Friday, September 24, 2010





ಶಿಲ್ಪಕೆತ್ತನೆ, ಮರಕೆತ್ತನೆ ತರಬೇತಿಗೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಸೆ.24: ಶಿಲ್ಪಕೆತ್ತನೆ ಮತ್ತು ಮರಕೆತ್ತನೆ ವಿಭಾಗದಲ್ಲಿ ತರಬೇತಿ ನೀಡಲು ಸಪ್ತಗಿರಿ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಮುಂದಾಗಿದೆ ಎಂದು ಸಂಸ್ಥೆ ತಿಳಿಸಿದ್ದಾರೆ.
ನಿರುದ್ಯೋಗ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ನಿರುದ್ಯೋಗದಿಂದ ಪಾರಾಗಿ ಸ್ವಾವಲಂಬನ ಜೀವನ ನಡೆಸಲು ಅನುಕೂಲವಾಗುವಂತೆ ಸಂಸ್ಥೆ ವೃತ್ತಿ ತರಬೇತಿ ನೀಡಲು ಇಚ್ಛಿಸಿದೆ ಮತ್ತು ಹೊಯ್ಸಳ ಶಿಲ್ಪಿಕೇಂದ್ರದ ಶಿಲ್ಪಿ ವಿಶ್ವನಾಥ್, ಇವರಿಂದ ಮರಕೆತ್ತನೆ ವಿಭಾಗದಲ್ಲಿ ತರಬೇತಿ ನೀಡಲು ಮುಂದಾಗಿದ್ದು ಕಲಿಯಲಿಚ್ಚಿಸಿವ ಯುವಕ ಯುವತಿಯರು ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ 9ನೇ ತರಗತಿ ಅಂಕಪಟ್ಟಿಯ ನಾಲ್ಕು ಪ್ರತಿ ಮತ್ತು 7 ಭಾವಚಿತ್ರಗಳೊಂದಿಗೆ ಪೋನ್.ನಂ.9845279517, 8971803395, 9620855028 ನಂಬರ್ಗಳಿಗೆ ಸಂಪಕರ್ಿಸಲು ಕೋರಿದ್ದಾರೆ.
ರೈತರಿಗೆ, ಸ್ವಸಹಾಯ ಸಂಘಗಳಿಗೆ ಕೆ.ಸಿ.ಸಿ.ಅರಿವು ಕಾಯರ್ಾಗಾರ
ಚಿಕ್ಕನಾಯಕನಹಳ್ಳಿ,ಸೆ.24: ಬ್ಯಾಂಕುಗಳು ನೀಡುತ್ತಿರುವ ಸಾಲಸೌಲಭ್ಯ ಪಡೆದು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ರಿಯಾಯಿತಿ ಪಡೆಯಬೇಕೆಂದು ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಹೇಳಿದರು.
ತಾಲೂಕಿನ ಕಂದಿಕೆರೆ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಶಾಖೆಯ ಕಿಸಾನ್ ಕ್ರೆಡಿಟ್ ಕಾಡರ್್ ಅರಿವು ಮತ್ತು ಸಂಘಕ್ಕೆ ಸಾಲ ಸೌಲಭ್ಯದ ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ಯಾರು ಸರಿಯಾಗಿ ಮರುಪಾವತಿ ಮಾಡುತ್ತಾರೋ ಅವರಿಗೆ ಬ್ಯಾಂಕ್ ವಿವಿಧ ಉದ್ದೇಶಗಳಿಗೆ ಎಲ್ಲಾ ತರಹದ ನೆರವು ನೀಡುವುದರಲ್ಲಿ ಸಂದೇಹವಿಲ್ಲ ಎಂದ ಅವರು, ಸ್ವಸಹಾಯ, ಸ್ತ್ರೀ ಶಕ್ತಿ ಸಂಘಗಳು ವ್ಯವಸಾಯದ ಜೊತೆಗೆ ಗುಡಿ ಕೈಗಾರಿಕೆ, ಕುಲ ಕಸುಬಿಗೆ ಸಾಲ ಪಡೆದು ಆಥರ್ಿಕವಾಗಿ ಮುಂದೆ ಬರಬೇಕೆಂದು ಹೇಳಿದರು.
ತಾ.ಪಂ.ಸದಸ್ಯ ಕಮಲಾನಾಯಕ್ ಮಾತನಾಡಿ ಬ್ಯಾಂಕುಗಳು ನೀಡುವ ಸಾಲ ಸೌಲಭ್ಯ ಪಡೆದು ಶೇ.100ರಷ್ಟು ಮರುಪಾವತಿ ಮಾಡಿರುವುದರಿಂದ ಅವರಿಗೆ ಯಾವುದೇ ಆಧಾರವಿಲ್ಲದೆ 5ಲಕ್ಷ ರೂಗಳನ್ನು ಬ್ಯಾಂಕ್ಗಳು ಸಾಲ ನೀಡುತ್ತೀವೆ ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ಆರ್.ಎಮ್.ಕುಮಾರಸ್ವಾಮಿ ಕಿಸಾನ್ ಕ್ರೆಡಿಟ್ ಕಾಡ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ಮುದ್ದೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ವಸಂತ್ಕುಮಾರ್, ಸದಸ್ಯೆ ಉಷಾ, ಸಿ.ಕೆ.ಜಿ.ಬಿ.ಕಂದೀಕೆರೆ ಶಾಖೆಯ ವ್ಯವಸ್ಥಾಪಕ ಆರ್.ಎಂ.ಕುಮಾರಸ್ವಾಮಿ, ಶ್ರೀ ಆಂಜನೇಯ ರೈತಕೂಟದ ಅಧ್ಯಕ್ಷ ಎಲ್.ಎಸ್. ಕುಮಾರಸ್ವಾಮಿ, ಮಹೇಶ್, ದಕ್ಷಿಣಾಮೂತರ್ಿ, ರಮೇಶ್, ಹರೀಶ್, ರಘು ಮುಂತಾದವರು ಉಪಸ್ಥಿತರಿದ್ದರು.
ಚಂದ್ರಕಲಾ ಪ್ರಾಥರ್ಿಸಿ, ರೇಖಾ ಸ್ವಾಗತಿಸಿ ತ್ರಿವೇಣಿ ನಿರೂಪಿಸಿದರು.
ಜಿಲ್ಲಾ ಮಟ್ಟದ ಥ್ರೋಬಾಲ್, ಬ್ಯಾಟ್ಮಿಟನ್ ವಿಜೇತರು
ಚಿಕ್ಕನಾಯಕನಹಳ್ಳಿ,ಸೆ.24: 2010-11ನೇ ಸಾಲಿನ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪೌಢಶಾಲೆಗಳ ಕ್ರೀಡಾಕೂಟದಲ್ಲಿ ವಿವಿಧ ತಾಲೂಕುಗಳ ಶಾಲೆಗಳು ಪ್ರಥಮ ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿದೆ.
ಹಿ.ಪ್ರಾ.ಶಾಲೆಗಳ ಬಾಲಕರ ವಿಭಾಗದ ಥ್ರೋಬಾಲ್ನಲ್ಲಿ ತುಮಕೂರು ಪ್ರಥಮ ಸ್ಥಾನ, ಚಿ.ನಾ.ಹಳ್ಳಿ ದ್ವಿತೀಯ ಸ್ಥಾನ. ಹಿ.ಪ್ರಾ.ಶಾಲೆಗಳ ಬಾಲಕಿಯರ ಥ್ರೋಬಾಲ್ನಲ್ಲಿ ತುರುವೇಕೆರೆ ಪ್ರಥಮ ಸ್ಥಾನ, ಚಿ.ನಾ.ಹಳ್ಳಿ ದ್ವಿತೀಯ ಸ್ಥಾನ. ಪ್ರೌಡಶಾಲಾ ಮಟ್ಟದ ಬಾಲಕರ ಥ್ರೋಬಾಲ್ನಲ್ಲಿ ತಿಪಟೂರು ಪ್ರಥಮ ಸ್ಥಾನ, ಗುಬ್ಬಿ ದ್ವಿತೀಯ ಸ್ಥಾನ. ಬಾಲಕಿಯರ ವಿಭಾಗದಲ್ಲಿ ಚಿ.ನಾ.ಹಳ್ಳಿ ಪ್ರಥಮ ಸ್ಥಾನ, ತುರುವೇಕೆರೆ ದ್ವಿತೀಯ ಸ್ಥಾನ, ಬಾಲಕರ ಬಾಲ್ಬ್ಯಾಟ್ಮಿಟನ್ನಲ್ಲಿ ಚಿ.ನಾ.ಹಳ್ಳಿ ಪ್ರಥಮ ಸ್ಥಾನ, ತಿಪಟೂರು ದ್ವಿತೀಯ ಸ್ಥಾನ. ಬಾಲಕಿಯರ ವಿಭಾಗದಲ್ಲಿ ಚಿ.ನಾ.ಹಳ್ಳಿ ಪ್ರಥಮ ಸ್ಥಾನ, ತಿಪಟೂರು ದ್ವಿತೀಯ ಸ್ಥಾನಗಳನ್ನು ಪಡೆದುಕೊಂಡಿವೆ.
ನೂತನ ತಾ.ಸ.ಪ್ರಾ.ಶಿ.ಶಿ.ಸಂಘದ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಸೆ.23: ತಾಲೂಕು ಸಕರ್ಾರಿ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘ(ರಿ)ದ ಉದ್ಘಾಟನೆಯನ್ನು ಅ.3ರ ಭಾನುವಾರ ಬೆಳಿಗ್ಗೆ 10ಕ್ಕೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆಯನ್ನು ಕನರ್ಾಟಕ ರಾಜ್ಯ ಸ.ಪ್ರಾ.ಶಾ.ಶಿ.ಶಿ.ಸಂಘದ ಅಧ್ಯಕ್ಷರಾದ ರಮಾದೇವಿ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷರಾದ ಬಿ.ಎಲ್.ಬಸವರಾಜು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕನರ್ಾಟಕ ರಾಜ್ಯ ಸ.ಪ್ರಾ.ಶಾ.ಶಿ.ಶಿ.ಸಂಘದ ಕಾರ್ಯದಶರ್ಿ ಶಂಕರಮೂತರ್ಿ, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎನ್.ಗೋಪಿನಾಥ್, ಜಿ. ಮು. ಶಿಕ್ಷಕರ ಸಂಘದ ಉಪಾಧ್ಯಕ್ಷ ಕೆ.ರಾಜಯ್ಯ, ತಾ.ಸ.ಪ್ರಾ.ಶಾ.ಶಿ.ಶಿ.ಸಂಘದ ಗೌರವಾಧ್ಯಕ್ಷ ಎಂ.ಗಂಗಾಧರಯ್ಯ, ಉಪಾಧ್ಯಕ್ಷರಾದ ಆರ್.ಮಹದೇವಮ್ಮ ಉಪಸ್ಥಿತರಿರುವರು.
ವಿಶೇಷ ಆಹ್ವಾನಿತರಾಗಿ ತಾ.ಪ್ರಾ.ಶಾ.ಶಿ.ಸಂಘದ ಮಾಜಿ ಅಧ್ಯಕ್ಷರುಗಳಾದ ಎನ್.ಪಿ.ಕುಮಾರಸ್ವಾಮಿ, ರುಕ್ಮಾಂಗದ, ಪ್ರೌಢ ಶಾಲಾ ಮು.ಶಿ.ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಗೋವಿಂದರಾಜು, ಟಿ.ರಂಗದಾಸಪ್ಪ, ಮಾದಪ್ಪ ಉಪಸ್ಥಿತರಿರುವರು ಎಂದು ಸಂಘದ ಪ್ರಧಾನ ಕಾರ್ಯದಶರ್ಿ ಬಿ.ಜಿ.ವೆಂಕಟೇಶ್ ತಿಳಿಸಿದ್ದಾರೆ.
ಮೃತ ಗ್ರಾ.ಪಂ.ಸದಸ್ಯರುಗಳ ಕುಟುಂಬಕ್ಕೆ ಸಕರ್ಾರದ ನೆರವಿಗೆ ಮನವಿ
ಚಿಕ್ಕನಾಯಕನಹಳ್ಳಿ,ಸೆ.24: ಸಾರ್ವತ್ರಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಮೂರೇ ತಿಂಗಳಲ್ಲಿ ನಾಲ್ಕು ಜನ ಗ್ರಾಮ ಪಂಚಾಯ್ತಿ ಸದಸ್ಯರುಗಳು ಮುಋತಪಟ್ಟಿದ್ದು ಅವರಿಗೆ ರಾಜ್ಯ ಸಕರ್ಾರ ಇವರ ಕುಟುಂಬಗಳೀಗೆ ತಲಾ ಒಂದು ಲಕ್ಷರೂಗಳನ್ನು ಪರಿಹಾರ ಧನವನ್ನು ನೀಡಿ ಅವರ ಆಥರ್ಿಕ ದುಸ್ಥಿತಿಯಿಂದ ಕಾಪಾಡಬೇಕೆಂದು ಗ್ರಾ.ಪಂ.ಸದಸ್ಯೆ ಬಿ.ಎನ್.ಶಶಿಕಲಾ ಕೋರಿದ್ದಾರೆ.
ತಾಲೂಕಿನ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬೆಳಗುಲಿ ಗಾ. ಪ. ರವಿಶಂಕರ್, ಬರಗೂರು ಗ್ರಾ.ಪಂ.ಯ ಯು.ಟಿ ಬಸವರಾಜು, ದೊಡ್ಡರಾಂಪುರ ಗ್ರಾ.ಪಂ.ಯ ಗಿರೀಶ್ ಮತ್ತು ರಾಮನಹಳ್ಳಿ ಗ್ರಾ.ಪಂ. ನಾರಾಯಣ್ ಅಕಾಲಿಕ ಮರಣವನ್ನು ಅಪ್ಪಿದ್ದು ಗ್ರಾಮೀಣ ಪಂಚಾಯತ್ ರಾಜ್ಯ ಸಚಿವರು ಅಧಿವೇಶನದ ವೇಳೆ ಪಂಚಾಯ್ತಿ ಕಾಯ್ದೆಯಡಿ ದೊರಕಬಹುದಾದ ಸೌಲಭ್ಯಗಳನ್ನು ಅಮೈಂಡ್ಮೆಂಟ್ ಮೂಲಕ ಒದಗಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.





ಮಗನಿಂದಾಗಿ ತಂದೆಗೆ ಪೂಜೆ......!
ಚಿಕ್ಕನಾಯಕನಹಳ್ಳಿ.ಸೆ.22: ಗಣಪನ ದೆಸೆಯಿಂದ ಶಿವಪ್ಪ ಪೂಜೆ ಕಂಡ ಅಪರೂಪದ ಘಟನೆ ನವಿಲೆಯಲ್ಲಿ ನಡೆದಿದೆ.
ಪಟ್ಟಣದಿಂದ ಐದು ಕಿ.ಮೀ ದೂರವಿರುವ ನವಿಲೆ ಗ್ರಾಮದಲ್ಲಿರುವ ಶಿವಲಿಂಗ ಹಾಗೂ ಬಸವಣ್ಣ ವಿಗ್ರಹವಿರುವ ಗುಡಿ ಶತಮಾನಗಳಿಂದ ಪೂಜೆಯನ್ನು ಕಾಣದೆ ಪಾಳು ಬಿದ್ದು ದನ ಕರುಗಳನ್ನು ಕಟ್ಟುವ ಗುಡಾರವಾಗಿತ್ತು.
ಈಗ್ಗೆ ಐವತ್ತು ವರ್ಷಗಳಾಚೆ ಸಿದ್ದಗಂಗಾ ಮಠದ ಶ್ರೀಗಳಾದ ಡಾ.ಶಿವಕುಮಾರ ಸ್ವಾಮಿಗಳು ಕಾರ್ಯಕ್ರಮವೊಂದಕ್ಕೆ ನವಿಲೆಗೆ ಆಗಮಿಸಿದ ಸಂದರ್ಭದಲ್ಲಿ ಈ ಪಾಳು ಬಿದ್ದ ದೇವಾಲಯದಲ್ಲಿನ ದೊಡ್ಡ ಗಾತ್ರದ ಶಿವಲಿಂಗ ಹಾಗೂ ಬಸವಣ್ಣನ ವಿಗ್ರಹಗಳನ್ನು ನೋಡಿ, ಈ ವಿಗ್ರಹಗಳು ಚೋಳರ ಕಾಲದ ಮೂತರ್ಿಗಳೆಂದು ಅರಿತು, ಪೂಜೆ ಕಾಣದ ಈ ಪ್ರತಿಮೆಗಳನ್ನು ಸಿದ್ದಗಂಗಾ ಮಠಕ್ಕೆ ಕೊಂಡೊಯ್ಯಲು ಬಯಸಿದುಂಟು ಎಂದು ಹೇಳುವ ಗ್ರಾಮದ ಹಿರಿಯ ಜೀವ ಮೂರ್ತಪ್ಪ ಆಗಿನ ಗ್ರಾಮದ ಮುಖ್ಯಸ್ಥರು ಆಸಕ್ತಿ ತೋರಲಿಲ್ಲವೆನ್ನುತ್ತಾರೆ.
ಈ ಮಧ್ಯೆ ಇದೇ ಗ್ರಾಮದ ಚನ್ನಯ್ಯ ಎಂಬುವರು ಚೋಳರ ಕಾಲದ ಈ ದೇವಾಲಯವನ್ನು ಪಾಳು ಬಿಡುವುದು ಬೇಡವೆಂದು ಕೆಲಕಾಲ ಸಣ್ಣದಾಗಿ ಪೂಜೆ ಮಾಡಲು ಹೋದರಾದರೂ ಅವರ ಜೀವನದ ತಾಪತ್ರೆಯಗಳಿಂದ ಅವರ ವ್ರತ ಕೈಗೂಡದೆ ಪೂಜಾ ಕಾರ್ಯಕ್ಕೆ ಕೈ ಚೆಲ್ಲಿದರು.
ಈಗ ಈ ದೇವಾಲಯದ ಅನತಿ ದೂರದಲ್ಲಿದ್ದ ಗಣಪತಿ ವಿಗ್ರಹವನ್ನು ಪುನರ್ ಪ್ರತಿಷ್ಠಾಪಿಸಬೇಕೆಂದು ಮುಂದಾದ ಗ್ರಾಮಸ್ಥರು ತಮ್ಮಡಿಹಳ್ಳಿ ವಿರಕ್ತ ಮಠದ ಡಾ.ಅಭಿನವ ಮಲ್ಲಿಕಾಜರ್ುನ ಸ್ವಾಮಿಗಳನ್ನು ಗ್ರಾಮಕ್ಕೆ ಕರೆಸಿಕೊಂಡು ಗಣಪತಿ ಪುನರ್ ಪ್ರತಿಷ್ಠಾಪಿಸಬೇಕೆಂದು ಕೋರಿದ ಹಿನ್ನೆಲೆಯಲ್ಲಿ ದೇವಾಲಗಳನ್ನು ವೀಕ್ಷಿಸಿದ ಸ್ವಾಮಿಗಳು ಶಿವಲಿಂಗವಿದ್ದ ದೇವಾಲಯವನ್ನು ತೋರಿಸಿದ್ದರಲ್ಲದೆ, ಶಿವಲಿಂಗಕ್ಕೆ ಮೊದಲ ಪೂಜೆಯನ್ನು ಅವರೇ ನೆರವೇರಿಸಿ ಮುಂದೆ ಸಾಂಗವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳುವ ಜವಬ್ದಾರಿಯನ್ನು ಗ್ರಾಮದ ಹಿರಿಯರಿಗೆ ವಹಿಸಿ ಅದಕ್ಕೊಂಬ ಪೂಜಾರಿಯನ್ನು ನೇಮಿಸಿದ್ದಾರೆ. ಜಲವಾಸದಲ್ಲಿರುವ ಗಣಪತಿಯನ್ನು ಪುನರ್ ಪ್ರತಿಷ್ಠಾಪಿಸಲು ಸಿದ್ದತೆ ನಡೆಯುತ್ತಿದೆ.
ಶಾಸಕ ಸಿ.ಬಿ.ಸುರೇಶ್ ಬಾಬು ಗ್ರಾಮಸ್ಥರೊಂದಿಗೆ ಶಿವಲಿಂಗಕ್ಕೆ ಪೂಜೆ ನೆರವೇರಿಸುವುದು, ದೇವಾಲಯದ ಅಭಿವೃದ್ದಿ ಹಾಗೂ ಗಣಪತಿ ಪುನರ್ ಪ್ರತಿಷ್ಠಾಪನೆ ವಿಷಯವಾಗಿ ಚಚರ್ಿಸಿದ್ದಾರೆ.
ಅಯೋಧ್ಯೆ ತೀಪರ್ು: ಸೌಹಾರ್ಧತೆಯಿಂದ ನಡೆದುಕೊಳ್ಳುವಂತೆ ಸಿ.ಪಿ.ಐ.ಮನವಿ
ಚಿಕ್ಕನಾಯಕನಹಳ್ಳಿ,ಸೆ.22: ನ್ಯಾಯಾಲಯದಲ್ಲಿ ನಡೆಯುತ್ತಿರುವ ಅಯೋಧ್ಯೆ ರಾಮ ಮಂದಿರದ ತೀಪರ್ು ಯಾವ ಕಡೆಯಾದರೂ ಸರಿ ಸಂಘಟನೆಗಳು ಗಲಭೆಯಾಗದಂತೆ ಶಾಂತಿ ಸೌಹಾರ್ಧತೆಯನ್ನು ಕಾಪಾಡಬೇಕು ಎಂದು ವೃತ್ತ ನಿರೀಕ್ಷಕ ಪಿ. ರವಿಪ್ರಸಾದ್ ಸಂಘಟನೆಗಳಲ್ಲಿ ಮನವಿ ಮಾಡಿದರು.
ಪಟ್ಟಣದ ಪೋಲಿಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್.ಎಸ್.ಎಸ್, ಎ.ಬಿ.ವಿ.ಪಿ ಮತ್ತು ಪಕ್ಷ ಸಂಘಟನೆಗಳು ನ್ಯಾಯಾಲಯದಲ್ಲಿರುವ ರಾಮಮಂದಿರದ ತೀಪರ್ು ಹೊರಬಿದ್ದಾಗ ಸಂಘಟನೆಗಳು ಸಾರ್ವಜನಿಕ ಆಸ್ತಿಗೆ ತೊಂದರೆಯಾಗದಂತೆ ಕಾಪಾಡಬೇಕು. ಸಾರ್ವಜನಿಕ ಆಸ್ತಿ, ದೇಶದ ಆಸ್ತಿಗಳಿಗೆ ತೊಂದರೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದ ಅವರು ಈ ಘಟನೆಗೆ ಸಂಬಂದಿಸಿದಂತೆ ಗಲಭೆಗಳ ಬಗ್ಗೆ ವಿಷಯ ತಿಳಿದರೆ ಸಾರ್ವಜನಿಕರು ಪೋಲಿಸ್ ಮತ್ತು ಹೋಂ ಗಾಡ್ಸ್ಗಳಿಗೂ ತಿಳಿಸಬೇಕು ಎಂದು ಸಭೆಯಲ್ಲಿ ಕೋರಿದರು.
ಪುರಸಭಾಧ್ಯಕ್ಷ ರಾಜಣ್ಣ ಮಾತನಾಡಿ ತಾಲೂಕಿನಲ್ಲಿ ಹಿಂದು, ಮುಸ್ಲಿಂ ಗಲಭೆಗಳು ಎಂದು ನಡೆದಿಲ್ಲ ತೀಪರ್ಿನ ನಂತರವೂ ಹಿಂದು ಮುಸ್ಲಿಂಗಳಲ್ಲಿ ಗಲಭೆಯಾಗದಂತೆ ನೋಡಿಕೊಳ್ಳಬೇಕು. ಅಣ್ಣ, ತಮ್ಮಂದಿರಂತೆ ಬಾಳಬೇಕು ಎಂದರು.
ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ ನ್ಯಾಯಾಲಯದ ತೀಪರ್ಿಗೆ ಎಲ್ಲರೂ ತಲೆಬಾಗಿ ಪಾಲಿಸಬೇಕು ಹೈಕೋಟರ್್ನಲ್ಲಿ ತೀಪರ್ು ನ್ಯಾಯೋಚಿತವಾದ ಕಡೆ ಆಗದಿದ್ದರೆ ಸುಪ್ರೀಂ ಕೋಟರ್್ಗೂ ಮೊರೆ ಹೋಗಿ ಗೆಲ್ಲಬಹುದು ಇದಕ್ಕಾಗಿ ಹಿಂದೂ ಮುಸ್ಲಿಂ ಗಲಭೆಗಳು ಆಗಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್, ಬಿ.ಜೆ.ಪಿ.ಮುಖಂಡರಾದ ಶ್ರೀನಿವಾಸಮೂತರ್ಿ, ಸಿ.ಎಸ್.ರಾಜಣ್ಣ, ಜೆ.ಡಿ.ಎಸ್ ಮುಖಂಡರುಗಳಾದ ಸಿ.ಎಸ್.ನಟರಾಜು, ಎಚ್.ಬಿ. ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಬಾಬು ಸಾಹೇಬ್, ಪೀರ್ ಪಾಷ, ಸಿ.ಎಂ.ಬೀರಲಿಂಗಯ್ಯ ಎಚ್.ಬಿ.ಎಸ್.ನಾರಾಯಣಗೌಡ, ಮತ್ತು ಅ.ಭಾ.ವಿ.ಪ, ಮುಖಂಡ ಚೇತನ್ ಪ್ರಸಾದ್, ಆರ್.ಎಸ್.ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.