¥ÀlÖtzÀ J¯Áè DmÉÆÃZÁ®PÀgÀÄ ¥Á¯ÉÆÎAqÀÄ ¸ÀªÀiÁgÀA¨sÀ «dÈA©ü¹zÀgÀÄ.

aPÀÌ£ÁAiÀÄPÀ£ÀºÀ½îAiÀÄ ¸ÀĨsÁµï ZÀAzÀæ¨ÉÆøï DmÉÆà ZÁ®PÀgÀ ªÀÄvÀÄÛ ªÀiÁ°ÃPÀgÀ ¸ÀAWÀzÀ ªÀw¬ÄAzÀ 56£Éà PÀ£ÀßqÀ gÁeÉÆåÃvÀìªÀªÀ£ÀÄß DZÀj¸À®¬ÄvÀÄ. F ¸ÀAzÀ¨sÀðzÀ°è f¯Áè DmÉÆà ZÁ®PÀgÀ dAn QæAiÀiÁ ¸À«Äw CzsÀåPÀë «.¥ÀævÁ¥ï, vÁ.UËgÀªÁzsÀåPÀë ¹.©.gÉÃtÄPÀ¸Áé«Ä, PÀgÀªÉà CzsÀåPÀë ¹.n.UÀÄgÀĪÀÄÆwð ¸ÉÃjzÀAvÀ ºÀ®ªÀjzÀÝgÀÄ.


ತಾಲ್ಲೂಕು 5ನೇಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ದಿನಾಂಕ ನಿಗಧಿ
ಚಿಕ್ಕನಾಯಕನಹಳ್ಳಿ,ನ.30: ತಾಲ್ಲೂಕು 5ನೇಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಹೋಬಳಿ ಮಟ್ಟದ ಸಾಹಿತ್ಯ ಸಮ್ಮೇಳನದ ದಿನಾಂಕ ಹಾಗೂ ಸಮ್ಮೇಳನಾಧ್ಯಕ್ಷರನ್ನು ಆಯ್ಕೆಮಾಡಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಡಿಸೆಂಬರ್ 28ರಂದು ಹಂದನಕೆರೆಯಲ್ಲಿ ಏರ್ಪಡಿಸಲಗಿದ್ದು ಸಮ್ಮೇಳನಾಧ್ಯಕ್ಷರನ್ನಾಗಿ ಖ್ಯಾತ ಸಾಹಿತಿ ಅಬ್ದುಲ್ಹಮೀದ್ರವರನ್ನು ಆಯ್ಕೆಮಾಡಲಾಗಿದೆ. ಕಂದಿಕೆರೆ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 9ರಂದು ಕಂದಿಕೆರೆಯಲ್ಲಿ ಏರ್ಪಡಿಸಿದ್ದು ಸಮ್ಮೇಳನಾಧ್ಯಕ್ಷರನ್ನಾಗಿ ನಿವೃತ್ತ ಉಪನ್ಯಾಸಕ ಕೆ.ಎಂ.ನಂಜಪ್ಪರವರನ್ನು, ಶೆಟ್ಟಿಕೆರೆ ಹೋಬಳಿಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸಂಬರ್ 15ರಂದು ಗೋಡೆಕೆರೆಯಲ್ಲಿ ಏರ್ಪಡಿಸಿದ್ದು ಚಿಂತಕ ಶಿವನಂಜಪ್ಪ ಬಾಳೇಕಾಯಿರವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ, ಚಿ.ನಾ.ಹಳ್ಳಿ ನಗರ ಕೇಂದ್ರಿತ ಕಸಬಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 22ರಂದು ಕೇದಿಗೆಹಳ್ಳಿಯ ರಾಘವೇಂದ್ರ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದು ಮಾಜಿ ಕಾಸಪ ಅಧ್ಯಕ್ಷ ಹೆಚ್.ಎಸ್.ಶಿವಲಿಂಗಪ್ಪ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Thursday, November 29, 2012


ವೃತ್ತಿ ರಂಗಭೂಮಿ ಮತ್ತೆ ವೈಭವದತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಿ :  ಲಕ್ಷಣ್ದಾಸ್
ಚಿಕ್ಕನಾಯಕನಹಳ್ಳ,ನ.29 : ರಂಗಭೂಮಿ ಹಾಗೂ ಪೌರಾಣಿಕ ನಾಟಕಗಳಲ್ಲಿ ಬಳಸುತ್ತಿದ್ದ ಪ್ರಾತಿನಿಧಿಕ ಶಬ್ದಗಳೆಲ್ಲವು ಸಿನಿಮಾ ಹಾವಳಿಗೆ ಸಿಲುಕಿ ಅಪಮೌಲ್ಯವಾಗಿದೆ ಎಂದು ರಂಗಭೂಮಿ ಕಲಾವಿದ ಲಕ್ಷಣ್ದಾಸ್ ವಿಷಾದಿಸಿದರು.
ಪಟ್ಟಣದ ರೋಟರಿ ಬಾಲ ಭಾವನದಲ್ಲಿ ರೋಟರಿ ಕ್ಲಬ್ ವತಿಯಿಂದ ರಂಗಕಲೆ ನಡೆದು ಬಂದ ಹಾದಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ರಂಗಗೀತೆಗಳನ್ನು ಹಾಡುವಂತಹ ದಾಸ್ಟ್ಯ ಇರುವಂತಹ ಕಲಾವಿದರು ವಿರಳವಾಗುತ್ತಿದ್ದಾರೆ. ಸಾಹಿತ್ಯ, ಸಂಸ್ಕೃತಿ ಇದ್ದಂತಹ ನಾಟಕದ ಹಾಡುಗಳನ್ನು ಬರೆಯುವವರಿಗೆ ಕಷ್ಠದ ಸ್ಥಿತಿ ನಿಮರ್ಾಣವಾಗಿದೆ ಎಂದು ತಿಳಿಸಿದರು.
ಪ್ರಾರ್ಥನ ಗೀತೆಗಳನ್ನು ಬರೆಯುವವರಿಗೆ ಈಗ ಪ್ರಾತಿನಿದ್ಯವೇ ಇಲ್ಲವಾಗಿದೆ, ಸಿನಿಮಾ ಹಾಡುಗಳನ್ನು ಬರಯುವವರಿಗೆ ಈಗ ಸ್ಥಾನಮಾನಗಳು ದೊರಕುತ್ತಿವೆ ಎಂದರಲ್ಲದೆ ರಾಜ್ಯದಲ್ಲಿ ಇದ್ದ ಎಲ್ಲಾ ರಂಗಭೂಮಿ ನಾಟಕ ಕಂಪನಿಗಳೂ ಸಿನಿಮಾ ಹಾವಳಿಯಿಂದ ಮುಚ್ಚಲ್ಪಟ್ಟಿದೆ, ನಾಟಕ ನೋಡುವವರೇ ಇಲ್ಲದಂತಾಗಿದ್ದಾರೆ ಈಗಲಾದರೂ ಸಕರ್ಾರ ಎಚ್ಚೆತ್ತುಕೊಂಡು ವೃತ್ತಿ ರಂಗಭೂಮಿ ಮತ್ತೆ ವೈಭವದತ್ತ ಎಂಬ ಕಾರ್ಯಕ್ರಮ ಹಮ್ಮಿಕೊಂಡು ರಂಗಭೂಮಿ ಕಲಾವಿದರಿಗೆ  ಇದರ ಮುಂಚೂಣಿ ನೀಡಬೇಕು ಎಂದರು.
  ಸಮಾರಂಭದಲ್ಲಿ ರಂಗಗೀತೆಗಳನ್ನು ಹಾಗೂ ಮೇರು ನಟರು ಹಾಡುತ್ತಿದ್ದ ಹಾಡುಗಳನ್ನು ಅವರ ದಾಟಿಯಲ್ಲೇ ಹಾಡಿ ಸಭಿಕರನ್ನು ರಂಜಿಸಿದರು.
ಸಮಾರಂಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಲಕ್ಷಣ್ದಾಸ್ರವರ ನಾಲಿಗೆಯಲ್ಲಿ ಕಲಾಶಾರದೆ ನತರ್ಿಸುತ್ತಿದ್ದಾಳೆ, ಅವರ ರಂಗಕಲೆಯ ಜ್ಞಾನ ಭಂಡಾರ ಅಪಾರವಾಗಿದ್ದು ಇದನ್ನು ಗುರುತಿಸಿ ತುಮಕೂರು ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡುವ ಮೂಲಕ ಅವರ ಕಲೆಯ ಹಿರಿಮೆಯನ್ನು ಹೆಚ್ಚಿಸಿದೆ ಎಂದರು.
ಸಮಾರಂಭದಲ್ಲಿ ತುಮಕೂರು ಮಂಜು, ಕಾರ್ಯದಶರ್ಿ ಎಂ.ದೇವರಾಜು ಉಪಸ್ಥಿತರಿದ್ದರು.




aPÀÌ£ÁAiÀÄPÀ£ÀºÀ½îAiÀÄ qÁ.CA¨sÉÃqÀÌgï ¥ËæqÀ±Á¯ÉAiÀÄ «zÁåyð vÀAqÀ ªÀÄrPÉÃjAiÀÄ°è £ÀqÀzÀ 20£Éà gÁ¶ÖçÃAiÀÄ ªÀÄPÀ̼À «eÁÕ£À ¸ÀªÀiÁªÉñÀzÀ°è ¨sÁUÀªÀ»¹ ±ÀQÛ C£Ééö¹ §¼À¹ ªÀÄvÀÄÛ G½¹ JA§ ¥ÀæzsÁ£À ²Ã¶ðPÉAiÀÄr ¸ÀgÀ¼À M¯É ±ÀQÛAiÀÄ ¸É¯É JA§ ¸ÀA±ÉÆÃzsÀ£Á ¥Àæ§AzsÀªÀ£ÀÄß ªÀÄAr¹ GvÀÛgÀ ¥ÀæzÉñÀ ªÁgÀuÁ¹AiÀÄ°è £ÀqÉAiÀÄĪÀ gÁµÀÖçªÀÄlÖzÀ ¸ÀªÀiÁªÉñÀPÉÌ DAiÉÄÌAiÀiÁVzÁÝgÉ.
ವೈ.ಎ.ನಾರಾಯಣಸ್ವಾಮಿರವರಿಗೆ ಸನ್ಮಾನ
                                          
ಚಿಕ್ಕನಾಯಕನಹಳ್ಳಿ,ನ.29 : ದೇಶದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಗೆ ಬಂದಾಗ ಮಾತ್ರ ನಗರ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸಮಾನತೆ ಬರಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಬಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಗಳ ಕಛೇರಿ, ತಾಲ್ಲೂಕು ಪ್ರೌಡಶಾಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವೃತ್ತ ಶಿಕ್ಷಕರ ಸಂಘಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ತಾಲ್ಲೂಕು ಪ್ರೌಡಶಾಲಾ ಶಿಕ್ಷಕರ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಶೇ.70ರಷ್ಟು ಸಾಕ್ಷರತೆಯಿದ್ದು ಇನ್ನು ಶೇ.30ರಷ್ಟು ಅನಕ್ಷರಸ್ಥರಿದ್ದಾರೆ, ಇವರನ್ನು ಸಾಕ್ಷರರನ್ನಾಗಿ ಮಾಡುವ ಜವಬ್ದಾರಿ ಸಕರ್ಾರ ಮತ್ತು ಶಿಕ್ಷಕರ ಮೇಲಿದೆ ಇಂದು ಮಕ್ಕಳು ಕೇಳುವ ಪ್ರಶ್ನೆಗಳಿಗೆ ಶಿಕ್ಷಕರು ಉತ್ತರ ನೀಡಲು ಕ್ಲಿಷ್ಟವಾಗುತ್ತಿದೆ, ಓದುವ ಹವ್ಯಾಸ ಬೆಳೆಸಿಕೊಂಡರೆ ಮಾತ್ರ ಉತ್ತರ ನೀಡಬಹುದು. ರಾಜ್ಯದ ವಾಷರ್ಿಕ ಆಯವ್ಯಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ 15072 ಕೋಟಿ ರೂಪಾಯಿಗಳು ಸಕರ್ಾರ ತೆರೆದಿಡುತ್ತಿದೆ, ನಮ್ಮಲ್ಲಿ ಅಗಾಧ ಶಕ್ತಿ ಸಂಪನ್ಮೂಲ ವಿದ್ವತ್ ಶಿಕ್ಷರಲ್ಲಿದ್ದು ಇದನ್ನು ಮಕ್ಕಳ ಅಭಿವೃದ್ದಿಗೆ ಉಪಯೋಗಿಸಿ ಎಂದ ಅವರು ಮುಂದಿನ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಶೇ.100ರಷ್ಟು ಪಲಿತಾಂಶ ಬರುವಂತೆ ಶ್ರಮಿಸಿ ಎಂದರು.
ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಶಿಕ್ಷಕರು ಸಮಾಜವನ್ನು ಉತ್ತಮ ರೀತಿಯಲ್ಲಿ ಕರೆದೊಯ್ಯವುದರಲ್ಲಿ ಮುಂಚೂಣಿ ಪಾತ್ರ ವಹಿಸುತ್ತಾರೆ, ಅದಕ್ಕಾಗಿ ಮಕ್ಕಳ ಹಾಗೂ ಶಿಕ್ಷಕರ ಪಾತ್ರ ಉತ್ತಮವಾಗಿರಬೇಕು ಎಂದರು.
ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಶಿಕ್ಷಕರು ವಿದ್ಯಾಥರ್ಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು, ಪ್ರಪಂಚ ಬದಲಾವಣೆಯಾಗುತ್ತಿದೆ, ಸಮಾಜಕ್ಕೆ ತಕ್ಕಂತೆ ಬೋಧನೆ ನೀಡಿದರೆ ವಿದ್ಯಾಥರ್ಿಗಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು.
ಸಾಹಿತಿ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಮಾತನಾಡಿ ನಗರ ಪ್ರದೇಶದ ವಿದ್ಯಾಥರ್ಿಗಳಿಗೆ ಸಿಗುತ್ತಿರುವ ಕಂಪ್ಯೂಟರ್ ಶಿಕ್ಷಣವು ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳಿಗೂ ದೊರಕಬೇಕು ಆ ಮೂಲಕ ಶಿಕ್ಷಕರು ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳನ್ನು ಆಧುನಿಕ ಶಿಕ್ಷಣದತ್ತ ಕರೆದೊಯ್ಯಬೇಕು ಎಂದು ತಿಳಿಸಿದ ಅವರು ಅದಕ್ಕಾಗಿ ವಿದ್ಯಾಥರ್ಿಗಳಲ್ಲಿ ಆತ್ಮವಿಶ್ವಾಸವನ್ನು ಬೆಳಸಬೇಕು, ರಾಮಾಯಣ, ಮಹಾಭಾರತ, ನೀತಿಕಥೆಗಳನ್ನು ವಿದ್ಯಾಥರ್ಿಗಳಿಗೆ ತಿಳಿಸುವ ಮೂಲಕ ಭಾರತದ ಸಂಸ್ಕೃತಿ ಪರಂಪರೆ ಮನಸ್ಸಿನಲ್ಲಿ ನೆಲೆಯೂರುವಂತೆ ಮಾಡಬೇಕು ಎಂದರು.
ಸಮಾರಂಭದಲ್ಲಿ  ಜಿ.ಪಂ.ಸದಸ್ಯರಾದ ಹೆಚ್.ಬಿ.ಪಂಚಾಕ್ಷರಿ, ಜಾನಮ್ಮರಾಮಚಂದ್ರಯ್ಯ, ಜಿ.ಹಾಲು ಒಕ್ಕೂಟ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್, ಡಿವಿಪಿ ಶಾಲಾ ಕಾರ್ಯದಶರ್ಿ ಸಿ.ಎಸ್.ನಟರಾಜು, ತಾಲ್ಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಯ್ಯ, ತಾ.ಸ.ನೌ.ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ತಾಲ್ಲೂಕು ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಪಿ.ಕುಮಾರಸ್ವಾಮಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ನಾಗರಾಜು, ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ತಾ.ಪ್ರಾ.ಶಾ.ಶಿ.ಸಂಘದ ಕಾರ್ಯದಶರ್ಿ ರಾಜಶೇಖರ್ ಉಪಸ್ಥಿತರಿದ್ದರು.


ಸತೀಶ್ ಸಾಸಲು ಜೆ.ಡಿ.ಎಸ್ಗೆ ವಿಧಾಯ, ಕಾಂಗ್ರೆಸ್ಗೆ ಸೇರ್ಪಡೆ
ಚಿಕ್ಕನಾಯಕನಹಳ್ಳಿ,ನ.29 : ಜೆ.ಡಿ.ಎಸ್ ಮುಖಂಡ ಹಾಗೂ ರಾಜ್ಯ ಅಹಿಂದ ಸಂಚಾಲಕ ಸತೀಶ್ಸಾಸಲು ಜೆ.ಡಿ.ಎಸ್ ತೊರೆದು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ.
ಶೆಟ್ಟಿಕೆರೆ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ಜೆ.ಡಿ.ಎಸ್ನಿಂದ ಅಭ್ಯಥರ್ಿಯಾಗಿದ್ದ ಸತೀಶ್ರವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಯ ಆದರ್ಶವನ್ನು ಇಟ್ಟುಕೊಂಡಿರುವ ಪಕ್ಷಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿ.ಬಸವರಾಜುರವರ ಸಮ್ಮುಖದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಸೇರಿರುವುದಾಗಿ ತಿಳಿಸಿದ್ದಾರೆ.
ಸತೀಶ್ರವರ ಜೊತೆ ತೀರ್ಥಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ ಡಿ.ಕೆ, ಸಾಸಲು ಶಶಿಧರ್, ನಿರುವುಗಲ್ ಬಸವರಾಜು ಗಾಂಧಿನಗರ, ಸೊಂಡೇನಹಳ್ಳಿ ಕೃಷ್ಣಮೂತರ್ಿ, ಮಾಕಳ್ಳಿ ಹೀರೇಗೌಡ, ಎಡೆ ಗೊಲ್ಲರಹಟ್ಟಿ ಹೀರಣ್ಣ, ದೊಡ್ಡಿಹಟ್ಟಿ ರಮೇಶ್, ಗದ್ದಿಗೆರ ಕೊಟ್ರೇಶ್, ದೊಡ್ಡರಾಂಪುರ ಕುಮಾರ್ ಸೇರಿದಂತೆ ಹಲವರು ತಮ್ಮ ಜೊತೆ ಕಾಂಗ್ರೆಸ್ ಸೇರ್ಪಡೆಗೊಂಡಿರುವುದಾಗಿ ತಿಳಿಸಿದ್ದಾರೆ. 

56ನೇ ಕನ್ನಡ ರಾಜ್ಯೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ನ.29 : ಸುಭಾಷ್ ಚಂದ್ರಬೋಸ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಇದೇ 30ರ ಶುಕ್ರವಾರ(ಇಂದು) 56ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತುಮಕೂರು ಆಟೋ ಚಾಲಕರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಪ್ರತಾಪ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಧ್ವಜಾರೋಹಣ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ರಾಜ ರಾಜೇಶ್ವರಿ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.
ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ಉಪಾಧ್ಯಕ್ಷೆ ಗಾಯಿತ್ರಿಪುಟ್ಟಣ್ಣ, ಸಾಹಿತಿ ಎಂ.ವಿ.ನಾಗರಾಜ್ರಾವ್, ಸಿಪಿಐ ಪ್ರಭಾಕರ್, ಪಿ.ಎಸ್.ಐ ರವಿಕುಮಾರ್, ಸು.ಚ.ಬೋ.ಆ.ಚಾ.ಮಾ.ಸಂಘದ ಗೌರವಾಧ್ಯಕ್ಷ ರೇಣುಕಸ್ವಾಮಿ ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಉಪಸ್ಥಿತರಿರುವರು.

Tuesday, November 27, 2012


ಎಪಿಎಂಸಿ ಜೆಸಿಎಂ ಬೆಂಬಲಿಗರಿಗೆ ಅಧಿಕ ಜಯ, 2ನೇ ಸ್ಥಾನದಲ್ಲಿ ಜೆಡಿಎಸ್, ಒಂದೊಂದು ಕ್ಷೇತ್ರಕ್ಕೆ ಸಮಾಧಾನ ಪಟ್ಟ ಬಿಜೆಪಿ, ಕಾಂಗ್ರೆಸ್
ಚಿಕ್ಕನಾಯಕನಹಳ್ಳಿ,ನ.27 : ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಾಗಿ ನಡೆದ 13ಕ್ಷೇತ್ರಗಳ ನಿದರ್ೇಶಕರ  ಚುನಾವಣೆಯಲ್ಲಿ ಸಹಕಾರ ಮಾರುಕಟ್ಟೆ ವ್ಯವಹಾರ ಕ್ಷೇತ್ರದಿಂದ ಎಸ್.ಆರ್.ರಾಜ್ಕುಮಾರ್ ಅವಿರೋದ ಆಯ್ಕೆಯಾಗಿದ್ದು ಜೆಸಿಎಂ ಬೆಂಬಲಿತ 8, ಜೆಡಿಎಸ್ ಬೆಂಬಲಿತ 2, ಕಾಂಗ್ರೆಸ್ ಬೆಂಬಲಿತ 1, ಬಿಜೆಪಿ ಬೆಂಬಲಿತ 1 ಕ್ಷೇತ್ರಗಳಲ್ಲಿ ಅಭ್ಯಥರ್ಿಗಳು ಗೆಲುವು ಸಾಧಿಸಿದ್ದಾರೆ.
ಯಳನಡು ಕ್ಷೇತ್ರ : ಕಾಂಗ್ರೆಸ್ ಬೆಂಬಲಿತ ವೈ.ಸಿ.ಸಿದ್ದರಾಮಯ್ಯ(614 ಜಯ), ಲಕ್ಷ್ಮಯ್ಯ(485), ರಮೇಶ್ ಟಿ.ಕೆ(280), ಕರಿಯಪ್ಪ ಪೂಜಾರಿ(208).
ಹುಳಿಯಾರು ಕ್ಷೇತ್ರ : ಬಿಜೆಪಿ ಬೆಂಬಲಿತ ಆರ್.ಪಿ.ವಸಂತಯ್ಯ(842 ಜಯ), ರಾಜಶೇಖರಪ್ಪ(687), ಸಯ್ಯದ್ಜಲೀಲ್(287), ಹೆಚ್.ಆರ್.ರಂಗನಾಥ್(122). 
ಹೊಯ್ಸಳಕಟ್ಟೆ ಕ್ಷೇತ್ರ : ಜೆಡಿಎಸ್ ಬೆಂಬಲಿತ ರುದ್ರಪ್ಪ ಡಿ.ಆರ್(444 ಜಯ), ಡಿ.ಜಿ.ರಾಜಶೇಖರನಾಯ್ಕ(258), ಲಚ್ಚಾನಾಯ್ಕ(192), ರಾಮಾನಾಯ್ಕ(140), ಸೋಮಶೇಖರನಾಯ್ಕ(74).
ತಿಮ್ಮನಹಳ್ಳಿ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಸಣ್ಣಕರಿಯಪ್ಪ(473 ಜಯ), ರಾಮಚಂದ್ರಯ್ಯ (330), ಸ್ವಾಮಿನಾಥ್ಎಸ್.ಆರ್(288), ದಬ್ಬೇಘಟ್ಟ ಬಸವರಾಜು(25).
ತೀರ್ಥಪುರ ಕ್ಷೇತ್ರ : ಜೆ.ಸಿ.ಎಂ ಬೆಂಬಲಿತ ಅಭ್ಯಥರ್ಿ ದ್ರಾಕ್ಷಾಯಣಮ್ಮ(798 ಜಯ), ವಸಂತಲಕ್ಷ್ಮೀ(790), ಈ.ಲತಾ(258), ಈರಮ್ಮ(145).
ಕಂದಿಕೆರೆ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಬಿ.ಸಣ್ಣಯ್ಯ(773ಜಯ), ಬಿ.ಕೆ.ಜಯಣ್ಣ(745), ಡಿ.ಪಂಚಾಕ್ಷರಯ್ಯ(116).
ಚಿಕ್ಕನಾಯಕನಹಳ್ಳಿ ಕಸಬಾ  ಕ್ಷೇತ್ರ : ಜೆಡಿಎಸ್ ಬೆಂಬಲಿತ ಅಭ್ಯಥರ್ಿ ಸಿ.ಎಂ.ರಂಗಸ್ವಾಮಯ್ಯ(679ಜಯ),ಲಿಂಗರಾಜು ದೇವರಮನೆ(310), ಸಿ.ಕೆ.ಶಾಂತಕುಮಾರ್(104), ಕೆ.ಶಿವಣ್ಣ(79), ಬಸವರಾಜು(51), ಸಿ.ಕೆ.ಗುರುಸಿದ್ದಯ್ಯ(39), ಶಾಂತಕುಮಾರ(12).
ಹಂದನಕೆರೆ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಸೋಮಶೇಖರಯ್ಯ(1050 ಜಯ), ಚಂದ್ರಣ್ಣ(895), ನೀಲಕಂಠಪ್ಪ(95), ಕಾಂತರಾಜ್ಅರಸ್(03).
ಮತಿಘಟ್ಟ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಹೆಚ್.ಬಸವರಾಜು(863 ಜಯ), ನಟರಾಜು(688), ಬರಗೂರು ಬಸವರಾಜು(467).
ಶೆಟ್ಟಿಕೆರೆ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಕೆ.ಎಂ.ಈಶ್ವರಮೂತರ್ಿ(870 ಜಯ), ಕೃಷ್ಣಮೂತರ್ಿ(602), ಎನ್.ಬಿ.ಸಿದ್ದೇಗೌಡ(368), ಜೆ.ಸಿ.ಶಿವಕುಮಾರಸ್ವಾಮಿ(70).
ಜೆ.ಸಿ.ಪುರ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಎಂ.ಎಸ್.ಶಿವರಾಜು(1094 ಜಯ), ಗಂಗಾಧರಯ್ಯ(389), ಎಸ್.ಜಿ.ಮಹೇಶ್(356), ಶಂಕರಣ್ಣ(93), ನಿಜಾನಂದಮೂತರ್ಿ(81).
ವರ್ತಕರ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಸಿ.ಎಸ್.ಶಾಂತಕುಮಾರ್(52 ಜಯ), ಎಲ್.ಅರ್.ಬಾಲಾಜಿ(36), ವೈ.ಎ.ರಿಯಾಜ್ಅಹಮದ್(04), ಕೆ.ನಿಂಗರಜು(01) ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಆರ್.ಉಮೇಶ್ಚಂದ್ರ ತಿಳಿಸಿದ್ದಾರೆ.

ಈ ಚುನಾವಣೆ ಉಮ್ಮಸ್ಸು ತುಂಬಿದೆ, ಮುಂದಿನ ಚುನಾವಣೆಗೆ ಸಿದ್ದರಾಗಿ : ಜೆಸಿಎಂ 
ಚಿಕ್ಕನಾಯಕನಹಳ್ಳಿ,ನ.27 : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಮುಂದೆ ಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಹುಮ್ಮಸ್ಸು ಬಂದಂತಾಗಿದ್ದು ಈಗ  ಚುನಾವಣಾ ರಣರಂಗ ಆರಂಭವಾಗಿದೆ,  ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿಯೂ ನಮ್ಮ ಬೆಂಬಲಿತ ಅಭ್ಯಥರ್ಿಗಳು ಗೆಲುವು ಸಾಧಿಸುವಂತೆ ಕಾರ್ಯಕರ್ತರು ದುಡಿಯಬೇಕು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯಥರ್ಿಗಳನ್ನು ಅಭಿನಂದಿಸುವ ಸಲುವಾಗಿ ನವೋದಯ ಕಾಲೇಜು ಆವರಣದಲ್ಲಿ ಕರೆದಿದ್ದ ಸಭೆಯಲ್ಲಿ ಕಾರ್ಯಕರ್ತರನ್ನು ಅಭಿನಂದಿಸಿ ಮಾತನಾಡಿದರು. 
 8ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಉಳಿದ 4ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿರುವುದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ಆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯ ಬಗ್ಗೆ ಹೇಗೆ ಪ್ರಚಾರ ಕೈಗೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಿ ಎಂದರಲ್ಲದೆ ಈಗ ಸೋತಿರುವವರನ್ನು ಮುಂದೆ ಬರುವ ಚುನಾವಣೆಗಳಲ್ಲಿ ಗೆಲ್ಲಿಸುವ ಮುಖೇನ ಸಂಘಟನೆ ಮಾಡಿರಿ ಎಂದು ಕರೆ ಕೊಟ್ಟ ಅವರು ಯುವ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಎಂದರು. 
ತಾಲ್ಲೂಕಿನಲ್ಲಿ ಹುಳಿಯಾರು ದೊಡ್ಡ ಹೋಬಳಿಯಾಗಿದ್ದು ಅಲ್ಲಿ ಪಕ್ಷ ಸೋತಿರುವುದರ ಬಗ್ಗೆ ಯೋಚಿಸಿ ಮುಂದೆ ಹೀಗಾಗದಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದರು.
ಮಾಜಿ ಜಿ.ಪಂ.ಸದಸ್ಯ ಬಿ.ಎನ್.ಶಿವಪ್ರಕಾಶ್ ಮಾತನಾಡಿ ಎಪಿಎಂಸಿ ಚುನಾವಣೆ ಮೂಲಕ ಮುಂಬರುವ ಚುನಾವಣೆಗಳಿಗೆ ಪ್ರತಿ ಗ್ರಾಮದಲ್ಲೂ ಇಂದಿನಿಂದಲೇ ಚುನಾವಣಾ ಪ್ರಚಾರ ಮಾಡಲು ಸಿದ್ದರಾಗೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ಎಪಿಎಂಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಿಮ್ಮನಹಳ್ಳಿಯ ಸಣ್ಣಕರಿಯಪ್ಪ, ತೀರ್ಥಪುರ ದ್ರಾಕ್ಷಾಯಣಮ್ಮ, ಕಂದಿಕೆರೆ ಸಣ್ಣಯ್ಯ, ಹಂದನಕೆರೆ ಸೋಮಶೇಖರಯ್ಯ, ಮತಿಘಟ್ಟ ಹೆಚ್.ಬಸವರಾಜು, ಶೆಟ್ಟಿಕೆರೆ ಈಶ್ವರಮೂತರ್ಿ, ಜೆ.ಸಿ.ಪುರ ಎಮ್.ಎನ್.ಶಿವರಾಜು, ವರ್ತಕರ ಕ್ಷೇತ್ರ ಸಿ.ಎಸ್.ಶಾಂತಕುಮಾರ್ರವರಿಗೆ ಜೆ.ಸಿ.ಮಾಧುಸ್ವಾಮಿ, ತಾ.ಪಂ.ಸದಸ್ಯರಾದ ಶಶಿಧರ್, ನಿರಂಜನಮೂತರ್ಿ ಹಾಗೂ ಕಾರ್ಯಕರ್ತರು, ಬೆಂಬಲಿಗರು ಹಾಜರಿದ್ದರು.
  1.  ತಾಲ್ಲೂಕು ಪ್ರೌಡಶಾಲಾ ಶಿಕ್ಷಕರ ಸಮ್ಮೇಳನ

ಚಿಕ್ಕನಾಯಕನಹಳ್ಳಿ,ನ.27 : ತಾಲ್ಲೂಕು ಪ್ರೌಡಶಾಲಾ ಶಿಕ್ಷಕರ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭವನ್ನು ಇದೇ 29ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಸಮಾರಂಭ ಏರ್ಪಡಿಸಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಉದ್ಘಾಟನೆ ನೆರವೇರಿಸಲಿದ್ದಾರೆ.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿರವರಿಗೆ ಸನ್ಮಾನಿಸಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಬಿ.ಮೋಹನ್ಕುಮಾರ್ ಉಪನ್ಯಾಸ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿರುವರು.
ಬಸವೇಶ್ವರಸ್ವಾಮಿ ದೇವಸ್ಥಾನದ ಪ್ರಾರಂಭೋತ್ಸವ
                             
ಚಿಕ್ಕನಾಯಕನಹಳ್ಳಿ,ನ.27: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕ್ಯಾತನಾಯಕನಹಳ್ಳಿ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದ ಪ್ರಾರಂಭೋತ್ಸವ ಮತ್ತು ಕಳಸ ಪ್ರತಿಷ್ಠಾಪನೆಯು ಗಾಮಸ್ಥರ ಸಮ್ಮುಖ ಹಾಗೂ ಗುಬ್ಬಿ ತಾಲ್ಲೂಕಿನ ಶ್ರೀ ದೊಡ್ಡಗುಣಿಯ ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳ ನೇತೃತ್ವದಲ್ಲಿ ನೆರವೇರಿತು.
ಮುಂಜಾನೆ ಬ್ರಾಂಹ್ಮೀ ಮುಹೂರ್ತದಲ್ಲಿ ಶ್ರೀ ಬಸವೇಶ್ವರಸ್ವಾಮಿಗೆ ನೇತ್ರೋನ್ಮಿಲನ ಹಾಗೂ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸ ಸ್ಥಾಪನೆ, ಬಸವೇಶ್ವರಸ್ವಾಮಿಯವರಿಗೆ ರುದ್ರಾಭಿಷೇಕ, ಪೂಣರ್ಾಹುತಿ, ಮಹಾಮಂಗಳಾರತಿ ನೆರವೇರಿತು.
ಬೆಳಗಿನ ಜಾವ 4ರಿಂದಲೇ ಗ್ರಾಮಸ್ಥರು ದೇವಾಲಯದ ಬಳಿ ಆಗಮಿಸಿ, ಬಯಲು ಬಸವೇಶ್ವರಸ್ವಾಮಿ, ವೀರಭದ್ರಸ್ವಾಮಿ, ಬಸವೇಶ್ವರಸ್ವಾಮಿ, ಮುದ್ದೇನಹಳ್ಳಿ, ಶ್ರೀ ಹೊನ್ನವ್ಮರಡಿ ರಂಗನಾಥಸ್ವಾಮಿ, ಬೆಳಗುಲಿ ಕದರಿ ಲಕ್ಷ್ಮೀನರಸಿಂಹಸ್ವಾಮಿ, ಸೋರಲಮಾವು, ಶ್ರೀ ಉಡಸಲಮ್ಮದೇವಿ, ಹೊಸಕೆರೆ, ಓಬಳಲಿಂಗೇಶ್ವರ ಬ್ರಹ್ಮಲಿಂಗೇಶ್ವರಸ್ವಾಮಿ ಶ್ರೀ ಕಾಟಮ್ಮದೇವರು, ಹಾಗೂ ಕ್ಯಾತನಾಯಕನಹಳ್ಳಿ ದೇವತೆಗಳು ದೇವಾಲಯಕ್ಕೆ ಪ್ರವೇಶವಾಯಿತು. ನಂತರ ಅನ್ನಸಂತರ್ಪಣೆ ನೆರವೇರಿತು.

Monday, November 26, 2012


ಚಿ.ನಾ.ಹಳ್ಳಿಗೆ ಯಡಿಯೂರಪ್ಪನವರನ್ನು ಕರೆಸಿ ಅವರ ಸಮ್ಮುಖದಲ್ಲಿ ಕೆ.ಜೆ.ಪಿ.ಗೆ ಸೇರ್ಪಡೆ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ನ.26: ರಾಜ್ಯದಲ್ಲಿ ನೂತನವಾಗಿ ಆರಂಭವಾಗಿರುವ ಕನರ್ಾಟಕ ಜನತಾ ಪಕ್ಷ ಸೇರುವುದು ಶೇ.90ರಷ್ಟು ನಿಶ್ಚಿತವಾಗಿದೆ, ಡಿ.9ರಂದು ನಡೆಯುವ ಹಾವೇರಿ ಸಮಾವೇಶದ ಬಳಿಕ ಪಕ್ಷಕ್ಕೆ ಸೇರುವುದಾಗಿದ್ದು ಅಂದು ತಾಲ್ಲೂಕಿಗೆ ಯಡಿಯೂರಪ್ಪನವರನ್ನು ಕರೆಸಿ ಜನತೆ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ನವೋದಯ ಕಾಲೇಜು ಆವರಣದಲ್ಲಿ ಕರೆದಿದ್ದ ಜೆ.ಸಿ.ಎಂ. ಅಭಿಮಾನಿಗಳ    ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜೆಡಿಯು ಪಕ್ಷವು ರಾಜ್ಯದಲ್ಲಿ ಆಥರ್ಿಕವಾಗಿ, ರಾಜಕೀಯವಾಗಿ  ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಪಕ್ಷದಿಂದ ಸಾಧ್ಯವಾಗದ ಕಾರಣ ಬದಲಿ ಪಕ್ಷ ಸೇರ್ಪಡೆಗೊಳ್ಳುವಂತೆ ಕಾರ್ಯಕರ್ತರು ಸೂಚಿಸಿದ್ದರು. ಆ ಸಂಬಂಧ ರಾಜ್ಯಮಟ್ಟದ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರುವಂತೆ ಹಲವು ಬಾರಿ ಒತ್ತಡ ಹೇರಿದ್ದರು ಆದರೆ ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ಸ್ಥಾನಮಾನ ದೊರಕುವುದಿಲ್ಲ ಹಾಗೂ ರಾಮಕೃಷ್ಣ ಹೆಗ್ಗಡೆ, ಪಟೇಲ್ರು ಬೆಳಸಿದ ಜೆಡಿಯು ಪಕ್ಷವನ್ನು ಬಿಡಬಾರದು ಎಂಬ ಕಾರಣದಿಂದ ಪಕ್ಷ ಸೇರಲು ಹಿಂದೇಟು ಹಾಕಲಾಯಿತು ಎಂದರಲ್ಲದೆ, ಈಗ ಪಕ್ಷವು ರಾಜ್ಯದಲ್ಲಿ ನೆಲೆಯೂರಲು ಪರದಾಡುತ್ತಿದೆ, ಅಲ್ಲದೆ ಯಡಿಯೂರಪ್ಪನವರ ನೇತೃತ್ವದಲ್ಲಿ ಆರಂಭವಾಗಲಿರುವ ಕನರ್ಾಟಕ ಜನತಾ ಪಕ್ಷ ಸೇರಲು ಪಕ್ಷದ ಮುಂದಾಳುಗಳು ಒತ್ತಾಯ ಮಾಡಿದ್ದಾರೆ, ಆದರೆ ಈ ಬಗ್ಗೆ ಕಾರ್ಯಕರ್ತರಲ್ಲಿ ಚಚರ್ಿಸಿ ಹಾಗೂ ಕೆಜೆಪಿ ಪಕ್ಷವು ಜಾತಿ ಸಂಕೋಲೆಯಿಂದ ಹೊರಗೆ ಬಂದರೆ ಅಲ್ಲದೆ ನಾವಿಟ್ಟಿರುವ ಬೇಡಿಕೆಗಳಲ್ಲಿ ಶೇ.10 ರಷ್ಟಾದರೂ ಬೇಡಿಕೆ ಈಡೇರಿದ ನಂತರ ಪಕ್ಷ ಸೇರುವುದಾಗಿ ತಿಳಿಸಿದರು.
ಚುನಾವಣೆಗೆ ತಯಾರಿ : ಮುಂದಿನ ಮೂರು ತಿಂಗಳಲ್ಲಿ ಯಾವಾಗ ಬೇಕಾದರೂ ವಿದಾನಸಭೆ ಚುನಾವಣೆ ನಡೆಯಬಹುದು, ಅದಕ್ಕಾಗಿ ಕಾರ್ಯಕರ್ತರೆಲ್ಲಾ ಈಗಿನಿಂದಲೇ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಪ್ರಚಾರ ನಡೆಸಿ ಎಂದು ಕರೆ ಕೊಟ್ಟ ಜೆ.ಸಿ.ಮಾಧುಸ್ವಾಮಿ ಅದಕ್ಕಾಗಿ ಕಾರ್ಯಕರ್ತರು ನನ್ನನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ಚುನಾವಣಾ ಬಿರಿಸಿನಲ್ಲಿ ತೊಡಗಿಸಿಕೊಳ್ಳವಂತೆ ತಿಳಿಸಿದ ಅವರು ಅದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಈಗಿನಿಂದಲೇ ಪ್ರಾರಂಭಿಸಿ ಎಂದರು. ಪೋಲಿಸ್ ಇಂಟಲಿಜೆನ್ಸಿ ಹಾಗೂ ಮಾದ್ಯಮಗಳ ಪ್ರಕಾರ ತುಮಕೂರು ಜಿಲ್ಲೆಯಲ್ಲಿ ಜೆ.ಡಿ.ಎಸ್ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿದು ಬಂದಿದೆ ಎಂದರು.
ಕಾರ್ಯಕರ್ತರ ಅಭಿಪ್ರಾಯ : ಜೆ.ಸಿ.ಮಾಧುಸ್ವಾಮಿರವರು ಯಾವ ಪಕ್ಷಕ್ಕೆ ಹೋದರು ನಾವು ಅವರ ಹಿಂದೆ ಇದ್ದು ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಮಾಡುತ್ತೇವೆ ಎಂದು ಸಭೆಯಲ್ಲಿ ಸೇರಿದ್ದ ಕಾರ್ಯಕರ್ತರು ಅಭಿಪ್ರಾಯ ತಿಳಿಸಿದರಲ್ಲದೆ, ಪಕ್ಷದಲ್ಲಿ ಯುವಕರ ಕೊರತೆ ಇದೆ ಅದಕ್ಕಾಗಿ ಪಕ್ಷಕ್ಕೆ ಯುವ ಕಾರ್ಯಕರ್ತರನ್ನು ಸೇರ್ಪಡೆಗೊಳಿಸಬೇಕು ಎಂದರಲ್ಲದೆ ಕಳೆದ
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬುಕ್ಕಾಪಟ್ಟಣ ಸೇರಿದಂತೆ ಆ ಭಾಗದ ಕೆಲವು ಪ್ರದೇಶಗಳಲ್ಲಿನ ಮತಗಳು ಸಿಗದೆ ಸೋಲನ್ನು ಅನುಭವಿಸಲಾಯಿತು. ಈ ಭಾರಿ ಆ ಭಾಗದಲ್ಲಿ ಹೆಚ್ಚು ಪ್ರಚಾರ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ತಾ.ಪಂ.ಸದಸ್ಯ ಶಶಿಧರ್, ನಿರಂಜನಮೂತರ್ಿ, ಮಾಜಿ ತಾ.ಪಂ.ಅಧ್ಯಕ್ಷ ಸುರೇಂದ್ರಯ್ಯ, ಲೋಕೇಶ್ ಮೂತರ್ಿ, ತಾ.ಪಂ.ಮಾಜಿ ಸದಸ್ಯ ಶಿವಣ್ಣ,  ಶಂಕರಣ್ಣ, ಕೆ.ಎಂ.ರಾಜಶೇಖರಪ್ಪ, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಕನಕ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ
ಚಿಕ್ಕನಾಯಕನಹಳ್ಳಿ,ನ.26 : ತಾಲ್ಲೂಕು ಮಟ್ಟದ ಭಕ್ತ ಕನಕದಾಸರ ಜಯಂತ್ಯೋತ್ಸವವನ್ನು ಇದೇ 1ರ ಶನಿವಾರ ಬೆಳಗ್ಗೆ 9ಗಂಟೆಗೆ ತಾಲ್ಲೂಕು ಆಡಳಿತ ವರ್ಗದ ಪರವಾಗಿ ಕನಕದಾಸರ ವೈಭವದ ಉತ್ಸವವು ಪುರಸಭೆಯ ಮುಂಭಾಗದಿಂದ ನಗರದ ರಾಜಬೀದಿಗಳಲ್ಲಿ ನಡೆಯುವುದು.
ನಂತರ ಮಧ್ಯಾಹ್ನ 12.30ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ಸಮಾರಂಭವನ್ನು ಏರ್ಪಡಿಸಿದ್ದು, ಈ ಉತ್ಸವದೊಂದಿಗೆ
ಸಂಗೊಳ್ಳಿ ರಾಯಣ್ಣ ವೇಷಗಾರಿಕೆ, ಪಾಳೇಗಾರರ ವೇಷ, ಕನಕ ದೃಶ್ಯಾವಳಿ, ಕನಕದಾಸರ ವೇಷಗಾರಿಕೆ, ಕನಕನ ಕಿಂಡಿ ದೃಶ್ಯಾವಳಿ ಹಾಗೂ  ನಾಡಿನ ಹೆಸರಾಂತ ಕಲಾ ತಂಡಗಳು ಮತ್ತು ಸ್ಥಳೀಯ ಜಾನಪದ ತಂಡಗಳಾದ ದೊಳ್ಳು ಕುಣಿತ, ವೀರಭದ್ರನ ಕುಣಿತ, ನಾಸಿಕ್ಡೋಲು, ಹಾಗೂ ಗೊರಪ್ಪನವರ ತಂಡ, ದಾಸಪ್ಪನ ತಂಡ, ಹಕ್ಕ-ಬುಕ್ಕರು, ಒನಕೆ ಓಬವ್ವನ ಸ್ಥಬ್ದ ಚಿತ್ರಗಳೊಂದಿಗೆ ಮೆರವಣಿಗೆಗಳನ್ನು ಏರ್ಪಡಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತರ ಸಮಾವೇಶಕ್ಕೆ ಅಧಿಕ ಜನರು ಭಾಗವಹಿಸುವಂತೆ ಮನವಿ
ಚಿಕ್ಕನಾಯಕನಹಳ್ಳಿ,ನ.26 : ತುಮಕೂರಿನಲ್ಲಿ ಬೆಂಗಳೂರು ವಿಭಾಗ ಮಟ್ಟದ ಅಲ್ಪ ಸಂಖ್ಯಾತರ ಸಮಾವೇಶವನ್ನು ಕಾಂಗ್ರೆಸ್ ಪಕ್ಷ ಆಯೋಜಿಸಿದ್ದು ಈ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಜನಾಂಗ ಸಮುದಾಯದ ಕ್ಷೇತ್ರ ವ್ಯಾಪ್ತಿಯ ಸಕ್ರಿಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂಘಟನಾ ಉಸ್ತುವಾರಿ ಮತ್ತು ವೀಕ್ಷಕ ಕ್ಯಾಪ್ಟನ್ ಸೋಮಶೇಖರ್ ಮನವಿ ಮಾಡಿದ್ದಾರೆ.
ತುಮಕೂರು ನಗರದ ಸಕರ್ಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಡಿಸೆಂಬರ್ 2ರ ಭಾನುವಾರ ನಡೆಯುವ ಸಮಾವೇಶಕ್ಕೆ  ಕೇಂದ್ರ ಸಚಿವ ರೆಹಮಾನ್ಖಾನ್ ಸೇರಿದಂತೆ ಕೇಂದ್ರ ಸಕರ್ಾರದ ಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋಡೆಕೆರೆಯಲ್ಲಿ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ
ಚಿಕ್ಕನಾಯಕನಹಳ್ಳಿ,ನ.26 : ತಾಲೂಕಿನ ಗೋಡೆಕೆರೆಯಲ್ಲಿ ಭಾರತ್ ನಿಮರ್ಾಣ್ ರಾಜೀವ್ಗಾಂಧಿ ರಾಷ್ಟ್ರೀಯ ಸೇವಾ ಕೇಂದ್ರದ ಕಟ್ಟಡದ ಉದ್ಘಾಟನಾ ಮತ್ತು ಸಾರ್ವಜನಿಕ ಗ್ರಂಥಾಲಯ ಕಟ್ಟಡದ ಶಿಲನ್ಯಾಸ ಸಮಾರಂಭವು ಇದೇ 30ರ ಶುಕ್ರವಾರ ನಡೆಯಲಿದೆ.
ಗೋಡೆಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಗೋಡೆಕೆರೆ ಸ್ಥಿರ ಪಟ್ಟಾಧ್ಯಕ್ಷರಾದ ಸಿದ್ದರಾಮದೇಶೀಕೇಂದ್ರಸ್ವಾಮಿ, ಚಟಪಟ್ಟಾಧ್ಯಕ್ಷರಾದ ಮೃತ್ಯುಂಜಯದೇಶೀಕೇಂದ್ರಸ್ವಾಮಿ ದಿವ್ಯ ಸಾನಿದ್ಯ
ವಹಿಸಲಿದ್ದಾರೆ.ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷೆ ಜಿ.ಎಸ್.ಕುಶಲ ಮರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಸೊಗಡು ಶಿವಣ್ಣ ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ. ಶಾಸಕ ಸಿ.ಬಿ.ಸುರೇಶ್ಬಾಬು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಸದ ಜಿ.ಎಸ್.ಬಸವರಾಜು ಶಿಲಾ ಫಲಕ ಅನಾವರಣಗೊಳಿಸಲಿದ್ದಾರೆ.

Thursday, November 22, 2012

november-2012

november -2012

november-2012

Saturday, November 17, 2012


ಚೌಡಿಕೆ ಎಲ್ಲಮ್ಮ ದೇವಾಲಯದ ಉದ್ಘಾಟನೆ, ಕಳಶಾರೋಹಣ
ಚಿಕ್ಕನಾಯಕನಹಳ್ಳಿ,ನ.16 : ಪಟ್ಟಣದ ಚೌಡಿಕೆ ಗುಡಿಕಟ್ಟಿನ ಶ್ರೀ ರೇಣುಕಾ ಯಲ್ಲಮ್ಮದೇವಿಯ ನೂತನ ದೇವಾಲಯ ಉದ್ಘಾಟನೆ ಮತ್ತು ವಿಮಾನ ಗೋಪುರಕ್ಕೆ ಕಳಶಾರೋಹಣ ಮಹೋತ್ಸವವನ್ನು ಇದೇ ನವಂಬರ್ 18, 19, ಹಾಗೂ 20ರಂದು ಏರ್ಪಡಿಸಲಾಗಿದೆ.
18ರಂದು ಭಾನುವಾರ ಗೋಧೂಳಿ ಲಗ್ನದಲ್ಲಿ ಚೌಡಿಕೆ ಗುಡಿಗಟ್ಟಿನ ಶ್ರೀ ರೇಣುಕಾ ಯಲ್ಲಮ್ಮದೇವಿಯ ದೇವಸ್ಥಾನದ ಮುಂಭಾಗದಲ್ಲಿ ಗಣಪತಿ ಪೂಜೆ, ಧ್ವಜಾರೋಹಣ ಹಾಗೂ ಗಂಗಾಪೂಜೆ ನಂತರ ಮಂಡಲ ಕಳಸ ಸ್ಥಾಪನೆ, ರಾತ್ರಿ 10ಕ್ಕೆ ದೇವಿಯೊಂದಿಗೆ ತೀರ್ಥರಾಮೇಶ್ವರ ಕ್ಷೇತ್ರಕ್ಕೆ ಪಯಣ, 19ರಂದು ತೀರ್ಥರಾಮೇಶ್ವರ ವಜ್ರದ ಹೊಳೆಯಲ್ಲಿ ದೇವಿಯವರಿಗೆ ಪುಣ್ಯ ಜಲಗಂಗಾ  ಸ್ನಾನ, ಮಧ್ಯಾಹ್ನ 12.15ಕ್ಕೆ ನೂತನ ದೇವಾಳಯದ ಪ್ರವೇಶ ಮತ್ತು ಚೌಡಿಕೆ ರೇಣುಕಾ ಯಲ್ಲಮ್ಮ ದೇವಿಯವರ ಪ್ರತಿಷ್ಠಾಪನೆ, 20ರ ಮಂಗಳವಾರದಂದು ದೀಕ್ಷೆ ಪಡೆದ ಚೌಡಿಕೆ ಬಾಲಕರಿಂದ ಜೋಗಿ ಭೀಕ್ಷಾಸೇವೆ ನಂತರ ಕುಂಕುಮಾರ್ಚನೆ ಮಹಾಮಂಗಳಾರ ಕಾರ್ಯಕ್ರಮ ನಡೆಯಲಿದೆ.
ಮಾದಿಗರು ಹಾಗೂ ದಕ್ಕಲಿಗರ ಸಹಪಂಕ್ತಿ ಭೋಜನ
ಚಿಕ್ಕನಾಯಕನಹಳ್ಳಿ,ನ.16 : ಮಾದಿಗ ಜನಾಂಗ ದಕ್ಕಲಿಗ ಜನಾಂಗವನ್ನು ಅಸ್ಪೃಶ್ಯತೆಯಿಂದ ಕಾಣುತ್ತಿದೆ ಎಂದು ಕೆಲವರು ತಾಳಿದ್ದ ಭಾವನೆಯನ್ನು ಹೋಗಲಾಡಿಸಲು ಮಾದಿಗ ಹಾಗೂ ದಕ್ಕಲಿಗ ಸಮುದಾಯ ಸೇರಿ ಸಹಪಂಕ್ತಿ ಭೋಜನ ಏರ್ಪಡಿಸಿರುವುದೇ ಉದಾಹರಣೆ ಎಂದು ಮಾದಿಗ ಜನಾಂಗದ ಮುಖಂಡ ಬೇವಿನಹಳ್ಳಿ ಚನ್ನಬಸವಯ್ಯ ತಿಳಿಸಿದರು.
ಪಟ್ಟಣದ ಗಾಂಧಿನಗರದ ದಕ್ಕಲಿಗ ವಾಸಸ್ಥಾನದಲ್ಲಿ ಪ್ರಗತಿಪರ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ಮಾದಿಗ, ದಕ್ಕಲಿಗ ಸಮುದಾಯದ ಸಹಪಂಕ್ತಿ ಭೋಜನ ಮತ್ತು ಸಕರ್ಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾದಿಗ ಹಾಗೂ ದಕ್ಕಲಿಗ ಜನಾಂಗದವರ ಒಬ್ಬರಿಗೊಬ್ಬರ ಭಾಂದವ್ಯ ಉತ್ತಮವಾಗಿದೆ, ಈ ಭಾಂದವ್ಯವನ್ನು ಹೋಗಲಾಡಿಸಲು ಈ ಸಮುದಾಯದವರ ಬಗ್ಗೆ ಅಪಪ್ರಚಾರ ನಡೆಸುತ್ತಿವೆ. ಅಸ್ಪೃಶ್ಯತೆಯಿಂದಾಗಿ ಸಮಾಜದಿಂದ ದೂರ ಉಳಿದಿರವು  ಜನಾಂಗದವರನ್ನು ಮುಖ್ಯವಾಹಿನಿಗೆ ಕರೆತರಲು ಇಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿರುವುದು ಎಂದರಲ್ಲದೆ ಯಾವೋದೋ ಒಂದು ಪಿ.ಎಚ್.ಡಿ ಮಾಡಲು ದಕ್ಕಲಿಗ ಜನಾಂಗವನ್ನು ಬಳಸಿ ಜನಾಂಗದ ಸ್ಥಿತಿಯನ್ನು ಕೆಳವರ್ಗಕ್ಕೆ ಕರೆದೊಯ್ಯುವುದು ಸರಿಯಲ್ಲ ಎಂದು ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಮಾದಿಗರು ಹಾಗೂ ದಕ್ಕಲಿಗ ಜನಾಂಗದವರು ಇರುವಂತಹ ಬಿನ್ನಾಭಿಪ್ರಾಯಗಳನ್ನು ತೊಡೆದು ಹಾಕಲು ಸಹಪಂಕ್ತಿ ಭೋಜನ ಕಾರ್ಯಕ್ರಮ ಏರ್ಪಡಿಸಿರುವುದು ಉತ್ತಮ ಆದರೆ ಸಹಪಂಕ್ತಿ ಭೋಜನ ಕಾರ್ಯಕ್ರಮ ಸ್ಥಳೀಯರೊಂದಿಗೆ ಆಗದೆ ಮೇಲ್ವರ್ಗದವರನ್ನು ಕರೆದು ಸಹಪಂಕ್ತಿ ಭೋಜನ  ಮಾಡಿದರೆ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಸಲಹೆ ನೀಡಿದರು.
ಸಕರ್ಾರ ದಲಿತರನ್ನು ದೇವಾಲಯಗಳ ಪ್ರವೇಶಕ್ಕೆ ಅವಕಾಶ ನೀಡಿದರೂ, ಕೆಲವು ದೇವಾಲಯಗಳಲ್ಲಿ ಒಳಗೆ ಪ್ರವೇಶಿಸಲು ಅವಕಾಶ ನೀಡದೇ ಇರುವುದು ವಿಷಾದನೀಯ, ದಕ್ಕಲಿಗರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಸಲಹೆ ನೀಡಿದ ಅವರು ತಾಲ್ಲೂಕಿನ ಹೊಯ್ಸಲಕಟ್ಟೆ ಗ್ರಾಮಪಂಚಾಯ್ತಿಗೆ ಅಲೆಮಾರಿ ಜನಾಂಗದವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಅಲೆಮಾರಿ ಜನಾಂಗಕ್ಕೂ ರಾಜಕೀಯ ಪ್ರಾತಿನಿದ್ಯದ ಜೊತೆಯಲ್ಲಿ ಆಥರ್ಿಕ, ಶೈಕ್ಷಣಿಕ, ಸಾಮಾಜಿಕವಾಗಿ ಮುಂದೆ ಬರುವುದು ಮುಖ್ಯ ಎಂದರು. ದಕ್ಕಲಿಗ ಕಾಲೋನಿಯಲ್ಲಿ ಸಮುದಾಯ ಭವನ ನಿಮರ್ಿಸಲು ಸ್ಥಳಿಯ ಶಾಸಕರ ಅನುಧಾನದಲ್ಲಿ 2 ಲಕ್ಷ ರೂಪಾಯಿ ಬಿಡುಗಡೆಗೆ ಮಂಜೂರಾತಿ ನೀಡಿದರು.
ತಹಶಿಲ್ಧಾರ್ ಎನ್.ಆರ್. ಉಮೇಶ್ಚಂದ್ರ ಮಾತನಾಡಿ ದಕ್ಕಲಿಗ ಜನಾಂಗ ಅತಿ ಹಿಂದುಳಿದಿದ್ದು ದಲಿತ ಹಾಗೂ ದಕ್ಕಲಿಗ ಎಂಬ ಕೀಳು ಮೇಳು ಎಂಬ ಬಾವನೆ ಬರಬಾರದು ದಕ್ಕಲಿಗ ಜನಾಂಗ ವಾಸಿಸುವ ಸ್ಥಳದಲ್ಲಿ ಮನೆ ಹಾಗೂ ನಿವೇಶನ ವ್ಯವಸ್ಥೆಗೆ ಪುರಸಭೆ ಹಾಗೂ ತಾಲ್ಲೂಕು ಆಡಳಿತವತಿಯಿಂದ ಸಕರ್ಾರ ಸವಲತ್ತುಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ದಕ್ಕಲಿಗ ಸಮುದಾಯದ ಬಬ್ಬೂರಯ್ಯ ಮಾತನಾಡಿ ನಾವೂ ಹಾಗೂ ಮಾದಿಗರು ಅನ್ಯೋನ್ಯದಿಂದಿದ್ದೇವೆ ಕಿಡಿಗೇಡಿಗಳಿಂದ ಜನಾಂಗ-ಜನಾಂಗಗಳ ಸಮಸ್ಯೆ ಏರ್ಪಡುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಡಿ.ಎಸ್.ಎಸ್ ಮುಖಂಡ ಲಿಂಗದೇವರು ಮಾತನಾಡಿ ದಕ್ಕಲಿಗ ಹಾಗೂ ಮಾದಿಗರಲ್ಲಿ ಬಿರುಕು ಮೂಡಿಸಲು ಗೊಂದಲ ಸೃಷ್ಠಿಸಿದ್ದಾರೆ ಆದರೆ ನಮ್ಮ ಜನಾಂಗಗಳಲ್ಲಿ ಯಾವುದೇ ರೀತಿಯ ಅಸ್ಪುಶ್ಯತೆ ಆಚರಣೆ ಇಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ಸಿ.ಟಿ.ವರದರಾಜು, ಸಿ.ಎಲ್.ದೊಡ್ಡಯ್ಯ, ಬಿ.ಇ.ಓ ಸಾ.ಶಿ.ನಾಗೇಶ್, ಗೋ.ನಿ.ವಸಂತಕುಮಾರ್, ಬಬ್ಬೂರಯ್ಯ, ಲಿಂಗದೇವರು, ಜೆ.ಸಿ.ಪುರ ಗೋವಿಂದರಾಜು, ಮಲ್ಲಿಕಾಜರ್ುನಯ್ಯ, ಅಶೋಕ, ಮತ್ತಿತರು ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಅಥ್ಲೆಟಿಕ್ಗೆ ಆಯ್ಕೆಯಾಗಿರುವ ಜಿ.ವಿ.ರೂಪೇಶ್ಗೆ ಎ.ಬಿ.ವಿ.ಪಿಯಿಂದ ಅಭಿನಂದನೆ
ಚಿಕ್ಕನಾಯಕನಹಳ್ಳಿ, ಪಟ್ಟಣದ ಸಕರ್ಾರಿ ಸ್ವತಂತ್ರ್ಯ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಜಿ.ವಿ ರೂಪೇಶ್ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ ವಿಭಾಗದಲ್ಲಿ ಆಯ್ಕೆಯಾಗಿದ್ದು ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಬಿ.ವಿ.ಪಿ ತಾಲ್ಲೂಕು ಪ್ರಮುಖ್ ಚೇತನ್ ಪ್ರಸಾದ್ ನಮ್ಮರೂರಿನ ವಿದ್ಯಾಥರ್ಿರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ  ಆಯ್ಕೆಯಾಗಿರುವದು ಸಂತಸದ ವಿಷಯ. ಸರಕಾರ ಪ್ರತಿ ತಾಲೂಕಿನಲ್ಲಿ ಅಥ್ಲೆಟಿಕ್ಸಗೆ ಸಂಭದಪಟ್ಟ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಹಾಗೂ ಇಂತವರನ್ನು ಗುರುತಿಸಿ ಅವರಿಗೆ ಉಚಿತ ಶಿಕ್ಷಣ ನೀಡಬೇಕು, ನಗರದ ಕ್ರೀಡ ಅಭಿಮಾನಿಗಳು ಹಾಗೂ ಜನಪ್ರತಿನಿಧಿಗಳು ಇಂತಹ ಕ್ರೀಡ ಪಟುಗಳನ್ನು ಪ್ರೋತ್ಸಹ ನೀಡಬೇಕು. ಇದರಿಂದ ನಮ್ಮ ತಾಲ್ಲೂಕಿಗೂ ಹೆಸರು ಬರುತ್ತದೆ ಎಂದರೂ.
ಕ.ರ.ವೇ ಅಧ್ಯಕ್ಷ ಗುರುಮೂತರ್ಿ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ಯಾರು ಸಹ ರಾಷ್ಟ್ರಮಟ್ಟಕೆ ಆಯ್ಕೆಯಾಗಿಲ್ಲ ನಮ್ಮ ಊರಿನ ಹುಡುಗ ಆಯ್ಕೆಯಾಗಿರುವುದು ಸಂತಸ ತಂದಿದೆ. ಹೆಚ್ಚಿನ ಪ್ರೋತ್ಸಹ ಸಿಕ್ಕರೆ ಅಂತರಾಷ್ಟ್ರಿಯ ಮಟ್ಟಕ್ಕೆ ಆಯ್ಕೆಯಾಗುವುದರಲ್ಲಿ ಅನುಮಾನವಿಲ್ಲ, ಪರಿಶ್ರಮ ಮುಖ್ಯ ಎಂದರು.
ಈ ಸಂದರ್ಭದಲ್ಲಿ ರೂಪೇಶ್ನ ತಂದೆ,ತಾಯಿ, ಶರತ್, ವಾಸು ಹರೀಶ್, ಸುದಕರ್, ಮಾರುತಿ, ಅಕ್ರಂ ಉಪಸ್ಥಿತರಿದ್ದರು.

ಡಾ.ರಾಜ್ ನೆನಪು : ಸಾರ್ವಜನಿಕರಿಂದ ಸಾಕ್ಷ್ಯಚಿತ್ರಗಳ ವೀಕ್ಷಣೆ
ಚಿಕ್ಕನಾಯಕನಹಳ್ಳಿ,ನ.16 : ಡಾ.ರಾಜ್ಕುಮಾರ್ರವರು ಅಭಿನಯಿಸಿರುವ 200ಕ್ಕೂ ಹೆಚ್ಚು ಚಿತ್ರಗಳ ಸಾಕ್ಷ್ಯ ಚಿತ್ರಗಳ ಪೋಟೋ, ಪುಸ್ತಕಗಳ, ಪ್ರದರ್ಶನ, ಹಾಗೂ ರಾಜ್ರವರು ಹಾಡಿರುವ ಹಾಡುಗಳ ಸಿ.ಡಿ.ಯನ್ನು ಪಟ್ಟಣದ ಸುಪ್ರೀಂ ಸೆಲೂನ್ನಲ್ಲಿ ಸಾರ್ವಜನಿಕವಾಗಿ ಪ್ರದಶರ್ಿಸಲಾಗಿತ್ತು. 
ಡಾ.ರಾಜ್ರವರು ಅಭಿನಯಿಸಿರುವ ಚಿತ್ರಗಳ ಸುಮಾರು 2000ಸಾವಿರಕ್ಕೂ ಹೆಚ್ಚು ಪೋಟೋಗಳನ್ನು ಪ್ರದರ್ಶನಕ್ಕಿಡಲಾಗಿದ್ದು ಈ ಚಿತ್ರಗಳಲ್ಲಿ ರಾಜ್ರವರು ಅಭಿನಯಿಸಿರುವ ಮೊದಲ ಚಿತ್ರಗಳಿಂದ ಕೊನೆಯ ಚಿತ್ರದವರೆವಿಗೂ ಪ್ರದರ್ಶನಕ್ಕಿಡಲಾಗಿತ್ತು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಡಾ.ರಾಜ್ರವರು ಪೌರಾಣಿಕ, ಸಾಮಾಜಿಕಗಳಲ್ಲಿನ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿ ಚಿತ್ರರಂಗವನ್ನು ಉತ್ತುಂಗದ ಮಟ್ಟಕ್ಕೆ ಕರೆದೊಯ್ದಿದ್ದಾರೆ ಅವರ ನೆನಪು ಸದಾ ಇರಬೇಕು, ಅಂತಹ ಕಾರ್ಯದಲ್ಲಿ ಸುಬ್ರಹ್ಮಣ್ಯರವರು ಮಾಡುತ್ತಿರುವುದು ಶ್ಲಾಘನೀಯ ಎಂದ ಅವರು ಈ ರೀತಿಯ ಕಾರ್ಯಕ್ರಮಗಳು ನಾಡಿನ ಎಲ್ಲೆಡೆ ನಡೆಯಬೇಕು ಎಂದರು.
ಸುಪ್ರೀಂ ಸೆಲೂನ್ನ ಮಾಲೀಕ ಸುಬ್ರಹ್ಮಣ್ಯ ಮಾತನಾಡಿ ಕಳೆದ 8ತಿಂಗಳಿನಿಂದಲೂ ಸೆಲೂನ್ನಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ನಮ್ಮ ಕೆಲಸದ ಜೊತೆಗೆ ಸಾಹಿತ್ಯ ಸೇವೆ ಮಾಡುವ ಕಾರ್ಯಕ್ಕಾಗಿ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದ ಅವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಡಾ.ರಾಜ್ರವರನ್ನು ನೆನಪಿಗಾಗಿ ರಾಜ್ರವರು ಅಭಿನಯಿಸಿರುವ ಹಾಗೂ ಅವರ ವಿವಿಧ ರೀತಿಯಲ್ಲಿ ಚಿತ್ರಗಳನ್ನು ಸಂಗ್ರಹಿಸಿ ಇಂದು ಪ್ರದರ್ಶನಕ್ಕಿಡಲಾಗಿದೆ ಎಂದರಲ್ಲದೆ ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರಿಗೆ ಹಾಗೂ ಕಲಾವಿದರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಡಾ.ರಾಜ್ಕುಮಾರ್ ಅಭಿಮಾನಿ ರೂಪೇಶ್ ಮಾತನಾಡಿ ಸುಮಾರು 25-30 ವರ್ಷಗಳಿಂದ ಸಂಗ್ರಹಿಸಿ ಇಟ್ಟಿದ್ದ ಚಿತ್ರಗಳು ಹಾಗೂ ಪುಸ್ತಕಗಳನ್ನು ಇಂದು ಪ್ರದರ್ಶನಕ್ಕಿಡಲಾಗಿದೆ ಅಲ್ಲದೆ ಸಾರ್ವಜನಿಕರು, ಡಾ.ರಾಜ್ರವರ ಅಭಿಮಾನಿಗಳು, ಕಲಾವಿದರು, ಗಾಯಕರು ಸಾಕ್ಷ್ಯಚಿತ್ರ ವೀಕ್ಷಿಸಿದರು.

9ಡಿಗ್ರಿಯಷ್ಟು ಕಡಿಮೆಯಾದ ಉಷ್ಣಾಂಶ, ಹೆಚ್ಚಿದ ಶೀತ, ಜನರಿಗೆ ನಡಕು
ಚಿಕ್ಕನಾಯಕನಹಳ್ಳಿ,ನ.17 : ರಾಜ್ಯದ ಹವಾಮಾನಕ್ಕೆ ಹೋಲಿಸಿದರೆ  ತಾಲೂಕಿನಲ್ಲಿ ಅತ್ಯಂತ ಕನಿಷ್ಟ ಉಷ್ಣಾಂಶ  ದಾಖಲಾಗಿದ್ದು, ಮಾಮೂಲಿಗಿಂತ 9ಡಿಗ್ರಿ ಉಷ್ಣಾಂಶಕಡಿಮೆ ಯಾಗಿದೆ, ಈ ಮೂಲಕ ವಾತಾವರಣ  ಇಲ್ಲಿನ ಜನಕ್ಕೆ ಭಾರಿ ಚಳಿಯನ್ನು ತಂದೊಡ್ಡಿದೆ.
ಕಳೆದ ಮೂರು ದಿನಗಳಿಂದ ಇಲ್ಲಿನ  ಜನ  ವಿಪರೀತ ಚಳಿಯಿಂದಾಗಿ ಮುಂಜಾನೆ ಹೊರಗೆ ಬರಲು, ಸ್ವಟರ್, ಟೋಪಿ ಹಾಗೂ ಜಕರ್ಿನ್ಗಳ ಮೊರೆ ಹೋಗುತ್ತಿದ್ದಾರೆ.   
ಮುಂಜಾನೆಯ ಶೀತವಾತಾವರಣದಿಂದ ಮೈ ಬಿಸಿ ಮಾಡಿಕೊಳ್ಳಲು ಜನರು ರಸ್ತೆಯಲ್ಲಿರುವ ಕೆಲ ಕಸದ ವಸ್ತುಗಳನ್ನು ಸೇರಿಸಿ ಬೆಂಕಿ ಹಾಕಿ ಬೆಚ್ಚಗಾಗುತ್ತಿದ್ದಾರೆ. 
21 ಡಿಗ್ರಿ ಸೆಲ್ಸಿಯಸ್ನಷ್ಟು ವಾತಾವರಣ ಕೂಡಿದ್ದು ಪ್ರತಿ ಗಂಟೆಗೆ 10 ಕಿ.ಮೀ ವೇಗದಂತೆ ಗಾಳಿ ಬೀಸುತ್ತಿದ್ದು  ರಾತ್ರಿ 8ರಿಂದ ಶುರುವಾಗುವ ಶೀತವಾತಾವರಣ ಬೆಳಗಿನ ಜಾವ 4ಗಂಟೆ ಸುಮಾರಿನಲ್ಲಿ ಹೆಚ್ಚುತ್ತದೆ. ಈ ಶೀತವಾತಾವರಣದಿಂದ ಶಾಲಾ ಮಕ್ಕಳಿಂದ ಹಿಡಿದು ವಯಸ್ಕ ವೃದ್ದರವರೆಗೂ ಆರೋಗ್ಯ ಹದೆಗಟ್ಟಿದೆ. ನೆಗಡಿ, ಕೆಮ್ಮು, ಗಂಟಲ ಕೆರೆತ, ಜ್ವರದಿಂದ ಜನರು ಆಸ್ಪತ್ರೆಗೆ ತೆರಳುತ್ತಿರುವುದು ಕಂಡುಬರುತ್ತಿದೆ.
ಎ.ಪಿ.ಎಂ.ಸಿ.ಚುನಾವಣೆ: ಚಳಿಯಲ್ಲಿ ಕಾವೇರುತ್ತಿರುವ ಸಮರ
ಚಿಕ್ಕನಾಯಕನಹಳ್ಳಿ,ನ.17 : ಚಿಕ್ಕನಾಯಕನಹಳ್ಳಿಯ ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯ 13ಕ್ಷೇತ್ರಗಳಲ್ಲಿ 1ಕ್ಷೇತ್ರ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 12 ಕ್ಷೇತ್ರಗಳಲ್ಲಿ ಅಭ್ಯಥರ್ಿಗಳು ಕಣಕ್ಕಿಳಿದಿದ್ದಾರೆ.
ಸಹಕಾರ ಮಾರುಕಟ್ಟೆ ವ್ಯವಹಾರ ಸಂಘಗಳ ಕ್ಷೇತ್ರದಿಂದ ಟಿ.ಎ.ಪಿ.ಸಿ.ಎಂ.ಎಸ್.ನ ಅಧ್ಯಕ್ಷ ಎಸ್.ಆರ್.ರಾಜ್ಕುಮಾರ್(ಸಿಂಗದಹಳ್ಳಿ) ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 12 ಕ್ಷೇತ್ರಗಳ ಅಭ್ಯಥರ್ಿಗಳು ಚುನಾವಣಾ ಕಣದಲ್ಲಿದ್ದಾರೆ. ಇದೇ 25ರಂದು ಬೆಳಗ್ಗೆ 8ರಿಂದ 4ರವರೆಗೆ ಮತದಾನ ನಡೆಯಲಿದೆ. ನವಂಬರ್ 27ರಂದು ಬೆಳಗ್ಗೆ 8ಕ್ಕೆ ಮತ ಎಣಿಕೆ ನಡೆಯಲಿದೆ.
  ಹನ್ನೆರಡು ಕ್ಷೇತ್ರಗಳಲ್ಲಿ ಕಣದಲ್ಲಿರುವ ಅಬ್ಯಾಥರ್ಿಗಳು, ಯಳನಡು ಕ್ಷೇತ್ರ :  ವೈ.ಸಿ.ಸಿದ್ದರಾಮಯ್ಯ, ಟಿ.ಕೆ.ರಮೇಶಯ್ಯ, ಲಕ್ಷ್ಮಯ್ಯ, ಕರಿಯಪ್ಪ, ಹುಳಿಯಾರು ಕ್ಷೇತ್ರ :  ಆರ್.ಪಿ.ವಸಂತಯ್ಯ, ಕೆ.ಎಮ್.ರಾಜಶೇಖರಪ್ಪ, ಹೆಚ್.ಆರ್.ರಂಗನಾಥ್, ಸೈಯದ್ ಜಲಾಲ್, ಹೊಯ್ಸಳಕಟ್ಟೆ ಕ್ಷೇತ್ರ : ರುದ್ರಪ್ಪ ಡಿ.ಆರ್, ರಾಮಾನಾಯ್ಕ, ಸೋಮಶೇಖರನಾಯ್ಕ, ಲಚ್ಚಾನಾಯ್ಕ, ತಿಮ್ಮನಹಳ್ಳಿ ಕ್ಷೇತ್ರ : ಸಣ್ಣಕರಿಯಪ್ಪ, ರಾಮಚಂದ್ರಯ್ಯ, ಎಸ್.ಆರ್.ಸ್ವಾಮಿನಾಥ್, ಬಸವರಾಜು, ತೀರ್ಥಪುರ ಕ್ಷೇತ್ರ : ವಸಂತಲಕ್ಷ್ಮೀ, ಲತಾ.ಇ, ದ್ರಾಕ್ಷಾಯಣಮ್ಮ, ಈರಮ್ಮ, ಕಂದಿಕೆರೆ ಕ್ಷೇತ್ರ : ಸಣ್ಣಯ್ಯ, ಬಿ.ಕೆ.ಜಯಣ್ಣ, ಬಿ.ಪಂಚಾಕ್ಷರಯ್ಯ, ಚಿ.ನಾ.ಹಳ್ಳಿ ಕಸಬಾ ಕ್ಷೇತ್ರ : ಸಿ.ಕೆ.ಶಾಂತಕುಮಾರ್, ರಂಗಸ್ವಾಮಿ, ಸಿ.ಕೆ.ಗುರುಸಿದ್ದಯ್ಯ, ಬಸವರಾಜು, ಶಾಂತಕುಮಾರ್, ಲಿಂಗರಾಜು ದೇವರಮನೆ, ಕೆ.ಶಿವಣ್ಣ, ಹಂದನಕೆರೆ ಕ್ಷೇತ್ರ : ಸೋಮಶೇಖರಯ್ಯ, ಕಾಂತರಾಜ್ ಅರಸ್, ಚಂದ್ರಣ್ಣ, ಆರ್.ಜಿ.ನೀಲಕಂಠಪ್ಪ, ಮತಿಘಟ್ಟ ಕ್ಷೇತ್ರ : ಹೆಚ್.ಬಸವರಾಜು, ನಟರಾಜು, ಬಸವರಾಜು, ಶೆಟ್ಟಿಕೆರೆ ಕ್ಷೇತ್ರ : ಎನ್.ಸಿದ್ದೇಗೌಡ, ಬಿ.ಸಿ.ಶಿವಕುಮಾರ್, ಕೆ.ಹೆಚ್.ಈಶ್ವರಮೂತರ್ಿ, ಕೃಷ್ಣಮೂತರ್ಿ, ಜೆ.ಸಿ.ಪುರ ಕ್ಷೇತ್ರ : ಆರ್.ಗಂಗಾಧರಯ್ಯ, ಎಮ್.ಎನ್.ಶಿವರಾಜು, ನಿಜಾನಂದಮೂತರ್ಿ, ಎಸ್.ಜಿ.ಮಹೇಶ್, ಬಿ.ಶಿವಶಂಕರಯ್ಯ, ವರ್ತಕರ ಕ್ಷೇತ್ರದಿಂದ : ಎಲ್.ಆರ್.ಬಾಲಾಜಿ, ಸಿ.ಎಸ್.ಶಾಂತಕುಮಾರ್, ವೈ.ಎ.ರಿಯಾಜ್ ಅಹಮದ್, ಕೆ.ನಿಂಗರಾಜು ಸ್ಪಧರ್ಿಸಿದ್ದಾರೆ. 
ವಿಶ್ವದಲ್ಲಿನ ಎಲ್ಲಾ ಕನ್ನಡಿಗರಿಗೆ ಡಾ.ರಾಜ್ ಎಂದೆಂದಿಗೂ ಅಣ್ಣ: 
ಚಿಕ್ಕನಾಯಕನಹಳ್ಳಿ,ನ.17 : ಡಾ.ರಾಜ್ಕುಮಾರ್ರವರು ಮೌಲ್ಯಾಧಾರಿತ ಜೀವನಕ್ಕೆ ಸಾಕ್ಷಿಯಾಗಿ ಬಾಳಿದವರು, ಚಿಂತನೆ, ಸಾಮಾಜಿಕ ಪ್ರಜ್ಞೆಯನ್ನು ಹೊಂದಿ ಸೂಕ್ಷ್ಮ ಸಂವೇದನಾಶೀಲ ಕಲಾವಿದರಾಗಿ ಯಾವುದೇ ಪಾತ್ರಕ್ಕೂ ತಕ್ಕ ಅಭಿನಯ  ನೀಡುತಿದ್ದರು ಎಂದು ಚಲನಚಿತ್ರ ನಿದರ್ೇಶಕ ಬಿ.ಎಸ್.ಲಿಂಗದೇವರು ಅಭಿಪ್ರಾಯಪಟ್ಟರು.
ಪಟ್ಟಣದ ಸುಪ್ರೀಂ ಮೆನ್ಸ್ ಸೆಲೂನ್ನಲ್ಲಿ ಆಯೋಜಿಸಿದ್ದ ಡಾ.ರಾಜ್ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ರವರು ಕೇವಲ ಒಂದು ಜಾತಿಗೆ ಸೀಮಿತರಾಗದೆ ಜಾತಿ ಮೀರಿ ಬೆಳೆದವರು, ಸಿಂಗಾನಲ್ಲೂರಿನ ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮರವರ ಪುತ್ರರಾದ ಡಾ.ರಾಜ್, ಗುಬ್ಬಿ ವೀರಣ್ಣ ಕಂಪನಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, ಗುಬ್ಬಿವೀರಣ್ಣ ಕಂಪನಿಯೂ ಅವರಿಗೆ ಶಾಲೆಯಾಗಿ, ವಿಶ್ವವಿದ್ಯಾಲಯವಾಗಿ, ನಟನಾ ಕೌಶಲ್ಯದ ತರಬೇತಿ ನೀಡಿ, ಕಲಾ ವಿಶಾರದನಾಗಿ ಹೊರಹೊಮ್ಮಿದರು ಎಂದರಲ್ಲದೆ,   ಅವರ ವಿನಯ, ಬೇರೆಯವರಿಗೆ ನೋಯಿಸದೇ ಇರುವುದು, ಸತ್ಯಜೀವನ, ಆದರ್ಶ ಪ್ರಾಯವಾದುದು ಎಂದರು. 
12ನೇ ಶತಮಾನದಲ್ಲಿ ಬಸವೇಶ್ವರರಿಗೆ ಅಣ್ಣ ಎಂದು ಪ್ರೀತಿಯಿಂದ ಕರೆದದ್ದು ಬಿಟ್ಟರೇ ಈಗ ಈ ಅಭಿದಾನವನ್ನು ಜನರು ಡಾ.ರಾಜ್ರವರಿಗೆ ಅಣ್ಣ ಎನ್ನುವ ಮೂಲಕ ಅಭಿಮಾತನದ ಉತ್ತುಂಗಕ್ಕೆ ಕೊಂಡ್ಯೋಯ್ದರು.  
ಸುಪ್ರೀಂ ಸುಬ್ರಹ್ಮಣ್ಯರವರು 8 ತಿಂಗಳಿದಲೂ ಸೆಲ್ಯೂನ್ನಲ್ಲಿ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಡಾ.ರಾಜ್ ಒಂದು ನೆನಪು ಚಿ.ನಾ.ಹಳ್ಳಿ ಪಟ್ಟಣದ ಜನರಿಗೆ ಸುಬ್ರಹ್ಮಣ್ಯರವರು ನೀಡಿದ ಕೊಡುಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ತುಮಕೂರು ನಟರಾಜ್, ಡಾ.ರಾಜ್ರವರ ಸಹ ನಟರಾಗಿ ಅನೇಕ ಚಲನಚಿತ್ರದಲ್ಲಿ ನಟಿಸಿದ ಅನುಭವವನ್ನು ಹಂಚಿಕೊಳ್ಳುತ್ತಾ, ಡಾ.ರಾಜ್ರವರು ಚಿತ್ರತಂಡದಲ್ಲಿನ ಎಲ್ಲಾ ವರ್ಗ ಕಲಾವಿದರೊಂದಿಗೆ ಬೆರತು ಯಾವುದೇ ತಾರತಮ್ಯ ಮಾಡದೇ ಸಹಪಂಕ್ತಿ ಭೋಜನ ಸವಿಯುತ್ತಿದ್ದರು. ಸಹ ನಟರಿಗೆ ಅನೇಕ ಹಿತವಚನ ಹೇಳುತ್ತಿದ್ದರು, ಅವರ ಸರಳ ಜೀವನ ನಮ್ಮೆಲ್ಲರಿಗು ಆದರ್ಶ ಪ್ರಾಯವಾದದೆಂದು ಹೇಳಿದರು.
ಕನ್ನಡ ಸಂಘದ ಸಿ.ಬಿ.ರೇಣುಕಸ್ವಾಮಿ ಮಾತನಾಡಿ ಡಾ.ರಾಜ್ರವರು ಕನ್ನಡದ ಆಸ್ತಿ ಎಂದು ವಣರ್ಿಸಿದರು. ಕಾರ್ಯಕ್ರಮದಲ್ಲಿ ಪಿ.ಬಿ.ಶ್ರೀನಿವಾಸ್ ಎಂದೇ ಖ್ಯಾತರಾದ ಎಂ.ಸಿ.ಕಲ್ಲೇಶ್ರವರ ಹಾಗೂ  ಮೈಸೂರು ಕುಮಾರ್ರ ಗಾಯನ ಅಭಿಮಾನಿಗಳನ್ನು ರಂಜಿಸಿತು. 
ಸಮಾರಂಭದಲ್ಲಿ ಸೀಮೆಎಣ್ಣೆ ಕೃಷ್ಣಯ್ಯ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಸ್ವಾಗತಿಸಿ, ಸಿ.ಎಚ್.ರೂಪೇಶ್ ನಿರೂಪಿಸಿ, ಸಿ.ಪಿ.ಗಿರೀಶ್ ವಂದಿಸಿದರು.