Friday, July 18, 2014


ಹೇಮಾವತಿ ಕುಡಿಯುವ ನೀರಿನ ಯೋಜನೆ:

ಭೂಸ್ವಾಧೀನ ಪ್ರಕ್ರಿಯೆ ತ್ವರಿತವಾಗಿ ಅಂತಿಮಗೊಳ್ಳದಿದ್ದರೆ  ಹೋರಾಟದ ಹಾದಿ ಅನಿವಾರ್ಯ: ಮಾಜಿ ಶಾಸಕ ಕೆ.ಎಸ್.ಕೆ.
ಚಿಕ್ಕನಾಯಕನಹಳ್ಳಿ,ಜು.17 : ತಾಲ್ಲೂಕಿನ 26 ಕೆರೆಗಳಿಗೆ  ಹೇಮಾವತಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯೂ ಸಕರ್ಾರದ ನಿರ್ಲಕ್ಷ, ಅಧಿಕಾರಿಗಳ ವಿಳಂಬ ನೀತಿ ಹಾಗೂ  ಗುತ್ತಿಗೆದಾರರ ಬೇಜವಬ್ದಾರಿಯಿಂದ ನೆನೆಗುದಿಗೆ ಬಿದ್ದಿದೆ ಇನ್ನೆರಡು ತಿಂಗಳೊಳಗೆ ಭೂ ಸ್ವಾಧೀನ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಗೊಳ್ಳದಿದ್ದರೆ ಬಿ.ಜೆ.ಪಿ. ಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ತಿಳಿಸಿದರು. 
ತಾಲ್ಲೂಕಿಗೆ 28 ಗ್ರಾಮಗಳ ಕೆರೆಗಳಿಗೆ ಕುಡಿಯುವ ನೀರೊದಗಿಸುವ ಯೋಜನೆಗೆ ಸಂಬಂಧಪಟ್ಟಂತೆ ತಾಲ್ಲೂಕು ಬಿಜೆಪಿ ಘಟಕದೊಂದಿಗೆ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೇತೃತ್ವದ ತಂಡ ಕುಂದೂರು, ಕಡಬನಹಳ್ಳಿ, ಬಿಳಿಗೆರೆ, ಗ್ಯಾರೆಹಳ್ಳಿಪಾಳ್ಯ ಸೇರಿದಂತೆ ತಾಲ್ಲೂಕಿನ ಕೆರೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ನಂತರ  ಪಟ್ಟಣದಲ್ಲಿ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈ ಸಂಬಂಧ ಇದೇ 19ರಂದು ತುಮಕೂರಿಗೆ ಬಿ.ಜೆ.ಪಿ. ನಿಯೋಗ ತೆರಳಲಿದ್ದು, ಅಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಅಂತಿಮ ಹಂತಕ್ಕೆ ತರುವಂತೆ ಒತ್ತಾಯಿಸಲಾಗುವುದು ಎಂದರು.
ತಾಲ್ಲೂಕಿನ ಅಂತರ್ಜಲ ಮಟ್ಟ ಕುಸಿದಿದ್ದು, ಮಳೆಯ ಪ್ರಮಾಣವು ಕುಂಠಿತಗೊಂಡಿದೆ,  ಇದರಿಂದ ತಾಲ್ಲೂಕಿನ ಜನತೆ ನೀರಿಗಾಗಿ ಪರಿತಪಿಸುತ್ತಿದ್ದಾರೆ, ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಹರಿಯುತ್ತದೆ ಎಂದು ಕೆಲವು ರೈತರು ತಮ್ಮ ಜಮೀನುಗಳನ್ನು ಕೊಟ್ಟು ಕಾಮಗಾರಿ ಆರಂಭಿಸಲು ಸಹಕರಿಸಿದರೂ ಸಕರ್ಾರ ಇದುವರೆವಿಗೂ ಯಾವುದೇ ಪರಿಹಾರ ನೀಡದೆ ರೈತರ ಜೀವನಕ್ಕೆ ತೊಡಕುಂಟು ಮಾಡುತ್ತಿದೆ, ಜಮೀನು ಕೊಟ್ಟು ಸಹಕರಿಸಿದ ರೈತರಿಗೆ ಇದುವರೆವಿಗೂ ಪರಿಹಾರ ನೀಡದೆ ಇರುವುದರಿಂದ ಉಳಿದ ಸ್ಥಳಗಳಲ್ಲಿ ಕಾಮಗಾರಿ ಆರಂಭಿಸಲು ಜಮೀನು ನೀಡಬೇಕಾದ ರೈತರು ಜಮೀನು ಬಿಟ್ಟುಕೊಡಲು ಯೋಚನೆ ಮಾಡುತ್ತಿದ್ದಾರೆ ಇದರಿಂದಲೂ ಕಾಮಗಾರಿ ವಿಳಂಬವಾಗುತ್ತಿದೆ ಎಂದರು.
ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದರೆ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಆರು ತಿಂಗಳ ಹಿಂದೆಯೇ ಸಂಬಂಧ ಪಟ್ಟವರಿಗೆ ತಿಳಿಸುತ್ತಿದ್ದೆವು ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಳಂಬಧೋರಣೆ ತೋರಿದ್ದಾರೆ ಎಂದರು,  ಕಾಮಗಾರಿ ಆರಂಭಗೊಂಡು ಒಂದುವರೆ ವರ್ಷ ಕಳೆದರೂ ಇನ್ನೂ ಕಾಮಗಾರಿ ಪ್ರದೇಶದ ರೈತರು ಜಮೀನುಗಳು 6(1)( ಭೂ ಪರಿಹಾರ) ಆಗದೇ ಇರುವುದರಿಂದ ಜಮೀನಿನ ಮಾಲೀಕರು ಕಾಮಗಾರಿ ಆರಂಭಿಸಲು ಬಿಡುತ್ತಿಲ್ಲ ಎಂದು ಹೇಮಾವತಿ ನಾಲಾ ಇಂಜನಿಯರ್ ತಿಳಿಸಿದ್ದಾರೆ ಎಂದರು.
  ಕಳೆದ ವರ್ಷ ಯಾವ ಹಂತದಲ್ಲಿ  ಕಾಮಗಾರಿಗಳ ನಡೆಯುತ್ತಿದ್ದವೂ ಅದೇ ಹಂತದಲ್ಲಿದೆ, ಸ್ವಲ್ಪವೂ ಪ್ರಗತಿ ಕಂಡಿಲ್ಲ,  ಸಕರ್ಾರದ ವಿಳಂಬ ನೀತಿಯಿಂದ ಕಾಮಗಾರಿ ನಡೆಯುತ್ತಿಲ್ಲ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಕರ್ಾರಕ್ಕೆ ಮನವಿ ಮಾಡಲಿದ್ದು ಇವರ ಪ್ರತಿಕ್ರಿಯೆ ನೋಡಿಕೊಂಡು ರೈತರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಬಿಜೆಪಿ ಘಟಕ ಮುಂದಿನ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.
ಸಕರ್ಾರ ಯೋಜನೆಗೆ ಮಂಜೂರು ಮಾಡಿರುವ  102 ಕೋಟಿ ರೂ ಹಣದಲ್ಲಿ 35 ಕೋಟಿ ಹಣ ಬಿಡುಗಡೆಯಾಗಿದೆ ಆದರೂ ಕಾಮಗಾರಿ ವಿಳಂಬವಾಗುತ್ತಿದೆ ಅಲ್ಲದೆ 102 ಕೋಟಿ ರೂ ಹಣದಲ್ಲಿ 13 ಕೋಟಿ ರೂ ಹಣ ಜಮೀನು ನೀಡಿರುವ ರೈತರಿಗೆ ಪರಿಹಾರ ನೀಡಲು ಮೀಸಲಿಟ್ಟು ಇದಕ್ಕಿಂತಲೂ ಹೆಚ್ಚಿಗೆ ಪರಿಹಾರ ನೀಡಬೇಕೆಂದಾದರೆ ಅದಕ್ಕೂ ಸಕರ್ಾರ ಬದ್ದವಾಗಬೇಕು  ಎಂದರು.
 ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ರೈತರು ಜಮೀನು ನೀಡಲು ಮುಂದಾದರೂ ಇತರೆ ಜಮೀನು ನೀಡಿರುವ ರೈತರಿಗೆ ಪರಿಹಾರ ಧನ ನೀಡದಿರುವುದರಿಂದ ಮುಂದೆ ಬಂದಿರುವ ರೈತರು ಜಮೀನು ನೀಡಲು ನಿರಾಕರಿಸುತ್ತಿದ್ದಾರೆ ಈ ಬಗ್ಗೆ ಸಕರ್ಾರ ಸೂಕ್ತ ತೀಮರ್ಾನ ಕೈಗೊಳ್ಳದಿದ್ದರೆ ಯೋಜನಾ ಕಾಮಗಾರಿಯೂ ಸ್ಥಗಿತವಾಗುವ ಸಂಭವವಿದೆ ಆದ್ದರಿಂದ ಜಮೀನು ನೀಡಿರುವ ರೈತರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ತಿಳಿಸಿದರು.
 ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ಬಿ.ಪಂಚಾಕ್ಷರಿ ಮಾತನಾಡಿ ಹೇಮಾವತಿ ಯೋಜನೆಯ ಕಾಮಗಾರಿ ಪೂರ್ಣಗೊಳ್ಳಲು  ಸಕರ್ಾರ ನೀಡಿರುವ 24 ತಿಂಗಳ ಅವಧಿಯಲ್ಲಿ  ಇನ್ನೂ ಕೇವಲ 6 ತಿಂಗಳು ಮಾತ್ರ ಬಾಕಿಯಿದ್ದು ಕಾಮಗಾರಿಯ ವೇಗ ಆಶಾದಾಯಕವಾಗಿಲ್ಲ,  ಹೀಗಾದರೆ ಜಮೀನು ನೀಡಿರುವ ರೈತರ ಪರಿಸ್ಥಿತಿ ಹೇಳತೀರಲಾಗವುದು ಎಂದರು.
 ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ವಸಂತಯ್ಯ, ಸದಸ್ಯರುಗಳಾದ ನವೀನ್ಕೆಂಕೆರೆ, ಎ.ಬಿ.ರಮೇಶ್ಕುಮಾರ್, ಬಿಜೆಪಿ ಪ್ರಧಾನ ಕಾರ್ಯದಶರ್ಿ ಲಕ್ಷ್ಮಯ್ಯ, ಶೆಟ್ಟಿಕೆರೆ ಅರುಣ್, ಶೆಟ್ಟಿಕೆರೆ ಮಂಡಳ ಕಾರ್ಯದಶರ್ಿ ಪ್ರಭುಲಿಂಗಯ್ಯ, ನೀರಾವರಿ ಹೋರಾಟಗಾರ ಎ.ಬಿ. ಶರತ್ಕುಮಾರ್,  ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಾಜಿ ಶಾಸಕ, ಕೆ.ಎಸ್.ಕಿರಣ್ಕುಮಾರ್
ನೂರಾರು ತೆಂಗಿನ ಮರವಿರುವ ರೈತರು ಹೇಮಾವತಿ ನೀರಿಗಾಗಿ ತಮ್ಮ ಜಮೀನುಗಳನ್ನು ಯೋಜನೆಗೆ ಬಿಟ್ಟುಕೊಟ್ಟಿರು ಆದರೆ ಪರಿಹಾರದ ಹಣ ದೊರಕದೆ ಇತ್ತ ಫಸಲೂ ಇಲ್ಲ, ಹಣವೂ ಇಲ್ಲದಂತಾಗಿದೆ ಈ ಬಗ್ಗೆ ಸಕರ್ಾರ, ಜಿಲ್ಲಾಧಿಕಾರಿಗಳು ಗಮನ ಹರಿಸದಿದ್ದರೆ ಬಿಜೆಪಿ ಘಟಕದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು.     
 
ಸುದ್ದಿ: 2
ಚಿ.ನಾ.ಹಳ್ಳಿ ತಾಲೂಕು ಗಾಂಧಿನಗರದಲ್ಲಿ ಡೆಂಗ್ಯೂ ಶಂಕೆ: ಮೂವರು ಅಪಾಯದ ಸ್ಥಿತಿಯಲ್ಲಿ
ಚಿಕ್ಕನಾಯಕನಹಳ್ಳಿ,ಜು.17: ತಾಲೂಕಿನ ಹಂದನಕೆರೆ ಹೋಬಳಿಯ ಗಾಂಧಿನಗರದಲ್ಲಿ ಮೂವರು ಡೆಂಗ್ಯೂ ಜ್ವರಕ್ಕೆ ತುಮಕೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 15ಕ್ಕೂ ಅಧಿಕ ಜನ ಜ್ವರದಿಂದ ನರಳುತ್ತಿದ್ದಾರೆ, ಇಷ್ಟಾದರೂ ಆರೋಗ್ಯ ಇಲಾಖೆಯ ಅಧಿಕಾರಿಗಳಾಗಲಿ, ಗ್ರಾ.ಪಂ.ಯ ಅಧಿಕಾರಿಗಳಾಗಲಿ ಜ್ವರ ನಿಯಂತ್ರಣಕ್ಕೆ  ಶೀಘ್ರಗತಿಯ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
 ಗಾಂಧಿನಗರದ ರೇಣುಕಯ್ಯ(37), ಕರಿಯಮ್ಮ(49), ಭಾಗ್ಯಮ್ಮ(40) ಡೆಂಗ್ಯೂ ಪಾಸಿಟಿವ್ ಎಂದು ಪ್ರಯೋಗಾಲಯದ ವರದಿ ಬಂದಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಅಲ್ಲಿಯವರು ಬೆಂಗಳೂರಿಗೆ ರೆಫರ್ ಮಾಡಿದ್ದರಿಂದಾಗಿ, ಕೂಲಿ ಮಾಡಿ ಬದುಕುತ್ತಿರುವ ಇವರುಗಳು ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯುವಷ್ಟು ಹಣವಿಲ್ಲದ್ದರಿಂದ ಇಬ್ಬರು ಸಿದ್ದಾರ್ಥ ಆಸ್ಪತ್ರೆಯಲ್ಲಿ, ಮೊತ್ತೋರ್ವರು ಶ್ರೀದೇವಿ ಆಸ್ಪತ್ರೆಯಲ್ಲಿ ಉಚಿತ ಔಷದೋಪಚಾರ ಪಡೆಯುತ್ತಿದ್ದಾರೆ.
 ಅಲ್ಲದೆ ಗಾಂಧಿನಗರದ 15ಕ್ಕೂ ಹೆಚ್ಚಿನ ಜನರು ಜ್ವರದಿಂದ ನರಳುತ್ತಿದ್ದರೆ, ಇಲ್ಲಿಗೆ ಇಬ್ಬರು ಆರೋಗ್ಯ ಸಹಾಯಕಿಯರು ಬಿಟ್ಟರೆ ಆರೋಗ್ಯ ಇಲಾಖೆಯ ವೈದ್ಯರಾಗಲಿ, ತಾಲೂಕು ವೈದ್ಯಾಧಿಕಾರಿಗಳಾಗಲಿ ಭೇಟಿ ನೀಡಿ ಹೆಚ್ಚಿನ ಜಾಗ್ರತ ಕ್ರಮಗಳನ್ನು ಕೈಗೊಳ್ಳದೆ, ರೋಗದ ಉಲ್ಬಣಕ್ಕೆ ಕಾರಣರಾಗಿದ್ದಾರೆ, ಗ್ರಾ.ಪಂ.ಅಧಿಕಾರಿಗಳೂ ಈ ಬಗ್ಗೆ ಹೆಚ್ಚಿನ ಮುತುವಜರ್ಿ ವಹಿಸಿಲ್ಲವೆಂಬ ಆರೋಪ ಗ್ರಾಮಸ್ಥರದ್ದಾಗಿದೆ.
ರಸ್ತೆ ಸರಿಯಾಗವವರೆಗೂ ಟ್ರಾನ್ಸ್ಪೋಟರ್್ನ್ನು ಸ್ಥಗಿತ

ಚಿಕ್ಕನಾಯಕನಹಳ್ಳಿ,ಜು.18: ತಾಲ್ಲೂಕಿನ ಗಣಿ ಪ್ರದೇಶವಾದ ಸೊಂಡೇನಹಳ್ಳಿ ಗಣಿ ಭಾಗದಲ್ಲಿನ ಗ್ರಾಮದ ಸುತ್ತಮುತ್ತಲಿನ ರಸ್ತೆಯು ಗುಂಡಿಗಳಿಂದ ಆವೃತವಾಗಿ ಸಂಚರಿಸುವುದೇ ದುಸ್ಥರ ಎನ್ನುವಂತಾಗಿದೆ,  ಕಷ್ಟಪಟ್ಟು ಓಡಾಡುವ ವಾಹನಗಳಿಂದ ಏಳುವ ಧೂಳಿನಿಂದ ಆರೋಗ್ಯದ ಸಮಸ್ಯೆ ಉಂಟಾಗುತ್ತಿದೆ ಇದು ಆ ಭಾಗದ ಗ್ರಾಮಸ್ಥರ ಸಮಸ್ಯೆ ಮಾತ್ರವಲ್ಲ,  ವಾಹನದ ಲಾರಿ ಚಾಲಕರಿಗೂ ಇದರ ಪರಿಣಾಮ ಬೀರುತ್ತಿದ್ದು ರಸ್ತೆ ಸರಿಯಾಗವವರೆಗೂ ಟ್ರಾನ್ಸ್ಪೋಟರ್್ನ್ನು ಸ್ಥಗಿತಗೊಳಿಸಲಾಗುವುದು ಎಂದು ಲಾರಿ ಚಾಲಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
  ತಾಲ್ಲೂಕಿನ ಗಣಿಯಿಂದ ಅಧಿರನ್ನು ತೆಗೆದುಕೊಂಡು ಹೋಗಲು ಹಲವಾರು ಲಾರಿಗಳು ಗಣಿ ಭಾಗದ ಗ್ರಾಮಗಳ  ಮೂಲಕ ಹಾದು ಹೋಗುತ್ತವೆ, ಲಾರಿಗಳು ಸಂಚರಿಸಬೇಕಾದರೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿರುವ ರಸ್ತೆಗಳು ಇನ್ನಷ್ಟು ಹಾಳಾಗುತ್ತಿವೆ ಅಲ್ಲದೆ ಗುಂಡಿಗಳು ರಸ್ತೆಯಲ್ಲೆಲ್ಲಾ ಉಂಟಾಗಿ ಅದರಿಂದ ಬರುವ ಧೂಳು ಗ್ರಾಮದ ಜನರಿಗೂ ತಗುಲಿತ್ತಿದೆ ಅಲ್ಲದೆ ಗಣಿ ಭಾಗದ ಗ್ರಾಮಗಳಿಗೆ ಸಂಚರಿಸುವ ಪ್ರತಿ ಸವಾರರೂ ಕೂಡ ದಿನನಿತ್ಯ ಆಸ್ಪತ್ರೆಗೆ ಎಡತಾಕುವಂತಾಗಿದೆ.
ಪೂರ್ಣ ಪ್ರಮಾಣದಲ್ಲಿ ಹಾಳಾಗಿರುವ ರಸ್ತೆ ಹಾಗೂ ಗುಂಡಿಗಳಿಂದ ಸವಾರರಿಗೆ ಆರೋಗ್ಯ ಸಮಸ್ಯೆಯೂ ಹಾಗೂ ವಾಹನಗಳು ಕೆಟ್ಟು ನಿಲ್ಲುತ್ತಿವೆ ಇದರ ರಿಪೇರಿಗಾಗಿಯೇ ಅವರು ಪಡೆಯುವ ಸಂಬಳವನ್ನೆಲ್ಲಾ ರಿಪೇರಿಗೆ ಬಳಸಲಾಗುತ್ತಿದೆ ಎಂದು ಪ್ರತಿಭಟನಾ ಲಾರಿ ಚಾಲಕರು ಮಾಧ್ಯಮದೆದರು ತಮ್ಮ ಅಳಲು ತೋಡಿಕೊಂಡರು.
ಸಾಮಾಜಿಕ ಕಾರ್ಯಕರ್ತ ನಂಜುಂಡಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಗಣಿ ಭಾಗದ ಗ್ರಾಮಗಳ ಅಭಿವೃದ್ದಿಗೆ ಜನಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ, ಗ್ರಾಮಗಳ ಸಮಸ್ಯೆ ಬಗ್ಗೆ ತಹಶೀಲ್ದಾರ್ರವರೂ ಸೇರಿದಂತೆ ಗಣಿ ಅಭಿವೃದ್ದಿಯ ಜವಬ್ದಾರಿ ಹೊತ್ತ ಅಧಿಕಾರಿಗಳಿಗೆ ತಿಳಿಸಿದರೂ ಯಾವ ಪ್ರಯೋಜನವೂ ಆಗುತ್ತಿಲ್ಲ ಎಂದರಲ್ಲದೆ ಗಣಿ ಭಾಗದಲ್ಲಿ ಕೆಲಸಗಾರರು ಹಾಗೂ ಬಿಡ್ಡರ್ಗಳ ನಡುವೆ ಮಧ್ಯವತರ್ಿಗಳ ಹಾವಳಿ ಹೆಚ್ಚಾಗಿದೆ, ಕೃಷಿ, ತೋಟಗಾರಿಕೆಗಳ ಮೇಲೆ ಗಣಿಯ ಪರಿಣಾಮ ಹೆಚ್ಚಾಗಿ ಬೀರುತ್ತಿದೆ ಹಾಗೂ ಗ್ರಾಮದಲ್ಲಿ ರಸ್ತೆಯ ಸಮಸ್ಯೆಯಿಂದ ಜನಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂದರು.
 ಗಣಿ ಭಾಗದ ಪರಿಸರ ಅಭಿವೃದ್ದಿಗಾಗಿ 9ಕೋಟಿ ರೂ ಹಣವನ್ನು ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕರಿಗಳ ಖಾತೆಯಲ್ಲಿ ಇಡಲಾಗಿತ್ತು ಆದರೂ ಗಣಿ ಭಾಗದ ಗ್ರಾಮಗಳ ಪರಿಸರ ಅಭಿವೃದ್ದಿಗಾಗಿ ಹಣವು ಬಳಕೆಯಾಗುತ್ತಿಲ್ಲ ಈ ಹಣದ ವಿವರವೂ ತಿಳಿಯುತ್ತಿಲ್ಲ, ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದೆ, ತಾಪಮಾನ ಹೆಚ್ಚಾಗಿದೆ ಎಂದರಲ್ಲದೆ ನೀರಾವರಿಗಾಗಿ 5ಕೋಟಿ ಹಣ ಮೀಸಲಿಡಲಾಗಿತ್ತು ಆದರೆ ಸಕರ್ಾರ ಹಣವನ್ನು ಮುಟ್ಟುಗೋಲು ಹಾಕಿಕೊಂಡಿದೆ ಈ ಹಣವನ್ನು ಗಣಿ ಭಾಗದ ಗ್ರಾಮಗಳ ಅಭಿವೃಧಿಗಾಗಿ ಬಳಸಬೇಕು ಎಂದು ಮನವಿ ಮಾಡಿದರು.
ಗ್ರಾ.ಪಂ.ಸದಸ್ಯ ತಿಮ್ಮೇಗೌಡ ಮಾತನಾಡಿ ಗಣಿ ಭಾಗದ ರಸ್ತೆಯ ಸಮಸ್ಯೆಯಿಂದ ಜನರಲ್ಲಿ ಸಂಚಾರರಿಗೆ ಹಾಗೂ ಗ್ರಾಮದವರಿಗೆ ಆರೋಗ್ಯದ ಸಮಸ್ಯೆ ಎದುರಾಗುತ್ತಿದೆ, ರಸ್ತೆ ಸರಿಯಾಗುವವರೆಗೂ ಇಲ್ಲಿನ ಅಧಿರು ಸಾಗಾಣಿಕೆಯ ವಾಹನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.
 ಲಾರಿ ಚಾಲಕ ಸಾದತ್ ಮಾತನಾಡಿ ಈ  ರಸ್ತೆಯಲ್ಲಿ ಲಾರಿಯನ್ನು ಚಲಾಯಿಸಿದರೆ ದಿನನಿತ್ಯ ರಿಪೇರಿಗೆ ಹೋಗುತ್ತದೆ ನಾವು ದುಡಿಯುವ 500ರೂಗೆ 5ಸಾವಿರ ಹಣ ರಿಪೇರಿಗೆ ಖಚರ್ು ಮಾಡಬೇಕಾಗುತ್ತದೆ ಅಲ್ಲದೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ವಾಹನ ಚಲಾಯಿಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವಾಗುವ ಜೊತೆಯಲ್ಲಿ ಶರೀರದ ಮೂಳೆಗಳು ಮುರಿಯುವ ಸಂಭವ ಹೆಚ್ಚಾಗಿದೆ ಎಂದರಲ್ಲದೆ ಈ ಭಾಗದಲ್ಲಿ ಇರುವ 13ಮೈನ್ಸ್ನವರು ಸ್ವಲ್ಪ ಸ್ವಲ್ಪ ಹಣ ಹಾಕಿದರೂ ರಸ್ತೆ ಅಭಿವೃದ್ದಿಯಾಗುತ್ತದೆ ಎಂದರು.
 ಪ್ರತಿಭಟನೆಯಲ್ಲಿ ಲಾರಿ ಚಾಲಕರಾದ ಸಾದತ್, ಶಿವಕುಮಾರ್, ಸಾಧಿಕ್ ರಹಮತ್, ರಚಿತ್, ವೆಂಕಜಮೀರ್ಸೈಯದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಟೇಶನಾಯ್ಡು, ಸಲೀಂ, ಚಿಕ್ಕಣ್ಣ, ಕೌಫಿಕ್ಪಾಷ, ಮಂಜುನಾಥ್, ಅಮೀರ್ಜಾನ್,
ಗ್ರಾಮೀಣ ಮಕ್ಕಳಲ್ಲಿ ಕಲಿಕಾ ಕೌಶಲ, ಧಾರಣಶಕಿ ಅಧಿಕ:

ಚಿಕ್ಕನಾಯಕನಹಳ್ಳಿ,ಜು.16: ಗ್ರಾಮೀಣ ಶಾಲೆಯ ಮಕ್ಕಳಲ್ಲಿ ಪಟ್ಟಣದ ಕಾನ್ವೆಂಟ್ ಶಾಲೆಗಳ ಮಕ್ಕಳಿಗಿಂತ ಹೆಚ್ಚಿನ ಧಾರಣಶಕ್ತಿ, ಕಲಿಕ ಕೌಶಲ ವಿರುತ್ತದೆ ಎಂದು ಶಿಕ್ಷಕ ಹಾಗು  ಲೇಖಕ ಸಿ. ಗುರುಮೂತರ್ಿ ಕೊಟಿಗೆಮನೆ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಮಾಳಿಗೆಹಳ್ಳಿಯ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ಸ್ಪಂದನ ಜನಸೇವಾ ಪ್ರಗತಿಪರ ಒಕ್ಕೂಟ ಏರ್ಪಡಿಸಿದ್ದ ನೋಟ್ಪುಸ್ತಕ ಹಾಗು ಲೇಖನ ಸಾಮಾಗ್ರಿಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಶಾಲೆಯ ಮಕ್ಕಳಿಗೆ ಪರಿಸರ ಹಾಗೂ ಗಿಡಮರಗಳನ್ನು ಬೆಳೆಸುವ ಪರಿಚಯದ ಜೊತೆಯಲ್ಲಿ ಕಾಳಜಿ ಇರುತ್ತದೆ.
 ನೈಸಗರ್ಿಕವಾಗಿ ಬೆಳೆಯುವ ಪೌಷ್ಠಿಕಾಂಶವಿರುವ ಹಣ್ಣುಗಳನ್ನು ಉಪಯೋಗಿಸುವುದರಿಂದ ಧಾರಣಶಕ್ತಿ ಗ್ರಾಮೀಣ ಮಕ್ಕಳಲ್ಲಿ ಬೆಳೆದಿರುತ್ತದೆ, ಸಂಸ್ಕೃತಿ ಹಾಗೂ ಕಲೆಯ ಜೊತೆಗೆ ಸಂಸ್ಕಾರದ ಕೌಶಲ್ಯ ಮೈಗೂಡಿಸಿಕೋಂಡಿರುತ್ತಾರೆ, ಕಾನ್ವೆಂಟ್ ಶಾಲೆಯ ಮಕ್ಕಳಿಗೆ ಪ್ರಶ್ನೆಗೆ ಉತ್ತರ ಬಿಟ್ಟರೆ ನೈಸಗರ್ಿಕ ಕೌಶ್ಯಲ್ಯಗಳು ಅಷ್ಟಾಗಿ ತಿಳಿದಿರುವುದಿಲ್ಲ, ಎರಡು ದಶಕಗಳ ಹಿಂದೆ ಸಕರ್ಾರಿ ಶಾಲೆಗಳಲ್ಲಿ ಸವಲತ್ತುಗಳು ಕಡಿಮೆ ಇದ್ದು ಮಕ್ಕಳ ಸಂಖ್ಯೆ ಹೆಚ್ಚಾಗಿದ್ದವು. ಪ್ರಸ್ತುತ ಕಾಲದಲ್ಲಿ ಸರಕಾರದಿಂದ ಅನೇಕ ಸೌಲಭ್ಯಗಳು ಇವೆ ಆದರೆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ ಎಂದರಲ್ಲದೆ ಪಟ್ಟಣದ ಕಾನ್ವಂಟ್ ಶಾಲೆಗಳಲ್ಲಿ ಬಾಹ್ಯ ಸೌಂದರ್ಯದ ಆಕರ್ಷಣೆಯಿಂದ ಆಂತರಿಕ ಸೌದರ್ಯತೆ ಕಡಿಮೆಯಾಗಿದೆ ಎಂದರು.
 ಶಾಲೆಯ ಮುಖ್ಯೋಪಾಧ್ಯಾಯಿನಿ ವಿಜಯ ಮಾತನಾಡಿ, ಸಕರ್ಾರಿ ಶಾಲೆಯ ವಿದ್ಯಾಥರ್ಿಗಳು ಖಾಸಗಿ ಶಾಲೆಯ ಮಕ್ಕಳಿಗಿಂತ ಪ್ರತಿಯೊಂದು ವಿಷಯದಲ್ಲೂ ಮುಂದಿದ್ದಾರ, ಹಳ್ಳಿ ಭಾಗದಲ್ಲಿ ಪೋಷಕರು ತಮ್ಮ ಮಕ್ಕಳನ್ನು  ದನ ಹಾಗೂ ಕುರಿ ಕಾಯಲು ತಮ್ಮ ಮಕ್ಕಳನ್ನು ಕಳುಹಿಸುವುದರಿಂದ ತಮ್ಮ ಮಕ್ಕಳ ಉಜ್ವಲ ಭವಿಷ್ಯವನ್ನು ತಾವೇ ಹಾಳು ಮಾಡಿದಂತಾಗುತ್ತದೆ ಎಂದರು..
ಸ್ಪಂದನ ಜನವೇವಾ ಒಕ್ಕೂಟದ ಅಧ್ಯಕ್ಷ ಯೋಗೀಶ್ ಮಾತನಾಡಿ  ಸಕರ್ಾರಿ ಶಾಲೆಯ ಬಡವಿದ್ಯಾಥರ್ಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನೋಟ್ಬುಕ್, ಲೇಖನಿಯನ್ನು ಸಂಘವು ಪ್ರತಿವರ್ಷ ನೀಡುತ್ತಿದೆ ಎಂದು ಹೇಳಿದರು. 
 ಕಾರ್ಯಕ್ರಮದಲ್ಲಿ ಗ್ರಾ.ಪಂ.ಅಧ್ಯಕ್ಷೆ ವಿನೋದಬಾಯಿ, ಎಸ್.ಡಿ.ಎಂ.ಸಿ.ಸದಸ್ಯ ನಿವರ್ಾಣಯ್ಯ, ಸ್ಪಂದನ ಜನಸೇವಾ ಒಕ್ಕೂಟದ ತ್ಯಾಗರಾಜು, ಸಿ.ಮಲ್ಲಿಕಾಜರ್ುನಸ್ವಾಮಿ, ಕಿರಣ್ಕುಮಾರ್, ಶಿವಣ್ಣ, ಜಾಕೀರ್ಹುಸೇನ್, ಶಿಕ್ಷಕಿ ಉಪಸ್ಥಿತರಿದ್ದರು.
 
        ಎಳೆ ಹಲಸಿನ ಮರವೊಂದನ್ನು ಅಕ್ರಮವಾಗಿ ಕಡಿದು ಹಾಕಿರುವ ಘಟನೆ    
                                       
ಚಿಕ್ಕನಾಯಕನಹಳ್ಳಿ,ಜೂ.18 : ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಮೈದಾನದಲ್ಲಿದ್ದ ಎಳೆ ಹಲಸಿನ ಮರವೊಂದನ್ನು ಅಕ್ರಮವಾಗಿ ಕಡಿದು ಹಾಕಿರುವ ಘಟನೆ ನಡೆದಿದೆ.
ಇಲ್ಲಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿಗೆ ಸೇರಿದ ಮೈದಾನದ ಜಾಗದಲ್ಲಿ ಬೆಳೆಸಿದ್ದ ಹಲಸಿನ ಮರವೊಂದನ್ನು ಬೆಳಗಿನ ಜಾವ ದುಷ್ಕಮರ್ಿಗಳು ಕಡಿದುರುಳಿಸಿದ್ದಾರೆ. ಬೆಳಿಗ್ಗೆ ಕಾಲೇಜಿಗೆ ಆಗಮಿಸಿದ ವಿದ್ಯಾಥರ್ಿಗಳು ಈ ಕೃತ್ಯವನ್ನು ಪ್ರಾಂಶುಪಾಲರ ಗಮನಕ್ಕೆ ತಂದರು. ಕಾಲೇಜಿನ ಪೂರ್ವ ಭಾಗದ ಮೈದಾನದ ಅಂಜಿನಲ್ಲಿದ್ದ ಈ ಹಲಸಿನ ಮರವನ್ನು ಕಟಿಂಕ್ ಮಿಷನ್ ನಿಂದ ಕಡಿಯಲಾಗಿದೆ. ಈ ಕೃತ್ಯದ ಹಿಂದೆ ಭೂಗಳ್ಳರ ಕೈವಾಡ ವಿದೆ ಎಂದು ಶಂಕಿಸಲಾಗಿದೆ. ಐದು ಎಕರೆ ಪ್ರದೇಶ ವ್ಯಾಪ್ತಿ ಹೊಂದಿರುವ ಈ ಕಾಲೇಜಿನ ಆಟದ ಮೈದಾನದಲ್ಲಿ ನೂರಾರು ಅರಣ್ಯ ಸಸಿಗಳನ್ನು ಜತನವಾಗಿ ಬೆಳಸಲಾಗುತ್ತಿದೆ. ಈ ಹಿಂದೆ ಕಾಲೇಜಿ ಸಿಬ್ಬಂದಿ ತಮ್ಮ ಜಾಗದ ಗಡಿಗಳನ್ನು ಗುರುತಿಸಿ ಕಲ್ಲು ಕಂಬ ನೆಡುತ್ತಿದ್ದಾಗ ಅನಗತ್ಯವಾಗಿ ಸುತ್ತಮುತ್ತಲಿನ ಕೆಲವರು ವಿವಾದ ಎಬ್ಬಿಸಿದ್ದರು. ಈ ಕಾಲೇಜಿನ ಸನಿಹದ  ಮನೆಗಳಿಗೆ ಕಾಲೇಜಿನ ಮೈದಾನದ ಮೂಲಕ ರಸ್ತೆಗೆ ಜಾಗಬಿಡಿ ಎಂದು ತಕರಾರು ಎಬ್ಬಿಸಿದ್ದರು. ಈ ಕೃತ್ಯದ ಬಗ್ಗೆ ಆಗ ತಹಸೀಲ್ದಾರ್ರಿಗೆ ದೂರು ನೀಡಲಾಗಿತ್ತು. ಈ ದೂರಿನ ಅನ್ವಯ ತಹಸೀಲ್ದಾರ್ರು ನೋಟೀಸು ಜಾರಿ ಮಾಡಿದ್ದರೂ ಈವರೆಗೂ ಯಾರಿಂದಲೂ ತಕರಾರು ಅಜರ್ಿ ಬಂದಿರಲಿಲ್ಲ. ಆದರೆ ಈಗ ಏಕಾಏಕಿ ಅಕ್ರಮವಾಗಿ ಮರವನ್ನು ಕಡಿಯುವುದರ ಮೂಲಕ ದುಷ್ಕಮರ್ಿಗಳು ವಿವಾದ ಎಬ್ಬಿಸಿದ್ದಾರೆ. ಈ ಕೃತ್ಯದ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ವಿ.ವರದರಾಜು ಇಲ್ಲಿನ ಪೊಲೀಸ್ ಠಾಣೆಗೆ, ತಹಸೀಲ್ದಾರ್ರಿಗೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.  ಸುಮಾರು ಒಂದು ಸಾವಿರ ವಿದ್ಯಾಥರ್ಿಗಳು ವ್ಯಾಸಂಗ ಮಾಡುತ್ತಿರುವ ಈ ಕಾಲೇಜಿನ ಆಸ್ತಿ ರಕ್ಷಣೆಗಾಗಿ  ಕನಿಷ್ಠ ತಂತಿ ಬೇಲಿಯೂ ಇಲ್ಲದಿರುವುದು ಶೋಚನೀಯವೆನಿಸಿದೆ. ಕಾಂಪೌಂಡ್ಗಾಗಿ ಶಾಸಕರಿಂದ ಹಿಡಿದು ಸಂಬಂಧಿಸಿದ ಎಲ್ಲಾ ಇಲಾಖೆಗಳಿಗೆ ಸಲ್ಲಿಸಿದ ಮನವಿಗೆ ಯಾರೂ ಕಿವಿಗೊಟ್ಟಿಲ್ಲ ಎಂದು ಪ್ರಾಂಶುಪಾಲರು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾರೆ.
ತಾಲ್ಲೂಕು ಪ್ರೌಢಶಾಲಾ ಹಿಂದಿ ಸಹಶಿಕ್ಷಕರ ಸಂಘದ ಅಧ್ಯಕ್ಷರು, ನಿದರ್ೇಶಕರ ಆಯ್ಕೆ
ಚಿಕ್ಕನಾಯಕನಹಳ್ಳಿ,ಜೂ.18 : ಚಿಕ್ಕನಾಯಕನಹಳ್ಳಿ ತಾಲ್ಲೂಕು ಪ್ರೌಢಶಾಲಾ ಹಿಂದಿ ಸಹಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸಾಸಲು ಸಕರ್ಾರಿ ಪ್ರೌಢಶಾಲೆಯ ಸಿ.ಎ.ಕುಮಾರಸ್ವಾಮಿರವರು ಅವಿರೊಧವಾಗಿ ಆಯ್ಕೆಯಾಗಿದ್ದಾರೆ.
 ಉಪಾಧ್ಯಕ್ಷರಾಗಿ ಬರಕನಾಳ್ ವಿಶ್ವಭಾರತಿ ಪ್ರೌಢಶಾಲೆಯ ಸುಧಾಕರ್, ಕಾರ್ಯದಶರ್ಿಯಾಗಿ ಚಿ.ನಾ.ಹಳ್ಳಿ ಡಿವಿಪಿ ಶಾಲೆಯ ಎಂ.ಜಿ.ಗುರುಸ್ವಾಮಿನಾಯ್ಡು, ಸಹಕಾರ್ಯದಶರ್ಿಯಾಗಿ ದಬ್ಬಗುಂಟೆ ಜಿ.ಹೆಚ್.ಎಸ್ ಗಿರೀಶ್, ಖಜಾಂಚಿಯಾಗಿ ಅಣೆಕಟ್ಟೆ ಬಸವೇಶ್ವರ ಪ್ರೌಡಶಾಲೆಯ ಆರ್.ಎಂ.ರಾಜ್ಕುಮಾರ್, ಗೌರವ ಅಧ್ಯಕ್ಷರಾಗಿ ಬೋರನಕಣಿವೆ ಸಕರ್ಾರಿ ಪದವಿ ಪೂರ್ವ ಕಾಲೇಜಿನ ಎಸ್.ಮಂಜಮ್ಮ, ಸಂಚಾಲಕರಾಗಿ ಜೆ.ಸಿ.ಪುರ ಜಿ.ಎಚ್.ಎಸ್ ಅನಿತ, ನಿದರ್ೇಶಕರುಗಳಾಗಿ ಗೋಪಾಲಯ್ಯ, ಕಾಂತರಾಜು, ಬಿ.ಆರ್.ಮಂಜುನಾಥ್, ಆರ್.ರಂಗನಾಯ್ಕ್, ಅರುಣ್ಕುಮಾರ್, ಎಂ.ರಾಜಶೇಖರಪ್ಪ, ವಹೀದಾಬಾನು, ಸೌಭಾಗ್ಯಮ್ಮ, ಮಂಜುಳ, ಪುಟ್ಟಮ್ಮ, ರಮೇಶನಾಯ್ಕ, ರೇಣುಕರಾಧ್ಯ, ಕಮಲ ಆಯ್ಕೆಯಾಗಿದ್ದಾರೆ.