Saturday, February 6, 2016


ಮತಗಟ್ಟೆ ಅಧಿಕಾರಿಗಳ ಕರ್ತವ್ಯ ಅತ್ಯಂತ ಜವಾಬ್ಧಾರಿಯುತ

ಚಿಕ್ಕನಾಯಕನಹಳ್ಳಿ : ಮತಗಟ್ಟೆ ಅಧಿಕಾರಿಗಳ ಕರ್ತವ್ಯ ಅತ್ಯಂತ ಜವಾಬ್ಧಾರಿಯುತವಾಗಿದ್ದು ಮತದಾರರ ಜತೆ ಅಧಿಕಾರಿಗಳು ಸೌಹಾರ್ದಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ತಹಶಿಲ್ದಾರ್ ಗಂಗೇಶ್ ಹೇಳಿದರು.
ಪಟ್ಟಣದ ಸಕರ್ಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಮುಖ್ಯ ಹಾಗೂ 1ನೇ ಮತಗಟ್ಟೆ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆ ಹಾಗೂ ತಾಲ್ಲೂಕು ಪಂಚಾಯ್ತಿಗಳಿಗೆ ಒಟ್ಟಿಗೆ ಮತದಾನ ನಡೆಯುತ್ತಿರುವುರಿಂದ ಮತದಾನದ ವೇಳೆ ಗೊಂದಲ ಸೃಷ್ಠಿಯಾಗುವ ಸಂಭವವಿದೆ, ಆದ್ದರಿಂದ ಪೂರ್ವತಯಾರಿ ಚನ್ನಾಗಿ ಇರಲಿ ಹೇಳಿದರು.
   ಮಾಸ್ಟರ್ ಟ್ರೈನರ್ ಶಿವಪ್ರಸಾದ್ ಮಾತನಾಡಿ, ಮತದಾನದ ಸಂದರ್ಭದಲ್ಲಿ ಮುಖ್ಯ ಮತಗಟ್ಟೆ ಅಧಿಕಾರಿ ಸಂದರ್ಭಕ್ಕೆ ಅನುಗುಣವಾಗಿ ನಿಧರ್ಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರ ಇದೆ, ಆದರೆ ಮತಗಟ್ಟೆಯನ್ನು ಬದಲಿಸುವ ಅಧಿಕಾರ ಇಲ್ಲ, ನಿಗಧಿಯಾಗಿರುವ ಕೊಠಡಿಯಲ್ಲೇ ಮತದಾನ ನಡೆಯಬೇಕು, ಮೂಲಭೂತ ಸವಲತ್ತುಗಳು ಇಲ್ಲದಿದ್ದರೂ ಕೊಠಡಿ ಬದಲಿಸುವ ಅಧಿಕಾರ ಪಿಆರ್ಓಗಳಿಗೆ ಇಲ್ಲ ಎಂದರು.
    ಅಳಿಸಲಾಗದ ನೀಲಿ ಶಾಯಿಯನ್ನು ಎಡಗೈ ತೋರುಬೆರಳಿಗೆ ಬದಲಾಗಿ ಬಲಗೈ ಹೆಬ್ಬೆರಳಿಗೆ ಹಾಕಬೇಕು, ಎಲೆಕ್ಟ್ರಾನಿಕ್ ಮತಯಂತ್ರದ ಬಳಕೆಯಲ್ಲಿ ಸಂಭವಿಸಬಹುದಾದ ಗೊಂದಲವನ್ನು ತಪ್ಪಿಸಲು ಮೊದಲು ಜಿಲ್ಲೆ ನಂತರ ತಾಲ್ಲೂಕು ಪಂಚಾಯ್ತಿ ಮತದಾನಕ್ಕೆ ಅನುವು ಮಾಡಿಕೊಡಬೇಕು, ನಾಲ್ಕು ಮತ್ತು ಐದನೇ ಮತಗಟ್ಟೆ ಅಧಿಕಾರಿಗಳು ಮತಯಂತ್ರವನ್ನು ನಿರ್ವಹಿಸಬೇಕು ಎಂದರು.
   ಅಣಕು ಮತದಾನ ಕಡ್ಡಾಯವಾಗಿದು ಬೆಳಗ್ಗೆ 7 ಗಂಟೆ ಒಳಗೆ ಮುಗಿಸಿ ಮತಯಂತ್ರಗಳನ್ನು ಮತದಾನಕ್ಕೆ ಸಿದ್ಧಪಡಿಸಿಕೊಂಡಿರಬೇಕು, ಯಾವುದೇ ಕಾರಣಕ್ಕೂ ಬೆಳಗ್ಗೆ 7ರ ಒಳಗೆ ಮತದಾನ ಪ್ರಾರಂಭಿಸಬಾರದು ಎಂದರು.
  ಮಧ್ಯಾಹ್ನದ ನಂತರ ಮತಗಟ್ಟೆ ಅಧಿಕಾರಿಗಳಿಗೆ ನೀಡುವ ಎಲೆಕ್ಟ್ರಾನಿಕ್ ಮತಯಂತ್ರದ ಬಳಕೆಯ ಪ್ರಾತ್ಯಕ್ಷಿಕೆ ತರಬೇತಿಯಲ್ಲಿ 20 ಮಾಸ್ಟರ್ ಟ್ರೈನೀಸ್ಗಳು ಇದ್ದರು, ಬಳಿಕ ಅಧಿಕಾರಿಗಳ ನಿಯೋಜನಾ ಪತ್ರ ನೀಡಲಾಯಿತು.
  205 ಮತಕಟ್ಟೆ: ತಾಲ್ಲೂಕಿನಲ್ಲಿ 205 ಮತಕಟ್ಟೆಗಳನ್ನು ಗುರುತಿಸಲಾಗಿದೆ, 5 ಜಿಪಂ ಕ್ಷೇತ್ರಗಳಿಗೆ ತಲಾ ಒಬ್ಬರು ಚುನಾವಣಾಧಿಕಾರಿ ಮತ್ತು ಉಪಚುನಾವಣಾಧಿಕಾರಿ ಹಾಗೂ 19 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳಿಗೆ ತಲಾ ಇಬ್ಬರು ಚುನಾವಣಾಧಿಕಾರಿ ಮತ್ತು ಉಪಚುನಾವಣಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅಲ್ಲದೆ ಹೋಬಳಿವಾರು 5 ವಲಯ ಅಧಿಕಾರಿಗಳು 20 ಮಾರ್ಗದ ಅಧಿಕಾರಿಗಳು ಹಾಗೂ 1230 ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಹಶಿಲ್ದಾರ್ ಗಂಗೇಶ್ ಮಾಹಿತಿ ನೀಡಿದರು.