Monday, August 22, 2011















ತುತರ್ು ಪರಿಸ್ಥಿತಿ ಬೇಡ, ಜನ ಲೋಕ ಪಾಲ್ ಜಾರಿಯಾಗಲಿ: ಕೆ.ಎಸ್.ಕೆ.ಚಿಕ್ಕನಾಯಕನಹಳ್ಳಿ,ಆ.22 : ಪ್ರತಿಭಟನೆ, ಧರಣಿಗಳನ್ನು ತನ್ನ ಸ್ವತ್ತು ಎನಿಸಿಕೊಂಡು ಅಧಿಕಾರ ಹಿಡಿದ ಕಾಂಗ್ರೆಸ್ ಪಕ್ಷಕ್ಕೆ ಅಣ್ಣಾ ರವರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಕಾಂಗ್ರೆಸ್ ಪಕ್ಷದ ದಯಾನೀಯ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಆರೋಪಿಸಿದರು. ಪಟ್ಟಣದ ನೆಹರು ಸರ್ಕಲ್ನಲ್ಲಿ ಭಾಜಪ ತನ್ನ ಪ್ರತಿಭಟನೆಯನ್ನು ಭಜನೆ ಕಾರ್ಯಕ್ರಮದ ಮೂಲಕ ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಅವರು, ತುತರ್ು ಪರಿಸ್ಥಿತಿ ಜಾರಿಗೆ ಬರುವುದು ಬೇಡ, ಜನಲೋಕಪಾಲ ಮಸೂದೆ ಜಾರಿಗೆ ಬರಲಿ ಎಂಬ ಘೋಷಣೆಯೊಂದಿಗೆ ಧರಣಿ ನಡೆಸಿತ್ತಿದೆ ಎಂದರು. ಕೇಂದ್ರ ಸಕರ್ಾರದ ದ್ವಿಮುಖ ನೀತಿಯಿಂದ ಭ್ರಷ್ಠಾಚಾರ ನೀತಿ ಹೆಚ್ಚುತ್ತಿದೆ, ಬಾಬಾರಾಮ್ದೇವ್ರವರು ರಾಮಲೀಲ ಮೈದಾನದಲ್ಲಿ ಭ್ರಷ್ಠಾಚಾರ ನೀತಿ ವಿರೋಧಿಸಿ ಸತ್ಯಾಗ್ರಹ ನಡೆಸಿದಾಗ ಕೇಂದ್ರ ಸಕರ್ಾರ ಬಂಧಿಸಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ತಂದಿದ್ದು, ಅಣ್ಣಾ ಹಜಾರೆ ರವರು ಭ್ರಷ್ಠಾಚಾರ ವಿರೋಧಿಸಲು ಪ್ರತಿಭಟನಾಕಾರರಿಗೆ ಕರೆ ನೀಡಿದ ತಕ್ಷಣ ಕೇಂದ್ರ ಸಕರ್ಾರ ಬಂಧಿಸಿದ್ದು, ದೇಶದಲ್ಲಿ ಅನ್ಯಾಯದ ಕ್ರಾಂತಿ ಮೊಳಗುತ್ತಿದೆ ಎಂದ ಅವರು ಮಸೂದೆ ಜಾರಿಯಾಗುವ ಮೂಲಕ ಪ್ರದಾನಿ, ಪ್ರದಾನಿಯವರ ಕಾಯರ್ಾಲಯಮ, ನ್ಯಾಯಮೂತರ್ಿಗಳು ಸೇರಿದಂತೆ ಪ್ರತಿಯೊಬ್ಬರನ್ನೂ ಕಾನೂನಿನ ಕಾಯ್ದೆ ಒಳಗೆ ಬರುವಂತೆ ಒತ್ತಾಯಿಸುತ್ತಿದ್ದೇವೆ ಈ ಮೂಲಕ ಕೇಂದ್ರ ಸಕರ್ಾರ ಮಸೂದೆ ಜಾರಿಯಾಗಲು ಸ್ಪಂದಿಸಬೇಕು ಇಲ್ಲವಾದಲ್ಲಿ ಕ್ರಾಂತಿಕಾರಿ ಹೋರಾಟ ನಡೆಸಬೇಕಾಗುತ್ತದೆ ಎಂದರು. ಸತ್ಯಾಗ್ರಹದಲ್ಲಿ ತಾ.ಪಂ.ಅಧ್ಯಕ್ಷ ಸೀತಾರಾಮ್ಯಯ, ತಾ.ಬಿಜೆಪಿ ಅಧ್ಯಕ್ಷ ಮಿಲ್ಟ್ರಿ ಶಿವಣ್ಣ, ಕಾರ್ಯದಶರ್ಿ ಹಳೆಮನೆ ಸುರೇಶ್, ಪಕ್ಷದ ಕಾರ್ಯಕರ್ತರಾದ ಮೈಸೂರಪ್ಪ, ವಿ.ಆರ್.ಮೇರುನಾಥ್, ಶ್ರೀನಿವಾಸಮೂತರ್ಿ, ಶರತ್ ಕುಮಾರ್ ಲಕ್ಷ್ಮಯ್ಯ, ಈಶ್ವರ್ಭಾಗವತ್, ಹನುಮಂತಪ್ಪ, ವಸಂತಯ್ಯ, ಮಮತ ಮುಂತಾದವರಿದ್ದರು.
ಅಂದು ಅರಸು ತೆಗೆದುಕೊಂಡ ನಿಧರ್ಾರಗಳಿಂದ ಇಂದಿಗೂ ಅವರು ಅಜರಾಮರಚಿಕ್ಕನಾಯಕನಹಳ್ಳಿ,ಆ.22: ಇಂದಿರಾ ಗಾಂಧಿಯವರ 20 ಅಂಶಗಳ ಯಶಸ್ವಿ ಅನುಷ್ಠಾನ, ಭಾಗ್ಯಜ್ಯೋತಿ, ಮಲ ಹೊರುವ ಪದ್ದತಿ ರದ್ದು ಸೇರಿದಂತೆ ಬಡವರ ಏಳಿಗೆಗೆ, ತುಳಿತಕ್ಕೆ ಒಳಗಾದ ಜನರಿಗೆ ನೇರವಾಗಿ ನೆರವಾದ ಧೀಮಂತ ನಾಯಕ ದೇವರಾಜ್ ಅರಸು ರವರು ಅಜರಾಮರಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ರಾಜ್ಯ ಸಂಚಾಲಕ ಸಿ.ಡಿ.ಚಂದ್ರಶೇಖರ್ ಅಭಿಪ್ರಾಯಪಟ್ಟರು. ತಾಲೂಕಿನ ಹಂದನಕೆರೆ ಹೋಬಳಿ ಸೈಯದ್ ಸಾಬ್ ಪಾಳ್ಯದಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ದೇವರಾಜ್ ಅರಸ್ ರವರ 96ನೇ ಜಯಂತಿ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅರಸು ರವರು ಉಳ್ಳವರ ಹಾಗೂ ಮೇಲ್ವರ್ಗಗಳ ವಿರೋಧ ಕಟ್ಟಿಕೊಂಡರು ಅಂಜದೇ ಅಂದು ತೆಗೆದುಕೊಂಡ ನಿಧರ್ಾರಗಳಿಂದಾಗಿ ಇಂದು ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಶತಮಾನಗಳಿಂದ ಸಮಾಜದಿಂದ ತುಳಿತಕ್ಕೆ ಒಳಗಾದ ಜನರು ಇಂದು ನೆಮ್ಮದಿಯಿಂದ ಬದುಕುವಂತಾಗಿದೆ ಎಂದರಲ್ಲದೆ, ಇಂದಿರಾಗಾಂಧಿಯವರು ಘೋಷಿಸಿದ 20 ಅಂಶಗಳ ಕಾರ್ಯಕ್ರಮವನ್ನು ಅರಸು ರವರು ಯಶಸ್ವಿಯಾಗಿ ನಮ್ಮ ರಾಜ್ಯದಲ್ಲಿ ಅನುಷ್ಠಾನಗೊಳಿಸಿದರು ಎಂದರು. ಇಂತಹ ನಾಯಕನನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ನಮ್ಮ ವೇದಿಕೆ 1988 ರಿಂದಲೂ ಅರಸು ರವರನ್ನು ಸ್ಮರಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ, ಅವರ ಹೆಸರಿನಲ್ಲಿ ಕಳೆದ 23 ವರ್ಷಗಳಿಂದಲೂ ಶಾಲಾ ಮಕ್ಕಳಿಗೆ ಅನುಕೂಲವಾಗುವಂತಹ ಸಲಕರಣೆಗಳನ್ನು ವಿತರಿಸುತ್ತಿದೆ ಎಂದರು. ಅರಸು ರವರಿಗೆ ನುಡಿ ನಮನ ಸಲ್ಲಿಸಿದ ಪತ್ರಕರ್ತ ಉಜ್ಜಜ್ಜಿ ರಾಜಣ್ಣ ಮಾತನಾಡಿ, ಅರಸು ರವರು ತಮ್ಮ 21ನೇ ವರ್ಷದಲ್ಲಿ ಎಂ.ಎಲ್.ಎ ಆಗಿದ್ದಲ್ಲದೆ, ಒಮ್ಮೆ ವಿಧಾನ ಸಭೆಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ತನ್ನ ಜನಪ್ರಿಯತೆಯನ್ನು ಇಡೀ ದೇಶಕ್ಕೆ ತಿಳಿಸಿದರು ಎಂದರು. ಉಳುವವನೇ ಭೂಮಿಯ ಒಡೆಯ ಎಂಬ ನೀತಿಯನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಮೂಲಕ ಅವರು ಬಹುದೊಡ್ಡ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದರು ಎಂದರು. ಕಾರ್ಯಕ್ರಮದಲ್ಲಿ ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಮಾತನಾಡಿ, ರಾಜಕೀಯದ ಕನಸನ್ನು ಕಾಣದ ಹಲವು ಜನಪರ ವ್ಯಕ್ತಿಗಳನ್ನು ಅಧಿಕಾರಕ್ಕೆ ತರುವ ಮೂಲಕ ತನ್ನ ಪ್ರಭಾವವನ್ನು ಬೆಳಿಸಿಕೊಂಡಿದ್ದಲ್ಲದೆ, ಯುವ ಸಮೂಹವನ್ನು ಮುಖ್ಯವಾಹಿನಿಗೆ ತಂದರು ಅವರು ಅಂದು ಬೆಳೆಸಿದ ಕುಡಿಗಳು ಇಂದಿಗೂ ಸಂಸತ್ತು, ವಿಧಾನ ಸಭೆಗಳಲ್ಲಿ ದೊಡ್ಡ ಶಕ್ತಿಯಾಗಿ ಕಾಣಸಿಗುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ಹಂದನಕೆರೆ ಜಿ.ಪಂ.ಸದಸ್ಯ ಜಾನಮ್ಮ ರಾಮಚಂದ್ರಯ್ಯ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು, ತಾ.ಪಂ.ಸದಸ್ಯ ನಿರಂಜನಮೂತರ್ಿ, ತಾಲೂಕು ಅರಸು ಸಮಾಜದ ಅಧ್ಯಕ್ಷ ನಾಗರಾಜ್ ಅರಸ್, ಮತ್ತಿಘಟ್ಟ ಗ್ರಾ.ಪ. ಅಧ್ಯಕ್ಷ ಎಂ.ಎಸ್.ಉಮೇಶ್, ಗ್ರಾ.ಪಂ.ಸದಸ್ಯ ಸಿದ್ದರಾಮಯ್ಯ, ಉಪನ್ಯಾಸಕ ಸದಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಲ್ಲಿಗೆರೆ ಗ್ರಾ.ಪಂ. ಸದಸ್ಯ ತಾತಯ್ಯ, ಶಿವಲಿಂಗಯ್ಯ, ಮಹಬೂಬ್ ಸಾಬ್, ನಿಂಗರಾಜ್, ಲಕ್ಷ್ಮಣ್, ಮನ್ಸೂರ್ ಪಾಷ, ರಾಮಚಂದ್ರಯ್ಯ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಶಿವಮ್ಮ ಪ್ರಾಥರ್ಿಸಿದರೆ, ಗಾಂಧಿನಗರ ಅನಂತು ಸ್ವಾಗತಿಸಿ, ಶಿಕ್ಷಕ ಎ.ಸೋಮಶೇಖರ್ ನಿರೂಪಿಸಿ ಶಿಕ್ಷಕ ನಾಗರಾಜ್ ವಂದಿಸಿದರು.